20 September 2024

ಸಿಹಿಜೀವಿಯ ನುಡಿ


 



ಸವಾಲುಗಳೆಷ್ಟೇ ಇರಲಿ। 

ಗುರಿಮುಟ್ಟುವ ನಿರಂತರ ಪ್ರಯತ್ನ ಜಾರಿಯಲ್ಲಿರಲಿ॥


©ಸಿಹಿಜೀವಿ ವೆಂಕಟೇಶ್ವರ

ಭಾರತದ ಅಗಲವಾದ ರಸ್ತೆ...


 ಹೊಸ ಬೆಂಗಳೂರು- ಮುಂಬೈ ಎಕ್ಸ್‌ಪ್ರೆಸ್ ವೇ

  ಹೊಸ 14 ಲೇನ್ ಗಳ  ಮುಂಬೈ-ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡಲಾಗುತ್ತದೆ.

 ಆರಂಭದಲ್ಲಿ ಇದನ್ನು 8 ಲೇನ್ ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜಿಸಲಾಗಿತ್ತು ಆದರೆ ಈಗ ಮುಂಬೈ-ಬೆಂಗಳೂರು ಅನ್ನು ಪುಣೆ ಮೂಲಕ ಸಂಪರ್ಕಿಸಲು ಯೋಜನೆಯನ್ನು ಬದಲಾಯಿಸಲಾಗಿದೆ ಈ ಎಕ್ಸ್‌ಪ್ರೆಸ್‌ವೇ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕವನ್ನು ಮುಂಬೈ ಮತ್ತು ಬೆಂಗಳೂರಿಗೆ ಹತ್ತಿರ ತರುತ್ತದೆ ಮತ್ತು ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಮತ್ತು ಸಾಗಾಣಿಕೆ ವೆಚ್ಚವನ್ನು ಬಹಳ  ಕಡಿಮೆ ಮಾಡುತ್ತದೆ. ಈ ಯೋಜನೆ ಪೂರ್ಣಗೊಂಡ ಮೇಲೆ ಭಾರತದಲ್ಲಿ ಅಗಲದಲ್ಲಿ ಅತಿದೊಡ್ಡ ಎಕ್ಸ್‌ಪ್ರೆಸ್‌ವೇ ಆಗಿರಲಿದೆ...

#road #infrastructure #Expressway #sihijeeviVenkateshwara

19 September 2024

ಹನಿಗವನ

 

ಸಿರಿಬಂದ ಕಾಲಕ್ಕೆ ನೆಂಟರು

ನೂರು|

ಆಪತ್ಕಾಲದಲ್ಲಿ ತಿಳಿವುದು ನಮಗೆ ನಮ್ಮವರಾರು?||


#sihijeeviVenkateshwara #quotes #kannada #quoteoftheday

16 September 2024

ಮಹಾಶರಣ ಕಮ್ಮಾರ ಕಲ್ಲಯ್ಯ...ಪುಸ್ತಕ ಪರಿಚಯ..


 


ಕಮ್ಮಾರ ಕಲ್ಲಯ್ಯ.

ಮಾಹಾಶರಣರ ಬಗ್ಗೆ ಒಂದು ಸಂಶೋಧನಾ ಕೃತಿ


ಎಂದಿನಂತೆ ಮಗಳೊಂದಿಗೆ ವಾಕ್ ಮಾಡಿ ಬರುವಾಗ ಆತ್ಮೀಯರಾದ ಮಂಜಣ್ಣನವರು ಒಂದು ಪುಸ್ತಕ ನೀಡಿ  ಈ  ಪುಸ್ತಕ  ಓದಿ ಸರ್ ಎಂದರು. ಬಹುತೇಕ ನನ್ನ ಎಲ್ಲಾ  ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಮಂಜಣ್ಣನವರ ಸಾಹಿತ್ಯಾಭಿರುಚಿ ಕಂಡು ಅವರನ್ನು ಆಗಾಗ ಧನ್ಯವಾದಗಳನ್ನು ಹೇಳುತ್ತಲೇ ಬಂದಿರುವೆ.ಈಗ ಒಂದು ಕಿರುಹೊತ್ತಿಗೆ ನೀಡಿ ಹಿರಿದಾದ ಜ್ಞಾನವನ್ನು ಪಡೆಯಲು ಸಹಕಾರಿಯಾದ ಮಂಜಣ್ಣನವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಲೇಬೇಕು.

