31 December 2021

ಭ್ರಷ್ಟಾಚಾರಕ್ಕೆ ಕೊನೆ ಎಂದು


 


ಭ್ರಷ್ಟಾಚಾರ ಕಡಿಮೆಯಾಗಿದೆಯಾ?


ಡಿಜಿಟಲ್‌ ತಂತ್ರಜ್ಞಾನದಿಂದ ಭ್ರಷ್ಟಾಚಾರ ಖಂಡಿತವಾಗಿಯೂ ಕಡಿಮೆಯಾಗಿಲ್ಲ . ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳಿ ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ . ಆರ್ ಟಿ ಓ .ಕಂದಾಯ ಮುಂತಾದ ಇಲಾಖೆಯ ಭ್ರಷ್ಟಾಚಾರ ತೊಡೆಯಲು ದೇವರೇ ಬಂದರೂ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.


ಡಿಜಿಟಲ್ ತಂತ್ರಜ್ಞಾನದ ಪರಿಣಾಮವಾಗಿ ಮೂಡಿಬಂದ 

ಡಿಜಿಟಲ್ ಕರೆನ್ಸಿ ಇನ್ನೊಂದು ಮಟ್ಟದ ಭ್ರಷ್ಟಾಚಾರದ ಮೂಲ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ.ಭ್ರಷ್ಟಾಚಾರ ಮಾಡದ ಅಧಿಕಾರಿಗಳನ್ನು ದುರ್ಬೀನು ಹಾಕಿ ಹುಡಕಬೇಕಾದ ಕಾಲ ಬಂದಿದೆ .ಇನ್ನೂ ಕೆಲವರು ಅವರು  ಭ್ರಷ್ಟಾಚಾರ ಮಾಡದಿದ್ದರೂ ಖಂಡಿತವಾಗಿಯೂ ಅವರ ಜೀವನದಲ್ಲಿ ಒಂದಲ್ಲ ಒಂದು ದಿನ ಭ್ರಷ್ಟಾಚಾರಕ್ಕೆ ಒಳಗಾಗೇ ಇರುವರು.



ಒಟ್ಟಾರೆ ಭ್ರಷ್ಟಾಚಾರ ಅವಿನಾಶಿ ನಾವು ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೇನೋ ಎಂಬ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮಾಸದ ನೆನಪು .ಹನಿಗವನ


 




*ಮಾಸದ ನೆನಪು*


ಚುಮು ಚುಮು 

ಕೊರೆವ ಚಳಿಯೆಂದರೆ

ಅದು ಡಿಸೆಂಬರ್ 

ಮಾಸದ ನೆನಪು |

ಅವನೊಂದಿಗೆ 

ಬಿಸಿಯಪ್ಪುಗೆಯಲಿ ಕಳೆದ

ಮಾಸದ ನೆನಪು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ನೇತಾಜಿಯವರೇ ನಿಜವಾದ ನೇತಾರ


 


ನೇತಾಜಿಯವರೇ ನಿಜವಾದ ನೇತಾರ.


ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು.ಆದರೂ  ಸ್ವಾತಂತ್ರ್ಯ ಪಡೆಯಲು ಸುಭಾಷ್ ಚಂದ್ರ ಬೋಸ್ ರವರ ಮಾರ್ಗವೇ ಸರಿಯಾಗಿತ್ತು ಎಂಬುದು ನನ್ನ ಅನಿಸಿಕೆ.


ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.


ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.



ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ವಿದಾಯ , ಸ್ವಾಗತ


 



*ವಿದಾಯ*


ನಿಧಾನವಾಗಿ ಸರಿಯುತಿದೆ

ಎರಡು ಸಾವಿರದ ಇಪ್ಪತ್ತೊಂದು|

ಸರ್ವರಿಗೆ  ನಲಿವಿಗಿಂತ

ನೋವುಗಳನೇ ನೀಡಿತು 

ಒಂದರ ಮೇಲೊಂದು| |


*ಸ್ವಾಗತ*


ಸ್ವಾಗತಿಸೋಣ ಬರುವ

ಎರಡು ಸಾವಿರದ ಇಪ್ಪತ್ತೆರಡು|

ಆಶಾವಾದವಿಟ್ಟುಕೊಳ್ಳೊಣ

ಈ ವರ್ಷ ಚಿಗುರಲಿದೆ

ಬರಡಾದ ಕೊರಡು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.


ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು .



30 December 2021

ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ


 

ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ.

ಹಾಗೆ ನೋಡಿದರೆ ಉಗಾದಿ ನಮ್ಮ ಹೊಸ ವರ್ಷ ಆಗಲೂ ನಮಗೆ ಬೆಲ್ಲಕ್ಕಿಂತ ಬೇವೇ ಹೆಚ್ಚಾಗಿ ಕಂಡುಬಂತು . ಕ್ಯಾಲೆಂಡರ್ ಪ್ರಕಾರದ  ಹೊಸ ವರ್ಷವಾದರೂ ನಮ್ಮ ಬಾಳಲ್ಲಿ ನಿಜವಾದ ಹೊಸತನ ತರಲಿ ಎಂದು ಆಶಾವಾದ ಹೊಂದಿರುವವನು ನಾನು.

ಇದಮಿತ್ತಂ ,ಹೀಗೇ ಜೀವನವಿರುವಿದು. ಹೀಗೇ ಮುಂಬರಲಿರುವ ವರ್ಷ ಇರುವುದು ಎಂಬುದನ್ನು ಊಹೆ ಮಾಡಿದರೆ ನಮ್ಮಂತಹ ಮೂರ್ಖರು ಬೇರೊಬ್ಬರಿಲ್ಲ.
ಬರುವ ಹೊಸ ವರ್ಷಗಳಲ್ಲಿ ನಮಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಖಚಿತ ಅದಕ್ಕೆ ನಾವೆಲ್ಲರೂ ಮಾನಸಿಕವಾಗಿ ಸಿದ್ದರಿರಬೇಕು.

ಕೋವಿಡ್ ಕಾಲದಲ್ಲಿ ಮಾನವನ ಆರ್ಥಿಕ ,ಸಾಮಾಜಿಕ, ಶೈಕ್ಷಣಿಕ, ಮಾನಸಿಕ ಮುಂತಾದ ಎಲ್ಲಾ ರಂಗಗಳಲ್ಲಿ ಮಾನವನಿಗೆ ನೋವೇ  ಅಧಿಕವಾಗಿದೆ.ಈ ವರ್ಷ ಕೂಡಾ ಕೋವಿಡ್ ತನಯ ಅಟ್ಟಹಾಸ ಮೆರೆಯಲು ಕಾದು ಕುಳಿತಂತಿದೆ.  ಇದರ ಜೊತೆಯಲ್ಲಿ ನಾವೇ ಸೃಷ್ಟಿಸಿದ ಪರಿಸರ ಅಸಮತೋಲನ ಮತ್ತು ಪರಿಸರದ ಮೇಲೆ ನಾವು ಮಾಡಿರುವ ಅನಾಚಾರಗಳ ಪರಿಣಾಮವಾಗಿ ಅಕಾಲಿಕವಾದ ಮಳೆ ,ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಭೂಕುಸಿತಗಳು ನಮ್ಮಯ ಬದುಕನ್ನು ನುಂಗಲು ಬಾಯಿ ತೆರೆದು‌ಕುಳಿತಿರಬಹುದು. ಅಂತಹ ಪರಿಸ್ಥಿತಿ ಬಂದರೆ ನಾವು ಸಿದ್ದರಿರಬೇಕು. ಏಕೆಂದರೆ ಮಾಡಿದ್ದುಣ್ಣೋ ಮಹರಾಯ.

ಜೀವನದಲ್ಲಿ ನಾವು ಯೋಜನೆ ಮಾಡಿ ಜೀವಿಸುವೆವವು ಎಂದರೆ ಪ್ರಕೃತಿ ಮತ್ತು ಭಗವಂತ ಅದನ್ನು ಉಲ್ಟಾ ಮಾಡಿ ಈಗ ಹೇಗಿದೆ ನೋಡು ಆಟ? ಎಂದು  ನಗುವನು ಆದ್ದರಿಂದ ನಾವು ಮುಂಬರುವ ವರ್ಷದಲ್ಲಿ ಅತಿಯಾಗಿ ಪ್ಲಾನ್ ಮಾಡದೆ ಬಂದದ್ದೆಲ್ಲಾ ಬರಲಿ ಅವನ ದಯವೊಂದಿರಲಿ ಎಂದು ಆಶಾವಾದದ ಮೂಲಕ ಹೊಸ ವರ್ಷ ಸ್ವಾಗತಿಸೋಣ. ಎಲ್ಲಾ ವರ್ಷದಂತೆ ಮುಂಬರುವ 2022 ಸಹ ನಮ್ಮ ಬದುಕಲ್ಲಿ ಒಂದು ನಂಬರ್ ಆ ನಂಬರ್ ದಾಟಲೇಬೇಕು ದಾಟುತ್ತೇವೆ. ಆದರೆ ಆ ವರ್ಷದಲ್ಲಿ ನಾನು ಸವಾಲುಗಳು ಎದುರಿಸಿ ನನ್ನ ಜೀವನದಲ್ಲಿ ಮರೆಯಲಾಗದ ಎಷ್ಟು ಅವಿಸ್ಮರಣೀಯ ಘಟನೆಗಳನ್ನು ಸೃಷ್ಟಿ ಮಾಡಿಕೊಂಡೆ? ನನ್ನಿಂದ ಎಷ್ಟು ಜನರ ಮೊಗದಲ್ಲಿ ನಗುವರಳಿತು? ನಾನು ಎಷ್ಟು ಜನರಿಗೆ ಸಣ್ಣ ಪುಟ್ಟ ಸಹಾಯ ಮಾಡಿದೆ? ಎಂಬುವ ಅಂಶಗಳು ನಮ್ಮ ಜೀವನದ ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತವೆ.

ಇಂತಹ ಸಾರ್ಥಕ ಜೀವನವು ಮುಂಬರುವ ವರ್ಷದಲ್ಲಿ ನಮ್ಮದಾಗಲಿ ಎಂದು ಆಶಿಸುವ

ನಿಮ್ಮ ಸಿಹಿಜೀವಿ.

ಸಿ ಜಿ ವೆಂಕಟೇಶ್ವರ
ತುಮಕೂರು.

29 December 2021

ರಕ್ತಸಿಕ್ತ ರತ್ನ .ಕಾದಂಬರಿ ವಿಮರ್ಶೆ


 



ರಕ್ತ ಸಿಕ್ತ ರತ್ನ .

ವಿಮರ್ಶೆ 


ಕೆ ಎನ್ ಗಣೇಶಯ್ಯರವರು ಬರೆದ 

ರೋಚಕ ಕಾದಂಬರಿ ರಕ್ತಸಿಕ್ತ ರತ್ನ ಒಂದು ರೋಚಕ ಮತ್ತು ಕುತೂಹಲಕಾರಿ ಐತಿಹಾಸಿಕ ಕಾದಂಬರಿ  ಈ ವರ್ಷ ನಾನು   ಓದಿದ ಕಾದಂಬರಿಗಳಲ್ಲಿ ಇದೂ ಕೂಡ ನೆಚ್ಚಿನ ಕಾದಂಬರಿ.  


ಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗನ್ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮ ದೇಶದ ಬೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.


ಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನಿತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ದಾಳಿಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣವಾಗುವುದರ ಜೊತೆಗೆ, ಅತ್ಯಂತ ಬೆಲೆ ಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗತೊಡಗುತ್ತದೆ. ಅದನ್ನು ನೀವು ಓದಿಯೇ ಸವಿಯಬೇಕು.


ಕಾದಂಬರಿ ಕಾರರು ಹೇಳುವಂತೆ 

ಪ್ರಸಿದ್ಧ  ಬರ್ಮಾದ   ಪಗೋಡಗಳನ್ನು ಆವರಿಸಿರುವ ಚಿನ್ನದ ಮುಸುಕುಗಳಲ್ಲಿ ಪ್ರತಿಫಲಿಸುತ್ತಿದೆ. ಅಲ್ಲದೆ ಜನರ ನಡೆನುಡಿಗಳಲ್ಲಿ ನುಸುಳಿಕೊಂಡಿದೆ: ಹಬ್ಬ ಹರಿದಿನಗಳ ಆಚರಣೆಯಲ್ಲಿ ವರ್ಣಮಯವಾಗಿ ಎದ್ದು ನರ್ತಿಸುತ್ತಿದೆ. ಈ ದೇಶದಲ್ಲಿ ಸುತ್ತಾಡುತ್ತಿದ್ದಂತೆ ನನಗೆ ತೈವಾನ್ನಲ್ಲಿ ಮೂಡಿದ ಭಾವನೆ ಮತ್ತೆ ಮರುಕಳಿಸಿತ್ತು. 'ಇದು ನಮ್ಮ ಧರ್ಮ, ನಾವು ಸ್ವೀಕರಿಸದೆ ಕೈಬಿಟ್ಟ ಧರ್ಮ, ಒಂದು ರೀತಿಯಲ್ಲಿ ನಾವು ಆಸರೆ ಕೊಡದೆ ಗಡೀಪಾರು ಮಾಡಿದ ಧರ್ಮ' ಎನಿಸಿತ್ತು. ಆದರೆ ಅದರ ಬೆನ್ನಲ್ಲಿಯೇ ಮೂಡಿದ ಮತ್ತೊಂದು ಸಮಜಾಯಿಷಿಯ ಭಾವನೆ ಮೂಡಿತ್ತು: 'ಚಾರಿತ್ರಿಕವಾಗಿ ಬರ್ಮಾ ದೇಶ ನಮ್ಮ ಭಾರತವೆ ಅಲ್ಲವೆ? ಸುಭಾಷ್ಚಂದ್ರ ಬೋಸ್ ಅವರು ತಮ್ಮ ಸ್ವಾತಂತ್ರದ ಯುದ್ಧವನ್ನು ಪ್ರಾರಂಭಿಸಿದ್ದು ಇಲ್ಲಿಂದಲೆ ಅಲ್ಲವೆ? ಆ ದಿನಗಳಲ್ಲಿ 'ಭಾರತ' ಎಂದರೆ ಇದೆಲ್ಲವೂ ಸೇರಿತಲ್ಲವೆ? ಈ ಬ್ರಿಟಿಷರಿಂದಾಗಿ ಬರ್ಮಾ ಭಾರತದಿಂದ ಬೇರೆಯಾಯಿತೆ? ಹಾಗಿದ್ದರೆ ನಾನು ಹಳೆಯ 'ಭಾರತ'ದಲ್ಲಿಯೇ ಇದ್ದೇನೆ ಎಂದಲ್ಲವೆ? ಹಾಗಾಗಿ ಇಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರೆ, ಆದು ಆಗಿನ ನಮ್ಮ ಭಾರತದ ಒಂದು ಭಾಗದಲ್ಲಿಯೇ ಬೌದ್ಧ ಧರ್ಮವನ್ನು ಸ್ವೀಕರಿಸಿದಂತಲ್ಲವೆ?" ಎಂಬ ಸಮಾಧಾನದ ಭಾವನೆ, ಇದರಿಂದಾಗಿ ನನಗೆ ಬರ್ಮಾ ಎಂದರೆ 'ಭಾರತ' ದೇಶದ ಪರಿಕಲ್ಪನೆಯ ಭಾಗವಾಗಿ ಹೋಗಿತ್ತು. ಆದಕಾರಣ, ನಾನು ತೀಬಾ ರಾಜನನ್ನು ಭಾರತದ ಹೊರಗಿನ ರಾಜ ಎಂದು ಭಾವಿಸಲಿಲ್ಲ. ಜೊತೆಗೆ ಆತ ಇಂದಿನ 'ಇಂಡಿಯಾ'ದಲ್ಲಿಯೇ ಸತ್ತಿದ್ದರಿಂದಲೂ, ಈ ಕಥೆ ಮತ್ತೊಬ್ಬ ಭಾರತದ ರಾಜನ ಕಥೆಯಾಗಿಯೇ ನನ್ನಲ್ಲಿ ಬೆಳೆಯಿತು. ಎಂದಿರುವರು.


ಕಾದಂಬರಿ ಹುಟ್ಟಿದ ಬಗೆಯನ್ನು ವಿವರಿಸಿರುವ ಕಾದಂಬರಿಕಾರರು ರತ ಗಿರಿಗೆ ಪ್ರವಾಸ ಬರುತ್ತಾರೆ. ರತ್ನಗಿರಿಗೆ ಬಂದಿದ್ದು ಯಾವುದೇ ಉದ್ದೇಶವಿಲ್ಲದೆ, ಕೇವಲ ಪ್ರಯಾಣದ ಹಾದಿಯಲ್ಲಿನ ಮತ್ತೂ ಒಂದು ತಂಗುದಾಣವಾಗಿ ಅಷ್ಟೆ. ಆದರೆ ಅಲ್ಲಿ ತಂಗಿದ್ರೆ ರಾತ್ರಿ ಸುತ್ತ ಮುತ್ತ ಏನಾದರೂ ನೋಡಲು ಕುತೂಹಲಕರವಾದದ್ದು ಇರಬಹುದೆಂದು ಎಂದು ಹುಡುಕುತ್ತಿದ್ದಾಗ ತಿಳಿದದ್ದು. ಬರ್ಮಾ ದೇಶದ ರಾಜ ತೀಬಾರಾಜನ ಅರಮನೆ ಇದೆ ಎಂದು.


ರತ್ನಗಿರಿಯ ಅರಮನೆಯ ಆವರಣದಲ್ಲಿದ್ದಷ್ಟು ಹೊತ್ತು ಅವರಿಗೆ ಹುಚ್ಚು ಹಿಡಿಯುವುದರ ಜೊತೆಗೆ ದುಃಖವೂ ಆವರಿಸಿತ್ತು-ಅಲ್ಲಿನ ಸಂಗ್ರಹಾಲಯದ ಸಿಬ್ಬಂದಿಯೊಬ್ಬರ ಮೂಲಕ ತಿಳಿದ ವಿವರಗಳಿಂದಾಗಿ: ತೀಬಾ  ರಾಜ ಬೌದ್ಧ ಧರ್ಮದ ವಿದ್ಯೆಯಲ್ಲಿ ಅತ್ಯುನ್ನತ ಪದವಿ ಪಡೆದದ್ದು, ನಂತರ ಬ್ರಿಟಿಷರಿಗೆ ಸೋತು ಸೆರೆಯಾಗಿ ದುರಂತ ಜೀವನ ನಡೆಸಿದ್ದು, ರತ್ನಗಿರಿಗೆ ಬಂದ ಮೇಲೆ ತೀಬಾ, ಆತನ ರಾಣಿ ಮತ್ತು ಹೆಣ್ಣು ಮಕ್ಕಳು ಅರಮನೆಯ ರಚನೆಯಲ್ಲಿ ತಾವಾಗಿ ತೊಡಗಿಸಿಕೊಂಡದ್ದು, ಅರಮನೆಯಿಂದ ಅನತಿದೂರದಲ್ಲಿದ್ದ ಅವರ ಅಡುಗೆ ಮನೆಯಲ್ಲಿ ಬರ್ಮಾದ ಆಡುಗೆ ಮಾಡಲು ಅವರು ಕಷ್ಟಪಡುತ್ತಿದ್ದದ್ದು, ರಾಜನ ಹೆಣ್ಣುಮಕ್ಕಳು ಅಡುಗೆ ಮನೆಯಿಂದ ಆರಮನೆಗೆ ಊಟವನ್ನು ತಂದು ತಂದೆ ತಾಯಿಗೆ ಬಡಿಸಲು ಬಯಸಿದರೂ ರಾಜ ಅದನ್ನು ವಿರೋಧಿಸುತ್ತಿದ್ದದ್ದು, ಆತ ಸತ್ತ ನಂತರ ರತ್ನಗಿರಿಯಲ್ಲಿಯೇ ಅಂತ್ಯಕ್ರಿಯೆ ನಡೆದದ್ದು, ಸುಫಾಯಾಲಾತ್ಳ ಕಳೇಬರವನ್ನು ಮಂಡಲೆಗೆ ಹೊತ್ತೊಯ್ಯಲು ಬ್ರಿಟಿಷ್ ಸರಕಾರ ಅಡ್ಡಿ ಒಡ್ಡಿದ್ದು, ಅವರ ಕೆಲವು ಮಕ್ಕಳ ಶೋಚನೀಯ ಜೀವನ.. ಹೀಗೆ ಎಲ್ಲವನ್ನೂ ಕೇಳುತ್ತ ಒಂದೆಡೆ ತೀಬಾ ರಾಜನ ಬಗ್ಗೆ ಮತ್ತಷ್ಟು ತಿಳಿಯುವ ಹುಚ್ಚು ಹಿಡಿದು  ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದ ಆರಮನೆಯನ್ನು ಇಂದು ಸಂಪೂರ್ಣ ಆಗೆದು, ಕಿತ್ತು. ಜೀರ್ಣೋದ್ಧಾರ ಮಾಡುತ್ತಿದ್ದ ರೀತಿ ಕಂಡು ನೋವು ಉಮ್ಮಳಿಸಿತ್ತು. ನೂರು ವರ್ಷಗಳ ಹಿಂದೆ ಆ ಅರಮನೆಗೆ ಉಪಯೋಗಿಸಿದ್ದ ಸೂರಿನ ಹೆಂಚುಗಳನ್ನೆಲ್ಲ ಕಿತ್ತು ಸುತ್ತಲೂ ದಿಕ್ಕಾಪಾಲಾಗಿ ಎಸೆಯಲಾಗಿತ್ತು, ಅವುಗಳ ಮೇಲೆ ಕಣ್ಣಾಡಿಸಿ ಓಡಾಡುತ್ತಿದ್ದಾಗ ಒಂದು ಹೆಂಚಿನ ಮೇಲೆ ದೊರಕಿದ ವಿಶಿಷ್ಟ ಚಿತ್ರ ನಮ್ಮನ್ನು ಆಕರ್ಷಿಸಿ .ಸಂಶೋಧನೆ ಮಾಡಿ ಇಂತಹ ಸುಂದರ ಕಾದಂಬರಿಯನ್ನು ನಮ್ಮ ಕೈಗಿತ್ತಿದ್ದಾರೆ ಶ್ರೀಯುತ ಕೆ ಎನ್ ಗಣೇಶಯ್ಯ ರವರು.


