This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
16 ಏಪ್ರಿಲ್ 2020
15 ಏಪ್ರಿಲ್ 2020
ಆರೈಕೆ ಮಾಡು(ಕವನ)
*ಆರೈಕೆ ಮಾಡು*
ನೀನು ಒಂದು ದಿನ
ಆಗುವೆ ಮುದುಕ
ಆಗ ನೀನು ಅರಿತು
ಕೊಳ್ಳುವೆ ಬದುಕ
ಯೌವನ ಯಾರಿಗೂ
ಶಾಶ್ವತವಲ್ಲ
ಮಗನೆ ವೃದ್ಧಾಪ್ಯ
ಇದು ತಪ್ಪಲ್ಲ
ಹಣ್ಣೆಲೆ ಉದರುವ
ಕಾಲವು ಬಂದಿದೆ
ಚಿಗುರೆಲೆ ನಗುವ
ನೋಡಿ ನಲಿದಿದೆ
ಬಾಲ್ಯದಿ ನಡೆದೆನು
ಆಡಿಸಿ ಕೈಕಾಲು
ಈಗ ಬಂದಿದೆ
ನೋಡಿಲ್ಲಿ ಕೈಕೋಲು
ಆರೈಕೆ ಮಾಡು
ಈ ಅಪ್ಪನನು
ಮಗನು ಹಿಡಿವ
ನಿನ್ನ ದಾರಿಯನು.
*ಸಿ ಜಿ ವೆಂಕಟೇಶ್ವರ*
*ತುಮಕೂರು*
ಸಿಹಿಜೀವಿಯ ಹತ್ತು ಹನಿಗಳು (ಸಹನೆ)
*ಚುಟುಕುಗಳು*
*೧*
*ವರ*
ದೇವರಿಗೆ ನೂರು ನಮನ
ಕೊಟ್ಟ ನನಗೆ ಸಾವಿರ ವರ
ಅಮ್ಮನೆಂಬ ಸಹನಾಮೂರ್ತಿ
ಕೊಡುಗೆಯು ದೊಡ್ಡ ವರ.
*೨*
*ಆತುರ*
ಸಹನೆಯಿಲ್ಲ ಎಲ್ಲೆಡೆ ಆತುರದ
ಪಾಸ್ಟ್ ಪುಡ್ ಜಮಾನ
ಇಂದು ಗಿಡ ನೆಟ್ಟು
ನಾಳೆ ಬಯಸುವರು ಹಣ್ಣನ್ನ.
*೩*
*ಜೀವನದಿ*
ರೂಢಿಸಿಕೊಂಡರೆ ನೀನು
ಸತ್ಯ, ಶಾಂತಿ ,ಸಹನೆಯ ಜೀವನದಿ
ಸರಾಗವಾಗಿ ಸಾಗರವ
ಸೇರುವುದು ಬದುಕೆಂಬ ಜೀವನದಿ
*೪*
*ಸಿಂಹಿಣಿ*
ನನ್ನವಳು ಸಾಮಾನ್ಯವಾಗಿ
ಸಹನಾಮಣಿ ಸಹಧರ್ಮಿಣಿ
ಕೆರಳಿ ನಿಂತರೆ ನೋಡಬೇಕು
ಅವಳೊಂದು ಸಿಂಹಿಣಿ.
*೫*
*ಸಾಧನೆಯ ಮೂಲ*
ಮಾಡುವ ಕೆಲಸದಲ್ಲಿದ್ದರೆ
ಸಹನೆ, ಶ್ರದ್ಧೆ ಯಶ ಪಡೆವೆ
ಕಾಟಾಚಾರದ ಗುಣವಿದ್ದರೆ
ಏನೂ ಸಾಧಿಸದೆ ಮಡಿವೆ.
*೬*
*ತಾಯಿ*
ಸಹನೆಗೆ ಮತ್ತೊಂದು ಹೆಸರೇ
ನಮ್ಮ ಭೂಮಿತಾಯಿ
ಭೂತಾಯಿಯ ಪ್ರತಿರೂಪ
ನನ್ನನೆತ್ತ ತಾಯಿ .
*೭*
*ನಮನ*
ಸಹನೆಗೆ ಮತ್ತೊಂದು ಹೆಸರೇ
ಜನ್ಮ ಕೊಟ್ಟ ನನ್ನಮ್ಮ
ಮಹಾನ್ ಕೊಡುಗೆಗೆ ಇದೋ
ನಮನ ನಿನಗೆ ಬ್ರಹ್ಮ .