ಅಂದ ಹಾಗೆ ಅವರು ಅಂದು ನನಗೆ ನೀಡಿದ ಪುಸ್ತಕ  "ಮಹಾಶರಣ ಕಮ್ಮಾರ ಕಲ್ಲಯ್ಯ"


ಆಕಾಶದಲ್ಲಿ ನಕ್ಷತ್ರದಂತೆ ಮಿನುಗುತ್ತಾ ಬೆಳೆದು ಬಂದಂತಹ 12 ನೇ ಶತಮಾನದಲ್ಲಿ ಬೆಳಕಿಗೆ ಬಂದ ಸಂತತಿಯಲ್ಲಿ ಶರಣ ಬಸವಣ್ಣನವರ ಸಂಸ್ಕಾರ ದಡಿಯಲ್ಲಿ ಸಾವಿರಾರು ಶರಣರು ಬೆಳೆದು ಹೆಮ್ಮರವಾಗಿದ್ದಾರೆ.

ಎಲ್ಲಾ ವರ್ಗದ ಶರಣರನ್ನು ಸಮಾನವಾಗಿ ಕಂಡು ಪ್ರೋತ್ಸಾಹ ನೀಡಿ ಬೆಳೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಈಗಾಗಲೇ ಹಲವಾರು ಶರಣರು ಲಭ್ಯ ವಚನಗಳ  ಆಧಾರದ ಮೇಲೆ ಜನಜನಿತರಾಗಿದ್ದಾರೆ.ಇನ್ನೂ ಕೆಲ ಶರಣರು ದಾಖಲೆಗಳ ಕೊರತೆಯಿಂದ  ಅಜ್ಞಾತವಾಗಿಯೇ ಉಳಿದಿದ್ದಾರೆ.ಅಂತಹವರಲ್ಲಿ  ಒಬ್ಬರು ಮಹಾ ಶರಣ ಕಮ್ಮಾರ ಕಲ್ಲಯ್ಯ‌.

 ಕಮ್ಮಾರಿಕೆ ಕುಲವೃತ್ತಿಯನ್ನು ಮಾಡುತ್ತಾ ದಾರ್ಶನಿಕರಾಗಿ ಜಗತ್ತಿನ ಶ್ರೇಷ್ಠ ಪಂಕ್ತಿಯಲ್ಲಿ ಬೆಳೆದಿರುವ ಶರಣರಲ್ಲಿ ನಿಜ ಶರಣ ಕಮ್ಮಾರ ಕಲ್ಲಯ್ಯನವರು

 ತಮ್ಮ ಜೀವನವನ್ನು ಪೂರ್ಣವಾಗಿ ಶರಣ ಸಂತತಿಯ ಬೆಳವಣಿಗೆಗೆ ಧಾರೆ ಎರೆದ ಮಹಾನುಭಾವರು. ಇಂತವರ ಬಗ್ಗೆ ಅನೇಕ ಗ್ರಂಥಗಳು ಬಹುತೇಕ ಕಡೆ ಹುಡುಕಿದರೂ ಸಿಗದಿರುವ ಅಪರೂಪದ ವಿಚಾರಗಳನ್ನು  ಅನೇಕ ಗ್ರಂಥಗಳನ್ನು ಪರಿಶೀಲಿಸಿ, ಜನಪದ ಆಕರಗಳನ್ನು ಬಳಸಿಕೊಂಡು ತಮ್ಮ ಬುದ್ದಿವಂತಿಕೆಯ ಚಾತುರ್ಯವನ್ನು ಕಮ್ಮಾರ ಸಮುದಾಯಕ್ಕೆ ದಾರಿದೀಪವಾಗುವಂತೆ ಆಧಾರವನ್ನಾಗಿಸುವ ಪ್ರಯತ್ನವನ್ನು ಮಾಡಿ ಡಾ. ಸೋಮನಾಥ ಯಾಳವಾರ  ಕಿರು ಹೊತ್ತಿಗೆ ರಚಿಸಿದ್ದಾರೆ.

ಹೊತ್ತಿಗೆ ಕಿರಿದಾದರೂ ಅದರಲ್ಲಿ ಸತ್ವಯುತವಾದ ವಿಚಾರವಿದೆ ಎಂಬುದು ನನ್ನ ಅಭಿಪ್ರಾಯ.


