27 September 2020

ತಂಪು ನೀಡು ಬಾ


 *ತಂಪು ನೀಡು ಬಾ*



ಅಳಿದ ದಿನಗಳ ನೆನೆದು

ಉಳಿದ ನೆನಪುಗಳ ಸವಿದು

ಕಲೆತು ಕಲಿತು ಜೊತೆಯಲಿ

ನಡೆದ ಸವಿಘಳಿಗೆಗಳ ನೆನೆದಾಗ

ಅಂತರಂಗವೇಕೋ ಮೌನವಾಗುತಿದೆ.


ನೀನೆಚ್ಚು ನಾನೆಚ್ಚು ಎಂಬ

ಹಮ್ಮಿನಲಿ ನೆಚ್ಚಿನ ಪ್ರ್ರೀತಿಯ

ತೊರೆದು ಹುಚ್ಚು ನಿರ್ದಾರವ ಮಾಡಿ

ದೂರಾದರೂ ಬೆಚ್ಚನೆಯ ಕ್ಷಣಗಳ

ನೆನಪಲಿ ಅಂತರಂಗವೇಕೋ ಮೌನವಾಗುತಿದೆ.


ಮಾತಿಗೆ ಮಾತು ಬೆಳೆಸಿ  

ಕುಳಿತು ಮಾತನಾಡಿ ಜೊತೆಯಾಗದೆ

ಮಾತನಾಡದೆ ಎದ್ದು ಹೋದ 

ನಿನ್ನನು ಮಾತನಾಡಿಸಿ ಕರೆಯದ

ನನ್ನ  ಅಂತರಂಗವೇಕೋ  ಮೌನವಾಗುತಿದೆ .


ನನ್ನಂತರಂಗ ನಾ ಮಾಡಿದ 

ತಪ್ಪನ್ನು ತಿಳಿಸಿದೆ ,ನಿನ್ನದು ಅದೇ ಎಂದು ಭಾವಿಸಿರುವೆ ,ಮೌನ ಮುರಿದು

ಮಾತನಾಡಲು ಎಂದು  ನೀ ಬರುವೆ?

ಕಾಯುತಿರುವೆ ,ತಂಪು ನೀಡು ಬಾ! 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ಎಸ್ ಪಿ ಬಾಲಸುಬ್ರಮಣ್ಯಂ ಕುರಿತ ನನ್ನ ಹನಿ*೨೭/೯/೨೦೨೦


 

23 September 2020

TALP INDUCTION 1 ತರಬೇತಿಯ ಏಳನೇ ದಿನದ ತರಬೇತಿಯ ವರದಿ

 ಸಾರ್ವಜನಿಕ ಶಿಕ್ಷಣ ಇಲಾಖೆ.

ಡಯಟ್ ತುಮಕೂರು.


TALP INDUCTION 1 ತರಬೇತಿಯ

ಏಳನೇ ದಿನದ ತರಬೇತಿಯ ವರದಿ 


ವರದಿಗಾರರು 


ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ 

ಕ್ಯಾತಸಂದ್ರ

ತುಮಕೂರು






*ಕಂಪ್ಯೂಟರ್ ಶಿಶುಗೀತೆ*



ಒಂದು ಎರಡು 

ಕಂಪ್ಯೂಟರ್‌ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು‌ ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



ಮೊದಲಿಗೆ ಹಿರಿಯ ಸಹಶಿಕ್ಷಕರಾದ ‌ಶ್ರೀ  ಹೆಚ್ ಎಲ್ ಜಗದೀಶ್ ರವರು ಪ್ರೊಜೆಕ್ಟರ್ ಮತ್ತು ಮೊಬೈಲ್ ಬಳಸಿಕೊಂಡು ಉತ್ತಮವಾಗಿ ವರದಿ ವಾಚನ ಮಾಡುತ್ತಾ ತಮ್ಮ ಕಂಪ್ಯೂಟರ್   ಕಲಿಕೆಯಲ್ಲಿ  ಆದ ಪ್ರಗತಿಯ ಬಗ್ಗೆ ಸಂತಸ ವ್ಕಕ್ತ ಪಡಿಸಿದರು.






ಚಿತ್ರ ಕಲಾ ಶಿಕ್ಷಕರಾದ ಶ್ರೀ ರವಿ ರವರು ಪವರ್ ಡೈರೆಕ್ಟರ್ ಆಪ್ ನಲ್ಲಿ ಬಹಳ ಸೊಗಸಾಗಿ ಮಾಡಿದ ವೀಡಿಯೋ ವರದಿ ಮಂಡಿಸಿದರು. 










ದಿನದ ಆಪ್ ಅನ್ನು ಶಿಕ್ಷಕರಾದ ಶ್ರೀ

 ಮಹಮ್ಮದ್ ಮೋಯಿನ್  ರವರು ಪರಿಚಯಿಸಿದರು , ಎಮ್ ಎಸ್ doc ಆಪ್ ನ್ನು ಬಳಸುವಾ ರೀತಿ ತಿಳಿಸಿದರು.



