30 January 2021

ಪ್ರದಕ್ಷಿಣೆ ಹನಿ

 

*ಪ್ರದಕ್ಷಿಣೆ*

ಮದುವೆಗೂ ಮುನ್ನ
ಮಗ ಅಮ್ಮನ ಸುತ್ತ
ಹಾಕುತ್ತಿದ್ದ ಪ್ರದಕ್ಷಿಣೆ|
ಮದುವೆಯಾದ ಮೇಲೆ
ಬೇರೆ ಮನೆ ಮಾಡಿದ
ಹೆಂಡತಿಯ ಪ್ರೀತಿಗೆ
ಹಾಕಲು ದಕ್ಷಿಣೆ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

27 January 2021

ಹಾಯ್ಕು

 

*ಹಾಯ್ಕು*

ನೀರೆಯರು
ಸೀರೆಯಿಂದ ದೂರ
ಪಾಶ್ಚಾತ್ಯ ಮೋಹ

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

ಸಿಹಿಜೀವಿಯ ಹಾಯ್ಕುಗಳು

 ಹಾಯ್ಕುಗಳು 

ಗಾಳಿಗೂ ಕೋಪ

ತಿರ್ರನೆ ತಿರುಗಿದೆ

ಸುಂಟರಗಾಳಿ



ಸೂತ್ರದಾರನ

ಗಾಳಿಪಟ ಹಾರಾಟ

ಗಗನಚುಂಬಿ 



ಜೀವಾನಿಲವು

ರೊಚ್ಚಿಗೆದ್ದಿದೆ ನೋಡು

ಸುಂಟರಗಾಳಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಸಿಹಿಜೀವಿಯ ಹನಿ

 *ಸಿಹಿಜೀವಿಯ ಹನಿ*


ಅಧಿಕಾರ ,ಅಂತಸ್ತು

ಸಂಪತ್ತು, ಅದೃಷ್ಟದಿಂದ

ಲಭಿಸಿದರೆ ಏರುವುದು

ಮಧ| 

ನಮ್ಮ ಬುದ್ಧಿವಂತಿಕೆಯಿಂದ

ಕಷ್ಟಪಟ್ಟು ಗಳಿಸಿದ 

ಅಲ್ಪದರಲ್ಲೂ ಸಿಗುವುದು

ಆನಂದ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


25 January 2021

ಮತದಾನ ಕುರಿತ ೫ ಹನಿ

 *ರಾಷ್ಟ್ರೀಯ ಮತದಾರರ ದಿನದ ಕುರಿತಾದ ಸಿಹಿಜೀವಿ ಯ ಹನಿಗಳು*



ಮಾರಿಕೊಳ್ಳದಿರು

ನೋಟಿಗಾಗಿ ನಿನ್ನ

ಓಟನ್ನು |

ಅರ್ಹ ಅಭ್ಯರ್ಥಿಗೆ

ತಪ್ಪದೇ ಒತ್ತು

ಇ. ವಿ .ಎಮ್ 

ಬಟನ್ನು ||



ಮಾಡೋಣ ನಾವೆಲ್ಲರೂ

ಕಡ್ಡಾಯವಾಗಿ 

ಮತದಾನ|

ಎತ್ತಿ ಹಿಡಿಯೋಣ

ನಮ್ಮ ಸಂವಿಧಾನ||




ನಿಮ್ಮ ಮತವನ್ನು

ಯಾರಿಗೂ

ಮಾರಬೇಡಿ|

ಆಮಿಷಗಳಿಗೆ ಮರುಳಾಗಿ

ಯಾಮಾರಬೇಡಿ||




ಮತದಾನ ಮಾಡಿ,

ಮಾಡಿದರೆ ನಮ್ಮ

ಕರ್ತವ್ಯ|

ಸುಂದರವಾಗುವುದು