ಡಾ. ಸೋಮನಾಥ ಯಾಳವಾರರವರ ಅಧ್ಯಯನದ, ಹರವು ಬಹುವಿಸ್ತಾರ, ದೃಷ್ಟಿ ವಿಶಾಲ ಮತ್ತು ಬರವಣಿಗೆ ಪ್ರಖರವಾದದ್ದು, ಸಾಹಿತ್ಯದ ವಿವಿಧ ಘಟ್ಟಗಳು, ಪ್ರಕಾರಗಳು, ಆಯಾಮಗಳು ಅವರಿಗೆ ಕರತಲಾಮಲಕ ಜನಪದ, ತತ್ವಪದ, ಕೀರ್ತನ ಸಾಹಿತ್ಯ, ವಚನ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯವನ್ನು ಸೂಕ್ಷ್ಮ ಹಾಗೂ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿರುವ ಇವರು. ವಚನ ಸಾಹಿತ್ಯ ಕುರಿತಾಗಿ ಹೆಚ್ಚಿನ ಒಲವಿನಿಂದ  ಬಸವಾದಿ ಶರಣರ ಕುರಿತಾಗಿ ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಜಾನಪದರ ಹಾಡಿನ ಜಾಡು ಹಿಡಿದು ಆ ಹಾಡುಗಳ ಆಧಾರದ ಮೇಲೆ ಅವರು  ನಮಗೆ ಕಲ್ಲಯ್ಯನವರ ದರ್ಶನ ಮಾಡಿಸಿದ್ದಾರೆ. 


'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು. ಗೌರಮ್ಮ ಮಾದಾರ ಹಾಡಿರುವ  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ  ಎಲೆ ಮರೆ ಕಾಯಿಗಳಾಗಿರುವ ನೂರಾರು ಶರಣರ ಜೀವನ ಚರಿತ್ರೆಗಳು ಹೊರತರುವಲ್ಲಿ. ಕೆಲ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ.

ಲಿಂಗಾಯತ ವಿಶ್ವ ವಿದ್ಯಾಲಯದ ಪ್ರಸಾರಾಂಗವು   ಅನುಭವ ಮಂಟಪ ಶರಣಚರಿತಾಮೃತ ಮಾಲಿಕೆಯಡಿಯಲ್ಲಿ 39 ನೇ ಕೃತಿಯಾಗಿ ಪ್ರಕಟಿಸಿದ ಈ ಕೃತಿಯು ಮೌಲಿಕವಾದದ್ದು ಇಂತಹ ನೂರಾರು ಶರಣರ ಕೃತಿಗಳು ಪ್ರಕಟವಾಗಲಿ ಎಂಬುದೇ ನಮ್ಮ ಆಶಯ.



ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು.

ತುಮಕೂರು.

9900925529


ಸರಳತೆ..ಚುಟುಕು


 



*ಸರಳತೆಗೆ ಮೆರಗು*


ಆಡಂಬರ ಯಾರಿಗೆ ಬೇಕು

ಮೈ ಮುಚ್ಚಿಕೊಂಡರೆ ಸಾಕು

ಸಭ್ಯವಾಗಿರಲಿ ನಮ್ಮ ಪೋಷಾಕು

ಸರಳತೆಗೇ ಮೆರಗು ಎಲ್ಲಾಕಾಲಕು


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

15 September 2024

ನಾನೆಂದೂ ಸೋಲುವುದಿಲ್ಲ....


 


ನಿನ್ನೆ ನಾನು "ಪ್ರಯತ್ನವೇ ಪರಮಾತ್ಮ" ಎಂಬ ಕ್ಯಾಚಿ  ಟ್ಯಾಗ್ ಲೈನ್ ಹೊಂದಿದ ರಂಗಸ್ವಾಮಿ ಮೂಕನಹಳ್ಳಿಯವರ  "ನಾನೆಂದಿಗೂ ಸೋಲುವುದಿಲ್ಲ ಸೋತರದು ನಾನಲ್ಲ" ಎಂಬ  ಪುಸ್ತಕ ಓದಿದೆ.

 ಇದು 18 ಮಹಾನ್ ಸಾಧಕರ ಬದುಕಿನ ಕಥೆಗಳನ್ನು ಕಟ್ಟಿಕೊಡುತ್ತಾ ನಮ್ಮಲ್ಲಿರುವ ಕೀಳರಿಮೆ ಹೋಗಲಾಡಿಸಿ ನಾನೂ ಏನಾದರೂ ಸಾಧಿಸಬೇಕೆಂಬ ಭಾವನೆ ಮೂಡಿಸುವ ಉತ್ತಮ ‌ಮೋಟಿವೇಶನಲ್ ಪುಸ್ತಕ.