*೮*
*ಮಹಾಜಾಣ*
ಸಾಧಕನಾದವನಿಗೆ ಇರಲೇಬೇಕು
ಸಹನೆಯೆಂಬ ಮಹಾಗುಣ
ಅಂತಹವನ ಹೊಗಳುವುದು
ಜಗವು ಮಹಾಜಾಣ .
*೯*
*ಪಶ್ಚಾತ್ತಾಪ ಪಡೆದಿರು*
ಸಹನೆಯು ದೌರ್ಬಲ್ಯದ
ಸಂಕೇತವೆಂದು ತಿಳಿಯದಿರು
ಕೋಪದ ಕೈಗೆ ಬುದ್ದಿ
ನೀಡಿ ಪಶ್ಚಾತ್ತಾಪ ಪಡೆದಿರು.
*೧೦*
*ತೂತು ಮಡಿಕೆ*
ಸಹನೆಯಲಿ ಕೇಳುವವನು
ಉತ್ತಮ ಮಾತುಗಾರನಾಗುವ
ಅರೆಬರೆ ಕಲಿತವನು
ತೂತು ಮಡಕೆಯಾಗುವ.
*ಸಿ ಜಿ ವೆಂಕಟೇಶ್ವರ*
*ತುಮಕೂರು*
*೧*
*ವರ*
ದೇವರಿಗೆ ನೂರು ನಮನ
ಕೊಟ್ಟ ನನಗೆ ಸಾವಿರ ವರ
ಅಮ್ಮನೆಂಬ ಸಹನಾಮೂರ್ತಿ
ಕೊಡುಗೆಯು ದೊಡ್ಡ ವರ.
*೨*
*ಆತುರ*
ಸಹನೆಯಿಲ್ಲ ಎಲ್ಲೆಡೆ ಆತುರದ
ಪಾಸ್ಟ್ ಪುಡ್ ಜಮಾನ
ಇಂದು ಗಿಡ ನೆಟ್ಟು
ನಾಳೆ ಬಯಸುವರು ಹಣ್ಣನ್ನ.
*೩*
*ಜೀವನದಿ*
ರೂಢಿಸಿಕೊಂಡರೆ ನೀನು
ಸತ್ಯ, ಶಾಂತಿ ,ಸಹನೆಯ ಜೀವನದಿ
ಸರಾಗವಾಗಿ ಸಾಗರವ
ಸೇರುವುದು ಬದುಕೆಂಬ ಜೀವನದಿ
*೪*
*ಸಿಂಹಿಣಿ*
ನನ್ನವಳು ಸಾಮಾನ್ಯವಾಗಿ
ಸಹನಾಮಣಿ ಸಹಧರ್ಮಿಣಿ
ಕೆರಳಿ ನಿಂತರೆ ನೋಡಬೇಕು
ಅವಳೊಂದು ಸಿಂಹಿಣಿ.
*೫*
*ಸಾಧನೆಯ ಮೂಲ*
ಮಾಡುವ ಕೆಲಸದಲ್ಲಿದ್ದರೆ
ಸಹನೆ, ಶ್ರದ್ಧೆ ಯಶ ಪಡೆವೆ
ಕಾಟಾಚಾರದ ಗುಣವಿದ್ದರೆ
ಏನೂ ಸಾಧಿಸದೆ ಮಡಿವೆ.
*೬*
*ತಾಯಿ*
ಸಹನೆಗೆ ಮತ್ತೊಂದು ಹೆಸರೇ
ನಮ್ಮ ಭೂಮಿತಾಯಿ
ಭೂತಾಯಿಯ ಪ್ರತಿರೂಪ
ನನ್ನನೆತ್ತ ತಾಯಿ .
*೭*
*ನಮನ*
ಸಹನೆಗೆ ಮತ್ತೊಂದು ಹೆಸರೇ
ಜನ್ಮ ಕೊಟ್ಟ ನನ್ನಮ್ಮ
ಮಹಾನ್ ಕೊಡುಗೆಗೆ ಇದೋ
ನಮನ ನಿನಗೆ ಬ್ರಹ್ಮ .
*೮*
*ಮಹಾಜಾಣ*
ಸಾಧಕನಾದವನಿಗೆ ಇರಲೇಬೇಕು
ಸಹನೆಯೆಂಬ ಮಹಾಗುಣ
ಅಂತಹವನ ಹೊಗಳುವುದು
ಜಗವು ಮಹಾಜಾಣ .
