16 ಫೆಬ್ರವರಿ 2026

ಜನಪದರ ಕಣ್ಣಲ್ಲಿ ಕಮ್ಮಾರ ಕಲ್ಲಯ್ಯ


 ಜನಪದರ ಕಣ್ಣಲ್ಲಿ  ಕಮ್ಮಾರ ಕಲ್ಲಯ್ಯ


ಕುರಿತೋದದೆಯುಂ ಕಾವ್ಯ ಪ್ರಯೋಗ ಮತಿಗಳ್  ಎಂದು ಕವಿರಾಜಮಾರ್ಗಕಾರ ವರ್ಣಿಸಿರುವಂತೆ ನಮ್ಮ ಜನಪದರು ನಮಗೆ ‌ಜ್ಞಾನದ ಆಗರ. ಲಿಖಿತ ದಾಖಲೆಗಳಿರದ ಸಂದರ್ಭಗಳಲ್ಲಿ ಇವರ ಮೌಖಿಕ ಆಕರಗಳೇ ನಮಗೆ ಆಧಾರ.
ಶರಣ ಕಲ್ಲಯ್ಯ ರವರ ಬಗ್ಗೆ ತಿಳಿಯಲು ನಮಗೆ ಜನಪದರ ಹಾಡುಗಳು ಪ್ರಮುಖ ಆಕರವಾಗಿವೆ.

'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು.  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಆತ್ಮೀಯರಾದ  ಮಂಜುನಾಥ್ ರವರು ಶರಣ ಕಲ್ಲಯ್ಯ ರವರ ಬಗ್ಗೆ ರಚಿತವಾದ ಜನಪದ ಗೀತೆಯ ಲಿಂಕ್ ಕಳಿಸಿದ್ದರು ಅದನ್ನು ಕೇಳಿದಾಗ ಶರಣ ಕಲ್ಲಯ್ಯನವರ ಬಗ್ಗೆ  ಒಂದು ಲೇಖನ ಬರೆಯಬೇಕು ಎಂಬ ಮನಸಾಯಿತು ಅದರ ಫಲವೇ ಈ ಲೇಖನ





ಓಂ ಶ್ರೀ ಗುರು ಬಸವಲಿಂಗಾಯ ನಮಃ ಜನಪದರ ಕಂಡ ಕಮ್ಮಾರ ಕಲ್ಲಯ್ಯ ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಧರಣೀಯ ಶರಣ ಗಣಕಟ್ಟಿ ಧರಣೀಯ ಶರಣ ಗಣಕಟ್ಟಿ ಬಯಲಾದಿ ಶರಣರ ನೆನೆವೆ ನಾನೆದ್ದು ಎಂದು ಆರಂಭವಾಗುವ ಈ ಗೀತೆಗಳು ಶರಣ ಕಲ್ಲಯ್ಯನವರ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.

ಶರಣರ ನೆನೆವೆ ನಾನೆದ್ದು ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ನಿತ್ಯ ಕಾಸುನು ಕಬ್ಬಿಣ ನಿತ್ಯ ಕಾಸುನು ಕಬ್ಬಿಣ ವಕ್ಕಲಿಗೆ ಬಿತ್ತು ಉತ್ತು ಕೆಲಸಗಾರೆಕೆ ಬಿತ್ತು ಉತ್ತೋ ಕೆಲಸಗಾರೇಕೆ ಸಣ್ಣ ಗುಡಿಸಲ ಮುಂದ ಮಣ್ಣಿನ ಒಲೆ ಹೂಡಿ ಸಣ್ಣ ಗುಡಿಸಲ ಮುಂದೆ ಮಣ್ಣಿನ ಒಲೆ ಹೂಡಿ ತಣ್ಣಗಾಳಿ ಊದೋ ಕುಲುಮೆಯ ತಣ್ಣಗಾಳಿ ಊದೋ ಕುಲುಮೆಯ ಇಟ್ಟಕೊಂಡು ಮಣ್ಣಿಗೆ ಬೆವರ ಸುರಿಸೋನು ಎಂದು ಅವರ ವೃತ್ತಿಯ ಬಗ್ಗೆ  ಹೇಳಿದ್ದಾರೆ.

ಮಣ್ಣಿಗೆ ಬೆವರ ಸುರಿಸೋನು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಎತ್ತು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಶುದ್ಧ ಕಾಯಕವ ಮಾಡುತ್ತ ಶುದ್ಧ ಕಾಯಕವ ಮಾಡುತ್ತ ಕಲ್ಲಯ್ಯ ಇದ್ದ ಅನುಭಾವ ಹೇಳ್ಯನ ಎಂಬ ಕಾಯಕ ತತ್ವ ನೆನಪಿಸುತ್ತದೆ.

ಇದ್ದ ಅನುಭಾವ ಹೇಳ್ಯಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಗುಣದಲ್ಲಿ ಗಣ್ಯ ಗುರುತನದ ಗುಣದಲ್ಲಿ ಗಣ್ಯ ಗುಣತನದ ಕಲ್ಲಯ್ಯ ಜನರಲ್ಲಿ ಬೆರೆತಾ ದಿನ ಜನನಲ್ಲಿ ಬೆಳೆತಾ ದಿನ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಬರಿಮೈಲಿ ಕುಳಿತು ಬಡಿವನು. ಎಂದು ಬಡತನವಿದ್ದರೂ ಜನರೊಂದಿಗೆ ಬೆರೆತು ಬೆಳೆದರು.