ವರದಿ ಮಂಡಿಸಿದ ಇಬ್ಬರೂ ಶಿಕ್ಷಕರಿಗೆ ಮತ್ತು ಆಪ್ ಪರಿಚಯಿಸಿದ ಶಿಕ್ಷಕರಿಗೆ ಸಂಪನ್ಮೂಲ ವ್ಜಕಿಗಳು ಮತ್ತು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.




ಸ್ಪ್ರೆಡ್ ಶೀಟ್ ಬಗ್ಗೆ ತಿಳಿಸುತ್ತಾ , ಸ್ಪ್ರೆಡ್ ಶೀಟ್ ಅನ್ನು ಉಪಯೋಗಿಸುವ ಬಗೆಯನ್ನು  ರಿನೇಮ್  ಮಾಡುವ ರೀತಿಯನ್ನು  ಹೇಳಿಕೊಟ್ಟರು.




ಸ್ಪ್ರೆಡ್ ಶೀಟ್ ಬಗ್ಗೆ ಹೇಳುತ್ತಾ

ಸಂಪನ್ಮೂಲ ವ್ಯಕ್ತಿಗಳು ಪದೇ ಪದೇ 

ಹೇಳುತ್ತಿದ್ದರು ಸೆಲೆಕ್ಟ್ ಮಾಡಿ ಸೆಲ್ಲು|

ನಟ ನಟಿಯರ ಸುದ್ದಿ ನೋಡುತ್ತಾ

ಬೇಸತ್ತ ನಮಗೆ ಕಾರಾಗೃಹದ 

ಶಬ್ದ ಕೇಳುತ್ತಲೇ ಇದೆ ಇಲ್ಲೂ||





ಟೀ ವಿರಾಮದಲ್ಲಿ‌ ತಾಯಿ ಮದ್ದಮ್ಮ ಎಲ್ಲಾ ಕಂಪ್ಯೂಟರ್ ಕಲಿಕಾರ್ಥಿಗಳಿಗೆ ಟೀ ವಿತರಿಸಿದರು.



ಟೀ ವಿರಾಮದ ಬಳಿಕ ಕಲಿಕೆಯನ್ನು ಮುಂದುವರೆಸುತ್ತಾ ಕೊಟ್ಟಿರು ದತ್ತಾಂಶದ ಆಧಾರದ ‌ಮೇಲೆ ಅತಿ ಹೆಚ್ಚು ಅತಿ ಕಡಿಮೆ ಅಂಶಗಳನ್ನು ಸುಲಭವಾಗಿ ಪಡೆಯಲು ಸ್ಪ್ರೆಡ್ ಶೀಟ್ ಹೇಗೆ ಸಹಾಯಕ ಎಂದು ಚರಿತಾ ಚಕೋರಿ ಮೇಡಂ  ತಿಳಿಸಿ ಕೊಟ್ಟರು.





ಊಟದ ವಿರಾಮ1.30 ರಿಂದ 


2. 15 ರವರೆಗೆ



ಊಟದ ವಿರಾಮದ ಬಳಿಕ ಸಂಪನ್ಮೂಲ ಶಿಕ್ಷಕರಾದ ಶ್ರೀಮತಿ ಚರಿತಾ ಚಕೋರಿ ಮೇಡಂ ರವರು ಕೊಟ್ಟಿರುವ ಸ್ಪ್ರೆಡ್ ಶೀಟ್ ನಲ್ಲಿ  ಶೇಕಡಾವಾರು ಮತ್ತು ಸರಾಸರಿ ಕಂಡು ಹಿಡಿಯುವ ರೀತಿಯನ್ನು ಹೇಳಿಕೊಟ್ಟರು.


ಮೇಲ್ ಮತ್ತು ಪೀಮೇಲ್ ಸಾರ್ಟಿಂಗ್ ಮಾಡುವ ಲಘು ಚರ್ಚೆ ಆಯಿತು.



ಕಲಿಕಾರ್ಥಿ ಶಿಕ್ಷಕರೊಬ್ಬರು 

ನನ್ನ ಕೇಳಿದರು ಈ ಕಂಪ್ಯೂಟರ್

ಮೇಲೋ ಅಥವಾ ಪೀಮೇಲೊ

ಕಾಡುತಿದೆ ಅನುಮಾನ|

ಮೇಲೇ ಇರಬಹುದು

ನಾನಂದೆ ಕಮಾಂಡ್ ಕೊಟ್ಟ

ತಕ್ಷಣ ವಿಧೇಯ ಗಂಡನಂತೆ

ಕೆಲಸ ಮಾಡುತ್ತದಲ್ಲ ಇಂಚೂರು

ತೋರದೆ ಬಿಗುಮಾನ||





ನಂತರ ನಾವು ಲ್ಯಾಬ್ ನಲ್ಲಿ ಅಸೈನ್ಮೆಂಟ್ ಮಾಡುವಲ್ಲಿ ಮಗ್ನರಾದೆವು.




ಈ ಮಧ್ಯೆ ನಮ್ಮ ತರಬೇತಿ ಕೇಂದ್ರದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಎಸ್ ಆರ್ ಪ್ರಮೀಳಾ ಮೇಡಂ ರವರು ತರಬೇತಿ ಸ್ಥಳಕ್ಕೆ ಭೇಟಿ ನೀಡಿ, ಕೆಲ ಶಿಕ್ಷಕರಿಗೆ ಸರಾಸರಿ ಮತ್ತು ಶೇಕಡಾವಾರು ಮಾಡಲು ಅವರು ಮಾರ್ಗದರ್ಶನ ನೀಡಿದರು.



