ಹನಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

28 ಮೇ 2025

ಸಿಹಿಜೀವಿಯ ನುಡಿ

 


ಸಿಹಿಜೀವಿಯ ನುಡಿ.


ಬದ್ಧತೆ ಇಲ್ಲದಿದ್ದರೆ ಯಾವುದೇ 

ಕೆಲಸ ಆರಂಭ ಮಾಡಲಾಗದು|

ನಿರಂತರ ಪ್ರಯತ್ನ ಇಲ್ಲದಿದ್ದರೆ

ಯಾವುದೇ ಗುರಿ ಮುಟ್ಟಲಾಗದು||


ಸಿಹಿಜೀವಿ ವೆಂಕಟೇಶ್ವರ

05 ಮೇ 2025

ಕನ್ನಡಿಗರ ಅಭಿಮಾನ


 



ಸೋನು ನಿಗಮ್ ನಿನ್ನ ಹೆಸರಿನಲ್ಲಿ ಮಾತ್ರ ಬಂಗಾರವಿದ್ದರೆ ಸಾಲದು|

ಕನ್ನಡಿಗರ ಅವಮಾನಿಸುವ ನಿನಗೆ

ನಮ್ಮ ಅಭಿಮಾನ ದೊರಕದು||


01 ಮೇ 2025

ಪ್ರಕೃತಿ ಹನಿಗವನ


 ಮಾನವ ನಿರ್ಮಿತ ಆಕೃತಿಗಳಿಗಿದೆ ಮಿತಿ। ನಾವಳಿದರೂ ಸದಾ ಉಳಿವುದು ಪ್ರಕೃತಿ॥


ಸಿಹಿಜೀವಿ ವೆಂಕಟೇಶ್ವರ

ಕಾರ್ಮಿಕ.ಹನಿಗವನ

 


ನಾನಲ್ಲ  ದರ್ಪತೋರತ

ಶೋಷಣೆಯ ಮಾಡುವ

ದೊಡ್ಡ ನಾಯಕ|

ದಿನವೂ ನನ್ನ ಪಾಡಿನ 

ಕೆಲಸವನ್ನು ಶ್ರದ್ದೆಯಿಂದ

ಮಾಡುವ ಕಾರ್ಮಿಕ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

28 ಏಪ್ರಿಲ್ 2025

ಕೇಸರಿ ಟೋಪಿ...ಹನಿಗವನ




 ಮೊದಲೇ ಸುಮ್ಮನಿರಲ್ಲ ನಾವು  ಕೋಹ್ಲಿ 

ಅಭಿಮಾನಿಗಳು ಈಗ ಇನ್ನೂ ಹೆಚ್ಚು 

ಮಾಡ್ತೇವೆ  ಸದ್ದು|

ಕಾರಣ   ಅತಿ ಹೆಚ್ಚು ರನ್ ಹೊಡೆದದ್ದಕ್ಕೆ 

ಸಿಕ್ಕಿದೆಯಲ್ಲ ನಮ್ಮ ಕಿಂಗ್ ಗೆ 

ಟೋಪಿ (purple cap)ನೇರಳೆ ಬಣ್ಣದ್ದು|

18 ಏಪ್ರಿಲ್ 2025

ಸಿಹಿಜೀವಿಯ ಹನಿ


 


ಸಿಹಿಜೀವಿಯ ಹನಿ 


ಎನಿತು ಕಾಲ ಕುಳಿತೇ 

ಇರುವೆ ಚಿಂತಿಸುತಾ| 

ಏಳು ಎದ್ದೇಳು ಸಂತಸಪಡೆ 

ಕಾಯಕ ಮಾಡುತಾ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


27 ಮಾರ್ಚ್ 2025

ಅನುಭವಿ ಮಾರಾಟಗಾರ .ಹನಿಗವನ



 

ಅನುಭವಿ ಮಾರಾಟಗಾರ 

ಮಾರಾಟ ಪ್ರತಿನಿಧಿ ಹುದ್ದೆಯ
ಸಂದರ್ಶನದಲ್ಲಿ ಪ್ರಶ್ನೆ ಕೇಳಿದರು
ನಿನಗೆ ಮಾರಾಟದಲ್ಲಿ ಇರುವ 
ಅನುಭವವೇನು|
ಅವನು ಆತ್ಮವಿಶ್ವಾಸದಿಂದ  ಉತ್ತರಿಸಿದ
ನಾನೀಗಾಗಲೆ ನಮ್ಮ ಮನೆ, ಕಾರು, ಬೈಕ್ ಹಾಗೂ ಹೆಂಡತಿಯ ಒಡವೆ ಮಾರಿರುವೆನು||

ಸಿಹಿಜೀವಿ ವೆಂಕಟೇಶ್ವರ
ತುಮಕೂರು

23 ಮಾರ್ಚ್ 2025

ಆಸ್ತಿಕರ ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.



 ಆಸ್ತಿಕರ  ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.


ತುಮಕೂರಿನಿಂದ ರಾಮನಗರ ತಲುಪಿ ಅಲ್ಲಿನ ಹೈವೆ ಪಕ್ಕದ ಕಾಮತ್ ಹೋಟೆಲ್ ‌ನಲ್ಲಿ ತಿಂಡಿ ತಿಂದು 

ಮಗಳನ್ನು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ ದಿನ ಅಲ್ಲಿಂದ ಹದಿಮೂರು ಕಿಲೋಮೀಟರ್ ದೂರವಿರುವ ಎಸ್ ಆರ್ ಎಸ್ ಬೆಟ್ಟ ನೋಡಲು ಕಾರ್ ನಲ್ಲಿ ಹೊರಟೆವು.

ಶ್ರೀ ರೇವಣ್ಣ ಸಿದ್ದೇಶ್ವರ ಅಥವಾ  SRS ಬೆಟ್ಟಗಳು ಎಂದು ಕರೆಯಲ್ಪಡುವ  ಸುಂದರವಾದ ಬೆಟ್ಟ ಶ್ರೇಣಿಯು ರಾಮನಗರದಲ್ಲಿರುವ ಅತ್ಯಂತ ಪ್ರಸಿದ್ಧ ಸಾಹಸಮಯ ಸ್ಥಳಗಳಲ್ಲಿ ಒಂದಾಗಿದೆ.ಇದು ಧಾರ್ಮಿಕ ಪ್ರಸಿದ್ಧ ಸ್ಥಳವೂ ಹೌದು.  ವಾರಾಂತ್ಯದ ವಿಹಾರಮಾಡಲು ಚಾರಣಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. 

ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ 12.30 ಆಗಿತ್ತು.ಬಿಸಿಲಲ್ಲಿ ಬೆಟ್ಟ ಹತ್ತಬೇಕೋ ಬೇಡವೋ ಎಂಬ ಗೊಂದಲದಲ್ಲೆ ನಿಧಾನವಾಗಿ ಬೆಟ್ಟ ಏರಲು ತೀರ್ಮಾನಕ್ಕೆ ಬಂದೆವು.

ಬೆಟ್ಟ ಹತ್ತುವಾಗ ನಮಗೆ ಸಿಗುವುದು ಭೀಮೇಶ್ವರ ದೇವಾಲಯ.

ಪಾಂಡವರು ಅಜ್ಞಾತವಾಸದಲ್ಲಿರುವಾಗ ಈ ಬೆಟ್ಟದಲ್ಲಿ ಕೆಲ ಕಾಲ ತಂಗಿದ್ದು ಆ ಸಂದರ್ಭದಲ್ಲಿ ಬೆಟ್ಟದ ಮದ್ಯಭಾಗದಲ್ಲಿ ಭೀಮಸೇನನಿಂದ ಸ್ಥಾಪಿಸಿದ ಶಿವಲಿಂಗವಿದ್ದು ಇಂದು ಅದೇ ಭೀಮೇಶ್ವರ ದೇವಾಲಯವಾಗಿ ಪ್ರಸಿದ್ದಿಯಾಗಿದೆ. ನಾವು ಅಲ್ಲಿಗೆ ಹೋದಾಗ ದೇವಾಲಯ ಮುಚ್ಚಿತ್ತು.ಹೊರಗಿನಿಂದ ಕೈ ಮುಗಿದು ಬೆಟ್ಟ ಏರಲು ಮುಂದೆ ಸಾಗಿದೆವು. ಅಲ್ಲಲ್ಲಿ ವಾನರ ಸೇನೆ ನಮಗೆ ಸ್ವಾಗತ ಕೋರುತ್ತಾ ನಮ್ಮ ಕೈಯಲ್ಲಿರುವ ತಿನಿಸುಗಳ ಕಡೆ ಹೆಚ್ಚು ಗಮನ ಹರಿಸಿ ಮುಲಾಜಿಲ್ಲದೆ ಕಿತ್ತುಕೊಂಡು ಇದು ನಮ್ದೇ  ಎಂದು ನಮ್ಮ ಮುಂದೆಯೇ ತಿನ್ನುತ್ತಿದ್ದವು.


‌ಬೆಟ್ಟ ಏರಲು ಬಿಸಿಲು ಮಳೆಯಿಂದ ಭಕ್ತರ ರಕ್ಷಿಸಲು ಚಾವಣಿಯ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟ ಏರಲು ಕಷ್ಟ ಆಗಲಿಲ್ಲ. ಅಲ್ಲಲ್ಲಿ ಬಹಳ ಕಡಿದಾದ ಮೆಟ್ಟಿಲು ಹತ್ತುವಾಗ ಸ್ವಲ್ಪ ಬೆವರು ಬಂದು ಏದುಸಿರು ಬಿಡುತ್ತಾ ಹತ್ತಿದೆವು.ಮೇಲೆ ಹೋದಂತೆ ಕೆರೆಗಳು, ತೋಟಗಳು ಸಣ್ಣ ಪುಟ್ಟ ಗುಡ್ಡಗಳು ಬಹಳ ಸುಂದರವಾಗಿ ಕಂಡವು.ದೂರದಲ್ಲಿ ರಾಮನಗರದ ಕೆಲ ಕಟ್ಟಡಗಳು ಸಹ ಕಂಡವು.ಬೆಟ್ಟದ ಮೇಲೇರಿ ಪ್ರಕೃತಿಯ ಸೌಂದರ್ಯವನ್ನು ನಮ್ಮ ಕಣ್ಣುಗಳಲ್ಲಿ ಹಾಗೂ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದೆ.ಮೊಬೈಲ್ ನೆಟ್ವರ್ಕ್ ಚೆನ್ನಾಗಿದ್ದರಿಂದ ನಮ್ಮ ಮುಖಪುಟ  ಬಂಧುಗಳಿಗೆ ಲೈವ್ ನಲ್ಲಿ ಎಸ್ ಆರ್ ಎಸ್ ಸೌಂದರ್ಯ ತೋರಿಸಿದೆ.

ಬೆಟ್ಟದ ತುದಿಯಿಂದ ಬಲಕ್ಕೆ ತಿರುಗಿ ನೂರು ಮೀಟರ್ ಕೆಳಗಿಳಿದರೆ  ರೇವಣ ಸಿದ್ದೇಶ್ವರ ದೇವಾಲಯ ತಲುಪಬಹುದು. ರೇವಣ ಸಿದ್ದೇಶ್ವರ ರವರು   ದಿವ್ಯ ತಪಸ್ಸನ್ನು ಮಾಡಿ ಲಿಂಗದ ರೂಪದಲ್ಲಿ ಇಲ್ಲಿ ನೆಲೆನಿಂತಿದ್ದಾರೆ.   ಅರ್ಧ ಅಡಿ ಎತ್ತರದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ಉದ್ಬವ ಶಿವಲಿಂಗ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಸಮೀಪ ಮೊರೆ ಬಸವನ ವಿಗ್ರಹ ಹಾಗೂ ಎಂದೂ ಬತ್ತದ ದೊಣೆ ಇದೆ. ಬುಡದಲ್ಲಿ ರೇಣುಕಾಂಬ ಹಾಗೂ ವೀರಭದ್ರೇಶ್ವರ ದೇವಾಲಯಗಳಿವೆ.


ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಬೆಟ್ಟ ಇಳಿಯುವಾಗ ಅಲ್ಲಲ್ಲಿ ವಿಶ್ರಾಂತಿ ಪಡೆದು ಕೊನೆಗೂ ಬೆಟ್ಟ ಇಳಿದು ಕಾರ್ ಹತ್ತುವಾಗ  ಹೊಟ್ಟೆ ತಾಳ ಹಾಕುತ್ತಿತ್ತು.ರಾಮನಗರಕ್ಕೆ ಹಿಂತಿರುಗುವಾಗ ಮಾರ್ಗ ಮಧ್ಯದ ಹೋಟೆಲ್ ನಲ್ಲಿ ಊಟ ಮಾಡಿ ಮನೆಯ ಕಡೆ ಪಯಣ ಬೆಳೆಸಿದೆವು.

ಒಂದು ದಿನದ ಪ್ರವಾಸ, ಚಾರಣ ಮಾಡುವವರಿಗೆ ಎಸ್ ಆರ್ ಎಸ್ ಬೆಟ್ಟ ಬಹಳ ಸುಂದರ ಸ್ಥಳ ನೀವು ಒಮ್ಮೆ ಹೋಗಿ ಬನ್ನಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


.

21 ಮಾರ್ಚ್ 2025

ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ


 


ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ 


ನೆನಪು.


ಗೆಳೆಯ ಕೇಳಿದ ನೆನಪಿದೆಯಾ

ನಿನಗೆ, ನಾಕನೇ ತರಗತಿಯಲ್ಲಿ

ನಮ್ಮ ಜೊತೆಯಲ್ಲಿ ಓದಿದ ಕೋಮಲ|

ಅವನು ಉತ್ತರಿಸಿದ ಅದೆಲ್ಲಾ

ನೆನಪಿರುವ ನಿನಗೆ ಏಕೆ ನೆನಪಿಲ್ಲ?

ಕಳೆದ ತಿಂಗಳು  ನನ್ನಿಂದ ಪಡೆದ ಐನೂರು ರೂಪಾಯಿ ಸಾಲ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು






19 ಮಾರ್ಚ್ 2025

ಪ್ರೀತಿ ನಿವೇದನ .ಹನಿಗವನ


 


ಪ್ರೀತಿ ನಿವೇದನ 


ನೀನೇ ನನ್ನ ಪ್ರಾಣ,

ರಾಣಿಯಂಗೆ ನೋಡಿಕೊಳ್ಳುವೆ

ಒಪ್ಪಿಕೊಂಡು ಬಿಡು ನನ್ನ

ಪ್ರೀತಿಯನೆಂದು ಹುಡುಗ

ಮಾಡಿದನು ಪ್ರೀತಿ ನಿವೇದನ|

ಹುಡುಗಿ ಉತ್ತರಿಸಿದಳು 

ಪ್ರೀತಿಯ ಮಾತು ಆಮೇಲೆ

ಮೊದಲು ನಿನ್ನ ಬಳಿ

ಇದೆಯೋ ಇಲ್ಲವೋ ಹೇಳು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 ಮಾರ್ಚ್ 2025

ಡೈರಿ ಮಿಲ್ಕ್ . ಹನಿಗವನ

 




ಡೈರಿ ಮಿಲ್ಕ್


ಲವ್ ಮಾಡುವಾಗ 

ಅವನು ಅವಳಿಗೆ

ದಿನವೂ ತಂದು ಕೊಡುತ್ತಿದ್ದ 

ಡೈರಿ ಮಿಲ್ಕು|

ಮದುವೆಯಾದ ನಂತರ 

ಈಗ ತಂದುಕೊಡುತ್ತಿದ್ದಾನೆ

ಡೈಲಿ ಮಿಲ್ಕು||


ಸಿಹಿಜೀವಿ ವೆಂಕಟೇಶ್ವರ

07 ಮಾರ್ಚ್ 2025

ಸಿಹಿಜೀವಿಯ ಹನಿ.