ಅಪಾಯವಿಲ್ಲದ ಬದುಕಿಲ್ಲ ಎಂದು ಹೇಳುವ ರಿಚರ್ಡ್ ಬ್ರಾನ್ಸನ್ ಬಗ್ಗೆ ಇರುವ ಲೇಖನ   ಸುಲಭವಾಗಿ 'ಕ್ವಿಟ್' ಎನ್ನದೆ, ನಮ್ಮ ವೇಳೆ ಬರುವವರೆಗೂ ತಾಳ್ಮೆಯಿಂದ ಕಾಯಬೇಕು ಎಂಬ ಕರ್ನಲ್ ಸ್ಯಾಂಡರ್ಸ್ ರವರ  ಬಗ್ಗೆ ಲೇಖನ

 ಸಾಧಿಸುವ ಮನಸ್ಸಿದ್ದರೆ ನಮ್ಮೆಲ್ಲಾ ಕನಸುಗಳೂ ಈಡೇರುತ್ತವೆ ಎಂದು ಹೇಳಿದ  ವಾಲ್ಟ್ ಡಿಸ್ನಿ ಯ ಬಗ್ಗೆ ಇರುವ ಲೇಖನ ನನಗೆ ಬಹಳ ಹಿಡಿಸಿದವು 

ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿದ ಐದರಿಂದ ಆರು ಕೀ ಪಾಯಿಂಟ್ ಗಳು ಗಮನಾರ್ಹ ಮತ್ತು ಚಿಂತನಾರ್ಹ.


14 September 2024

ಬದುಕು .ಹನಿಗವನ


 


 ಬದುಕು 


ಅತಿಯಾಗಿ ಬಾಯಿ ತೆರೆಯುವುದನ್ನು ನಿಲ್ಲಿಸು

ನೀನು|

ಅತಿಯಾಗಿ ಬಾಯಿ ತೆರೆದರೆ

ನೀರಲ್ಲೂ ಬದುಕಲಾರದು

ಮೀನು||


ಸಿಹಿಜೀವಿ ವೆಂಕಟೇಶ್ವರ.

11 September 2024

ರಾಮನಾಥಸ್ವಾಮಿ ದೇವಾಲಯವಿರುವ ರಾಮೇಶ್ವರ.


 


ರಾಮನಾಥಸ್ವಾಮಿ ದೇವಾಲಯವಿರುವ ರಾಮೇಶ್ವರ.


 ರಾಮನಾಥಸ್ವಾಮಿ ದೇವಾಲಯವು ಶಿವನಿಗೆ ಅರ್ಪಿತವಾದ ಒಂದು ಪ್ರಮುಖವಾದ ದೇವಾಲಯವಾಗಿದೆ.  ಇದು ಭಾರತದ ತಮಿಳುನಾಡು ರಾಜ್ಯದಲ್ಲಿ ಪಂಬನ್ ದ್ವೀಪದ ಪೂರ್ವ ಭಾಗದಲ್ಲಿ ರಾಮೇಶ್ವರಂನಲ್ಲಿದೆ.  ಈ ದೇವಾಲಯವು ಹಿಂದೂಗಳಿಗೆ ಅಪಾರ ಪ್ರಾಮುಖ್ಯತೆಯ ಪವಿತ್ರ ಸ್ಥಳವಾಗಿದೆ. ಇದು ಪ್ರತಿ ವರ್ಷ ಲಕ್ಷಾಂತರ ಯಾತ್ರಿಕರು ಮತ್ತು ಬೃಹತ್ ಭಕ್ತರನ್ನು ಆಕರ್ಷಿಸುತ್ತದೆ.ವಿಶೇಷವಾಗಿ ಮಹಾ ಶಿವರಾತ್ರಿಯ ಹಬ್ಬದ ಸಮಯದಲ್ಲಿ. ನಾನೂ ಸಹ ಹದಿನಾರು ವರ್ಷಗಳ ಹಿಂದೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ  ಪಡೆದಿರುವೆ.


 ‘ರಾಮನಾಥಸ್ವಾಮಿ’ ಎಂದರೆ ‘ರಾಮನ ಒಡೆಯ’, ಇದು ಶಿವನನ್ನು ಸೂಚಿಸುತ್ತದೆ.  ಶ್ರೀಲಂಕಾದಲ್ಲಿ ಸೃಷ್ಟಿಯಾದ ಪಾಪಗಳನ್ನು ಪರಿಹರಿಸಲು ವಿಷ್ಣುವಿನ ಅವತಾರವಾದ ಭಗವಾನ್ ರಾಮನು ಈ ದೇವಾಲಯವನ್ನು ಸ್ಥಾಪಿಸಿದನು ಮತ್ತು ಪೂಜಿಸಿದನು ಎಂದು ನಂಬಲಾಗಿದೆ.

 ಹಿಂದೂ ಲಿಪಿಗಳ ಪ್ರಕಾರ, ಖಂಡದಲ್ಲಿ ಕೇವಲ 12 ಜ್ಯೋತಿರ್ಲಿಂಗಗಳಿವೆ. ಅದರಲ್ಲಿ ಒಂದು ಲಿಂಗ ರಾಮೇಶ್ವರದ ಲಿಂಗ   ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡುವವರು ಮೋಕ್ಷವನ್ನು ಪಡೆಯುತ್ತಾರೆ ಮತ್ತು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುತ್ತಾರೆ ಎಂದು  ನಂಬಲಾಗಿದೆ.  ಇದರೊಂದಿಗೆ ಅವರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ.

