13 ಡಿಸೆಂಬರ್ 2017

*ದೇವರು ನನ್ನ ಅನಿಸಿಕೆ*(ಲೇಖನ)

*ದೇವರು ನನ್ನ ಅನಿಸಿಕೆ*

ಪ್ರಪಂಚದ ಎಲ್ಲಾ ಕಾರ್ಯಗಳು ಒಂದು ಅಗೋಚರ ಶಕ್ತಿ ಯ ನಿಯಮಕ್ಕೆ ಮತ್ತು ನಿಯಂತ್ರಣ ಕ್ಕೆ ಒಳಪಟ್ಟಿರುವುದು ಸುಳ್ಳಲ್ಲ ಈ ವಿಶೇಷವಾದ ಶಕ್ತಿಯನ್ನು ಕೆಲವರು ಕೆಲವೊಂದು ಹೆಸರಿನಲ್ಲಿ ಕರೆದುಕೊಂಡಿದ್ದರೆ ಬಹುತೇಕರು ಹೇಳುವ ಹೆಸರೆ *ದೇವರು*
ದೇವರನ್ನು ವಿವಿಧ ಧರ್ಮದ ಆಧಾರದ ಮೇಲೆ ವಿವಿಧ ಹೆಸರುಗಳಿಂದ ಕರೆದರೂ ನಮ್ಮ ಅನುಕೂಲಕ್ಕೆ ಸಂಭೋದಿಸಿದರೂ ದೇವನೊಬ್ಬ ನಾಮ ಹಲವು ಎಂಬುದು ಸರ್ವವೇದ್ಯ
"ರಘುಪತಿ ರಾಘವ ರಾಜಾರಾಂ ,ಪತಿತಪಾವನ ಸೀತಾರಾಂ, ಈಶ್ವರ ಅಲ್ಲಾ, ತೇರೆ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" ಎಂದು ಗಾಂಧೀಜಿಯವರು ದೇವರ ವಿವಿದ ನಾಮಾವಳಿ ಬೇರೆ ಇದ್ದರೂ ಪರಮಾತ್ಮ ಒಬ್ಬನೇ ಎಂದು ಪ್ರತಿಪಾದಿಸಿದರು. ದೇವರು ಕೇವಲ ಮಂದಿರ ಮಸೀದಿಗಳಲ್ಲಿ ಇಲ್ಲ ಬದಲಾಗಿ ನಾವು ಮಾಡುವ ಕಾರ್ಯ ದಲ್ಲಿ ದೇವರಿದ್ದಾನೆ "ದಿನಗಟ್ಟಲೆ ಮಂತ್ರ ಹೇಳುವ ,ಜಪತಪ ಮಾಡುವ ಕೋಣೆಯಲ್ಲಿ ದೇವರಿಲ್ಲ, ಬದಲಿಗೆ ಹರಿದ ಬಟ್ಟೆಗಳನ್ನು ಧರಿಸಿ ಹೊಲದಲ್ಲಿ ಹೂಳುವ ರೈತನ ಬಳಿ ,ಮಾಸಿದ ಅಂಗಿ ಧರಿಸಿ ರಸ್ತೆ ಕೆಲಸ ಮಾಡುವವನ ಬಳಿ ದೇವನಿರುವನು" ಎಂದು ನಮ್ಮ ಕವಿ ರವೀಂದ್ರ ನಾಥ್ ಠಾಕೂರ್ ರವರು ಹೇಳಿದಂತೆ ದೇವರನ್ನು ನಮ್ಮ ಕ್ರಮದಲ್ಲಿ ಕಾಣಬೇಕು ಇದನ್ನೇ ಭಗವದ್ಗೀತೆಯ*ಕರ್ಮ ಮಾರ್ಗ* ಎಂದಿರುವುದು .ಭಕ್ತಿಭಂಡಾರಿ ಬಸವಣ್ಣ ನವರು ಇದೇ ಅರ್ಥ ದಲ್ಲಿ‌"ಕಾಯಕವೇ ಕೈಲಾಸ" ಎಂದರು.  ಆಡಂಬರದ ಭಕ್ತಿ ಯನ್ನು ದೇವರು ಒಪ್ಪುವುದಿಲ್ಲ ಸ್ವಾಮಿ ವಿವೇಕಾನಂದರು ಹೇಳುವಂತೆ" ಜನತಾ ಸೇವೆಯೇ ಜನಾರ್ದನ ಸೇವೆ " ನಮ್ಮ ಶುದ್ದಮನಸ್ಸಿನಲ್ಲಿ ದೇವರ ಸ್ಮರಿಸಿ ಬೇಡಿದೊಡೆ ಅವ ನಮ್ಮ ಕೈಬಿಡಲಾರ ಅದಕ್ಕೆ ಉದಾಹರಣೆಗೆ ಬೇಡರ ಕಣಣಯ, ಭಕ್ತ ಸಿರಿಯಾಳ ಇತ್ಯಾದಿ ಉದಾಹರಣೆ ನೀಡಬಹುದು. ಇನ್ನೂ ಕೆಲ ಕವಿ ವಾಣಿ ಹೇಳಿದಂತೆ " ಮನೆಯೇ ಮಂತ್ರಾಲಯ ,ಮನಸೇ ದೇವಾಲಯ, ದೇವರೆಂದು ಪ್ರೇಮ ಸ್ವರೂಪ, " ಎಂಬಂತೆ ದೇವರು ಸದಾ ನಮ ಮೇಲೆ ದಯೆ ತೋರುವನು
ಹಿಂದೆ ಕೆಲ ಯೋಗಿಗಳು ಸಾಧು ಪುರುಷರು ಸಿದ್ದಿಯಿಂದ ದೇವರ ಸ್ಥಾನ ಪಡೆದು ಹರಸಿದ್ದರು ಇದನ್ನು ಬಂಡವಾಳ ಮಾಡಿಕೊಂಡ ಕೆಲ ಡೊಂಗಿ ಬಾಬಾ ಗಳನ್ನು ಜನರು ಕುರುಡರಂತೆ ಹಿಂಬಾಲಿಸುತ್ತಿರುವುದು ವಿಪರ್ಯಾಸ .ದೇವರ ಹೆಸರಲ್ಲಿ ನಮ್ಮ ನಮ್ಮಲ್ಲಿ ಜಗಳ ಆಡುವುದು ಸರಿಯಲ್ಲ . ನಾವೆಲ್ಲರೂ ಒಂದೆ ದೇವರ ಆರಾಧನೆ ಮಾಡಲು ವಿವಿಧ ಮಾರ್ಗ ಅನುಸರಿಸಿದರೂ ಅವನ ಕರುಣೆ ಎಲ್ಲರ ಮೇಲಿರಲಿದೆ
ಇನ್ನು ಮುಂದಾದರು ಪ್ರಬುದ್ಧ ರಾಗೋಣ
ದೇವರ ದಯೆ ಪಡೆಯೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