22 ಡಿಸೆಂಬರ್ 2017

ಗಜ಼ಲ್ ೧೮ (ಯಾರಿಗೇಳಲಿ? ವಿಜಯಪುರ ಬಾಲಕಿ ಮೇಲಿನ ದೌರ್ಜನ್ಯ ದಿಂದ ಮನನೊಂದು ಬರೆದ ಗಜ಼ಲ್)

*ಗಜ಼ಲ್ ೧೮*

ದೇವಿ ನೆಲೆಸಿದ ನಾಡಲಿ ದಾನವರು ಮೆರೆಯುತಿರೆ ಯಾರಿಗೇಳಲಿ?
ದುಷ್ಟಶಕ್ತಿಗಳು ಅಟ್ಟಹಾಸದಿ ಪಟ್ಟವೇರುತಿರೆ  ಯಾರಿಗೇಳಲಿ?

ಆದಿಶಕ್ತಿ ಕ್ಷಮಯಾಧರಿತ್ರಿಯೆಂದು ಪೂಜಿಸುವರು
ನಿರ್ಧಯದಿ ಕಟುಕರಂತೆ ಎರಗಿ ಕೊಲ್ಲುತಿರೆ  ಯಾರಿಗೇಳಲಿ?

ಕಾನೂನು ಕಟ್ಟಳೆಗಳ ನ್ಯಾಯದ ಬಲ ನಾರಿಗಿರುವುದು
ನರಿಬುದ್ದಿಯ ನರರು ಅನಾಚಾರಗಳೆಸಗುತಿರೆ ಯಾರಿಗೇಳಲಿ?

ರಾಮ ಕೃಷ್ಣ, ಬಸವ ಬುಧ್ಧರ ಕಂಡ  ನಾಡು ನಮ್ಮದು
ಕೀಚಕ ಕಂಸರದಂಡು ಅಟ್ಟಹಾಸ ಮೆರೆಯುತಿರೆ ಯಾರಿಗೇಳಲಿ?

ಸೀಜೀವಿಯ ಮನ ನಾರಿಯ ಪೂಜಿಸು ಎಂದಿತು
ಕಡುಪಾಪಿಗಳು ದುಷ್ಟಕಾರ್ಯದಿ ಮುಳುಗಿರೆ ಯಾರಿಗೇಳಲಿ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