ಈ ಕಾದಂಬರಿಯ ಪಾತ್ರ ಪೋ಼ಷಣೆ ಅಷ್ಟೇ ಅದ್ಭುತ

 ಟುನ್   ಎಂಬ ಪ್ರವಾಸಿ ಗೈಡ್ ಸಾಮಾನ್ಯ ಪ್ರವಾಸಿ ಗೈಡ್ ಆಗಿರದೇ ಓರ್ವ ದೇಶಭಕ್ತ ,ತನ ದೇಶದ ಇತಿಹಾಸ ದ ಬಗ್ಗೆ ಅಪಾರ ಗೌರವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಓರ್ವ ನಾಯಕನಾಗಿ ಗಮನ ಸೆಳೆಯುತ್ತಾನೆ.

ಮೇರಿ ಪತ್ರಕರ್ತೆ ಎಂಬ ಪತ್ರಕರ್ತೆ ತನ್ನ ಜನನ ರಹಸ್ಯ ತಿಳಿಯಲು ಮತ್ತು ಬರ್ಮಾದ ಸಂಪತ್ತಿನ ರಹಸ್ಯ ತಿಳಿಯಲು ಎಷ್ಟೇ ಧೈರ್ಯ ಮತ್ತು ಬುದ್ದಿವಂತಿಕೆ ಪ್ರದರ್ಶಿಸಿದರೂ ದುರಂತ ನಾಯಕಿಯಾಗಿ ಅಂತ್ಯ ಕಾಣುವುದು ಬೇಸರ ತರಿಸುತ್ತದೆ. ಬರ್ಮಾದ ಧರ್ಮ ಗುರು ತಮ್ಮ ದೇಶದ ಸಂಪತ್ತಿನ ಇತಿಹಾಸ ಮತ್ತು ರಹಸ್ಯ ತಿಳಿಯುವ ಆಸಕ್ತಿ ಗಮನ ಸೆಳೆಯುತ್ತದೆ.ಅದಕ್ಕೆ ಪುರಕವಾಗಿ

ಭುವನ್ ಗುರುಗಳಿಗೆ ಸಹಾಯ ಮಾಡುತ್ತಾನೆ .ಇನ್ನೂ ಭಾರತದ 

ಸುನಿತಾ ಸಂಶೋಧನಾ ಅಧಿಕಾರಿಗಳಾಗಿ 

ಅಭಿಜಿತ್  ಎಂಬ ಸಿ .ಬಿ .ಐ .ಅಧಿಕಾರಿ ಗೆ ಬರ್ಮಾದ ಸಂಪತ್ತಿನ ಬಗ್ಗೆ ನೀಡುವ ಪ್ರತಿಯೊಂದು ಮಾಹಿತಿಯು ಕುತೂಹಲ ಕೆರಳಿಸುತ್ತದೆ.

ಬರ್ಮಾದ ತೀಬಾ ರಾಜ ಬೌದ್ಧ ಬಿಕ್ಕುವಾಗಿ ನಂತರ  ರಾಜನಾಗಿ ಹೇಗೆ 

ರಾಣಿ ಸುಫಾಯಾಲಾತ್ ಳ ಕೈಗೊಂಬೆ ಯಾಗುತ್ತಾನೆ ಎಂಬುದನ್ನು ಕಾದಂಬರಿಯಲ್ಲಿ ಓದಿಯೇ ತಿಳಿಯಬೇಕು.


ಇನ್ನೂ ಬರ್ಮಾದ ಸಂಪತ್ತಿನ ಮೇಲೆ ಕಣ್ಣಿಟ್ಟ ಡೇವಿಡ್ ಮತ್ತು ಶ್ವೇ ಟುನ್ ಅಂತರಾಷ್ಟ್ರೀಯ ಮಾಫಿಯಾ ದವರು ಹೇಗೆ ಸಂಚು ಹೂಡಿದರು ಮತ್ತು ಆ ಸಂಚಿಗೆ ತಾವೇ ಬಲಿಯಾದದ್ದನ್ನು ಲೇಖಕರು ಚೆನ್ನಾಗಿ ವಿವರಿಸಿರುವರು.

ಬರ್ಮಾದ ಅಪೂರ್ವ ಸಂಪತ್ತಿನ ರಕ್ಷಣೆ ಕಾರ್ಯ ಸುಸೂತ್ರವಾಗಿ ನಿರ್ವಹಣೆ ಮಾಡಿದ 

ಮೆಡಾವ್ ಪುಷ್ಪ ಅವಳ  ನಾಗಪಂಥ,

ನಾಗ ಗುಹೆ  , ಚಿತ್ರಣಗಳು ಕಾದಂಬರಿಯಲ್ಲಿ ಸೊಗಸಾಗಿ ಮೂಡಿಬಂದಿವೆ .


ನಾವು ಈ ಕಾದಂಬರಿಯನ್ನು ಓದುತ್ತಾ  ಟೂರ್ ಮಾಡಿದ ಅನುಭವವಾಗುತ್ತದೆ.

 ಗೋವಾ ಮುಂಬಯಿ,

ಪೂನಾ ,ಬರ್ಮಾದಾಮರಾಪುರ, ಮಂಡಲೆ ,ಬಾಗನ್ ,ಈ ಸ್ಥಳಗಳ ಪರಿಚಯ ಆಗುತ್ತದೆ.

ಲಂಡನ್ ಕಥೆ ಆರಂಭವಾಗಿ

ಬರ್ಮಾ ದಲ್ಲಿ ಮುಕ್ತಾಯವಾಗುತ್ತದೆ.

ಈ ಕಾದಂಬರಿಯನ್ನು ಓದುವಾಗ 

ಸಿಗಾರ್ ,ರಹಸ್ಯತೊಗಲಿನ ಚೀಲ ,

ಕರ್ಚಿಪ್ ಮುಂತಾದವುಗಳು ಸಹ ಪಾತ್ರಗಳಾಗ ಗಮನ ಸೆಳೆಯುತ್ತವೆ .

ಒಂದು ವಿಶಿಷ್ಟವಾದ ಐತಿಹಾಸಿಕ ಜ್ಞಾನ ಪಡೆಯಲು ರೋಚಕತೆಯನ್ನು ಅನುಭವಿಸಲು   ನೀವು ರಕ್ತ ಸಿಕ್ತ ರತ್ನ ಓದಲೇಬೇಕು.



 ಕಾದಂಬರಿ:   ರಕ್ತಸಿಕ್ತ ರತ್ನ 

ಲೇಖಕರು: ಕೆ ಎನ್ ಗಣೇಶಯ್ಯ 

ಬೆಲೆ: ರೂ.350/


 ಪ್ರಕಾಶನ:  ಅಂಕಿತ ಪ್ರಕಾಶನ 



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು.

28 December 2021

ಸಿಂಹ ಧ್ವನಿ .೨೮/೧೨/೨೧


 

ದೂರ ಸರಿದರು .ಕಾದಂಬರಿ ವಿಮರ್ಶೆ

 


ದೂರ ಸರಿದರು 

ವಿಮರ್ಶೆ


  ಎಸ್ .ಎಲ್ . ಬೈರಪ್ಪ ರವರ ಕಾದಂರಿಗಳೇ ಹಾಗೆ ಪ್ರತಿ ಬಾರಿ ಓದಿದಂತೆ ನಮ್ಮಲ್ಲಿ ಏನೋ ಒಂದು ಹೊಸ ಜ್ಞಾನ ಬೆಳೆಯುತ್ತದೆ ,ಹೊಸ ಚಿಂತನೆಗಳು ಮೊಳಕೆಯೊಡೆಯುತ್ತವೆ.

1962 ರಲ್ಲಿ ಬರೆದ ಕಾದಂಬರಿ 

ಹಲವಾರು ಬಾರಿ ಮರು ಮುದ್ರಣ ಕಂಡು ಅಪಾರ ಓದುಗ ಬಳಗ ಮೆಚ್ಚಿದ ಕಾದಂಬರಿ "ದೂರ ಸರಿದರು " ನನಗೆ ಬಹಳ ಇಷ್ಟವಾದ ಕಾದಂಬರಿ.


ಈ ಕಾದಂಬರಿಯಲ್ಲಿ ಎರಡು ಜೋಡಿಗಳು ದೂರ ಸರಿಯುವುದನ್ನು ನಾವು ಕಾಣಬಹುದು.

ಪ್ರಮುಖ ಪಾತ್ರದಲ್ಲಿ ಅನಂದ ಮತ್ತು ವಿನತೆ ಪ್ರೀತಿ ದಾಂಪತ್ಯ ದ ಬಗ್ಗೆ ಏಕ ಅಭಿಪ್ರಾಯವಿದ್ದರೂ ಒಂದೇ ರೀತಿಯ ಚಿಂತನೆಗಳ ಒಪ್ಪಿಕೊಂಡರೂ  ವಿನತೆಯ ತಾಯಿಯ ವಿರೋದ ಹಾಗೂ ಕೆಲವು ಬಾಹ್ಯ ಪರಿಸ್ಥಿತಿಯಿಂದ ಅವರು "ದೂರ ಸರಿದರು"

ಮತ್ತೊಂದು ಜೋಡಿ ಉಮೆ ಮತ್ತು ವಸಂತ ಇವರಿಬ್ಬರೂ ಸೌಂದರ್ಯಕ್ಕಿಂತ ಹೆಚ್ಚು ವೈಚಾರಿಕತೆಯ ಸಾಮ್ಯತೆ ಇವರನ್ನು ಬಂಧಿಸಿತ್ತು .ಮೊದಲು ಉಮೆಯ ಪ್ರೋತ್ಸಾಹ ಮಾಡಿದ ವಸಂತ ಕ್ರಮೇಣ ಅವಳ  ವೈಚಾರಿಕತೆ ಮತ್ತು ಚಿಂತನೆಗಳು ಅವನ ನಂಬಿಕೆಯನ್ನು ಪ್ರಶ್ನಿಸುವ ಮಟ್ಟ ತಲಪಿದಾಗ ವಸಂತ ಉಮೆಯಿಂದ "ದೂರ ಸರಿದನು".

ತತ್ವ ಶಾಸ್ತ್ರದ ಹಿನ್ನೆಲೆಯಲ್ಲಿ ಬಂದ ಬೈರಪ್ಪನವರ ಸಂಭಾಷಣೆ ನಮ್ಮಲ್ಲಿ ಚಿಂತನ ಮಂಥನ ನಡೆಸಲು ಪ್ರೇರಣೆ ನೀಡುತ್ತದೆ.

ವಿನತೆಗೆ ತನ್ನ ಪ್ರೀತಿಗಿಂತ ತಾಯಿ, ಮತ್ತು ತಮ್ಮಂದಿರ ಶಿಕ್ಷಣ ಅವಳನ್ನು ಕಟ್ಟಿ ಹಾಕಿತ್ತು .ಅವಳ ಗೆಳತಿ ಅವಳ ಪ್ರೇಮಕ್ಕೆ ಸಹಾಯ ಮಾಡಿದರೂ ಅಮ್ಮನ ಬ್ಲಾಕ್ ಮೇಲ್ ಅಳು ಮುಂತಾದವು ವಿನತೆಯನ್ನು ಹಿಂದೆ ಎಳೆದವು .


ಪ್ರೀತಿ ಕುರುಡು ಎಂದು ಕೆಲವರು ಹೇಳಿದರೂ ಇಂದಿನ ಮಾಧ್ಯಮ  ಮತ್ತು ಬಹುತೇಕ ಸಾಹಿತ್ಯ ಹೆಣ್ಣು ಮತ್ತು ಗಂಡಿನ ಸೌಂದರ್ಯ ನೋಡಿ ಪ್ರೀತಿ ಹುಟ್ಟುವ ಬಗ್ಗೆ ವಿವರ ನೀಡುವರು. ಈ ಕಾದಂಬರಿಯ ಲ್ಲಿ ಪ್ರೇಮ ಉದಯವಾಗಲು ಬಾಹ್ಯ ಸೌಂದರ್ಯಕ್ಕೆ ಮಿಗಿಲಾಗಿ ಆಂತರಿಕ ಸೌಂದರ್ಯ ಭೌದ್ಧಿಕ ಸೌಂದರ್ಯ ಮುಖ್ಯ ಎಂಬುದನ್ನು ಬೈರಪ್ಪರವರು ಈ ಕಾದಂಬರಿ ಮೂಲಕ ಎತ್ತಿ ಹಿಡಿದದ್ದು ಸಾರ್ವಕಾಲಿಕ ಮೌಲ್ಯವನ್ನು ಎತ್ತಿಹಿಡಿದಂತಾಗಿದೆ.

ಕಾದಂಬರಿ ಬರೆದು ಅರವತ್ತು ವರ್ಷಗಳ ನಂತರ ವೂ ಸಹ ಇಂದಿಗೂ ಕೌಟುಂಬಿಕ ,ಜಾತಿ ಅಂತಸ್ತು ಧರ್ಮದ ಕಾರಣದಿಂದಾಗಿ ಹಲವಾರು ಪ್ರೇಮಿಗಳು ದೂರ ಸರಿಯುತ್ತಿರುವುದನ್ನು ನಾವು ಕಾಣುತ್ತೇವೆ. ಅದಕ್ಕೆ ಈ ಕೃತಿಯು ಇಂದಿಗೂ ಪ್ರಸ್ತುತ ಮುಂದೆ ಕೂಡಾ.

ಒಟ್ಟಾರೆ ಬೈರಪ್ಪನವರ ಈ ಕಾದಂಬರಿ ಓದಿದ ಕನಿಷ್ಠ ಹದಿನೈದು ದಿನಗಳಾದರೂ ಆ ಪಾತ್ರಗಳ ಗುಂಗು ನಮ್ಮನ್ನು ಆವರಿಸುತ್ತದೆ.ಇಲ್ಲಿ ದೂರ ಸರಿಯಲು ಯಾರು ಕಾರಣ ಎಂಬ ವಿಮರ್ಶೆ ನಮ್ಮಲ್ಲಿ ಮೊಳೆಯುತ್ತದೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ನಮ್ಮಿಂದ ಕೆಲವರು ಅಥವಾ ಕೆಲವರ ಜೀವನದಿಂದ ನಾವು ದೂರ ಸರಿದ ಕಾರಣವನ್ನು ಹುಡುಕುತ್ತೇವೆ .ಕೆಲವೊಮ್ಮೆ ನಾವೇ ಪಶ್ಚಾತ್ತಾಪ ಪಟ್ಟುಕೊಳ್ಳುತ್ತೇವೆ.ಈ ಕಾದಂಬರಿಯನ್ನು ನೀವು ಓದಿಲ್ಲವಾದರೆ ಖಂಡಿತವಾಗಿಯೂ ಓದಿ.ಈಗಾಗಲೇ ಓದಿದ್ದರೆ ಪುನಃ ಓದಿ ಹೊಸ ಯೋಚನೆಗಳು ನಿಮ್ಮಲ್ಲಿ ಪುಟಿದೇಳುವುದರಲ್ಲಿ ಸಂಶಯವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


27 December 2021

ನಾನು ಬಾಲ್ಯದಿ ಕಲಿತ ಪದ್ಯಗಳು.


 


ನನ್ನ ಬಾಲ್ಯದಿ ನಾ ಕಲಿತ ಪದ್ಯಗಳು...

ಆತ್ಮ ಕಥೆ ೨೦

ನನ್ನ ಶಾಲಾ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಶಪ್ಪ ಸರ್ ರವರು ಪದ್ಯಗಳನ್ನು ರಾಗವಾಗಿ ಹಾಡಿ ನಮಗೂ ಹಾಡಲು ಹೇಳಿ ಕೊಡುತ್ತಿದ್ದರು. ಸಾಮಾನ್ಯವಾಗಿ ಪದ್ಯಗಳನ್ನು ಶನಿವಾರ ಹೇಳಿಕೊಡುತ್ತಿದ್ದರು. 


ಅವರು ಹೇಳಿಕೊಟ್ಟ ಎಲ್ಲಾ ಪದ್ಯಗಳು ನನಗೆ ಇಷ್ಟ ವಾಗಿದ್ದವು .ಅದರಲ್ಲೂ  ಗೋವಿನ ಹಾಡು    "ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಕಥೆಯ ...,." ಎಂದು ರಾಗವಾಗಿ ಹಾಡುತ್ತಿದ್ದ ಚಿತ್ರ ಈಗಲೂ ನನ್ನ ಮನದಪಟಲದ ಮೇಲೆ ಮೂಡುತ್ತದೆ. ಅದೇ ಪದ್ಯಕ್ಕೆ ನಮ್ಮಿಂದ  ಅಭಿನಯ ಮಾಡಿಸಿ  ಗೋವಿನ ಹಾಡನ್ನು ದೃಶ್ಯ ರೂಪದಲ್ಲಿ ಮೂಡಿಸಿ ನಮ್ಮನ್ನು ರಂಜಿಸಿದ್ದರು.


ಆ ಪದ್ಯದಲ್ಲಿ ಬರುವ ಗೋವಿನ ಪ್ರಾಮಾಣಿಕ ನಡೆ, ಹುಲಿಯ ಮನಪರಿವರ್ತನೆ , ಗೋವು ತನ್ನ ಕರುವಿಗೆ ಹೇಳುವ ಬುದ್ದಿವಾದ ಈಗಲೂ ಪ್ರಸ್ತುತ. ಒಂದು ಪದ್ಯದಲ್ಲಿ ಒಂದು ಮಹಾಕಾವ್ಯದಲ್ಲಿ ನೀಡುವ ಸಂದೇಶಗಳನ್ನು ನೋಡಬಹುದು. ಈಗಲೂ ಆಗಾಗ್ಗೆ ನಾನು ಆ ಪದ್ಯ ಓದುತ್ತೇನೆ ಪ್ರತೀ ಬಾರಿ ಓದಿದಾಗ ಹೊಸ ಹೊಳವುಗಳು ,ಚಿಂತನೆಗಳು ಚಿಗುರೊಡೆಯುತ್ತವೆ. ನನ್ನ ಬಾಲ್ಯ, ನನ್ನ ಊರು, ನನ್ನ ಸಹಪಾಠಿಗಳು, ನನ್ನ ಶಿಕ್ಷಕರು ನೆನಪಾಗುತ್ತಾರೆ.


ಇನ್ನೂ  ಬಾಲ್ಯದಲ್ಲಿ ನಾನು ಕಲಿತ ಹಾಗೂ ನನಗೆ  ಬಹಳ   ಇಷ್ಟವಾದ ಪದ್ಯ " ಒಂದು ಎರಡು ಬಾಳೆಲೆ ಹರಡು"     ಊಟದ ರೀತಿ ರಿವಾಜನ್ನು ಸರಳ ಪದಗಳಲ್ಲಿ ಸುಂದರವಾಗಿ ವರ್ಣನೆ ಮಾಡಿದ ಕವಿತೆ ನನಗೆ ಈಗಲೂ ಇಷ್ಟ . ಇದೇ ಪದ್ಯದಿಂದ ಸ್ಫೂರ್ತಿ ಪಡೆದು ಶಾಲೆಯಲ್ಲಿ ಮಕ್ಕಳು ಕಲಿಯುವ ಬಗ್ಗೆ  ನಾನೂ ಒಂದು ಶಿಶುಗೀತೆ   ಬರೆದಿರುವೆ . ಅದು ಹೀಗಿದೆ.


*ಪುಟ್ಟನ ಶಿಕ್ಷಣ*


ಒಂದು ಎರಡು 

ಶಾಲೆಗೆ ಹೊರಡು


ಮೂರು ನಾಲ್ಕು

ಪಾಠವು ಬೇಕು 


ಐದು ಆರು

ಗೆಳೆಯರ ಸೇರು


ಏಳು ಎಂಟು

ಆಟವು ಉಂಟು


ಒಂಭತ್ತು ಹತ್ತು

ಅರಿವನು ಬಿತ್ತು


ಒಂದರಿಂದ ಹತ್ತು  ಹೀಗಿತ್ತು

ಕಲಿಕೆಯ ದಾರಿಯು ಸೊಗವಿತ್ತು


ಇಂದಿನ ದಿನಗಳಲ್ಲಿ ಕಂಪ್ಯೂಟರ್ ಕಲಿಯದ ವ್ಯಕ್ತಿಯನ್ನು ಅನಕ್ಷರಸ್ಥ ಎಂದು ಕರೆಯಲಾಗುತ್ತದೆ .ಕಂಪ್ಯೂಟರ್ ಕಲಿಕೆಯು ಹಂತಗಳನ್ನು ಹೇಳುವ ಒಂದು ಶಿಶುಗೀತೆಯ ನನ್ನ ಪ್ರಯತ್ನ ಇದು.


