ಲೇಖನ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

02 ಮಾರ್ಚ್ 2026

ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ

 

ಮಂತ್ರಮುಗ್ದಗೊಳಿಸುವ ಮೇಘಾಲಯದ  ಉಮ್ಮಿಯಾಮ್ ಸರೋವರ




ಈಶಾನ್ಯ ರಾಜ್ಯಗಳನ್ನು ನೆನೆದರೇನೊ ಪುಳಕ. ಬಹು ಕಾಲದಿಂದ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡಬೇಕೆಂಬ ಕನಸು ಕೊನೆಗೂ ನನಸಾಗಿತ್ತು. ಅಸ್ಸಾಂನ  ಗುವಾಹಟಿ ನಗರದಿಂದ ನಮ್ಮ ಪ್ರವಾಸ ತಂಡದೊಂದಿಗೆ ಹೊರಟ ನಾವು ಮೇಘಾಲಯದ ಪ್ರಕೃತಿ ಸೌಂದರ್ಯ ಸವಿಯಲು ಸಿದ್ದವಾಗಿತ್ತು. ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಚಲಿಸಲು ಸೂಕ್ತವಾದ ಎರಡು ಟೆಂಪೋ ಟ್ರಾವೆಲರ್ಸ್‌‌ ಏರಿ ಉತ್ತಮ ರಸ್ತೆಯಲ್ಲಿ ನಮ್ಮ ಪಯಣ ಮುಂದುವರೆಯಿತು. ರಸ್ತೆಯ ಎಡಬಲಗಳಲ್ಲಿ ಕಾಣುವ ದೃಶ್ಯಗಳನ್ನು ಸವಿಯುತ್ತಾ ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಕಂಡ ಮೊದಲ ಸ್ವರ್ಗ ಸದೃಶ ತಾಣವೇ ಉಮಿಯಾಮ್ ಸರೋವರ!



ಮೊದಲ ಬಾರಿಗೆ ಕೇಳಿದಾಗ ನನಗೂ ಈ ಸ್ಥಳದ ಉಚ್ಚಾರಣೆ ವಿಚಿತ್ರ ಎನಿಸಿದರೂ ಅದರ  ಅದ್ಭುತ ದೃಶ್ಯಗಳನ್ನು ನಾನು ಕಣ್ತುಂಬಿಕೊಂಡಾಗ ಬಣ್ಣದ ಚಿತ್ರಗಳು ಈಗಲೂ ನನ್ನ ನೆನಪಿನ ಕೋಶದಲ್ಲಿ ಅಚ್ಚಳಿಯದೇ ಉಳಿದಿವೆ. 
ಶಿಲ್ಲಾಂಗ್ ನಗರಕ್ಕೆ ಹೋಗುವ ದಾರಿಯಲ್ಲಿ ಬೆಟ್ಟಗಳ ನಡುವೆ ನೀಲಿ ಬಣ್ಣದಲ್ಲಿ ಮಿನುಗುತ್ತಿರುವ ಉಮಿಯಾಮ್ ಸರೋವರದ ಮೊದಲ ನೋಟವೇ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಸ್ಥಳೀಯರು ಇದನ್ನು “ಬಾರಾ ಪಾನಿ” ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ‌ಇದೊಂದು   ವಿಶಾಲವಾದ ಮಾನವ ನಿರ್ಮಿತ  ನೀರಿನ ಸಾಗರ!

ನಗರದಿಂದ ಸುಮಾರು 15 ಕಿಮೀ ದೂರದಲ್ಲಿ ಹರಡಿಕೊಂಡಿರುವ ಈ ಜಲಾಶಯವನ್ನು 1960ರ ದಶಕದಲ್ಲಿ  ಅಣೆಕಟ್ಟು ನಿರ್ಮಿಸಿ ಸೃಷ್ಟಿಸಲಾಗಿದೆ. ಬೆಟ್ಟಗಳು, ಹಸಿರು ಕಾಡುಗಳು ಮತ್ತು ನೀರಿನ ನೀಲಿ ಪ್ರತಿಬಿಂಬ  ಇವುಗಳ ಸಮನ್ವಯವು ಈ ಸ್ಥಳವನ್ನು ಸ್ವರ್ಗಸಮಾನವಾಗಿಸುತ್ತದೆ.
ಬೆಳಿಗ್ಗೆ ಹೊತ್ತು ಸರೋವರದ ತೀರದಲ್ಲಿ ನಿಂತಾಗ ಮಂಜಿನ ಚಾದರ ನೀರಿನ ಮೇಲೆ ಹರಡಿಕೊಂಡ  ಸೂರ್ಯೋದಯದ ಕಿರಣಗಳು ನೀರಿನ ಮೇಲೆ ಬಂಗಾರದ ಹಚ್ಚನ್ನು ಹಚ್ಚಿದಂತೆ ಕಾಣುವ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆ ಕ್ಷಣದಲ್ಲಿ ಕಾಲವೇ ನಿಂತಂತಾಯಿತು.




ಸ್ಥಳೀಯ ಮಾರ್ಗದರ್ಶಕನಿಂದ ತಿಳಿದುಕೊಂಡಾಗ ಈ ಸರೋವರದ ಹಿಂದೆ ಒಂದು ದೊಡ್ಡ ಕಥೆಯಿದೆ ಎಂದು ಅರಿತುಕೊಂಡೆ.  ಈ ಲೇಕ್  ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾದ ಈಶಾನ್ಯ ಭಾರತದ ಮೊದಲ ಮಹತ್ವದ ಜಲಾಶಯ ಯೋಜನೆಗಳಲ್ಲಿ ಒಂದಾಗಿದೆ.
ಒಮ್ಮೆ ಇಲ್ಲಿ ಖಾಸಿ ಸಮುದಾಯದ ಗ್ರಾಮಗಳು ನೆಲೆಸಿದ್ದವು. ಅಣೆಕಟ್ಟು ನಿರ್ಮಾಣದಿಂದಾಗಿ ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಯಿತು. ಈ ವಿಚಾರ ತಿಳಿದಾಗ ಪ್ರಕೃತಿ ಸೌಂದರ್ಯದ ಹಿಂದೆ ಇರುವ ಮಾನವ ಕುಲದ ಮನ ಕಲಕುವ  ಕಥೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿದವು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡುವುದು ಈಗಲೂ ಮುಂದುವರೆದಿರುವುದನ್ನು ಕಾಣುತ್ತೇವೆ.




ಉಮಿಯಾಮ್ ಸರೋವರ ಪ್ರವಾಸಿಗರಿಗೆ ಕೇವಲ ದೃಶ್ಯ ಸೌಂದರ್ಯವಲ್ಲ  ಸಾಹಸಕ್ಕೂ ಪ್ರಸಿದ್ಧ ಎಂದು ನಮ್ಮ ಟೂರ್ ಗೈಡ್ ಬೆಳಿಗ್ಗೆ ಹೇಳಿದ್ದ ಮಾತು ಕೇಳುತ್ತಾ  ನಾನು ಕಯಾಕಿಂಗ್ ಮಾಡಲು ನಿರ್ಧರಿಸಿದ್ದೆ. ನೀರಿನ ಮಧ್ಯೆ ತೇಲುತ್ತಾ ಬೆಟ್ಟಗಳ ನಡುವೆ ನನ್ನ ಸಣ್ಣ ದೋಣಿ ಸಾಗುತ್ತಿದ್ದ ಕ್ಷಣವನ್ನು ಕಲ್ಪಿಸಿಕೊಂಡು ಮನದಲ್ಲೇ ಖುಷಿ ಪಟ್ಟಿದ್ದೆ ಆದರೆ ಆ ಸ್ಥಳಕ್ಕೆ ಹೋದಾಗ ನನ್ನ ಆಸೆ ಈಡೇರದೇ ಭ್ರಮನಿರಸನಗೊಂಡೆ.
ವಾಟರ್ ಸೈಕ್ಲಿಂಗ್, ಬೋಟ್ ರೈಡ್, ಸ್ಕೂಟಿಂಗ್  ಎಲ್ಲವೂ ಇಲ್ಲಿ ಲಭ್ಯ. ಕುಟುಂಬ ಸಮೇತ ಬಂದ ಪ್ರವಾಸಿಗರು ಹರ್ಷದಿಂದ ಕಾಲ ಕಳೆಯಲು ಅವಕಾಶವಿದೆ ಅದರೆ ನಮ್ಮ ದುರಾದೃಷ್ಟಕ್ಕೆ ಅಂದು ಆ ಎಲ್ಲಾ ಜಲಕ್ರೀಡೆಗಳನ್ನು ಬಂದ್ ಮಾಡಿದ್ದರು.ಆದರೆ ಪ್ರಕೃತಿ ಸೌಂದರ್ಯ ಬಂದ್ ಮಾಡಲು ಸಾಧ್ಯವೆ? ಇನ್ನಷ್ಟು ನಿಸರ್ಗದ ದೃಶ್ಯಗಳನ್ನು ನನ್ನ ಮನದಲ್ಲಿ ತುಂಬಿಕೊಂಡು ಆನಂದಿಸಿದೆ.


ಮಾಮೂಲಿನಂತೆ ನಾವು ಮಾನವರು ಸುಂದರ ತಾಣಗಳನ್ನು ಸುಂದರವಾಗಿರಲು ಎಲ್ಲಿ ಬಿಟ್ಟಿದ್ದೇವೆ?  ಈ ಸುಂದರ ಸರೋವರವೂ ಸವಾಲುಗಳನ್ನು ಎದುರಿಸುತ್ತಿದೆ. ನಗರದ ವೃದ್ಧಿಯಾಗುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸರೋವರಕ್ಕೆ ಸೇರುವ ವಾಹ್ ಉಮ್ಖ್ರಾ ಮತ್ತು ವಾಹ್ ಉಮ್ಶಿರ್ಪಿ ನದಿಗಳು ನಗರ ಒಳಚರಂಡಿಯನ್ನು ತರುತ್ತಿವೆ ಎಂದು ತಿಳಿದು ಬೇಸರವಾಯಿತು.
ಮೊದಲು ಡೀಸೆಲ್ ಚಾಲಿತ ದೋಣಿಗಳನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು.
2023ರಲ್ಲಿ ಮೇಘಾಲಯ ಸರ್ಕಾರ ಸೌರಶಕ್ತಿ ಚಾಲಿತ AI ದೋಣಿಯನ್ನು ನಿಯೋಜಿಸಿದೆ ಎಂಬುದು ಆಶಾದಾಯಕ ಸುದ್ದಿ ಕೇಳಿ ಸಂತಸವಾಯಿತು. ಈ ನವೀನ ಪ್ರಯತ್ನವು ಸರೋವರದ ಸ್ವಚ್ಛತೆಯನ್ನು ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ.





ಸಂಜೆ ಸಮಯದಲ್ಲಿ ಸರೋವರದ ಲೇಕ್ ವ್ಯೂ ಪಾಯಿಂಟ್‌ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಕಾಶ ಕೆಂಪು-ಕಿತ್ತಳೆ ಬಣ್ಣಗಳಿಂದ ತುಂಬಿಕೊಂಡ. ನೀರಿನ ಮೇಲಿನ ಪ್ರತಿಬಿಂಬ ಚಿತ್ರಕಾರನ ಕಲಾಕೃತಿಯಂತೆ ಕಾಣುತ್ತದೆ. ಇದು ಕೇವಲ ಜಲಾಶಯವಲ್ಲ. ಇದು ಪ್ರಕೃತಿಯ ಮಹತ್ವದ ಪಾಠ. ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ ಎಂಬ ಸಂದೇಶ ಈ ಸರೋವರ ನೀಡುತ್ತದೆ.

ಉಮಿಯಾಮ್ ಸರೋವರ ಪ್ರವಾಸವು ನನಗೆ ಪ್ರಕೃತಿಯ ಸೌಂದರ್ಯ, ಇತಿಹಾಸದ ಸ್ಪರ್ಶ ಮತ್ತು ಪರಿಸರ ಜಾಗೃತಿ ಮೂರನ್ನೂ ಒಟ್ಟಿಗೆ ನೀಡಿದ ಅನುಭವ ನೀಡಿತು. ಮೇಘಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಸ್ಥಳವನ್ನು ತಪ್ಪದೇ ನೋಡಬೇಕು ಎಂದು ನಾನು ಮನಪೂರ್ವಕವಾಗಿ ಸಲಹೆ ನೀಡುತ್ತೇನೆ.
ಬೆಟ್ಟಗಳ ನಡುವೆ ಮೌನವಾಗಿ ಮಲಗಿರುವ ಆ ನೀಲಿ ಸರೋವರ ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿಯೇ ಇರುತ್ತದೆ. ಆ ತಾಣದಲ್ಲಿ  ನಾನು ಮಿಸ್ ಮಾಡಿಕೊಂಡ ವಾಟರ್ ಸ್ಪೋರ್ಟ್ಸ್ ಆಡಲು ಮತ್ತು ಸನ್ ಸೆಟ್ ನೋಡಲು ಮತ್ತೊಮ್ಮೆ ಉಮ್ಮಿಯಾಮ್ ಸರೋವರಕ್ಕೆ ಹೋಗಲು ನನ್ನ ಮನ ಹಾತೊರೆಯುತ್ತಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಫೆಬ್ರವರಿ 2026

ಪೋಷಕರೇ ದಯವಿಟ್ಟು ಗಮನಿಸಿ...


 ಪೋಷಕರೇ ದಯವಿಟ್ಟು ಗಮನಿಸಿ...



ಇತ್ತೀಚಿಗೆ ಹತ್ತನೇ  ಓದುವ ಮಗುವಿನ   ಪೋಷಕರ ಮನೆಗೆ ಭೇಟಿ ನೀಡಿದಾಗ ತಂದೆಯು   ಅವರ ಮಗನ ಬಗ್ಗೆ ಮಾತನಾಡುತ್ತಾ ದಿನವೂ ಮಗ ಹಣ ಕೇಳುತ್ತಾನೆ.ಬೈಕ್ ಕೊಡಿಸು ಎನ್ನುತ್ತಾನೆ.ಮೊಬೈಲ್ ನಲ್ಲಿ ಸದಾ ಮುಳುಗಿರುತ್ತಾನೆ ಎಂಬ ದೂರುಗಳನ್ನು ನೀಡುತ್ತಾ ನೀವಾದರೂ ಬುದ್ದಿ ಹೇಳಿ ಸರ್ ನಮ್ಮ ಮಾತುಗಳನ್ನು ಕೇಳೊಲ್ಲ.ನಮ್ಮ ಎದುರಿಗೆ ಮಾತನಾಡುತ್ತಾನೆ ಎಂದು ಕಂಪ್ಲೇಂಟ್ ಲಿಸ್ಟ್ ನೀಡಿದರು.ಹೌದು ನಾನು ಇತ್ತೀಚಿನ ದಿನಗಳಲ್ಲಿ ಬಹುತೇಕ ಪೋಷಕರ ಕಡೆಯಿಂದ ಅವರ ಮಕ್ಕಳ ‌ಬಗ್ಗೆ ಹೆಚ್ಚು ಕಡಿಮೆ ಇಂತವೇ ದೂರುಗಳನ್ನು ಸ್ವೀಕರಿಸುವುದು ಮಾಮೂಲಾಗಿದೆ.ನಿಮಗೂ ಈ ಅನುಭವವಾಗಿರಬಹುದು.

ಹತ್ತನೇ ತರಗತಿಯವರೆಗೆ ಶಾಲೆಗಳಲ್ಲಿ ಬೆಳಗಿನ ಅವಧಿಯಲ್ಲಿ ರಾಗಿ ಮಾಲ್ಟ್, ಮಧ್ಯಾಹ್ನ ಮೊಟ್ಟೆ ಬಾಳೆ ಹಣ್ಣಿನ ಜೊತೆಯಲ್ಲಿ ಬಿಸಿಯೂಟ ಹಾಗೂ ಕೆಲವೆಡೆ ಸಂಜೆಯೂ ವಿವಿಧ ಕಾಳುಗಳ ಸ್ನಾಕ್ಸ್ ನೀಡುತ್ತಾರೆ. ಮತ್ತೇಕೆ ಮಕ್ಕಳಿಗೆ ‌ಹಣ? ಆದರೂ ಕೆಲ ಪೋಷಕರು ಮಕ್ಕಳಿಗೆ ಅವರು ಕೇಳದಿದ್ದರೂ ಅಗತ್ಯ ಇಲ್ಲದಿದ್ದರೂ ಹಣ ನೀಡುವುದು ಕಂಡುಬರುತ್ತದೆ.
ಮಕ್ಕಳಿಗೆ ಪೋಷಕರಾದ ನಾವು ಬಾಲ್ಯದಲ್ಲೇ ಆರ್ಥಿಕ ಸಾಕ್ಷರತೆಯ ಪಾಠ ಹೇಳಿಕೊಡಬೇಕಿದೆ. ಆದರೆ   ಬಹುತೇಕ ಪೋಷಕರು ತಮ್ಮ ಬಾಲ್ಯದ ಅನುಭವದ ಆಧಾರದ ಮೇಲೆ ನಮಗೆ ಇದ್ದ ಕಷ್ಟ ನಮ್ಮ ಮಕ್ಕಳಿಗೆ ‌ಇಲ್ಲ ಆದ್ದರಿಂದ ಹಣ ಕೊಡುವೆ ಎಂದು ಅನವಶ್ಯಕವಾಗಿ ಹಣ ನೀಡಿ ದುಂದುವೆಚ್ಚಮಾಡಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಇನ್ನೂ ಕೆಲ ಪೋಷಕರು ನಾನು ಚಿಕ್ಕವನಿದ್ದಾಗ ನನಗೆ ಸೈಕಲ್ ಗತಿ ಇರಲಿಲ್ಲ ನನ್ನ ಮಗ ಬೈಕ್ ಓಡಿಸಲಿ ಎಂದು‌ ಎಂಟು ಒಂಭತ್ತು ಓದುವ ಮಕ್ಕಳಿಗೆ  ಬೈಕ್ ನೀಡುವರು ಹತ್ತಕ್ಕೆ ಬಂದಾಗ  ಮಗು ಬೇರೆ ಬ್ರಾಂಡ್ ಬೈಕ್ ಗೆ ಡಿಮಾಂಡ್ ಮಾಡದೇ ಮತ್ತೆನು ಮಾಡಿಯಾನೂ? ಇನ್ನೂ ಮೊಬೈಲ್ ಕಥೆ ಹೇಳುವುದೇ ಬೇಡ ವರ್ಷದ ಮಗುವಿನ ಕೈಗೆ ಮೊಬೈಲ್ ನೀಡಿ ಊಟ ಮಾಡಿಸುವ ಎಷ್ಟೋ ಪೋಷಕರಿದ್ದರೆ.ಇನ್ನೂ ಕೆಲ ಪೋಷಕರು ತಮ್ಮ ಮಕ್ಕಳ ಮೊಬೈಲ್ ಗೀಳನ್ನು ಬೇರೆಯವರ ಬಳಿ ಪಾಸಿಟೀವ್ ಆಗಿ ನನಗೇ ಮೊಬೈಲ್ ಬಳಸಲು ಬರಲ್ಲ ನನ್ನ ಮಗ ನೋಡಿ ಎಷ್ಟು ಚೆನ್ನಾಗಿ ಬಳಸ್ತಾನೆ ಎಂದು ಕೊಚ್ಚಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆದ ಮೇಲೆ ಊರು ಹಾಳಾದ ಮೇಲೆ‌ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಶಿಕ್ಷಕರು ಮಕ್ಕಳ ತಿದ್ದಲಿ ಎಂದು ಅಲವತ್ತುಕೊಂಡರೆ ಏನು ಉಪಯೋಗ.

ಇದಕ್ಕೆ ಪರಿಹಾರ ಪೋಷಕರ ನಡೆಗಳಲ್ಲೇ ಇದೆ.
ಮೊದಲು ‌ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಲಿ. ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವುದನ್ನು ನಿಲ್ಲಿಸಲಿ  ಮಕ್ಕಳಿಗೆ ಹಣದ ಬೆಲೆ ತಿಳಿಸಿಕೊಡಬೇಕು‌
ಅದಕ್ಕೆ ‌ಈ‌ ಕೆಳಗಿನ ಸರಳ ಸಲಹೆ ಪಾಲಿಸಿದರೆ ಒಳಿತು.

ದಿನವೂ ಎಷ್ಟು ಖರ್ಚು ಮಾಡಿದ್ದೀರಿ ಎಂದು ಬರೆಯಲು ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ.ತಿಂಗಳ ಅಂತ್ಯದಲ್ಲಿ ವಿಶ್ಲೇಷಿಸಿ.ಅನಗತ್ಯ ಖರ್ಚುಗಳು ಯಾವವು? ಎಂಬುದರ ಕಡೆ ಗಮನ ಸೆಳೆದು ಮುಂದಿನ ದಿನಗಳಲ್ಲಿ ಅವುಗಳನ್ನು ನಿಯಂತ್ರಿಸಲು‌ ತಿಳಿಸಿ.
ಉಳಿಸಿದ ಒಂದು ರೂಪಾಯಿ ಗಳಿಸಿದ ರೂಪಾಯಿಗೆ ಸಮ ಎಂಬ ಪಾಠವನ್ನು ಹೇಳಿ   ವಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಲು ಪ್ರೋತ್ಸಾಹ ಮಾಡಿ. ಇದಕ್ಕೆ ಪಿಗ್ಗಿ ಬ್ಯಾಂಕ್ ‌ಅಥವಾ ಬ್ಯಾಂಕ್ ಗಳಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ‌ಕೊಡಿ. ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಹಾಲು ನೀಡಲಾಗುತ್ತದೆ. ಕಾಲೇಜಿನ ಮಕ್ಕಳು
ಕಾಲೇಜ್ ಕ್ಯಾಂಟೀನ್  ನಲ್ಲಿ ಅನವಶ್ಯಕ ತಿನ್ನುವುದು ಹಾಗೂ  ಫಾಸ್ಟ್ ಫುಡ್ ಮೇಲೆ ವಿಪರೀತ ಖರ್ಚು ಮಾಡುವುದನ್ನು  ನಿಯಂತ್ರಿಸಿ.ಮನೆ ಊಟ ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆ ಎಂಬುದನ್ನು ಮನದಟ್ಟು ಮಾಡಿಕೊಡಿ.ಮಕ್ಕಳ ಕೈಗೆ ಫೋನ್ ಕೊಟ್ಟಾಗ  ಆಫರ್  ನೋಡಿ ಖರೀದಿ ಮಾಡದಂತೆ ಮಕ್ಕಳಿಗೆ ಮನವರಿಕೆ ಮಾಡಿಕೊಡಿ  ಅಗತ್ಯವೇ ಎಂದು ಕೇಳಿಕೊಳ್ಳಿ. ತೀರ ಅಗತ್ಯವಾಗಿ ಬೇಕಾದ ವಿಶ್ ಲಿಸ್ಟ್  ಮಾಡಿ 48 ಗಂಟೆ ನಂತರ ಖರೀದಿ ನಿಯಮ ಅನುಸರಿಸಿ.ಏಕೆಂದರೆ ಕೆಲವೊಂದು ವಸ್ತುಗಳು ಮೊದಲು ಬೇಕಿನಿಸಿ ನಿಧಾನವಾಗಿ ಯೋಚಿಸಿದಾಗ ಆ ವಸ್ತು ಅನಗತ್ಯ ಎನಿಸಬಹುದು.
ಮಕ್ಕಳಿಗೆ ಬೈಕ್ ಕೊಡಿಸುವ ಬದಲಿಗೆ ಸೈಕಲ್ ‌ಕೊಡಿಸಿ.  ಅಗತ್ಯವಿದ್ದರೆ ಬಸ್ ಪಾಸ್ ಅಥವಾ ಸ್ಟೂಡೆಂಟ್ ಪಾಸ್ ಬಳಸಲು  ಬಳಸಲು ಪ್ರೇರೇಪಿಸಿ.

ಒಟ್ಟಾರೆ ಯುವ ಜನಾಂಗಕ್ಕೆ ಆಗಾಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ಮೂಲಕ ದುಂದುವೆಚ್ಚ ಕಡಿಮೆ ಮಾಡಬಹುದು. ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಕಡಿಮೆ ಮಾಡಿ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕಿದೆ.ಈ ನಿಟ್ಟಿನಲ್ಲಿ ಹಲ ದೇಶಗಳಲ್ಲಿ ಹದಿಹರೆಯದ ಮಕ್ಕಳಿಗೆ ಮನನ ಮೊಬೈಲ್ ಬಳಕೆಗೆ ಕೆಲ ನಿರ್ಬಂಧಗಳನ್ನು ಹೇರಿರುವುದು ಸ್ವಾಗತಾರ್ಹ.ನಮ್ಮ ರಾಜ್ಯದಲದಲ್ಲೂ ಇಂತಹ ಚಿಂತನೆ ಶುರವಾಗಿರುವುದು ಸ್ವಾಗತಾರ್ಹ.ನಮ್ಮ ಮಕ್ಕಳು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಲು ಸಂಸ್ಕಾರವಂತರಾಗಲು ಪೋಷಕರ ಪಾತ್ರ ಬಹಳ ಮುಖ್ಯ ನಾವು ಜವಾಬ್ದಾರಿಯುತ ಪೋಷಕರಾಗೋಣ.ಇದಕ್ಕೆ ಸಮಾಜ ಮತ್ತು ಸರ್ವರ ಸಕಾಲಿಕ ಬೆಂಬಲವೂ ಅಗತ್ಯ.

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900025529

16 ಫೆಬ್ರವರಿ 2026

ಜನಪದರ ಕಣ್ಣಲ್ಲಿ ಕಮ್ಮಾರ ಕಲ್ಲಯ್ಯ


 ಜನಪದರ ಕಣ್ಣಲ್ಲಿ  ಕಮ್ಮಾರ ಕಲ್ಲಯ್ಯ


ಕುರಿತೋದದೆಯುಂ ಕಾವ್ಯ ಪ್ರಯೋಗ ಮತಿಗಳ್  ಎಂದು ಕವಿರಾಜಮಾರ್ಗಕಾರ ವರ್ಣಿಸಿರುವಂತೆ ನಮ್ಮ ಜನಪದರು ನಮಗೆ ‌ಜ್ಞಾನದ ಆಗರ. ಲಿಖಿತ ದಾಖಲೆಗಳಿರದ ಸಂದರ್ಭಗಳಲ್ಲಿ ಇವರ ಮೌಖಿಕ ಆಕರಗಳೇ ನಮಗೆ ಆಧಾರ.
ಶರಣ ಕಲ್ಲಯ್ಯ ರವರ ಬಗ್ಗೆ ತಿಳಿಯಲು ನಮಗೆ ಜನಪದರ ಹಾಡುಗಳು ಪ್ರಮುಖ ಆಕರವಾಗಿವೆ.

'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು.  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಆತ್ಮೀಯರಾದ  ಮಂಜುನಾಥ್ ರವರು ಶರಣ ಕಲ್ಲಯ್ಯ ರವರ ಬಗ್ಗೆ ರಚಿತವಾದ ಜನಪದ ಗೀತೆಯ ಲಿಂಕ್ ಕಳಿಸಿದ್ದರು ಅದನ್ನು ಕೇಳಿದಾಗ ಶರಣ ಕಲ್ಲಯ್ಯನವರ ಬಗ್ಗೆ  ಒಂದು ಲೇಖನ ಬರೆಯಬೇಕು ಎಂಬ ಮನಸಾಯಿತು ಅದರ ಫಲವೇ ಈ ಲೇಖನ





ಓಂ ಶ್ರೀ ಗುರು ಬಸವಲಿಂಗಾಯ ನಮಃ ಜನಪದರ ಕಂಡ ಕಮ್ಮಾರ ಕಲ್ಲಯ್ಯ ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಧರಣೀಯ ಶರಣ ಗಣಕಟ್ಟಿ ಧರಣೀಯ ಶರಣ ಗಣಕಟ್ಟಿ ಬಯಲಾದಿ ಶರಣರ ನೆನೆವೆ ನಾನೆದ್ದು ಎಂದು ಆರಂಭವಾಗುವ ಈ ಗೀತೆಗಳು ಶರಣ ಕಲ್ಲಯ್ಯನವರ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.

ಶರಣರ ನೆನೆವೆ ನಾನೆದ್ದು ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ನಿತ್ಯ ಕಾಸುನು ಕಬ್ಬಿಣ ನಿತ್ಯ ಕಾಸುನು ಕಬ್ಬಿಣ ವಕ್ಕಲಿಗೆ ಬಿತ್ತು ಉತ್ತು ಕೆಲಸಗಾರೆಕೆ ಬಿತ್ತು ಉತ್ತೋ ಕೆಲಸಗಾರೇಕೆ ಸಣ್ಣ ಗುಡಿಸಲ ಮುಂದ ಮಣ್ಣಿನ ಒಲೆ ಹೂಡಿ ಸಣ್ಣ ಗುಡಿಸಲ ಮುಂದೆ ಮಣ್ಣಿನ ಒಲೆ ಹೂಡಿ ತಣ್ಣಗಾಳಿ ಊದೋ ಕುಲುಮೆಯ ತಣ್ಣಗಾಳಿ ಊದೋ ಕುಲುಮೆಯ ಇಟ್ಟಕೊಂಡು ಮಣ್ಣಿಗೆ ಬೆವರ ಸುರಿಸೋನು ಎಂದು ಅವರ ವೃತ್ತಿಯ ಬಗ್ಗೆ  ಹೇಳಿದ್ದಾರೆ.

ಮಣ್ಣಿಗೆ ಬೆವರ ಸುರಿಸೋನು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಎತ್ತು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಶುದ್ಧ ಕಾಯಕವ ಮಾಡುತ್ತ ಶುದ್ಧ ಕಾಯಕವ ಮಾಡುತ್ತ ಕಲ್ಲಯ್ಯ ಇದ್ದ ಅನುಭಾವ ಹೇಳ್ಯನ ಎಂಬ ಕಾಯಕ ತತ್ವ ನೆನಪಿಸುತ್ತದೆ.

ಇದ್ದ ಅನುಭಾವ ಹೇಳ್ಯಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಗುಣದಲ್ಲಿ ಗಣ್ಯ ಗುರುತನದ ಗುಣದಲ್ಲಿ ಗಣ್ಯ ಗುಣತನದ ಕಲ್ಲಯ್ಯ ಜನರಲ್ಲಿ ಬೆರೆತಾ ದಿನ ಜನನಲ್ಲಿ ಬೆಳೆತಾ ದಿನ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಬರಿಮೈಲಿ ಕುಳಿತು ಬಡಿವನು. ಎಂದು ಬಡತನವಿದ್ದರೂ ಜನರೊಂದಿಗೆ ಬೆರೆತು ಬೆಳೆದರು.


ಬರಿಮೈಲಿ ಕುಳಿತು ಬಡಿವನು ಕಬ್ಬಿಣ ಉಲಿಮೆಗೆ ಬೇಕಾದ ಕುಡುಮುಂಜಿ ಉಲುಮೆಗೆ ಬೇಕಾದ ಕುಡುಮುಂಜಿ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ತಾಳ ಹಾಕಿದಂಗ ತಿಳಿಯುದಿ ತಾಳ ಹಾಕಿದಂಗ ತಿಳಿಯುದಿ ಕಲ್ಲಯ್ಯ ಬಾಳ ಬೀಸಣಕಿ ಆಗ್ಯಾಳ ಬಾಳ ಬೀಸಣಕಿ ಎಂದು ಅವರ ಸತಿಯ ಬಗ್ಗೆ  ಮಾಹಿತಿ ನೀಡಿದ್ದಾರೆ.

ಆಗ್ಯಾಳ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಕೊಂಡ ಸುತ್ತಿಗೆ ಯ ಹಣಿವಾಳು ಕೊಂಡು ಸುತ್ತಿಗೆಯ ಹಣಿವಾಳು ಕಾಸಿದ್ದು ಗಂಡ ತೋರಿಸಿದಂಗ ಕೈಸನ್ನೆ ಗಂಡ ತೋರಿಸಿದಂಗ ಕೈಸನ್ನೆ ಸುತ್ತೂರು ಆಳುಗಳು
ಹೊತ್ತಂದ ದಿಂಡಿಗೆ ಸುತ್ತೂರು ಆಳುಗಳು ಹೊತ್ತಂದ ದಿಂಡಿಗೆ ಎತ್ತಿನ ಗಾಡಿಗಳಿಗೆಲ್ಲ ಎತ್ತಿನ ಗಾಡಿಗಳಿಗೆಲ್ಲ ಕಲ್ಲಯ್ಯ ಮುತ್ತಿನಂಗ ಬಳೆ ತುಳಿಸುವನು ಮುತಿನಂಗ ಬಳೆ ತೊಡಿಸುವನು ಎಂದು ಕಾವ್ಯಾತ್ಮಕವಾಗಿ ಕಲ್ಲಯ್ಯನ ಕೆಲಸಕ್ಕೆ ಅವರ ಸತಿ ಕೈಗೂಡಿಸಿದ  ಬಗ್ಗೆ  ವರ್ಣನೆ ಮಾಡಿರುವರು.

ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ನಾಯಕರ ಸುದ್ದಿ ಹೇಳುತ್ತ ನಾಯಕರ ಸುದ್ದಿ ಹೇಳುತ್ತ ಕಲ್ಲಯ್ಯ ಹಾಯಾಗಿದ್ದಾನ ಊರಲ್ಲಿ ಹಾಯಾಗಿದ್ದಾನ, ಊರಲ್ಲಿ ಮೂತಾಳ ಕೂರಿಗೆ ಪ್ರೀತಿಲೇ ಬಳೆತೊಳಿಸಿ ಮೂತಾಳ ಊರಿಗೆ ಪೀತಿಲೆ ಬಳೆತೊಳಿಸಿ ಭೂತಾಯಿ ಬೆಳೆಯ ಬೆಳೆಸೆಂದು ಭೂತಾಯಿ ಬೆಳೆಯ ಬೆಳೆಸೆಂದು ಒಕ್ಕಲಿಗೆ ತಾತಾಳ ಹಿಡಿದು ನಿಡಿಯುವನು ತಾತಾಳ ಹಿಡಿದು ನೀಡುವನು ಕಡೆತಾಳ ಆಯರಿಗೆ ಅಡತಾಳ ಅರಸಂಗೆ ಕಡೆತಾಳ ಆಯರಿಗೆ ಎಡತಾಳ ಅರಸಂಗೆ ನಡುತಾಳ ನಿನ್ನ ಕರ್ಮಕ್ಕೆ ನಡುತಾಳ ನಿನ್ನ ಕರ್ಮಕ್ಕೆ ಎಂದಹೇಳಿ ಕೊಡುವ ಕೂರಿಗೆ ಯವಕ್ಕಲಿಗೆ ಕೊಡುವ ಕೂರಿಗೆ ಯಾವ ಒಕ್ಕಲಿಗೆ ಮಮತೆಯ ಮಾತಿಂದ ನಿಜತೆಯ ನಿಲುವಿಂದ ಮಮತೆಯ ಮಾತಿಂದ ನಿಜತೆಯ ನೆಲುವಿಂದ ಘನತೆಯ ದುಡಿಮೆ ನಲಿವಿಂದ ಘನತೆಯ ದುಡಿಮೆ ನಲಿವಿಂದ ಕಲ್ಲಯ್ಯ.

ಕಲ್ಲಯ್ಯ ಕಾಯಕದ ಜೊತೆಯಲ್ಲಿ ಬಾಂಧವ್ಯ ಬೆಸೆಯುವ, ಊರಿಂದೂರಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿಯೂ ಕಾರ್ಯ ಮಾಡಿದ್ದರು ಎಂಬುದನ್ನು ಈ ಮುಂದಿನ ಪದ ತಿಳಿಸುತ್ತದೆ.

ಜನತೆಗೆ ಬೇಕಾದ ಶರಣಾದ ಜನತೆಗೆ ಬೇಕಾದ ಶರಣಾದ ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು
ಬಿತ್ತಿ ಬೆಳೆವವರ ಬಗೆಯನ್ನು ಬಿತ್ತಿ ಬೆಳೆಯವರ ಬಗೆಯನ್ನು ಕಲ್ಲಯ್ಯ ಎತ್ತಿ ಹೇಳುತಲಿ ಕಬ್ಬಿಣ ಎತ್ತು ಹೇಳುತವ ಕಬ್ಬಿಣ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆದ ಕಾಳಕಡ್ಡಿ ತರುವನು ಎಂಬ ಮಾತಲ್ಲಿ ಹಿಂದಿನ ಕಾಲದಲ್ಲಿ ರೈತನಿಗೆ ವ್ಯವಸಾಯಕ್ಕೆ  ಸಹಾಯ ಮಾಡುವ ಕುಲಸ್ತರಿಗೆ ಕಾಳು ಕಡಿ ನೀಡುವ ವ್ಯವಸ್ಥೆ ಕಾಣಬಹುದು.

ಬೆಳೆದ ಕಾಳಕಡ್ಡಿ ತರುವನು ಕಲ್ಲಯ್ಯ ಗುಳಿ ಮಾಡಿಡುವ ಸಂಸಾರಕೆ ಗುಳಿ ಮಾಡಿಡುವ ಸಂಸಾರಕೆ ತಂದೆಲ್ಲ ಕಾಳನ್ನು ತಂದೆಗೆಂದು ಬಗೆಯದೆ ತಂದೆಲ್ಲ ಕಾಳನ್ನು ತಂದೆಂದು ಬಗೆಯದೆ ನೊಂದ ಬಡವರಿಗೆ ಕೊಡುವನು ನೊಂದ ಬಡವರಿಗೆ ಕೊಡುವನು ಊರಲ್ಲಿ ಒಂದಾಗಿ ನಡೆದ ಎಡಬಡಕೆ ಒಂದಾಗಿ ನಡೆದ ಎಡೆಬಲಕೆ ಗುಮ್ಮ ಶಿವ ಶರಣಾಗಿ ಹುಮ್ಮದಿ ದುಡಿಯುತ್ತ ಗುಮ್ಮ ಶಿವ ಶರಣಾಗಿ ಹುಮ್ಮನದಿ ದುಡಿಯುತ್ತ ಕಮ್ಮೆಲರಾದ ಶಿವಪದಕೆ ಕಮ್ಮೆಲರಾದ ಶಿವಪದಕೆ ಕಲ್ಲಯ್ಯ ಕಮ್ಮಾರ ಕಟ್ಟೆ ಕಮ್ಮಟಕೆ ಕಮ್ಮಾರ ಕಟ್ಟೆ ಕಮ್ಮಟಕೆ ಕುಲುಮೆಟ್ಟಿಗೆ ಬರುವ ಬಲಹೀನ ಜನರಿಗೆ ಕುಲುಮೆಟ್ಟಿಗೆ ಮೆಟ್ಟಿಗೆ ಬರುವ ಬಲಹೀನ ಜನರಿಗೆ ನಲುಮೆಯ ಮಾತು ಹೇಳುತ್ತ ನಲುಮೆಯ ಮಾತು ಹೇಳುತ್ತ ಬಾಳಲ್ಲಿ ಬಲ್ಮೆ ತುಂಬುವ.
ನೋಡಿ ಕಲ್ಲಯ್ಯ ತಾನು ಪಡೆದ ದವಸದಲ್ಲಿ ಇತರರಿಗೂ ನೀಡಿ ಅನ್ಯೋನ್ಯವಾಗಿ ಬಾಳಿ ಶಿವಶರಣರ ತತ್ವಗಳನ್ನು ಎತ್ತಿ ಹಿಡಿದಿದ್ದರು.

ಬದುಕಿಗೆ ಬಲ್ಮೆ ತುಂಬುವ ಬದುಕಿಗೆ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ನಗುನಗುತಾ ದುಡಿದು ಊರಲ್ಲಿ ನಗುನಗುತಾ ದುಡಿದು ಊರಲ್ಲಿ ಬಯಲಾಗ ಹಗಲಿರಳು ಜನರ ನಡುವಲ್ಲಿ ಹಗಲಿರುಳು ಜನರ ನಡುವಲ್ಲಿ ಕಲ್ಯಾಣ ಬಸವಣ್ಣ ಕಾರುಣ್ಯ ಪಥವನು ಕಲ್ಯಾಣ ಬಸವನ ಕಾರುಣ್ಯ ಪಥವನು ದಾರಿ ಹೋಕರಿಂದ ತಿಳಿದಾನ ದಾರಿ ಹೋಕರಿಂದ ತಿಳಿದಾನ ಕಲ್ಲಯ್ಯ ಎಲ್ಲರಿಗೆ ತಿಳಿಸಿ ನಲಿದಾನ ಎಲ್ಲರಿಗೆ ತಿಳಿಸಿ ನಲಿದಾನ ಬಸವನ ಕಾಣುವ ವ್ಯಸನದಲಿ ಕಲ್ಲ ಬಸವನ ಕಾಣುವ ವ್ಯಸನದಲಿಕಲ್ಲ ತುಸುಹೊತ್ತು ಚಿಂತೆ ಮಾಡ್ಯಾನ ತುಸುಹೊತ್ತಿ ಚಿಂತೆ ಮಾಡಯಾನ.ಎಂಬ ಮಾತಲ್ಲಿ ಕಲ್ಲಯ್ಯ ಬಸವೇಶ್ವರರ ಬಗ್ಗೆ ಮಾಹಿತಿಯನ್ನು ತಿಳಿದು ಅವರನ್ನು ಕಾಣಲು ಹಂಬಲಿಸಿದ ಮಾಹಿತಿ ತಿಳಿಯುತ್ತದೆ.

ಸೊನ್ನಲಿಗೆಯ ಸಿದ್ದರಾಮ ರ ಭೇಟಿಯಾದ ಬಗೆಯನ್ನು ‌ಮುಂದಿನ ಪದ ನೀಡುತ್ತದೆ.