ನಾಲ್ಕು ಗಂಟೆಗೆ ಸಂಪನ್ಮೂಲ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಸರ್ ರವರು

ಹನ್ನೆರಡನೇ ಅಸೈನ್ಮೆಂಟ್ ಮಾಡುವ ರೀತಿಯನ್ನು ತಿಳಿಸಿದರು.



ಕೊಟ್ಟಿರುವ ದತ್ತಾಂಶವನ್ನು ಸಂಗ್ರಹಿಸಿ ವಿವಿಧ ಬಗೆಯ ಚಾರ್ಟ್ ಮತ್ತು ಗ್ರಾಪ್ ಹಾಕುವ ಬಗ್ಗೆ ವಿವರವಾಗಿ ಪ್ರಾತ್ಯಕ್ಷಿಕೆಯನ್ನು ಮಾಡುತ್ತಾ ವಿವರಿಸಿದರು.









ನಂತರ ನಾವು ಲ್ಯಾಬ್ ನಲ್ಲಿ ನಮ್ಮ ಅಸೈನ್ಮೆಂಟ್ ಮಾಡಲು ಮಗ್ನರಾಗಿದ್ದೆವು ಸಮಯ ಸಂಜೆ 5 .30 ಕ್ಕೆ ನಮ್ಮ ಕಂಪ್ಯೂಟರ್ಗಳನ್ನು ಶಟ್ ಡೌನ್ ಮಾಡಿ ನಮ್ಮ ಮನೆಗಳತ್ತ ಪಯಣ ಬೆಳೆಸಿದೆವು .




ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ

ಕ್ಯಾತಸಂದ್ರ. ತುಮಕೂರು.







22 September 2020

ಶಿಶುಗೀತೆ( computer)


 *ಕಂಪ್ಯೂಟರ್ ಶಿಶುಗೀತೆ*



ಒಂದು ಎರಡು 

ಕಂಪ್ಯೂಟರ್‌ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು‌ ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ

ಸರ್ಕಾರಿ ಪ್ರೌಢಶಾಲೆ

ಕ್ಯಾತಸಂದ್ರ ತುಮಕೂರು

20 September 2020

ಸಿಹಿ ಜೀವಿಯ ಎರಡು ಹನಿಗಳು


 


*ಸಾರ್ಥಕ*


ಸಾಲು ಸಾಲು ಸೋಲು

ಬಂದರೂ ಮೇಲೇಳು

ಪುಟಿದೇಳು|

ನೀ ಗೆದ್ದಾಗ 

ಸಾರ್ಥಕವಾಗುವುದು 

ನಿನ್ನ ಬಾಳು ||



*ಪುಸ್ತಕ_ಮಸ್ತಕ*


ಓದುತಲಿದ್ದರೆ 

ಒಂದೊಂದೇ ಪುಸ್ತಕ|

ನಮಗರಿಯದೆ 

ಜ್ಞಾನ ಸಂಪತ್ತಿನಿಂದ 

ತುಂಬುವುದು 

ನಮ್ಮ ಮಸ್ತಕ ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



19 September 2020

TALP ತರಭೇತಿ ನಾಲ್ಕನೆ ದಿನದ ವರದಿ

 ಸಾರ್ವಜನಿಕ ಶಿಕ್ಷಣ ಇಲಾಖೆ

ಡಯಟ್ ತುಮಕೂರು.


TALP INDUCTION 1 ತರಬೇತಿಯ

ನಾಲ್ಕನೇ ದಿನದ ತರಬೇತಿಯ ವರದಿ 


ವರದಿಗಾರರು 


ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ 

ಕ್ಯಾತಸಂದ್ರ

ತುಮಕೂರು




ನಾಲ್ಕನೇ ದಿನದ ತರಬೇತಿಯು ಮೂರನೇ ದಿನದ ತರಬೇತಿಯ ವರದಿ ಮಾಡುವ ಮೂಲಕ ಆರಂಭವಾಯಿತು ಕ್ಯಾತಸಂದ್ರ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಕುಮಾರಸ್ವಾಮಿ ಸರ್ ರವರು ಆಪ್ ನಲ್ಲಿ ವೀಡಿಯೋ ಮೂಲಕ ಮೂರನೇ ದಿನದ ವರದಿಯನ್ನು ಸುಂದರ ಚಿತ್ರಗಳು ಮತ್ತು ವೀಡಿಯೋಗಳ ಮೂಲಕ ಆಕರ್ಷಕವಾಗಿ ವರದಿ ಮಂಡಿಸಿದರು.


ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ಶಿಕ್ಷಕರು  ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಶ್ರೀಮತಿ  ಚಂದ್ರಕಲಾ ಎಂ ಎ   ಮೇಡಂ ರವರು ಯೋಗ ೩೬೦ ಎಂಬ ಆಪ್ ಪರಿಚಯ ಮಾಡಿದರು ಇದು ಎಲ್ಲರಿಗೂ ಬೇಕಾದ ಆಪ್ .ಎಂದು ಶಿಕ್ಷಕರು ಮೆಚ್ಚುಗೆ ವ್ಕಕ್ತ ಪಡಿಸಿದರು.



ಮೊದಲ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚರಿತ ಚಕೋರಿ ಮೇಡಂ ರವರು NROER ವೆಬ್ಸೈಟ್ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಎಷ್ಟು ಉಪಯುಕ್ತ, ಮತ್ತು ಅದನ್ನು ಬಳಸುವುದು ಹೇಗೆ ಎಂಬುದನ್ನು ಸವಿವರವಾಗಿ ಹೇಳಿ  ಆರನೇ ಪ್ರಾಜೆಕ್ಟ್ ಮಾಡಲು ಹೇಳಿದರು.  




ಕಂಪ್ಯೂಟರ್ ಲ್ಯಾಬ್ ನಲ್ಲಿ ನಾವು ಚಟುವಟಿಕೆಗಳನ್ನು ಮಾಡುತ್ತಿರುವಾಗ ತುಮಕೂರು ಜಿಲ್ಲಾ ಶಿಕ್ಷಣ ಶಿಕ್ಷಣ   ಮತ್ತು ತರಬೇತಿ ಕೇಂದ್ರ ದ ಹಿರಿಯ ಉಪನ್ಯಾಸಕರಾದ ಶ್ರೀ ಮಹೇಶ್ ಸರ್ ರವರು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಶಿಕ್ಷಕರು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಲಿಕೆಯನ್ನು ‌ಸಂತಸದಾಯಕವಾಗುವಂತೆ ಮಾಡಿ ಎಂದು ಕರೆ ನೀಡಿದರು.




ತಾಯಿ ಮುದ್ದಮ್ಮ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಟೀ ನೀಡಿ ಬಾಯಿ ಸಿಹಿ ಮಾಡಿದರು.


ಟೀ ವಿರಾಮದ ಬಳಿಕ ಸಂಪನ್ಮೂಲ ಶಿಕ್ಷಕರಾದ ಶ್ರೀ ಚಂದ್ರ ಶೇಖರ್ ಸರ್ ರವರು ಬ್ರೌಸರ್‌ ನಲ್ಲಿ ಮಾಹಿತಿಯನ್ನು ಸರ್ಚ್ ಮಾಡುವುದು ಹೇಗೆ ? ಬುಕ್ ಮಾರ್ಕ್ ಮಾಡುವುದು ಹೇಗೆ ಎಂಬುದನ್ನು ವಿವರಿಸಿದರು.



 ಮಧ್ಯಾಹ್ನ ೧.೩೦ ರಿಂದ ೨.೧೫ ರ ವರೆಗೆ ಊಟದ ವಿರಾಮ 



ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಚಂದ್ರ ಶೇಖರ್ ಸರ್ ಮಾರ್ಗದರ್ಶನದಲ್ಲಿ ಸರ್ಚ್ ಬಾರ್ ನಲ್ಲಿ ವೆಬ್ ಸೈಟ್ ಹುಡುಕುವಾಗ ಬುಕ್ ಮಾರ್ಕ್ ಮಾಡುವುದು ಹೇಗೆ ? ಎಂದು ತೋರಿಸಿಕೊಟ್ಟರು.




ಊಟದ  ವಿರಾಮದ ನಂತರ  ಏಳನೆಯ ಪ್ರಾಜೆಕ್ಟ್  ಮಾಡಲು ಶುರು ಮಾಡಿದೆವು .






ಶಿಕ್ಷಕರು ತಮ್ಮ ಅಸೈನ್ಮೆಂಟ್ ಮಾಡುತ್ತಿರುವಾಗ ಕ್ಯಾತಸಂದ್ರ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ಸುಧಾ ಕೆ ಇನಾಂದರ್ ರವರು ಮತ್ತು ಸಿ ಪಿ ನಾಗಾಲಾಂಬಿಕಾ ರವರು ಬಂದು   ಕೆಲ ಶಿಕ್ಷಕರಿಗೆ      ಕಂಪ್ಯೂಟರ್ ಕಲಿಯಲು ಮಾರ್ಗದರ್ಶನ ನೀಡಿದರು.


ವಿದ್ಯುತ್ ಕಣ್ಣಾಮುಚ್ಚಲೆಯ ನಡುವೆ ಸಂಪನ್ಮೂಲ ಶಿಕ್ಷಕಿಯಾದ ಚರಿತಾ ಚಕೋರಿ ಮೇಇ ರವರು ಕಹೂಟ್ ಆಪ್ ಬಳಸಿ ಶಿಕ್ಷಕರಿಗೆ ತಿಳಿಯದಂತೆ  ಈ ನಾಲ್ಕು ದಿನದ ತರಬೇತಿಯ ಮೌಲ್ಯಮಾಪನವನ್ನು ಮಾಡಿದರು ಈ ರಸಪ್ರಶ್ನೆ ಆಧಾರಿತ ಮೌಲ್ಯ ಮಾಪನ ದಲ್ಲಿ ಶಿಕ್ಷಕರಾದ ಸಿ ಜಿ ವೆಂಕಟೇಶ್ವರ ರವರು ಮೊದಲ ಸ್ಥಾನ ಗಳಿಸಿದರು.M M ಮತ್ತು ನಾಗಭೂಷಣಾಚಾರ್ ರವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.