ಒಂದು ಎರಡು 

ಕಂಪ್ಯೂಟರ್ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


ಹೀಗೆ ನಾನು ಬಾಲ್ಯದಲ್ಲಿ ಕಲಿತ ಪದ್ಯಗಳ ನಂಟು ಈಗಲೂ ಮುಂದುವರೆದಿದೆ. ಕೆಲವೊಮ್ಮೆ ಅವುಗಳ ನೆನೆದು ಕೆಲವೊಮ್ಮೆ ಅದೇ ಧಾಟಿಯಲ್ಲಿ ಪದ್ಯಗಳ ಹೊಸೆದು ನಲಿಯುತ್ತೇನೆ ಓದುಗ ದೊರೆಗಳು ಮೆಚ್ಚಿ ನಾಲ್ಕು ಮಾತಾಡಿದರೆ ಇನ್ನೂ ಹಿಗ್ಗುತ್ತೇನೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 December 2021

ಕೃಷ್ಣವರ್ಣೆ.


 *ಸಿಹಿಜೀವಿಯ ಹನಿ*


ಕೃಷ್ಣವರ್ಣೆ ಎಂದು ಜರಿದು

ದೂರತಳ್ಳಿ ಶ್ವೇತವರ್ಣವೇ ಶ್ರೇಷ್ಟ

ಎಂದು ಮರುಳಾಗದಿರು ನೋಡಿ

ಥಳುಕು ಬಳುಕು|

ಕಲ್ಲಿದ್ದಲಿನಿಂದಲೂ ಪಡೆಯಬಹದು

ಸರ್ವರ ಬೆಳಗುವ ಬೆಳಕು||


*ಸಿಹಿಜೀವಿ*

ಪ್ರಯತ್ನ ಜಾರಿಯಲ್ಲಿರಲಿ .


 



ಎಟುಕದ ದ್ರಾಕ್ಷಿ ಹುಳಿಯೆಂದು ಪಲಾಯನ ಮಾಡುವವರು ನಾವು . ಕೆಲವೊಮ್ಮೆ ಇದು ನಮ್ಮ ಮಾನಸಿಕ ಆರೋಗ್ಯದ ಡಿಪೆನ್ಸ್ ಮೆಕಾನಿಸಮ್ ತರ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಸಿಗದ ವಸ್ತುಗಳ ಕುರಿತು ಚಿಂತಿಸುತ್ತಾ ಚಿತೆಯೇರುವ ಪರಿಸ್ಥಿತಿ ಬರುತ್ತದೆ. A bird in a hand is greater than two bird in a bush ಎಂಬಂತೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳ ಮತ್ತು ಸೌಕರ್ಯಗಳನ್ನು ಎಂಜಾಯ್ ಮಾಡೋಣ.

ಹಾಗಾದರೆ ಉನ್ನತವಾದ ಗುರಿಗಳೇ  ಬೇಡವೆ? ನಮಗೆ ಸಿಗದಿರುವ ವಸ್ತುಗಳ ಪಡೆಯಲು ಯಾವಾಗಲೂ ಪಲಾಯನ ಮಾಡಿದರೆ ನಾವು ಸಾಧಿಸುವುದು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಉನ್ನತ ಗುರಿ ಖಂಡಿತವಾಗಿಯೂ ತಪ್ಪಲ್ಲ ಅದನ್ನು ತಲುಪುವ ದಾರಿಯಲ್ಲಿ ಅಡೆ ತಡೆ ಬಂದಾಗ ವಿಚಲಿರಾಗದೇ ಸಿಂಹಾವಲೋಕನ ಮಾಡಿಕೊಂಡು ಮುನ್ನೆಡೆಯೋಣ.

 ನಂತರ ಮುಂದೆ ನಮ್ಮ ಗುರಿ ಸಾಧಿಸಲು ಪ್ರಯತ್ನ ಜಾರಿಯಲ್ಲಿ ಇಟ್ಟಿರೋಣ.



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು

22 December 2021

ಡಿಸೆಂಬರ್ ತಿಂಗಳು.


 

ಸ್ವಲ್ಪವೂ ಕರುಣೆ ಬೇಡವೇ?
ಸಾಮಾನ್ಯ ಜನರ ಮೇಲೆ,
ಮಹಿಳೆ ,ಮಕ್ಕಳು ಎಂಬುದನ್ನು
ನೋಡಬಾರದೇ? ಪಾಪ...
ಒಡೆದು ಹೋಗಿವೆ
ಮುಖ ,ಕೈಕಾಲು ತುಟಿಗಳು|
ಇಷ್ಟೆಲ್ಲಾ ಅವಾಂತರಕ್ಕೆ
ಕಾರಣರಾದವರ ಬಗ್ಗೆ  ನೆನೆದರೆ
ಮೈಯೆಲ್ಲಾ ಉರಿಯುತ್ತದೆ .
ನಿಮಗೂ ಗೊತ್ತು ಈ ದೌರ್ಜನ್ಯಕ್ಕೆ
ಕಾರಣರಾದವರಾರೆಂದು ಇನ್ಯಾರು?
ಅದೇ ಚಳಿಯಾದ ಡಿಸೆಂಬರ್ ತಿಂಗಳು !!

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ಕಲಾವಿದ .ಹನಿಗವನ


 



*ಕಲಾವಿದ*


ನಮ್ಮ ಜೀವನದಿ ಹೀಗೆ

ಆಗಬೇಕೆಂದು ನಿರ್ಧರಿಸಿ

ಕೆಲವೊಂದು ನಲುಗಿಸುವನು

ಕಷ್ಟಗಳ ಕೊಟ್ಟು ,ಮತ್ತೆ ಕೆಲವೊಮ್ಮೆ

ಮಲಗಿಸುವನು ಹಾಡಿ ಲಾಲಿಪದ|

ನಾವೇ ನಟನಾ ಚತುರರೆಂದು 

ತಿಳಿದ ಮೂರ್ಖರು, ಆದರೆ 

ನಿಜವೇ ಬೇರೆ ಅವನೇ ಕಲಾವಿದ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



21 December 2021

ಕುರುಸಾರ್ವಭೌಮ.


 


ನಾಟಕ ಪುಸ್ತಕ ವಿಮರ್ಶೆ .

ಕುರು ಸಾರ್ವಭೌಮ ಮತ್ತು ಯಶೋಧರ ಎಂಬ ಎರಡು
ನಾಟಕಗಳನ್ನು ಹೊಂದಿರುವ
ನಾಗರಾಜ ಜಿ ನಾಗಸಂದ್ರ ರವರ ಕೃತಿಯನ್ನು ಓದಿದಾಗ ಸುಯೋಧನನ ಬಗ್ಗೆ ಗೌರವ ಹೆಚ್ಚಾಗುತ್ತದೆ. ಯಶೋಧರೆಯ ಮನದ ತುಮಲಗಳು ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿಯುತ್ತವೆ.
ಬಾಣಗೆರೆ ಪ್ರಕಾಶನದಿಂದ ಪ್ರಕಟವಾದ ಈ ಕೃತಿಯನ್ನು ಎಲ್ಲಾ ಸಾಹಿತ್ಯ ಪ್ರಿಯರು ಓದಲೇಬೇಕು.

ಕವನ, ಕಥೆ, ಕಾದಂಬರಿ, ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬಂದಿರುವ ಆತ್ಮೀಯರು, ಬಂಧುಗಳೂ ಆದ  ಶ್ರೀ ನಾಗರಾಜ ಜಿ ನಾಗಸಂದ್ರ ಇವರು ವೃತ್ತಿಯಲ್ಲಿ ಶಿಕ್ಷಕರು, ಅದರಲ್ಲೂ ನಾ ಕಂಡಂತೆ, ಶಿಕ್ಷಣ ಇಲಾಖೆ ಕಂಡಂತೆ ಅತ್ಯುತ್ತಮ ಶಿಕ್ಷಕರು. ಹೀಗಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಸಮಕಾಲೀನ ಶಿಕ್ಷಕರಿಗೆ ಇದು ಸ್ಪೂರ್ತಿದಾಯಕವಾಗಿದೆ ಎಂದು ನುಡಿಯಲು ನನ್ನ ಹೃದಯ ತುಂಬಿ ಬರುತ್ತಿದೆ. ಪ್ರವೃತ್ತಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಾ ಸದ್ದಿಲ್ಲದೆ  ಶಿಸ್ತು ದ್ಧವಾಗಿ ವೃತ್ತಿ ಹಾಗೂ ಪ್ರವೃತ್ತಿಗಳೆರಡರಲ್ಲೂ ಹೆಸರು ಹಾಗೂ ಯಶಸ್ಸನ್ನು ಗಳಿಸಿರುವ ವಿರಳರಲ್ಲಿ ಇವರು ಒಬ್ಬರು.
ಇದುವರೆಗೂ ಇವರು   ಸಾಮಾಜಿಕ ವಿಷಯಾಧಾರಿತ ಕೃತಿಗಳಾದ “ಆಕಾಂಕ್ಷೆ, ನಿನ್ನೊಲುಮೆ, ಕವನ ಸಂಕಲನಗಳು, ಕಮರಿತು ಕಮಲ, ಒಳಸುಳಿ, ಅಂತರ, ಜಗದ ನಿಯಮ, ಕಾದಂಬರಿಗಳು, ನಮ್ಮೂರ ಭೂಪರು, ಪ್ರಕಾಂಡ ಪಂಡಿತರು, ನೆಲವ ನಂಬಿ, ಕಾಲಚಕ್ರ, ಕಥಾ ಸಂಕಲನಗಳು, ಸುಳಿಗೆ ಸಿಲುಕಿದ ನೌಕೆ, ನಾಟಕ, ನಮ್ಮೂರ ಹಬ್ಬ, ಐತಿಹಾಸಿಕ, ಮಕ್ಕೊಳಗಣ ಮಾಣಿಕ್ಯ ಮಕ್ಕಳ ಕಥಾಸಂಕಲನ ಹಾಗೂ ವರ್ತಮಾನ” ಅಂಕಣ ಬರಹಗಳ ಸಂಗ್ರಹ ಕೃತಿಗಳ ರೂಪ ಪಡೆದು ಪ್ರಕಟವಾಗಿವೆ. ನಾಡಿನ ಪ್ರಸಿದ್ಧ ದಿನ ಪತ್ರಿಕೆಗಳಾದ ಕನ್ನಡ ಪ್ರಭ, ಉದಯ ಕಾಲ, ಪ್ರಜಾ ವಾಹಿನಿ, ಜಯ ಕಿರಣ, ದಿನ ಪತ್ರಿಕೆಗಳಲ್ಲಿ ಹಾಗೂ ಮಂಜುವಾಣಿ, ಸರ್ಕಾರಿ ನೌಕರ ಮಿತ್ರ, ಜ್ಞಾನ ಸಂಗಮ, ಹಾಗೂ ಕರ್ನಾಟಕ ಸೌರಭ ಮಾಸಿಕಗಳಲ್ಲೂ ಶ್ರೀಯುತರ ಹಲವು ಅಂಕಣ ಬರಹಗಳು ಪ್ರಕಟವಾಗಿರುತ್ತವೆ.

ಕೋವಿಡ್ ಲಾಕ್ಡೌನ್ ಸಮಯದಲ್ಲಿ ಕರೆ ಮಾಡಿದ ನಾಗರಾಜ್ ಸರ್ ರವರು ಎರಡು ನಾಟಕ ರಚನೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು.ಈಗ ಆ ಕೃತಿಯನ್ನು ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಸಿದಾಗ ಎರಡು ಮಹಾಕಾವ್ಯ ಓದಿದ ಅನುಭವವಾಯಿತು.

ಈ  ನಾಟಕಗಳ ರಚನೆಗೆ ಅವರ  ಮೇಲೆ ಪ್ರಭಾವ ಬೀರಿದ ಮಹಾಭಾರತದ ಕೃತಿಗಳಾದ ಕುವೆಂಪು ಅವರ “ಸ್ಮಶಾನ ಕುರುಕ್ಷೇತ್ರ" ಎಸ್. ಎಲ್. ಬೈರಪ್ಪನವರ "ಪರ್ವ" ಕಂನಾಡಿ ನಾರಾಯಣ ಅವರ “ದ್ವಾಪರ ಸಂತೋಷಕುಮಾರ ಮೆಹಂದಳೆಯವರ “ಮಹಾಪತನ, ನಾರಾಯಣಾಚಾರ್ಯರ ಸಂಪೂರ್ಣ ಮಹಾಭಾರತ ಕೃತಿಗಳು, ಎಂಬುದನ್ನು ನಾಟಕಕಾರರು ತಮ್ಮ ನುಡಿಗಳಲ್ಲಿ ಹೇಳಿರುವರು ಅದು ನಾಟಕಗಳಲ್ಲೂ ಪ್ರತಿಬಿಂಬಿತವಾಗಿದೆ.

ಖ್ಯಾತ ಅಂಕಣಕಾರರು ಹಾಗೂ ಕಾದಂಬರಿಕಾರರು ಆದ ಸಂತೋಷ್ ಕುಮಾರ್ ಮೆಹಂದಳೆಯವರು ಮುನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿರುವಂತೆ ನಾಗರಾಜ್ ಜಿ ನಾಗಸಂದ್ರ ರವರು
ನಾಟಕವನ್ನು ಹರಿತವಾದ ಶೈಲಿ ಮತ್ತು ಭಾಷೆಯಲ್ಲಿ ಮುನ್ನಡೆಸಿದ್ದಾರೆ. ಪ್ರತೀ ಹಂತದಲ್ಲೂ ಕೇವಲ ಸಂಭಾಷಣೆಯ ಮೂಲಕವೇ ಕತೆಯ ಓಘ ಹಾಗೂ ತಲುಪಿಸಬೇಕಾದ ವಿಷಯ ವಸ್ತುವನ್ನು ಓದುಗನಿಗೆ ಮತ್ತು ಆ ಮೂಲಕ ನಾಟಕ ವೇದಿಕೆಯೇರಿದರೆ ನೋಡುಗನಿಗೆ ತಲುಪುವಂತೆ ಮಾಡಬಲ್ಲ ತಂತ್ರಗಾರಿಕೆ ಗಮನೀಯ ಅಂಶ.

ಪ್ರತೀ ದೃಶ್ಯದಲ್ಲೂ ಕಥಾನಾಯಕ ದುರ್ಯೋಧನನ ಬಗ್ಗೆ ಇಲ್ಲಿ ನಮಗೆ ಅರಿವಿಲ್ಲದೆ ಆತ್ಮೀಯತೆ ಮೂಡುತ್ತಾ ಅವನ ಪಾತ್ರವಾಗುತ್ತ ಹೋಗುವ ಜೊತೆಗೆ ಪರಿಕಲ್ಪನೆಯ ದೃಶ್ಯಗಳು ನಮ್ಮೆದುರಿಗೆ ಜೀವಂತವಾಗುವ ಚಿತ್ರಣ ಬರಹಗಾರನ ಕಸಬುತನಕ್ಕೆ ಸಾಕ್ಷಿ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಶೈಲಿಯ ಮೇಲೆ ಇರುವ ಹಿಡಿತ, ಕಥೆ ಹಾಗೂ ನಾಟಕದ ಅಗತ್ಯತೆಗೆ ಬೇಕಾಗುವ ಅಬ್ಬರದ ಸಂಭಾಷಣೆಗಳನ್ನು ಸಮಯೋಚಿತವಾಗಿ ಸಂಯೋಜಿಸಿರುವ ನಾಗರಾಜ,ರವರು ಪ್ರತಿ ದೃಶ್ಯಗಳನ್ನು ಕಲ್ಪನಾತ್ಮಕ ಎನ್ನುವ ಭಾವದಲ್ಲಿ ಸೃಜಿಸಿದ್ದಾರೆ. ಕುರು ಸಾರ್ವಭೌಮ ನಾಟಕ ರಂಗದ ಮೇಲೆ ಸಕಾರಾತ್ಮಕವಾಗಿ ಸೂಕ್ತ ಧ್ವನಿ ಹಾಗು ಬೆಳಕಿನ ಸಂಯೋಜನೆಯಲ್ಲಿ ಕಟ್ಟಿ ಕೊಡುವುದಾದಲ್ಲಿ, ಬರಹಕ್ಕೆ ತಕ್ಕ ನಿರ್ದೇಶಕ ದೊರಕಿದರೆ ಕಲಾತ್ಮಕತೆಯಿಂದ ಉತ್ತಮವಾಗಿ ಹೊರಹೊಮ್ಮಬಹುದಾದ ನಾಟಕ ಇದು.

ಸೂಕ್ತ ವ್ಯಕ್ತಿ, ಅಭಿನಯ ಹಾಗೂ ರಂಗ ಸಜ್ಜಿಕೆಗಳಿಗೆ ತಕ್ಕುದಾದ ಭಾಷಾ ಪ್ರೌಢಿಮೆಯ ನಾಟಕ ಕುರು ಸಾರ್ವಭೌಮವನ್ನು ಪುಸ್ತಕ ರೂಪದಲ್ಲಿ ಮಾತ್ರ ಓದದೆ ಕನ್ನಡಿಗರು ರಂಗರೂಪಕಕ್ಕೂ ಬಳಸಿಕೊಂಡಲ್ಲಿ ಉತ್ತಮವಾದ ಸಾಹಿತ್ಯಕ ರಚನೆಗೊಂದು ಮೌಲ್ಯ ಹಾಗು ಅದು ಕುರು ಸಾರ್ವಭೌಮನಿಗೂ ಸಲ್ಲುವ ಮೌಲ್ಯ ಎಂಬುದು ನನ್ನ ಅನಿಸಿಕೆ. ಹಲವು ಮಹಾಭಾರತಗಳನ್ನು ಓದಿ, ಅಭ್ಯಸಿಸಿ ಅದರ ಮೂಲಕ ದುರ್ಯೋಧನ ಪಾತ್ರ ರೂಪಿಸುವಲ್ಲಿ ಮಹತ್ವದ ಸಮಯವನ್ನು ನೀಡಿರುವರು.

ಇನ್ನೂ ಇದೇ ಕೃತಿಯ ಎರಡನೇ ನಾಟಕ ಯಶೋಧರ ನಮ್ಮನ್ನು ಚಿಂತನೆಗೆ ಹಚ್ಚಿ ಯಶೋಧರ ಳ ಅಂತರಂಗದ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ಬುದ್ಧನ ತತ್ವಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಅಂತಹ ಮಾನವೀಯ ಧರ್ಮ ಬೋಧಿಸಿದ ಬುದ್ಧನ ಬಗ್ಗೆ ಹಲವರು ತಮ್ಮದೇ ಆದ ರೀತಿಯಲ್ಲಿ ಬರೆದು ಪ್ರಚುರಪಡಿಸಿದ್ದಾರೆ. ಅಷ್ಟಾದರು ಬುದ್ಧನ ಪತ್ನಿ ಯಶೋಧರೆಯು ಕಿರಿಯ ವಯಸ್ಸಿನಲ್ಲೇ ತನ್ನ ಪತಿಯನ್ನು ಅಗಲಿ ನೋವನ್ನು ನುಂಗಿದ್ದಳು. ಆ ನೋವಿನ ಹಿನ್ನೆಲೆಯಲ್ಲಿ ರಚಿತವಾಗಿರುವ ಸಂಭಾಷಣೆ ನನ್ನ ಕಾಡಿತು ನಾಟಕದ ಕೊನೆಯ ದೃಶ್ಯ ಓದುವಾಗ ಮೊದ ಮೊದಲು ಯಶೋಧರೆಯ ಅಂತರಂಗದ ನೋವು ಹೊರಬಂದರೆ ಕ್ರಮೇಣ ಬುದ್ದನ ಅನುಯಾಯಿಯಾಗಿ ಅವನ ಸಂದೇಶಗಳನ್ನು ಸಾರುವ ಕಾರ್ಯ ಮಾಡುವೆ ಎಂಬ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸಮಾಜದ ಒಳಿತಿಗಾಗಿ ತನ್ನ ಸುಖ ತ್ಯಾಗ ಮಾಡುವುದರಲ್ಲಿಯೂ ಸುಖವಿದೆ ಎಂದು ತೋರಿಸಿದಳು.

ಈ ಪುಸ್ತಕದ ಬಗ್ಗೆ ನನಗೆ ಮೆಚ್ಚುಗೆಯಾದ ಮತ್ತೊಂದು ಸಂಗತಿ ಸುಂದರ ಮುಖಪುಟ ಮತ್ತು ಒಳಪುಟ ವಿನ್ಯಾಸ.