ನಮ್ಮ ಭವಿತವ್ಯ||



ತಪ್ಪದೇ ನಾವು

ಚಲಾವಣೆ ಮಾಡಿದರೆ

ನಮ್ಮ ಮತ|

ಮುಂದೆ ನಮ್ಮ

ನಾಡಿಗಾಗುವುದು ಹಿತ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ





ವಿಜಯನಗರ ವೈಭವ

 *ವಿಜಯ ನಗರ ವೈಭವ*


ವಿಜಯನಗರದ ಸುವರ್ಣಯುಗ

ಅಂತ್ಯವಾಗಲು ಸಾಕ್ಷಿಯಾಗಿತ್ತು

ಅಂದು ತಾಳಿಕೋಟೆ|

ಗಣರಾಜ್ಯೋತ್ಸವ  ದಂದು 

ಸ್ತಬ್ಧಚಿತ್ರವಾಗಿ ಮತ್ತೆ  ಭಾರತಕ್ಕೆ

ವಿಜಯನಗರ ವೈಭವ ನೋಡಲು

ಸಾಕ್ಷಿಯಾಗಲಿದೆ ಕೆಂಪುಕೋಟೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


(ಇಂದು ತಾಳಿಕೋಟೆ ಕದನಕ್ಕೆ ೪೫೬ ವರ್ಷ)

22 January 2021

ಬುದ್ದಿವಾದ .ಹನಿ

 ಬುದ್ದಿವಾದ


ಎಲ್ಲರನೂ ಕರೆದು

ಹೇಳುತ್ತಿತ್ತು ನಾನು

ಸುಂದರ, ಹೊಚ್ಚ

ಹೊಸದು, 

ಮನಮೋಹಕ ಎಂದು

ಚಿಗುರು|

ಬೀಗದಿರು, ಶಾಶ್ವತವಲ್ಲ

ನಿನ್ನ ರೂಪ, ಸೌಂದರ್ಯ.

ಬುದ್ದಿ ಹೇಳಿತು 

ಬೇರು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನ ಮರಳೋ ... ಜಾತ್ರೆ ಮರಳೋ .ಕವನ


 *ಜನ ಮರಳೋ ಜಾತ್ರೆ ಮರಳೋ*


ಈಗೀಗ ಅವನ ನೋಡಿ

ಇವನು ,ಇವನ ನೋಡಿ

ಅವರು ಮನೆಯಲ್ಲಿ ಶುದ್ದ

ನೀರು, ಎಳನೀರು‌ ಉಚಿತವಾಗಿ

ಸಿಗುತ್ತಿದ್ದರೂ ದುಬಾರಿ ಹಣ ತೆತ್ತು

ಕುಡಿಯಲಾರಂಭಿಸಿದ್ದೇವೆ  ಕೋಕ್

ಪೆಪ್ಸಿ, ಅದೂ.. ಇದು..‌.


ಈಗೀಗ ಮನೆಯಲ್ಲಿ ಸಿರಿಧಾನ್ಯದ 

ಆರೋಗ್ಯಕ್ಕೆ ಪೂರಕವಾದ ಆಹಾರ

ಲಭ್ಯವಿದ್ದರೂ ಹುಡುಕಿಕೊಂಡು

ಹೋಗಿ ತಿನ್ನುತ್ತಿರುವೆವು ಫಿಜಾ, ಬರ್ಗರ್, ಗೋಬಿ ಮಂಚೂರಿ ಅದೂ.. ಇದು....


ಈಗೀಗ ಸಾಂಪ್ರದಾಯಿಕ 

ಉಡುಗೆಗಳನ್ನು ಕಡೆಗಣಿಸಿ

ಪ್ಯಾಶನ್ ಹೆಸರಲ್ಲಿ  ಅರೆಬರೆ

ಬಟ್ಟೆಗಳನ್ನು ತೊಡುತ್ತಿಹೆವು

ಮಿಡಿ ,ಮ್ಯಾಕ್ಸಿ ಅದೂ... ಇದು...


