21 ಡಿಸೆಂಬರ್ 2017

ಗಜ಼ಲ್ ೧೭ (ಏಕೆ?)

*ಗಜ಼ಲ್೧೭*

ಅವಿನಾಭಾವ ಸಂಬಂಧದಿ ಬಳಿಸಾರಿದೆ ಏಕೆ ?
ಕರುಳುಹಿಂಡಿ ನಿರ್ಧಯದಿ ನನ್ನ ತೊರೆದೆ ಏಕೆ?


ಸಂಗೀತ ಸರಸ್ವತಿಯಾಗಿ ನನ್ನ ಬಾಳಲ್ಲಿ ಬಂದೆ
ಅಪಸ್ವರಗಳ ನುಡಿಸಿ ಗದ್ದಲವೆಬ್ಬಿಸಿದೆ ಏಕೆ?

ನಟರಾಜನ ತಕಿಟ ತದಿಮಿ ತಾಳದಿ ನರ್ತಿಸಿದೆ
ಎದೆಯ ಮೇಲೆ ದೊಂಬರಾಟವಾಡಿದೆ ಏಕೆ?

ತಂಗಾಳಿಯಂತೆ ನನ್ನ ಬಾಳಲಿ ಬಂದು ಮುದಗೊಳಿಸಿದೆ
ಬಿರುಗಾಳಿಯೆಬ್ಬಿಸಿ ಎದೆಗೆ ಬೆಂಕಿ ಹಚ್ಚಿದೆ ಏಕೆ?

ಸೀಜೀವಿಯ ಬದುಕಲಿ ಮಕರಂದ ತಂದಿಟ್ಟೆ ನೀನು
ಸವಿಯುವ ಮುನ್ನ ಮಣ್ಣು ಪಾಲು ಮಾಡಿದೆ ಏಕೆ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