ಆತ್ಮೀಯರಾದ  ನಾಗರಾಜ ಜಿ ನಾಗಸಂದ್ರ  ಅವರ ಲೇಖನಿಯಿಂದ ಇನ್ನೂ ಉತ್ತಮವಾದ ಕೃತಿಗಳು ಬರಲಿ ಅವುಗಳ ಓದುವ ಸೌಭಾಗ್ಯ ನಮ್ಮದಾಗಲಿ ಎಂದು ಹಾರೈಸುತ್ತೇನೆ

ನಾಟಕ:  ಕುರು ಸಾರ್ವಭೌಮ ಮತ್ತು ಯಶೋಧರ

ಲೇಖಕರು : ನಾಗರಾಜ ಜಿ ನಾಗಸಂದ್ರ

ಪ್ರಕಾಶನ: ಬಾಣಗೆರೆ ಪ್ರಕಾಶನ

ಬೆಲೆ: 110₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

ಸಾಂಸ್ಕೃತಿಕ ಪರಂಪರೆ


 


ಸಾಂಸ್ಕೃತಿಕ ಪರಂಪರೆ 


ನಮ್ಮ ಪೂರ್ವಿಕರು ನಮಗಾಗಿ

ಬಿಟ್ಟು ಹೋಗಿರುವರು ಸಿರಿವಂತ

ಸಾಂಸ್ಕೃತಿಕ ಪರಂಪರೆ|

ಕಟ್ಟಲಾಗದಿದ್ದರೂ ಕೆಡವಿ 

ನಾಶಮಾಡದಿರೋಣ ಅವರು

 ಕಟ್ಟಿಸಿದ ದೇವಾಲಯ,ಸ್ಮಾರಕ ,ಕೆರೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ನಿರೀಕ್ಷೆಗಳು.ಹನಿಗವನ


 ನಿರೀಕ್ಷೆಗಳಿರಲೇಬೇಕು 

ಪ್ರತಿಯೊಬ್ಬರ ಜೀವನದಲ್ಲಿ|

ಮರಗಳಿದ್ದರೇ ಚೆನ್ನ ಅಲ್ಲವೇ

ಸುಂದರ ವನದಲ್ಲಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ. "ನಮ್ಮ ಉಡುಪುಗಳು ಹೇಗಿರಬೇಕು"*೨೧/೧೨/೨೧


 

20 December 2021

ನಮ್ಮ ಉಡುಪುಗಳು ಹೇಗಿರಬೇಕು.


 ನಮ್ಮ ಉಡುಪು ಹೇಗಿರಬೇಕು


ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಎಲ್ಲೆಡೆ ಹರಿದಾಡಿತು. 

ಮಗಳು ತಂದೆಯನ್ನು ಕೇಳಿ ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿಸಬೇಕು ಹಣ ಕೊಡಪ್ಪ ಎಂದು ಕೇಳುತ್ತಾಳೆ. ಅದಕ್ಕೆ ಅಪ್ಪ ಸಾವಿರಾರು ರೂ ಬೆಲೆ ಬಾಳುವ ಮೊಬೈಲ್ ಗೆ ಮತ್ತೊಂದು ಗಾರ್ಡ್ ಯಾಕೆ ಎಂದು ಅಪ್ಪ ಕೇಳುತ್ತಾನೆ. ಸುರಕ್ಷಿತವಾಗಿ ಇರಲಿ ಎಂದು ಮಗಳು ಉತ್ತರ ಕೊಡುತ್ತಾಳೆ. ಸಾವಿರಾರು ಬೆಲೆ ಬಾಳುವ ಮೊಬೈಲ್ ಸುರಕ್ಷಿತವಾಗಿರುವ ಮತ್ತೊಂದು ಸ್ಕ್ರೀನ್ ಗಾರ್ಡ್ ಹಾಕುವ ನೀನು ಬೆಲೆಕಟ್ಟಲಾಗದ ನಿನ್ನ ದೇಹ ಮುಚ್ಚುವ ಸಭ್ಯ ಬಟ್ಟೆಗಳನ್ನು ಯಾಕೆ ಧರಿಸಲ್ಲ? ಎಂದು ಮಾರ್ಮಿಕಾವಾಗಿ ಪ್ರಶ್ನೆ ಮಾಡುತ್ತಾರೆ.

ಇದರ ಬಗ್ಗೆ ಪರ ವಿರೋಧ ಚರ್ಚೆ ನಡೆದರೂ ಸಭ್ಯ ಬಟ್ಟೆಗಳನ್ನು ಧರಿಸಬೇಕು ಎಂಬ ಮಾತನ್ನು ಎಲ್ಲರೂ ಒಪ್ಪುತ್ತಾರೆ.


 'ಅಬ್ಬಾ ! ಶಾಲೆ ಮುಗಿಯಿತು, ಇನ್ನು ಸಮವಸ್ತಗಳ ಕಾಟವಿಲ್ಲ: ಗಮಗಿಷ್ಟ ಬಂದ ಉಡುಗೆ ತೊಡುಗೆಗಳನ್ನು ಧರಿಸಿಕೊಳ್ಳಬಹುದು' ಎಂದು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳೂ ಸಹ ನಿರಾಳವಾಗಿ ಉಸಿರಾಡುತ್ತಿದ್ದರು. ಕಾಲೇಜಿನ ಮೆಟ್ಟಿಲನ್ನು ಹತ್ತುತ್ತಲೇ ತಾನು ಸರ್ವಸ್ವತಂತ್ರರಾಗಲು ಇದು ಮೊದಲ ಹೆಜ್ಜೆ ಎಂದುಕೊಳ್ಳಬಹುದು. ಆದರೀಗ 'ಡ್ರೆಸ್ ಕೋಡ್' ಎಂಬ ನಿಯಮ ಜಾರಿಗೆ ತರುವುದೇಕೆ ಎಂದು  ಆದರ ಪರ ವಿರೋಧಿ ಅಲೆಗಳೂ ಏಳುತ್ತಿವೆ. ಇದು ಹೆಣ್ಣು ಮಕ್ಕಳ ಮೇಲೆ ವಿಶೇಷವಾಗಿ ಹೇರಲ್ಪಡುತ್ತಿರುವ ನಿಯಮ

ಹದಿಹರೆಯದ ಹುಡುಗಿಯರು ಮೈ ಮುಚ್ಚುವಂಥ ಬಟ್ಟೆ ಧರಿಸಬೇಕು  ಗೌರವಗಳನ್ನು ಮೂಡಿಸುವಂಥ ಉಡುಪನ್ನು ಧರಿಸಬೇಕು, ಪ್ರಚೋದಕ ಉಡುಪುಗಳು ಧರಿಸಬಾರದು ಎಂಬುದು ಅನುಭವಸ್ಥರ ಮತ್ತು ಹಿರಿಯರ ವಾದ .ಈ ಮಾತಿನಲ್ಲಿ ಇರುವ ಕಾಳಜಿ ದೂರದೃಷ್ಟಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.


ಇಂದಿನ ಯುವಕರೂ  ಚಿತ್ರವಿಚಿತ್ರವಾದ ವಿನ್ಯಾಸ ಹೊಂದಿದ ಹೇರ್ ಸ್ಟೈಲ್ ಮಾಡಿಕೊಂಡು ಯಾವುದೋ ನಟನ ಅಥವಾ ಕ್ರಿಕೆಟರ್ ನ ಅನುಕರಣೆ ಮಾಡುವರು ಇದು ತಪ್ಪು ಎಂದು ಹೇಳದಿದ್ದರೂ ಅವು ಸಭ್ಯತೆ ಮೀರದಿದ್ದರೆ ಚೆನ್ನ .ಇದು ಅವರು ಧರಿಸುವ ಉಡುಪಿಗೂ ಅನ್ವಯಿಸುತ್ತದೆ.

ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುವವರೂ ಇದ್ದಾರೆ. ನಮ್ಮ ಹಣ ನಮ್ಮ ಜೀವನ, ನಮ ಸ್ಟೈಲ್ ಬೇರೆಯವರು ನಮ್ಮ ಉಡುಗೆ ತೊಡುಗೆಗಳನ್ನು ನಿರ್ಧಾರ ಮಾಡುವುದು ಬೇಡ ಎಂಬ ಮಾತುಗಳನ್ನು ಸಹ ಆಡುತ್ತಾರೆ.


 ಎರಡೂ ಕಡೆಯವರ ವಾದಗಳಲ್ಲೂ ಸತ್ಯವಿದೆ. ಹರೆಯ ಎಂಬುದು ಭೋರ್ಗರೆಯುವ ಪ್ರವಾಹವಿದ್ದಂತೆ. ಅದಕ್ಕೆ ಸರಿಯಾದ ಸ್ಥಳದಲ್ಲಿ ಅಣೆಕಟ್ಟು ಕಟ್ಟಿ ಉಪಯುಕ್ತವಾಗಿ ಬಳಸಿಕೊಳ್ಳಬೇಕು. ಹಾಗಂತ ಹೆಜ್ಜೆ ಹೆಜ್ಜೆಗೂ ತಡೆಗೋಡೆಗಳನ್ನು ಎಬ್ಬಿಸಬಾರದು. ಆದರೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ನೀವೊಮ್ಮೆ ವಿಶ್ಲೇಷಣಾತ್ಮಕವಾಗಿ ಆಲೋಚಿಸಿ. ನಿಮ್ಮ ನಿರ್ಧಾರಗಳು ಪೂರ್ತಿಯಾಗಿ ಇತರರ ಅಭಿಪ್ರಾಯಗಳ ಮೇಲೆ ಆಧರಿತವಾಗಿರಬಾರದು.


ಇವತ್ತು ನೀವು ಕೊಳಕಾದ, ಪೂರ್ತಿ ಮೈ ಮುಚ್ಚದಂಥ ಒಂದು ಉಡುಪನ್ನು ಧರಿಸಿದ್ದೀರಿ. ಕೂದಲನ್ನು ಬಾಚಿಕೊಂಡಿಲ್ಲ. ಈ ಅವಸ್ಥೆಯಲ್ಲಿ ನೀವು ಹೊರಬಂದಲ್ಲಿ ಆದೆಷ್ಟು ವಿಧವಾದ ನೋಟಗಳು ಮಾತುಗಳು ನಿಮ್ಮನ್ನು ಇರಿಯುತ್ತವೆ. ನಿಮ್ಮ ಮನಸ್ಸು ಕೂಡಾ ಧರಿಸಿದ ಉಡುಪಿನ ಪ್ರಭಾವದಿಂದ ನಿರುತ್ಸಾಹದಿಂದ ಮಂಕಾಗಿರುತ್ತದೆ. ಶುಭ್ರವಾಗಿ ಸ್ನಾನ ಮಾಡಿ, ಚೆನ್ನಾಗಿ ಐರನ್  ಮಾಡಿದ ಉಡುಪು ಧರಿಸಿ ಹೊರಬನ್ನಿ, ಆಗಲೂ ಅನ್ನುವವರು ಸುಮ್ಮನೆ ಇರಲಾರರು. ಆದರೆ ನಿಮ್ಮ ಚಿತ್ತಸ್ವಾಸ್ಥ್ಯ, ಆತ್ಮವಿಶ್ವಾಸಗಳನ್ನು ಯಾರೂ ಕದಲಿಸಲಾರರು.


"ಊಟ ತನ್ನಿಚ್ಚೆ.ನೋಟ ಪರರಿಚ್ಚೆ"  ಎಂಬ ಗಾದೆ ಕೇಳಿಯೇ ಇದ್ದೀರಿ. ನಿಮ್ಮ ಆಲಂಕಾರ, ಉಡುಗೆ-ತೊಡುಗೆಗಳು ನಿಮ್ಮ ವೈಯಕ್ತಿಕ ವಿಚಾರಕ್ಕೆ ಒಳಪಡುವಂಥವು. ಅದನ್ನು ದುರುಪಯೋಗ ಪಡಿಸಿಕೊಂಡಲ್ಲಿ ನಿಮ್ಮನ್ನು ಇತರರು ದುರುಪಯೋಗಪಡಿಸಿಕೊಳ್ಳುವರು.  ಚೆಲ್ಲುಚೆಲ್ಲಾದ ವರ್ತನೆಗಳು, ಅತಿಯಾದ ಮೇಕಪ್, ವಿಚಿತ್ರ ಕೇಶವಿನ್ಯಾಸಗಳು ನಿಮ್ಮ ಬಗ್ಗೆ ನಿಮ್ಮಲ್ಲೇ ಅನುಚಿತ ಆಕಾಂಕ್ಷೆಗಳನ್ನು ಮೂಡಿಸಬಲ್ಲವು.  ನೀವೇನಾದರೂ ಬಡತನದಲ್ಲಿ ಇದ್ದರೆ  ನಿಮ್ಮ ಉಡುಪು ದುಬಾರಿ ಬೆಲೆಯದ್ದಲ್ಲ. ಹರಿದು ಹೊಲೆದಿರುವಂಥದ್ದು ಎಂಬ ಕೀಳರಿಮೆ ಕಿಂಚಿತ್ತೂ ಬೇಡ. ನಿಮ್ಮ ಪಾಲಕರ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿರಿ. ನಿಮ್ಮನ್ನು ಯಾರಾದರೂ ಹೀಯಾಳಿಸಿದಲ್ಲಿ ಮುಖ ಮುರಿಯುವ ಜವಾಬನ್ನು ಕೊಡಿ. ಇಲ್ಲವೇ ನಿರ್ಲಕ್ಷಿಸಿ.


 ಹತ್ತು ಜನರ ನಡುವೆ ಬಾಹ್ಯ ಸೌಂದರ್ಯದಿಂದ, ಉಡುಪು, ಒಡವೆಗಳಿಂದ ಎದ್ದು ಕಾಣುವ ಭ್ರಮೆ ಬೇಡ. ಹುಲಿಗಳ ಹಿಂಡಿನಲ್ಲಿ ಜಿಂಕೆ ಎದ್ದು ಕಾಣಬಹುದು. ಸುರಕ್ಷಿತವಾಗಿರುವುದಿಲ್ಲ ಎಂಬುದು ನಿಮ್ಮ ನೆನಪಿನಲ್ಲಿ ಇರಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


 

19 December 2021

ಪ್ರಜಾ ಪ್ರಗತಿ. ೧೯/೧೨/೨೧


 

ಮೌನ .


 



ಮಾತು ಮತ್ತು ಮೌನ 


ಮೌನಂ ಕಲಹಂ ನಾಸ್ತಿ ಎಂಬಂತೆ ಮೌನವಾಗಿರುವ ಸಂಧರ್ಭದಲ್ಲಿ ಮೌನವಾಗಿದ್ದರೆ ಅನಗತ್ಯ ಕಲಹಗಳು ನಿಲ್ಲುತ್ತವೆ. ಈ ಹಿನ್ನೆಲೆಯಲ್ಲಿ ಬುದ್ದಿವಂತರು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿರಬಹುದು .


ಬುದ್ದಿವಂತಿಕೆಯನ್ನು ಮಾತಿನ ಆಧಾರದ ಮೇಲೆ ಅಳೆಯಲಾಗದಿದ್ರೂ ಮಾತಿನ ರೀತಿಯಲ್ಲಿ  ಅವರ ಬುದ್ದಿವಂತಿಕೆಯನ್ನು ಸ್ವಲ್ಪ ಮಟ್ಟಿಗೆ ತಿಳಿಯಬಹುದು.


ಮಾತು ಬೆಳ್ಳಿ ಮೌನ ಬಂಗಾರ ಎಂಬಂತೆ ಕೆಲವೊಮ್ಮೆ ನಾವು ಮಾತಿಗಿಂತ ಮೌನ ಲೇಸು ಎಂದು ಸುಮ್ಮನೆ ಇರುವುದು  ಉಚಿತವಾಗಿ ಕಂಡುಬರುತ್ತದೆ. 


ಮೂರ್ಖಂಗೆ ಬುದ್ದಿಯ ನೂರ್ಕಾಲ.. ಹೇಳಿದರೂ ಅವರ ನಡವಳಿಕೆಗಳನ್ನು ಬದಲಾವಣೆ ಮಾಡಿಕೊಳ್ಳದಿದ್ದರೆ ಅಂತಹ ಸಂಧರ್ಭದಲ್ಲಿ ಬುದ್ದಿವಂತರಾದವರು ಮೌನವಾಗಿರಬೇಕು ಇಲ್ಲ ಕಡಿಮೆ ಮಾತನಾಡುವುದು ಉಚಿತ.


ಹಾಗೆಂದು ಕಡಿಮೆ ಮಾತನಾಡುವ ಬುದ್ದಿವಂತರು ಎಲ್ಲಾ ಕಡೆ ಕಡಿಮೆ ಮಾತನಾಡುವುದಿಲ್ಲ ಕೆಲವೆಡೆ ಜೋರು ಗಂಟಲಿನಲ್ಲಿ ಮಾತನಾಡುವ ಪುರುಷ ಸಿಂಹಗಳು ಮನೆಯಲ್ಲಿ ಮೌನಕ್ಕೆ ಜಾರುವುದು ಉಂಟು ಅದಕ್ಕೆ ಕಾರಣ ನಿಮಗೂ ತಿಳಿದಿದೆ.


ಬೀದಿಯಲ್ಲಿ ಯಾರಾದರೂ

ಏನಾದರೂ ಅಂದರೆ ಕಾಲು

ಕೆರೆದುಕೊಂಡು ಜಗಳವಾಡುತ್ತಾ

ಕನಿಷ್ಟಪಕ್ಷ ಬೈದೇ ಬೈಯುವನು

ನಿಮ್ಮೌನ |

ಹೊಸಿಲು ದಾಟಿ ಮನೆಯ

ಒಳಗೆ ಬಂದಾಗ ಮಡದಿಯು

ಕೊಟ್ಟ ಟೀ ಕುಡಿದ ನಂತರ

ಬರೀ ಮೌನ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

17 December 2021

ಶಿಲ್ಪಿ .ಹನಿ


 


ನೀನೇ ಶಿಲ್ಪಿ


ಸಾಧಿಸುವ ಮನಸ್ಸು

ಇದ್ದರೂ ಎಲ್ಲೆಲ್ಲೋ

ಓಡುವುದು ಮನವೆಂಬ ಕಪಿ|

ಮನಸು ಮಾಡಿ 

ಮುಂದಡಿ ಇಡು 

ಜಯ ನಿನ್ನದೇ 

ಏಕೆಂದರೆ ನಿನ್ನೇಳ್ಗೆಗೆ ನೀನೇ ಶಿಲ್ಪಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಉದ್ಯೋಗ ಮತ್ತು ಕುಟುಂಬ ಜೀವನದ ನಡುವಿನ ಸಮತೋಲನ .ಲೇಖನ

 


ಉದ್ಯೋಗ ಸಂಸಾರ ಸಮತೋಲನ ಬೇಕು.


"ಉದ್ಯೋಗಂ ಮಾನವ ಲಕ್ಷಣಂ "ಜೀವನಕ್ಕೆ ಒಂದು ವೃತ್ತಿ ಮಾಡಲೇಬೇಕು .ಯಾವುದೇ ಕಾರ್ಯವಿರಲಿ ಅದನ್ನು ಇಷ್ಟ ಪಟ್ಟು ಮಾಡಬೇಕು .  ಕಾಯಕವೇ ಕೈಲಾಸ ಎಂಬ ತತ್ವ ಪಾಲಿಸಿ ಕೆಲಸ ಮಾಡಬೇಕು  ಅದೇ ಸಂಧರ್ಭದಲ್ಲಿ ನಮ್ಮ ಕುಟುಂಬಕ್ಕೂ ನಮ್ಮ ಸಮಯ ಮೀಸಲಿಡಲೇಬೇಕು. ವೃತ್ತಿ ಮತ್ತು ಕುಟುಂಬದ ನಡುವೆ ನಾವು ಸಮತೋಲನವನ್ನು ಕಾಪಾಡಿಕೊಳ್ಳಲೇ ಬೇಕು. ಏಕೆಂದರೆ ಈ ಎರಡರಲ್ಲಿ ಯಾವುದೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ. ಎರಡು ಕಣ್ಣುಗಳಲ್ಲಿ ಯಾವುದು ಹೆಚ್ಚು ಎಂದು ಕೇಳಿದರೆ ಹೇಗೆ.


ಜಾಣ್ಮೆಯಿಂದ ನಾವು ವೃತ್ತಿ ಮತ್ತು ಸಂಸಾರ ವನ್ನು ನಿಭಾಯಿಸಬೇಕು .


ಕೆಲವೊಮ್ಮೆ ನಾವು ಅತಿಯಾದ ಆಸೆಯಿಂದ ನಮ್ಮ ಕುಟುಂಬ ನಿರ್ವಹಣೆ ಮಾಡಲು ಮತ್ತು ಜೀವನಮಟ್ಟ ಸುಧಾರಿಸಲು ಓಟಿ ಮಾಡುತ್ತಾ ಕಾಯಕದಲ್ಲಿ ಮುಳುಗಿದರೆ ನಮ್ಮ ಕುಟುಂಬಕ್ಕೆ ಕ್ವಾಲಿಟಿ ಟೈಮ್ ಕೊಡಲು ಅಸಾಧ್ಯ.