*೯*
*ಪಶ್ಚಾತ್ತಾಪ ಪಡೆದಿರು*
ಸಹನೆಯು ದೌರ್ಬಲ್ಯದ
ಸಂಕೇತವೆಂದು ತಿಳಿಯದಿರು
ಕೋಪದ ಕೈಗೆ ಬುದ್ದಿ
ನೀಡಿ ಪಶ್ಚಾತ್ತಾಪ ಪಡೆದಿರು.
*೧೦*
*ತೂತು ಮಡಿಕೆ*
ಸಹನೆಯಲಿ ಕೇಳುವವನು
ಉತ್ತಮ ಮಾತುಗಾರನಾಗುವ
ಅರೆಬರೆ ಕಲಿತವನು
ತೂತು ಮಡಕೆಯಾಗುವ.
*ಸಿ ಜಿ ವೆಂಕಟೇಶ್ವರ*
*ತುಮಕೂರು*
14 ಏಪ್ರಿಲ್ 2020
ಭಯವನು ತೊಲಗಿಸು (ಭಾವಗೀತೆ) ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದ ಭಾವಗೀತೆ
*ಭಯವನು ತೊಲಗಿಸು*
ಭಯದಲಿ ಕುಳಿತು ಚಿಂತಿಸಬೇಡ
ಕಾಯಕ ಮಾಡಲು ನೀ ಕಲಿ
ನಿರ್ಭಯವಾಗಿ ಮುನ್ನುಗ್ಗಲು
ಯಶಸ್ಸು ಲಬಿಸುವುದು ನೀ ತಿಳಿ.
ವೇದನೆ ಪಡುತಾ ಚಿಂತಿಪೆಯೇಕೆ
ಕಾದುವ ಯೋಧನ ನೋಡಿ ಕಲಿ
ಸಾಧನೆ ಮಾಡಲು ಭಯವೇಕೆ
ಹೇಡಿಯಾಗದಿರು ರಣರಂಗದಲಿ.
ಜಯಗಳಿಸಲು ಇಲ್ಲ ಅಡ್ಡದಾರಿ
ಮಾಡುವ ಕೆಲಸದಿ ಸ್ಪಷ್ಟತೆ ಇರಲಿ
ಧೈರ್ಯವೊಂದೇ ಗೆಲ್ಲುವ ರಹದಾರಿ
ನಾಯಕನಾಗು ಕಠಿಣವಾದ ಕೆಲಸದಲಿ.
ಭಯವನು ತೊಲಗಿಸು ಮನದಿಂದ
ಒಳಗಿನ ಶಕ್ತಿಯು ಜಾಗೃತವಾಗುವುದು
ಅಭಯವನಿತ್ತರೆ ದೇವ ಮುದದಿಂದ
ತಮವು ಕಳೆದು ಜಗಕೆ ಬೆಳಕಾಗುವುದು.
ಭಯದಲಿ ಕುಳಿತು ಚಿಂತಿಸಬೇಡ
ಕಾಯಕ ಮಾಡಲು ನೀ ಕಲಿ
ನಿರ್ಭಯವಾಗಿ ಮುನ್ನುಗ್ಗಲು
ಯಶಸ್ಸು ಲಬಿಸುವುದು ನೀ ತಿಳಿ.
ವೇದನೆ ಪಡುತಾ ಚಿಂತಿಪೆಯೇಕೆ
ಕಾದುವ ಯೋಧನ ನೋಡಿ ಕಲಿ
ಸಾಧನೆ ಮಾಡಲು ಭಯವೇಕೆ
ಹೇಡಿಯಾಗದಿರು ರಣರಂಗದಲಿ.
ಜಯಗಳಿಸಲು ಇಲ್ಲ ಅಡ್ಡದಾರಿ
ಮಾಡುವ ಕೆಲಸದಿ ಸ್ಪಷ್ಟತೆ ಇರಲಿ
ಧೈರ್ಯವೊಂದೇ ಗೆಲ್ಲುವ ರಹದಾರಿ
ನಾಯಕನಾಗು ಕಠಿಣವಾದ ಕೆಲಸದಲಿ.
ಭಯವನು ತೊಲಗಿಸು ಮನದಿಂದ
ಒಳಗಿನ ಶಕ್ತಿಯು ಜಾಗೃತವಾಗುವುದು
ಅಭಯವನಿತ್ತರೆ ದೇವ ಮುದದಿಂದ
ತಮವು ಕಳೆದು ಜಗಕೆ ಬೆಳಕಾಗುವುದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