ಮನೆಯಲ್ಲಿ ಬಳಸದೇ ಬಿದ್ದ

ನೂರಾರು ವಸ್ತುಗಳಿದ್ದರೂ

ಕೊಳ್ಳುಬಾಕತನದಿಂದ 

ಖರೀದಿಸಲು ಅಲೆದಾಡುತ್ತಿರುವೆವು

ಎಡತಾಕುತ ,ಮಾಲ್ .ಮಾರ್ಟ್,

ಸೂಪರ್ ಬಜಾರ್ ಅದೂ.. ಇದು...


ಯಾರಿಗೂ ಚಿಂತನ ಮಂಥನ

ಮಾಡಲು ಪುರುಸೊತ್ತಿಲ್ಲ ಈಗೇನಿದ್ದರೂ

ಜನಮರಳೋ.. ಜಾತ್ರೆ ಮರಳೋ ...


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

21 January 2021

ಮಾಡೋಣ ಧ್ಯಾನ ಕವನ


 *ಮಾಡೋಣ ಧ್ಯಾನ*


ಬಾಹ್ಯ ಸೌಂದರ್ಯದ

ಜೊತೆಗೆ ಆಂತರಿಕ ಸೌಂದರ್ಯ

ವೃದ್ದಿಗೊಳ್ಳಲು ನಾವೆಲ್ಲರೂ

ಮಾಡೋಣ ಧ್ಯಾನ.


ಆಧುನಿಕ ಜೀವನದಿ

ಅಡಿಗಡಿಗೆ ಒತ್ತಡ 

ಒತ್ತಡ ನಿವಾರಣೆಗೆ

ಮಾಡೋಣ ಧ್ಯಾನ.


ಮಾತೆತ್ತಿದರೆ ದೂರ್ವಾಸರು

ಕೋಪ ನಿಯಂತ್ರಣ

ಮಾಡಿಕೊಳ್ಳಲು

ಮಾಡೋಣ ಧ್ಯಾನ.


ಐಹಿಕ ಸುಖದಿ ಬಿದ್ದು

ಒದ್ದಾಡುವುದು ಸಾಕು

ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು

ಮಾಡೋಣ ಧ್ಯಾನ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

20 January 2021

ನೀನೂ ಅತ್ತೆಯಾಗುವೆ .ಕವನ

 

*ನೀನೂ ಅತ್ತೆಯಾಗುವೆ*


ಮುನಿಯಬೇಡ ನಿಂದಿಸಬೇಡ

ನೀ ನನ್ನ ಮಗನ ಮಡದಿ

ತೆಗಳಬೇಡ ಕೊಂಕುನುಡಿಯ

ಬೇಡ ನೀನಿರು ಮುದದಿ.


ಮಗನ ಚೆನ್ನಾಗಿ ನೋಡಿಕೊ

ಮೊಮ್ಮಕ್ಕಳ ಲಾಲಿಸು

ನಾ ಬಿದ್ದು ಹೋಗುವ ಮರ

ಹಿರಿಯರ ಮಾತನು ಪಾಲಿಸು.



ಪ್ರಾಯ  ಹೀಗೆ ಇರುವುದೆಂದು

ಭ್ರಮಿಸಿ ಹಿಗ್ಗಬೇಡ 

ಕೋಲಿಡಿಯುವ ಕಾಲ 

ನಿನಗೂ ಬರುವುದು ನೋಡಾ 


ಕೈಲಾಗದವಳು ಅಶಕ್ತೆ ಎಂದು

ಹಂಗಿಸಬೇಡ ಮತ್ತೆ ಮತ್ತೆ 

ಮುಂದೊಂದು ದಿನ

ನೀನೂ ಆಗೇ ಆಗುವೆ ಅತ್ತೆ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಹನಿಗಳ ಲೀಲೆ .ಕವನ


 *ಹನಿಗಳ ಲೀಲೆ*


ಚುಮು ಚುಮು ಚಳಿಯಲಿ

ಬೆಳಗಿನ ವೇಳೆಯಲಿ

ಮಂಜಿನ ಹನಿಗಳ ಲೀಲೆ

ಮನಕೆ ನೀಡುವುದು ಮುದ.