ಶ್ರದ್ಧೆಯಿಂದ ಕೆಲಸ ಮಾಡಿದರೆ

ನಿಜವಾಗಿಯೂ ದೈವವೇ

ನಾವು ಮಾಡುವ ಕಾಯಕ|

ಕಾಯಕವೇ ಅತಿಯಾಗಿ 

ದಿನವೂ ಮನೆಗೆ ಲೇಟಾಗಿ

ಬಂದರೆ ಮಡದಿ ಬೈಯ್ಯಬಹುದು

ಆಗೋದಿಲ್ಲ ನನಗೆ ಕಾಯಾಕ ||


ಕೆಲವು ಮೆಟ್ರೋ ನಗರಗಳಲ್ಲಿ ತಂದೆಯು  ಮಕ್ಕಳು ನಿದ್ರೆಯಿಂದ ಏಳುವ ಮೊದಲೇ ತಮ್ಮ ಕೆಲಸಕ್ಕೆ ತೆರಳಿದರೆ ಅವರು ಮನೆಗೆ ಬರುವಾಗ ತಡರಾತ್ರಿ ಮಕ್ಕಳು ನಿದ್ರೆಗೆ ಜಾರಿರುತ್ತಾರೆ. ಇದು ಕುಟುಂಬದ ಪ್ರೀತಿ ಮತ್ತು ಸಾಮರಸ್ಯಕ್ಕೆ ಪ್ರತಿಕೂಲವಾದ ಪರಿಣಾಮ ಉಂಟಾಗಬಹುದು. ಇತ್ತೀಚಿನ ದಿನಗಳಲ್ಲಿ ಸಿಂಗಲ್ ಪೇರೆಂಟಿಂಗ್ ಮದರ್  ಸಹ ಒಂದು ಟ್ರೆಂಡ್ ಆಗಿದೆ .ಜೀವನಕ್ಕಾಗಿ ತಾಯಿಯು ಕೆಲಸಕ್ಕೆ ಹೋಗಿ ಮನೆಗೆ ಬರುವುದು ತಡವಾದರೆ ಮಕ್ಕಳು ಒಂಟಿಯಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ .ಕೆಲವೊಮ್ಮೆ ಇಂತಹ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿ ಕ್ರಮೇಣವಾಗಿ ಸೈಬರ್ ಅಪರಾದ ಪ್ರಕರಣಗಳಲ್ಲಿ ಬಲಿ ಪಶುವಾದ ಉದಾಹರಣೆಗಳೂ ಇವೆ.


ಸಮತೋಲನ ಕಾಯ್ದುಕೊಳ್ಳಬೇಕು

ವೃತ್ತಿ ಮತ್ತು ಕುಟುಂಬದ ನಡುವೆ

ಅವು ಒಂದೇ ನಾಣ್ಯದ ಎರಡು ಮುಖಗಳು|

ಸ್ವಲ್ಪ ಯಾವುದಾದರೂ ಹೆಚ್ಚು ಕಡಿಮೆ

ಆದರೆ ಉತ್ತರ ದಕ್ಷಿಣಕ್ಕೆ ತಿರುಗಬಹುದು

ನಮ್ಮ ಮುಖಗಳು||


ಆದ್ದರಿಂದ ನಮಗೆ ಗೌರವಯುತವಾಗಿ  ಜೀವಿಸಲು ಒಂದು ಉದ್ಯೋಗ ಅಗತ್ಯ .ಅದೇ ಜೀವನವಾಗಿ   ಅದು ನಮ್ಮ ಸಂಸಾರದ ಮೇಲೆ ದುಷ್ಪರಿಣಾಮ ಬೀರಬಾರದು.


ಕೆಲವರು ವರ್ಕೋಹಾಲಿಕ್

ಅವರು ಕೆಲಸ ಮಾಡಲು 

ಶುರುಮಾಡಿದರೆ ಪರಿವೇ ಇರೊಲ್ಲ

ಗಂಟೆ, ದಿನ ,ವಾರ|

ಇಂಥವರು ಮನೆ ಸೇರದಿದ್ದಾಗ

ಅವರ ಮಕ್ಕಳು ಹೆಂಡತಿ 

ಖಾರವಾಗಿ ಕೇಳಬಹುದು ಯಾಕ್ರೀ

ಬೇಕು ನಿಮಗೆ ಸಂಸಾರ??




ಸಿಹಿಜೀವಿ

ಸಿ ಜಿ ವೆಂಕಟೇಶ್ವರ

16 December 2021

ಗರ್ಲ್ ಪ್ರೆಂಡ್ ಮತ್ತು ಹೆಂಡತಿ


ಗರ್ಲ್ ಪ್ರೆಂಡ್ ಮತ್ತು ಹೆಂಡತಿ
ಹನಿಗವನ

ಗರ್ಲ್ ಪ್ರೆಂಡ್ ಜೊತೆಗೆ
ಅವನು ಸುತ್ತುವಾಗ ಅವಳದೇ
ಹೆಚ್ಚು ಮಾತು ಇವನು ಕೇಳುಗ
ಮದುವೆಯಾದ ಈಗ ಮೂಕ|
ಕ್ರಮೇಣವಾಗಿ ಅವನಿಗೆ
ಅನುಭವದಿಂದ ಅರಿವಾಯಿತು
ಗರ್ಲ್ ಪ್ರೆಂಡ್ ಮತ್ತು ಹೆಂಡತಿ
ಒಂದೇ ನಾಣ್ಯದ ಎರಡು ಮುಖ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


 

ಸ್ತಿತಪ್ರಜ್ಞರಾಗೋಣ.ಲೇಖನ


 


ನಾವು ಸಾಮಾನ್ಯ ಮಾನವರು ನಾವು ಭಾವನಾ ಜೀವಿಗಳು ಅಂತೆಯೇ ನೋವು ನಲಿವು ನಮ್ಮ ಜೀವನದಲ್ಲಿ ನಾವು ಅನುಭವಿಸುತ್ತಲೇ ಇರುವೆವು .ಜೀವನದಿ ಬೇವು ಬೆಲ್ಲ ಎರಡೂ ಉಂಟು ಆದರೆ ನಾವು ಬಹುತೇಕರು ಬೆಲ್ಲವ ಮಾತ್ರ ಸವಿದು ಬೇವು ಬೇಡವೇ ಬೇಡ ಎಂಬ ಮನಸ್ಥಿತಿಯನ್ನು ಹೊಂದಿದ್ದೇವೆ.ಇದರ ಮುಂದುವರಿದ ಭಾಗವಾಗಿ ನಮಗೇನಾದರೂ ಕಷ್ಟಗಳು ಎದುರಾದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ.ಇನ್ನೂ ಇದೇ ಸ್ಥಿತಿ ಮುಂದುವರೆದರೆ ಖಿನ್ನತೆಗೆ ಜಾರುವ ಸಾದ್ಯತೆಯೂ ಇದೆ .


ಇಂತಹ ಸಮಯದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಕುರಿತು ಚಿಂತಿಸದೇ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ. ಈ ಸಂಧರ್ಭದಲ್ಲಿ ನಮ್ಮ ಹಿರಿಯರು ಚಿಂತಕರು ಹೇಳಿದ ಪ್ರೇರಣೆಯ ಮಾತುಗಳನ್ನು ನೆನದು ಮುಂದೆ ಸಾಗೋಣ. ನಕಾರಾತ್ಮಕವಾಗಿ ಯೋಚಿಸದೇ ಸಕಾರಾತ್ಮಕವಾಗಿ ಯೋಚಿಸುವ ಗುಣಗಳನ್ನು ಬೆಳೆಸಿಕೊಳ್ಳೋಣ.‌ಸೂರ್ಯ ಚಂದ್ರರಿಗೂ ಗ್ರಹಣ ಹಿಡಿಯುವುದು ಆದರೆ ಅದು ಕ್ಷಣಿಕ ಮೋಡಗಳು ಹೆಚ್ಚು ಕಾಲ ಸೂರ್ಯನ ಮುಚ್ಚಲು ಸಾದ್ಯವಿಲ್ಲ. ಅಂತೆಯೇ ನಮಗೊದಗಿದ ತೊಂದರೆಗಳು, ಸಮಸ್ಯೆಗಳೂ ಕೂಡಾ ನಮ್ಮ ಪ್ರಯತ್ನ ಮತ್ತು ಭಗವಂತನ ಕೃಪೆಯಿಂದ ಖಂಡಿತವಾಗಿಯೂ ಬಗೆಹರಿಯುತ್ತವೆ. ರಾತ್ರಿ ಕಳೆದ ಮೇಲೆ ಹಗಲು ಬಂದೇ ಬರುವುದು .ಆದ್ದರಿಂದ ಕಷ್ಟಗಳನ್ನು ದಿಟ್ಟವಾಗಿ ಎದುರಿಸೋಣ . ನೋವು ನಲಿವು. ಕಷ್ಟ ಸುಖಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು ಅವುಗಳನ್ನು ಸ್ತಿತಪ್ರಜ್ಞರಂತೆ ಸ್ವೀಕರಿಸೋಣ.


ಇದಕ್ಕೆ ಪೂರಕವಾಗಿ ನನ್ನ ಒಂದು ಗಜಲ್ ನಿಮಗಾಗಿ


ಗಜಲ್ 


ಕುಟ್ಟಿ ಪುಡಿಮಾಡು ಕಷ್ಟಗಳೆಂಬ ಹೆಬ್ಬಂಡೆಗಳ ಗೆಲ್ಲುವೆ  ನೀನು

ಬಿದ್ದವನೆಂದು ಕೊರಗದಿರು ಮುಂದೆ  ಎದ್ದೇಳುವೆ ನೀನು 


ಅವಮಾನ ಅಪಮಾನಗಳೆ  ಸಾಧನೆಗಳ ಮೆಟ್ಟಿಲು 

ದಾರಿಯಿಲ್ಲವೆಂದು ಮರುಗದಿರು ದೊರೆಯಾಗುವೆ  ನೀನು


ಸಂತೆಯಲಿ ನಿಂತು ಸದ್ದಿಗಂಜತ ಕಳವಳಪಡಬೇಡ 

ಸಂತನಾಗಲು ಸಹಿಸುವುದ ಕಲಿ ಯೋಗಿಯಾಗುವೆ ನೀನು


ಕಳೆದು ಕೊಳ್ಳಲು ನೀನೇನು ತಂದಿಲ್ಲ ಇಲ್ಲಿ 

ಕಳೆದಲ್ಲೇ ಹುಡುಕು  ಮುಕ್ತಿ ಹೊಂದುವೆ ನೀನು 


ಮುಳ್ಳುಗಳು ನಡುವೆಯೂ ನಗುವುದು ಗುಲಾಬಿ 

ಕಷ್ಟದಲೂ ನಗುವುದ ಕಲಿ ಸಿಹಿಜೀವಿಯಾಗುವೆ ನೀನು 





ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

14 December 2021

ವಿದ್ಯಾರ್ಥಿಗಳಿಗಾಗಿ...


 




ವಿದ್ಯಾರ್ಥಿಗಳಿಗಾಗಿ .


ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು ,ವಿದ್ಯೆಯಿಲ್ಲದವನ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ ಎಂಬಂತೆ ಮಾನವರಿಗೆ ವಿದ್ಯೆಯೇ ಆಭರಣ ಮತ್ತು ಭೂಷಣ ಇಂತಹ ಮಹತ್ವದ ವಿದ್ಯೆ ಕಲಿಯುವ ಅಪೇಕ್ಷೆಯಿಂದ ಶ್ರಮಿಸುವವರೇ ವಿದ್ಯಾರ್ಥಿಗಳು, ವಿದ್ಯೆ ಜ್ಞಾನ ಸಂಪಾದನೆಗೆ ಎಂಬ ಕಾಲ ಮುಗಿದಿದೆ. 'ಅರ್ಥಕ್ಕಾಗಿಯೇ ವಿದ್ಯೆ ಎಂಬುದು ಇಂದಿನ ನಿಯಮವಾಗಿದೆ. ಏನೇ ಆದರೂ ವಿದ್ಯೆ, ಯುವಕ-ಯುವತಿಯರಿಗೆ ಹೊಸ ವಿಷಯಗಳನ್ನು, ಉತ್ತಮ ಸಂಸ್ಕಾರವನ್ನು ಕಲಿಸಿ ಅವರ ವ್ಯಕ್ತಿತ್ವವನ್ನು ವಿಕಸನ ಮಾಡುವುದರಲ್ಲಿ  ಸಂಶಯವಿಲ್ಲ.

ಹಾಗೆ ನೋಡಿದರೆ ಎಲ್ಲರೂ ವಿದ್ಯಾರ್ಥಿಗಳೆ ಎಕೆಂದರೆ ಕಲಿಕೆಯು ಗರ್ಭದಿಂದ ಗೋರಿಯವರೆಗೆ ನಡೆದೇ ಇರುತ್ತದೆ.


ಹಿಂದಿಗಿಂತ ಇಂದು ವಿದ್ಯೆ ಕಲಿಯಲು ಮತ್ತು ಕಲಿಸಲು ಅಪಾರವಾದ ಅವಕಾಶಗಳಿವೆ .

ಸಾರ್ವತ್ರಿಕ ಶಿಕ್ಷಣ ನೀಡುವ ಗುರಿಯೊಂದಿಗೆ   ಒಂದರಿಂದ ಹತ್ತನೆ ತರಗತಿಯವರೆಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಿಸಿಯೂಟ, ಸಮವಸ್ತ್ರಗಳು, ಬೈಸಿಕಲ್‌ಗಳನ್ನು ನೀಡಲಾಗುತ್ತಿದೆ. ಹೆಣ್ಣು ಮಕ್ಕಳು ಕಲಿಕೆಯಿಂದ ವಂಚಿತವಾಗದಂತೆ ಅವರ ಶಿಕ್ಷಣದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಲಾಗಿದೆ. ವಿಶೇಷ ಚೇತನರ ಶಿಕ್ಷಣಕ್ಕಾಗಿ ಸಮನ್ವಯ ಶಿಕ್ಷಣ ಜಾರಿಗೆ ಬಂದಿದೆ.


ಮಕ್ಕಳಲ್ಲಿ ಕಲಿಕೆಯು ಸಂತಸದಾಯಕವಾಗಬೇಕು 

 ಆಸಕ್ತಿದಾಯಕವೂ, ಆಗಿರಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಅವರ ಸರ್ವತೋಮುಖ ಬೆಳವಣಿಗೆಗಾಗಿ  ಓದು-ಬರಹಗಳಷ್ಟೇ ಅಲ್ಲ. ನೃತ್ಯ ಸಂಗೀತ, ಹೊಲಿಗೆ, ಪೇಂಟಿಂಗ್, ಕ್ರೀಡೆ ಇತ್ಯಾದಿಗಳಿಗೆ ಕೂಡಾ ಒತ್ತು ನೀಡಿ ಶಿಕ್ಷಣ ನೀಡಲಾಗುತ್ತಿದೆ.


ಇಷ್ಟೆಲ್ಲಾ ಸವಲತ್ತುಗಳನ್ನು ಮತ್ತು ಪ್ರೋತ್ಸಾಹ ಗಳನ್ನು ಸರ್ಕಾರ, ಪೋಷಕರು, ಸಮುದಾಯ, ಶಿಕ್ಷಕರು ನೀಡಿದರೂ  ಇಪ್ಪತ್ತೊಂದು ವರ್ಷಗಳಿಂದ ತರಗತಿಯ ಬೋಧನಾ ಅನುಭವದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ವರ್ತನೆಗಳನ್ನು ನೋಡಿದ ನನಗೆ ಅವರಲ್ಲಿ ಅನಪೇಕ್ಷಿತ ವರ್ತನೆಗಳೇ ಹೆಚ್ಚು ಕಂಡುಬರುತ್ತಿರುವುದು ನನ್ನ ಆತಂಕಕ್ಕೆ ಕಾರಣವಾಗಿದೆ.


ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಪ್ತವಾಗಿ ಮಾತನಾಡುತ್ತಾ ಸಮಾಲೋಚನೆ ಮಾಡುತ್ತಾ ಅವರಿಗೆ ತಿಳುವಳಿಕೆ ಹೇಳುವ ಪ್ರಯತ್ನವೇ "ವಿದ್ಯಾರ್ಥಿಗಳಿಗಾಗಿ "


ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಪ್ ಎಂಬಂತೆ ,ವಿದ್ಯಾರ್ಥಿ ಜೀವನದ ಸುವರ್ಣ ಯುಗದಲ್ಲಿ

ವಿದ್ಯಾರ್ಥಿಗಳು ಈ ಲೇಖನಗಳನ್ನು ಓದಿ ಕೊಂಚವಾದರೂ ಅವರ ವರ್ತನೆಗಳನ್ನು ಬದಲಾವಣೆ ಮಾಡಿಕೊಂಡು ನಿಜವಾದ ಜ್ಞಾನಾರ್ಥಿಗಳಾಗಿ ನಮ್ಮ ದೇಶದ ಭವ್ಯ ಭವಿಷ್ಯದ ಪ್ರಜೆಗಳಾದರೆ ನನ್ನ ಈ ಪ್ರಯತ್ನ ಸಾರ್ಥಕ .



ಹದಿನೆಂಟು ತಿಂಗಳ ಕೊರೊನಾಘಾತದ ನಂತರ ಶಾಲೆಗಳು ತೆರೆದು  ತರಗತಿಗಳು ಆರಂಭವಾದಾಗ ಎಂಟನೇ ತರಗತಿಯ ವಿದ್ಯಾರ್ಥಿಯನ್ನು ಶಾಲೆಗೆ ಬಿಡಲು ಅವರ ತಾಯಿ ಬಂದರು .ತರಗತಿಯ ಕೋಣೆಯೊಳಗೆ ಬಿಟ್ಟು ಅಮ್ಮ ಹಿಂತಿರುಗಿದ ಕ್ಷಣದಲ್ಲೇ ಅಳುತ್ತಾ ಆ ಬಾಲಕ ಓಡಿಹೋಗಿ ಅಮ್ಮನಿಗೆ ಹೇಳಿದ ಅಮ್ಮ ನಾನು ಶಾಲೆಗೆ ಹೋಗುವುದಿಲ್ಲ ಎಂದು .ಕೊನೆಗೆ ನಾವೆಲ್ಲಾ ಶಿಕ್ಷಕರು ಆ ಬಾಲಕನಿಗೆ ತಿಳುವಳಿಕೆ ನೀಡಿ ಬುದ್ದಿ ಹೇಳಿದೆವು. ಪರಿಣಾಮವಾಗಿ ಈಗ ಆ ಬಾಲಕ ಒಂದೂ ದಿನ ತಪ್ಪದೆ ಶಾಲೆಗೆ ಬರುತ್ತಿದ್ದಾನೆ .


ಆತ್ಮೀಯ ವಿದ್ಯಾರ್ಥಿಗಳೆ...




 ನೀವು ಶಾಲೆಗೆ ಬಂದಾಗ  ನಿಮ್ಮ ತಂದೆ ತಾಯಿಗಳಿಲ್ಲ. ಶಿಕ್ಷಕರಿದ್ದಾರೆ. ಒಡಹುಟ್ಟಿದವರಿಲ್ಲ, ಸಹಪಾಠಿಗಳಿದ್ದಾರೆ. ಶಿಕ್ಷಕರ ಬಗ್ಗೆ ಭಯದ ಬದಲಿಗೆ ಗೌರವವನ್ನು ಸಹಪಾಠಿಗಳೊಂದಿಗೆ ಪರಕೀಯ ಭಾವನೆಗೆ ಬದಲು ಸ್ನೇಹವನ್ನು ಬೆಳೆಸಿಕೊಳ್ಳುವುದು ನಿಮ್ಮಕರ್ತವ್ಯ . ಶಿಕ್ಷಕರಿಂದಾಗಲೀ, ಇತರ ಮಕ್ಕಳಿಂದಾಗಲೀ ನಿಮಗೆ ಪ್ರೀತಿ, ವಾತ್ಸಲ್ಯ ಮತ್ತುಸ್ನೇಹಗಳೇ ಸದಾ ದೊರಕವು.ಅದಕ್ಕೆ ಪೂರಕವಾಗಿ ನೀವೂ ಸಹ  ಸಹಪಾಠಿಗಳೊಂದಿಗೆ ಹೊಂದಿಕೊಳ್ಳಬೇಕು.


 ಎಷ್ಟು ಬಾರಿ ಹೇಳಿಕೊಟ್ಟರೂ ತಪ್ಪು ಮಾಡುತ್ತಲೇ ಇದ್ದರೆ  ಆರೋಗ್ಯವಾಗಿದ್ದರೂ ಶಾಲೆಗೆ ತಡವಾಗಿ ಬಂದಿರುತ್ತಿದ್ದರೆ ಕೊಟ್ಟ ಹೋಂವರ್ಕ್ ಮಾಡದಿದ್ದರೆ. ಆಗ ಶಿಕ್ಷಕರು ನಿಮ್ಮನ್ನು ಕಟುವಾಗಿ ನಿಂದಿಸಿದರೆ, ತರಗತಿಯ ಬಾಗಿಲಿನಲ್ಲೇ ನಿಲ್ಲಿಸಿದರೆ ಅವಮಾನಿಸಿದರೆಂದು ನೊಂದುಕೊಳ್ಳಬಾರದು, ಅವರನ್ನು ನಿನ್ನ ಶತ್ರು ಎಂದು ಭಾವಿಸಬಾರದು.ನೀವು ಚೆನ್ನಾಗಿ ಓದಿ ವಿದ್ಯಾವಂತರಾಗಿ ನಾಡಿನ ಹೆಮ್ಮೆಯ ಪ್ರಜೆಗಳಾದರೆ ನಿಮ್ಮ ಯಶಸ್ಸನ್ನು ಕಂಡು ಮೊದಲು ಸಂಭ್ರಮ ಪಡುವವರು ಶಿಕ್ಷಕರು .ಆದ್ದರಿಂದ ನಿಮ್ಮ ಶಿಕ್ಷಕರನ್ನು ಮೊದಲು ಗೌರವದಿಂದ ಕಾಣಿ. ಆಚಾರ್ಯ ದೇವೋಭವ ಎಂಬುದು ಸದಾ ನೆನಪಿರಲಿ.