ಸಂಜೆ 5 30 ಕ್ಕೆ ಅಂದಿನ ತರಬೇತಿ ಮುಗಿಸಿ ಮನೆ ಕಡೆ ಹೊರಟೆವು



16 September 2020

ಮಾತೆ ಹನಿಗವನ


 ಮಾತೆ 


ನಮ್ಮ ವ್ಯಕ್ತಿತ್ವ 

ಅಳೆಯುವುದು

ನಮ್ಮ ಮಾತೆ|

ಉತ್ತಮಾಗಿ

ಮಾತಾಡಲು

ಕಲಿಸಿದ ನಿನಗೆ

ನಮನ ಮಾತೆ||


ಸಿಹಿಜೀವಿ

15 September 2020

ಟಾಲ್ಪ್ ತರಬೇತಿಯ ಮೊದಲ ದಿನದ ವರದಿ

 ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ ಟಾಲ್ಪ್ ತರಬೇತಿ ಕೇಂದ್ರ


TALP ಇಂಡಕ್ಷನ್ 1 

ತರಬೇತಿಯ ಮೊದಲ ದಿನದ ವರದಿ 





ವರದಿಗಾರರು.


ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ.

ಕ್ಯಾತಸಂದ್ರ

ತುಮಕೂರು








ಗಣಕಯಂತ್ರವ ಮುಟ್ಟದವನ

ಇಲಿಯನೇ ಹಿಡಿಯದವನ

ಕೀಲಿಮಣೆಯನು ಕುಟ್ಟದವನ

ಕರೆದು ಉದ್ದನೆಯ ಪೆನ್ ಡ್ರೈವ್

ನಲ್ಲಿ ಹೊಡೆಯೆಂದ " ಸಿಹಿಜೀವಿ"



ಇಂದು ಕಂಪ್ಯೂಟರ್ ಜ್ಞಾನವಿರದಿರೆ ನಾವು ಅನಕ್ಷರಸ್ಥರೇನೊ ಎಂದು ಅನಿಸುತ್ತದೆ ಆದ್ದರಿಂದ ಸಿಹಿಜೀವಿಯ ವಚನದಂತೆ ನಾವೆಲ್ಲರೂ ಕಂಪ್ಯೂಟರ್ ಕಲಿಯುವುದು ಅಗತ್ಯ ಎಂದು ಲೇಟ್ ಆಗಾದ್ರೂ ಲೇಟೆಸ್ಡ್ ಎಂಬಂತೆ ,ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ ಇಲ್ಲಿ ನಡೆಯುವ TALP ಇಂಡಕ್ಷನ್ ೧ ತರಬೇತಿಗೆ ಹಾಜರಾದೆವು.


ತರಬೇತಿಯ ಆರಂಭವಾದಂತೆ 

ಹೊರಗಡೆ ಬೀಳುತ್ತಿದ್ದವು 

ತುಂತುರು ಹನಿಗಳು|

ಈ ವರದಿ ಮಾಡಲು

ನಾನು ಅಲ್ಲಲ್ಲಿ ಬಳಕೆ

ಮಾಡುವೆನು ಸಿಹಿಜೀವಿಯ ಹನಿಗಳು||


ನಾನು ವರದಿ ಮಾಡುವಾಗ ಏನಾದರೂ kB ಅಷ್ಟು ತಪ್ಪು ಮಾಡಿದರೆ ದಯಮಾಡಿ ನಿಮ್ ಯಾವುದಾದರೂ ಚಿಕ್ಕ ಪೋಲ್ಡರ್ ನಲ್ಲೋ ,ಡ್ರೈವ್ ನಲ್ಲೋ ಹಾಕ್ಕೋಳ್ರಿ.!




ನಮ್ಮ ವಿಷಯಗಳಲ್ಲಿ

ನಮ್ಮ ತರಗತಿಯಲ್ಲಿ

ನಾವೇ ರಾಜ, ರಾಣಿಯರು

ನಮ್ಮದೇ ಕಾರು ಬಾರು|

ಈ ಕಂಪ್ಯೂಟರೆ ತಲೆಗೋಗ್ತಾ ಇಲ್ಲ

ಹೇಳ್ಕೊಡಿ ಒಂಚೂರು||



ಎಂದು ವಿದೇಯ ವಿದ್ಯಾರ್ಥಿಗಳಂತೆ ಬಂದು ಡೆಸ್ಕ್ ಮೇಲೆ ಸಾಮಾಜಿಕ ಅಂತರದಲ್ಲಿ ಕುಳಿತೆವು. 