ಗರಿಕೆಗಳ ಮೇಲಿನ ಹನಿಗಳು

ದಿನನ ಕಿರಣಗಳ ನೋಡಿ

ನಾಚಿ ಕಣ್ಮರೆಯಾಗುವುದನ್ನು

ನೋಡುವುದೇ ಅಂದ .


ಮರದಡಿಯಲಿ ನಲ್ಲೆಯ ಜೊತೆ

ನಿಂತಾಗ ,ಚಿಗುರೆಲೆಯ ಮೇಲಿನ ಹನಿಗಳು ಪನ್ನಿರಂತೆ ನಮ್ಮ ಮೇಲೆ

ಬಿದ್ದ ನೆನಪ ನೆನೆಯುವುದೇ ಚೆಂದ 


ಮಂಜಿನ ಹನಿಗಳ ಲೀಲೆಗಳು

ಒಂದೇ ಎರಡೇ? ನಮ್ಮ ಜೀವನಕೆ

ಸ್ಪೂರ್ತಿಯಾಗುವವು ಈ 

ಮಂಜಿನ ಹನಿಗಳು ಎಂದೆಂದೂ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


19 January 2021

ಬಲ್ಲವರಾರು?

 *ಒಳಿತಿಗೋ ಕೆಡುಕಿಗೋ?*


ಕಡಲಿನಾಟವ ಬಲ್ಲವರಾರು?

ಕಡಲ ಆಳವ ತಿಳಿದವರಾರು?


ಒಮ್ಮೊಮ್ಮೆ ಶಾಂತ

ಮರುಘಳಿಗೆ ರೌದ್ರ

ತೀರದಿ ತೀರದ ಅಲೆಗಳು.

ಆಳದಿ ಮುತ್ತು ರತ್ನಗಳ

ಸಂಪತ್ತುಗಳು.


ಜೀವನಾಧಾರದ ಮೂಲ

ಕೆಲವೊಮ್ಮೆ ಜೀವನವನ್ನೇ

ನಾಶ ಮಾಡುವ ಸುನಾಮಿಯ

ಕಾರಣಕರ್ತ .


ಅಗಾಧ ಜಲರಾಶಿಯ ನೆಲೆ 

ಒಂದಡೆ,ಕೊಂದು ಬಿಡುವೆ

ಜೀವರಾಶಿಗಳ ಕ್ಷಣಾರ್ಧದಲ್ಲಿ

ಇನ್ನೂಂದೆಡೆ, ಅರ್ಥವಾಗಿಲ್ಲ

ನನಗೀ ಕಡಲಿನಾಟ , 

ಒಳಿತಿಗೋ?ಕೆಡುಕಿಗೋ ?


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

17 January 2021

ಸೀಡಿ .ಹನಿ

 *ಸೀಡಿ*


ಇತ್ತೀಚಿಗೆ

ಕೆಲ ಶಾಸಕರು

ಹೇಳುತ್ತಿದ್ದಾರೆ

ನಮ್ಮ ಬಳಿ ಇದೆ

ಒಂದು ಸಿ. ಡಿ |

ಅದರ ಅರ್ಥ ಇಷ್ಟೇ

ನಮ್ಮನ್ನೂ ಸುಮ್ಮನೆ

ಮಂತ್ರಿಗಳಾಗಿ

ಮಾಡಿಬಿಡಿ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೧೭/೧/೨೧


ಪ್ರರ

ಭಾರ .ಹನಿ

 ಸಿಹಿಜೀವಿಯ ಹನಿ 


*ಭಾರ*



ಹಿಂದಿನ ಕಾಲದಲ್ಲಿ

ಮೈತುಂಬಾ ಬಟ್ಟೆಗಳನ್ನು

ಹಾಕಿಕೊಂಡು 

ಸುಸಂಸ್ಕೃತವಾಗಿ

ಮಾಡಿಕೊಳ್ಳುತ್ತಿದ್ದರು

ಅಲಂಕಾರ |

ಇಂದಿನ ಆಧುನಿಕತೆಯಲ್ಲಿ

ಸಾಧ್ಯವಾದಷ್ಟು ಕಡಿಮೆ

ಬಟ್ಟೆ ತೊಟ್ಟವರು 

ನಮ್ಮನ್ನೇ ಕೇಳುವರು

ಹೊರುವುದೇಗೆ ಈ

ಬಟ್ಟೆಯ ಭಾರ||





*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಹೇಳುವರಾರು? .ಹನಿ

 