 

ಬೇರೆಯವರ ಜೀವನದಲ್ಲಿ ನೀವು

ನೀಡದಿದ್ದರೂ ಪರವಾಗಿಲ್ಲ ಅಕ್ಕರೆ|

ಆದರೆ ಉಳಿಸಿ ಹೋಗದಿರಿ ಮನದಲ್ಲಿ

ಮಾಯಲಾಗದ ಗಾಯದ ಬರೆ|

25 ಫೆಬ್ರವರಿ 2025

ಮಾತು ೨


 ಹೆದರಿಸುವವರ ಮುಂದೆ

ನಮ್ಮ ಮಾತಾಗಲಿ ಕತ್ತಿ|

ಹಿರಿಯರ ಮುಂದೆ 

ನಮ್ಮ ನುಡಿಯಾಗಲಿ ಹತ್ತಿ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


     

ಮಾತು..


 


ಮಾತು...


 ವೈರಿಗಳ ಮುಂದೆ 

ನಮ್ಮ ಮಾತಿಗಿರಲಿ ಗತ್ತು|

ಆತ್ಮೀಯರ ಮಂದೆ 

ನಮ್ಮ ಸೊಲ್ಲಾಗಲಿ ಮುತ್ತು

13 ಫೆಬ್ರವರಿ 2025

ಸಿಹಿಜೀವಿಯಿಂದ ನಿತ್ಯ ಸತ್ಯ.


ಸಿಹಿಜೀವಿಯಿಂದ   ನಿತ್ಯ ಸತ್ಯ.


ನಾನು  ಎಷ್ಟೇ ಬಾರಿ ಮಾಡಿದ್ದರೂ

ಪರರಿಗೆ, ಬಂಧುಗಳಿಗೆ ಸಹಾಯ|

ಒಮ್ಮೆ ನಿರಾಕರಿಸಿದರೆ ಬೈಯ್ದೇ

ಬಿಡುತ್ತಾರೆ ಅಯ್ಯೋ ಇವ್ನ ಮನೆಕಾಯ||


ಸಿಹಿಜೀವಿ ವೆಂಕಟೇಶ್ವರ

 

11 ಫೆಬ್ರವರಿ 2025

ಹನಿಗವನ


 ನಿಯಂತ್ರಣದಲ್ಲಿಟ್ಟುಕೊಂಡರೆ ನಿನ್ನ ಮನಸ್ಸು ಮುಂದೊಂದು ದಿನ ನನಸಾಗುವುದು ಕನಸು


ಸಿಹಿಜೀವಿ ವೆಂಕಟೇಶ್ವರ

25 ಜನವರಿ 2025

ಕುಣಿಯೋಣ ಬಾರ .ಹನಿಗವನ


 

#ಹನಿಗವನ

#ಕುಣಿಯೋಣುಬಾರ

ಸೋಮವಾರದಂದು ಕೆಲಸಕ್ಕೆ ಹೋಗಲು ಮನಸ್ಸು ಭಾರ। ಶನಿವಾರ,ಭಾನುವಾರವಾದರೆ ಮನ ಹೇಳುವುದು ಕುಣಿಯೋಣ ಬಾರ॥

ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara
#ಕವನ #kavana #kannada #poem

02 ಜನವರಿ 2025

ಸಂಕಲ್ಪ .ಹನಿಗವನ


 

#ಸಂಕಲ್ಪ

ನಮ್ಮ ಹೊಸ ವರ್ಷದ ಸಂಕಲ್ಪಗಳು.
ಮೊದಲ ದಿನ ಜಿಮ್ ||
ಎರಡನೇ ದಿನ ಹೋಮ್||

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara #newyear2025 #resolution #jokes #jokesfordays

19 ನವೆಂಬರ್ 2024

ಮುತ್ತಿನಂಥಹ ಮಾತು..


 

#ಮುತ್ತಿನಂಥಮಾತು..

ಸಂಬಂಧಗಳು ಯಾವಾಗಲೂ ಆಗಿರಬೇಕು ಶ್ರೀಗಂಧ|
ಹಲವಾರು ತುಂಡುಗಳಾದರೂ
ಬೀರುತ್ತಿರಬೇಕು  ಸುಗಂಧ||

ಸಿಹಿಜೀವಿ ವೆಂಕಟೇಶ್ವರ..
#sihijeeviVenkateshwara
#personaldevelopment #quotes #articlewriting #tumkur