ನಮ್ಮಲ್ಲಿ ಇದ್ದರೆ ಸೂಕ್ತ ಸಿದ್ದತೆ

ಮಾಡುವ ಕೆಲಸದಲ್ಲಿ ಬದ್ದತೆ ||

ಖಂಡಿವಾಗಿಯೂ ಹಚ್ಚಬಹುದು

ಕಂಪ್ಯೂಟರ್ ಸಾಕ್ಷರತೆಯ ಹಣತೆ|`



ಅಚ್ಚುಕಟ್ಟಾಗಿ ಉದ್ಘಾಟನಾ ಸಮಾರಂಭ  ಆಯೋಜಿಸಿದ್ದು ಸಂಪನ್ಮೂಲ ವ್ಯಕ್ತಿಗಳ ಬದ್ದತೆಗೆ ಮತ್ತು ಸಿದ್ದತೆಗೆ ಹಿಡಿದ ಕನ್ನಡಿಯಾಗಿತ್ತು.




ನಮ್ಮ ಮುಖ್ಯ ಶಿಕ್ಷಕರು

ಟಾಲ್ಪ್ ತರಬೇತಿ

ಕಾರ್ಯಕ್ರಮದ  ನೋಡಲ್|

ತರಬೇತಿಯ ಯಶಸ್ವಿಗೆ

ಸಹಕಾರ ನೀಡಲು 

ಹಿಂದೆ ಮುಂದೆ ನೋಡಲ್ಲ||



ಕಂಪ್ಯೂಟರ್ ಸಾಕ್ಷರತೆಯ ಕುರಿತು ಮಾತನಾಡುತ್ತಾ "ಕೋವಿಡ್ ಕಾಲದಲ್ಲಿ ಪ್ರತಿಯೊಬ್ಬ ಶಿಕ್ಷಕರು ಕಂಪ್ಯೂಟರ್ ಕಲಿತು, ಉತ್ತಮ ಬೋದನೆಗೆ ಸಿದ್ದರಾಗಿ ಅದಕ್ಕೆ ಬೇಕಾದ ಸಕಲ ಸಹಾಯ ಮತ್ತು ಮಾರ್ಗದರ್ಶನ ನೀಡಲು ನಾನು ಸಿದ್ದ "ಎಂದು ಕ್ಯಾತಸಂದ್ರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಎಸ್ .ಆರ್ .ಪ್ರಮೀಳಾ ಮೇಡಂ ರವರು  ಶಿಕ್ಷಕರನ್ನು ಹುರಿದುಂಬಿಸಿದರು.


ಸಂಪನ್ಮೂಲ ಶಿಕ್ಷಕಿಯಾದ ಚರಿತಾ ಚಕೋರಿ ಮೇಡಂ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ "ಕಂಪ್ಯೂಟರ್ ಕಲಿಕೆ ಕೇವಲ ಅಸೈನ್ಮೆಂಟ್ಗೆ ಸೀಮಿತವಾಗದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ "ಎಂದರು .




ಹಿರಿಯ ಸಹಶಿಕ್ಷಕರಾದ  ಹೆಚ್. ಎಲ್ .ಜಗದೀಶ್ ರವರು  "ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಕಂಪ್ಯೂಟರ್ ಕಲಿತು ಶಾಲಾ ತರಗತಿಯ ಕೋಣೆಗಳಲ್ಲಿ ಬಳಸುವೆವು "ಎಂದು ಶಿಭಿರಾರ್ಥಿಗಲ ಪರವಾಗಿ ಭರವಸೆ ನೀಡಿದರು.





ತರಬೇತಿಯ ಅವಧಿಯಲ್ಲಿ

ಸರ್ಕಾರ ಶಿಭಿರಾರ್ಥಿಗಳಿಗೆ

ನೀಡುವುದಂತೆ ಭತ್ಯೆ

ದಿನಕ್ಕೆ ನೂರು|

ಇಂತಹ ಅಗತ್ಯವಾದ ಜ್ಞಾನ

ಸುಲಭವಾಗಿ ಸಿಗದು

ನಾವೇ  ದಿನಕ್ಕೆ ಕೊಟ್ಟರೂ ಸಾವಿರಾರು||



ಉದ್ಘಾಟನಾ ಸಮಾರಂಭದ ನಂತರ ತರಬೇತಿಯನ್ನು ಮುಂದುವರೆಸಿದರು ಸಂಪನ್ಮೂಲ ಶಿಕ್ಷಕರು.



ಇವರು ರಾಜ್ಯ ಮತ್ತು 

ರಾಷ್ಟ್ರ ಮಟ್ಟದ ಸಂಪನ್ಮೂಲ

ಶಿಕ್ಷಕರ (CC)ಕಾರ್ಬನ್ ಕಾಪಿ||

ಸುಲಭವಾಗಿ ಕಂಪ್ಯೂಟರ್

ಹೇಳಿಕೊಡ್ತಾರೆ ಕುಡಿಯುತ್ತಾ ಕಾಫಿ||



ಮೊದಲು ಕಂಪ್ಯೂಟರ್ ಬಿಡಿ ಭಾಗಗಳನ್ನು ಪರಿಚಯ ಮಾಡುತ್ತಾ ಹೊಸ ಕಲಿಕಾರ್ಥಿಗಳಿಗೆ ಧೈರ್ಯ ಹೇಳಿದರು ಸಂಪನ್ಮೂಲ ವ್ಯಕ್ತಿಗಳಾದ C C ಮೇಡಂ



ಅವರು ಚಂದಿರನಿಗಿಂತ

ತಂಪು 

ಸುಲಲಿತವಾಗಿ ಕೀಬೋರ್ಡ್

ಮೇಲೆ ಹರಿದಾಡುವುದು ಅವರ ಕರ|

ಅವರೇ ನಮ್ಮ ಸಂಪನ್ಮೂಲ ಶಿಕ್ಷಕರು

ಚಂದ್ರ ಶೇಖರ||




ಇವರು ಟಾಲ್ಪ್ ಸಂಪನ್ಮೂಲ

ವ್ಯಕ್ತಿಗಳಾದ ಮೇಡಂ C C||

ಯಾರ್ ಬೇಕಾದ್ರೂ ಕಲಿತಾರೆ

ಕಂಪ್ಯೂಟರ್ ಯಾಕೆಂದರೆ

ಹೆಳ್ಕೊಡ್ತಾರೆ ಬಿಡ್ಸಿ ಬಿಡ್ಸಿ||





ಕಂಪ್ಯೂಟರ್ ಭಾಗಗಳ ಬಗ್ಗೆ ಪರಿಚಯಿಸಿದ ನಂತರ ನಮ್ಮ ಇ ಮೇಲ್ ಸೃಷ್ಟಿ ಮಾಡಲು ತಿಳಿಸಿಕೊಟ್ಟು ಗೂಗಲ್ ಡ್ರೈವ್ ಬಗ್ಗೆ ತಿಳಿಸಿದರು.


ಸಂಪನ್ಮೂಲ ವ್ಯಕ್ತಿ ಅಂದರು

ಮೊದಲಿದ್ದ ಮೂವತ್ತೆಂಟು 

ಅಸೈನ್ಮೆಂಟ್ ಗಳಿಂದ 

ಇಳಿಸಿದ್ದಾರೆ ಈಗ ಕೇವಲ 

ಹದಿನಾರು|

ಕೊನೆಯ ಬೆಂಚಿನ ಶಿಬಿರಾರ್ಥಿ

ಗೊನಗಿದರು 

ಇನ್ನೂ ಕಡಿಮೆ ಮಾಡಿ

ಕೊಡಬಹುದಿತ್ತು ಕೇವಲ ಆರು||


ಅಸೈನ್ಮೆಂಟ್ ಗಳು ನಾವು ಕಲಿಯಲು ಉತ್ತಮ ಸಾಧನಗಳು ಕಂಪ್ಯೂಟರ್ ಬಳಸುತ್ತಾ ಹೋದಂತೆ ಅದರ ಆಳ ,ಅಗಲ ತಿಳಿಯುತ್ತದೆ ನಮ್ಮ ಕಲಿಕೆ ದೃಢೀಕರಣಗೊಳ್ಳುತ್ತದೆ . ಎಲ್ಲಾ ಅಸೈನ್ಮೆಂಟ್ ಗಳನ್ನು ಗಮನವಿಟ್ಟು ಮಾಡೋಣ.


ಟೀ ಕೊಡಲು ತರಬೇತಿ

ಕೋಣೆಯೊಳಗೆ ಬಂದರು

ಮದ್ದಮ್ಮ ತಾಯಿ|

ಮನದಲ್ಲೆ ಧನ್ಯವಾದಗಳ

ಹೇಳಿದರು ಎಲ್ಲರೂ

ಸಿಹಿ ಮಾಡಿದ್ದಕ್ಕೆ ಬಾಯಿ||




ಟೀ ವಿರಾಮದ ನಂತರ  ಕಂಪ್ಯೂಟರ್ ಲ್ಯಾಬ್ ಗೆ ಕರೆದುಕೊಂಡು ಹೋದ ಸಂಪನ್ಮೂಲ ವ್ಯಕ್ತಿಗಳು ಕಂಪ್ಯೂಟರ್ ಆನ್ ಮಾಡಲು ಹೇಳಿದರು . ನಯವಾದ ನೆಲದಲ್ಲಿ ನಡೆಯಲು ಬರದವರನ್ನು ಅಮೇಜಾನ್ ಕಾಡಿನಲ್ಲಿ ಚಾರಣ ಹೋಗಲು ಹೇಳಿದಂತೆ ಕೆಲವರು ಸಂಪನ್ಮೂಲ ಶಿಕ್ಷಕರತ್ತ ನೋಡಿದರು .

ಕ್ರಮೇಣ ಎಲ್ಲರೂ ಕಂಪ್ಯೂಟರ್ ಆನ್ ಮಾಡಿ ಈ ಮೇಲ್ ಲಾಗಿನ್ ಆಗಿ  ,ಗೂಗಲ್ ಡ್ರೈವ್ ಓಪನ್ ಮಾಡಿ ಪೋಲ್ಡರ್ ಮಾಡಿದರು .


ಇಲ್ಲಿ ಓಪನ್ ಮಾಡಬೇಕು

ಡ್ರೈವ್ , ಪೋಲ್ಡರ್ |

ನಾನು ನನ್ನ ಮನೆಯಲ್ಲಿ

ತಿರಿವಿಯೂ ಹಾಕುವುದಿಲ್ಲ

ಕ್ಯಾಲೆಂಡರ್||


ಎಂದು ಮೂಲೆಯಲ್ಲಿ ಯಾರೊ ಗೊನಗಿದ್ದು ಕೆಲವರಿಗೆ ಮಾತ್ರ ಕೇಳಿತು.




ಮಧ್ಯಾಹ್ನದ ಊಟದ ವಿರಾಮದ ನಂತರ ,ನಮ್ಮ ಹೊಟ್ಟೆ ತುಂಬಿದ ನಂತರ ಗೂಗಲ್ ಪಾರ್ಮ್ ತುಂಬಲು ಹೇಳಿದರು . ಮಧ್ಯಾಹ್ನದ ಮೊದಲ. ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗ ಶ್ರೀ ಚಂದ್ರಶೇಖರ ಸರ್ ರವರು ಮೊದಲ ಅಸೈನ್ಮೆಂಟ್ ಮಾಡುವ ರೀತಿಯನ್ನು ವಿವರಿಸಿದರು.





ಒಂದು ವಸ್ತುವನ್ನು ವಿವಿಧ ಆಯಾಮಗಳಲ್ಲಿ ಫೋಟೋ ತೆಗೆದು ಒಂದು ಪೋಲ್ಡರ್ ಗೆ ಹಾಕಿ ಅದನ್ನು ಗೂಗಲ್ ಡ್ರೈವ್ ಗೆ  ಸೇವ್ ಮಾಡುವ ರೀತಿಯನ್ನು ತಿಳಿಸಿದರು.





ನಾವು ಶಿಬಿರಾರ್ಥಿಗಳು ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ ‌ಫೋಟೋಗಳನ್ನು ತೆಗೆದು ಪೋಲ್ಡರ್ ಗೆ ಅಪ್ಲೋಡ್ ಮಾಡುವಲ್ಲಿ ಮಗ್ನರಾಗಿದ್ದೆವು ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಅಸ್ತಂಗತನಾದದ್ದು ಗಮನಕ್ಕೆ ಬಂದು ನಮ ಸಿಸ್ಟಮ್ ಗಳನ್ನು ಶಟ್ಡೌನ್ ಮಾಡಿ ಮನೆಯ ಕಡೆ ಹೊರಟೆವು .



ಕಡೆಯದಾಗಿ ಒಂದು ಮಾತು ವೃತ್ತಿಭಾಂಧವರೆ 



ಮನುಷ್ಯನ

 ೧ ಆಯಷ್ಯ,

೨ ಕರ್ಮ 

೩ಹಣ,

೪ವಿದ್ಯೆ,

೫ ಮರಣ 

ಈ ಐದು  ಗರ್ಭದಲ್ಲಿ ಇರುವಾಗ ನಿಶ್ಚಯವಾಗಿರುತ್ತದೆ. ಅದೇ ಪ್ರಕಾರವಾಗಿ ನಾವು ಶಿಕ್ಷಕರಾಗಿ ಕಾರ್ಯ ಮಾಡುವುದು ಹಾಗೂ ಈ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಸಹ ಪೂರ್ವ ನಿಶ್ಚಿತವಾಗಿದೆ . ಆದ್ದರಿಂದ ಈ ತರಬೇತಿಯನ್ನು ಕ್ರಮಬದ್ಧವಾಗಿ ಪಡೆದು ಅದನ್ನು ನಮ್ಮ ಮಕ್ಕಳಿಗೆ ತಲುಪಿಸೋಣ.




ನಾವು ಕಾಲ ಕಾಲಕ್ಕೆ

ಆಗುತ್ತಿರಬೇಕು ಅಪ್ಡೇಟ್|

ಇಲ್ಲವಾದರೆ ಸಮಾಜದಲ್ಲಿ

ನಾವಾಗಿಬಿಡುವೆವು ಔಟ್ ಡೇಟ್||


ಸ್ನೇಹಿತರೆ ಇದು ಮಾಹಿತಿ ತಂತ್ರಜ್ಞಾನದ ಯುಗ ಆಧುನಿಕ ಯುಗ , ಇಂತಹ ಸಂಧರ್ಭದಲ್ಲಿ ದಿನಕ್ಕೊಂದು ಹೊಸ ಸಂಶೋಧನೆಗಳು ನಡೆಯುತ್ತಾ ಕೃತಕ ಬುದ್ಧಿಮತ್ತೆ ನಮಗೆ ಸವಾಲಾಗುವ ಕಾಲ ಸನಿಹವಿದೆ ಆದ್ದರಿಂದ ಪ್ರತಿದಿನವೂ ನಾವು ಹೊಸತು ಕಲಿಯುವುದು ಇಂದಿನ ಅವಶ್ಯಕತೆ, ಅದರಲ್ಲೂ ಶಿಕ್ಷಕರಾದ ನಮಗಂತೂ ಬಹಳ ಅಗತ್ಯ. 

ಬನ್ನಿ ಕಲಿಯೋಣ , ಕಲಿಸೋಣ ಬೆಳೆಯೋಣ 



ಸರ್ವರಿಗೂ ನಮಸ್ಕಾರಗಳು


ಸಿಹಿಜೀವಿ


ಸಿ ಜಿ ವೆಂಕಟೇಶ್ವರ

ತುಮಕೂರು