ಅನಾದಿಕಾಲದಿಂದಲೂ

 ಚಾರ್ ಧಾಮ್ ಯಾತ್ರೆಗೆ ತನ್ನದೇ ಆದ ಮಹತ್ವವಿದೆ. ಮಹಾಭಾರತದಲ್ಲಿ ಪಾಂಡವರು "ಬದ್ರಿನಾಥ್", "ಕೇದಾರನಾಥ್", "ಗಂಗೋತ್ರಿ" ಮತ್ತು "ಯಮುನೋತ್ರಿ" ಎಂದು ವ್ಯಾಖ್ಯಾನಿಸಿದ್ದಾರೆ.  ಪಾಂಡವರು ತಮ್ಮ ಪಾಪಗಳಿಂದ ಜನರನ್ನು ಶುದ್ಧೀಕರಿಸಬಹುದೆಂದು ನಂಬಿದ ನಾಲ್ಕು ಸ್ಥಳಗಳಾಗಿವೆ. ಅದರಂತೆ

 ಆಧುನಿಕ ಕಾಲದಲ್ಲಿ, ಚಾರ್ ಧಾಮ್ ಭಾರತದ ನಾಲ್ಕು ಯಾತ್ರಾ ಸ್ಥಳಗಳ ಹೆಸರುಗಳಾಗಿವೆ, ಇವುಗಳನ್ನು ಹಿಂದೂಗಳು ವ್ಯಾಪಕವಾಗಿ ಗೌರವಿಸುತ್ತಾರೆ.  ಇದು ಬದರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಅನ್ನು ಒಳಗೊಂಡಿದೆ.  ಒಬ್ಬರ ಜೀವಿತಾವಧಿಯಲ್ಲಿ ಚಾರ್ ಧಾಮ್‌ಗೆ ಭೇಟಿ ನೀಡುವುದನ್ನು ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ.  ಆದಿ ಶಂಕರಾಚಾರ್ಯರು ವ್ಯಾಖ್ಯಾನಿಸಿದ ಚಾರ್ ಧಾಮ್ ನಾಲ್ಕು ವೈಷ್ಣವ ತೀರ್ಥಯಾತ್ರೆಗಳನ್ನು ಒಳಗೊಂಡಿದೆ.


 ಈ  ದೇವಾಲಯವು ಎರಡು 'ಲಿಂಗ'ಗಳನ್ನು ಹೊಂದಿದೆ.ಅವುಗಳೆಂದರೆ 'ರಾಮಲಿಂಗಂ' ಮತ್ತು 'ವಿಶ್ವಲಿಂಗಂ'.  ಪ್ರಧಾನ ದೇವತೆಯಾದ ರಾಮನಾಥಸ್ವಾಮಿಯ ಲಿಂಗವನ್ನು ದೇವಿ ಸೀತೆ ಮಾತೆ  ಭಗವಾನ್ ಹನುಮಾನ್ ಸಹಾಯ ಮಾಡಿ, ರಾಮನು ಸ್ಥಾಪಿಸಿ ಪೂಜಿಸಿದನೆಂದು ನಂಬಲಾಗಿದೆ.  ರಾವಣನು ಬ್ರಾಹ್ಮಣ ಮತ್ತು ಶಿವನ ಭಕ್ತನಾಗಿದ್ದರಿಂದ.  ‘ರಾಮಲಿಂಗಂ’ ದೇವಿ ಸೀತಾದೇವಿಯಿಂದಲೇ ಮರಳಿನಿಂದ ನಿರ್ಮಿಸಲ್ಪಟ್ಟದ್ದು ಮತ್ತು ‘ವಿಶ್ವಲಿಂಗಂ’ ಎಂಬುದು ಹನುಮಂತನು ಕೈಲಾಸದಿಂದ  ತಂದದ್ದು.


 ದಂತಕಥೆಯ ಪ್ರಕಾರ ರಾಮನು ಬ್ರಾಹ್ಮಣನನ್ನು ಕೊಂದ ಪಾಪವನ್ನು ತೊಡೆದುಹಾಕಲು ಶಿವನನ್ನು ಪೂಜಿಸಲು ದೊಡ್ಡ ಲಿಂಗವನ್ನು ಪ್ರತಿಷ್ಟಾಪನೆ ಮಾಡಲು ಬಯಸಿದನು.  ಹೀಗಾಗಿ, ಹಿಮಾಲಯದಿಂದ ಲಿಂಗವನ್ನು ತರಲು ಅವನು ಹನುಮಂತನಿಗೆ  ನಿರ್ದೇಶಿಸಿದನು.  ಆದರೆ ಹನುಮಂತ ಲಿಂಗವನ್ನು ತರಲು ತಡಮಾಡಿದಾಗ.  ರಾಮನ ಪತ್ನಿ ಸೀತಾದೇವಿಯು ಸಮುದ್ರ ತೀರದಲ್ಲಿ ಲಭ್ಯವಿದ್ದ ಮರಳಿನಿಂದ ಸಣ್ಣ ಲಿಂಗವನ್ನು ನಿರ್ಮಿಸಿದಳು.  

ನಾವು ಸಮುದ್ರ ಸ್ನಾನ ಮಾಡಿ ದೇವಾಲಯ ಒಳ ಪ್ರವೇಶಿಸಿ 22 ಬಾವಿಗಳಿಂದ ತೆಗೆದ ನೀರಿನಿಂದ ಪುನಃ ಸ್ನಾನ ಮಾಡಿ ದೇವಾಲಯವನ್ನು ಪ್ರದಕ್ಷಿಣೆ ಹಾಕುವಾಗ ಕಂಡ ಬೃಹತ್ ಕಂಬಗಳ ಹಾಲ್ ನಮ್ಮನ್ನು ಆಕರ್ಷಿಸಿತು.


 ಹೊರ ಕಾರಿಡಾರ್‌ನಲ್ಲಿ 1212 ಸ್ತಂಭಗಳಿವೆ. ಇದರ ಎತ್ತರವು ನೆಲದಿಂದ ಛಾವಣಿಯ ಮಧ್ಯದವರೆಗೆ ಸುಮಾರು 30 ಅಡಿಗಳು.  ಮುಖ್ಯ ಗೋಪುರ ಅಥವಾ ರಾಜಗೋಪುರವು 53 ಮೀ ಎತ್ತರವಿದೆ.  ಹೆಚ್ಚಿನ ಸ್ತಂಭಗಳನ್ನು ಪ್ರತ್ಯೇಕ ಸಂಯೋಜನೆಗಳೊಂದಿಗೆ ಕೆತ್ತಲಾಗಿದೆ.


 ದೇವಾಲಯದ ಮುಖ್ಯ ದೇವರಾದ , ಶ್ರೀರಾಮನು ಸ್ಥಾಪಿಸಿದ ಶಿವಲಿಂಗವು ಈ ದೇವಾಲಯದಲ್ಲಿ ಪ್ರಮುಖ ಆಕರ್ಷಣೆ.   ರಾಮನಾಥಸ್ವಾಮಿ ದೇವಾಲಯವನ್ನು ಕಪ್ಪು  ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ವಿಮಾನ  ಗೋಪುರ  ಚಿನ್ನದಿಂದ ಲೇಪಿತವಾಗಿದೆ. ಮುಖ್ಯ ದೇವರ ಆಶೀರ್ವಾದ ಪಡೆದ ನಂತರ ಅದೇ ದೇವಾಲಯದ ಸಂಕೀರ್ಣದಲ್ಲಿ ಇರುವ ಇತರೆ ದೇವ ದೇವತೆಗಳಾದ ವಿಶಾಲಾಕ್ಷಿ, ಪರ್ವತವರ್ಧಿನಿ, ಸಂತಾನಗಣಪತಿ, ಮಹಾಗಣಪತಿ, ಸುಬ್ರಹ್ಮಣ್ಯ, ಸೇತುಮಾಧವ, ಮಹಾಲಕ್ಷ್ಮಿ, ನಟರಾಜ ಮತ್ತು ಆಂಜನೇಯರ ದರ್ಶನ ಪಡೆದೆವು.


ಈ ಮೊದಲೇ ನಾನು ಹೇಳಿದಂತೆ 22 ಬಾವಿಗಳ ತೀರ್ಥ ಸ್ನಾನ ಇಲ್ಲಿನ ವಿಶೇಷ. ಈ ಸ್ನಾನ ಮಾಡಲು ಇಚ್ಚಿಸುವರು ಮೊದಲು ನಿಗದಿ ಪಡಿಸಿದ ಶುಲ್ಕ ಪಾವತಿಸಿ ನಮ್ಮೊಂದಿಗೆ ಓರ್ವ ದೇವಾಲಯದ ಸಿಬ್ಬಂದಿ ಕರೆದೊಯ್ಯಬೇಕು. ಅವರು ಪ್ರತಿ ಬಾವಿಯ ಬಳಿ ತೆರಳಿ ಹಗ್ಗದಿಂದ ನೀರು ಮೇಲೆತ್ತಿ ನಮ್ಮ ಮೇಲೆ ಸುರಿಯುತ್ತಾರೆ.