ಬರಿಮೈಲಿ ಕುಳಿತು ಬಡಿವನು ಕಬ್ಬಿಣ ಉಲಿಮೆಗೆ ಬೇಕಾದ ಕುಡುಮುಂಜಿ ಉಲುಮೆಗೆ ಬೇಕಾದ ಕುಡುಮುಂಜಿ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ತಾಳ ಹಾಕಿದಂಗ ತಿಳಿಯುದಿ ತಾಳ ಹಾಕಿದಂಗ ತಿಳಿಯುದಿ ಕಲ್ಲಯ್ಯ ಬಾಳ ಬೀಸಣಕಿ ಆಗ್ಯಾಳ ಬಾಳ ಬೀಸಣಕಿ ಎಂದು ಅವರ ಸತಿಯ ಬಗ್ಗೆ  ಮಾಹಿತಿ ನೀಡಿದ್ದಾರೆ.

ಆಗ್ಯಾಳ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಕೊಂಡ ಸುತ್ತಿಗೆ ಯ ಹಣಿವಾಳು ಕೊಂಡು ಸುತ್ತಿಗೆಯ ಹಣಿವಾಳು ಕಾಸಿದ್ದು ಗಂಡ ತೋರಿಸಿದಂಗ ಕೈಸನ್ನೆ ಗಂಡ ತೋರಿಸಿದಂಗ ಕೈಸನ್ನೆ ಸುತ್ತೂರು ಆಳುಗಳು
ಹೊತ್ತಂದ ದಿಂಡಿಗೆ ಸುತ್ತೂರು ಆಳುಗಳು ಹೊತ್ತಂದ ದಿಂಡಿಗೆ ಎತ್ತಿನ ಗಾಡಿಗಳಿಗೆಲ್ಲ ಎತ್ತಿನ ಗಾಡಿಗಳಿಗೆಲ್ಲ ಕಲ್ಲಯ್ಯ ಮುತ್ತಿನಂಗ ಬಳೆ ತುಳಿಸುವನು ಮುತಿನಂಗ ಬಳೆ ತೊಡಿಸುವನು ಎಂದು ಕಾವ್ಯಾತ್ಮಕವಾಗಿ ಕಲ್ಲಯ್ಯನ ಕೆಲಸಕ್ಕೆ ಅವರ ಸತಿ ಕೈಗೂಡಿಸಿದ  ಬಗ್ಗೆ  ವರ್ಣನೆ ಮಾಡಿರುವರು.

ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ನಾಯಕರ ಸುದ್ದಿ ಹೇಳುತ್ತ ನಾಯಕರ ಸುದ್ದಿ ಹೇಳುತ್ತ ಕಲ್ಲಯ್ಯ ಹಾಯಾಗಿದ್ದಾನ ಊರಲ್ಲಿ ಹಾಯಾಗಿದ್ದಾನ, ಊರಲ್ಲಿ ಮೂತಾಳ ಕೂರಿಗೆ ಪ್ರೀತಿಲೇ ಬಳೆತೊಳಿಸಿ ಮೂತಾಳ ಊರಿಗೆ ಪೀತಿಲೆ ಬಳೆತೊಳಿಸಿ ಭೂತಾಯಿ ಬೆಳೆಯ ಬೆಳೆಸೆಂದು ಭೂತಾಯಿ ಬೆಳೆಯ ಬೆಳೆಸೆಂದು ಒಕ್ಕಲಿಗೆ ತಾತಾಳ ಹಿಡಿದು ನಿಡಿಯುವನು ತಾತಾಳ ಹಿಡಿದು ನೀಡುವನು ಕಡೆತಾಳ ಆಯರಿಗೆ ಅಡತಾಳ ಅರಸಂಗೆ ಕಡೆತಾಳ ಆಯರಿಗೆ ಎಡತಾಳ ಅರಸಂಗೆ ನಡುತಾಳ ನಿನ್ನ ಕರ್ಮಕ್ಕೆ ನಡುತಾಳ ನಿನ್ನ ಕರ್ಮಕ್ಕೆ ಎಂದಹೇಳಿ ಕೊಡುವ ಕೂರಿಗೆ ಯವಕ್ಕಲಿಗೆ ಕೊಡುವ ಕೂರಿಗೆ ಯಾವ ಒಕ್ಕಲಿಗೆ ಮಮತೆಯ ಮಾತಿಂದ ನಿಜತೆಯ ನಿಲುವಿಂದ ಮಮತೆಯ ಮಾತಿಂದ ನಿಜತೆಯ ನೆಲುವಿಂದ ಘನತೆಯ ದುಡಿಮೆ ನಲಿವಿಂದ ಘನತೆಯ ದುಡಿಮೆ ನಲಿವಿಂದ ಕಲ್ಲಯ್ಯ.

ಕಲ್ಲಯ್ಯ ಕಾಯಕದ ಜೊತೆಯಲ್ಲಿ ಬಾಂಧವ್ಯ ಬೆಸೆಯುವ, ಊರಿಂದೂರಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿಯೂ ಕಾರ್ಯ ಮಾಡಿದ್ದರು ಎಂಬುದನ್ನು ಈ ಮುಂದಿನ ಪದ ತಿಳಿಸುತ್ತದೆ.