ಕೆಲವು ವಿದ್ಯಾರ್ಥಿಗಳು ತರಗತಿಯ ಕೋಣೆಯಲ್ಲಿ ಶಿಕ್ಷಕರು ನಕ್ಷೆ ಬಿಡಿಸಲು ಹೇಳಿದಾಗ ರೇಖಾಗಣಿತದ ಸಮಸ್ಯೆಗಳನ್ನು ಬಿಡಿಸುವಾಗ ,ಚಿತ್ರ ಬರೆಯುವಾಗ ಪೆನ್ಸಿಲ್, ಜ್ಯಾಮಿಟ್ರಿ ಬಾಕ್ಸ್ ನ ಸಾಧನಗಳನ್ನು ಬೇರೆಯವರಿಂದ ಪಡೆಯುವರು .ಇದು ತರಗತಿಯಲ್ಲಿ ಗದ್ದಲಕ್ಕೆ ಕಾರಣವಾಗಬಹುದು. ಕೋವಿಡ್ ಕಾಲದಲ್ಲಿ ಹೀಗೆ ಬೇರೆಯವರ ವಸ್ತುಗಳನ್ನು ಪಡೆಯುವುದು ನಾವೇ ರೋಗಗಳನ್ನು ಅಹ್ವಾನಿಸಿದಂತೆ ಆದ್ದರಿಂದ

ವಿದ್ಯಾರ್ಥಿ ದೆಸೆಯಲ್ಲೇ ಸ್ವಾವಲಂಬನೆ ರೂಪಿಸಿಕೊಳ್ಳಿ. ಆ ದಿನಕ್ಕೆ ಅಗತ್ಯವಾದ ಮಸ್ತಕಗಳು, ಲೇಖನ ಸಾಮಗ್ರಿಗಳು  ಗಣಿತಕ್ಕೆ ಅಗತ್ಯವಾದ ಪರಿಕರಗಳು, ಅಗತ್ಯವಿದ್ದಲ್ಲಿ ಚಿತ್ರಪಟಗಳನ್ನು ತೆಗೆದುಕೊಂಡಿರುವಿರೇ ಎಂದು ಖಾತ್ರಿ ಪಡಿಸಿಕೊಳ್ಳಿ .ಹಿಂದಿನ ಸಾಯಂಕಾಲ ನಾಳೆಯ ವೇಳಾಪಟ್ಟಿಗೆ ಅನುಗುಣವಾದ ಪುಸ್ತಕಗಳನ್ನು ವಸ್ತುಗಳನ್ನು ಅಚ್ಚುಕಟ್ಟಾಗಿ ನೀವೇ ಜೋಡಿಸಿಕೊಂಡು ಶಾಲೆಗೆ ತೆರಳಿ.


ಇತ್ತೀಚಿಗೆ ಒಂದು ತರಗತಿಯಲ್ಲಿ ನಾನು ಪಾಠ ಮಾಡುವಾಗ "ಸರ್ ನಾನು ಇವನ ಪಕ್ಕ ಕುಳಿತುಕೊಳ್ಳುವುದಿಲ್ಲ" ಎಂದು ಒಬ್ಬ ವಿದ್ಯಾರ್ಥಿ ಹೇಳಿದ ಕಾರಣ ಕೇಳಲಾಗಿ "ಅವನು ವಾರದಿಂದ ಸ್ನಾನ ಮಾಡಿಲ್ಲ ವಾಸನೆ ಬರುತ್ತದೆ ಸರ್" ಅಂದ .ಕೂಲಂಕಷವಾಗಿ ವಿಚಾರಿಸಿ ಆ ವಿದ್ಯಾರ್ಥಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದೆ.

ವಿದ್ಯಾರ್ಥಿಗಳೇ...

ವ್ಯಕ್ತಿಗತ ಶುಚಿತ್ವಕ್ಕೆ ಗಮನಕೊಡಿ  ನಿತ್ಯವೂ ಶುಭ್ರವಾಗಿ ಸ್ನಾನ ಮಾಡಿ, ಒಗೆದ ಬಟ್ಟೆಗಳನ್ನು ಧರಿಸಿಕೊಳ್ಳಿ. ಮುಂಜಾನೆ ಮತ್ತು ರಾತ್ರಿ ಹಲ್ಲು ಬಾಯಿಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.ವೈಯಕ್ತಿಕ ಸ್ವಚ್ಚತೆಯ ಜೊತೆ ನಿಮ್ಮ ಪರಿಸರ, ಶಾಲೆ, ಮನೆಯ ಸುತ್ತ ಮತ್ತ ಸ್ವಚ್ಚತೆಗೆ ಮಹತ್ವ ನೀಡಿ .ಇದು ನಿಮ್ಮ ಆರೋಗ್ಯಕ್ಕೆ ಪೂರಕವಾಗಿರುವುದು.

 ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯವಾಗಿ ಮಾಡಿರುವುದರಿಂದ ಒಂದೆಡೆ ಕಲಿಯುವಾಗ  ಬಡವ-ಶ್ರೀಮಂತ, ಜಾತಿಯಲ್ಲಿ ಮೇಲು-ಕೀಳು ಭಾವನೆಗಳಿಗೆ ಅವಕಾಶವಿಲ್ಲ. ಸವವಸ್ತ್ರದ ಹಿಂದಿರುವ ಈ ಘನ ಉದ್ದೇಶವನ್ನು ಅರಿತುಕೊಳ್ಳಿ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529 





ರಾಣಿಯಾಗು .ಹನಿಗವನ


 


ರಾಣಿಯಾಗು 


ರನ್ನದುಪ್ಪರಿಗೆಯಲಿ

ಹೊನ್ನಿರಬಹುದು ನಲ್ಲೆ

ನನ್ನ ಹೃದಯದುಪ್ಪರಿಗೆಯಲಿ

ನನ್ನಿಯಿದೆ, ಒಲವಿದೆ ,ಛಲವಿದೆ

ನಿನ್ನನೇ ಪ್ರೀತಿಸುವ ಮನಸಿದೆ.

ಇನ್ನೇಕೆ ತಡ ಬಂದು ಬಿಡು

ನನ್ನೆದೆಯ ಸಿಂಹಾಸನದಿ ನೆಲೆಸು .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

13 December 2021

ಮೆರವಣಿಗೆ .ಹನಿಗವನ


 

ಮಳೆಗಾಲದ ಸಂಜೆ
ಕಾಫಿ ಕುಡಿಯುತ್ತಾ
ಪುಸ್ತಕ ಓದುತ್ತಾ ಕುಳಿತೆ
ಅವಳ ನೆನಪಾಯಿತು|

ಪ್ರತೀ ಪುಟದಲಿ


ಅವಳ ನೆನಪುಗಳ
ಮೆರವಣಿಗೆ ಶುರುವಾಯಿತು||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

06 December 2021

ಇದು ಕಲಿಯುಗ ,ಇನ್ನಾದರೂ ಕಲಿ


 


ಇದು ಕಲಿಯುಗ ,ಇನ್ನಾದರೂ ಕಲಿ.


ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ ಎರಡು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಣೆ ಮಾಡಿದ ವಿಷಯ ಬಹುವಾಗಿ ಚರ್ಚೆಗೆ ಗ್ರಾಸವಾಯಿತು. ಪರ ಮತ್ತು ವಿರೋಧಿಗಳು ತಮ್ಮದೆ ಆದ ವಾದ ಮಂಡಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಪರವಾಗಿರುವವರು ಇದು ಸಂವಿಧಾನದತ್ತವಾಗಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಂದು ವಾದಿಸುತ್ತಾರೆ.  ಇಂತಹ ಕಾರ್ಯಕ್ರಮಗಳನ್ನು ವಿರೋಧಿಸುವವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನವಶ್ಯಕವಾಗಿ ನಮ್ಮ ದೇಶ ಮತ್ತು ಕೆಲ ನಾಯಕರ ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಇಂತಹ ಕಾರ್ಯಕ್ರಮ ಅಗತ್ಯವೇ ಎಂದು ಪ್ರಶ್ನಿಸುತ್ತಾರೆ.


ಅಭಿವ್ಯಕ್ತಿ ಎಂದರೆ ನಮ್ಮ ಭಾವನೆಗಳನ್ನು ಇತರರಿಗೆ ತಲುಪಿಸುವುದು ಎಂದರ್ಥ. ಇದು ಲಿಖಿತವಾಗಿಯೂ ಹಾಗೂ ಮೌಖಿಕವಾಗಿಯೂ ಆಗಿರಬಹುದು.

ಅಭಿವ್ಯಕ್ತಿ ಸೃಜನಶೀಲತೆಗೆ ಪೂರಕವಾದದು ಇದು ವ್ಯಕ್ತಿಗಳ ವ್ಯಕ್ತಿತ್ವ ಅನಾವರಣಗೊಳಿಸಲು ಮಾದ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ.


ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ರಾಜ ಮಹಾರಾಜರು ಅಭಿವ್ಯಕ್ತಿ ಗೆ ಬಹಳ ಮಹತ್ವ ನೀಡಿದ್ದರು ಇದಕ್ಕೆ ಶ್ರೀರಾಮ ಚಂದ್ರ ಬಹುದೊಡ್ಡ ಉದಾಹರಣೆ .ಸಾಮಾನ್ಯ ಪ್ರಜೆಯ  ಅಭಿವ್ಯಕ್ತಿ ಗೆ ಅವರು ನೀಡಿದ ಮನ್ನಣೆ ಇಂದಿಗೂ ಮನನೀಯ.


ನಂತರದ ಕಾಲದಲ್ಲಿ ಕೆಲ ಆಳರಸರು ಅಲ್ಲಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಪ್ರಸಂಗಗಳು ಸಹ ನಡೆದವು.ಸ್ವಾತಂತ್ರ್ಯಾನಂತರದಲ್ಲಿ ನಮ್ಮದೇ ಸಂವಿಧಾನದ ಅಳವಡಿಕೆಯ ಸಂಧರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಾನೂನಿನ ಬೆಂಬಲ ದೊರಕಿಸಲಾಗಿದೆ.


ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು “ಭಾರತೀಯ ಸಂವಿಧಾನ’ ವಿಧಿ ಸಂಖ್ಯೆ 19 (1)(ಅ)ಯಲ್ಲಿ ಪ್ರತಿಯೋರ್ವ ಭಾರತೀಯ ಪ್ರಜೆಗೆ ನೀಡಿದೆ. “ವಾಕ್ ಮತ್ತು ಅಭಿವ್ಯಕ್ತಿ, ಸ್ವಾತಂತ್ರ್ಯ’ (Freedom of speech and expression) ಎಂದು ಕರೆಯಲ್ಪಡುವ ಈ ವಿಧಿಗೆ 19 (2)ರಲ್ಲಿ ಅದರ ಮಿತಿಗಳನ್ನೂ (Limitations) ತಿಳಿಸಿದೆ.

ಗರ್ಭದಿಂದ ಗೋರಿಯ  ವರೆಗೂ ಅಭಿವ್ಯಕ್ತಿ ವಿವಿಧ ರೀತಿ ಯಲ್ಲಿ ಪ್ರಕಟವಾಗುತ್ತಲೇ ಇರುತ್ತದೆ ಮನುಷ್ಯನ ಯೋಚನೆಗಳು ಸಂವಹನ ಮಾಧ್ಯಮ (Communi catione media)ಗಳ ಮೂಲಕ ಮೂರ್ತ ರೂಪಗೊಳ್ಳುವುದೇ ಅಭಿವ್ಯಕ್ತಿ ಎಂಬ ವ್ಯಾಖ್ಯಾನ ಕೂಡಾ ಇದೆ.ಮಾತು ಮತ್ತದರ ವಿವಿಧ ಪ್ರಕಾರಗಳು, ಬರೆಹ, ಅಭಿನಯ, ಸನ್ನೆ – ಸಂಕೇತ, ಚಿತ್ರ- ಚಲನಚಿತ್ರ, ಸಂಗೀತ, ಸಾಮಾಜಿಕ ಜಾಲ ತಾಣಗಳು…. ಎಲ್ಲವೂ ಅಭಿವ್ಯಕ್ತಿ ವೈವಿಧ್ಯ ಗಳು. ಇವೆಲ್ಲಕ್ಕೂ ಸಂವಿಧಾನ “ಅಸ್ತು’ ಎಂದಿದ್ದರೂ ಪ್ರತಿಯೊಂದಕ್ಕೂ ಹೊಣೆ ಗಾರಿಕೆಯ ಭದ್ರಕೊಂಡಿಯನ್ನು ಬೆಸೆದು ನಿಯಂತ್ರಿಸಿದೆ. ಸ್ವಾತಂತ್ರ್ಯ ಮತ್ತು ಉತ್ತರ ದಾಯಿತ್ವ ಇಲ್ಲಿ ಒಂದೇ ನಾಣ್ಯದ ಎರಡು ಮುಖಗಳು.

 ಆದರೆ ಇಂದು ಬಹುತೇಕರು ಆ ಮಿತಿಗಳನ್ನು ಮೀರಿ ಅಭಿವ್ಯಕ್ತಿ ಸ್ವತಂತ್ರ ಅನುಭವಿಸಿದ ಪರಿಣಾಮವಾಗಿ ಇಂದು ಅಲ್ಲಲ್ಲಿ ಅನರ್ಥಗಳು ಸಂಭವಿಸುತ್ತಿವೆ. ಸಮುದಾಯದ ನಡುವೆ ಬಿರುಕು ಬಿಟ್ಟು ,ಜಾತಿ ಧರ್ಮದ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೂ ಕಾರಣವಾಗಿರುವುದು  ದುರದೃಷ್ಟಕರ. ಇಂತಹ ಅನರ್ಥಗಳ ತಡೆಯಲು ಸರ್ಕಾರಗಳು ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುಲೇಬೇಕು.   ಕೆಲವೊಮ್ಮೆ ಇದು ರಾಜಕೀಯ ಬಣ್ಣ ಪಡೆದು ಆಳುವ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು ಗೊಳಿಸಲು ಪ್ರಯತ್ನ ಪಟ್ಟ ಉದಾಹರಣೆಗಳೂ ನಮ್ಮ ಮುಂದಿವೆ.


ಯಾವುದೇ ಮಾಧ್ಯಮದ ಮೂಲಕ ನಾವು ಅಭಿವ್ಯಕ್ತಿ ಪಡಿಸಬೇಕಾದರೆ ಅದು ಇತರರ ಭಾವನೆಗೆ ಧಕ್ಕೆ ಬರುವಂತಿದ್ದರೆ ಅಂತಹ ಅಭಿವ್ಯಕ್ತಿ ಮಾಡದೇ ಇರುವುದು ಸೂಕ್ತ. ಅದಕ್ಕೆ ಥಿಂಕ್ ಬಿಪೋರ್ ಇಂಕ್ ಎಂದು ಕರೆದಿರುವುದು.ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು ಎಂಬಂತೆ ನಮ್ಮ ಮಾತು ಮುತ್ತಿನ ಹಾರದಂತಿರಬೇಕೆ ಹೊರತು ಕಿವಿಗಿ ಕೂರ್ದಸಿಯ ಸುರಿದಂತಿರಬಾರದು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬಂತೆ ನಮ್ಮ ಮಾತುಗಳು ಹಗೆತನವನ್ನು ಸೃಷ್ಟಿಸಬಾರದು .   ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಎಲ್ಲರೂ ಲೈಕು, ಕಾಮೆಂಟುಗಳ ಹಿಂದೆ ಬಿದ್ದು ಯಾರೋ ಬರೆದ ಅನರ್ಥ ಬರುವ ಸಂದೇಶಗಳನ್ನು ಕುರುಡಾಗಿ ಮುನ್ನಾಯಿಸುವ ಉದಾಹರಣೆಗಳಿಗೇನೂ ಬರವಿಲ್ಲ.


ಕೆಲವೊಮ್ಮೆ ನಮ್ಮ ಅಭಿವ್ಯಕ್ತಿ ಸರಿಯಾಗಿದ್ದೂ ಅರ್ಥೈಸಿಕೊಳ್ಳುವವರ ತಪ್ಪು ಗ್ರಹಿಕೆಯಿಂದಲೂ ಕೆಲವೊಮ್ಮೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ  ಇನ್ನೂ ಕೆಲವರು ಬೇಕಂತಲೇ ವಿತಂಡವಾದ ತೋರುತ್ತಾ ತಪ್ಪು ಸಂದೇಶಗಳನ್ನು ರವಾನಿಸಿ ಪ್ರಚಾರ ಬಯಸುವ ಮಹಾಶಯರಿರುವರು. ಅಂತಹವರ  ವಿಚಾರದಲ್ಲಿ ಎಲ್ಲರೂ ಜಾಗರೂಕರಾಗಬೇಕು. ನಾವು ಮಾಡುವ ಒಂದು ಟ್ವೀಟ್ ,ಒಂದು ಪೋಸ್ಟ್, ಒಂದು ವೀಡಿಯೋ, ಒಂದು ಮಾತು, ಒಂದು ಪುಸ್ತಕ ಒಂದು ಚಿತ್ರ ಸಮಾಜಕ್ಕೆ ಪೂರಕವಾಗಿ ಸರ್ವರೂ ಕೂಡಿ ಬಾಳುವಂತೆ ಇರಬೇಕೇ ವಿನಃ ಗಲಭೆ ಸೃಷ್ಟಿಸಿ ಅಭದ್ರತೆ ಬೆಳೆಸಿ ಪಟ್ಟಭದ್ರ ಹಿತಾಸಕ್ತಿಗಳು ಮೆರೆಯುವಂತಿರಬಾರದು. ಮಾನಾಡಲೇಬೇಕು ಎಂದೆನಿಸಿದರೆ ಬೆಳ್ಳಿಯಂತಹ ನಾಲ್ಕು ಮಾತಾಡೋಣ. ಇಲ್ಲದಿದ್ದರೆ ಮೌನವಾಗಿದ್ದು ಬಂಗಾರವಾಗೋಣ. ಇಷ್ಟೆಲ್ಲಾ ಹೇಳಿ ಮುಗಿಸುವ ಮುನ್ನ ಇಂದು ಬೆಳಿಗ್ಗೆ ಸಿಗ್ನಲ್ ನಲ್ಲಿ ಆಟೋ ಹಿಂದೆ ಬರೆದ ಸಾಲುಗಳು ನೆನಪಾದವು" ಇದು ಕಲಿಯುಗ ಮಗ ಇನ್ನಾದರೂ ಒಳಿತು ಮಾತಾಡುವುದು  ಕಲಿ" 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529



02 December 2021

ಅನಾಮಿಕ ಯಾರು? ಕಥೆ


 


ಆ ಅನಾಮಿಕ ಯಾರು?



ಎರಡು ಬಾರಿ ನನ್ನವಳ ಬಳಿ ಬೈಸಿಕೊಂಡಿದ್ದೇನೆ ಇದೇ ವಿಚಾರಕ್ಕೆ ,ಇಂದು ಅವಳು ನನ್ನ ಜೊತೆಗಿದ್ದಿದ್ದರೆ ಖಂಡಿತಾ ಇಷ್ಟೊತ್ತಿಗೆ ಸಹಸ್ರನಾಮ , ಅರ್ಚನೆ, ಮಂಗಾಳಾರತಿ ಎಲ್ಲಾ ಆಗಿರುತ್ತಿತ್ತು! ಸೂರ್ಯ ಮುಳುಗಿ ಒಂದು ಗಂಟೆಯಾಗಿರುವುದಕ್ಕೆ ಕತ್ತಲೆ ನಿಧಾನವಾಗಿ ಆವರಿಸುತ್ತಿರುವುದು ಸಾಕ್ಷಿಯಾಗಿತ್ತು, ಅದರ ಜೊತೆಗೆ ಗೆಳೆಯ ಜಬಿ ಹೇಳಿದ ಮಾತು ಯಾಕೋ ನೆನಪಾಯಿತು," ಆ ಕಣಿವೆಯಲ್ಲಿ ಇಪ್ಪತ್ತು ‌ಕಿಲೋಮೀಟರ್ ಹುಷಾರು ಕಣೊ, ಎರಡು ‌ಮೂರು ಬಾರಿ ದರೋಡೆ ಆಗಿದೆ" ಛೇ... ಇವತ್ತೇ ಹೀಗೆ ಆಗಬೇಕಿತ್ತೇ ? ಮನೆಯಿಂದ ಮುನ್ನೂರು ಮೀಟರ್ ಹತ್ತಿರ ಇರುವ ಪೆಟ್ರೋಲ್ ಹಾಕಿಸಲು ನಾನೇಕೆ ಇಷ್ಟು ಸೋಮಾರಿಯಾದೆ?  ನನ್ನವಳು ಪದೇ ಪದೇ ಜ್ಞಾಪಿಸಿದರೂ ನನಗೇಕೆ ಈ ವಿಚಾರದಲ್ಲಿ ನಿರ್ಲಕ್ಷ್ಯ? ನನ್ನ ನಿರ್ಲಕ್ಷ್ಯಕ್ಕೆ ಸಾಕಷ್ಟು ಬಾರಿ ಇದೇ ರೀತಿಯಲ್ಲಿ ತೊಂದರೆ ಅನುಭವಿಸಿರುವೆ ,ಹೋದ ವಾರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತ ಹೋದಾಗ ಹೀಗೆಯೇ ಹಾಕಿತ್ತು, ಪುಣ್ಯಕ್ಕೆ  ಪೆಟ್ರೋಲ್ ಬಂಕ್  ಒಂದು ಕಿಲೋಮೀಟರ್  ಇರುವಾಗ ಪೆಟ್ರೋಲ್ ಖಾಲಿಯಾಗಿತ್ತು, ಅಂದು ನನ್ನವಳ ಜೊತೆಗೆ ನನ್ನ ಅಪ್ಪ, ಅಮ್ಮ, ಸೇರಿ ಅಷ್ಟೋತ್ತರ ಮಾಡಿದ್ದರು ಸಾಲದ್ದಕ್ಕೆ ನನ್ನ ಮಕ್ಕಳು ಜೋಕ್ ಮಾಡಿ ನಕ್ಕಿದ್ದರು. ಆದರೂ ನಾನು ಜಾಗೃತನಾಗಲೇ ಇಲ್ಲ. ಈಗ ಈ ಕಣಿವೆಯಲ್ಲಿ ಏನು ಮಾಡಲಿ? ಇಲ್ಲೇ ಕಾರ್ ಬಿಟ್ಟು ಹೋಗೋಣವೆ? ಅದೇಗೆ ಸಾದ್ಯ? ಗೆಳೆಯ ಹೇಳಿದಂತೆ ಈ ಜಾಗ ಸರಿ‌ ಇಲ್ಲ , ಯಾರಿಂದಲಾದರೂ ಸಹಾಯ ಪಡೆದು ಕಾರು ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ.