ಈ ಬಾವಿಗಳು  ಪವಿತ್ರ ಜಲಮೂಲಗಳು. ಹಾಗೂ ತೀರ್ಥಗಳು  ರಾಮನ ಬತ್ತಳಿಕೆಯಲ್ಲಿರುವ 22 ಬಾಣಗಳನ್ನು ಪ್ರತಿನಿಧಿಸುತ್ತವೆ.  ಎಂದು ನಂಬಲಾಗಿದೆ.

 

ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾಗಿ ಹೊರಬಂದ ನಮಗೆ  

 ರಾಮನಾಥಸ್ವಾಮಿ ದೇವಾಲಯದ ಕಾರಿಡಾರ್‌ಗಳ ಹೊರಭಾಗವು ಬಹುವಾಗಿ ಆಕರ್ಷಿಸಿತು ಇದರ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ಕೇಳಿದಾಗ ಪ್ರಪಂಚದಲ್ಲೇ ಅತಿ ಉದ್ದದ ದೇವಾಲಯ ಕಾರಿಡಾರ್ ಎಂಬ ಮಾಹಿತಿಯನ್ನು ನೀಡಿದರು. ಇದು ಸುಮಾರು 6.9 ಮೀ ಎತ್ತರ, ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ 400 ಅಡಿ ಮತ್ತು ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು 640 ಅಡಿಗಳನ್ನು ಹೊಂದಿದೆ.  ಒಳ ಕಾರಿಡಾರ್‌ಗಳು ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ 224 ಅಡಿಗಳು ಮತ್ತು ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು 352 ಅಡಿಗಳು.  ಅವುಗಳ ಅಗಲವು ಪೂರ್ವ ಮತ್ತು ಪಶ್ಚಿಮದಲ್ಲಿ 15.5 ಅಡಿಗಳಿಂದ 17 ಅಡಿಗಳವರೆಗೆ ಇದೆ  ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು 172 ಅಡಿಗಳು 14.5 ಅಡಿಗಳಿಂದ 17 ಅಡಿಗಳವರೆಗೆ ಅಗಲವಿದೆ.  ಈ ಕಾರಿಡಾರ್‌ಗಳ ಒಟ್ಟು ಉದ್ದ 3850 ಅಡಿಗಳು. ಇದರ ಜೊತೆಯಲ್ಲಿ ಅಲ್ಲಲ್ಲಿ ಸಿಗುವ ಶಿಲ್ಪ ಕಲೆಯ ಕೆತ್ತನೆಯು ನಮ್ಮ ನಮ್ಮನ್ನು ಸೆಳೆಯುತ್ತವೆ.

ಆಸ್ತಿಕರು ಶಿವನ ಆಶೀರ್ವಾದ ಪಡೆಯಲು ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ನಾಸ್ತಿಕರು ಕಡಲ ತೀರದ ಸೌಂದರ್ಯ ದೇವಾಲಯ ಶಿಲ್ಪಕಲೆಯನ್ನು ಆಸ್ವಾದಿಸಲು ಇಲ್ಲಿಗೆ ಬರುತ್ತಾರೆ ಒಟ್ಟಾರೆ ರಾಮೇಶ್ವರಂ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ನೀವು ಇದುವರೆಗೆ ರಾಮೇಶ್ವರ ನೋಡಿಲ್ಲವೆಂದೇ ಒಮ್ಮೆ ನೋಡಿ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


 

09 September 2024

ನಿಮ್ಮ‌ ಶತೃ ನೀವೇ


 ನಿಮ್ಮ‌ ಶತೃ  ನೀವೇ


ನಿಮ್ಮ ನಿಜವಾದ ಶತ್ರುಗಳು ಬೇರಾರೂ ಅಲ್ಲ...

ನೀವೇ...ನಿಮ್ಮ ಅಹಂ,ನಿಮ್ಮ ಆಲಸ್ಯ,ನಿಮ್ಮ ಶಿಸ್ತಿನ ಕೊರತೆ,ನಿಮ್ಮ ಗೊಂದಲಗಳು,ನಿಮ್ಮ ಕೆಟ್ಟ ಅಭ್ಯಾಸಗಳು, ನಿಮ್ಮ ಸ್ವಯಂ ಅನುಮಾನ,ನೀವು ಕಲಿಯಲು ನಿರ್ಲಕ್ಷಿಸುವ ಜ್ಞಾನ,ನೀವು ಸೇವಿಸುವ ಅನಾರೋಗ್ಯಕರ ಆಹಾರ.


