20 October 2021

ಪಿ ಎಂ ಪೋಷಣ್ .ಕಾರ್ಯಕ್ರಮವನ್ನು ಯಶಸ್ವಿಗೊಳಿಸೀಣ.


 


ಪಿ ಎಂ ಪೋಷಣ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.


ಭಾರತವು  ಜಾಗತಿಕ ಆಹಾರ ಭದ್ರತೆ ಯಲ್ಲಿ ನೂರಾ ಹದಿಮೂರು ದೇಶಗಳ ಪೈಕಿ ಎಪ್ಪತ್ತೊಂದನೇ ಸ್ಥಾನ ಹೊಂದಿದೆ. ಇದು ಸಂತಸ ಪಡುವ ವಿಷಯವಲ್ಲ ಅಂದ ಮಾತ್ರಕ್ಕೆ ಕಳಪೆ ಸಾಧನೆಯೇನಲ್ಲ. 

ಕೋವಿಡ್ ನಂತಹ ದುರಿತ ಕಾಲದಲ್ಲಿ ಭಾರತದ ಪಡಿತರ ವಿತರಣಾ ವ್ಯವಸ್ಥೆಯ ಪಾತ್ರವನ್ನು ನಾವು ಮೆಚ್ಚಲೇ ಬೇಕು. ಇದರ ಜೊತೆಗೆ ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಯು ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೂ ಕೂಡಾ ಮಕ್ಕಳ ಅಪೌಷ್ಟಿಕತೆ ಮತ್ತು ಆಹಾರ ಭದ್ರತೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲು ಕಾರಣವಾಗಿತ್ತು ಎಂದು ನಂಬಲೇಬೇಕು.


ಈಗ ಕರ್ನಾಟಕ ರಾಜ್ಯ ಸರ್ಕಾರ ಇದೇ ತಿಂಗಳ 21 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪಿ.ಎಂ ಪೋಷಣ್ ಹೆಸರಿನಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲು ಯೋಜಿಸಿರುವುದು ಸ್ವಾಗತಾರ್ಹ.


ಕೋವಿಡ್ ಪೂರ್ಣವಾಗಿ ತೊಲಗಿರದ ಈ ಕಾಲದಲ್ಲಿ ಆರಂಭವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಸರ್ವರೂ ಕೈಜೋಡಿಸಿ ಹಸಿದ ಮಕ್ಕಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಬೇಕಿದೆ.


ಇದಕ್ಕೆ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಅಡುಗೆ ಕೋಣೆಯೊಳಗೆ ಮಕ್ಕಳ ಪ್ರವೇಶ ನಿಷಿದ್ಧ ಮಾಡಬೇಕಿದೆ.

ನಂದಕಗಳ ಅಳವಡಿಕೆ ಕಡ್ಡಾಯ ಮಾಡಬೇಕು 

ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸುವ ಮುನ್ನ ಸ್ವಚ್ಛತೆಯ ಬಗ್ಗೆ (ಕ್ರಿಮಿ ಕೀಟಗಳು ಹಲ್ಲಿ, ಜಿರಲೆ ಇರದಂತೆ) ಎಚ್ಚರಿಕೆ ವಹಿಸಬೇಕು 

 ದಿನಸಿ ಪಾಕೆಟ್‌ಗಳ ಮೇಲೆ ಅವಧಿ ಮೀರುವ ದಿನಾಂಕ ಪರಾಮರ್ಶಿಸಿ ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ಅಡುಗೆ ತಯಾರಿಸುವ ಮುನ್ನ ತರಕಾರಿಗಳನ್ನು ನೀರಿನಿಂದ ಸಚ್ಛಗೊಳಿಸತಕ್ಕದ್ದು.

ಊಟಕ್ಕೆ ಮುಂಚೆ ಶಿಕ್ಷಕರು ರುಚಿ ನೋಡಿ ರುಚಿ ಪುಸ್ತಕದಲ್ಲಿ ದಾಖಲಿಸಬೇಕು.

   ಆಕಸ್ಮಿಕ ಅವಘಡಗಳ ಬಗ್ಗೆ ತುರ್ತು ಕ್ರಮಕ್ಕೆ ಎಚ್ಚರಿಕೆ ವಹಿಸಲು “ಎಮರ್ಜೆನಿ ಮಡಿಕಲ್ ಪ್ಲಾನ್" ತಯಾರಿಸಿ ಶಾಲೆಯಲ್ಲಿಡಬೇಕು 


ಅಡುಗೆ ಸಾಮಗ್ರಿಗಳಾದ, ಎಣ್ಣೆ, ಉಪ್ಪು ಮತ್ತು ಹಾಲಿನ ಪುಡಿ ಇತ್ಯಾದಿಗಳನ್ನು ನಿಗದಿತ ತೂಕ / ಪರಿಮಾಣದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು.


