19 ಡಿಸೆಂಬರ್ 2017

ಗಜ಼ಲ್ ೧೫ (ಮರುಗುತಿದೆ ಮನ)

*ಗಜ಼ಲ್ ೧೫*

ಭೌತಿಕ ಅಭಿವೃದ್ಧಿ  ಕಂಡು ಸಂತಸವಾಗಿದೆ ಮನ
ಮಾಲಿನ್ಯಗೊಂಡ ನೆಲ ಜಲಕೆ ಕೊರಗಿದೆ  ಮನ

ಜೀವಿಗಳ ಕೊಲ್ಲುತಿದೆ ರಾಸಾಯನಿಕ ವಿಷಗಾಳಿ
ಮಣ್ಣಮಲಿನ ಮಾಡುವರ ನೋಡಿ ಮುದುಡಿದೆ ಮನ

ಗಂಗೆಗೆ ವಿಶಪ್ರಾಶನ ಮಾಡಿ ಡೋಂಗಿ ಪೂಜೆ
ಮೂಟೆಗಟ್ಟಲೆ ಕಸ ನೋಡಿ ಮರುಗುತಿದೆ ಮನ

ಕಿವಿಗಡಚಿಕ್ಕುವ ಸದ್ದು ಮೈಕಾಸುರನ ಹಾವಳಿ
ಜೀವಿಗಳ ಚಡಪಡಿಕೆ ಕಂಡು ಸೊರಗುತಿದೆ ಮನ


ಮರಗಿಡಗಳ ಮಾರಣಹೋಮ ಪರಿಸರ ನಾಶ
ಸೀಜೀವಿಯ ಸ್ವಚ್ಛ ಭಾರತಕೆ ಹಾತೊರೆಯುತಿದೆ ಮನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