ಇಂದೇ  ನಿಮ್ಮ ನಿಜವಾದ  ಶತೃಗಳ ಮೇಲೆ ಯುದ್ಧ ಘೋಷಿಸಿ ಜಯ ಗಳಿಸಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


07 September 2024

ಜ್ಞಾನ ಮತ್ತು ಸಂಪತ್ತಿನ ಸಮ್ಮಿಳಿತಜೀವನ ನಮ್ಮದಾಗಲಿ.

 


ಜ್ಞಾನ ಮತ್ತು ಸಂಪತ್ತಿನ ಸಮ್ಮಿಳಿತಜೀವನ ನಮ್ಮದಾಗಲಿ.


ನಮಗೆ ದೈಹಿಕ ಮಾನಸಕ ಆರೋಗ್ಯವಿದ್ದರೆ ಸಾಲದು ಅದಕ್ಕೆ ಪೂರಕವಾಗಿ ಸಮತೋಲಿತ ಜ್ಞಾನ ಮತ್ತು ಸಂಪತ್ತಿನ ಅಗತ್ಯ ವಿದೆ.

ಕೇವಲ ಸಂಪತ್ತಿರುವ ಅಜ್ಞಾನಿ ಜಗದ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಲಾರ. ಬರೀ ಜ್ಞಾನ ವಿದ್ದು  ಸಂಪತ್ತಿಲ್ಲದಿದ್ದರೆ  ಜಗದಲ್ಲಿ ತಕ್ಕಮಟ್ಟಿಗೆ ಉತ್ತಮ ಜೀವನ  ಸಾಗಿಸಬಹುದು.

ಆದ್ದರಿಂದ ಜ್ಞಾನ ಸಂಪತ್ತಿನ ಜೊತೆಯಲ್ಲಿ ಸಂಪತ್ತನ್ನು ಹೊಂದಿ ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳಾಗಿ ಈ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.

ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.


ಸಿಹಿಜೀವಿ ವೆಂಕಟೇಶ್ವರ


06 September 2024

ಕುಮಾರಿ ಕಾಂಡ...ಭಾರತದ ದಕ್ಷಿಣಕ್ಕೆ ಇದ್ದ ಖಂಡ..


 



ಕುಮಾರಿ ಕಾಂಡಂ


ನಾವು ಖಂಡಗಳ ಚಲನೆಯ ವಾದವನ್ನು ಕೇಳಿದ್ದೇವೆ.ಅದೇ ರೀತಿಯಲ್ಲಿ ವೈಜ್ಞಾನಿಕವಾಗಿ ಆಧಾರವಿಲ್ಲದಿದ್ದರೂ ತಮಿಳುನಾಡಿನ ಕೆಲ ಜನಪದ ಕಥೆಗಳ ಆಧಾರದ ಮೇಲೆ ಹಿಂದೂ ಮಹಾಸಾಗರ ದಲ್ಲಿ ಕುಮಾರಿ ಕಾಂಡ ಎಂಬ ಖಂಡವಿತ್ತು ಎಂದು ಉಲ್ಲೇಖಿಸುತ್ತಾರೆ.

ತಮಿಳು ಜಾನಪದದ ಪ್ರಕಾರ ಈ ವಿಶಾಲವಾದ ಭೂಪ್ರದೇಶವು ಒಂದು ಕಾಲದಲ್ಲಿ ಮುಂದುವರಿದ ಮತ್ತು ಅಭಿವೃದ್ಧಿ ಹೊಂದಿದ್ದ ನಾಗರಿಕತೆಗೆ ನೆಲೆಯಾಗಿತ್ತು, ಶ್ರೀಮಂತ ಸಂಸ್ಕೃತಿ, ಪ್ರವರ್ಧಮಾನಕ್ಕೆ ಬರುತ್ತಿರುವ ನಗರಗಳು ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಸಮಾಜವನ್ನು ಹೊಂದಿತ್ತು. 


 ಕುಮಾರಿ ಕಾಂಡಂ ತಮಿಳು ಸಂಸ್ಕೃತಿಯ ತೊಟ್ಟಿಲು ಎಂದು ಕಥೆಗಳು ಸೂಚಿಸುತ್ತವೆ. ಅಲ್ಲಿ ಆರಂಭಿಕ ತಮಿಳು ಸಾಹಿತ್ಯ, ಭಾಷೆ ಮತ್ತು ಸಂಪ್ರದಾಯಗಳು ಹುಟ್ಟಿದವು.  ದುರಂತದಲ್ಲಿ ಪ್ರವಾಹವು ಸಮುದ್ರದಲ್ಲಿ ಮುಳುಗಿರಬಹುದು ಎಂದು ಊಹಿಸಲಾಗಿದೆ.