 ಊಟಕ್ಕೆ ಮುಂಚೆ ಮತ್ತು ನಂತರ ಮಕ್ಕಳು ಸೋಪು ಬಳಸಿ ಕೈತೊಳೆಯುವ  ವಿಧಾನವನ್ನು ರೂಢಿಸಿಕೊಳ್ಳಲು ಸಲಹೆ ನೀಡಬೇಕು .


  ಶಾಲೆ ನಡೆಯುವ ಎಲ್ಲಾ ದಿನಗಳಲ್ಲಿ ಕಡ್ಡಾಯವಾಗಿ ಬಿಸಿಯೂಟವನ್ನು ನೀಡಲು ಕ್ರಮ ಕೈಗೊಳ್ಳಬೇಕು.

 ಆಹಾರ ತಯಾರಿಸಿದ ನಂತರ ಕಡ್ಡಾಯವಾಗಿ ಸರಿಯಾಗಿ ಮುಚ್ಚಿಡಬೇಕು.

ಕುಡಿಯುವ ನೀರಿನ ಟ್ಯಾಂಕನ್ನು ಕ್ರಮಬದ್ಧವಾಗಿ ಸ್ವಚ್ಛಗೊಳಿಸಬೇಕು.ಮತ್ತು ಮಕ್ಕಳು ಕುಡಿಯಲು ಮನೆಯಿಂದ ಬಿಸಿನೀರು ತರಲು ಮಾರ್ಗದರ್ಶನ ನೀಡಬೇಕು.

  ನಿಗದಿತ ಪ್ರಮಾಣದ ತರಕಾರಿಯ ಬಳಸಿ ಊಟ ತಯಾರಿಸಬೇಕು.

 ಅಡುಗೆಯವರು ಏಪ್ರಾನ್ ಮತ್ತು ತಲೆಗೆ ಟೋಪಿ ಬಳಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.

 ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರ ಹಾಗೂ ಅಡುಗೆಯವರು ಹಾಜರಿದ್ದು  ಸಾಮಾಜಿಕ ಅಂತರ ಕಾಪಾಡಿಕೊಂಡು  ಎಸ್. ಓ .ಪಿ. ಪ್ರಕಾರ ಊಟ ಬಡಿಸಬೇಕು.

 ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರವನ್ನು ತುಂಬಿಕೊಂಡು ಬಡಿಸಬೇಕು 

 ಅಡುಗೆಗೆ ಬಳಸುವ ಪಾತ್ರೆಗಳು ಸ್ವಚ್ಚವಾಗಿರುವುದನ್ನು ಮತ್ತು ಕಿಲುಬು ಬಾರದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು .

  ಚಿಕ್ಕ ಮಕ್ಕಳನ್ನು ಅಡುಗೆಕೋಣೆಯಲ್ಲಿ ಕಡೆ ಬರದಂತೆ ಎಚ್ಚರ ವಹಿಸಬೇಕು.

ಕಳಪೆ ಅಥವಾ ಹಾಳಾದ ಆಹಾರಧಾನ್ಯಗಳ ಬಳಕೆ ಮಾಡಲೇಬಾರದು.

 ಅಡುಗೆ ಕೋಣೆಯಲ್ಲಿ ಅನುಪಯುಕ್ತ ವಸ್ತುಗಳ ಸಂಗ್ರಹ ಮಾಡದೇ ಸ್ವಚ್ಚತೆ ಕಾಪಾಡಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು ಆಹಾರವನ್ನು

ತಟ್ಟೆಗೆ ಹಾಕಿಸಿಕೊಳ್ಳದಂತೆ ಕ್ರಮ ವಹಿಸಬೇಕು.


ಈ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳಲ್ಲಿ ಮಕ್ಕಳು ,ಪೋಷಕರು, ಎಸ್ ಡಿ .ಎಂ‌.ಸಿ  .ಸಮುದಾಯ ಶಾಲಾ ಶಿಕ್ಷಕರು, ಅಧಿಕಾರಿಗಳು ಪಿ. ಎಂ. ಪೋಷಣ್ ಕಾರ್ಯಕ್ರಮದ ಯಶಸ್ಸಿಗೆ  ಪಣ ತೊಡಬೇಕಿದೆ.ತನ್ಮೂಲಕ ಮಕ್ಕಳಿಗೆ ಅನ್ನದ ಜೊತೆಗೆ ಜ್ಞಾನ ನೀಡುವ  ಸತ್ಕಾರ್ಯಕ್ಕೆ ಮುನ್ನುಡಿ ಬರೆಯಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


No comments: