ಹಾಯ್ಕುಗಳು
೧
ಪಾತಕರಿಂದ
ಘಾತಕರಿಂದ ದೂರ
ಜೀವ ನೆಮ್ಮದಿ.
೨
ಊಟಕ್ಕಿರಲಿ
ಘೃತ ಕ್ಷೀರ ಧದಿಯು
ಆಯುರಾರೋಗ್ಯ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಹಾಯ್ಕುಗಳು
೧
ಪಾತಕರಿಂದ
ಘಾತಕರಿಂದ ದೂರ
ಜೀವ ನೆಮ್ಮದಿ.
೨
ಊಟಕ್ಕಿರಲಿ
ಘೃತ ಕ್ಷೀರ ಧದಿಯು
ಆಯುರಾರೋಗ್ಯ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
*ದಿನಮಣಿ*
ಜಗಕೆ ಬೆಳಕ ನೀಡುವ ತರಣಿ
ದಿನವೂ ಬರುವ ದಿನಮಣಿ
ಅಪಾರವಾದ ಶಕ್ತಿಯ ಗಣಿ
ಕೃತಜ್ಞತೆಯಿಂದ ನೀ ಹಣೆ ಮಣಿ.
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
ಯುದ್ಧ ನಿಲ್ಲುವುದಾವಾಗ?
ರಷ್ಯಾ ,ಉಕ್ರೇನ್ ಯುದ್ಧ
ಶುರುವಾಗಿ ಉರುಳಿಹೋಗಿವೆ
ದಿನಗಳು ಮುನ್ನೂರ ಅರವತ್ತೈದು|
ಯುದ್ಧದಾಯಿ ನಾಯಕರಿಗೆ
ಬುದ್ಧಿ ಹೇಳುವರಾರು ಬೈದು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ರೇನ್ ಬೋ ಸರಿ ಇಲ್ಲ...
ನಾನು ವಿವರಣೆ ನೀಡಿದೆ
ಕಾಮನ ಬಿಲ್ಲಿನಲ್ಲಿ ಇರೋ
ಬಣ್ಣ ಸೇರ್ಸಿ ಅಂದ್ರು ವಿಬ್ಗಯಾರ್ |
ನನ್ನವಳು ತಗಾದೆ ತೆಗೆದಳು
ಸರಿ ಇಲ್ಲ ಕಣ್ರೀ ಈ ರೇನ್ ಬೋ
ಇದ್ರಲ್ಲಿ ಇಲ್ವೇ ಇಲ್ಲ ನನ್ನಿಷ್ಟದ ಕಲರ್ ಗಳಾದ ಗೋಲ್ಡ್, ಸಿಲ್ವರ್ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
*ಸಿಹಿಜೀವಿಯ ಹನಿಗಳು*
೧
*ಕಾಲ ಎನ್ನುವ ಮದ್ದು..*
ಎಷ್ಟೇ ಕಷ್ಟ ಕೋಟಲೆಗಳಿದ್ದರೂ,
ಬಿದ್ದರೂ ದೃತಿಗೆಡದೇ
ನಡೆಯುತಿರಬೇಕು ಎದ್ದು|
ಎಲ್ಲರ ಸಕಲ ಸಮಸ್ಯೆಗಳ
ಪರಿಹರಿಸುವುದು ಕಾಲ
ಎನ್ನುವ ಮದ್ದು ||
೨
*ಗಂಧದ ಹೋಳು*
ಸಂಬಂಧಗಳ ಬಿರುಕಾಯಿತೆಂದು
ಕೊರಗದಿರು ಎಂದಿಗೂ
ನಿಲ್ಲಿಸಿ ಬಿಡು ನಿನ್ನ ಗೋಳು |
ಎಷ್ಟೇ ತುಂಡುಗಳಾಗಿ ವಿಭಜಿಸಿದರೂ
ತನ್ನ ಪರಿಮಳವ ಕಳೆದುಕೊಳ್ಳುವುದೇ
ಗಂಧದ ಹೋಳು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಕಾಲ ಎನ್ನುವ ಮದ್ದು..*
ಎಷ್ಟೇ ಕಷ್ಟ ಕೋಟಲೆಗಳಿದ್ದರೂ,
ಬಿದ್ದರೂ ದೃತಿಗೆಡದೇ
ನಡೆಯುತಿರಬೇಕು ಎದ್ದು|
ಎಲ್ಲರ ಸಕಲ ಸಮಸ್ಯೆಗಳ
ಪರಿಹರಿಸುವುದು ಕಾಲ
ಎನ್ನುವ ಮದ್ದು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
#ಕಂಬನಿ_ಖಾಲಿಯಾಗಿದೆ
ನೀ ಬೆನ್ನಿಗೆ ಚೂರಿ ಹಾಕಿದರೂ
ಅದು ಹೃದಯಕ್ಕೆ ತಾಗಿದೆ |
ಖಂಡಿತವಾಗಿಯೂ ಅಳುವುದಿಲ್ಲ
ನೀ ಮಾಡಿದ ಮೋಸಕ್ಕೆ
ಏಕೆಂದರೆ ಕಂಬನಿ ಖಾಲಿಯಾಗಿದೆ ||
#ಸಿಹಿಜೀವಿ
*ಖುಷಿ*
ದೀಪಾವಳಿಯ ದಿನ
ಭಾರತೀಯರೆಲ್ಲರಿಗೂ
ಒಂದೇ ಖುಷಿ |
ಭಾರತವನ್ನಾಳಿದ ಇಂಗ್ಲೆಂಡ್ಗೆ
ಈಗ ಭಾರತೀಯ ಮೂಲದ ಪ್ರಧಾನಿ ರಿಷಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಗುಂಡಿಗೆ
ನನ್ನ ಗುಂಡಿಗೆ ಜಗ್ಗದು
ದಂಡಿನ ದಾಳಿಗೆ
ವಿರೋಧಿಗಳ ಗುಂಡಿಗೆ |
ಒಳಗೊಳಗೇ ನಡುಗುವುದು
ನನ್ನ ಗುಂಡಿಗೆ ಈ ರಸ್ತೆಗಳ ಗುಂಡಿಗೆ ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸುಮ್ಮನೇ ಕೂರದಿರು..
ಸೋತೆನೆಂದು ಸುಮ್ಮನೇ ಕೂರದಿರು
ಗೆಲುವು ಎಂದಿಗೂ ಇರುತ್ತದೆ
ಪ್ರಯತ್ನ ಪಡುವವರ ಪರ |
ಚಲಿಸುತ್ತಿರುವ ನದಿಯು
ಒಂದಲ್ಲ ಒಂದು ದಿನ
ಸೇರಿಯೇ ಸೇರುತ್ತದೆ ಸಾಗರ ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ಹಾಯ್ಕುಗಳು*
*೧*
ಜಯಾಪಜಯ
ಎಲ್ಲರಿಗೂ ಇದ್ದದ್ದೆ
ಪ್ರಯತ್ನವಿರಲಿ .
*೨*
ಕಾಯಕ ಮಾಡು
ಖಚಿತವು ನಿನಗೆ
ವಿಜಯಮಾಲೆ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
#ಸುಗ್ಗಿ_ಸ್ವಿಗ್ಗಿ
ಆಗಾಗ ಸದ್ದು ಮಾಡುತ
ಮನೆಯ ಒಳಹೊರಗೆ
ಓಡಾಡುತ್ತಿದ್ದರೆ ಅದು
ಅವರೆ ಸುಗ್ಗಿ ಕಾಲ |
ಹೆಂಡತಿ ತವರಿಗೆ
ಹೋಗಿಬಿಟ್ಟರೆ
ಇದು "ಸ್ವಿಗ್ಗಿ "ಕಾಲ ||
#ಸಿಹಿಜೀವಿಯ_ಹನಿ
☘️☘️🌻☘️☘️🌻☘️☘️
ಸಿಹಿಜೀವಿಯ ಹನಿ
ಯಾವುದೇ ಪದಾರ್ಥಗಳಾಗಲಿ
ನಮ್ಮ ಹೊಟ್ಟೆಯಲ್ಲಿ ಉಳಿಯುವುದಿಲ್ಲ ತಿಂದದ್ದು |
ನಮ್ಮ ಮನಸಿನಲ್ಲಿ
ಅಚ್ಚಳಿಯದೆ ಉಳಿದೇಬಿಡುತ್ತದೆ
ಮನನೋಯುವಂತೆ ಅಂದದ್ದು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಶುಭೋದಯ ಸುಪ್ರಭಾತ ,*☘️☘️🌻☘️☘️🌻☘️☘️
.
#ಕನಸಲು_ನಿನ್ನದೆ_ಕನವರಿಕೆ
ನನ್ನ ಪ್ರೀತಿಯ ಆಳ ತಿಳಿಸಲು
ಇನ್ನೇನು ಸಬೂತು ಕೊಟ್ಟು
ಮಾಡಲಿ ಮನವರಿಕೆ |
ಹಗಲಿನಲ್ಲೂ, ಇರುಳಿನಲ್ಲೂ
ಕನಸಿನಲ್ಲೂ ನಿನ್ನದೆ ಕನವರಿಕೆ ||
#ಸಿಹಿಜೀವಿಯ_ಹನಿ
ಕರುಣೆ
ಪ್ರತಿಯೊಬ್ಬರ ಹೃದಯದಲ್ಲಿ
ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು
ಹೃತ್ಕುಕ್ಷಿಗಳೆಂಬ ಕೋಣೆ |
ಕೆಲವರ ಹೃದಯದಲ್ಲಿ
ಮಾತ್ರ ನೆಲೆಸಿರುತ್ತವೆ
ಮನುಷ್ಯತ್ವ ಮತ್ತು ಕರುಣೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
#ಆಧುನಿಕಬದುಕು
ಎದುರಿಗಿರುವ ತಂದೆತಾಯಿಗಳ,
ಬಂಧುಬಳಗದ ಪ್ರೀತಿ ಅರಿಯದೆ
ಬೆದಕುವರು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟಿದೆ ಲೈಕು |
ವಾಸ್ತವಕ್ಕಿಂತ ಮರೀಚಿಕೆಯ
ಹಿಂದೆ ಓಡತಲಿರುವರು
ಇದೇ ಆಧುನಿಕ ಬದುಕು ||
#ಸಿಹಿಜೀವಿಯ_ಹನಿ