ಜನರಲ್ಲಿ ಹೊಸಮತ ಸುದ್ದಿ ತಿಳಿಸಯಾನ ಹೊಸಮತದ ಸುದ್ದಿ ತಿಳಿಸಯಾನ ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ವರತೆಯ ನೀರುಬ ಬತ್ತಿತ್ತು ವರತೆಯ ನೀರು ಬತ್ತಿತ್ತು ಜನರೆಲ್ಲ ಸರತಿಯಲಿ ಗುಳಿವು ಹೊರಟಿತ್ತು ಜನರೆಲ್ಲ ಸರತಿಯಲಿ ಗುಳೆವು ಹೊರಟಿತ್ತು ಎಲ್ಲಿಗೆ ಹೋಗುವುದೆಂದು ಬಲ್ಲವರ ಒಳಗೂಡಿ ಎಲ್ಲಿ ಹೋಗುವುದೆಂದು ಬಲ್ಲವರ ಒಡೆಗೂಡಿ ಕಲ್ಲಯ್ಯ ಚಿಂತೆ ಮಾಡ್ಯಾನ ಕಲ್ಲಯ್ಯ ಚಿಂತೆ ಮಾಡ್ಯಾನ ಗುಡಿ ಮುಂದ ಸೊನ್ನಲಿಗೆ ಸ್ವಾಮಿ ಬಂದಾನ ಸೊನ್ನಲಗಿ ಸ್ವಾಮಿ ಬಂದಾನ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಬಂದ ಜಳೆಬಿಟ್ಟು ಸನ್ಯಾಸಿ ಬಂದ ಜಳೆಬಿಟ್ಟ ಸನ್ಯಾಸಿ ಜನರಿಗೆ ಅಂದು ಶರಣೆಂದು ನಿಂತಾನ. ಅಂದು ಶರಣೆಂದು ನಿಂತಾನ ಕಲ್ಯಾಣ ಬಸವನ ಮಹಿಮೆಯ ಹೇಳುತ್ತ ಕಲ್ಯಾಣ ಬಸವ ನ ಮಹಿಮೆಯ ಹೇಳುತ್ತ ಎಲ್ಲವನು ತಿಳಿಸಿ ನಿಂತಾನ ಎಲ್ಲವನು ತಿಳಿಸಿ ನಿಂತಾನ ಸೊನ್ನಲಗಿ ಶಿವಸಿದ್ದರಾಮನ ಕಾರ್ಯವ ಶಿವಸಿದ್ದರಾಮನ ಕಾರ್ಯವ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಬರದಲ್ಲು ಕೆಲಸ ಕೊಟ್ಟಾನ ಬರದಲ್ಲು ಕೆಲಸ ಕೊಟ್ಟಾನ ದುಡಿವ ವರಿಗೆ ಚರದೇವ ಎನಿಸಿಕೊಂಡಾನ ಚರದೇವ ಎನಿಸಿಕೊಂಡಾನ ಒಡ್ಡರ ಪಡೆಯುಂಟು ಗುಡ್ಡಾರ ಗುಂಪುಂಟು ಒಡ್ಡಾರ ಪಡೆಯುಂಟು ಗುಡ್ಡಾರ ಗುಂಪುಂಟು ಪಡ್ಡೆ ಜನರು ಸೇರಿ ನಿಂತಾರ ಪಡ್ಡೆ ಜನ ಸೇರಿ ನಿಂತಾರ ಸಿದ್ದೇಶ ಮಡ್ಡಿ ಹೊಲದಲ್ಲಿ ಮಡಿಹೂಡಿ ಮಡ್ಡಿ ಹೊಲದಲ್ಲಿ ಮನೆಹೂಡಿ ಕಾಯಕಜೀವಿ ವಿಗೆ ನಾಯಕ ಸಿದ್ದೇಶ.
ಕಾಯಕ ಜೀವಿಗೆ ನಾಯಕ ಸಿದ್ದೇಶ ಸಾಯಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಕೆರೆಕಟ್ಟಿ ಪಾಯ ಹಾಕ್ಯಾನೆಂದು ಸನ್ಯಾಸಿ ಪಾಯ ಹಾಕ್ಯಾನೆಂದ ಸನ್ಯಾಸಿ ಕನ್ನಡದ ಕಲ್ಯಾಣದ ಮಹಿಮೆಯ ಕೇಳಿದ ಕಲ್ಲಯ್ಯ ಕಲ್ಯಾಣದ ಮಹಿಮೆಯ ಕೇಳಿದ್ದ ಕಲ್ಲಯ್ಯ ಎಲ್ಲ ಮಾಹಿತಿಯ ತಿಳಿದಾನ ಎಲ್ಲ ಮಾಹಿತಿಯ ತಿಳಿದಾನ ಸಮಯದಿ ಬಲ್ಲ ಸನ್ಯಸಿಯ ನುಡಿಯಲ್ಲಿ ಬಲ್ಲ ಸನ್ಯಾಸಿಯ ನುಡಿಯಲ್ಲಿ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಮರವೊಂದು ಕಂಡಂತೆ ಬಿಸಿಲಲ್ಲಿ ಮರವೊಂದು ಕಂಡಂತೆ ಬಿಸಿಲಲ್ಲಿ ಕಲ್ಲಯ್ಯ ಹೊರಟ ಸೊನ್ನಲಿಗೆ ಕಡೆಗಾನ ಹೊರಟ ಸೊನ್ನಲಿಗೆ ಕಡೆಗಾಗ ಕಾಳಿಕಾಂಬೆಯ ಭಕ್ತ ಕಾಳವೆ ಜೊತೆಯಲ್ಲಿ ಬಾಳ ಕಟ್ಟಲು ನಡೆದ ಗೊಂಟೋತು ಬಾಳ ಕಟ್ಟಲು ನಡೆದ ಗಂಟೋತು ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸೊನ್ನಲಗಿ ಊರಲ್ಲಿ ಮನೆಯ ಸಿದ್ದರಾಮ ಕನ್ನಲಿಗೆ ಊರಲ್ಲಿ ಮನೆಯ ಸಿದ್ದರಾಮ ಹೊನ್ನ ಕಳಸಿಟ್ಟು ಗುಡಿಕಟ್ಟಿ ಹೊನ್ನ ಕಳಸಿಟ್ಟು ಗುಡುಕಟ್ಟಿ ಕೆರೆಕಟ್ಟಿದ್ದ ಧನ್ಯ ಶಿವ ತಾನಾಗಿ ಮೆರೆದ ಇದ್ದ ಧನ್ಯಶಿವನಾಗಿ ಮೆರೆದಿದ್ದ ಊರ ಹಳ್ಳದ ಮುಂದೆ ನೂರಾರು ಒಡ್ಡರು ಊರ ಹಳ್ಳದ ಮುಂದೆ ನೂರಾರು ಒಡ್ಡರು ಹಾರೆಗುದಲೆ ಹಿಡಿದು ದುಡಿಯೋದು ಹಾರೆಗುದಲೆ ಹಿಡಿದು ದುಡಿಯೋದು ಕಂಡಾನ ದೂರದಲಿ ಬರುತಾ ಕಲ್ಲಯ್ಯ ದೂರದಲಿ ಬರುತಾ ಕಲ್ಲಯ್ಯ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕರೆ ಮುಗಿದು ನಿಂತ ಸಿದ್ದೇಶ ಕರೆ ಮುಗಿದು ನಿಂತ ಸಿದ್ದೇಶ ಶರಣನ ಹರನಂತೆ ಕಂಡು ಕೈಮುಗಿದ ಹರನಂತೆ ಕಂಡು ಕೈಮುಗಿದ ದರ್ಶನಕ್ಕೆ ಬಂಧನವ ಹರುಷದಿ ಮಾತಾಡಿ ದರ್ಶನಕ್ಕೆ ಬಂಧನವ ಹರುಷದಿ ಮಾತನಾಡಿಸಿ ಗುರುತು ಪರಿಚಯ ಕೇಳಿದನ ಗುರುತು ಪರಿಚಯ ಕೇಳಿದನ ಸಿದ್ದರಾಮ ವರ್ಷವೆಲ್ಲ ದಾರಿ ಕಾಯ್ದಂತೆ ವರ್ಷವೆಲ್ಲ ದಾರಿ ಕಾದಂತೆ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ಮೌನಾಗಿ ಎಲ್ಲ ತಿಳಿದಾನ ಮೌನಾಗಿ ಎಲ್ಲ ತಿಳಿದಾನ ಸಿದ್ದೇಶ ತಾಣ ತೋರ್ಯಾನ ಕೆಲಸಕ್ಕ ತಾಣ ತೋರ್ಯಾನ ಕೆಲಸಕ್ಕ ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ಊಟೋಪಚಾರ ಮಾಡಿಸಿ ಊಟೋಪಚಾರ ಮಾಡಿಸಿ ಕಲ್ಲೆಗೆ ಕೂಟಸ್ಥ ಕೆಲಸ ಒಪ್ಪಿಸಿದ ಕೂಟಸ್ತ ಕೆಲಸ ಒಪ್ಪಿಸಿದ ಬೊಮ್ಮಯ್ಯ ಗಣದಲ್ಲಿ ಸಿಮ್ಮಲಿಗೆ ಶರಣರು ಬೊಮ್ಮಯ್ಯನ ಗಣದಲ್ಲಿ ಸಿಮ್ಮಲಿಗೆ ಶರಣರು ಕಮ್ಮಾರ ಕಲ್ಲಯ್ಯ ಸೇರ್ಯಾರ.

ಕಲ್ಲಯ್ಯ ನಾಡ ಶಿಲ್ಪಿಯಾಗಿ ಬೆಳೆದ ಪರಿಯನ್ನ ಜನಪದರು ಹೀಗೆ ಹಾಡಿದ್ದಾರೆ.
ಕಮ್ಮಾರ ಕಲ್ಲಯ್ಯ ಸೇರ್ಯಾರ ದಿನನಿತ್ಯ ಹಮ್ಮಿಲೆ ಕೆಲಸ ಮಾಡ್ಯಾರ ಹಮ್ಮಿಲೆ ಕೆಲಸ ಮಾಡ್ಯಾರ ಶಿಲ್ಪತನ ವಿದ್ಯೆಯ ಸಂಗಡ ಬಂದಿತ್ತು ಶಿಲ್ಪತನವಿ ವಿದ್ಯೆಯು ಸಂಗಡ ಬಂದಿತು ಕಲ್ಪಿತಾಯುತವ ರಚಿಸುತ ಕಲ್ಪಿತಾಯುಧವ ರಚಿಸುತ ಕಲ್ಲಯ್ಯ ಶಿಲ್ಪಿ ಸಿದ್ದೇಶನ ಮನಗೆದ್ದ ಶಿಲ್ಪಿ ಸಿದ್ದೇಶನ ಮನಗೆದ್ದ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ವರಸಿಸಿದ್ದರಾಮಗೆ ಜೊತೆಯಾದ ವರ ಸಿದ್ದರಾಮಗೆ ಜೊತೆಯಾದ ಕಲ್ಲಯ್ಯ ಬರದಿಂದ ಕೆಲಸ ಮಾಡಿದ.

ಬರದಿಂದ ಕೆಲಸ ಮಾಡಿದ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಎದ್ದು ಕಂಡ ಶರಣ ಕಲ್ಲಯ್ಯ ಎದ್ದು ಕಂಡ ಶರಣ ಕಲ್ಲಯ್ಯ ದಿನನಿತ್ಯ ಶುದ್ಧ ಕಾಯಕ ಹೆಸರಾದ ಶುದ್ಧ ಕಾಯಕ ಹೆಸರಾದ ಕುಲವರತಿಯಲಿಕಲ್ಲ ಛಲದಂಕ ಮಲ್ಲ ಕುಲವರತಿಯಲಿಕಲ್ಲ ಚಲದಂಕ ಮಲ್ಲನು ಒಲವಿಂದ ದುಡಿದ ಹಗಲಿರುಳು.
ಒಲವಿಂದ ದುಡಿದ ಹಗಲಿರುಳು ಸಿದ್ದೇಶನ ಬಲಗಯ್ಯ ಭಂಟ ತಾನಾದ ಬಲಗಯ್ಯ ಭಂಟ ತಾನಾದ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ನಾಡ ಶಿಲ್ಪಿ ಎಂದು ಹೆಸರಾದ.

ನಾಡ ಶಿಲ್ಪಿ ಎಂದು ಹೆಸರಾದ ಕಲ್ಲಯ್ಯ ನೋಡಿ ಹೊಗಳಿದ ಸಿದ್ದೇಶ ನೋಡಿ ಹೊಗಳಿದ ಸಿದ್ದೇಶ ದೇವರಥ ಶಿಲ್ಪದಲಿ ಜೀವನದ ಕೀಲಿಟ್ಟು ದೇವರಥ ಶಿಲ್ಪದಲಿ ಜೀವನ ಕೀಲಿಟ್ಟು ಕಾವಲಾಗಿ ನಿಂತ ಜಾತ್ರೆಯಲಿ ಕಾವಲಾಗಿ ನಿಂತ ಜಾತ್ರೆಯಲಿ ಕಲ್ಲಯ್ಯ ಸೇವೆ ಮಾಡಿದ ಜನ ಮೆಚ್ಚುವಂತೆ ಸೇವೆ ಮಾಡಿದ ಜನ ಮೆಚ್ಚುವಂತೆ ಕಲ್ಲಯ್ಯ ಮುಂದಾಗಿ ಬುಲ್ಲೇಶ ಹಿಂದಾಗಿ ಕಲ್ಲಯ್ಯ ಮುಂದಾಗಿ ಬಿಲ್ಲೇಶ ಹಿಂದಾಗಿ ಪಲ್ಲಕ್ಕಿ ಹೊತ್ತು ನಡೆದಾರ ಪಲ್ಲಕ್ಕಿ ಹೊಡೆತು ನಡೆದಾರ ಮಡಿಹಾಸಿ ಎಲ್ಲಾ ಜನ ನಿಂತು ನಮಿಶಾರ ಎಲ್ಲಾ ಜನ ನಿಂತು ನಮಿಶಾರ ಜಯಜ ಜಯ ಎನ್ನುತ್ತ ಜೈಕಾರ ಹಾಕ್ಯಾರ ಜಯ ಜಯ ಎನ್ನುತ್ತ ಜೈಕಾರ ಹಾಕೆರ ಜಯ ಮಲ್ಲಿನಾಥ ಎನುತೆಲ್ಲ ಜಯ ಮಲ್ಲಿನಾಥ ಎನುತೆಲ್ಲ ಜನಸೇರಿ ಜಯಸಿದ್ದೇಶ್ವರ ಎಂದಾರ ಜಯಸಿದ್ದೇಶ್ವರ ಎಂದಾರ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಸಾಲಾಗಿ ಕುಂತ ಜನಕೆಲ್ಲ ಸಾಲಾಗಿ ಕುಂತ ಜನಕೆಲ್ಲ ಉಣಶಾರ.
ಮ್ಯಾಲೆ ಹುಳಿಬಾನ ನೀಡುತ್ತ ಮ್ಯಾಲೆ ಹುಳಿಬಾನ ನೀಡುತ್ತ.

ಶ್ರಿಶೈಲಕ್ಕೆ ಪಾದಯಾತ್ರೆ ಹೊರಟ ಕಲ್ಲಯ್ಯನ ಸಂಭ್ರಮವನ್ನು ಈ ಮುಂದಿನಂತೆ ವರ್ಣಿಸಲಾಗಿದೆ.
ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಹೊರಳಿತು ಹೊತ್ತು ಚಿಗುರೆಡೆಗೆ ಹೊರಳಿತು ಹೊತ್ತು ಚಿಗುರೆಡೆಗೆ ಶ್ರೀಶೈಲಗೆ ತೆರಳಲು ನಿಂತಾರ ಭಕ್ತರು ಶ್ರೀಶೈಲೆಗೆ ತೆರಳ ಲು ನಿಂತಾರ ಭಕ್ತರು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ಕಂಬಿ ಜೊತೆ ಹೊರಟ ಕಲ್ಲಯ್ಯ ಕಂಬಿಜ ಕಂಬಿ ಜೊತೆ ಹೊರಟ ಕಲ್ಲಯ್ಯ ದೊಂದುಬೆ ಹೊರಟಂಗ ಹೂಕಡೆಗೆ ದುಂಬಿ ಹೊರಟಂಗ ಹೂಕಡೆಗೆ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಬರುತೀವಿ ನಿನ್ನ ದರ್ಶನಕ ಬರುತೀವಿ ನಿನ್ನ ದರ್ಶನಕ ಎನ್ನುತ ಬೆರೆತೋದ ಕಲ್ಲಯ್ಯ ಭಕ್ತರನು ಬೆರೆತೋದ ಕಲ್ಲಯ್ಯ ಭಕ್ತರನು ನಿತ್ಯ ದಾರಿ ನಡೆದು ಹೊತ್ತು ಹೋದಲ್ಲಿ ಉಳಿದು ನಿತ್ಯ ದಾರಿಯ ನಡೆದು ಹೊತ್ತು ಹೋದಲ್ಲಿಉಳಿದು ಸತ್ಯಶಿವ ನೆನೆದು ಸಾಗ್ಯಾರ ಸತ್ಯಶಿವ ನೆನೆದು ಸಾಗ್ಯಾರ ದಾರಿಯಲ್ಲಿ ಸುತ್ತ ಸುತ್ತಹುಬಳ್ಳಿ ಕಾಣುತ್ತ.

ಸುತ್ತ ಹೂಬಳ್ಳಿ ಕಾಣುತ್ತ ಎತ್ತೆತ್ತ ನೋಡಿದರ ಎತ್ತರದ ಕರಿಗುಡ್ಡ ಎತ್ತೆತ್ತ ನೋಡಿದರ ಎತ್ತರದ ಕಡಿಗುಡ್ಡ ಮುತ್ತಕೊಂಡವಲ್ಲಿ ಪಶುಭಕ್ತಿ ಮುತ್ತಿಕೊಂಡವಲ್ಲಿ ಪಶುಭಕ್ತಿ ಅಲ್ಲಲ್ಲಿ ಒತ್ತಿ ಹರಿತಾವ ತಿಳಿನೀರ ಒತ್ತಿ ಹರಿತಾವ ತಿಳಿನಾರ ಶಿವಭಕ್ತ ಮಲ್ಲಯ್ಯಶಿವ ಶಿವಶಿವ ಎನ್ನುತ್ತ ಶಿವಭಕ್ತ ಶಿವಭಕ್ತ ಕಲ್ಲಯ್ಯ.
ಶಿವ ಶಿವ ಎನ್ನುತ್ತ ಮಲ್ಲಯ್ಯನಗಂಗ್ಯಾಲ ವೈದಾನ ಮಲ್ಲಗ್ಯಾಲ ವೈದಾನ ಮಲೈ ಮಲ್ಲಯ್ಯಗ್ಯಾಲ ವೈದಾನ ಶ್ರೀಶೈಲಕೆ ಬಲ್ಲ ಶರಣಾಗಿ ನಿಂತಾನ ಬಲ್ಲ ಶರಣಾಗಿ ನಿಂತಾನ ಜೋಡಾದ ಐಗಳು ತೋಡಿ ಹೇಳುತಿಹರು ಜೋಡಾದ ಐಗಳು  ತೋಡಿ ಹೇಳುತಿಹರು ರೂಢಯ ಮಾತು ಆಡುತ್ತ ರೂಢಯ ಮಾತು ಆಡುತ್ತ ದಾರಿಯಲಿ ಹಾಡಶಾರ ಕಲ್ಲನ ಕರೆ ಕರೆದು ಹಾಡಶಾರ ಕಲ್ಲನ ಕರೆ ಕರೆದು ಸುತ್ತ ಮಹಾಗಡ್ಡ ಎತ್ತರದ ಗಿಡಮರ ಸುತ್ತ ಮಹಾಗುಡ್ಡ ಎತ್ತರದ ಗಿಡಮರ ಚಿತ್ತ ಬಂದೆಳೆಗೆ ಹಾರುವ ಚಿತ್ತ ಬಂದೆಳೆಗೆ ಹಾರುವ ಗಣ ಉತ್ತುಂಗ ತಾಣ ಶಿವಸದನ ಉತ್ತುಂಗ ತಾಣ ಶಿವಸದನ.
ಶ್ರೀಶೈಲದ ದೇಗುಲ ಕಂಡ ಕಲ್ಲಯ್ಯ ಅಚ್ಚರಿಗೊಂಡ ಪರಿಯನ್ನು ಈ ಮುಂದೆ ಬಣ್ಣಿಸಿದ್ದಾರೆ.

ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಸುಂದರಲಿಂಗ ಕಂಡಾನ ಸುಂದರಲಿಂಗ ಕಂಡಾನ ಗುಡ್ಡದಲಿ ತಂದೆ ಮಲ್ಲಯ್ಯನೆಂದು ನಮಿಶಾನ ತಂದೆ ಮಲ್ಲಯ್ಯನೆಂದು ನಮಿಶಾನ ಬೇಡುವಜನ ಜನವಿತ್ತು ಹಾಡುವರ ಗುಂಪಿತ್ತು ಬೇಡುವ ಜನವಿತ್ತು ಹಾಡುವರ ಗುಂಪಿತ್ತು ನೋಡಿ ನಲಿವವರ ಬಳಗೆ ಇತ್ತು ನೋಡಿ ನಲಿವವರ ಬಳಗಿತ್ತು ಗುಡಿಯಲ್ಲಿ ಓಡಾಡುತ ಕಂಡ ಕಲ್ಲಯ್ಯ ಓಡಾಡುತ ಕಂಡ ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಹಾಡ ಕೇಳಿ ಮೆಚ್ಚಿದ ಸಿದ್ದೇಶ ಹಾಡು ಕೇಳಿ ಮೆಚ್ಚಿದ ಸಿದ್ದೇಶನ ಗುಡಿಯಲ್ಲಿ ಮೂಡಿಗೊಳಗಾಗಿತ್ತು ಜನ ಮೂಡಿಗೊಳಗಾಗಿತ್ತು ಜನ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕೂಡಿಸಿದ್ದಾನ ಜೊತೆ ಉಳಿದಾನ ಕೂಡಿಸಿದ್ದಾನ ಜೊತೆ ಉಳಿದಾನ ಗಿರಿಯಲ್ಲಿ ನೋಡ ನೋಡಿ ದಿನ ಕಳಿದ ನ ನೋಡ ನೋಡಿ ದಿನ ಕಳೆದಾನ ಹೊಳ್ಳಿ ಬಂದರಿಗೆ ಒಳ್ಳೆ ಕಾರ್ಯವ ಮಾಡಿ ಹೊಳ್ಳಿ ಬಂದೂರಿಗೆ ಒಳ್ಳೆ ಕಾರ್ಯವ ಮಾಡಿ ಹಳ್ಳಿಯಲಿ ಬೆಳೆಸಾನ ಭಕ್ತಿಯ ಎಂಬುದಾಗಿ ಕಲ್ಲಯ್ಯ ಹಳ್ಳಿಯಲ್ಲಿ ಭಕ್ತಿ ಚಳುವಳಿಯ ಆರಂಭಮಾಡಿದ ಬಗೆಯ ಹೇಳಿರುವರು.


ಹಳ್ಳಿಯಲಿ ಬೆಳೆಸಾನ ಭಕ್ತಿಯ ಪ್ರೀತಿಯಲಿ ತಳ್ಳಿ ಹಾಕಿ ಜಾತಿ ಭೇದವನು ತಳ್ಳಿಹಾಕಿ ಜಾತಿ ಭೇದವನು ಬಂದವರ ಬಾಯನುತ ನಿಂದವರ ಕೂಡೆನುತ ಬಂದವರ ಬಾಯನುತ ನಿಂದವರ ಕೂಡೆನುತ ನೊಂದವರ ಕಷ್ಟಕ್ಕೆ ಆಗ್ಯಾನ ನೊಂದವರ ಕಷ್ಟಕ್ಕೆ ಆಗ್ಯಾನ ಕಲ್ಲಯ್ಯ ಹೊಂದಿಸಿ ಭಕ್ತಿ ಊರಲ್ಲಿ ಹೊಂದಿಸಿ ಭಕ್ತಿ ಊರಲ್ಲಿ ಭಕ್ತಿಯಲ್ಲಿ ದಾಸೋಹ ಯುಕ್ತಿಯಲಿ ಕಾಯಕ ಭಕ್ತಿಯಲಿ ದಾಸೋಹ ಯುಕ್ತಿಯಲಿ ಕಾಯೋಕ ವಿರಕ್ತಿಯಲಿ ಪಥವ ಹಿಡಿದಾನ ವಿರಕ್ತಿಯ ಪತವ ಹಿಡಿದಾನ ಸೇವೆಯಲ್ಲಿ ಮುಕ್ತಿ ತೋರೋ ಶರಣ ಎನಿ ಶ್ಯಾನ ಮುಕ್ತಿ ತೋರೋ ಶರಣ ಎನಿ ಶ್ಯಾನ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಶುದ್ಧ ಶಿಷ್ಯನಾಗಿ ನಿಂತಾನ ಶುದ್ಧ ಶಿಷನಾಗಿ ನಿಂತಾನ ಕಲ್ಯಾಣದ ಶಿವ ಬೆಳಕ ಹಂಚಿ ಬಾಳಯಾನ ಶಿವ ಬೆಳಕ ಹಂಚಿ ಬಾಳ ನ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ಚಿತ್ತದಲಿ ಶಿವನ ನೆನೆಯುತ್ತ ಚಿತ್ತದಲಿ ಶಿವನ ನೆನೆಯುತ್ತ ಕಲ್ಲಯ್ಯ ಬಿತ್ತಿ ಶರಣರ ನೂಡಿ ಬಯಲಾದ ಬಿತ್ತಿ ಶರಣರ ನುಡಿ ಬಯಲಾದ ಬಿತ್ತಿ ಶರಣು ನುಡಿ ಬಯಲಾದ ಎಂದು ಮುಕ್ತಾಯ ವಾಗುವ ಜನಪದ ಗೀತೆಯು ಶರಣ ಕಲ್ಲಯ್ಯನವರ ಜೀವನ ದರ್ಶನ ಮಾಡುತ್ತದೆ.
ಇಂತಹ ಎಲೆಮರೆಯ ನೂರಾರು ಶರಣರು ನಮ್ಮ ನಾಡಿನಲ್ಲಿ  ಕಾಯಕ ಮಾಡುತ್ತಾ  ಭಕ್ತಿಯ ರಸಧಾರೆ ಹರಿಸಿರುವರು ಅವರ ಬಗ್ಗೆ ನಮ್ಮ ಜನಪದರು ಹಾಡಿರುವ ಹಾಡುಗಳನ್ನು ಗುರ್ತಿಸಿ ಸಂಶೋಧನೆ ಮಾಡಿ.ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

02 ಫೆಬ್ರವರಿ 2026

ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..


 ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..



ಫೆಬ್ರವರಿ ತಿಂಗಳು ವರ್ಷದ ಉಳಿದ ತಿಂಗಳುಗಳಿಗಿಂತ ವಿಭಿನ್ನ ಮತ್ತು ವಿಶೇಷ. ಪ್ರಕೃತಿಯ ಬದಲಾವಣೆ, ಸಾಂಸ್ಕೃತಿಕ ಮಹತ್ವ ಹಾಗೂ ಕಾಲಗಣನೆಯ ವೈಚಿತ್ರ್ಯದಿಂದಾಗಿ ಇದು ತನ್ನದೇ ಆದ ಆಕರ್ಷಣೆ ಹೊಂದಿದೆ.
ಫೆಬ್ರವರಿ ತಿಂಗಳು ಕೇವಲ 28 ಅಥವಾ 29 ದಿನಗಳನ್ನು ಹೊಂದಿರುವ ವರ್ಷದ ಏಕೈಕ ತಿಂಗಳು. ಸೌರಮಂಡಲದ ಲೆಕ್ಕಾಚಾರದ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ 'ಅಧಿಕ ವರ್ಷ' (Leap Year) ಬರುತ್ತದೆ. ಆಗ ಈ ತಿಂಗಳು 29 ದಿನಗಳನ್ನು ಹೊಂದಿರುತ್ತದೆ. ಈ ವೈಶಿಷ್ಟ್ಯವೇ ಫೆಬ್ರವರಿಯನ್ನು ಇತರ 11 ತಿಂಗಳುಗಳಿಗಿಂತ ವಿಭಿನ್ನವಾಗಿ ನಿಲ್ಲಿಸುತ್ತದೆ.

ಈ ತಿಂಗಳು ಮನೆ ಮಾಲೀಕರಿಗೆ ಖುಷಿಯ ವಿಚಾರವಾದರೆ ಬಾಡಿಗೆದಾರರಿಗೆ ಬೇಸರದ ತಿಂಗಳು.

ಫೆಬ್ರವರಿ ತಿಂಗಳೆಂದರೆ
ಮನೆ ಓನರ್ ಗಳಿಗೆ
ಎಲ್ಲಿಲ್ಲದ ಸಂತಸ|
ಎರಡು ದಿನ  ಮೊದಲೇ
ತುಂಬಿ ಬಿಡುವುದು
ಅವರ ಬೊಕ್ಕಸ ||

ಭಾರತದಲ್ಲಿ ಫೆಬ್ರವರಿ ತಿಂಗಳು ಶೀತಗಾಲದ ಅಂತ್ಯ ಮತ್ತು ವಸಂತ ಕಾಲದ ಆಗಮನದ ಸಮಯ. ಮರದ ಎಲೆಗಳು ಉದುರಿ ಹೊಸ ಚಿಗುರು ಕಾಣಿಸಿಕೊಳ್ಳುವ ಹಾಗೂ  ಹೂವುಗಳು ಅರಳುವ ಸುಂದರ ಕಾಲವಿದು. ಅತಿಯಾದ ಚಳಿಯೂ ಇಲ್ಲದ ವಿಪರೀತ ಸೆಕೆಯೂ ಇಲ್ಲದ ಹಿತಕರವಾದ ಹವಾಮಾನ ಇರುವುದರಿಂದ ಪ್ರವಾಸಕ್ಕೆ ಇದು ಅತ್ಯುತ್ತಮ ಸಮಯ.

ಈ ತಿಂಗಳು  ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನೂ ಹೊಂದಿದೆ
ಫೆಬ್ರವರಿ ತಿಂಗಳಿನಲ್ಲಿ ಹಲವಾರು ಪ್ರಮುಖ ದಿನಾಚರಣೆಗಳಿವೆ.ಅದರಲ್ಲಿ
ಫೆಬ್ರವರಿ 14  ರಂದು ಆಚರಿಸುವ  ಪ್ರೇಮಿಗಳ ದಿನ ಒಂದು.ಅದು ವಿಶ್ವದಾದ್ಯಂತ ಪ್ರೀತಿ ಮತ್ತು ಸ್ನೇಹವನ್ನು ಸಂಭ್ರಮಿಸುವ ದಿನ.

ಕಾತರಿಸುವನು ಅವನು
ಎಂದು ಬರುವುದೋ
ಫೆಬ್ರವರಿ ಹದಿನಾಲಕ್ಕು|
ಅವಳು ಇವನ
ಪ್ರೀತಿ ಸ್ವೀಕರಿಸಿದರೆ
ಅದೇ ದೊಡ್ಡ ಲಕ್ಕು||




ಫೆಬ್ರವರಿ 21 ರಂದು  ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತೇವೆ. ನಮ್ಮ ತಾಯ್ನುಡಿಯ ಮಹತ್ವವನ್ನು ಸಾರುವ ದಿನವು ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವ ದಿನ
  ಫೆಬ್ರವರಿ 28 ರಂದು  ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಸರ್ ಸಿ.ವಿ. ರಾಮನ್ ಅವರು 'ರಾಮನ್ ಎಫೆಕ್ಟ್' ಸಂಶೋಧಿಸಿದ ದಿನದ ನೆನಪಿಗಾಗಿ ಇದನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಇದೇ ತಿಂಗಳಲ್ಲಿ ನಮ್ಮ ನಾಡಿನಲ್ಲಿ ಅನೇಕ ಹಬ್ಬ ಹಾಗೂ ಜಾತ್ರೆಗಳನ್ನು ಆಚರಿಸುತ್ತೇವೆ.
ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಬರುವ 'ಮಹಾಶಿವರಾತ್ರಿ' ಹಬ್ಬವು ಧಾರ್ಮಿಕವಾಗಿ ಈ ಕಾಲಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.

ಇಷ್ಟೆಲ್ಲಾ ಮಹತ್ವದ ಈ ತಿಂಗಳ ಕಂಡರೆ ಕೆಲವರು ಬೇಸರ ವ್ಯಕ್ತಪಡಿಸುವರು.ಅವರೇ ಫೆಬ್ರವರಿ ತಿಂಗಳ 29 ರಂದು ಜನಿಸಿವರು.

ಫೆಬ್ರವರಿ 29 ರಂದು
ಹುಟ್ಟಿದವರ ಪಾಡು
ಹೇಳತೀರದು|
ಅವರ ಹುಟ್ಟು
ಪ್ರತಿ ವರ್ಷ ಬಾರದು||


ಫೆಬ್ರವರಿ ಎಂದರೆ ಕೇವಲ ಒಂದು ತಿಂಗಳಲ್ಲ.ಅದು ಹಳೆಯದನ್ನು ಕಳೆದು ಹೊಸತನಕ್ಕೆ ಸಿದ್ಧವಾಗುವ ಸಂಧಿಕಾಲ. ವರ್ಷದ ಚಿಕ್ಕ ತಿಂಗಳಾದರೂ ಇದು ಹೊತ್ತು ತರುವ ಸಂಭ್ರಮ ಮತ್ತು ಸಾರ್ಥಕತೆ ದೊಡ್ಡದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು

11 ಜನವರಿ 2026

ಜಗದ ಎತ್ತರದ ಹಾಗೂ ಭಾರವಾದ ಶಿಬಲಿಂಗ..


 ಜಗದ ಅತಿ ಎತ್ತರದ ಹಾಗೂ ಭಾರವಾದ ಏಕ‌ ಶಿಲಾ ಶಿವಲಿಂಗ ಬಿಹಾರದ ದೇವಾಲಯವೊಂದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.


ಗ್ರಾನೈಟ್ ಶಿಲೆಯಲ್ಲಿ ಕೆತ್ತಿರುವ ಈ ಲಿಂಗವು‌ 33 ಅಡಿ ಉದ್ದವಿದ್ದು ಬರೊಬ್ವರಿ 210 ಟನ್ ಭಾರವಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಹತ್ತು ವರ್ಷಗಳಿಂದ ಕೆತ್ತನೆ ಮಾಡಿ ಈಗ ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದ ಕಡೆಗೆ ಪಯಣ ಆರಂಭಿಸಿದೆ.ಲಿಂಗವೇ ಈ ಮಟ್ಟದ ದಾಖಲೆಯನ್ನು ಹೊಂದಿದೆ ಎಂದರೆ ಆ ದೇವಾಲಯದ ಬಗ್ಗೆ ನನಗೆ ಇನ್ನೂ ಕುತೂಹಲ ಇದೆ.


ಈ ಬೃಹತ್  ಲಿಂಗದ ಸಾಗಣೆಗೆ 96 ಚಕ್ರದ ಹೈಡ್ರಾಲಿಕ್ ಲಾರಿ ಬಳಸಲಾಗಿದೆ.2100 ಕಿಲೋಮೀಟರ್ ದಾರಿ ಸುಸೂತ್ರವಾಗಿ ಸಾಗಿ ಪ್ರಸಾವಿತ ದೇವಳ ತಲುಪಲಿ ಎಂದು ಆಶಿಸೋಣ.ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರೋಣ.


#sihijeevi #tumkur 

 #harharmahadev #omnamahshivaya 

#Bihar #mahabalipuram #tamilnadupolitics

09 ಜನವರಿ 2026

ನೆಲದ ನಕ್ಷತ್ರ ದೀಪೆಂದರ್ ಗೋಯಲ್..

 


ಅವರು ತಮ್ಮ ಬಾಲ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಅವರು ಕುಳ್ಳಗಿದ್ದರು, ಕಪ್ಪಗಿದ್ದರು.    ತೊದಲುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಅವರ ಸ್ನೇಹಿತರು ಕೀಟಲೆ ಮಾಡಿ ಅವಮಾನ ಮಾಡಿದ್ದರು.  ಅವರು ಮಾತನಾಡುವಾಗ ಜನರು ಅವರ ಕಡೆ ಗಮನ ಕೊಡುತ್ತಿರಲಿಲ್ಲ ಅಥವಾ ಅವರ ಮಾತಿನ ಮಧ್ಯದಲ್ಲೇ ಬೇರೆಡೆ ನೋಡುತ್ತಿದ್ದರು. ಈ ಕೀಳರಿಮೆಯೇ ಅವರನ್ನು ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಪ್ರೇರೇಪಿಸಿತು. ಇಂದು ಅವರು ಯಶಸ್ವಿ ಉದ್ಯಮಿ 700000 ಕ್ಕೂ ಜನರ ಉದ್ಯೋಗದಾತ.ಈಗ  ತಾವು ತೊದಲುತ್ತಾ ಮಾತನಾಡೊದರೂ  ಜನರು ಅವರ  ಮಾತನ್ನು ಗಮನವಿಟ್ಟು ಕೇಳುತ್ತಾರೆ.ಅವರೇ ಜೊಮಾಟೋ ಕಂಪನಿಯ ಸಂಸ್ಥಾಪಕ ದೀಪೇಂದರ್ ಗೋಯಲ್.


ಗೋಯಲ್ ಜನವರಿ 26, 1983 ರಂದು ಭಾರತದ ಪಂಜಾಬ್‌ನ ಮುಕ್ತಸರ್‌ನಲ್ಲಿ ಜನಿಸಿದರು. ಅವರು 2005 ರಲ್ಲಿ ದೆಹಲಿಯ ಐ ಐಟಿ  ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದ
ನಂತರ ಜನವರಿ 2006 ರಲ್ಲಿ ಬೈನ್ ಅಂಡ್ ಕಂಪನಿಯಲ್ಲಿ ಹಿರಿಯ ಸಹಾಯಕ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬೈನ್‌ನಲ್ಲಿದ್ದಾಗ ಗೋಯಲ್ ತಮ್ಮ ಸಹೋದ್ಯೋಗಿ ಪಂಕಜ್ ಅವರೊಂದಿಗೆ ಆಹಾರ ಆರ್ಡರ್‌ಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅನಾನುಕೂಲತೆಯಿಂದ ಪ್ರೇರಿತರಾಗಿ ಜೊಮ್ಯಾಟೊದ ಕಲ್ಪನೆಯನ್ನು ರೂಪಿಸಿದರು.  ಬೈನ್ ಉದ್ಯೋಗಿಗಳಿಗೆ ಆಹಾರ ಆರ್ಡರ್ ಮಾಡುವ ವೆಬ್‌ಸೈಟ್ ಎಂಬ ಅವರ ಆರಂಭಿಕ ಯೋಜನೆಯು ಯಶಸ್ವಿಯಾಯಿತು. ಇದು 2008 ರಲ್ಲಿ ಜೊಮ್ಯಾಟೊ ಸ್ಥಾಪನೆಗೆ ಕಾರಣವಾಯಿತು. 
ಆರಂಭದಲ್ಲಿ ಫುಡೀಬೇ ಎಂದು ಹೆಸರಿಸಲಾದ ಜೊಮ್ಯಾಟೊ ಭಾರತೀಯ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಮತ್ತು ಆಹಾರ ವಿತರಣಾ ಕಂಪನಿಯಾಗಿದೆ. ಇದು ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು ಮತ್ತು ವಿತರಣಾ ಪಾಲುದಾರರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ  ಜೊಮ್ಯಾಟೊ ಜಾಗತಿಕವಾಗಿ ವಿಸ್ತರಿಸಿದೆ.ಸುಮಾರು 22 ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಗ್ರ ರೆಸ್ಟೋರೆಂಟ್ ಮಾಹಿತಿ, ಮೆನು ವಿವರಗಳು, ಬೆಲೆ ಮತ್ತು ವಿಮರ್ಶೆಗಳನ್ನು ನೀಡುತ್ತದೆ. 
ಗೋಯಲ್ ಅವರ ನಾಯಕತ್ವದಲ್ಲಿ, ಜೊಮಾಟೊ ಪೋಲೆಂಡ್‌ನಲ್ಲಿ ಗ್ಯಾಸ್ಟ್ರೋನೌಸಿ , ಇಟಲಿಯಲ್ಲಿ ಸಿಬಾಂಡೋ ಮತ್ತು ಭಾರತದಲ್ಲಿ ಬ್ಲಿಂಕಿಟ್  ಗಳ   ಸ್ವಾಧೀನಗಳ ಮೂಲಕ ತನ್ನ ಜಾಗತಿಕ ಉಪಸ್ಥಿತಿಯನ್ನು ಬೆಳೆಸಿಕೊಂಡಿದೆ.
ಝೊಮಾಟೊದ ಯಶಸ್ಸು ಕಂಡು ಸುಮ್ಮನೆ ಕೂರದ ಗೋಯಲ್   ಮೇನ್‌ಸ್ಟ್ರೀಟ್, ಗ್ಯಾಬಿಟ್, ಥೆರಾಡೊ, ಶಿಪ್‌ರಾಕೆಟ್, ಬ್ಲಿಂಕಿಟ್,  ಬಿರಾ 91, ಹೈಪರ್‌ಟ್ರಾಕ್, ಟೆರ್ರಾಡೊ, ಚೆಫ್‌ಕಾರ್ಟ್, ಸ್ಕ್ವಾಡ್‌ಸ್ಟ್ಯಾಕ್ ಮತ್ತು ಅನ್‌ಅಕಾಡೆಮಿ ಸೇರಿದಂತೆ ವಿವಿಧ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇವರ ಸಾಧನೆಯನ್ನು ಗುರ್ತಿಸಿದ ಹಲವಾರು ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
೨೦೧೧ ರಲ್ಲಿ, ಗೋಯಲ್ ಅವರಿಗೆ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ಅಪ್ ಆಫ್ ದಿ ಇಯರ್ ಪ್ರಶಸ್ತಿ ೨೦೧೨ ರಲ್ಲಿ  ಬಿಸಿನೆಸ್ ಟುಡೇ ಯಂಗ್ ಬಿಸಿನೆಸ್ ಲೀಡರ್ ಪ್ರಶಸ್ತಿ,೨೦೧೮ ರಲ್ಲಿ  ಐಐಟಿ ದೆಹಲಿಯಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ  ಪ್ರಶಸ್ತಿ,   ೨೦೧೯ ರಲ್ಲಿ  ವರ್ಷದ ಜಿಕ್ಯೂ ಪುರುಷರ ಪ್ರಶಸ್ತಿ  ಸ್ವೀಕರಿಸಿದ್ದಾರೆ. 2020 ರಲ್ಲಿ ಗೋಯಲ್  ಫಾರ್ಚೂನ್ ಇಂಡಿಯಾ 40 ವರ್ಷದೊಳಗಿನವರ ಪಟ್ಟಿಯಲ್ಲಿ ಸೇರಿಸಲಾಯಿತು.ಅವರು 2023 ರ EY ಉದ್ಯಮಿ ಪ್ರಶಸ್ತಿಗೆ ಅಂತಿಮ ಸ್ಪರ್ಧಿಯೂ ಆಗಿದ್ದರು.

ಗೋಯಲ್ ಅವರು ಐಐಟಿ ದೆಹಲಿಯಲ್ಲಿ ಕಾಲೇಜು ವರ್ಷಗಳಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ವಿವಾಹವಾಗಿದ್ದು. ಅವರಿಗೆ ಸಿಯಾರಾ ಎಂಬ ಮಗಳಿದ್ದಾಳೆ.ಇತ್ತೀಚಿಗೆ ಮಾಧ್ಯಮದವರ ಜೊತೆಯಲ್ಲಿ ಮುಕ್ತವಾಗಿ ಮಾತನಾಡಿದ ಗೋಯಲ್ ರವರು ತಮ್ಮ ಆದ್ಯತೆ, ಮುಂದಿನ ಗುರಿಗಳ ಬಗ್ಗೆ ವಿವರ ನೀಡಿದ್ದಾರೆ.