ಕತ್ತಲು ಹೆಚ್ಚಿದಂತೆ ಕಣಿವೆಯಲ್ಲಿ ವಿಚಿತ್ರವಾದ ಪ್ರಾಣಿಗಳ ಸದ್ದು, ಬೀಸುವ ಬಲವಾದ ಗಾಳಿಗೆ ಮರಗಳ ಕೊಂಬೆಗಳು ಮುರಿದ ಸದ್ದು ,ದೂರದಲ್ಲಿ ನರಿ ಊಳಿಡುವ ಸದ್ದು ಕೇಳಿ ಯಾಕೋ ಸಣ್ಣಗೆ ನಡುಕು ಶುರುವಾಯಿತು . ಸಂಕಟ ಬಂದಿರುವುದು ಪಕ್ಕಾ ಆಗಿ  ಮನದಲ್ಲೇ  ವೆಂಕಟರಮಣನ ನೆನೆದು ಧೈರ್ಯ ತಂದುಕೊಂಡೆ.ಸಹಾಯಕ್ಕಾಗಿ ಎದುರುನೋಡುತ್ತಾ ರಸ್ತೆಯ ಪಕ್ಕದಲ್ಲಿ ನಿಂತೆ, ಮುಕ್ಕಾಲು ಗಂಟೆಯ ನಂತರ ದೂರದಲ್ಲಿ ಬೆಳಕು ಕಾಣಿಸಿತು, ಹತ್ತಿರ ಬರು ಬರುತ್ತಾ ಒಂದೆಡೆ ಸಂತಸ ,ಮತ್ತೊಂದೆಡೆ ಭಯ ಶುರುವಾಯಿತು, ಭಯಕ್ಕೆ ಕಾರಣ ಒಂದು ಜಬಿ ಹೇಳಿದ ಮಾತು ಮತ್ತು ಮೂರು ದಿನದ ಹಿಂದೆ ರಾತ್ರಿಯಲ್ಲಿ ಹೆದ್ದಾರಿ ದರೋಡೆ ಮಾಡಿ ಕಾರು ಚಾಲಕನನ್ನು ಕೈ ಕಾಲು ಕಟ್ಟಿ ಚರಂಡಿ ಯಲ್ಲಿ ಎಸೆದು  ಹೋದ ಕಳ್ಳರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು. 


ಅಳುಕಿನಿಂದಲೇ ಬೈಕ್ ಗೆ ಕೈ ಅಡ್ಡ ಹಾಕಿದೆ, "ಓ ಏನ್ ಸಾರ್ ಇಲ್ಲಿ" ಪರಿಚಿತ ಧ್ವನಿ! ಬೈಕ್ ಹೆಡ್ ಲೈಟ್ ಪೋಕಸ್ ಗೆ ಮುಖ ಕಾಣಲಿಲ್ಲ, ಕೈ ಅಡ್ಡ ಹಿಡಿದು ನೋಡಿದೆ. ನಮ್ಮ ಮನೆಯ ಮುಂದಿನ ನಮ್ಮ ಆತ್ಮೀಯರಾದ ನಂಜುಂಡಪ್ಪ ಸರ್. 

" ಸರ್ ಹೇಳಲು ನಾಚಿಕೆ ಆಗುತ್ತದೆ ಸರ್, ಪೆಟ್ರೋಲ್ ಖಾಲಿಯಾಗಿದೆ ಜೇಬಲ್ಲಿ ದುಡ್ಡಿದೆ, ಕ್ರೆಡಿಟ್ ಕಾರ್ಡ್ ಇದೆ, ಆದರೂ ಪೆಟ್ರೋಲ್ ಗಾಗಿ ಪರದಾಡುವ  ಪರಿಸ್ಥಿತಿ ನೋಡಿ " ಎಂದು ಇನ್ನೂ ನಾನು ಮಾತು ಮುಗಿಸಿರಲಿಲ್ಲ

" ಸಾರ್ ಜೋರಾಗಿ ದುಡ್ಡು, ಕಾರ್ಡ್ ಅನ್ನಬೇಡಿ ,ಸುಮ್ಮನಿರಿ, ಈ ಜಾಗ ಸರಿ ಇಲ್ಲ, ಆದಷ್ಟು ಬೇಗ ಇಲ್ಲಿಂದ ಹೊರಡಬೇಕು, ಹಾಂ.. ನಿಮ್ ಕಾರಲ್ಲಿ ಬಾಟಲ್ ಇದ್ರೆ ಕೊಡಿ, ನನ್ ಬೈಕಲ್ಲಿ ಪೆಟ್ರೋಲ್ ತೆಗೆದು ಕೊಡುವೆ" ಎಂದರು

"ಸಾರ್ ನಿಮಗೆ ಯಾಕೆ ತೊಂದ್ರೆ ,ನಿಮ್ ಬೈಕ್ ಕೊಡಿ ,ನೀವು ಇಲ್ಲೇ ಇರಿ ನಾನು ಇಲ್ಲಿಂದ ಇಪ್ಪತ್ತು ‌ಕಿಲೋಮೀಟರ್ ದೂರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತರ್ತೀನಿ" ಎಂದೆ 

"ಸಾರ್ ನಾನು ಬೆಳಿಗ್ಗೆ ಪುಲ್ ಟ್ಯಾಂಕ್  ಮಾಡಿಸಿದ್ದೆ ,ನೀವೇನೂ ಯೋಚನೆ ಮಾಡಬೇಡಿ "ಎಂದು ಅವರೇ ಕಾರ್ ಬಳಿ ಬಂದು ಬಾಟಲ್ ಗಾಗಿ‌ ತಡಕಾಡಿದರು ಕೊನೆಗೆ ನಾನೇ ಬಾಟಲ್ ಕೊಟ್ಟೆ ,

ಪೆಟ್ರೋಲ್ ಹಾಕಿಕೊಂಡು ಅವರಿಗೆ ಧನ್ಯವಾದ ಹೇಳಿ ನಾಳೆ ಸಿಗುವೆ ಎಂದು ಕಾರ್ ಸ್ಟಾರ್ಟ್ ಮಾಡಿ ಹೊರಟೆ , ಮಾರ್ಗ ಮಧ್ಯದಲ್ಲಿ ನನ್ನವಳ ಪೋನ್ ಯಾಕೆ ಲೇಟ್? ಯಾವಾಗ ಬರ್ತೀರಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದಳು,  ಏನೋ ಕಾರಣ ಹೇಳಿದೆ ,ಪೆಟ್ರೋಲ್ ವಿಷಯ ಬಿಟ್ಟು. ನಾಲ್ಕೈದು ಕಿಲೋಮೀಟರ್ ಸಾಗಿದ ಬಳಿಕ ಅಪ್ಪ ಪೋನ್ ನಲ್ಲೆ ನಿಧಾನವಾಗಿ ಗದರಿದರು " ಅದೇನು ಕೆಲಸಾನೋ ನಿಂದು ,ಬೆಳಕಿದ್ದಾಗಲೆ ಮನೆ ಸೇರೋಕ್ಕಾಗಲ್ವೆ? ಹೇಳೋ ಕೇಳೋ ಕಾಲ್ದಾಗೆ" ಎಂದು ಪೋನ್ ಕಟ್ ಮಾಡಿದರು.


ಬೆಳಿಗ್ಗೆ ವಾಕಿಂಗ್ ಹೊರಟೆ, ಎದುರಿಗೆ ವಾಕ್ ಮಾಡುತ್ತಾ ಬಂದ ನಂಜುಂಡಪ್ಪ ಸರ್  ದಂಪತಿಗಳು   ಸಿಕ್ಕಿದರು ನಗುತ್ತಲೆ "  ಗುಡ್ ಮಾರ್ನಿಂಗ್ ಸರ್  ರಾತ್ರಿ ನಿಮ್ಮಿಂದ    ನನಗೆ ಬಹಳ ಅನುಕೂಲ ಆಯ್ತು ಸರ್ ಒಳ್ಳೆಯ ಟೈಮ್ ಗೆ ಮದಲಿಂಗನ ಕಣಿವೆ ನಲ್ಲಿ ಬೈಕ್ ನಲ್ಲಿ ಬಂದು ಪೆಟ್ರೋಲ್ ಕೊಟ್ಟಿರಿ ಇಲ್ಲ ಅಂದಿದ್ರೆ ನಾನು ರಾತ್ರಿ ಪೂರಾ ಅಲ್ಲೇ ಭಯದಲ್ಲೇ ಕಾಲ ಕಳಿಬೇಕಾಗಿತ್ತು" ಎಂದು ಕೃತಜ್ಞತೆ ಸಲ್ಲಿಸಿದೆ, 

ನಂಜುಂಡಪ್ಪ ಸರ್ ಧರ್ಮಪತ್ನಿ "ಅಯ್ಯೋ ನೀವ್ ಒಬ್ರು, ಸರ್ ಇವ್ರ ಬೈಕ್ ಪಂಚರ್ ಆಗಿ ಮೂರ್ ದಿನ ಆಯ್ತು ,ಪಂಚರ್ ಹಾಕುಸ್ರೀ ಅಂದ್ರೆ ಇವತ್ತು ನಾಳೆ ,ಅಂತಾರೆ 

ನೀವ್ ನೋಡಿದ್ರೆ ಬೈಕ್ ನಲ್ಲಿ ರಾತ್ರಿ ಬಂದ್ರು ಅಂತಿರಾ, ಬಹುಶಃ ಇವ್ರು ಕನಸಲ್ಲಿ ಬಂದಿರಬೇಕು " ಎಂದು ಅವರ ಗಂಡನ ಕಡೆ ತಿರುಗಿ ಕಣ್ಣು ಕೆಂಪಗೆ ಮಾಡಿದರು.

" ಈಗ ನಿನಗೆ ಸಮಾಧಾನ ಆಯ್ತಾ ಸರ್? ಅಂತೂ ಬೆಳಿಗ್ಗೆ ನನಗೆ ಸುಪ್ರಭಾತ ಸೇವೆ ಆಯ್ತು " ಎಂದು ನಗುತ್ತಾ ಹೊರಟರು.


ನಾನು ಆಶ್ಚರ್ಯದಿಂದ ನನಗೇ ಪ್ರಶ್ನೆ ಮಾಡಿಕೊಂಡೆ,ಹಾಗಾದರೆ ರಾತ್ರಿ ಮದಲಿಂಗನ ಕಣಿವೆಯಲ್ಲಿ ನನಗೆ ಸಹಾಯ ಮಾಡಿದ ಅನಾಮಿಕ ಯಾರು?

ಬೆಳಗಿನ   ವಾಕ್ ನಿಂದ ಹಣೆಯ ಮೇಲಿನ    ಸಣ್ಣ ಮಟ್ಟದ ಬೆವರ ಹನಿಗಳು ಬರು ಬರುತ್ತಾ ದೊಡ್ಡದಾದವು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೨/೧೨/೨೧


 

01 December 2021

ಸಂತೃಪ್ತ ದಿನ ಕವನ


 *ಸಂತೃಪ್ತ ದಿನ*



ದಿನ ಮೇಲೇರಿ ಬರುವ

ಮುನ್ನ ಎದ್ದೇಳೋಣ

ಘನ ಮಹಾ ಶಕ್ತಿಗೆ

ಶಿರಭಾಗಿ ನಮಿಸೋಣ


ತನುಮನವನ ಸ್ಚಚ್ಚ

ಮಾಡಿಕೊಳ್ಳೋಣ 

ಮನಕೊಪ್ಪುವ  ಸಮತೋಲನ

ಆಹಾರ ಸೇವಿಸೋಣ


ಧನವೊಂದೆ ಜೀವನವಲ್ಲ

ಎಂಬುದನರಿತು  ಕಾಯಕಮಾಡೊಣ

ದನಕರುಗಳ ಬಗ್ಗೆ ಕರುಣೆಯಿಂದ

ನಡೆದುಕೊಳ್ಳೋಣ


ಜನಗಳೊಂದಿಗೆ ಸಮನ್ವಯದಿ

ಬೆರೆತು ಬಾಳೋಣ

ಈ ಮೇಲಿನಂತಿದ್ದರೆ ನಮ್ಮಯ

ದಿನಚರಿ ನಮ್ಮದಾಗುವುದು

ಪರಿಪೂರ್ಣ ಸಂತೃಪ್ತ ದಿನ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಭಾರತವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸೋಣ.ಲೇಖನ


 


ಜಿ.ಡಿ .ಪಿ .ಯ ಬೆಳವಣಿಗೆ

ಆಶಾದಾಯಕ ಸಂಗತಿ .


 ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8.4ರ ಬೆಳವಣಿಗೆ ಕಂಡಿದ್ದು, ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪಿರುವುದು ಆಶಾದಾಯಕ ಸಂಗತಿಯಾಗಿದೆ.

ಭಾರತದ ಆರ್ಥಿಕತೆಯು ಕೋವಿಡ್ ನಂತಹ  ಕಠಿಣ ಸನ್ನಿವೇಶ ಎದುರಿಸಿದರೂ ಮೇಲೆದ್ದು ಬರುವ ತಾಕತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ಸಾಬೀತುಪಡಿಸುತ್ತವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಎರಡಂಕಿ ಪ್ರಗತಿ ಸಾಧಿಸುವ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯ ಅರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ರವರ ಹೇಳಿಕೆ ಈ ವಿಚಾರದಲ್ಲಿ ಮಹತ್ವ ಪಡೆಯಲಿದೆ.


ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಶೇ.13.7ರಷ್ಟು ಬೆಳವಣಿಗೆ ಕಂಡಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಶೇ 6ಕ್ಕಿಂತಲೂ  ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಲಿದ್ದು, ಒಟ್ಟಾರೆಯಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.


ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭ ಆಗಿರುವುದರಿಂದ ಜನರು ಸರಕು ಮತ್ತು ಸೇವೆಗಳ ಖರೀದಿಗೆ ಮಾಡುತ್ತಿರುವ ಖರ್ಚಿನಲ್ಲಿ ಏರಿಕೆ ಕಂಡುಬಂದಿದೆ. ಹೆಚ್ಚು ಜನರು ಲಸಿಕೆ ಪಡೆದಿದ್ದರಿಂದ ಈ  ಅವಧಿಯಲ್ಲಿ ಕೋವಿಡ್ ತೀವ್ರತೆಯೂ ಕಡಿಮೆ ಆಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಎರಡನೇ ತ್ರೈಮಾ ಸಿಕದಲ್ಲಿ ಜೆಡಿಪಿಯು: ಈ ಪ್ರಮಾಣದ ಬೆಳವಣಿಗೆ ಕಂಡಿದೆ.


ಇದೇ ವೇಳೆ ನಮ್ಮ ದೇಶದ 

ದೇಶದ ವಿತ್ತೀಯ ಕೊರತೆಯು ಅಕ್ಟೋಬರ್ ತಿಂಗಳ ಅಂತ್ಯಕ್ಕೆ 2 5.47 ಲಕ್ಷ ಕೋಟಿಗಳಷ್ಟಾಗಿದೆ. ಬಜೆಟ್ ಅಂದಾಜಿನ ಪ್ರಕಾರ ಶೇ 36.3ರಷ್ಟಾಗಿರುವುದು ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.


ವರಮಾನ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವಿತ್ತೀಯ ಕೊರತೆಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಸಿಜಿಎ ತಿಳಿಸಿದೆ.

ಇಷ್ಟೆಲ್ಲಾ ಆಶಾದಾಯಕ ಬೆಳವಣಿಗೆಯ ಮುಧ್ಯೆ ಒಮೈಕ್ರಾನ್ ವೈರಸ್ ನ ಕಾರ್ಮೋಡ  ಪ್ರಪಂಚದ ವಿವಿಧ ದೇಶಗಳಲ್ಲಿ ಹರಡುತ್ತಾ ಆತಂಕ  ಕವಿದಿರುವುದು ದುರದೃಷ್ಟಕರ. ಬೇರೆ ದೇಶಗಳಲ್ಲಿ ಕೋವಿಡ್ ಮೂರು ಮತ್ತು ನಾಲ್ಕನೇ ಅಲೆಗಳು ಅಪ್ಪಳಿಸಿದರೂ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇರುವುದಕ್ಕೆ ಕಾರಣ ನಮ್ಮ ಲಸಿಕಾ ಅಭಿಯಾನ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಕೆಲವರು ಎರಡನೇ ಡೋಸ್ ಲಸಿಕೆ ಪಡೆದಿಲ್ಲದಿರುವುದು .ಬೇಸರದ ಸಂಗತಿ.ಇಂತವರು ಸರ್ಕಾರಗಳು ಮತ್ತು ವ್ಯವಸ್ಥೆಯ ಟೀಕೆಮಾಡುತ್ತಾ ತಮ್ಮ ಕರ್ತವ್ಯ ಮರೆಯುವ ಜಾಣ ಪ್ರಜೆಗಳು. ಸರ್ಕಾರ ಮತ್ತು ತಜ್ಞರು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಜವಾಬ್ದಾರಿಯುತ ಪ್ರಜೆಗಳಾದ ನಾವು ಪಾಲಿಸೋಣ . ನಮ್ಮ ಆರೋಗ್ಯ ಕಾಪಾಡಿಕೊಂಡು ಜೀವವಿದ್ದರೆ ಜೀವನ ಎಂಬ ಸತ್ಯ ಅರಿತು ಒಗ್ಗಟ್ಟಾಗಿ ಸಾಧಿಸೋಣ. ತನ್ಮೂಲಕ ಭಾರತವನ್ನು ಪ್ರಪಂಚದಲ್ಲಿಯೇ ದೊಡ್ಡದಾದ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸೋಣ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



30 November 2021

ನಂಬಿಕೆ ದ್ರೋಹಿಗಳು


 



*ನಂಬಿಕೆ ದ್ರೋಹಿಗಳು*


ನಂಬಿಕೆ ದ್ರೋಹಿಗಳು

ಸದಾ ನಮ್ಮೊಂದಿಗೆ

ಇದ್ದೇ ಇರುವರು 

ನಂಬಿಸಿ ದ್ರೋಹ ಎಸಗುತ್ತಾ

ಅವರಿವರಿಗೆ|

ತಿಪ್ಪರಲಾಗ ಹಾಕಿದರೂ 

ಮೋಸ ಮಾಡಲಾದೀತೆ

ಇಂತಹವರು ನಮ್ಮ

ದೇವರಿಗೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


29 November 2021

ಅವನು ಕರೆದಾಗ ಹೋಗಲು ಸಿದ್ದರಿರೋಣ .


 



ಅವನು ಕರೆದಾಗ ಹೋಗಲು ಸಿದ್ಸರಿರೋಣ .


"ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ 

ನಮ್ಗೂ ನಿಮ್ಗೂ ಯಾಕೆ ಟೆನ್ಸನ್ನು" ಎಂಬ ಯೋಗರಾಜ್ ಭಟ್ಟರ ಹಾಡಿನಂತೆ . ಜೀವನದಲ್ಲಿ ಬಹುತೇಕ ಬಾರಿ ನಾವು ಅಂದುಕೊಂಡತೆ ಇರುವುದಿಲ್ಲ .ಬದುಕು  ಬಂದಂತೆ ಸ್ವೀಕರಿಸುವ ಮೂಲಕ ಜೀವನದಲ್ಲಿ ಮುಂದಡಿ ಇಡಬೇಕಿದೆ. Man proposes God disposes ಎಂಬ ಉಕ್ತಿಯಂತೆ ನಾವೇನೇನೋ ಪ್ಲಾನ್ ಮಾಡಿದರೂ ಅವನು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗುಮಾಡಿ ಹೇಗಿದೆ ಆಟ? ಎಂದು ಮರೆಯಲೇ ನಿಂತು ನಗುವನು. 