ಜನತೆಗೆ ಬೇಕಾದ ಶರಣಾದ ಜನತೆಗೆ ಬೇಕಾದ ಶರಣಾದ ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು
ಬಿತ್ತಿ ಬೆಳೆವವರ ಬಗೆಯನ್ನು ಬಿತ್ತಿ ಬೆಳೆಯವರ ಬಗೆಯನ್ನು ಕಲ್ಲಯ್ಯ ಎತ್ತಿ ಹೇಳುತಲಿ ಕಬ್ಬಿಣ ಎತ್ತು ಹೇಳುತವ ಕಬ್ಬಿಣ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆದ ಕಾಳಕಡ್ಡಿ ತರುವನು ಎಂಬ ಮಾತಲ್ಲಿ ಹಿಂದಿನ ಕಾಲದಲ್ಲಿ ರೈತನಿಗೆ ವ್ಯವಸಾಯಕ್ಕೆ  ಸಹಾಯ ಮಾಡುವ ಕುಲಸ್ತರಿಗೆ ಕಾಳು ಕಡಿ ನೀಡುವ ವ್ಯವಸ್ಥೆ ಕಾಣಬಹುದು.

ಬೆಳೆದ ಕಾಳಕಡ್ಡಿ ತರುವನು ಕಲ್ಲಯ್ಯ ಗುಳಿ ಮಾಡಿಡುವ ಸಂಸಾರಕೆ ಗುಳಿ ಮಾಡಿಡುವ ಸಂಸಾರಕೆ ತಂದೆಲ್ಲ ಕಾಳನ್ನು ತಂದೆಗೆಂದು ಬಗೆಯದೆ ತಂದೆಲ್ಲ ಕಾಳನ್ನು ತಂದೆಂದು ಬಗೆಯದೆ ನೊಂದ ಬಡವರಿಗೆ ಕೊಡುವನು ನೊಂದ ಬಡವರಿಗೆ ಕೊಡುವನು ಊರಲ್ಲಿ ಒಂದಾಗಿ ನಡೆದ ಎಡಬಡಕೆ ಒಂದಾಗಿ ನಡೆದ ಎಡೆಬಲಕೆ ಗುಮ್ಮ ಶಿವ ಶರಣಾಗಿ ಹುಮ್ಮದಿ ದುಡಿಯುತ್ತ ಗುಮ್ಮ ಶಿವ ಶರಣಾಗಿ ಹುಮ್ಮನದಿ ದುಡಿಯುತ್ತ ಕಮ್ಮೆಲರಾದ ಶಿವಪದಕೆ ಕಮ್ಮೆಲರಾದ ಶಿವಪದಕೆ ಕಲ್ಲಯ್ಯ ಕಮ್ಮಾರ ಕಟ್ಟೆ ಕಮ್ಮಟಕೆ ಕಮ್ಮಾರ ಕಟ್ಟೆ ಕಮ್ಮಟಕೆ ಕುಲುಮೆಟ್ಟಿಗೆ ಬರುವ ಬಲಹೀನ ಜನರಿಗೆ ಕುಲುಮೆಟ್ಟಿಗೆ ಮೆಟ್ಟಿಗೆ ಬರುವ ಬಲಹೀನ ಜನರಿಗೆ ನಲುಮೆಯ ಮಾತು ಹೇಳುತ್ತ ನಲುಮೆಯ ಮಾತು ಹೇಳುತ್ತ ಬಾಳಲ್ಲಿ ಬಲ್ಮೆ ತುಂಬುವ.
ನೋಡಿ ಕಲ್ಲಯ್ಯ ತಾನು ಪಡೆದ ದವಸದಲ್ಲಿ ಇತರರಿಗೂ ನೀಡಿ ಅನ್ಯೋನ್ಯವಾಗಿ ಬಾಳಿ ಶಿವಶರಣರ ತತ್ವಗಳನ್ನು ಎತ್ತಿ ಹಿಡಿದಿದ್ದರು.

ಬದುಕಿಗೆ ಬಲ್ಮೆ ತುಂಬುವ ಬದುಕಿಗೆ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ನಗುನಗುತಾ ದುಡಿದು ಊರಲ್ಲಿ ನಗುನಗುತಾ ದುಡಿದು ಊರಲ್ಲಿ ಬಯಲಾಗ ಹಗಲಿರಳು ಜನರ ನಡುವಲ್ಲಿ ಹಗಲಿರುಳು ಜನರ ನಡುವಲ್ಲಿ ಕಲ್ಯಾಣ ಬಸವಣ್ಣ ಕಾರುಣ್ಯ ಪಥವನು ಕಲ್ಯಾಣ ಬಸವನ ಕಾರುಣ್ಯ ಪಥವನು ದಾರಿ ಹೋಕರಿಂದ ತಿಳಿದಾನ ದಾರಿ ಹೋಕರಿಂದ ತಿಳಿದಾನ ಕಲ್ಲಯ್ಯ ಎಲ್ಲರಿಗೆ ತಿಳಿಸಿ ನಲಿದಾನ ಎಲ್ಲರಿಗೆ ತಿಳಿಸಿ ನಲಿದಾನ ಬಸವನ ಕಾಣುವ ವ್ಯಸನದಲಿ ಕಲ್ಲ ಬಸವನ ಕಾಣುವ ವ್ಯಸನದಲಿಕಲ್ಲ ತುಸುಹೊತ್ತು ಚಿಂತೆ ಮಾಡ್ಯಾನ ತುಸುಹೊತ್ತಿ ಚಿಂತೆ ಮಾಡಯಾನ.ಎಂಬ ಮಾತಲ್ಲಿ ಕಲ್ಲಯ್ಯ ಬಸವೇಶ್ವರರ ಬಗ್ಗೆ ಮಾಹಿತಿಯನ್ನು ತಿಳಿದು ಅವರನ್ನು ಕಾಣಲು ಹಂಬಲಿಸಿದ ಮಾಹಿತಿ ತಿಳಿಯುತ್ತದೆ.

ಸೊನ್ನಲಿಗೆಯ ಸಿದ್ದರಾಮ ರ ಭೇಟಿಯಾದ ಬಗೆಯನ್ನು ‌ಮುಂದಿನ ಪದ ನೀಡುತ್ತದೆ.

ಜನರಲ್ಲಿ ಹೊಸಮತ ಸುದ್ದಿ ತಿಳಿಸಯಾನ ಹೊಸಮತದ ಸುದ್ದಿ ತಿಳಿಸಯಾನ ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ವರತೆಯ ನೀರುಬ ಬತ್ತಿತ್ತು ವರತೆಯ ನೀರು ಬತ್ತಿತ್ತು ಜನರೆಲ್ಲ ಸರತಿಯಲಿ ಗುಳಿವು ಹೊರಟಿತ್ತು ಜನರೆಲ್ಲ ಸರತಿಯಲಿ ಗುಳೆವು ಹೊರಟಿತ್ತು ಎಲ್ಲಿಗೆ ಹೋಗುವುದೆಂದು ಬಲ್ಲವರ ಒಳಗೂಡಿ ಎಲ್ಲಿ ಹೋಗುವುದೆಂದು ಬಲ್ಲವರ ಒಡೆಗೂಡಿ ಕಲ್ಲಯ್ಯ ಚಿಂತೆ ಮಾಡ್ಯಾನ ಕಲ್ಲಯ್ಯ ಚಿಂತೆ ಮಾಡ್ಯಾನ ಗುಡಿ ಮುಂದ ಸೊನ್ನಲಿಗೆ ಸ್ವಾಮಿ ಬಂದಾನ ಸೊನ್ನಲಗಿ ಸ್ವಾಮಿ ಬಂದಾನ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಬಂದ ಜಳೆಬಿಟ್ಟು ಸನ್ಯಾಸಿ ಬಂದ ಜಳೆಬಿಟ್ಟ ಸನ್ಯಾಸಿ ಜನರಿಗೆ ಅಂದು ಶರಣೆಂದು ನಿಂತಾನ. ಅಂದು ಶರಣೆಂದು ನಿಂತಾನ ಕಲ್ಯಾಣ ಬಸವನ ಮಹಿಮೆಯ ಹೇಳುತ್ತ ಕಲ್ಯಾಣ ಬಸವ ನ ಮಹಿಮೆಯ ಹೇಳುತ್ತ ಎಲ್ಲವನು ತಿಳಿಸಿ ನಿಂತಾನ ಎಲ್ಲವನು ತಿಳಿಸಿ ನಿಂತಾನ ಸೊನ್ನಲಗಿ ಶಿವಸಿದ್ದರಾಮನ ಕಾರ್ಯವ ಶಿವಸಿದ್ದರಾಮನ ಕಾರ್ಯವ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಬರದಲ್ಲು ಕೆಲಸ ಕೊಟ್ಟಾನ ಬರದಲ್ಲು ಕೆಲಸ ಕೊಟ್ಟಾನ ದುಡಿವ ವರಿಗೆ ಚರದೇವ ಎನಿಸಿಕೊಂಡಾನ ಚರದೇವ ಎನಿಸಿಕೊಂಡಾನ ಒಡ್ಡರ ಪಡೆಯುಂಟು ಗುಡ್ಡಾರ ಗುಂಪುಂಟು ಒಡ್ಡಾರ ಪಡೆಯುಂಟು ಗುಡ್ಡಾರ ಗುಂಪುಂಟು ಪಡ್ಡೆ ಜನರು ಸೇರಿ ನಿಂತಾರ ಪಡ್ಡೆ ಜನ ಸೇರಿ ನಿಂತಾರ ಸಿದ್ದೇಶ ಮಡ್ಡಿ ಹೊಲದಲ್ಲಿ ಮಡಿಹೂಡಿ ಮಡ್ಡಿ ಹೊಲದಲ್ಲಿ ಮನೆಹೂಡಿ ಕಾಯಕಜೀವಿ ವಿಗೆ ನಾಯಕ ಸಿದ್ದೇಶ.
ಕಾಯಕ ಜೀವಿಗೆ ನಾಯಕ ಸಿದ್ದೇಶ ಸಾಯಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಕೆರೆಕಟ್ಟಿ ಪಾಯ ಹಾಕ್ಯಾನೆಂದು ಸನ್ಯಾಸಿ ಪಾಯ ಹಾಕ್ಯಾನೆಂದ ಸನ್ಯಾಸಿ ಕನ್ನಡದ ಕಲ್ಯಾಣದ ಮಹಿಮೆಯ ಕೇಳಿದ ಕಲ್ಲಯ್ಯ ಕಲ್ಯಾಣದ ಮಹಿಮೆಯ ಕೇಳಿದ್ದ ಕಲ್ಲಯ್ಯ ಎಲ್ಲ ಮಾಹಿತಿಯ ತಿಳಿದಾನ ಎಲ್ಲ ಮಾಹಿತಿಯ ತಿಳಿದಾನ ಸಮಯದಿ ಬಲ್ಲ ಸನ್ಯಸಿಯ ನುಡಿಯಲ್ಲಿ ಬಲ್ಲ ಸನ್ಯಾಸಿಯ ನುಡಿಯಲ್ಲಿ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಮರವೊಂದು ಕಂಡಂತೆ ಬಿಸಿಲಲ್ಲಿ ಮರವೊಂದು ಕಂಡಂತೆ ಬಿಸಿಲಲ್ಲಿ ಕಲ್ಲಯ್ಯ ಹೊರಟ ಸೊನ್ನಲಿಗೆ ಕಡೆಗಾನ ಹೊರಟ ಸೊನ್ನಲಿಗೆ ಕಡೆಗಾಗ ಕಾಳಿಕಾಂಬೆಯ ಭಕ್ತ ಕಾಳವೆ ಜೊತೆಯಲ್ಲಿ ಬಾಳ ಕಟ್ಟಲು ನಡೆದ ಗೊಂಟೋತು ಬಾಳ ಕಟ್ಟಲು ನಡೆದ ಗಂಟೋತು ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸೊನ್ನಲಗಿ ಊರಲ್ಲಿ ಮನೆಯ ಸಿದ್ದರಾಮ ಕನ್ನಲಿಗೆ ಊರಲ್ಲಿ ಮನೆಯ ಸಿದ್ದರಾಮ ಹೊನ್ನ ಕಳಸಿಟ್ಟು ಗುಡಿಕಟ್ಟಿ ಹೊನ್ನ ಕಳಸಿಟ್ಟು ಗುಡುಕಟ್ಟಿ ಕೆರೆಕಟ್ಟಿದ್ದ ಧನ್ಯ ಶಿವ ತಾನಾಗಿ ಮೆರೆದ ಇದ್ದ ಧನ್ಯಶಿವನಾಗಿ ಮೆರೆದಿದ್ದ ಊರ ಹಳ್ಳದ ಮುಂದೆ ನೂರಾರು ಒಡ್ಡರು ಊರ ಹಳ್ಳದ ಮುಂದೆ ನೂರಾರು ಒಡ್ಡರು ಹಾರೆಗುದಲೆ ಹಿಡಿದು ದುಡಿಯೋದು ಹಾರೆಗುದಲೆ ಹಿಡಿದು ದುಡಿಯೋದು ಕಂಡಾನ ದೂರದಲಿ ಬರುತಾ ಕಲ್ಲಯ್ಯ ದೂರದಲಿ ಬರುತಾ ಕಲ್ಲಯ್ಯ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕರೆ ಮುಗಿದು ನಿಂತ ಸಿದ್ದೇಶ ಕರೆ ಮುಗಿದು ನಿಂತ ಸಿದ್ದೇಶ ಶರಣನ ಹರನಂತೆ ಕಂಡು ಕೈಮುಗಿದ ಹರನಂತೆ ಕಂಡು ಕೈಮುಗಿದ ದರ್ಶನಕ್ಕೆ ಬಂಧನವ ಹರುಷದಿ ಮಾತಾಡಿ ದರ್ಶನಕ್ಕೆ ಬಂಧನವ ಹರುಷದಿ ಮಾತನಾಡಿಸಿ ಗುರುತು ಪರಿಚಯ ಕೇಳಿದನ ಗುರುತು ಪರಿಚಯ ಕೇಳಿದನ ಸಿದ್ದರಾಮ ವರ್ಷವೆಲ್ಲ ದಾರಿ ಕಾಯ್ದಂತೆ ವರ್ಷವೆಲ್ಲ ದಾರಿ ಕಾದಂತೆ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ಮೌನಾಗಿ ಎಲ್ಲ ತಿಳಿದಾನ ಮೌನಾಗಿ ಎಲ್ಲ ತಿಳಿದಾನ ಸಿದ್ದೇಶ ತಾಣ ತೋರ್ಯಾನ ಕೆಲಸಕ್ಕ ತಾಣ ತೋರ್ಯಾನ ಕೆಲಸಕ್ಕ ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ಊಟೋಪಚಾರ ಮಾಡಿಸಿ ಊಟೋಪಚಾರ ಮಾಡಿಸಿ ಕಲ್ಲೆಗೆ ಕೂಟಸ್ಥ ಕೆಲಸ ಒಪ್ಪಿಸಿದ ಕೂಟಸ್ತ ಕೆಲಸ ಒಪ್ಪಿಸಿದ ಬೊಮ್ಮಯ್ಯ ಗಣದಲ್ಲಿ ಸಿಮ್ಮಲಿಗೆ ಶರಣರು ಬೊಮ್ಮಯ್ಯನ ಗಣದಲ್ಲಿ ಸಿಮ್ಮಲಿಗೆ ಶರಣರು ಕಮ್ಮಾರ ಕಲ್ಲಯ್ಯ ಸೇರ್ಯಾರ.

ಕಲ್ಲಯ್ಯ ನಾಡ ಶಿಲ್ಪಿಯಾಗಿ ಬೆಳೆದ ಪರಿಯನ್ನ ಜನಪದರು ಹೀಗೆ ಹಾಡಿದ್ದಾರೆ.
ಕಮ್ಮಾರ ಕಲ್ಲಯ್ಯ ಸೇರ್ಯಾರ ದಿನನಿತ್ಯ ಹಮ್ಮಿಲೆ ಕೆಲಸ ಮಾಡ್ಯಾರ ಹಮ್ಮಿಲೆ ಕೆಲಸ ಮಾಡ್ಯಾರ ಶಿಲ್ಪತನ ವಿದ್ಯೆಯ ಸಂಗಡ ಬಂದಿತ್ತು ಶಿಲ್ಪತನವಿ ವಿದ್ಯೆಯು ಸಂಗಡ ಬಂದಿತು ಕಲ್ಪಿತಾಯುತವ ರಚಿಸುತ ಕಲ್ಪಿತಾಯುಧವ ರಚಿಸುತ ಕಲ್ಲಯ್ಯ ಶಿಲ್ಪಿ ಸಿದ್ದೇಶನ ಮನಗೆದ್ದ ಶಿಲ್ಪಿ ಸಿದ್ದೇಶನ ಮನಗೆದ್ದ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ವರಸಿಸಿದ್ದರಾಮಗೆ ಜೊತೆಯಾದ ವರ ಸಿದ್ದರಾಮಗೆ ಜೊತೆಯಾದ ಕಲ್ಲಯ್ಯ ಬರದಿಂದ ಕೆಲಸ ಮಾಡಿದ.

ಬರದಿಂದ ಕೆಲಸ ಮಾಡಿದ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಎದ್ದು ಕಂಡ ಶರಣ ಕಲ್ಲಯ್ಯ ಎದ್ದು ಕಂಡ ಶರಣ ಕಲ್ಲಯ್ಯ ದಿನನಿತ್ಯ ಶುದ್ಧ ಕಾಯಕ ಹೆಸರಾದ ಶುದ್ಧ ಕಾಯಕ ಹೆಸರಾದ ಕುಲವರತಿಯಲಿಕಲ್ಲ ಛಲದಂಕ ಮಲ್ಲ ಕುಲವರತಿಯಲಿಕಲ್ಲ ಚಲದಂಕ ಮಲ್ಲನು ಒಲವಿಂದ ದುಡಿದ ಹಗಲಿರುಳು.
ಒಲವಿಂದ ದುಡಿದ ಹಗಲಿರುಳು ಸಿದ್ದೇಶನ ಬಲಗಯ್ಯ ಭಂಟ ತಾನಾದ ಬಲಗಯ್ಯ ಭಂಟ ತಾನಾದ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ನಾಡ ಶಿಲ್ಪಿ ಎಂದು ಹೆಸರಾದ.

ನಾಡ ಶಿಲ್ಪಿ ಎಂದು ಹೆಸರಾದ ಕಲ್ಲಯ್ಯ ನೋಡಿ ಹೊಗಳಿದ ಸಿದ್ದೇಶ ನೋಡಿ ಹೊಗಳಿದ ಸಿದ್ದೇಶ ದೇವರಥ ಶಿಲ್ಪದಲಿ ಜೀವನದ ಕೀಲಿಟ್ಟು ದೇವರಥ ಶಿಲ್ಪದಲಿ ಜೀವನ ಕೀಲಿಟ್ಟು ಕಾವಲಾಗಿ ನಿಂತ ಜಾತ್ರೆಯಲಿ ಕಾವಲಾಗಿ ನಿಂತ ಜಾತ್ರೆಯಲಿ ಕಲ್ಲಯ್ಯ ಸೇವೆ ಮಾಡಿದ ಜನ ಮೆಚ್ಚುವಂತೆ ಸೇವೆ ಮಾಡಿದ ಜನ ಮೆಚ್ಚುವಂತೆ ಕಲ್ಲಯ್ಯ ಮುಂದಾಗಿ ಬುಲ್ಲೇಶ ಹಿಂದಾಗಿ ಕಲ್ಲಯ್ಯ ಮುಂದಾಗಿ ಬಿಲ್ಲೇಶ ಹಿಂದಾಗಿ ಪಲ್ಲಕ್ಕಿ ಹೊತ್ತು ನಡೆದಾರ ಪಲ್ಲಕ್ಕಿ ಹೊಡೆತು ನಡೆದಾರ ಮಡಿಹಾಸಿ ಎಲ್ಲಾ ಜನ ನಿಂತು ನಮಿಶಾರ ಎಲ್ಲಾ ಜನ ನಿಂತು ನಮಿಶಾರ ಜಯಜ ಜಯ ಎನ್ನುತ್ತ ಜೈಕಾರ ಹಾಕ್ಯಾರ ಜಯ ಜಯ ಎನ್ನುತ್ತ ಜೈಕಾರ ಹಾಕೆರ ಜಯ ಮಲ್ಲಿನಾಥ ಎನುತೆಲ್ಲ ಜಯ ಮಲ್ಲಿನಾಥ ಎನುತೆಲ್ಲ ಜನಸೇರಿ ಜಯಸಿದ್ದೇಶ್ವರ ಎಂದಾರ ಜಯಸಿದ್ದೇಶ್ವರ ಎಂದಾರ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಸಾಲಾಗಿ ಕುಂತ ಜನಕೆಲ್ಲ ಸಾಲಾಗಿ ಕುಂತ ಜನಕೆಲ್ಲ ಉಣಶಾರ.
ಮ್ಯಾಲೆ ಹುಳಿಬಾನ ನೀಡುತ್ತ ಮ್ಯಾಲೆ ಹುಳಿಬಾನ ನೀಡುತ್ತ.

ಶ್ರಿಶೈಲಕ್ಕೆ ಪಾದಯಾತ್ರೆ ಹೊರಟ ಕಲ್ಲಯ್ಯನ ಸಂಭ್ರಮವನ್ನು ಈ ಮುಂದಿನಂತೆ ವರ್ಣಿಸಲಾಗಿದೆ.
ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಹೊರಳಿತು ಹೊತ್ತು ಚಿಗುರೆಡೆಗೆ ಹೊರಳಿತು ಹೊತ್ತು ಚಿಗುರೆಡೆಗೆ ಶ್ರೀಶೈಲಗೆ ತೆರಳಲು ನಿಂತಾರ ಭಕ್ತರು ಶ್ರೀಶೈಲೆಗೆ ತೆರಳ ಲು ನಿಂತಾರ ಭಕ್ತರು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ಕಂಬಿ ಜೊತೆ ಹೊರಟ ಕಲ್ಲಯ್ಯ ಕಂಬಿಜ ಕಂಬಿ ಜೊತೆ ಹೊರಟ ಕಲ್ಲಯ್ಯ ದೊಂದುಬೆ ಹೊರಟಂಗ ಹೂಕಡೆಗೆ ದುಂಬಿ ಹೊರಟಂಗ ಹೂಕಡೆಗೆ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಬರುತೀವಿ ನಿನ್ನ ದರ್ಶನಕ ಬರುತೀವಿ ನಿನ್ನ ದರ್ಶನಕ ಎನ್ನುತ ಬೆರೆತೋದ ಕಲ್ಲಯ್ಯ ಭಕ್ತರನು ಬೆರೆತೋದ ಕಲ್ಲಯ್ಯ ಭಕ್ತರನು ನಿತ್ಯ ದಾರಿ ನಡೆದು ಹೊತ್ತು ಹೋದಲ್ಲಿ ಉಳಿದು ನಿತ್ಯ ದಾರಿಯ ನಡೆದು ಹೊತ್ತು ಹೋದಲ್ಲಿಉಳಿದು ಸತ್ಯಶಿವ ನೆನೆದು ಸಾಗ್ಯಾರ ಸತ್ಯಶಿವ ನೆನೆದು ಸಾಗ್ಯಾರ ದಾರಿಯಲ್ಲಿ ಸುತ್ತ ಸುತ್ತಹುಬಳ್ಳಿ ಕಾಣುತ್ತ.

ಸುತ್ತ ಹೂಬಳ್ಳಿ ಕಾಣುತ್ತ ಎತ್ತೆತ್ತ ನೋಡಿದರ ಎತ್ತರದ ಕರಿಗುಡ್ಡ ಎತ್ತೆತ್ತ ನೋಡಿದರ ಎತ್ತರದ ಕಡಿಗುಡ್ಡ ಮುತ್ತಕೊಂಡವಲ್ಲಿ ಪಶುಭಕ್ತಿ ಮುತ್ತಿಕೊಂಡವಲ್ಲಿ ಪಶುಭಕ್ತಿ ಅಲ್ಲಲ್ಲಿ ಒತ್ತಿ ಹರಿತಾವ ತಿಳಿನೀರ ಒತ್ತಿ ಹರಿತಾವ ತಿಳಿನಾರ ಶಿವಭಕ್ತ ಮಲ್ಲಯ್ಯಶಿವ ಶಿವಶಿವ ಎನ್ನುತ್ತ ಶಿವಭಕ್ತ ಶಿವಭಕ್ತ ಕಲ್ಲಯ್ಯ.
ಶಿವ ಶಿವ ಎನ್ನುತ್ತ ಮಲ್ಲಯ್ಯನಗಂಗ್ಯಾಲ ವೈದಾನ ಮಲ್ಲಗ್ಯಾಲ ವೈದಾನ ಮಲೈ ಮಲ್ಲಯ್ಯಗ್ಯಾಲ ವೈದಾನ ಶ್ರೀಶೈಲಕೆ ಬಲ್ಲ ಶರಣಾಗಿ ನಿಂತಾನ ಬಲ್ಲ ಶರಣಾಗಿ ನಿಂತಾನ ಜೋಡಾದ ಐಗಳು ತೋಡಿ ಹೇಳುತಿಹರು ಜೋಡಾದ ಐಗಳು  ತೋಡಿ ಹೇಳುತಿಹರು ರೂಢಯ ಮಾತು ಆಡುತ್ತ ರೂಢಯ ಮಾತು ಆಡುತ್ತ ದಾರಿಯಲಿ ಹಾಡಶಾರ ಕಲ್ಲನ ಕರೆ ಕರೆದು ಹಾಡಶಾರ ಕಲ್ಲನ ಕರೆ ಕರೆದು ಸುತ್ತ ಮಹಾಗಡ್ಡ ಎತ್ತರದ ಗಿಡಮರ ಸುತ್ತ ಮಹಾಗುಡ್ಡ ಎತ್ತರದ ಗಿಡಮರ ಚಿತ್ತ ಬಂದೆಳೆಗೆ ಹಾರುವ ಚಿತ್ತ ಬಂದೆಳೆಗೆ ಹಾರುವ ಗಣ ಉತ್ತುಂಗ ತಾಣ ಶಿವಸದನ ಉತ್ತುಂಗ ತಾಣ ಶಿವಸದನ.
ಶ್ರೀಶೈಲದ ದೇಗುಲ ಕಂಡ ಕಲ್ಲಯ್ಯ ಅಚ್ಚರಿಗೊಂಡ ಪರಿಯನ್ನು ಈ ಮುಂದೆ ಬಣ್ಣಿಸಿದ್ದಾರೆ.

ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಸುಂದರಲಿಂಗ ಕಂಡಾನ ಸುಂದರಲಿಂಗ ಕಂಡಾನ ಗುಡ್ಡದಲಿ ತಂದೆ ಮಲ್ಲಯ್ಯನೆಂದು ನಮಿಶಾನ ತಂದೆ ಮಲ್ಲಯ್ಯನೆಂದು ನಮಿಶಾನ ಬೇಡುವಜನ ಜನವಿತ್ತು ಹಾಡುವರ ಗುಂಪಿತ್ತು ಬೇಡುವ ಜನವಿತ್ತು ಹಾಡುವರ ಗುಂಪಿತ್ತು ನೋಡಿ ನಲಿವವರ ಬಳಗೆ ಇತ್ತು ನೋಡಿ ನಲಿವವರ ಬಳಗಿತ್ತು ಗುಡಿಯಲ್ಲಿ ಓಡಾಡುತ ಕಂಡ ಕಲ್ಲಯ್ಯ ಓಡಾಡುತ ಕಂಡ ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಹಾಡ ಕೇಳಿ ಮೆಚ್ಚಿದ ಸಿದ್ದೇಶ ಹಾಡು ಕೇಳಿ ಮೆಚ್ಚಿದ ಸಿದ್ದೇಶನ ಗುಡಿಯಲ್ಲಿ ಮೂಡಿಗೊಳಗಾಗಿತ್ತು ಜನ ಮೂಡಿಗೊಳಗಾಗಿತ್ತು ಜನ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕೂಡಿಸಿದ್ದಾನ ಜೊತೆ ಉಳಿದಾನ ಕೂಡಿಸಿದ್ದಾನ ಜೊತೆ ಉಳಿದಾನ ಗಿರಿಯಲ್ಲಿ ನೋಡ ನೋಡಿ ದಿನ ಕಳಿದ ನ ನೋಡ ನೋಡಿ ದಿನ ಕಳೆದಾನ ಹೊಳ್ಳಿ ಬಂದರಿಗೆ ಒಳ್ಳೆ ಕಾರ್ಯವ ಮಾಡಿ ಹೊಳ್ಳಿ ಬಂದೂರಿಗೆ ಒಳ್ಳೆ ಕಾರ್ಯವ ಮಾಡಿ ಹಳ್ಳಿಯಲಿ ಬೆಳೆಸಾನ ಭಕ್ತಿಯ ಎಂಬುದಾಗಿ ಕಲ್ಲಯ್ಯ ಹಳ್ಳಿಯಲ್ಲಿ ಭಕ್ತಿ ಚಳುವಳಿಯ ಆರಂಭಮಾಡಿದ ಬಗೆಯ ಹೇಳಿರುವರು.


ಹಳ್ಳಿಯಲಿ ಬೆಳೆಸಾನ ಭಕ್ತಿಯ ಪ್ರೀತಿಯಲಿ ತಳ್ಳಿ ಹಾಕಿ ಜಾತಿ ಭೇದವನು ತಳ್ಳಿಹಾಕಿ ಜಾತಿ ಭೇದವನು ಬಂದವರ ಬಾಯನುತ ನಿಂದವರ ಕೂಡೆನುತ ಬಂದವರ ಬಾಯನುತ ನಿಂದವರ ಕೂಡೆನುತ ನೊಂದವರ ಕಷ್ಟಕ್ಕೆ ಆಗ್ಯಾನ ನೊಂದವರ ಕಷ್ಟಕ್ಕೆ ಆಗ್ಯಾನ ಕಲ್ಲಯ್ಯ ಹೊಂದಿಸಿ ಭಕ್ತಿ ಊರಲ್ಲಿ ಹೊಂದಿಸಿ ಭಕ್ತಿ ಊರಲ್ಲಿ ಭಕ್ತಿಯಲ್ಲಿ ದಾಸೋಹ ಯುಕ್ತಿಯಲಿ ಕಾಯಕ ಭಕ್ತಿಯಲಿ ದಾಸೋಹ ಯುಕ್ತಿಯಲಿ ಕಾಯೋಕ ವಿರಕ್ತಿಯಲಿ ಪಥವ ಹಿಡಿದಾನ ವಿರಕ್ತಿಯ ಪತವ ಹಿಡಿದಾನ ಸೇವೆಯಲ್ಲಿ ಮುಕ್ತಿ ತೋರೋ ಶರಣ ಎನಿ ಶ್ಯಾನ ಮುಕ್ತಿ ತೋರೋ ಶರಣ ಎನಿ ಶ್ಯಾನ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಶುದ್ಧ ಶಿಷ್ಯನಾಗಿ ನಿಂತಾನ ಶುದ್ಧ ಶಿಷನಾಗಿ ನಿಂತಾನ ಕಲ್ಯಾಣದ ಶಿವ ಬೆಳಕ ಹಂಚಿ ಬಾಳಯಾನ ಶಿವ ಬೆಳಕ ಹಂಚಿ ಬಾಳ ನ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ಚಿತ್ತದಲಿ ಶಿವನ ನೆನೆಯುತ್ತ ಚಿತ್ತದಲಿ ಶಿವನ ನೆನೆಯುತ್ತ ಕಲ್ಲಯ್ಯ ಬಿತ್ತಿ ಶರಣರ ನೂಡಿ ಬಯಲಾದ ಬಿತ್ತಿ ಶರಣರ ನುಡಿ ಬಯಲಾದ ಬಿತ್ತಿ ಶರಣು ನುಡಿ ಬಯಲಾದ ಎಂದು ಮುಕ್ತಾಯ ವಾಗುವ ಜನಪದ ಗೀತೆಯು ಶರಣ ಕಲ್ಲಯ್ಯನವರ ಜೀವನ ದರ್ಶನ ಮಾಡುತ್ತದೆ.
ಇಂತಹ ಎಲೆಮರೆಯ ನೂರಾರು ಶರಣರು ನಮ್ಮ ನಾಡಿನಲ್ಲಿ  ಕಾಯಕ ಮಾಡುತ್ತಾ  ಭಕ್ತಿಯ ರಸಧಾರೆ ಹರಿಸಿರುವರು ಅವರ ಬಗ್ಗೆ ನಮ್ಮ ಜನಪದರು ಹಾಡಿರುವ ಹಾಡುಗಳನ್ನು ಗುರ್ತಿಸಿ ಸಂಶೋಧನೆ ಮಾಡಿ.ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