ಜೋಮಾಟೊದಲ್ಲಿ ಯಾವುದೇ ತ್ರೈಮಾಸಿಕ ಅಥವಾ ವಾರ್ಷಿಕ ಗುರಿಗಳಿಲ್ಲ  ಗುರಿಗಳನ್ನು ನಿಗದಿಪಡಿಸುವುದರಿಂದ ಜನರು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ  ಎಂದಿದ್ದಾರೆ.
  ಬ್ಲಿಂಕಿಟ್ ಸೇವೆಯು ದೀಪಿಂದರ್ ಅವರಿಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಗಿದ್ದರಿಂದ  ಗೆಳೆಯ ಅಲ್ಬಿಂದರ್ ಧಿಂದ್ಸಾ  ಅವರಿಂದ ಖರೀದಿಸಿದರು.   ಪ್ರಸ್ತುತ ಜೋಮಾಟೊ ಮತ್ತು ಬ್ಲಿಂಕಿಟ್‌ನಲ್ಲಿ 7,50000 ಕೆಲಸಗಾರರಿಗೆ ಉದ್ಯೋಗ ನೀಡಿದೆ.  ಒಬ್ಬ ಸವಾರ ದಿನಕ್ಕೆ 8 ರಿಂದ 10 ಗಂಟೆ ಕೆಲಸ ಮಾಡಿದರೆ ತಿಂಗಳಿಗೆ ₹25,000 ಕ್ಕಿಂತ ಹೆಚ್ಚು ಗಳಿಸಬಹುದು ಎಂದು ಅವರು ತಿಳಿಸಿದ್ದಾರೆ.


ಇತರೆ ಡೆಲಿವರಿ ಕಂಪನಿಗಳಿಗಿಂತ ಜೊಮಾಟೊ 10 ನಿಮಿಷಗಳ ಡೆಲಿವರಿ ನೀಡುವ ಬಗ್ಗೆ ಕೇಳಿದಾಗ ಇದು  ಸವಾರರ ಬರವೇಗದಿಂದ ಸಾಧ್ಯವಾಗುತ್ತಿಲ್ಲ ಬದಲಾಗಿ ಮಳಿಗೆಗಳ ಸಾಂದ್ರತೆಯಿಂದ  ಸಾಧ್ಯವಾಗುತ್ತಿದೆ. ಸವಾರರಿಗೆ ಯಾವುದೇ ಸಮಯದ ಮಿತಿಯನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಷ್ಟಕ್ಕೇ ನಿಲ್ಲದ ಗೋಯಲ್ ರವರ ವಿಷನ್ ವಿಸ್ತರಿಸುತ್ತಲೇ ಇದೆ.
ಸಣ್ಣ ವಿಮಾನಗಳನ್ನು ತಯಾರಿಸುವ  ಯೋಜನೆಗಾಗಿ ದೀಪಿಂದರ್ ಅವರು 50 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧರಾಗಿದ್ದಾರೆ. ಇದು ನಗರಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಅವರ ಆಶಯ.ಮೆದುಳಿಗೆ ರಕ್ತದ ಹರಿವನ್ನು ಮೇಲ್ವಿಚಾರಣೆ ಮಾಡುವ ಟೆಂಪಲ್ ಎಂಬ ಮತ್ತೊಂದು ಸಾಧನ ಆವಿಷ್ಕಾರಕ್ಕೆ ಕೈಹಾಕಿದ್ದಾರೆ.   ಭೂಮಿಯ ಗುರುತ್ವಾಕರ್ಷಣೆಯು ನಮ್ಮ ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸುವುದು ಇದರ ಉದ್ದೇಶ.
ದೀಪಿಂದರ್ ಗೋಯಲ್ ಅವರ ವ್ಯವಹಾರ ಶೈಲಿಯು  ಬಲು ವಿಭಿನ್ನ ಅದಕ್ಕೆ ಅವರು ಈ ಎತ್ತರಕ್ಕೆ ಏರಿದ್ದಾರೆ. ಅವರ ವ್ಯವಹಾರ ಶೈಲಿಯನ್ನು ಹೀಗೆ ಹೇಳಬಹುದು ಒಂದು ರೇಸ್ ಕಾರ್  ಎಂಜಿನ್ ಎಷ್ಟು ದೂರ ಹೋಗಬೇಕು ಎಂದು ಅವರು ಮೊದಲೇ ಗುರಿಯೊಂದಿಗೆ ನಿರ್ಧರಿಸುವುದಿಲ್ಲ. ಆದರೆ ಪ್ರತಿ ಭಾಗವೂ ಅತ್ಯಂತ ನಿಖರವಾಗಿ ಮತ್ತು ತೀವ್ರತೆಯಿಂದ ಕೆಲಸ ಮಾಡಬೇಕೆಂದು ಅವರು ಬಯಸುತ್ತಾರೆ.ಆಗ ಮಾತ್ರ ಕಾರು ಯಾರಿಗೂ ತಲುಪಲಾಗದ ವೇಗವನ್ನು ತಲುಪಲು ಸಾಧ್ಯವಾಗುತ್ತದೆ.
ಗೋಯಲ್ ನಮ್ಮ ನೆಲದ ನಕ್ಷತ್ರ! ಇಂತಹ ಸಾವಿರಾರು ನಕ್ಷತ್ರಗಳಿಗೆ ಗೋಯಲ್ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

08 ಜನವರಿ 2026

ಪೋರಿಯಲ್ಲ ಹೆಂಗಸು!


 

ನಿನ್ನೆ ಸಂಜೆ ಪಾರ್ಕ್‌ ನಲ್ಲಿ ವಾಕ್ ಮಾಡುವಾಗ ಈ ಪುಟ್ಟ ಪೋರಿಯ ಕಂಡೆ ಕಂಕುಳಲ್ಲೊಂದು ಬೊಂಬೆ ಎತ್ತಿಕೊಂಡು ಆ ಬೊಂಬೆಯೊಂದಿಗೆ ಮಾತನಾಡುತ್ತಾ ವಾಕ್ ಮಾಡುತ್ತಿತ್ತು ನಾನು‌ ದೂರದಿಂದಲೇ ಗಮನಿಸಿ ಖುಷಿ ಪಟ್ಟೆ.ಮಕ್ಕಳ ಆಟವೇ ನೋಡಲು ಚೆಂದ. ನನಗೆ ನನ್ನ ಬಾಲ್ಯ ನೆನಪಾಯಿತು ನಾವೂ ಹೀಗೆಯೇ ಗೊಂಬೆಗಳಿಗೆ ಮದುವೆ ಮಾಡಿ.ಆಟ ಆಡಿದ ಸವಿನೆನಪುಗಳು ಮಧುರ. ಆ ಬಾಲಕಿ ನಾನು ದೊಡ್ಡ ಹೆಂಗಸು ಅಂದುಕೊಂಡು ಹೆಂಗಸಿನ ಪಾತ್ರದಲ್ಲಿ ಆಟವಾಡುತ್ತಿತ್ತು.ಇದಕ್ಕೆ ಒಂದು ಸಾಕ್ಷಿ ‌ಕೈಯಲ್ಲಿರುವ ಬೊಂಬೆ. ಇನ್ನೂ ಎರಡು ವಸ್ತುಗಳನ್ನು ಆ ಬಾಲಕಿ ನಾನು ದೊಡ್ಡ ಹೆಂಗಸು ಎಂದು ಬಿಂಬಿಸಿಕೊಳ್ಳಲು ಬಳಸಿದೆ. ಆ ವಸ್ತುಗಳು ಯಾವು ಕಾಮೆಂಟ್ ಮಾಡಿ‌ ಹೇಳಿ.
#sihijeevi #childhood #children #play #playtime

11 ಡಿಸೆಂಬರ್ 2025

ಗಾಂಧಾರಿ ಕಲೆ ಯಿಂದ ಶಾಲಾ ಕಾಲೇಜುಗಳಲ್ಲಿ ಕಾಪಿ ತಡೆಯಬಹುದು!


 ಪರೀಕ್ಷೆಗಳಲ್ಲಿ ಕಾಪಿ ಮಾಡುವುದು  ದೊಡ್ಡ ಪಿಡುಗಾಗಿದ್ದು ಕೆಲ ಪರೀಕ್ಷೆಗಳಿಗೆ ಸಿ ಸಿ ಟಿ‌ವಿ ಕ್ಯಾಮರಾ ಹಾಕಿ ವೆಬ್ ಕಾಸ್ಟ್ ಮಾಡಿದರೂ ಕೆಲವೆಡ ನಕಲಾಗುತ್ತಿರುವ ಈ ಕಾಲದಲ್ಲಿ  ಬಳ್ಳಾರಿಯಲ್ಲಿ  ಓರ್ವ ವಿದ್ಯಾರ್ಥಿನಿ  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕತೆಯಿಂದ  ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಸರ್ವರ ಮೆಚ್ಚುಗೆ ಗಳಿಸಿದ್ದಾಳೆ.


  ಹಿಮಾಬಿಂದು ಎಂಬ ಈ ವಿದ್ಯಾರ್ಥಿನಿ
'ಗಾಂಧಾರಿ' ವಿದ್ಯೆ ಕಲಿತು  ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ 8ನೇ ತರಗತಿಯ ಎಫ್‌ಎ 4ರ ಆರು ವಿಷಯ ಗಳ ಪರೀಕ್ಷೆ ಬರೆದು  ಗಮನ ಸೆಳೆದಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿರುವುದು ವಿಶೇಷ.

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು ಹಿಮಾಬಿಂದು, ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ ನೀಡಿದ ಪಾಠಗಳ ನೆರವಿನಿಂದ ಈ ವಿದ್ಯೆ ಕಲಿತಿದ್ದಾಳೆ.

"ನನ್ನ ಮಗಳು ನಾಲ್ಕನೇ ತರಗತಿ ಯಲ್ಲಿದ್ದಾಗ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸದಾ ಕ್ರಿಯಾಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಈ ವಿದ್ಯೆ ಕಲಿಸಿದೆ. ಈ ಪ್ರಯೋಗದ ನಂತರ ಕ್ಲಾಸ್‌ಗೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದಾಳೆ,'' ಎಂದು ಆ ವಿದ್ಯಾರ್ಥಿನಿಯ ತಂದೆ  ರಾಮಾಂಜಿನಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಎಲ್ಲಾ ಸ್ತರಗಳ ಪರೀಕ್ಷೆಯಲ್ಲಿ ಇಂತಹ ಗಾಂಧಾರಿ ವಿದ್ಯೆ ಅಳವಡಿಸಿದರೆ ಹೇಗೆ? ಸಿ ಸಿ ಟಿ ವಿ ಪರೀಕ್ಷಾ ಸಿಬ್ಬಂದಿ ಇತರೆ ಖರ್ಚನ್ನು ಉಳಿಸಬಹುದೇ? ಈ ವಿಷಯದ ಬಗ್ಗೆ ಚರ್ಚೆ ಅಗತ್ಯವಿದೆ.ನೀವೇನಂತೀರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

21 ನವೆಂಬರ್ 2025

ಡಾಲ್ಬಿ ಅಟ್ಮಾಸ್ ನಲ್ಲಿ ಸಿನಿಮಾ ನೋಡೋದೆ ಮಜಾ...





ತಾವು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ತಮ್ಮ ಮನರಂಜನೆಗೆ ಮೀಸಲಿಡುವ ಜನರಲ್ಲಿ ನಾನೂ ಒಬ್ಬ.ಉತ್ತಮ ಕಥೆ, ಬಿಗಿಯಾದ ಚಿತ್ರಕಥೆ, ಹಿನ್ನೆಲೆ ಸಂಗೀತ, ಮಧುರವಾದ ಹಾಡು ಹಾಸ್ಯ ಇರುವ ಚಿತ್ರ ಯಾವುದಾದರೂ ಯಾವುದೇ ಭಾಷೆಯಾದರೂ ನಾನು ಥಿಯೇಟರ್‌ ಗೆ ಹೋಗುತ್ತೇನೆ‌.ಕೆಲವೊಮ್ಮೆ ಕುಟುಂಬ ಸಮೇತ ಕೆಲವೊಮ್ಮೆ ಒಂಟಿಯಾಗಿಯೇ ಸಿನಿಮಾ ವೀಕ್ಷಣೆ ಮಾಡಲು ಹೊರಡುವೆ.ಹತ್ತಾರು ಓಟಿಟಿ ನೂರಾರು ವೆಬ್ಸೈಟ್ ಗಳಲ್ಲಿ ಸಿನಿಮಾ ಲಭ್ಯವಿದ್ದರೂ ನಾನು ಅಲ್ಲಿ ಸಿನಿಮಾ ನೋಡಲು ಇಚ್ಚಿಸುವುದಿಲ್ಲ. ಸಿನಿಮಾ ಮಂದಿರದಲ್ಲಿ  ಡಾಲ್ಬಿ ಅಟ್ಮಾಸ್  ಎಫೆಕ್ಟ್ ನಲ್ಲಿ ಸಿನಿಮಾ ಎಂಜಾಯ್ ಮಾಡುವುದೇ ಇಂದು ಸುಂದರ ಅನುಭೂತಿಯನ್ನು ನೀಡುತ್ತದೆ.



ಸಿಹಿಜೀವಿ ವೆಂಕಟೇಶ್ವರ...

ತುಮಕೂರು

11 ನವೆಂಬರ್ 2025

ಅಮ್ಮ ಮಗನಿಗೆ ನಮನಗಳು..

ಕರುನಾಡಿನ ಜನತೆಯಾದ ನಾವು ಸದಾ ಕೃತಜ್ಞತೆ ಸೂಚಿಸಿ  ಸ್ಮರಿಸುವ ಹೆಸರುಗಳಲ್ಲಿ ಈ ಚಿತ್ರದಲ್ಲಿರುವ ತಾಯಿ ಮಗನ ಹೆಸರು ಅಗ್ರ ಸ್ಥಾನದಲ್ಲಿರುತ್ತದೆ.ಅಂದಿನ ನಮ್ಮ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಉತ್ತಮ ಕಾರ್ಯ ಮಾಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ರಾಜನಾದ ಮಗನಿಗೆ  ಬಾಲ್ಯದಿಂದಲೂ   ಉತ್ತಮ ಶಿಕ್ಷಣ ನೀಡಿ ಒಬ್ಬ ಆಡಳಿತಗಾರನಾಗಿ ಮಾಡುವ ಕಾರ್ಯ ಮಾಡುತ್ತಲೇ ತಾನೂ ಓರ್ವ ಶ್ರೇಷ್ಠ ಆಡಳಿತಗಾರ್ತಿ ಎಂದು ತೋರಿದ ವಾಣಿ ವಿಲಾಸ ಕೆಂಪರಾಜ ನಂಜಮ್ಮಣ್ಣಿ ರವರನ್ನು ನಾವು ದಿನವೂ ನೆನೆಯಬೇಕು.ಇತ್ತೀಚಿಗೆ ವಾಣಿ ವಿಲಾಸ ಪುರಕ್ಕೆ ಕುಟುಂಬ ಸಮೇತ ಭೇಟಿ ನೀಡಿದಾಗ ಈ ಪುತ್ತಳಿಗಳನ್ನು ಕಂಡು ಪುಳಕಗೊಂಡು ಮನದುಂಬಿ ನಮಿಸಿದೆ.ನಮ್ಮ ಮಕ್ಕಳಿಗೆ ಅವರ ಬಗ್ಗೆ ಹೆಮ್ಮೆಯಿಂದ ಪರಿಚಯ ಮಾಡಿದೆ..

ಹಿರಿಯೂರು ತಾಲ್ಲೂಕಿನ ರೈತರು ಇವರನ್ನು ಪೂಜಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗದ ವಿವಿಧ ನಗರಗಳು ಸಹ ಮಾರಿ ಕಣಿವೆ ನೀರನ್ನು ಕುಡಿಯುತ್ತಿದ್ದಾರೆ.

ಅಮ್ಮ ಮಗನಿಗೆ ಎಲ್ಲರ ಪರವಾಗಿ ಧನ್ಯವಾದಗಳು..

#VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism


 #VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism

31 ಅಕ್ಟೋಬರ್ 2025

ಕರುನಾಡ ಕಣ್ಮಣಿಗಳು.. ಭಾಗ ೧ ಸಿದ್ದಪ್ಪ ಕಂಬಳಿ

 


ಕರುನಾಡ ಕಣ್ಮಣಿಗಳು..

ಭಾಗ ೧

ಸಿದ್ದಪ್ಪ ಕಂಬಳಿ





ಕರ್ನಾಟಕದ ಏಕೀಕರಣದ ಕನಸು ಕಂಡು ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಸಿದ್ದಪ್ಪ ಕಂಬಳಿ ಕೂಡಾ ಒಬ್ವರು. ನಮ್ಮ ನಾಡಿನ ಜನರ ಶಿಕ್ಷಣಕ್ಕಾಗಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸಿದ್ದಪ್ಪ ನವರನ್ನು ಇಂದು ನಾವೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಿದೆ.

ತೋಟಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿದ್ದ ಸಿದ್ದಪ್ಪ ರವರು 1882ರಲ್ಲಿ ಜನಿಸಿದರು. ಈ ದಂಪತಿಗಳು ಕಂಬಳಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಆಶೀರ್ವಾದದಿಂದ ಸಿದ್ದಪ್ಪ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಸಮಾಜದ ಬಡ ವರ್ಗಗಳಿಗೆ ಸೇವೆ ಸಲ್ಲಿಸುವಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ವಿಕಸನಗೊಂಡರು. ಹುಬ್ಬಳ್ಳಿ ಮತ್ತು ಧಾರವಾಡದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ, ಸಿದ್ದಪ್ಪ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಯಲ್ಲಿ ಮುಗಿಸಿದರು. ನಂತರ ಧಾರವಾಡದಲ್ಲಿ ಪ್ರೌಢಶಾಲೆಗೆ ಹೋಗಿ ಪುಣೆಯಲ್ಲಿ ಪದವಿ ಪಡೆದರು. ಅವರು ಬಾಂಬೆಯ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು  ಪ್ರಸಿದ್ಧ ವಕೀಲರಾದರು. ಕಾಲ ಕಳೆದಂತೆ ಅವರು ದೀನದಲಿತರ ಪರವಾಗಿ ಹೋರಾಡಿದರು.  ಅನೇಕ ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕಂಬಳಿಯವರು
1917 ರಲ್ಲಿ  ಆಗಿನ  ಹುಬ್ಬಳ್ಳಿ  ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 1921 ರಲ್ಲಿ CMC ಯ ಕಾನೂನು ಸಲಹೆಗಾರರಾದರು.ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಜಾಗೂ  ಬಾಂಬೆ ಪ್ರಾಂತೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ತರಬೇತಿ ಅಗತ್ಯ ಕಂಡ ಅವರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜನ್ನು ಸ್ಥಾಪಿಸಿದರು. ಆದರೆ, ಸರ್ಕಾರವು ಕಠಿಣ ಕ್ರಮಗಳನ್ನು ಉಲ್ಲೇಖಿಸಿ 1922 ರಲ್ಲಿ ಅದನ್ನು ಮುಚ್ಚಿತು. ಕಾಲೇಜನ್ನು ಮತ್ತೆ ತೆರೆಯುವಂತೆ ಕಂಬಳಿಯವರು ನೋಡಿಕೊಂಡರು. 
ಹರಿದು ಹಂಚಿಹೋಗಿದ್ದ ನಮ್ಮ ನಾಡಿನ ಎಕೀಕರಣ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದ ಅವರು
1926 ರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಿನ  ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರ ಕರ್ತವ್ಯ, ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣೆಯಿಂದ ಬ್ರಿಟಿಷರು ಬೆರಗಾದರು. ವೆಚ್ಚವನ್ನು ಉಳಿಸಲು ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಯೋಜಿಸುತ್ತಿತ್ತು ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಂಬಳಿಯವರು  ಕಠಿಣ ನಿಲುವು ತೆಗೆದುಕೊಂಡರು.
ಈ ಕಾಲೇಜನ್ನು ಸರ್ಕಾರಿ ನಿಧಿಯಿಂದ ಸ್ಥಾಪಿಸಲಾಗಿಲ್ಲ, ಬದಲಾಗಿ ಜನರ ಕೊಡುಗೆಯಿಂದ ಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕಾಲೇಜು ಮುಚ್ಚಿದರೆ ಜನರು ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಅವರ ಒತ್ತಾಯದ ಮೇರೆಗೆ ಸರ್ಕಾರ ಕಾಲೇಜನ್ನು ಮುಚ್ಚುವ ಕ್ರಮವನ್ನು ಕೈಬಿಟ್ಟಿತು. ನಂತರದ ದಿನಗಳಲ್ಲಿ ಈ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಪ್ರಗತಿ ಸಾಧಿಸಿತು. 