*ಹೇಳುವರಾರು?*

ಈ ದರ್ಮದವರ ಕಂಡರೆ
ಅವರಿಗಾಗದು
ಆ ಧರ್ಮದವರ ಕಂಡರೆ ಇವರಿಗೆ
ಕಣ್ಣು ಕೆಂಪು|
ಇವರಿಗೆ ಬಿಡಿಸಿ ಹೇಳುವರಾರು
ಎಲ್ಲರ ರಕ್ತವೂ ಕೆಂಪು||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

16 January 2021

ಸೈನಿಕ

 *ಸೈನಿಕ*


ಬಿಸಿಲು, ಮಳೆ 

ಚಳಿಯೆನ್ನದೇ 

ನಮ್ಮ ರಕ್ಷಣೆ

ಮಾಡುತಿಹನು

ಸೈನಿಕ |

ಗೌರವ ಸಲ್ಲಿಸೋಣ

ನಾವೆಲ್ಲ ಅವನಿಗೆ

ಬಗ್ಗಿಸಿ ನಮ್ಮ

ಮಸ್ತಕ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

12 January 2021

ಸ್ವಾಮಿ ವಿವೇಕಾನಂದ . ಹನಿ


 *ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ*



ಸಿಹಿಜೀವಿಯ ಹನಿ



ಕಾಡು ಹರಟೆಯಲಿ 

ಕಾಲಹರಣ ಮಾಡುತ

ಪೋಲಾಗುತಲಿದೆ

ಯುವಕರ ಅನಂತ ಶಕ್ತಿಯ ಅಮೂಲ್ಯವಾದ ದಿನಗಳು|

ಇಂತಹ ಮೂಢ 

ಮತಿಗಳಿಗೆ 

ಆದರ್ಶವಾಗಲಿ  ಸ್ವಾಮಿ ‌ವಿವೇಕಾನಂದರ  ಉದಾತ್ತ ಚಿಂತನೆಗಳು||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

09 January 2021

ಭಾಗ್ಯವಂತರು . ಹನಿ

 *ಸಿಹಿಜೀವಿಯ ಹನಿ*


*ಭಾಗ್ಯವಂತರು*


ನಾಲಿಗೆಯ ಮೇಲೆ

ಹಿಡಿತವಿಲ್ಲದಿರೆ ನಾವು 

ರೋಗವಂತರು ಮತ್ತು

ಜಗಳಗಂಟರು|

ಅದರ ಮೇಲೆ

ಹಿಡಿತವಿದ್ದರೆ 

ನಾವಾಗುವೆವು 

ಆರೋಗ್ಯವಂತರು

ಭಾಗ್ಯವಂತರು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

06 January 2021

ಹೆಜ್ಜೆ ಇಡು ಕವನ.

 

*ಹೆಜ್ಜೆ ಇಡು*


ಕವನ 



ಇನ್ನೆಷ್ಟು ದಿನ 

ಕತ್ತಲಲೇ ಕಳೆಯುವೆ?

ತಮವೇ ಜೀವನವೆಂದು

ಬದುಕುತಿರುವೆ. ಇನ್ನಾದರೂ 

ಹೆಜ್ಜೆ ಇಡು ಬೆಳಕಿನೆಡೆಗೆ.


ಇನ್ನೆಷ್ಟು ದಿನ 

ಅಜ್ಞಾನದಿ ತೊಳಲುವೆ?

