19 September 2020

TALP ತರಭೇತಿ ನಾಲ್ಕನೆ ದಿನದ ವರದಿ

 ಸಾರ್ವಜನಿಕ ಶಿಕ್ಷಣ ಇಲಾಖೆ

ಡಯಟ್ ತುಮಕೂರು.


TALP INDUCTION 1 ತರಬೇತಿಯ

ನಾಲ್ಕನೇ ದಿನದ ತರಬೇತಿಯ ವರದಿ 


ವರದಿಗಾರರು 


ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ 

ಕ್ಯಾತಸಂದ್ರ

ತುಮಕೂರು




ನಾಲ್ಕನೇ ದಿನದ ತರಬೇತಿಯು ಮೂರನೇ ದಿನದ ತರಬೇತಿಯ ವರದಿ ಮಾಡುವ ಮೂಲಕ ಆರಂಭವಾಯಿತು ಕ್ಯಾತಸಂದ್ರ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಕುಮಾರಸ್ವಾಮಿ ಸರ್ ರವರು ಆಪ್ ನಲ್ಲಿ ವೀಡಿಯೋ ಮೂಲಕ ಮೂರನೇ ದಿನದ ವರದಿಯನ್ನು ಸುಂದರ ಚಿತ್ರಗಳು ಮತ್ತು ವೀಡಿಯೋಗಳ ಮೂಲಕ ಆಕರ್ಷಕವಾಗಿ ವರದಿ ಮಂಡಿಸಿದರು.


ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ಶಿಕ್ಷಕರು  ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಶ್ರೀಮತಿ  ಚಂದ್ರಕಲಾ ಎಂ ಎ   ಮೇಡಂ ರವರು ಯೋಗ ೩೬೦ ಎಂಬ ಆಪ್ ಪರಿಚಯ ಮಾಡಿದರು ಇದು ಎಲ್ಲರಿಗೂ ಬೇಕಾದ ಆಪ್ .ಎಂದು ಶಿಕ್ಷಕರು ಮೆಚ್ಚುಗೆ ವ್ಕಕ್ತ ಪಡಿಸಿದರು.



ಮೊದಲ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚರಿತ ಚಕೋರಿ ಮೇಡಂ ರವರು NROER ವೆಬ್ಸೈಟ್ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಎಷ್ಟು ಉಪಯುಕ್ತ, ಮತ್ತು ಅದನ್ನು ಬಳಸುವುದು ಹೇಗೆ ಎಂಬುದನ್ನು ಸವಿವರವಾಗಿ ಹೇಳಿ  ಆರನೇ ಪ್ರಾಜೆಕ್ಟ್ ಮಾಡಲು ಹೇಳಿದರು.  




ಕಂಪ್ಯೂಟರ್ ಲ್ಯಾಬ್ ನಲ್ಲಿ ನಾವು ಚಟುವಟಿಕೆಗಳನ್ನು ಮಾಡುತ್ತಿರುವಾಗ ತುಮಕೂರು ಜಿಲ್ಲಾ ಶಿಕ್ಷಣ ಶಿಕ್ಷಣ   ಮತ್ತು ತರಬೇತಿ ಕೇಂದ್ರ ದ ಹಿರಿಯ ಉಪನ್ಯಾಸಕರಾದ ಶ್ರೀ ಮಹೇಶ್ ಸರ್ ರವರು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಶಿಕ್ಷಕರು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಲಿಕೆಯನ್ನು ‌ಸಂತಸದಾಯಕವಾಗುವಂತೆ ಮಾಡಿ ಎಂದು ಕರೆ ನೀಡಿದರು.




ತಾಯಿ ಮುದ್ದಮ್ಮ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಟೀ ನೀಡಿ ಬಾಯಿ ಸಿಹಿ ಮಾಡಿದರು.


ಟೀ ವಿರಾಮದ ಬಳಿಕ ಸಂಪನ್ಮೂಲ ಶಿಕ್ಷಕರಾದ ಶ್ರೀ ಚಂದ್ರ ಶೇಖರ್ ಸರ್ ರವರು ಬ್ರೌಸರ್‌ ನಲ್ಲಿ ಮಾಹಿತಿಯನ್ನು ಸರ್ಚ್ ಮಾಡುವುದು ಹೇಗೆ ? ಬುಕ್ ಮಾರ್ಕ್ ಮಾಡುವುದು ಹೇಗೆ ಎಂಬುದನ್ನು ವಿವರಿಸಿದರು.



 ಮಧ್ಯಾಹ್ನ ೧.೩೦ ರಿಂದ ೨.೧೫ ರ ವರೆಗೆ ಊಟದ ವಿರಾಮ 



ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಚಂದ್ರ ಶೇಖರ್ ಸರ್ ಮಾರ್ಗದರ್ಶನದಲ್ಲಿ ಸರ್ಚ್ ಬಾರ್ ನಲ್ಲಿ ವೆಬ್ ಸೈಟ್ ಹುಡುಕುವಾಗ ಬುಕ್ ಮಾರ್ಕ್ ಮಾಡುವುದು ಹೇಗೆ ? ಎಂದು ತೋರಿಸಿಕೊಟ್ಟರು.




ಊಟದ  ವಿರಾಮದ ನಂತರ  ಏಳನೆಯ ಪ್ರಾಜೆಕ್ಟ್  ಮಾಡಲು ಶುರು ಮಾಡಿದೆವು .






ಶಿಕ್ಷಕರು ತಮ್ಮ ಅಸೈನ್ಮೆಂಟ್ ಮಾಡುತ್ತಿರುವಾಗ ಕ್ಯಾತಸಂದ್ರ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ಸುಧಾ ಕೆ ಇನಾಂದರ್ ರವರು ಮತ್ತು ಸಿ ಪಿ ನಾಗಾಲಾಂಬಿಕಾ ರವರು ಬಂದು   ಕೆಲ ಶಿಕ್ಷಕರಿಗೆ      ಕಂಪ್ಯೂಟರ್ ಕಲಿಯಲು ಮಾರ್ಗದರ್ಶನ ನೀಡಿದರು.


ವಿದ್ಯುತ್ ಕಣ್ಣಾಮುಚ್ಚಲೆಯ ನಡುವೆ ಸಂಪನ್ಮೂಲ ಶಿಕ್ಷಕಿಯಾದ ಚರಿತಾ ಚಕೋರಿ ಮೇಇ ರವರು ಕಹೂಟ್ ಆಪ್ ಬಳಸಿ ಶಿಕ್ಷಕರಿಗೆ ತಿಳಿಯದಂತೆ  ಈ ನಾಲ್ಕು ದಿನದ ತರಬೇತಿಯ ಮೌಲ್ಯಮಾಪನವನ್ನು ಮಾಡಿದರು ಈ ರಸಪ್ರಶ್ನೆ ಆಧಾರಿತ ಮೌಲ್ಯ ಮಾಪನ ದಲ್ಲಿ ಶಿಕ್ಷಕರಾದ ಸಿ ಜಿ ವೆಂಕಟೇಶ್ವರ ರವರು ಮೊದಲ ಸ್ಥಾನ ಗಳಿಸಿದರು.M M ಮತ್ತು ನಾಗಭೂಷಣಾಚಾರ್ ರವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.


ಸಂಜೆ 5 30 ಕ್ಕೆ ಅಂದಿನ ತರಬೇತಿ ಮುಗಿಸಿ ಮನೆ ಕಡೆ ಹೊರಟೆವು



No comments: