23 ಡಿಸೆಂಬರ್ 2017

ಅನ್ನದಾತಗೆ ನಮಿಸೋಣ (ರೈತ ದಿನಾಚರಣೆಯ ಪ್ರಯುಕ್ತ ಕವನ)

*ಅನ್ನದಾತಗೆ ನಮಿಸೋಣ*

ಇವನೆ ನೋಡು ನಮ್ಮ ರೈತ ಅನ್ನ ನೀಡ್ವನು
ಬಿಸಿಲು ಮಳೆ ಲೆಕ್ಕಿಸದೆ ಹೊಲದಿ ದುಡಿವನು
ಹಿಗ್ಗದೇ ಜಗ್ಗದೇ ಮುಂದೆ ನುಗ್ಗಿ   ನಡೆವನು
ಯೋಗಿಯಾಗಿ ತ್ಯಾಗಿಯಾಗಿ ಬಾಳುತಿರುವನು

ಅವನ ಬೆಳೆಗೆ ಬೆಲೆಯು ಇಲ್ಲ ಸಾಲದಲಿರುವನು
ಮಧ್ಯವರ್ತಿ ಶೋಷಣೆ ಯಲಿ ನಲುಗುತಿರುವನು
ಅಂತರ್ಜಲ ಕಡಿಮೆಯಾಗಿ‌ ಕೊರಗುತಿರುವನು
ಎಲ್ಲರ ಸೇವೆಗೈದು ನರಳಿ  ಬಳಲುತಿರುವನು

ಒಳ್ಳೆಯ ಬೆಲೆ ಅವನ  ಬೆಳೆಗೆ ನಾವು ನೀಡೋಣ
ಗೌರವದಿ  ನಮಿಸಿ ಜೈ ಕಿಸಾನ್ ಎಂದು ಹೇಳೊಣ
ಕೃಷಿಯ ದೇಶದ ಬೆನ್ನೆಲುಬೆಂದು ಸಾರೋಣ
ನಮ್ಮ ರೈತ ನಮ್ಮ ಗೆಳೆಯ ಇವಗೆ ನಮಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