31 August 2019

ಬೊಂಬೆಗಳು (ಹನಿ)



*ಬೊಂಬೆಗಳು*

ಎಲ್ಲರ ಜೀವನದಿ
ಇದ್ದದ್ದೇ ನಗು ಅಳು
ನಾವೆಲ್ಲರೂ ಅವನಾಡಿಸಿದಂತೆ
ಆಡುವ ಬೊಂಬೆಗಳು

*ಸಿ ಜಿ ವೆಂಕಟೇಶ್ವರ*
   

        

ವ್ಯತ್ಯಾಸವಿಲ್ಲ ,(ಹನಿ)


*ವ್ಯತ್ಯಾಸವಿಲ್ಲ*

ದೂರದಿಂದ ನೋಡಲು
ಸುಂದರ ,ನಯನೋಹರ
ಒಳಹೊಕ್ಕರೆ ಕಲ್ಲು, ಮುಳ್ಳು
ವಿಷಜಂತುಗಳು,ಕ್ರಿಮಿಕೀಟಗಳು
ಅದೇ ವನದಿ
ವ್ಯತ್ಯಾಸವೇನಿಲ್ಲ
ಇದೇ  ಜೀವನದಿ .

*ಸಿ.ಜಿ.ವೆಂಕಟೇಶ್ವರ*

ನನ್ನ ದುರ್ಗ (ತೃತೀಯ ಬಹುಮಾನ ಕವಿ ಸಾಹಿತಿಗಳ‌ ಜೀವಾಳ)




*ನನ್ನ ದುರ್ಗ*
ಮದಿಸಿದ ಕರಿಯ ಮದವಡಗಿಸಿದ
ಹೈದರಾಲಿಯ ಸೊಕ್ಕು ಮುರಿದ
ರಿಪುಗಳಿಗೆ ಸಿಂಹಸ್ವಪ್ನವಾಗಿದ್ದ
ನಾಯಕರಾಳಿದ ಕೋಟೆಯೇ ನನ್ನ ದುರ್ಗ

ಏಕನಾಥೇಶ್ವರಿಯ ಪುಣ್ಯಭೂಮಿ
ಒಬವ್ವಳ ಶೌರ್ಯಕೆ ಹೆಸರಾದ ತಾಣವಿರುವ
ಕಲ್ಲು ಕಥೆ ಹೇಳುವ ಕಲ್ಲಿನ ಕೋಟೆಯೇ ನನ್ನ ದುರ್ಗ

ಅಕ್ಕ ತಂಗಿಯರ ಹೊಂಡವಿರುವ
ಉಯ್ಯಾಲೆ ಕಂಬವಿರುವ
ಆನೆಯ ಕುದುರೆಯ ಹೆಜ್ಜೆಗಳ ಹೊಂದಿದ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆಯೇ ನನ್ನ ದುರ್ಗ

ಹದ್ದುಮೀರಿದ ಅರಿಗಳ ತರಿದ
ಮದ್ದಿನ ಮನೆಯಿರುವ
ಸದ್ದು ಮಾಡಿದ ಪುಂಡರ
ಸದ್ದಡಗಿಸಿ ಜನರ ಕಾಪಾಡಿದ ಕೋಟೆಯೇ ನನ್ನ ದುರ್ಗ


ರಂಗಯ್ಯನ ಬಾಗಿಲು ಆನೆಬಾಗಿಲು
ಬುರುಜು ಬತೇರಿ ಗುಪ್ತದ್ವಾರಗಳು
ಆಹಾರದ ಕಣಜ,ನೀರಿನ ಹೊಂಡವ
ಹೊಂದಿದ ಏಳು ಸುತ್ತಿನ ಕೋಟೆಯೇ ನನ್ನ ದುರ್ಗ