ಅಂದರೆ ನಾವು ಯೋಜನೆ ಮಾಡಬಾರದಾ ? ಹಿಂಗೇ ಇರಬೇಕು ಎಂದು ಗುರಿ ಇಟ್ಟುಕೊಳ್ಳಲೇ ಬಾರದಾ? ಎಂದರೆ ಖಂಡಿತವಾಗಿ ಗುರಿಯೂ ಇರಲಿ . ಯೋಜನೆಯು ಇರಲಿ . ಅದಕ್ಕೆ ಪೂರಕವಾಗಿ ಪ್ರಯತ್ನ ಸಹ ಜಾರಿಯಲ್ಲಿ ಇರಲಿ ನಮ್ಮೆಲ್ಲ ಪ್ರಾಮಾಣಿಕವಾದ ಪ್ರಯತ್ನದ ನಡುವೆಯೂ ನಾವಂದುಕೊಂಡದ್ದು ಆಗಲಿಲ್ಲ ಎಂದರೆ ಬೇರೇನೋ ಯೋಚಿಸುತ್ತಾ, ಬೇಸರ ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಖಿನ್ನತೆಯೆಡೆಗೆ ಜಾರಿ ಬದುಕಿನಲ್ಲಿ ಅನರ್ಥದ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳವ ನಿರ್ಧಾರವನ್ನು ಕೈಗೊಳ್ಳಬಾರದು. ಸೂರ್ಯ ಮುಳುಗಿದ ಎಂದು ಕೊರಗಿ ಕೂರುವ ಬದಲಿಗೆ ನಕ್ಷತ್ರಗಳ ನೋಡುವ ಕಾತರತೆ ಮತ್ತು ಸಂತಸ ಹೊಂದಬೇಕಿದೆ.ಎಲ್ಲಾ ಬಾಗಿಲುಗಳು ಮುಚ್ಚಿವೆ ಬೆಳಕು ಬರುತ್ತಿಲ್ಲ ಎಂದು ಪರಿತಪಿಸುವ ಬದಲಿಗೆ ಕಿಟಕಿಯ ಮೂಲಕ ಬರುವ ಬೆಳಕಿನ ಕಡೆಗೆ ಗಮನ ಹರಿಸಬಹುದು. ಜೀವನದಲ್ಲಿ ನಮಗೆ ನಾವಂದುಕೊಂಡ ಯಾವುದೋ ಸಿಗಲಿಲ್ಲ ಎಂದರೆ   ದೇವರು ನಮಗಾಗಿ ಮತ್ತೇನೊ ಕೊಡಲು ಸಿದ್ದತೆ ಮಾಡಿಕೊಂಡಿರುವ ಎಂದು ಭಾವಿಸಿ ಮುನ್ನೆಡೆಯೋಣ. ವಿಪ್ರೊ ಕಂಪನಿಯಲ್ಲಿ ಕೆಲಸ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಂಡು ಚಿಂತೆ ಮಾಡುತ್ತಾ ಕುಳಿತಿದ್ದರೆ ನಾರಾಯಣ ಮೂರ್ತಿ ರವರು ಇನ್ಫೋಸಿಸ್ ಎಂಬ ದೈತ್ಯ ಕಂಪನಿಯು ಕಟ್ಟಿ ಸಾವಿರಾರು ಕೋಟಿ ವಹಿವಾಟು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಲು ಆಗುತ್ತಿರಲಿಲ್ಲ. 


ಇದೇ ರೀತಿಯಲ್ಲಿ ಜೀವನದಲ್ಲಿ ಕೆಲವೊಮ್ಮೆ ನಾವಂದುಕೊಂಡಂತೆ ಆಗದಿದ್ದರೆ ಬೇಸರ ಪಟ್ಟುಕೊಳ್ಳದೆ ಜೀವನವನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಅವನು ಕರೆದಾಗ ಹೋಗಲು ಕೂಡಾ ನಾವು ಸಿದ್ದರಾಗಿರಬೇಕು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

28 November 2021

ಸೌಗಂಧಿನಿ .ಹನಿಗವನ

 


*ಟೈಪ್ ಮಾಡು* 

ಸುಗಂಧ ಕೂಡಿಕೊಂಡ ಸೌಗಂಧಿನಿ 

ನುಲಿಯಿತ್ತಾ ಬಾಸ್ ಕ್ಯಾಬಿನ್

ಒಳಹೊಕ್ಕ ಆಪ್ತಸಹಾಯಕಿಗೆ

ಇಂದು ರಾತ್ರಿ ನೀನು ಫ್ರೀ ಇದ್ದರೆ

ನೋಡು|

ಮನದಲ್ಲೇ ಸಂತಸಗೊಂಡ ಅವಳು

ಗಗನದಲ್ಲಿ ಹಾರಾಡಿದಂತೆ ಖುಷಿಯಾದಳು.

ಬಾಸ್ ಮುಂದುವರೆದು ಹೇಳಿದ

ಈ ನಲವತ್ತು ಪೇಜ್ ಗಳ ಟೈಪು

ಮಾಡು!!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

27 November 2021

ಕುಣಿಗಲ್ ಶೋಧ .ಪುಸ್ತಕ ವಿಮರ್ಶೆ


 



ಕುಣಿಗಲ್ ಶೋಧ .ಕೃತಿ ವಿಮರ್ಶೆ

(ಸಂಶೋಧನಾ ಲೇಖನಗಳ ಸಂಗ್ರಹ)

ಡಾ. ಕೆ ರೇವಣ ಸಿದ್ದಯ್ಯ .



ಬಿ .ಎಡ್. ಗೆಳೆಯ ಯೋಗಾನಂದ ರವರ ಮೂಲಕ ಪರಿಚಿತವಾದ ಡಾ. ಕೆ. ರೇವಣ ಸಿದ್ದಯ್ಯ ರವರು ಬರೆದ ಸಂಶೋಧನಾ ಕೃತಿಯನ್ನು ಓದಿದಾಗ ಬಹಳಷ್ಟು ಐತಿಹಾಸಿಕ ಸತ್ಯಗಳನ್ನು ತಿಳಿದೆನು. 


ಈ ಕೃತಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನ ದ ಡಾ. ಶ್ರೀ. ನಿರ್ಮಲಾನಂದ ಸ್ವಾಮೀಜಿ ರವರ ಆಶೀರ್ವಚನ ಪುಸ್ತಕದ ಘನತೆಯನ್ನು ಹೆಚ್ಚಿಸಿದೆ. ಎಂ. ಪ್ರಕಾಶ ಮೂರ್ತಿ ರವರ ಮುನ್ನುಡಿ ಮತ್ತು ಜಾಣಗೆರೆ ವೆಂಕಟರಾಮಯ್ಯ ರವರ ಬೆನ್ನುಡಿ ಮೌಲಿಕವಾಗಿದೆ.


ಕುಣಿಗಲ್ ತಾಲ್ಲೂಕಿನ ಬೇಗೂರು ಪಂಚಾಯ್ತಿ ಕುರುಪಾಳ್ಯ ಗ್ರಾಮದ ರೈತಾಪಿ ಕುಟುಂಬದಿಂದ ಬಂದಿರುವ ಡಾ| ಕೆ. ರೇವಣಸಿದ್ದಯ್ಯ ರವರು ಪ್ರತಿಭಾವಂತ ಮತ್ತು ಭರವಸೆಯ  ಸಂಶೋಧಕರು , ವ್ಯಾಸಂಗದ ಹಂತದಲ್ಲೇ ಚಿಂತನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸಂಶೋಧನೆಯತ್ತ ಆಸಕ್ತಿ ಬೆಳೆಸಿ ಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕುಣಿಗಲ್ ನಾಡು-ಇತಿಹಾಸ ಮತ್ತು ಪುರಾತತ್ವ ಅಧ್ಯಯನ' ಎಂಬ ವಿಷಯದ ಬಗ್ಗೆ ಪಿಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ.


ಯುವ ಸಂಶೋಧಕರು ತನ್ನ ತವರೂರು ಕುಣಿಗಲ್ ತಾಲ್ಲೂಕಿನ ಮೇಲಿನ ಅಭಿಮಾನ, ಆಸಕ್ತಿಯಿಂದ ಜನ್ಮ ನೀಡಿದ ಕರ್ಮಭೂಮಿಯನ್ನು ಪ್ರೀತಿಸುವುದು, ಅದರ ಇತಿಹಾಸದ ಬಗೆಗೆ ಆಸಕ್ತಿ ತಾಳುವುದು, ವಾಸ್ತವ ಇತಿಹಾಸವನ್ನು ಶೋಧಿಸುವುದು ಕರ್ತವ್ಯವೆಂದು ಭಾವಿಸಿ ಆ ದಿಸೆಯಲ್ಲಿ ಅವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಪ್ರಶಂಸನೀಯ.


 ಕುಣಿಗಲ್ ಶೋಧ ಕೃತಿಯಲ್ಲಿ ೧೪ ಬಿಡಿ ಬರಹಗಳು ಬಹುತೇಕ ಸಂಶೋಧನಾತ್ಮಕ ಲೇಖನಗಳಾಗಿದ್ದು, ಕೃತಿಗೆ ಮಹತ್ವವನ್ನು ತಂದುಕೊಟ್ಟಿವೆ.


ಕುಣಿಗಲ್ ಪರಿಸರದ ನವಶೋಧಿತ ಕಬ್ಬಿಣದ ಕುಲುಮೆಗಳು ಎಂಬ ಲೇಖನವು ಲೇಖಕರಿಗೆ ಡಾ.ಎಂ. ಎಚ್. ಕೃಷ್ಣ ಮೆರಿಟ್ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ.


ಹುತ್ರಿದುರ್ಗ ಪರಿಸರದ ನವಶೋಧಿತ ಶಿಲಾಯುಗ ಸಂಸ್ಕೃತಿಯ ಸಮಾಧಿ ನೆಲೆಗಳು ಎಂಬ ಲೇಖನ ಓದುತ್ತಿದ್ದರೆ  ನಾವು ಹುತ್ರಿ ದುರ್ಗಕ್ಕೆ ಭೇಟಿ ನೀಡಿದ ಅನುಭವವಾಗುತ್ತದೆ.ಪೂರಕವಾಗಿ ನೀಡಿರುವ ಚಿತ್ರಗಳು ಓದುಗರಿಗೆ ಸಚಿತ್ರ ಮಾಹಿತಿ ನೀಡಲು ಸಹಕಾರಿಯಾಗಿವೆ.ಇದರಲ್ಲಿ ಉಲ್ಲೇಖಿತವಾದ ಕಲ್ಲುಸೇವಾ ಪದ್ದತಿಯು ಪಾರ್ಸಿ ಧರ್ಮದ ಶವಸಂಸ್ಕಾರ ಪದ್ಧತಿಯನ್ನು ನೆನಪಿಸುತ್ತದೆ.

 ಕುಣಿಗಲ್  ನಾಡಿನ ಕಂಬದ ನರಸಿಂಹನ ಆರಾಧನಾ ನೆಲೆಗಳು ಎಂಬ ಲೇಖನವು ಕುಣಿಗಲ್ ತಾಲೂಕಿನಲ್ಲಿ ಇರುವ ಹತ್ತಕ್ಕೂ ಹೆಚ್ಚು ನರಸಿಂಹ ದೇವರ ದೇಗುಲಗಳ ಸಮಗ್ರ ಮಾಹಿತಿಯನ್ನು ನೀಡುತ್ತವೆ.

ಬೇಗೂರು ಗ್ರಾಮದ  ಪ್ರಾಚ್ಯಾವಶೇಷಗಳು ಎಂಬ ಲೇಖನವು  ಬೇಗೂರಿನ ಕೆರೆ , ವೀರಗಲ್ಲುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ನಮ್ಮ ಪ್ರತೀ ಗ್ರಾಮಗಳು  ಸಾಂಸ್ಕೃತಿಕ ಪರಂಪರಾ ಕೇಂದ್ರಗಳು ಎಂಬ ಭಾವನಾತ್ಮಕ ಅಂಶವನ್ನು ತೆರೆದಿಡುತ್ತದೆ.

ಇನ್ನೂ ಈ ಪುಸ್ತಕದ ಇತರೆ ಲೇಖನಗಳಾದ 

ಪ್ರಾಚೀನ ಜೈನಕೇಂದ್ರ ಸಂಕೀಘಟ್ಟ ,

ಸ್ಥಳನಾಮಗಳ ಹಿನ್ನೆಲೆಯಲ್ಲಿ ಕುಣಿಗಲ್ ನಾಡಿನ ಕೋಟೆಗಳ ಅಧ್ಯಯನ, ಕುಣಿಗಲ್ ನಾಡಿನ ಶಾಸನೋಕ್ತ ಸ್ಥಳನಾಮಗಳು,

ಕುಣಿಗಲ್ ಪಟ್ಟಣದ ಪ್ರಾಚೀನ ದೇವಾಲಯಗಳು, ಕುಣಿಗಲ್ ಪರಿಸರದ ನಂಬಿಕೆ ಆಚರಣೆಗಳು,

ಕುಣಿಗಲ್ ಪರಿಸರದ ಸಾಂಪ್ರದಾಯಿಕ ಆಹಾರ ಪದ್ಧತಿ, ಕುಣಿಗಲ್ ತಾಲ್ಲೂಕಿನ ಶಾಸನೋಕ್ತ ಆಗ್ರಹಾರಗಳು, ಹುತ್ರಿದುರ್ಗದ ಪ್ರಾಚ್ಯಾವಶೇಷಗಳು,ಕುಣಿಗಲ್ ಸೀಮೆಯ ಸ್ಥಳಪುರಾಣ ಮತ್ತು ಐತಿಹ್ಯಗಳು,ಮಾರ್ಕೋನಹಳ್ಳಿ ಮತ್ತು ಮಂಗಳಾ ಜಲಾಶಯ ಮುಂತಾದ ಲೇಖನಗಳು ಸಮಗ್ರ ಸಂಶೋಧನಾ ಪ್ರಬಂಧಗಳಾಗಿದ್ದು ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಇರುವವರ ಪಾಲಿನ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು. 



ಡಾ| ಕೆ. ರೇವಣಸಿದ್ಧಯ್ಯನವರು ತಮ್ಮ ಕೃತಿಯಲ್ಲಿ ಕುಣಿಗಲ್ ಬಗ್ಗೆ ಸರಿಯಾಗಿ ಪರಿಚಯವಿಲ್ಲದ ನನ್ನಂತಹ ಹೊರ ಜಿಲ್ಲೆಯಿಂದ ಬಂದವರಿಗೆ   ತಿಳಿಯದಿದ್ದ ಹೊಸ ಹೊಸ ಸಂಗತಿಗಳನ್ನು ದಾಖಲೆ ಸಹಿತವಾಗಿ ವಿವರಿಸಿರುವುದು  ಸಂತಸ ತಂದಿದೆ. ಅವರ ಸಂಶೋದನಾ ಕಾರ್ಯ ನಿರಂತರವಾದ ಕ್ಷೇತ್ರ ಅಧ್ಯಯನ ಈ ಪುಸ್ತಕದಲ್ಲಿ ಪ್ರತಿಬಿಂತವಾಗಿದೆ. ಶ್ರೀಯುತರು ಮುಂದಿನ ದಿನಗಳಲ್ಲಿ ಇಂತಹ ಮೌಲಿಕ ಕೃತಿಗಳನ್ನು ರಚಿಸುತ್ತಾ ಇತಿಹಾಸದ ಮೇಲೆ ಬೆಳಕು ಚೆಲ್ಲವ ಕಾರ್ಯ ಮಾಡಲಿ ಎಂದು ಆಶಿಸುತ್ತೇನೆ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

990925529 


ಪುಸ್ತಕದ ಹೆಸರು: ಕುಣಿಗಲ್ ಶೋಧ 

ಸಂಶೋಧನಾ ಲೇಖನಗಳ ಸಂಗ್ರಹ

ಲೇಖಕರು:ಡಾ. ಕೆ ರೇವಣ ಸಿದ್ದಯ್ಯ .

 ಪ್ರಕಾಶನ:  ಸುಹಾಸ್ ಗ್ರಾಫಿಕ್ಸ್, ಬೆಂಗಳೂರು

ಬೆಲೆ: 170 ₹


26 November 2021

ಜನಮಿಡಿತ .೨೭/೧೧/೨೧


 

ಆತ್ಮ ಸಾಕ್ಷಾತ್ಕಾರಕ್ಕಾಗಿ ದುಡಿಯೋಣ.


 


ಆತ್ಮ ಸಾಕ್ಷಾತ್ಕಾರ ಕ್ಕೆ ದುಡಿಯೋಣ 


Don't sit like a rock 

Work like a  clock


ಎಂಬ ನುಡಿಯಂತೆ ನಾವು ಸದಾ ಚಟುವಟಿಕೆಯಿಂದಿರಬೇಕು.ಬಳಸದ ವಸ್ತು ಕೊಳೆಯುತ್ತದೆ ಎನ್ನುವ ಮಾತಿನ ಹಿನ್ನೆಲೆಯಲ್ಲಿ ನಮ್ಮ ಸಕಲ  ಅಂಗಗಳು ಸದಾ ಕಾರ್ಯ ಪ್ರವೃತ್ತವಾಗಿರಬೇಕು. ನಾವು ಜೀವಿಸಲು ನಮಗೆ ಹಣ ಬೇಕು ಅದಕ್ಕೆ ನಾವು ಕೆಲಸ ಮಾಡಲೇಬೇಕು ಅದು ಯಾವುದಾದರೂ ಆಗಿರಬಹುದು ಕೆಲಸ ಮತ್ತು ಜೀವನ ಒಂದೇ ನಾಣ್ಯದ ಅವಿಭಾಜ್ಯ ಮುಖಗಳು. ಜೀವಿಸುತ್ತಾ ಕೆಲಸ ಮಾಡಬೇಕು ಕೆಲಸ ಮಾಡುತ್ತಾ ಜೀವಿಸಬೇಕು.


ಕೆಲವರು ಕೆಲಸ ಮಾಡದೇ ಜೀವಿಸಲು ಪಣ ತೊಟ್ಟಿರುವರು ಅಂತಹವರು ಮೊದಲಿಗೆ ಅತಿಯಾದ ಕೊಬ್ಬಿನ ಸಂಗ್ರಹ ಮತ್ತು ತೂಕದ ಸಮಸ್ಯೆಗಳನ್ನು ಆಹ್ವಾನ ಮಾಡಿಕೊಂಡು ಹಲವಾರು ದೈಹಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ.ಕೆಲಸ ಮಾಡದೇ ಸೋಮಾರಿಯಾಗುವವರು" ಸೋಮಾರಿಯ ತಲೆ ಸೈತಾನನ ನೆಲೆ " ಎಂಬಂತೆ ಅನಗತ್ಯ ಚಿಂತೆ ಮಾಡುತ್ತಾ ಇಲ್ಲ ಸಲ್ಲದ ಯೋಚನೆಗಳನ್ನು ಮಾಡುತ್ತಾ ಹಲವಾರು ಮಾನಸಿಕ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುತ್ತಾರೆ.


ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವ ಪಾಲಿಸೋಣ .ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆಯ ಸತ್ವವನ್ನು ಅರಿಯೋಣ. ನಮ್ಮ ಕಾಯ ಇರುವುದು ಕಾಯಕ ಮಾಡಲು ಎಂಬ ಅರಿವು ನಮ್ಮದಾಗಬೇಕು. ದುಡಿಮೆಯೇ ದುಡ್ಡಿನ ತಾಯಿ ಎಂದು ಸರ್ವರೂ ನಂಬಿದ್ದರೂ   ದುಡ್ಡು ಮಾಡಲು ಮಾತ್ರ ದುಡಿಯಬಾರದು .ದುಡ್ಡೇ ಜೀವನವಲ್ಲ .ನಾವು ಮಡಿಯುವ ಮುನ್ನ ದುಡಿಯೋಣ ಕೇವಲ ಭೌತಿಕ ಸಂಪಾದನೆಗೆ ಮಾತ್ರವಲ್ಲದೆ ಆತ್ಮಸಾಕ್ಷಾತ್ಕಾರಕ್ಕೂ ಸಹ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

25 November 2021

ಪೈಪ್ .ಹಾಸ್ಯ ಹನಿಗವನ


 *ಪೈಪ್*


ಭ್ರಷ್ಟ ಅಧಿಕಾರಿ ಹೇಳಿದ

ಮೊದಲೆಲ್ಲ ಲಂಚದ ಹಣವನ್ನು ಬೀರುವಿನಲ್ಲಿ

ಲಾಕರ್ ಗಳಲ್ಲಿ ಇಡುತ್ತಿದ್ದಳು ನನ್ನ ವೈಫ್|

ಈಗ ಅಷ್ಟೆಲ್ಲ ಕಷ್ಟ

ಪಡುವುದು ಬೇಕಿಲ್ಲ 

ಸಾಕು ಒಂದೆರಡು 

ಪಿ ವಿ ಸಿ ಪೈಪ್||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