ಕರ್ನಾಟಕದ ಏಕೀಕರಣವು ಸಿದ್ದಪ್ಪರವರ ಬಹುಕಾಲದ ಕನಸಾಗಿತ್ತು. ದುರದೃಷ್ಟವಶಾತ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು.  ಆರು ವರ್ಷಗಳ ಅನಾರೋಗ್ಯದ ನಂತರ ಏಪ್ರಿಲ್ 1956 ರಲ್ಲಿ ನಿಧನರಾದರು. ಕೆಲವು ತಿಂಗಳುಗಳ ನಂತರ, ನವೆಂಬರ್ 1956 ರಲ್ಲಿ ಏಕೀಕೃತ ಕರ್ನಾಟಕ ಉದಯವಾದಾಗ ಅವರ ಕನಸು ನನಸಾಗಿತ್ತು.  ಆದರೆ ಅದನ್ನು ನೋಡಲು ಅವರಿರಲಿಲ್ಲ.
ಇಂದಿನ ‌ಕಲುಷಿತ ರಾಜಕೀಯ ವ್ಯವಸ್ಥೆಯನ್ನು ನೀಡಿದಾಗ
ರಾಜಕೀಯ ಪ್ರವೇಶಿಸಲು ಯೋಜಿಸುತ್ತಿರುವ ಯುವಕರಿಗೆ ಕಂಬಳಿಯವರು  ನೀಡಿದ ಸಂದೇಶವು ಗಮನ ಸೆಳೆಯುತ್ತದೆ. "ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪೋಷಿಸಲು ನಿಮಗೆ ಸಾಧನವಿದ್ದರೆ ಮಾತ್ರ ನೀವು ರಾಜಕೀಯಕ್ಕೆ ಧುಮುಕಿ. ಇಲ್ಲದಿದ್ದರೆ, ರಾಜಕೀಯ ಪ್ರವೇಶಿಸುವ ಕನಸು ಕಾಣಬೇಡಿ. ಸುರಕ್ಷಿತ ಮತ್ತು ಸುಸ್ಥಿರ ಆದಾಯದ ಮೂಲವಿಲ್ಲದ ರಾಜಕಾರಣಿ ಭ್ರಷ್ಟನಾಗುತ್ತಾನೆ" ಅವರ ಮಾತುಗಳು ಎಷ್ಟು ಸತ್ಯ ಎಂಬುದಕ್ಕೆ ಇಂದಿನ ರಾಜಕಾರಣಿಗಳೇ ಜೀವಂತ ಸಾಕ್ಷಿ.



ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು  ಸಿದ್ದಪ್ಪ ಕಾಂಬ್ಳಿಯವರ ಪ್ರತಿಮೆಯನ್ನು ಸ್ಥಾಪಿಸಿದೆ. ರಸ್ತೆಯೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಾಂಬ್ಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
 
ಇಂತಹ ಮಹಾನ್ ನಾಯಕರ ಆದರ್ಶಗಳನ್ನು ನಮ್ಮ ಯುವಕರು ಇಂದು ಮೈಗೂಡಿಸಿಕೊಳ್ಳಲಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

22 ಅಕ್ಟೋಬರ್ 2025

ದೋಸೆ ಹಾಕಿ ವಿಶ್ವ ದಾಖಲೆ ನಿರ್ಮಿಸಿದ ವಿಷ್ಣು!


 ಬಹಳಷ್ಟು ಜನರಿಗೆ ದೋಸೆಯೆಂದರೆ ಪ್ರಾಣ.ತರಾವರಿ‌ ದೋಸೆಗಳು ಜನರ ಬಾಯಲ್ಲಿ ನೀರೂರಿಸುತ್ತವೆ.ನನಗೆ ವೈಯಕ್ತಿಕವಾಗಿ ಬೆಣ್ಣೆ ದೋಸೆ,ಈರುಳ್ಳಿ ದೋಸೆ ಇಷ್ಟವಾದರೆ ನಮ್ಮ ಮನೆಯವರಿಗೆ ಮಸಾಲೆ ದೋಸೆ ಇಷ್ಟ.

ಇಲ್ಲೊಬ್ಬರು ರೆಕಾರ್ಡ್ ನಿರ್ಮಿಸಿದ್ದಾರೆ. ದೋಸೆ ತಿನ್ನುವುದರಲ್ಲಿ  ಅಲ್ಲ. ದೋಸೆ ಮಾಡುವುದರಲ್ಲಿ.

ಹೌದು ಈ ದಾಖಲೆಯನ್ನು ನಿರ್ಮಿಸಿದವರು ಭಾರತದ ಪ್ರಸಿದ್ಧ ಬಾಣಸಿಗ ವಿಷ್ಣು ಮನೋಹರ್!


25 ಗಂಟೆಗಳಲ್ಲಿ 15,773 ದೋಸೆಗಳನ್ನು ಹಾಕಿ    ವಿಷ್ಣು ಮನೋಹರ್ ರವರು ತಮ್ಮದೇ  ಹೆಸರಲ್ಲಿ ಇದ್ದ ದಾಖಲೆಯನ್ನು ಮುರಿದು   ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಇಷ್ಟಕ್ಕೆ ಸುಮ್ಮನಾಗದ ಅವರು ಅಮೆರಿಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಕಾತರರಾಗಿದ್ದಾರೆ.

 


 ಪ್ರಸಿದ್ಧ ಶೆಫ್ ವಿಷ್ಣು ಮನೋಹರ್ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಿರಂತರವಾಗಿ 25 ಗಂಟೆಗಳ ಕಾಲ 15,773 ದೋಸೆಗಳನ್ನು ತಯಾರಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗ ಅವರು ಅಮೆರಿಕಾದಲ್ಲಿ 26 ಗಂಟೆಗಳ ದೋಸೆ ಮ್ಯಾರಥಾನ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ, ಅವರು ನಾಗಪುರದಲ್ಲಿ 24 ಗಂಟೆಗಳಲ್ಲಿ 14,400 ದೋಸೆಗಳನ್ನು ತಯಾರಿಸಿ ದಾಖಲೆ ಮಾಡಿದ್ದರು.


  ಅಕ್ಟೋಬರ್ 2025 ರ  ಶನಿವಾರ ಬೆಳಗ್ಗೆ 7 ಗಂಟೆಗೆ ದೋಸ ತಾವಾ  ಲಾನ್‌ನಲ್ಲಿ ದೋಸೆ ತಯಾರಿಕೆ ಪ್ರಾರಂಭಿಸಿದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಅವರು ಹಿಂದಿನ ದಾಖಲೆಯನ್ನು ಮುರಿದು 15,700 ದೋಸೆಗಳನ್ನು ತಯಾರಿಸಿದರು. 20 ನಿಮಿಷಗಳ ಅಧಿಕೃತ ವಿರಾಮದ ನಂತರ, ಅವರು ಮತ್ತೆ ಕೆಲಸಕ್ಕೆ ಮುಂದಾಗಿ ಅಮರಾವತಿ ಜನತೆಗೆ ಬಿಸಿ ಬಿಸಿ ದೋಸೆಗಳನ್ನು ನೀಡಿದರು.


ಬೆಳಗ್ಗೆ 8 ಗಂಟೆಗೆ ಅವರು 15,773ನೇ ದೋಸೆಯನ್ನು ತಯಾರಿಸಿ ಹೊಸ ದಾಖಲೆಯನ್ನು ಅಧಿಕೃತವಾಗಿ ಮುಗಿಸಿದರು. ಅದೇ ವೇಳೆ, ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಪ್ರವೀಣ್ ರಾಉತ್ ಅವರು ಮನೋಹರ್ ಅವರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಅಮರಾವತಿ ಜನರಿಂದ ದೋಸೆ ತಿನ್ನಲು ಹಾಗೂ ದಾಖಲೆಯನ್ನು ನೋಡಲು ಭಾರಿ ಪ್ರತಿಕ್ರಿಯೆಯು ವ್ಯಕ್ತವಾಯಿತು.ಶನಿವಾರ ಬೆಳಗ್ಗೆ 7 ಗಂಟೆಯಿಂದ ಮನೋಹರ್ ದೋಸೆ ತಯಾರಿಕೆ ಪ್ರಾರಂಭಿಸಿದ ನಂತರ ಸಾವಿರಾರು ಜನರು ಸಾಲಿನಲ್ಲಿ ನಿಂತು ದೋಸೆ ಸವಿದರು. ರಾತ್ರಿ 3 ರಿಂದ 5ರವರೆಗೆ ಜನರ ಸಂಖ್ಯೆ ಸ್ವಲ್ಪ ಕಡಿಮೆಯಾದರೂ, ಬೆಳಗ್ಗೆ 5 ರಿಂದ 8ರವರೆಗೆ ಮತ್ತೆ ಉತ್ಸಾಹ ತುಂಬಿತು.


ಈ ದಾಖಲೆಯ ಕಾರ್ಯಕ್ರಮದಲ್ಲಿ 30,000ಕ್ಕೂ ಹೆಚ್ಚು ಜನರು ಮನೋಹರ್, ಅವರ ಪತ್ನಿ ಅಪರ್ಣಾ, ಮತ್ತು ತಂಡ ತಯಾರಿಸಿದ ದೋಸೆಗಳನ್ನು ಸವಿದರು. ಭಾನುವಾರ ರಾತ್ರಿ ಬದ್ನೇರಾ ಶಾಸಕ ರವಿ ರಾಣಾ ಕೂಡ ಸ್ಥಳಕ್ಕೆ ಬಂದು ಸ್ವತಃ ಕೆಲವು ದೋಸೆಗಳನ್ನು ತಯಾರಿಸಿದರು. ಎಲ್ಲರಿಗೂ ಉಚಿತ ದೋಸೆಗಳನ್ನು ವಿತರಿಸಲಾಯಿತು.

ಈ ದಾಖಲೆಯ ದೋಸೆ ತಯಾರಿಸಲು ಅವರು ಒಂದೇ ಸಮಯದಲ್ಲಿ ನಾಲ್ಕು ತವಾಗಳಲ್ಲಿ  ದೋಸೆ ತಯಾರಿಸಲಾಯಿತು. ಪ್ರತಿ ಎರಡು ನಿಮಿಷಕ್ಕೆ ಸುಮಾರು 28 ಡೋಸೆ ಸಿದ್ಧವಾಗಿ ತಿನ್ನವವರ ಹೊಟ್ಟೆ ಸೇರಿದವು  ಇದಕ್ಕಾಗಿ  500 ಕೆ.ಜಿ. ದೋಸೆ ಹಿಟ್ಟನ್ನು ಮತ್ತು 800 ಕೆ.ಜಿ. ಚಟ್ನಿಯನ್ನು ಬಳಸಲಾಯಿತು


#Dosa #Food #WorldRecord #VishnuManohar #IndianCuisine #StreetFood #CulinaryArts #FoodLovers #Foodiegram #FoodInspiration #GourmetDosa #CulturalHeritage #TastyTreats #DosaLove #ChefVishnu #EpicureanDelight #GlobalCookoff #FoodChallenge #RecordBreakingFood

17 ಅಕ್ಟೋಬರ್ 2025

ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"




ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"

ಅನಿವಾರ್ಯ ಕಾರಣದಿಂದ ಥಿಯೇಟರ್ ನಲ್ಲಿ ಏಳುಮಲೆ ಸಿನಿಮಾ ನೋಡಲಾಗಿರಲಿಲ್ಲ.ಇಂದು ಓಟಿಟಿ ಯಲ್ಲಿ ನೋಡಿದೆ.ಬಹಳ ಅಚ್ಚುಕಟ್ಟಾಗಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ ಪುನಿತ್ ರಂಗಸ್ವಾಮಿಯವರು ಕನ್ನಡ ಚಿತ್ರ ರಂಗಕ್ಕೆ ಸಿಕ್ಕ ಮತ್ತೊಬ್ಬ ಭರವಸೆಯ ನಿರ್ದೇಶಕ ಎಂದೆನಿಸಿತು.ಇಂತಹ ಹೊಸಬರನ್ನು ಪ್ರೋತ್ಸಾಹ ಮಾಡಿ ತೆರೆಮರೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಕ್ರಿಯೇಟಿವ್ ಹೆಡ್ ಕಂ ನಿರ್ಮಾಪಕರಾದ ತರುಣ್ ಕಿಶೋರ್ ಸುಧೀರ್ ಮುಂದೆಯೂ ಇಂತಹ ಸಿನಿಮಾ ನೀಡಲೆಂದು ಆಶಿಸುವೆ.
ಕಥೆಯೇನೂ ಹೊಸದಲ್ಲ.ಅದೇ ಮೇಲ್ವರ್ಗದ ಹುಡುಗಿ ಬಡ ಹುಡುಗ, ಬೇರೆ ಭಾಷೆ, ನಾಡಿನ ಪ್ರೇಮಿಗಳ ಕಥೆ.ಮನೆಯವರ ವಿರೋಧ ಪ್ರೇಮಿಗಳ ಹೋರಾಟ.ಆದರೆ ಆ ಕಥೆಯನ್ನು ನಿರೂಪಿಸಿರುವ ರೀತಿ ಬಹಳ ಚೆನ್ನಾಗಿದೆ.ಆರಂಭದಲ್ಲಿ ಮನೆಯಲ್ಲಿ ಆರಾಮಾಗಿ ಮಲಗಿಕೊಂಡು ಸಿನಿಮಾ ನೋಡುತ್ತಿದ್ದ ನಾನು ಅರ್ಧ ಸಿನಿಮಾ ಆದಾಗ ನನಗರಿವಿಲ್ಲದೇ ಎದ್ದು ಕೂತಿದ್ದೆ. ಪ್ರತಿ ಹತ್ತು ನಿಮಿಷಕ್ಕೊಂದು ಟ್ವಿಸ್ಟ್ ಗಳು  ಉಸಿರು ಬಿಗಿ ಹಿಡಿದು ಸಿನಿಮಾ ನೋಡುವಂತೆ ಮಾಡಿದವು.ಕೊನೆಯ ಶಾಟ್ ನಲ್ಲೂ ಏನೋ ಟ್ವಿಸ್ಟ್ ಇದೆ ಅಂತ ಊಹೆ ಮಾಡುವಾಗಲೇ ಟೈಟಲ್ ಕಾರ್ಡ್ ಬಂತು.ಅಂದರೆ ಪಾರ್ಟ್ ಟೂ   ಬರಬಹುದು ಎಂದು ನನ್ನ ನಿರೀಕ್ಷೆ.


ಮೊದಲ ಸಿನಿಮಾಗಿಂತ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ರಾಣಾ ನಟನೆಯಲ್ಲಿ ಪಳಗಿದ್ದಾರೆ. ಕಷ್ಟ ಕಾಲದಲ್ಲಿ ಪ್ರೇಮಿಯ ಸೇರುವ ಅವರ ಕಾತುರದ ಅಭಿನಯ ನೋಡಿದ ನೋಡುಗರು ಜಗ್ಗಪ್ಪ, ಮತ್ತು ಕಿಶೋರ್ ಅವರನ್ನು ಬೈಯ್ದುಕೊಳ್ಳುವ ರೇಂಜ್ ಗೆ ಅಭಿನಯ ಮಾಡಿದ್ದಾರೆ. ಎಂದಿನಂತೆ ಕಿಶೋರ್ ತಮ್ಮ ಅಭಿನಯದ ಮೂಲಕ ನೆಗೆಟಿವ್ ಶೇಡ್ ನ ಪೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನುಭವಸ್ಥ ಹೆಡ್ ಕಾನ್ಸ್‌ಟೇಬಲ್ ಆಗಿ ನಾಗಾಭರಣ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ತೆಲುಗಿನ ಜಗಪತಿ ಬಾಬು ಕೆಲವೇ ದೃಶ್ಯಗಳಲ್ಲಿ ಬಂದರೂ ಅವರ ಅಭಿನಯ ಸೂಪರ್. ಚಿತ್ರದ ನಡುವೆ ಕಾಡುಗಳ್ಳ ವೀರಪ್ಪನ್ ಹತನಾಗುವ ದೃಶ್ಯಗಳನ್ನು ಬ್ಲೆಂಡ್ ಮಾಡಿರುವುದು ವರ್ಕ್ ಔಟ್ ಆಗಿದೆ.  ಸಿನಿಮಾದ ಗೆಲುವಿನಲ್ಲಿ ಛಾಯಾಗ್ರಾಹಕ ಅದ್ವೈತ ಗುರು ಮೂರ್ತಿ ಕೊಡುಗೆ ಮರೆಯಲಾಗದು.ಡಿ ಇಮ್ಮಾನ್ ರವರ ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗಿವೆ.ಹಿನ್ನೆಲೆಯಲ್ಲಿ ಅವರು ನೀಡಿದ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.
ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಏಳುಮಲೆ.ನೀವು ನನ್ನ ಹಾಗೆ ಥಿಯೇಟರ್ ನಲ್ಲಿ ಚಿತ್ರ ಮಿಸ್ ಮಾಡಿಕೊಂಡಿದ್ದರೆ.ಜೀ5ನಲ್ಲಿ ನೋಡಿ..

ಸಿಹಿಜೀವಿ ವೆಂಕಟೇಶ್ವರ.
ತುಮಕೂರು


 

26 ಸೆಪ್ಟೆಂಬರ್ 2025

ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!


 ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!



ಎಸ್ ಎಲ್ ಬೈರಪ್ಪನವರು ಓರ್ವ ಶ್ರೇಷ್ಠ ಕಾದಂಬರಿಕಾರ ಎಂಬುದು ಎಷ್ಟು ಸತ್ಯವೋ ಅವರೊಬ್ಬ ದಾರ್ಶನಿಕ, ಸಂಸ್ಕೃತಿ ಪರಿಚಾರಕ, ನೇರ ನಡೆ ನುಡಿಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದ ಮಹಾನ್ ಚೇತನ ಎಂಬುದು ಅಷ್ಟೇ ಸತ್ಯ.
ಭೈರಪ್ಪ ರವರ ಬಹುತೇಕ ಕೃತಿಗಳನ್ನು ಓದಿರುವೆ.ಕೆಲವನ್ನು ಮತ್ತೆ ಮತ್ತೆ ಓದಿದ್ದೇನೆ. ಕೆಲ ಕೃತಿಗಳ ಬಗ್ಗೆ ನನ್ನ ಲಿಖಿತ ಅಭಿಪ್ರಾಯಗಳನ್ನು ಬರೆದು ಪತ್ರಿಕೆ ಮತ್ತು ಪುಸ್ತಕಗಳಲ್ಲೂ ಪ್ರಕಟಿಸಿರುವೆ.
ಬೈರಪ್ಪ ರವರ ನಿಷ್ಠುರವಾದ ಮಾತುಗಳು ನನ್ನ ಗಮನ ಸೆಳೆದವು.  ಇತರರು ಏನೆಂದು ಕೊಂಡಾರು ಎಂದು ಯೋಚಿಸದೇ ಆನೆ ನಡೆದದ್ದೇ ದಾರಿ ಎಂದು ಬದುಕಿ ತೋರಿಸಿದರು.
ಇತ್ತೀಚಿನ ದಿನಗಳಲ್ಲಿ ಅವರೊಂದು ಹೇಳಿಕೆ ನೀಡಿದರು."ನಾನು ಸಾಯೋವಾಗ ನನ್ನ ಅಕೌಂಟ್ ನಲ್ಲಿ ಒಂದು ಪೈಸೆಯೂ‌ ಇರಬಾರದು ಎಲ್ಲವನ್ನೂ ಫ್ಲಷ್  ಮಾಡಿಬಿಡಬೇಕು" ಈ ಮಾತು ಕೇಳಿ ಭೈರಪ್ಪನವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು. ಹೌದು ಅದರಂತೆ ನಡೆದು ತೋರಿಸಿದರು. ಅವರ ಇದುವರೆಗಿನ ಸಂಪಾದನೆ ಮತ್ತು ಮುಂದೆ ಅವರ ಪುಸ್ತಕಗಳಿಂದ ಬರುವ ರಾಯಲ್ಟಿ ಹಣವನ್ನು ಒಂದು ಟ್ರಸ್ಟ್ ಗೆ  ವರ್ಗಾಯಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಲು ಕ್ರಮ ಕೈಗೊಂಡಿದ್ದಾರೆ. ತನ್ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಅನವಶ್ಯಕವಾಗಿ ಎಸ್ ಎಲ್ ಬಿ ಯವರನ್ನು ಟೀಕಿಸುವ ಪೂರ್ವಾಗ್ರಹ ಪೀಡಿತರೂ ಸಹ ಇವರ ಇಂತಹ ಜನೋಪಯೋಗಿ ನಡೆಗಳನ್ನು ಕಂಡು ಬಾಯಿ ಮುಚ್ಚಿಕೊಂಡು ಮೆಚ್ಚುಗೆ ಸೂಚಿಸಿದ ಪ್ರಸಂಗಗಳಿವೆ.
ಡಾಲರ್ ಗಟ್ಟಲೆ ಸಂಪಾದಿಸಿ ಐಶಾರಾಮಿ ಜೀವನ ನಡೆಸಲು ಉನ್ನತ ಹುದ್ದೆಗೆ ಏರಲು ಅವಕಾಶಗಳಿದ್ದರೂ ನಯವಾಗಿ ನಿರಾಕರಿಸಿ ಲಕ್ಷ್ಮಿಯ ಹಿಂದೆ ಹೋಗದೇ  ಸರಸ್ವತಿ ಸೇವೆಯನ್ನು ಮಾಡಿದ್ದಕ್ಕಾಗಿ ಕರ್ನಾಟಕಕ್ಕೆ ಮೊದಲ‌ "ಸರಸ್ವತಿ ಸಮ್ಮಾನ್" ಹುಡುಕಿಕೊಂಡು ಬಂತು. ನಾನೂ ಬಾಲ್ಯದಲ್ಲಿ ಹಲವು ಸಂಕಷ್ಟಗಳನ್ನು ಅನುಭವಿಸಿದರೂ ಬೈರಪ್ಪರವರ ಬಾಲ್ಯದ ಕಷ್ಟಗಳ ಮುಂದೆ ನನ್ನದೇನೂ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವೆ.ಆನಂದಸ್ವಾಮಿಯವರ ಪುಸ್ತಕಗಳು, ಅವರ ಫಿಲಾಸಫಿ ಗುರುಗಳಾದ ಯಮುನಾಚಾರ್ಯ ರವರು ಅವರ ಮೇಲೆ ಬಹು ಪ್ರಭಾವ ಬೀರಿದ ವ್ಯಕ್ತಿತ್ವಗಳು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.ಇದರ ಜೊತೆಯಲ್ಲಿ ಅವರ ದೇಶ ಸುತ್ತುವ, ಕೋಶ ಓದುವ, ಸಾಮಾನ್ಯ ಜನರೊಂದಿಗೆ ಬೆರಯುವ, ಕ್ಷೇತ್ರಕಾರ್ಯವನ್ನು ಮಾಡಿ ಅನುಭವದ ಮೂಲಕ ಬರೆಯುತ್ತಿದ್ದ ರೀತಿಗೆ ಇಂದು ನಮ್ಮ ಮುಂದೆ ಕ್ಲಾಸಿಕ್ ಕೃತಿಗಳಿವೆ.ನಮ್ಮ ದೇಶದ ಬೇರೆ ಭಾಷೆಗಳು, ಅಷ್ಟೇ ಏಕೆ ವಿದೇಶಿ ಭಾಷೆಗಳಿಗೂ ಅವರ ಕೃತಿಗಳು ಅನುವಾದಗೊಂಡು ಈಗಲೂ ಅವರ ಕೃತಿಗಳನ್ನು ಓದುತ್ತಿದ್ದಾರೆ.ಆ ಮೂಲಕ ಭೈರಪ್ಪನವರು ಚಿರಂಜೀವಿಯಾಗಿರುತ್ತಾರೆ.
ಭೈರಪ್ಪನವರ ಮತ್ತೊಂದು ಮಾತನ್ನು ನಾನು ಆಗಾಗ್ಗೆ ಜ್ಞಾಪಿಸಿಕೊಂಡು ನನಗೆ ನಾನೇ ಎಚ್ಚರಿಸಿಕೊಳ್ಳುತ್ತೇನೆ. ಅದೇನೆಂದರೆ "ಊರ ದೇವರು ಊರಾಡಿದಷ್ಟೂ ಮೂಲ ವಿಗ್ರಹಕ್ಕೆ ಬೆಲೆ ಕಡಿಮೆ ಆಗುತ್ತದೆ" ನಮ್ಮಲ್ಲಿ ಬಹಳ ಜನ ನಮ್ಮ ನೈಜ ಸಾಹಿತ್ಯ ಶಕ್ತಿಯನ್ನು ಹೊರತರುವ ಬದಲಿಗೆ ಅಲ್ಪ ಬರೆದು ಅದನ್ನೇ ವಿಜೃಂಭಿಸುವ ಮತ್ತು ಸೆಲಬ್ರೇಟ್ ಮಾಡಿಕೊಂಡು  ಸೆಲೆಬ್ರಿಟಿಯಾಗಿ ಸ್ವಯಂ ಬಿಂಬಿಸಿಕೊಳ್ಳುವವರಿಗೆ ಅವರ ಮಾತುಗಳು ನೆನಪಾಗಬೇಕು.
  ಭಾರತೀಯ ತತ್ತ್ವಶಾಸ್ತ್ರದಲ್ಲಿ ಬರುವ   ಮತ್ತೊಂದನ್ನು ಅವರು ಆಗಾಗ್ಗೆ ಹೇಳುತ್ತಿದ್ದ ಮಾತು ನನಗೆ ಪದೇ ಪದೇ ನೆನಪಾಗುತ್ತದೆ.ಅದು" The lower value should always  serve the higher, the higher is always valuable than lower "

ಸಮಾಜದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿರುವ ಈ ಕಾಲಘಟ್ಟದಲ್ಲಿ ಭೈರಪ್ಪನವರ ಜೀವನವು ನಮಗೆ ಪ್ರೇರಣೆಯಾಗಲಿ.

ಸಿಹಿಜೀವಿ ವೆಂಕಟೇಶ್ವರ.

16 ಸೆಪ್ಟೆಂಬರ್ 2025

ಇಂದು ಓಜೋನ್ ದಿನ .


 ಪ್ರತಿವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ.

ಓಜೋನ್ ಒಂದು ಅನಿಲ (Gas). ಇದರ ರಾಸಾಯನಿಕ ಸೂತ್ರ O₃ ಅಂದರೆ    ಮೂರು ಆಮ್ಲಜನಕ ಅಣುಗಳು!

ಬಣ್ಣವಿಲ್ಲದ, ಆದರೆ ಸ್ವಲ್ಪ “ಹುರಿ” ವಾಸನೆಯಿರುವ ಅನಿಲ.

ಇದು ವಾತಾವರಣದಲ್ಲಿ ಸಹಜವಾಗಿ ಉಂಟಾಗುತ್ತದೆ.


ಭೂಮಿಯ ವಾತಾವರಣದ ಸ್ಟ್ರಾಟೋಸ್ಫಿಯರ್ (Stratosphere) ಭಾಗದಲ್ಲಿ (ಸುಮಾರು 10–50 ಕಿಮೀ ಎತ್ತರದಲ್ಲಿ) ಓಜೋನ್ ಹೆಚ್ಚು ಸಾಂದ್ರತೆಯಲ್ಲಿ ಇರುತ್ತದೆ.

ಈ ಪದರವನ್ನು ಓಜೋನ್ ಪದರ (Ozone Layer) ಎಂದು ಕರೆಯಲಾಗುತ್ತದೆ.

ಇದು ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ (UV) ಕಿರಣಗಳನ್ನು ಶೋಷಿಸುತ್ತದೆ, ಭೂಮಿಯ ಜೀವಿಗಳಿಗೆ ರಕ್ಷಣೆ ನೀಡುತ್ತದೆ  ಕುಡಿಯುವ ನೀರಿನ ಸ್ವಚ್ಛತೆಗೆ ಓಜೋನ್ ಬಳಸಲಾಗುತ್ತದೆ. ಗಾಳಿ ಮತ್ತು ವಸ್ತುಗಳನ್ನು ಹಾನಿಕಾರಕ ಜೀವಾಣುಗಳಿಂದ ಮುಕ್ತಗೊಳಿಸಲು ಸಹ ಓಜೋನ್ ಉಪಯುಕ್ತ.


ಕೈಗಾರಿಕೆಯಲ್ಲಿ ಬಳಸುವ CFCs (Chlorofluorocarbons), ಏರ್‌ಕಂಡಿಷನರ್, ಫ್ರಿಜ್ ಗ್ಯಾಸ್‌ಗಳು, ಸ್ಪ್ರೆಗಳಲ್ಲಿ ಬಳಸುವ ರಾಸಾಯನಿಕಗಳು ಓಜೋನ್ ಪದರವನ್ನು ಹಾನಿಗೊಳಿಸುತ್ತವೆ.


ನಮ್ಮ ಓಜೋನ್ ಪದರ ರಕ್ಷಿಸೋಣ ತನ್ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

09 ಸೆಪ್ಟೆಂಬರ್ 2025

ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.


 




ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.

ಸರ್ವಾಂಗಗಳೂ ಸುಸ್ಥಿತಿಯಲ್ಲಿದ್ದರೂ ಸೋಮಾರಿಗಳಾಗಿ ಕಾಲ ಹರಣ ಮಾಡುವ ಹಲವಾರು ಜನರ ನಡುವೆ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿಕೊಂಡು ಜೀವನ ಸಾಗಿಸುವ ವಿಶೇಷ ಚೇತನಗಳು ನಮ್ಮ ಮಧ್ಯ ಇರುವುದನ್ನು ಕಾಣುತ್ತೇವೆ.ಅಂತಹ ವಿಶೇಷ ಚೇತನ ಸಾಧಕರೊಬ್ಬರನ್ನು ಇಂದು ನಾನು ನಿಮಗೆ ಪರಿಚಯ ಮಾಡಿಕೊಡುವೆ.

ಹೆಸರು  ಪ್ರಕಾಶ್ ಆರ್ ಸಾಹಿತ್ಯ ವಲಯದಲ್ಲಿ ಅಮೃತ ಹಸ್ತ ಪ್ರಕಾಶ್ ಎಂದು ಗುರ್ತಿಸಿಕೊಂಡ ಇವರು ಕ್ರೀಡಾ ಕ್ಷೇತ್ರದಲ್ಲಿ ದಿವ್ಯಾಂಗ  ಸ್ಪೋರ್ಟ್ಸ್ ಪ್ರಕಾಶ್ ಎಂದು ಹೆಸರು ಮಾಡಿದ್ದಾರೆ.
ಬಾಲ್ಯದಲ್ಲಿ ಸಾಮಾನ್ಯ ಬಾಲಕನಾಗಿದ್ದ ಪ್ರಕಾಶ್ ಚುರುಕಿನ ಚಟುವಟಿಕೆಗಳಿಂದ ನೆರೆಹೊರೆಯವರ ಗಮನ ಸೆಳೆದಿದ್ದರು.ವಿಧಿಯ ಕ್ರೂರತೆಯು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕೆಟ್ಟ ಘಳಿಗೆ ತಂದು ನಮ್ಮ ಆತ್ಮ ಶಕ್ತಿಗೆ ಸವಾಲಾಗಿ ನಿಲ್ಲುತ್ತದೆ. ಅಂತದೇ ಘಟನೆ ನಮ್ಮ ಪ್ರಕಾಶ್ ರವರ ಜೀವನದಲ್ಲೂ ಆಯಿತು. ಇದ್ದಕ್ಕಿದ್ದಂತೆ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡವು. ಪೋಷಕರು ಆಘಾತದಿಂದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದರೂ ಉಪಯೋಗವಾಗಲಿಲ್ಲ.ವೀಲ್ ಚೇರ್ ಏರಿ ಶಾಲೆಯಲ್ಲಿ ಕಲಿತ ಪ್ರಕಾಶ್ ರವರಿಗೆ ಮತ್ತೊಂದು ಆಘಾತ ಕಾದಿತ್ತು. ಕ್ರಮೇಣವಾಗಿ ಅವರ  ಕಿವಿಗಳು ತಮ್ಮ ಗ್ರಹಣ ಶಕ್ತಿಯನ್ನು ಕಳೆದುಕೊಂಡವು.ಎದೆಗುಂದದ ಅವರು ತಮ್ಮ ಪೋಷಕರ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರೆಸಿ ಗೌರಿಬಿದನೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ಮಾಡಲು ಶುರುಮಾಡುತ್ತಾರೆ.ಆಗಲೇ ಅವರು ನನಗೆ ಪರಿಚಯವಾಗಿದ್ದು.ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಿಂದ ನಮ್ಮ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ಇಂದಿಗೂ ಮುಂದುವರೆದಿದೆ.





ಗೌರಿಬಿದನೂರಿನಿಂದ ಪ್ರಕಾಶ್ ತುಮಕೂರಿಗೆ ಬಂದರು.ನಾನೂ ಬಂದೆ.ಗೌರಿಬಿದನೂರಿನಲ್ಲಿ ವಿಶೇಷ ಚೇತನ ಪ್ರಕಾಶ್ ಶಿಕ್ಷಕ ಹಾಗೂ ಕವಿಯಾಗಿ ಗುರ್ತಿಸಿಕೊಂಡಿದ್ದರೆ ತುಮಕೂರಿಗೆ ಬಂದು ಓರ್ವ ದಿವ್ಯಾಂಗ ಕ್ರೀಡಾಪಟುವಾಗಿ,ಸಮಾಜ ಸೇವಕನಾಗಿ ಸಂಘಟಕನಾಗಿ ಹೊರಹೊಮ್ಮಿದ್ದಾರೆ.ಅವರ ಸಾಧನೆಗಳು ಇತರ ದಿವ್ಯಾಂಗರಿಗೆ ಪ್ರೇರಣೆಯಾಗಿವೆ.



ತುಮಕೂರು ಡಿಸ್ಟ್ರಿಕ್ಟ್  ದಿವ್ಯಾಂಗ ಸ್ಪೋರ್ಟ್ಸ್ ಅಸೋಸಿಯೇಷನ್
ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ 
ವಿದ್ಮಹಿ ವಿಕಲಚೇತನರ ಸೇವಾ ಟ್ರಸ್ಟ್  ಸಂಸ್ಥಾಪಕ  ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ವಿಶೇಷ ಚೇತನರಿಗೆ ಚೇತನರಾಗಿ ನಿಂತಿದ್ದಾರೆ.ತುಮಕುರು  ಜಿಲ್ಲೆಯಲ್ಲೇ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಆಡಿದ ಮೊದಲಿಗರಾಗಿ ಗುರ್ತಿಸಿಕೊಂಡ ಪ್ರಕಾಶ್
ಜಿಲ್ಲೆಯಲ್ಲಿ ದಿವ್ಯಾಂಗರ ಕ್ರೀಡೆಯನ್ನು ಪರಿಚಯಿಸಿ ಕತ್ತಲಲ್ಲಿರುವ ದಿವ್ಯಾಂಗರನ್ನು ಬೆಳಕಿಗೆ ತರಲು ತುಮಕೂರು ಜಿಲ್ಲಾ ದಿವ್ಯಾಂಗ  ಸ್ಪೋರ್ಟ್ಸ್ ಅಕಾಡೆಮಿಯನ್ನು  ತೆರೆದು 30 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕ್ರೀಡಾ ತರಬೇತಿ ನೀಡಿ ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಇವರ ನೇತೃತ್ವದಲ್ಲಿ
ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್  ವೀಲ್ ಚೇರ್ ಕ್ರಿಕೆಟ್ ಹಾಗೂ
ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಟೂರ್ನಮೆಂಟ್ಗಳಲ್ಲಿ
ತುಮಕೂರು ಜಿಲ್ಲೆಗೆ  ದ್ವಿತೀಯ ಸ್ಥಾನ ಲಭಿಸಿದೆ






ಇದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿವ್ಯಾಂಗರ ವೀಲ್ ಚೇರ್ ಪ್ಯಾರ ಬ್ಯಾಡ್ಮಿಟನ್ ನಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಮಟ್ಟದ ದಿವ್ಯಾಂಗರ ಕ್ರೀಡೆಗಳನ್ನು ನಡೆಸುವ ಮೂಲಕ ದಿವ್ಯಾಂಗರಲ್ಲಿ ಆತ್ಮಸ್ಪೈರ್ಯ ತುಂಬುತ್ತಿದ್ದಾರೆ ಇವರ ಪರಿಶ್ರಮದಿಂದ
ತುಮಕುರು ಜಿಲ್ಲೆಯಿಂದ  ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ  8 ಜನ ಆಯ್ಕೆ ಆಯ್ಕೆಯಾಗಿದ್ದಾರೆ.
ದಿವ್ಯಾಂಗರ ಕ್ರೀಡಾ ಪಟುಗಳಿಗೆ ಅಗತ್ಯವಾದ  ಶೂಸ್ ಮತ್ತು ಟೀ ಶರ್ಟ್ ಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ ಮುಂಬೈನಲ್ಲಿ ನಡೆದ ನ್ಯಾಷನಲ್ ವೀಲ್ ಚೆರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು   ಪ್ರತಿನಿಧಿಸಿದ್ದಾರೆ.ತುಮಕೂರು ಡಿಸ್ಟ್ರಿಕ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮೂಲಕ ವಿಕಲಚೇತನರ ಕ್ರೀಡಾ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಮಟ್ಟದ ವೀಲ್ ಚೇರ್ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ರಾಜ್ಯಕ್ಕೆ  ಮಾದರಿಯಾಗಿದ್ದಾರೆ.

ನ್ಯಾಷನಲ್  ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ನಲ್ಲಿ  ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ನ್ಯಾಷನಲ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ  ಕರ್ನಾಟಕ ತಂಡಕ್ಕೆ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.
2025 ರ ಅಗಸ್ಟ್ 15ನೇ ತಾರೀಕು  ರಾಜ್ಯ ಮಟ್ಟದ  ವೀಲ್ ಚೇರ್ ಬ್ಯಾಸ್ಕೆಟ್ಬಾಲ್  ತರಬೇತಿ ಶಿಬಿರವನ್ನು ಆಯೋಜಿಸಿದರು.ಇದೇ ವರ್ಷ ಪ್ಯಾರಾಸಿಟ್ಟಿಂಗ್ ಥ್ರೋ ಬಾಲ್ ನಲ್ಲಿ ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಶ್ರೀ ಲಂಕಾ ದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ಯಾರಾಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆ ಆಗುವ ಮೂಲಕ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿ ಹೊರ ಹೊಮ್ಮಿದ್ದಾರೆ.





ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಕಾಶ್ ರವರ ಸಾಧನೆಯೇನು ಕಡಿಮೆಯಿಲ್ಲ.  ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ 100  ಕ್ಕೂ ಹೆಚ್ಚು ಕವಿಗೋಷ್ಠಿಗಳಿಗೆ ಆಯ್ಕೆ ಆಗಿ ಕವನ ವಾಚಿಸಿದ್ದಾರೆ.ನಾನೂ ಇವರೊಂದಿಗೆ ಹಲವಾರು ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದೇನೆ. ಇವರ ಕವನಗಳು
ಹಲವಾರು ಪತ್ರಿಕೆಗಳಲ್ಲಿ ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ.ತುಮಕೂರಿನ ಕನ್ನಡ ಭವನದಲ್ಲಿ ಇವರ ಚೊಚ್ಚಲ ಕೃತಿ
ಅಮೃತಹಸ್ತ 2019 ರಲ್ಲಿ ಬಿಡುಗಡೆಯಾಗಿ ಓದುಗರ ಮೆಚ್ಚುಗೆಯನ್ನು ಗಳಿಸಿದೆ.
ಅಮೃತಹಸ್ತ ಪುಸ್ತಕದ ಮಾರಾಟದಿಂದ ಬಂದ ಹಣದಿಂದ ಅಂಧ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಪ್ರೇಮ ಕಾದಂಬರಿ ಮತ್ತು ದಿವ್ಯಾಂಗರ ಕ್ರೀಡಾ ಲೋಕದ ಕುರಿತು ಕಾದಂಬರಿ ಪ್ರಕಟಣೆ ಗೆ ಸಿದ್ಧವಾಗಿವೆ.

ಪ್ರಕಾಶ್ ರವರ ಸಾಧನೆ ಇಲ್ಲಿಗೇ ನಿಂತಿಲ್ಲ.ಸಮಾಜ ಸೇವೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ
ಅಮೃತಹಸ್ತ ಸಂಸ್ಥೆಯ ಮೂಲಕ
  ಬಡತನದಲ್ಲಿರುವ ದಿವ್ಯಾಂಗರಿಗೆ  ವೀಲ್ ಚೇರ್ ಕೊಡಿಸುವ   ಶೂಸ್ ಮತ್ತು ಟೀ ಶರ್ಟ್ ಗಳನ್ನು ಕೊಡಿಸುವ, ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದಾರೆ.ಅಮೃತಸಿಂಚನ ಸಂಸ್ಥೆ ಜೊತೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ವಿಕಲ ಚೇತನ ಮಕ್ಕಳಿಗೆ  ನೋಟ್ ಪುಸ್ತಕ ಬ್ಯಾಗ್ ಗಳನ್ನು ಕೊಡಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ದಾನಿಗಳ ಸಹಕಾರದಿಂದ  "ಒಂದು ಜೊತೆ ಬಟ್ಟೆ" ಅಭಿಯಾನದಲ್ಲಿ ಭಾಗವಹಿಸಿ ಬಡವರಿಗೆ ಬಟ್ಟೆ ವಿತರಿಸಿದ್ದಾರೆ.ಅಂಧ ಮಕ್ಕಳಿಗೆ ಪ್ರತಿ ವರ್ಷ ಊಟ ಮತ್ತು ಸಿಹಿ ಹಂಚುತ್ತ ಬರುತ್ತಿದ್ದಾರೆ.
ಇವರು ಕ್ರೀಡೆ, ಸಾಹಿತ್ಯ ಮತ್ತು ಸಮಾಜ ಸೇವೆ ಗುರ್ತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಗೌರವಿಸಿದ್ದಾರೆ‌
ಕಸ್ತೂರಿ ಸಿರಿಗನ್ನಡ ವೇದಿಕೆಯು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ  ಬೆಂಗಳೂರಿನ ಕವಿವೃಕ್ಷ ವೇದಿಕೆಯು ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕರ್ನಾಟಕ ಚಲನಚಿತ್ರ ಮಂಡಳಿ ಯುವರತ್ನ ಪ್ರಶಸ್ತಿ ನೀಡಿದೆ.ಧಾರವಾಡದ ಚೇತನ ಫೌಂಡೇಶನ್  ರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರೋದ್ಯಮ ತಂಡವು  75 ಸೈನಿಕರೊಂದಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದಾವಣಗೆರೆಯ ಸಾಧನ ಚಾರಿಟೇಬಲ್ ಟ್ರಸ್ಟ್  ನವರು ಸಾಧನ ರತ್ನ ಪ್ರಶಸ್ತಿ ನೀಡಿದ್ದಾರೆ.
ಬೆಂಗಳೂರಿನ  ಸ್ನೇಹಜೀವಿ ಗೆಳೆಯರ   ಬಳಗವು  ಸ್ನೇಹಜೀವಿ ದಿವ್ಯಾಂಗ ಕ್ರೀಡೆ ರತ್ನ ಪ್ರಶಸ್ತಿ  ನೀಡಿದರೆ
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನವರು ಕಾಯಕ ಶ್ರೀ ಹಾಗೂ ಪ್ರಶಸ್ತಿ ನೀಡಿದ್ದಾರೆ.
ಕಾವ್ಯ ಶ್ರೀ ಚಾರಿಟೇಬಲ್  ಟ್ರಸ್ಟ್  ನವರು ಸುವರ್ಣ ಕನ್ನಡಿಗ ಪ್ರಶಸ್ತಿ  ನೀಡಿ ಗೌರವಿಸಿದ್ದಾರೆ.
ಚಂದನ ಸಾಹಿತ್ಯ ವೇದಿಕೆಯಿಂದ ಚಂದನ ಕ್ರೀಡಾ ರತ್ನ ಪ್ರಶಸ್ತಿ ,
ಚೇತನ ಸೋಶಿಯಲ್ ಕ್ಲಬ್ ನವರು  ಬಾರತ ಭೂಷಣ ನ್ಯಾಷನಲ್ ಅವಾರ್ಡ್ ನೀಡಿ ಪುರಸ್ಕಾರಿಸಿದ್ದಾರೆ.

ಇಂತಹ ಅಸಮಾನ್ಯ ಸಾಧನೆ ಮಾಡಿರುವ ವಿಶೇಷ ಚೇತನ ಪ್ರಕಾಶ್ ರವರ ಸಾಧನೆ ಶ್ಲಾಘನೀಯ. ಅವರ ಸಾಧನೆಗೆ ಮೆಚ್ಚುಗೆ ಸೂಚಿಸಲು ಮತ್ತು ಅವರ ಸಮಾಜಮುಖಿ ಕಾರ್ಯಗಳಿಗೆ ಜೊತೆಗೂಡಲು ಅವರ ಈ  8861443413 ನಂಬರ್ ಗೆ ಸಂಪರ್ಕಿಸಬಹುದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

17 ಆಗಸ್ಟ್ 2025

ಕೋಟಿ ಜನರ ಹೃದಯ ಗೆದ್ದು ಕೋಟಿ ಸಂಪಾದಿಸಿದ ಡ್ರೈವರ್..


ಅವರೊಬ್ಬ ಸಾಮಾನ್ಯ ಲಾರಿ ಚಾಲಕ   ದಿನಕ್ಕೆ ₹150 ಮಾತ್ರ ಸಂಪಾದಿಸುತ್ತಿದ್ದ ‌ಅವರ ಬ್ರಾಂಡ್ ಮೌಲ್ಯ ಈಗ 5 ಕೋಟಿ ಇದೊಂತರ ನಮ್ಮ ವಿ ಅರ್ ಎಲ್ ಓನರ್ ವಿಜಯ್ ಸಂಕೇಶ್ವರ ಕಥೆಯಂತಿದ್ದರೂ ಸ್ವಲ್ಪ ವಿಭಿನ್ನ. ನಾನೀಗ ನಿಮಗೆ ಪರಿಚಯ ಮಾಡುವ ವ್ಯಕ್ತಿಯ ಹೆಸರು ರಾಜೇಶ್!  ಜಾರ್ಖಂಡ್ ಮೂಲದ ರಾಜೇಶ್ ರವರ ಪೂರ್ಣ ಹೆಸರು ರಾಜೇಶ್ ರವಾನಿ.  ಈಗಲೂ ಲಾರಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಬರೀ ಲಾರಿ ಡ್ರೈವರ್ ಆಗಿದ್ರೆ ಅವರು ಲಕ್ಷದಲ್ಲಿ ಒಬ್ಬ ಸಾಮಾನ್ಯ ಡ್ರೈವರ್ ಆಗಿರುತ್ತಿದ್ದರು ಆದರೆ ಯೂಟ್ಯೂಬ್ ಅವರನ್ನು ಸ್ಟಾರ್ ಆಗಿ ಪರಿವರ್ತಿಸುವ ಮೂಲಕ ಕೋಟಿ ಸಂಪಾದಿಸುವ ಡಿಜಿಟಲ್ ಕ್ರಿಯೇಟರ್,ಹಾಗೂ ಯೂಟ್ಯೂಬರ್ ಆಗಿ ಪರಿವರ್ತಿಸಿದೆ.

ಬಿಸಿಲು, ಮಳೆ,ಚಳಿ,ಹಗಲು,ರಾತ್ರಿಗಳ ಪರಿವೆ ಇಲ್ಲದೆ ಸಂಸಾರದಿಂದ ವಾರ, ಮಾಸಗಳ ಕಾಲ ದೂರವಿರುವ ಲಾರಿ ಡ್ರೈವರ್ ಗಳ ಲೋಕವೇ ವಿಶಿಷ್ಟ. ಅಂತಹ ಕಾಯಕ ಮಾಡುವ ರಾಜೇಶ್ ಒಮ್ಮೆ ಕುತೂಹಲಕ್ಕೆ ತನ್ನ ಲಾರಿ ಡ್ರೈವಿಂಗ್ ಅನುಭವಗಳನ್ನು ಪುಟ್ಟ ವೀಡಿಯೋ ಮಾಡಿ ಹರಿಬಿಟ್ಟರು. ಜನರು ಅವರ ವೀಡಿಯೋ ನೋಡಿ ಖುಷಿ ಪಟ್ಟು ಸಬ್ಸ್ಕ್ರೈಬ್ ಲೈಕ್ ಶೇರ್ ಮಾಡಿ ಬೆಂಬಲಿಸಿದರು.ಅಲ್ಲೊಂದು ಪವಾಡವೇ ಜರುಗಿತು.ಈಗ ಅವರ "ಆರ್ ರಾಜೇಶ್ ವ್ಲಾಗ್" ಹೆಸರಿನ ಯೂಟ್ಯೂಬ್ ಚಾನೆಲ್ ಗೆ ಬರೋಬ್ಬರಿ ಕಾಲು ಕೋಟಿ ಚಂದಾದಾರರರು.ಎಂಬತ್ತು ಕೋಟಿಗಿಂತ ಹೆಚ್ಚು ವೀಕ್ಷಣೆ ಕಂಡ ಅವರ ಸಂಪಾದನೆ ತಿಂಗಳಿಗೆ ಐದರಿಂದ ಹತ್ತು ಲಕ್ಷಗಳು!


ರಾಜೇಶ್ ತಮ್ಮ ವ್ಲಾಗ್ ಗಳಲ್ಲಿ  ಚಾಲಕರ ದಿನನಿತ್ಯದ ಸಂಕಷ್ಟಗಳು, ರಸ್ತೆಗಳಲ್ಲಿ ಕಂಡುಬರುವ ಅದ್ಭುತ ದೃಶ್ಯಗಳು, ವಾಹನ ಸಂಬಂಧವಾದ ಸಲಹೆಗಳು, ರಸ್ತೆ ಸುರಕ್ಷತಾ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಮೊದಲಿಗೆ ಕೆಲವರು ಮಾತ್ರ ನೋಡುತ್ತಿದ್ದರು, ಆದರೆ ನಿಧಾನವಾಗಿ ಸಾವಿರಾರು ಜನರು ಅವರ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದರು.


ರಾಜೇಶ್ ಅವರ ಸರಳತೆ, ನಿಜವಾದ ಅನುಭವ ಮತ್ತು ಮನಸಾರೆ ಆಡುವ  ಮಾತುಗಳು ಜನರನ್ನು ಆಕರ್ಷಿಸಿದವು. ಅತಿರೇಕವಿಲ್ಲದೆ ತಾನು ಬದುಕುತ್ತಿದ್ದ ಜೀವನವನ್ನೇ ಜನರಿಗೆ ತೋರಿಸುತ್ತಿದ್ದುದರಿಂದ ಎಲ್ಲರೂ ಅವರಿಗೆ ಹತ್ತಿರವಾದರು.


ಕಾಲಕಳೆದಂತೆ ಅವರ ಯೂಟ್ಯೂಬ್ ಚಾನೆಲ್ ಬೆಳೆಯಿತು. ಹವ್ಯಾಸವಾಗಿ ಪ್ರಾರಂಭಿಸಿದ ಕೆಲಸವೇ ಅವರಿಗೆ ಎರಡನೇ ಉದ್ಯೋಗವಾಯಿತು. ಈಗ ಬ್ರಾಂಡ್‌ಗಳು ಅವರನ್ನು ಸಂಪರ್ಕ ಮಾಡಿ  ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತವೆ.ಯಾಕೆಂದರೆ ಈಗ ಅವರೇ ಒಂದು ಬ್ರಾಂಡ್!

ದುಡ್ಡು ಬಂತು ಎಂದು ರಾಜೇಶ್ ಅರ್ಧ ರಾತ್ರಿಯಲ್ಲಿ ಛತ್ರಿ ಹಿಡಿಯಲಿಲ್ಲ ಬದಲಿಗೆ 

ಇಂದಿಗೂ ರಾಜೇಶ್ ತಮ್ಮ ಲಾರಿಯನ್ನು ಓಡಿಸುತ್ತಲೇ ಇದ್ದಾರೆ. ಜೊತೆಗೆ ಸಾವಿರಾರು ಜನರಿಗೆ ಪ್ರೇರಣೆಯೂ ಆಗಿದ್ದಾರೆ. ಮೋಟಾರು ವಾಹನ ತಯಾರಿಕಾ ದೈತ್ಯ ಕಂಪನಿಯ ಮಾಲಿಕರಲ್ಲಿ ಒಬ್ಬರಾದ ಆನಂದ್ ಮಹಿಂದ್ರ ರಾಜೇಶ್ ರವರನ್ನು ಮನಸಾರೆ ಹೊಗಳಿದ್ದಾರೆ.ಪ್ರಸ್ತುತ ಅವರು ಒಂದು ಕೋಟಿ ಬೆಲೆ ಬಾಳುವ ಮನೆಯನ್ನು ಕಟ್ಟಿಸಿದ್ದಾರೆ.ಅವರ ಮೂವರು ಮಕ್ಕಳು ಅವರ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡುವ ಪ್ರಮೋಟ್ ಮಾಡುವಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ.

ಯಾವುದೇ ಕೆಲಸವನ್ನು ಶ್ರದ್ಧೆ, ಮತ್ತು ಅಚ್ಚುಕಟ್ಟಾಗಿ ಮಾಡಿದರೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯೂಟ್ಯೂಬ್ ನಂತಹ ವೇದಿಕೆಗಳು ಹೇಗೆ ನಮ್ಮ ಜೀವನವನ್ನು ಧನಾತ್ಮಕವಾಗಿ ಬದಲಾಯಿಸುತ್ತವೆ ಎಂಬುದಕ್ಕೆ ರಾಜೇಶ್ ರವರ ಬದುಕೇ ಉದಾಹರಣೆ. ಇಂದಿನ ಯುವ ಜನರಿಗೆ ರಾಜೇಶ್ ಬಹುದೊಡ್ಡ ಪ್ರೇರಣೆ. ನಮ್ಮ ಹಿನ್ನಲೆ ಏನೇ ಇರಲಿ ಕೆಲಸದೆಡೆಗಿನ  ಒಲವು ಮತ್ತು ನಿರಂತರ ಪರಿಶ್ರಮ ಇದ್ದರೆ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ರಾಜೇಶ್ ಸಾಬೀತು ಮಾಡಿದ್ದಾರೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು






 

30 ಜುಲೈ 2025

ಸರ್ಕಾರಿ ಕೆಲಸ ಪಡೆದ ರೈತನ ಮೂರೂ ಮಕ್ಕಳು.


 



 ಕೆಲಸ ಸಿಗಲಿಲ್ಲ  ಎಂದು ಪರಿತಪಿಸುತ್ತಾ  ಸರ್ಕಾರಿ ಉದ್ಯೋಗ ಪಡೆಯಲು  ಪರದಾಡುತ್ತಿರುವ ಮಧ್ಯೆಸಾಮಾನ್ಯ ರೈತ ಕುಟುಂಬದ ಮೂವರು ಒಡಹುಟ್ಟಿದವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ತಂದೆಯ ಕನಸನ್ನು ಈ  ಮೂವರು ಮಕ್ಕಳು ಈಡೇರಿಸಿದ್ದಾರೆ.


ಕರೀಂನಗರ ಜಿಲ್ಲೆಯ ವೀನವಂಕ ಬಳಿಯ ರೆಡ್ಡಿಪಲ್ಲಿ ಗ್ರಾಮದ ಪೊತುಲು ಇಂದಿರಾ ಮತ್ತು ಚಂದ್ರೈ ದಂಪತಿಯ ಮೂವರೂ ಮಕ್ಕಳು ಸರ್ಕಾರಿ  ಹುದ್ದೆ ಪಡೆದಿದ್ದಾರೆ. 2 ಎಕರೆಯಲ್ಲಿ ದಂಪತಿ ಕೃಷಿ ಜೊತೆಗೆ ಕೂಲಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದರು. ಎಲ್ಲ ಪೋಷಕರು ಬಯಸುವಂತೆ  ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕು ಎಂದು ತಂದೆ ಕನಸು ಕಂಡಿದ್ದರು.


ಸರ್ಕಾರಿ ಶಾಲೆಯಲ್ಲೇ ಕಲಿತು ಸರ್ಕಾರಿ ಉದ್ಯೋಗ ಪಡೆದ ಮಕ್ಕಳ ಸಾಧನೆ ಕಂಡ ಪೋಷಕರು ಆನಂದ ಭಾಷ್ಪ ಸುರಿಸಿದ್ದಾರೆ.

 ಓರ್ವ ಮಗ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್, ಇನ್ನೊಬ್ಬ ಸಿಐಎಸ್​ಪಿ ಕಾನ್ಸ್​ಟೇಬಲ್ ಮತ್ತು ಪುತ್ರಿ ಅಬಕಾರಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಈ ರೈತನ ಹಿರಿಯ ಮಗ ಎಂ ಬಿ ಬಿ ಎಸ್ ಓದಿದದರೂ ಸರ್ಕಾರಿ ಹುದ್ದೆ ಸಿಗದ ಕಾರಣದಿಂದ ಡಾಕ್ಟರ್ ಹುದ್ದೆ ತೊರೆದು ತಂದೆಯ ಆಸೆಯಂತೆ ಸರ್ಕಾರಿ ಕೆಲಸ ಪಡೆದಿದ್ದಾರೆ.

 ಅಜಯ್ ಕರೀಂ ನಗರದ ಪ್ರತಿಮಾ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಇವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯದೇ ಅಪ್ಪನ ಆಸೆಯಂತೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂದು ನಿರ್ಧರಿಸಿದ್ದರು. ಅಂತೆಯೇ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್ ಆಗಿ ಆಯ್ಕೆ ಆಗಿದ್ದಾರೆ.


"ಚೆನ್ನಾಗಿ ಓದಿ ಪೊಲೀಸ್ ಅಧಿಕಾರಿಯಾಗುವಂತೆ ನಮ್ಮ ತಂದೆ ನನಗೆ ಬಾಲ್ಯದಿಂದಲೂ ಹೇಳುತ್ತಿದ್ದರು. ಆದರೆ ಡಾಕ್ಟರ್ ಆಗಬೇಕೆಂಬ ನನ್ನ ಕನಸು ಪೂರೈಸಿಕೊಳ್ಳಲು ಎಂಬಿಬಿಎಸ್ ಮಾಡಿದೆ.  ತಂದೆಯ ಮಾತು ನನ್ನನ್ನು ಕಾಡುತ್ತಿತ್ತು. ಆದ್ದರಿಂದ ಸ್ಫರ್ಧಾತ್ಮಕ ಪರೀಕ್ಷೆ ಪಡೆದು ಕಮಾಂಡರ್ ಆಗಿ ತಂದೆಯ ಕನಸು ನನಸು ಮಾಡಿರುವೆ" ಎಂದು ಅಜಯ್ ತಿಳಿಸಿದ್ದಾರೆ.


 ಅಜಯ್ ಅವರ ತಂಗಿ ನವಥಾ ಸರ್ಕಾರಿ ಶಾಲೆಯಲ್ಲಿ ಕಲಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಕೂಡ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿ ಅಬಕಾರಿ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರ ಸಹೋದರ ಶ್ರವಣ ಕೂಡ ಉತ್ತರ ಪ್ರದೇಶದ ಲಖನೌದಲ್ಲಿ ಸಿಐಎಸ್​ಎಫ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.



ತಂದೆ ತಾಯಿಗಳು ಕಷ್ಟ ಪಟ್ಟು ಶಿಕ್ಷಣ ನೀಡಿದರು. ಅದಕ್ಕೆ ತಕ್ಕಂತೆ ಮಕ್ಕಳು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ  ಸರ್ಕಾರಿ ಉದ್ಯೋಗ ಪಡೆದರು.

ಮಧ್ಯಮ ವರ್ಗದ ಕುಟುಂಬದ ಗ್ರಾಮೀಣ ಹಿನ್ನೆಲೆಯಿಂದ ಬಂದ ಈ  ಮೂವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ.


ಸಿಹಿಜೀವಿ ವೆಂಕಟೇಶ್ವರ


19 ಜುಲೈ 2025

ಲಲಿತಾಸನಲ್ಲಿ ಕುಳಿತ ಶ್ರೀಕೃಷ್ಣ.


 



ಸಾಮಾನ್ಯ ಶಕ ವರ್ಷ 

950 ರ ಕಾಲದ 

ಚೋಳರ ಕಾಲಕ್ಕೆ ಸೇರಿದ ಈ  ವಿಷ್ಣುವಿನ ವಿಶೇಷವಾದ ಮೂರ್ತಿ ಪ್ರಸ್ತುತ ಬ್ರಿಟಿಷ್‌ ಮ್ಯೂಸಿಯಂ ನಲ್ಲಿದೆ.


 ಲಂಬವಾದ ಅಡ್ಡ ಪಟ್ಟಿಗಳನ್ನು ಹೊಂದಿರುವ ಮೆಟ್ಟಿಲು ಸಿಂಹಾಸನದ ಮೇಲೆ ಲಲಿತಾಸನದಲ್ಲಿ ಕುಳಿತಿರುವ, ಅಗಲವಾದ ಭುಜಗಳು ಮತ್ತು ಕಿರಿದಾದ ಸೊಂಟವನ್ನು ಹೊಂದಿರುವ ಕಿರೀಟಧಾರಿ ವಿಷ್ಣುವಿನ ಕಂಚಿನ ಆಕೃತಿಯು ಆ ಕಾಲದ  ಶಿಲ್ಪಿಗಳ ಚಾಕಚಕ್ಯತೆಗೊಂದು ಉದಾಹರಣೆ.

ನಮ್ಮ ಸಾಂಸ್ಕೃತಿಕ ಪರಂಪರೆ

ನಮ್ಮ ಹೆಮ್ಮೆ..


ಸಿಹಿಜೀವಿ ವೆಂಕಟೇಶ್ವರ.


#CulturalHeritage #HeritagePreservation #CulturalDiversity #Tradition #CulturalIdentity #History #Authenticity #CulturalAwareness #ArtAndCulture #WorldHeritage #CulturalLegacy #RichHeritage #CulturalMapping #CulturalExpression #Folklore #PreserveOurHeritage #CulturalRoots #CulturalFestival #Ethnic

Diversity


11 ಜುಲೈ 2025

ಆತ್ಮೀಯ ಗೆಳೆಯ..


 

ಇತ್ತೀಚೆಗೆ ಮೈಸೂರಿಗೆ ಹೋದಾಗ ಬಿ ಎಡ್ ಮಾಡುವಾಗ ಜೊತೆಯಲ್ಲಿ ಓದಿದ ಗೆಳೆಯ ಸುರೇಶ್ ಸಿಕ್ಕಿದ್ದರು. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನನ್ನ ಜೊತೆಗಿದ್ದು ನನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸ್ನೇಹಜೀವಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ,ಒಡನಾಡಿದ, ಸಂತಸದ ಕ್ಷಣಗಳನ್ನು ಮೆಲುಕು ಹಾಕಿದೆವು. ಸುರೇಶ್ ಈಗ P D O ಆಗಿ ಕಾರ್ಯ ಮಾಡುತ್ತಾರೆ.ಬಿ ಎಡ್ ಓದುವಾಗಲೇ   ನಾನು ಅವರಿಗೆ ತಲೈವ ಎಂದಿದ್ದು ಈಗ ನಿಜಕ್ಕೂ ತಲೈವ ಆಗಿದ್ದಾರೆ. ನಾನೀಗ 27 ಪುಸ್ತಕ ಬರೆದಿರುವ ಲೇಖಕ, ಕವಿ ಎಂಬುದನ್ನು ತನ್ನ ಮಡದಿ ಮಕ್ಕಳಿಗೆ ಹೆಮ್ಮೆಯಿಂದ ಪರಿಚಯಿಸಿದರು.ಒಳ್ಳೆಯ ಬಿರಿಯಾನಿ ಊಟ ಹಾಕಿಸಿದ ಗೆಳೆಯ ಕಳೆದ  ತೊಂಬತ್ತರ ದಶಕದ ನಮ್ಮ ದುರಿತ ಕಾಲ,ಹಾಗೂ ಆ ಕಾಲದಲ್ಲೂ ಎಂಜಾಯ್ ಮಾಡಿದ ಸವಿ ಕ್ಷಣಗಳನ್ನು ನೆ‌ನಪು ಮಾಡಿದರು. ಅವರ ಮಕ್ಕಳಿಗೆ ನನ್ನ ಕೃತಿಗಳನ್ನು ನೀಡಿ ಓದಲು ಹೇಳಿದೆ.ಧನ್ಯವಾದಗಳು🙏🙏 ತಲೈವ ಮತ್ತೊಮ್ಮೆ ಮಗದೊಮ್ಮೆ ಸಿಗೋಣ.ನಮ್ಮ ಸ್ನೇಹವನ್ನು ಸಂಭ್ರಮಿಸೋಣ...

ಇಂತಿ ನಿನ್ನ ಗೆಳೆಯ

ಸಿಹಿಜೀವಿ ವೆಂಕಟೇಶ್ವರ.

#FriendshipGoals #CherishedFriends #FriendshipMatters #BestiesForLife #TrueFriendship #FriendsForLife #BondingTime #BFFs #FriendshipVibes #MakingMemories #GoodFriends #FriendshipForever #UnderstoodByYou #LifelongFriends #CrazyAdventures #SupportSystem #FriendshipLove #DynamicDuos #FriendshipMoments #TogetherAlways