02 October 2021

ಆನ್ಲೈನ್ ಖರೀದಿ ಏಕೆ ?


 




ಬಿಗ್ ಬಿಲಿಯನ್ ಡೇ 

ಸ್ಪೆಷಲ್ ಧಮಾಕ ಡೇ 

ಸಾಲು ಸಾಲು ಹಬ್ಬಗಳ ವೇಳೆ ಮಾದ್ಯಮಗಳಲ್ಲಿ ರಂಗು ರಂಗಾದ ಜಾಹಿರಾತುಗಳು ನಮ್ಮ ಕಣ್ಣುಗಳ ಕುಕ್ಕುತ್ತವೆ  ಖರೀದಿ ಮಾಡಲು ನಮ್ಮನ್ನು ಖರೀದಿ ಮಾಡಲು ಪ್ರೇರೇಪಿಸುತ್ತವೆ .

ಈ ರೀತಿಯ ಆಫರ್ ನೀಡಿ ನಮ್ಮನ್ನು  ಕೊಳ್ಳುವಂತೆ ಪ್ರಚೋದಿಸುವ  ವಿವಿಧ ಆನ್ಲೈನ್ ಮಾರಾಟ ಕಂಪನಿಗಳು ಎರಡು ಮೂರು ದಿನಗಳಲ್ಲಿ ಆರು ತಿಂಗಳಷ್ಟು ವಹಿವಾಟು ಮಾಡಿ ,ಸಾಕಷ್ಟು ಲಾಭ ಮಾಡಿಕೊಂಡು ಗ್ರಾಹಕರಿಗೆ ಕೊಡುಗೆ ಹಾಗೂ ರಿಯಾಯಿತಿ ಪ್ರಕಟಿಸಿ ನಮಗರಿವಿಲ್ಲದೇ  ಕೊಳ್ಳುಬಾಕ ಸಂಸ್ಕೃತಿಯನ್ನು ಪರಿಚಯಿಸಿತ್ತಾ,  ನಮ್ಮಿಂದ ಹಣ ಪೀಕಿಸುವ ಆನ್ಲೈನ್ ಕಂಪನಿಗಳು ನಾಯಿಕೊಡೆಗಳಂತೆ ದಿನಕ್ಕೊಂದು ಹುಟ್ಟಿ , ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಅಲ್ಲಲ್ಲಿ ಬಾಗಿಲು ಮುಚ್ಚುವ ಹಂತಕ್ಕೆ ಬಂದಿರುವುದನ್ನು ಗಮನಿಸಬಹುದು.


ಆನ್ಲೈನ್ ಖರೀದಿಯಿಂದ ಅನುಕೂಲ ಮತ್ತು ಅನಾನೂಲಗಳೂ ಇವೆ


ಮೊದಲಿಗೆ ಅನುಕೂಲಗಳನ್ನು ನೋಡುವುದಾದರೆ

೧ ಖರೀದಾರರ ಸಮಯ ಮತ್ತು ಹಣದ ಉಳಿತಾಯ ಸಾಧ್ಯವಾಗುತ್ತದೆ.

೨ ಮನೆ ಬಳಿಗೆ ಸಾಮಾನುಗಳನ್ನು ತಲುಪಿಸುವುದರಿಂದ ಗ್ರಾಹಕರಿಗೆ   ಸಾಗಣೆಯು ವೆಚ್ಚ ಉಳಿತಾಯವಾಗುತ್ತದೆ.

೩ ಸ್ಪರ್ಧಾತ್ಮಕ ಬೆಲೆಗಳಲ್ಲಿ ವಸ್ತುಗಳು ಸಿಗುವುದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ.

೪ ಸಾಂಪ್ರದಾಯಿಕ ಅಂಗಡಿಗಳಿಗಿಂತ ವಿಭಿನ್ನ ವಿನ್ಯಾಸ, ಬಣ್ಣದ ಮತ್ತು ಮಾದರಿಯ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿ ಮಾಡಬಹುದು.

೫ ಕೋವಿಡ್ ನಂತಹ ಸಂದರ್ಭಗಳಲ್ಲಿ ಮನೆಯ ಹೊರಗೆ ಕಾಲಿಡದ ವೇಳೆಯಲ್ಲಿ ಆನ್ಲೈನ್ ಖರೀದಿಯು ನಮಗೆ ವರದಾನ ಆಗಲಿದೆ.


ಅನಾನುಕೂಲಗಳು


೧ ಕೆಲವೊಮ್ಮೆ ಹೇಳಿದ ಸಮಯಕ್ಕೆ ವಸ್ತುಗಳು ತಲುಪುವುದಿಲ್ಲ.

೨  ಮೊದಲೇ  ನಾವು ಖರೀದಿ ಮಾಡಿದ ವಸ್ತುಗಳ ಬದಲಾಗಿ ಕಲ್ಲು ,ಮಣ್ಣು,  ಮರದ ಹೊಟ್ಟು ಇತ್ಯಾದಿ ಕಳಿಸಿ ಮೋಸ ಮಾಡಿದ ಉದಾಹರಣೆ ಇವೆ.

೩ ನಾವು ಖರೀದಿ ಮಾಡುವಾಗ ನೀಡುವ ನಮ್ಮ ವೈಯಕ್ತಿಕ ಖಾಸಗಿ ವಿವರಗಳನ್ನು ಆನ್ಲೈನ್ ಕಂಪನಿಗಳು ದುರುಪಯೋಗ ‌ಮಾಡಿಕೊಂಡಿರುವ ಉದಾಹರಣೆ ಇವೆ.

೪ ಹಣಕಾಸಿನ ವ್ಯವಹಾರ ಮಾಡುವಾಗ ನಾವು ನೀಡುವ ಬ್ಯಾಂಕ್ ವಿವರ ಒ.ಟಿ ಪಿ ಗಳು ಸೈಬರ್ ಅಪರಾಧ ಎಸಗಲು ದಾರಿ ಮಾಡಿಕೊಡುತ್ತವೆ.

೫ ನಕಲಿ ಆನ್ಲೈನ್ ಕಂಪನಿಗಳು ಗ್ರಾಹಕರಿಗೆ ಮೋಸ ಮಾಡಿರುವ ನೂರಾರು ಉದಾಹರಣೆಗಳಿವೆ.

೬ ನಾವು ಆರ್ಡರ್ ಮಾಡಿದ ವಸ್ತುಗಳಿಗಿಂತ ಕಡಿಮೆ ಗುಣಮಟ್ಟದ ವಸ್ತುಗಳನ್ನು ಕಳಿಸಿ ಗ್ರಾಹರಿಗೆ ವಂಚಿಸುವ ಆನ್ಲೈನ್ ಕಂಪನಿಗಳು ಇವೆ.


ಪ್ರತಿಯೊಂದರಲ್ಲೂ ಒಳಿತು ಕೆಡುಕುಗಳು ಇರುವಂತೆ ಆನ್ಲೈನ್ ಖರೀದಿಯಲ್ಲೂ ಇವೆ .ಎಲ್ಲಾ ಸಂಧರ್ಭಗಳಲ್ಲಿ ಸಣ್ಣ ಪುಟ್ಟದ್ದಕ್ಕೂ ಆನ್ಲೈನ್ ಖರೀದಿ ಮಾಡದೆ , ನಾಲ್ಕಾರು ಕಡೆ ವಿಚಾರಿಸಿ ಕಡಿಮೆ ಬೆಲೆ ಇದ್ದಾಗ ಮಾತ್ರ ಆನ್ಲೈನ್ ಖರೀದಿ ಮಾಡಿದರೆ ಗ್ರಾಹಕರು ಜಾಣರಾಗಬಹುದು.ಸೈಬರ್ ಅಪರಾಧಗಳನ್ನು ತಡೆಯಲು ನಮ್ಮ ವೈಯಕ್ತಿಕ ವಿವರಗಳನ್ನು ಮತ್ತು  ಬ್ಯಾಂಕ್ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ ಈ ಮುನ್ನೆಚ್ಚರಿಕೆ ಮತ್ತು ವಿವೇಚನೆ ನಮ್ಮಲ್ಲಿ ಇದ್ದರೆ ಆನ್ಲೈನ್ ಖರೀದಿ ಗ್ರಾಹಕರಿಗೆ ನಿಜಕ್ಕೂ ವರದಾನವೇ ಸರಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: