ಹನಿಗವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನಿಗವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

20 ಸೆಪ್ಟೆಂಬರ್ 2023

ಹಾಯ್ಕುಗಳು...

 


ಹಾಯ್ಕುಗಳು 


ಪಾತಕರಿಂದ 

ಘಾತಕರಿಂದ ದೂರ

ಜೀವ ನೆಮ್ಮದಿ.


ಊಟಕ್ಕಿರಲಿ

ಘೃತ ಕ್ಷೀರ ಧದಿಯು 

ಆಯುರಾರೋಗ್ಯ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

28 ಆಗಸ್ಟ್ 2023

ದಿ‌ನಮಣಿ..


 



*ದಿನಮಣಿ*


ಜಗಕೆ ಬೆಳಕ ನೀಡುವ ತರಣಿ

ದಿನವೂ ಬರುವ ದಿನಮಣಿ 

ಅಪಾರವಾದ  ಶಕ್ತಿಯ ಗಣಿ 

ಕೃತಜ್ಞತೆಯಿಂದ ನೀ ಹಣೆ ಮಣಿ.


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

25 ಫೆಬ್ರವರಿ 2023

ಯುದ್ದ ನಿಲ್ಲುವುದು ಯಾವಾಗ?

 


ಯುದ್ಧ ನಿಲ್ಲುವುದಾವಾಗ? 


ರಷ್ಯಾ ,ಉಕ್ರೇನ್ ಯುದ್ಧ

ಶುರುವಾಗಿ ಉರುಳಿಹೋಗಿವೆ

ದಿನಗಳು ಮುನ್ನೂರ ಅರವತ್ತೈದು|

ಯುದ್ಧದಾಯಿ ನಾಯಕರಿಗೆ

ಬುದ್ಧಿ ಹೇಳುವರಾರು ಬೈದು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


29 ಜನವರಿ 2023

ರೇನ್ ಬೋ...

 



ರೇನ್ ಬೋ ಸರಿ ಇಲ್ಲ...


ನಾನು ವಿವರಣೆ ನೀಡಿದೆ 

ಕಾಮನ ಬಿಲ್ಲಿನಲ್ಲಿ ಇರೋ

ಬಣ್ಣ ಸೇರ್ಸಿ ಅಂದ್ರು ವಿಬ್ಗಯಾರ್ |

ನನ್ನವಳು ತಗಾದೆ ತೆಗೆದಳು 

ಸರಿ ಇಲ್ಲ ಕಣ್ರೀ ಈ ರೇನ್ ಬೋ

ಇದ್ರಲ್ಲಿ ಇಲ್ವೇ ಇಲ್ಲ ನನ್ನಿಷ್ಟದ ಕಲರ್ ಗಳಾದ ಗೋಲ್ಡ್, ಸಿಲ್ವರ್ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


27 ನವೆಂಬರ್ 2022

ನೀ ಗಂಧ

 




ದುರ್ಗಂಧ ಬೀರುವ 

ಜನರೊಡಗೂಡಿದ ಮೇಲೆ 

ನೀ ಸನಿಹವಿದ್ದರೆ ಗಂಧ |

ಸದಾ ಪರಿಮಳದ ಚಿಲುಮೆ 

ನೀ ನನ್ನ ಮುದ್ದು ಕಂದ ||


ಸಿಹಿಜೀವಿ


ಸುನಾದ

 


ಸುನಾದ 


ಜೀವನದಲ್ಲಿ ಎಷ್ಟೇ ಕಷ್ಟಗಳಿರಲಿ

ನಗು ನಗುತಾ ಬಾಳೋಣ

ಮಾಡುತ ವಿನೋದ |

ಎಷ್ಟೇ ರಂದ್ರಗಳಿದ್ದರೂ ಕೊಳಲು

ಹೊಮ್ಮಿಸಿದಂತೆ ಸುನಾದ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

26 ನವೆಂಬರ್ 2022

ಎರಡು ಹನಿಗಳು

 


*ಸಿಹಿಜೀವಿಯ ಹನಿಗಳು*


*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


೨ 

*ಗಂಧದ ಹೋಳು*


ಸಂಬಂಧಗಳ ಬಿರುಕಾಯಿತೆಂದು

ಕೊರಗದಿರು ಎಂದಿಗೂ

ನಿಲ್ಲಿಸಿ ಬಿಡು ನಿನ್ನ ಗೋಳು |

ಎಷ್ಟೇ ತುಂಡುಗಳಾಗಿ ವಿಭಜಿಸಿದರೂ 

ತನ್ನ ಪರಿಮಳವ ಕಳೆದುಕೊಳ್ಳುವುದೇ

ಗಂಧದ ಹೋಳು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಲ ಎನ್ನುವ ಮದ್ದು.

 



*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


18 ನವೆಂಬರ್ 2022

ಕಂಬನಿ ಖಾಲಿ...

 #ಕಂಬನಿ_ಖಾಲಿಯಾಗಿದೆ 


ನೀ ಬೆನ್ನಿಗೆ ಚೂರಿ ಹಾಕಿದರೂ

ಅದು ಹೃದಯಕ್ಕೆ ತಾಗಿದೆ |

ಖಂಡಿತವಾಗಿಯೂ ಅಳುವುದಿಲ್ಲ

ನೀ ಮಾಡಿದ ಮೋಸಕ್ಕೆ

ಏಕೆಂದರೆ ಕಂಬನಿ ಖಾಲಿಯಾಗಿದೆ ||


#ಸಿಹಿಜೀವಿ 

24 ಅಕ್ಟೋಬರ್ 2022

ರಿಷಿ.ಖುಷಿ

 


*ಖುಷಿ*


ದೀಪಾವಳಿಯ ದಿನ 

ಭಾರತೀಯರೆಲ್ಲರಿಗೂ

ಒಂದೇ ಖುಷಿ |

ಭಾರತವನ್ನಾಳಿದ ಇಂಗ್ಲೆಂಡ್ಗೆ

ಈಗ ಭಾರತೀಯ ಮೂಲದ   ಪ್ರಧಾನಿ ರಿಷಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

18 ಅಕ್ಟೋಬರ್ 2022

ಗುಂಡಿಗೆ..

 ಗುಂಡಿಗೆ 


ನನ್ನ ಗುಂಡಿಗೆ ಜಗ್ಗದು 

ದಂಡಿನ ದಾಳಿಗೆ 

ವಿರೋಧಿಗಳ ಗುಂಡಿಗೆ |

ಒಳಗೊಳಗೇ ನಡುಗುವುದು

ನನ್ನ ಗುಂಡಿಗೆ ಈ ರಸ್ತೆಗಳ ಗುಂಡಿಗೆ ||



#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


ಸುಮ್ಮನೆ ಕೂರದಿರು...

 



ಸುಮ್ಮನೇ ಕೂರದಿರು..


ಸೋತೆನೆಂದು ಸುಮ್ಮನೇ ಕೂರದಿರು

ಗೆಲುವು ಎಂದಿಗೂ ಇರುತ್ತದೆ

ಪ್ರಯತ್ನ ಪಡುವವರ ಪರ |

ಚಲಿಸುತ್ತಿರುವ ನದಿಯು

ಒಂದಲ್ಲ ಒಂದು ದಿನ 

ಸೇರಿಯೇ  ಸೇರುತ್ತದೆ ಸಾಗರ ||


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


05 ಅಕ್ಟೋಬರ್ 2022

ಸಿಹಿಜೀವಿಯ ಹಾಯ್ಕುಗಳು

 *ಸಿಹಿಜೀವಿಯ ಹಾಯ್ಕುಗಳು*



*೧*


ಜಯಾಪಜಯ 

ಎಲ್ಲರಿಗೂ ಇದ್ದದ್ದೆ 

ಪ್ರಯತ್ನವಿರಲಿ .



*೨*

ಕಾಯಕ ಮಾಡು 

ಖಚಿತವು ನಿನಗೆ 

ವಿಜಯಮಾಲೆ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

02 ಅಕ್ಟೋಬರ್ 2022

ಸುಗ್ಗಿ ಕಾಲ

 


#ಸುಗ್ಗಿ_ಸ್ವಿಗ್ಗಿ


ಆಗಾಗ ಸದ್ದು ಮಾಡುತ

ಮನೆಯ ಒಳಹೊರಗೆ 

ಓಡಾಡುತ್ತಿದ್ದರೆ ಅದು

ಅವರೆ ಸುಗ್ಗಿ ಕಾಲ |

ಹೆಂಡತಿ ತವರಿಗೆ 

ಹೋಗಿಬಿಟ್ಟರೆ 

ಇದು "ಸ್ವಿಗ್ಗಿ "ಕಾಲ ||


#ಸಿಹಿಜೀವಿಯ_ಹನಿ 


01 ಅಕ್ಟೋಬರ್ 2022

ಆ ನೋಟ..

 ಆ..ನೋಟ*


ಮರೆತು ಬಿಡಬಹುದು

ನಿನ್ನಸೌಂದರ್ಯಯುಕ್ತ ಮೈಮಾಟ |

ಮರೆಯಲು ಆಗುತ್ತಲೇ ಇಲ್ಲ

ಇಣುಕಿ ಕೆಣಕಿದ ಆ...ನೋಟ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮಳೆನಾಡು.

 #ಯಲ್ಲೋಅಲರ್ಟ್ 


ಅಂದು ಅತಿ ಹೆಚ್ಚು ಮಳೆ

ಎಂದರೆ ನೆನಪಾಗುತ್ತಿತ್ತು 

ಮಲೆನಾಡು |

ಇಂದು ಇಡೀ ರಾಜ್ಯ, ದೇಶವೇ

ಆಗಿಹೋಗಿದೆ ಮಳೆನಾಡು ||



#ಸಿಹಿಜೀವಿಯ_ಹನಿ 

30 ಸೆಪ್ಟೆಂಬರ್ 2022

ಸಿಹಿಜೀವಿಯ ಹನಿ

 



☘️☘️🌻☘️☘️🌻☘️☘️


ಸಿಹಿಜೀವಿಯ ಹನಿ 


ಯಾವುದೇ ಪದಾರ್ಥಗಳಾಗಲಿ   

ನಮ್ಮ ಹೊಟ್ಟೆಯಲ್ಲಿ ಉಳಿಯುವುದಿಲ್ಲ ತಿಂದದ್ದು |

ನಮ್ಮ ಮನಸಿನಲ್ಲಿ 

ಅಚ್ಚಳಿಯದೆ  ಉಳಿದೇಬಿಡುತ್ತದೆ

ಮನನೋಯುವಂತೆ ಅಂದದ್ದು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


          *ಶುಭೋದಯ ಸುಪ್ರಭಾತ ,*☘️☘️🌻☘️☘️🌻☘️☘️



.

23 ಸೆಪ್ಟೆಂಬರ್ 2022

ನಿನ್ನದೇ ಕನವರಿಕೆ

 #ಕನಸಲು_ನಿನ್ನದೆ_ಕನವರಿಕೆ 


ನನ್ನ ಪ್ರೀತಿಯ ಆಳ ತಿಳಿಸಲು

ಇನ್ನೇನು ಸಬೂತು ಕೊಟ್ಟು

ಮಾಡಲಿ ಮನವರಿಕೆ |

ಹಗಲಿನಲ್ಲೂ, ಇರುಳಿನಲ್ಲೂ 

ಕನಸಿನಲ್ಲೂ ನಿನ್ನದೆ ಕನವರಿಕೆ ||


#ಸಿಹಿಜೀವಿಯ_ಹನಿ 

19 ಸೆಪ್ಟೆಂಬರ್ 2022

ಕರುಣೆ

 ಕರುಣೆ 


ಪ್ರತಿಯೊಬ್ಬರ ಹೃದಯದಲ್ಲಿ

ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು

ಹೃತ್ಕುಕ್ಷಿಗಳೆಂಬ  ಕೋಣೆ |

ಕೆಲವರ ಹೃದಯದಲ್ಲಿ 

ಮಾತ್ರ ನೆಲೆಸಿರುತ್ತವೆ 

ಮನುಷ್ಯತ್ವ  ಮತ್ತು  ಕರುಣೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

ತುಮಕೂರು

ಆಧುನಿಕ ಬದುಕು

 #ಆಧುನಿಕಬದುಕು 


ಎದುರಿಗಿರುವ ತಂದೆತಾಯಿಗಳ,

ಬಂಧುಬಳಗದ  ಪ್ರೀತಿ ಅರಿಯದೆ 

ಬೆದಕುವರು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟಿದೆ ಲೈಕು |

ವಾಸ್ತವಕ್ಕಿಂತ ಮರೀಚಿಕೆಯ 

ಹಿಂದೆ ಓಡತಲಿರುವರು 

ಇದೇ ಆಧುನಿಕ  ಬದುಕು ||


#ಸಿಹಿಜೀವಿಯ_ಹನಿ