*ಸಿ.ಜಿ ವೆಂಕಟೇಶ್ವರ*




28 August 2019

ಸಿಹಿಜೀವೀಯ ಹನಿಗಳು


*ವ್ಯತ್ಯಾಸ*
ಬೆವರ ಬಸಿದು
ಹಸಿದು ಉಂಡರೆ
ಹಿಟ್ಟು,,ಗೊಜ್ಜೂ ನಳಪಾಕ
ಪರರ ಬೆವರ ಹೀರಿದವರಿಗೆ
ಅಜೀರ್ಣವಾಗುವಂತೆ
ತಿಂದವರಿಗೆ ರುಚಿಸದು
ಮೈಸೂರ್ ಪಾಕ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಕಾಂತ*
ಅವಳಂದಳು
ಸಮೀಪ ಬಂದರೆ
ಆಕರ್ಷಿತವಾಗುವುದು
ವಿರುದ್ದ ದಿಕ್ಕಿನ
ಆಯಸ್ಕಾಂತ.
ನಿನೇಕೆ ಹೀಗೆ  ಕಾಂತ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

26 August 2019

ಸಿಹಿಜೀವಿಯ ಹನಿಗಳು

*ಸಿಹಿ ಜೀವಿಯ ಹನಿಗಳು*

*೧*

*ಬಂದಾಗಿದೆ*

ಬೇಗ ಬರಲಿಲ್ಲ ಎಂದು
ಮುನಿಸೇತಕೆ ನಲ್ಲೆ?
ಕೋಪಿಸಿಕೊಳ್ಳಲು ಏನಾಗಿದೆ?
ನಾನೀಗ ಬಂದಾಗಿದೆ
ಬಾಗಿಲು ಬಂದಾಗಿದೆ.

*೨*

*ಯಾಕೆ?*

ಉಂಡು ಮಲಗಿದರೂ
ಮುಗಿಯಲಿಲ್ಲ
ನಮ್ಮಿಬ್ಬಿರ ಜಗಳ
ಯಾಕೆ ? ಯಾಕೆ ?
ಎಂದು ಕೇಳಿದೆ
ನನ್ನವಳೆಂದೆಳು
ಏಳಿ ಮೇಲೆ
ಸೂರ್ಯ ನೆತ್ತಿಗೆ ಬಂದಿದೆ
ಕಾಫಿ ಆರಿ ಹೋಗಿದೆ.
ಹೋ ಕನಸಾ?
ಎಂದು ಕಾಫಿ ಹೀರಿದೆ.


*ಸಿ ಜಿ.ವೆಂಕಟೇಶ್ವರ*..
*ಗೌರಿಬಿದನೂರು*

23 August 2019

ಫಿಟ್ ಇಂಡಿಯಾ( fit India)

*ಫಿಟ್ ಇಂಡಿಯಾ*

ಅಂದು

ಗಾಂಧೀಜಿಯವರು ಬ್ರಿಟೀಷರನ್ನು ನಮ್ಮ
ದೇಶದಿಂದ  ಓಡಿಸಲು ಕರೆ ಕೊಟ್ಟರು
ಕ್ವಿಟ್ ಇಂಡಿಯಾ.

ಇಂದು

ಮೋದೀಜಿಯವರು
ನಮ್ಮ ದೇಹದಿಂದ ರೋಗ ರುಜಿನಗಳನ್ನು,ಸೋಮಾರಿತನವನ್ನು ತೊಲಗಿಸಲು ಕರೆ ನೀಡಿದ್ದಾರೆ
ಫಿಟ್ ಇಂಡಿಯಾ.

*ಸಿ .ಜಿ  .ವೆಂಕಟೇಶ್ವರ*
*ಗೌರಿಬಿದನೂರು*

(ಇದೇ ತಿಂಗಳ 29ಕ್ಕೆ ಪಿಟ್ ಇಂಡಿಯಾ ಅಭಿಯಾನ ದೇಶಾದ್ಯಂತ ಆರಂಭ ಬನ್ನಿ ಫಿಟ್ ಆಗೋಣ)