ಅಂಧಕಾರದಲೇ ಬಾಳುವೆ

ಜ್ಞಾನದ ಜ್ಯೋತಿಯು

ನಿನಗಾಗಿ ಕಾದಿದೆ.

ಹೆಜ್ಜೆ ಇಡು ಜ್ಞಾನದೆಡೆಗೆ.


ಇನ್ನೆಷ್ಟು ದಿನ 

ಲೌಕಿಕವೇ ಜೀವನವೆಂದು

ಮಬ್ಬಿನಲಿ ಒದ್ದಾಡುವೆ?

ಪಾರಮಾರ್ಥದಲಿ ಒಲವಿರಲಿ 

ಹೆಜ್ಜೆ ಇಡು ಆತ್ಮಸಾಕ್ಷಾತ್ಕಾರದೆಡೆಗೆ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

05 January 2021

ನಮ್ಮ ಪಾಪು ಶಿಶುಗೀತೆ .


 *ನಮ್ಮ ಪಾಪು*


ಶಿಶುಗೀತೆ 


ನಮ್ಮ ಮನೆಯಲೊಂದು 

ಸಣ್ಣ ಪಾಪವಿರುವುದು|

ಪಿಳಿ ಪಿಳಿ ಕಣ್ಣು ಬಿಟ್ಟು

ನಗುತಲಿರುವುದು.||


ಗಿಲಿಕಿ ಗೆಜ್ಜೆ ಹಿಡಿದು

ಕೊಂಡು ನಕ್ಕು ನಲಿವುದು|

ಅಂಬೆಗಾಲನಿಟ್ಟು ಅಮ್ಮನ

ಬಳಿಗೆ ಓಡುವುದು.||


ಅಮ್ಮ ಕಾಣದಿದ್ದರೆ 

ಜೋರು ಅಳುವುದು|

ತಾಯ ಹೆಜ್ಜೆ ಸದ್ದು

ಕೇಳಿ ಕೇಕೆಪಾಪವಿರುವುದು|.


ಬಾಲ ಭಾಷೆಯಲ್ಲಿ 

ಒಂದು ಹಾಡು ಹೇಳುವುದು|

ತಾಳ ಹಾಕಿ ಕೈಯ

ತಟ್ಟಿ ಕುಣಿಯುತಿರುವುದು.||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

👶👶👶👶👶👶

ಸಿಹಿಜೀವಿಯ ಮೂರು ಹನಿಗಳು

 *ಸಿಹಿಜೀವಿಯ ಹನಿಗಳು*



*ಒಂದೇ*


ಮನುಷ್ಯರು ಒಂದೇ

ರೀತಿಯಿಲ್ಲ ಕೆಲವರು

ಉದ್ದಕೆ, ಕೆಲವರು ದಪ್ಪಕೆ

ಇನ್ನೂ ಕೆಲವರು ಕೆಂಪಗೆ|

ಹೇಗಿದ್ದರೂ ಎಲ್ಲರೂ

ಒಂದೇ ಎಲ್ಲರ ನೆರಳ

ಬಣ್ಣ ಕಪ್ಪಗೆ||


*ತಪ್ಪಿದ್ದಲ್ಲ*


ನಾನು ಶ್ರೇಷ್ಠ 

ಎಂಬ ಭಾವನೆಯಿಂದ

ಆತ್ಮವಿಶ್ವಾಸ ವೃದ್ಧಿಯಾದರೆ

ತಪ್ಪಿಲ್ಲ |

ನಾನೇ ಶ್ರೇಷ್ಠ

ಎಂಬ ಅಹಂಕಾರ 

ಬೆಳೆಸಿಕೊಂಡರೆ 

ಅಧಃಪತನ 

ತಪ್ಪಿದ್ದಲ್ಲ||


*ಮರೆಯಬಾರದು*


ಉನ್ನತವಾದ 

ಗುರಿಸಾಧನೆಯ

ಕಡೆ ಹೆಜ್ಜೆ ಹಾಕುವಾಗ

ಹಿಂತಿರುಗಿ ನೋಡಬಾರದು|

ಗುರಿಸಾಧಿಸಿ 

ಉನ್ನತಿಗೇರಿದಾಗ 

ಬಂದ ಹಾದಿಯನ್ನು

ಮರೆಯಬಾರದು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529 

04 January 2021

ಸುರಿಯುವರು .ಹನಿ

 


*ಸಿಹಿಜೀವಿಯ ಹನಿ*


*ಸುರಿಯುವರು*


ನಾವು ತಿನ್ನುವ ಅನ್ನ

ಸಂಪಾದಿಸಲು 

ಅನ್ನದಾತ ಹೊಲಗಳಲ್ಲಿ

ಬೆವರು ಸುರಿಸುವರು|

ನಗರದ ಜನ ತಿಂದ

ಅನ್ನ ಕರಗಿಸಲು

ಜಿಮ್ ಗಳಿಗೆ ಹಣ 

ಸುರಿಯುವರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

03 January 2021

ನನಪಿದೆ ಕವನ


 *ನೆನಪಿದೆ*


ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ

ಕುಣಿದ ದಿನವು ನೆನಪಿದೆ

ನನ್ನ ನೃತ್ಯ ಕಂಡು ಅವನು

ಮೆಚ್ಚಿದ ಮಾತು ನೆನಪಿದೆ.


ವಾಲೆ ಜುಮುಕಿ ಕುಣಿತ ಕಂಡು

ಕರಗಳನ್ನು ತಟ್ಟಿ ನಲಿದು

ಬೆರಳಿನುಂಗುರದ ಸೌಂದರ್ಯ

ಕಂಡು ಅವನು ನಲಿದ ನೆನೆಪಿದೆ .


ನಾಗರ ಜಡೆ ಸರಿಸಿ ನಿಂದು

ರಾಗ ತಾಳ ಲಯಕೆ 

ಕುಣಿಯುವಾಗ ಅವನು 

ಮುಗುಳು ನಕ್ಕ  ನೆನಪಿದೆ.


ನನ್ನ ‌ನೃತ್ಯ ಮುಗಿದ ಮೇಲೆ

ಬಳಿಗೆ ಬಂದು ಬೈತಲೆ ಬಟ್ಟು

ಸರಿಸಿ ಮುತ್ತ ನೀಡಿದಾಗ 

ಕಂಠೀಹಾರ ಬಿಗಿಯಾದುದು ನೆನಪಿದೆ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೩/೧/೨೧


 

01 January 2021

ಶಾಲೆಗೆ ನಮಿಸೋಣ ಶಿಶುಗೀತೆ.

 

*ಶಾಲೆಗೆ ನಮಿಸೋಣ*


ಬನ್ನಿರಿ ಗೆಳೆಯರೆ 

ಬನ್ನಿರಿ ಎಲ್ಲರೂ 

ಶಾಲೆಯ ಕಡೆಗೆ ಹೊರಡೋಣ


ಹೊಸ ವರ್ಷದಲ್ಲಿ 

ಹೊಸ ಪಾಠಗಳ 

ಕಲಿಯುತ ನಾವು ಮುನ್ನೆಡೆಯೋಣ.


ಕರೋನ ಮುನ್ನೆಚ್ಚರಿಕೆ

ಪಾಲಿಸಿ ಮಾಸ್ಕ್ ಧರಿಸಿ

ಸಾಮಾಜಿಕ ಅಂತರ ಕಾಪಾಡೋಣ .


ಗುರುಗಳು ಹೇಳಿದ

ಹಿತವಚನಗಳ ಕೇಳುತ

ನಮ್ಮ ಭವಿಷ್ಯವ ರೂಪಿಸಿಕೊಳ್ಳೋಣ .


ಮನೆಯೇ ಶಾಲೆಯು

ಶಾಲೆಯು ದೇಗುಲ

ಮನೆಗೂ ಶಾಲೆಗೂ ನಮಿಸೋಣ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