ಚುಟುಕುಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚುಟುಕುಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

14 ಆಗಸ್ಟ್ 2023

ಪೇಡಾ..

 



ಹಂಚಿಬಿಡು ಪೇಡಾ .


ಕೋಗಿಲೆಯು ಕಪ್ಪಾದರೂ ನೋಡಾ

ಸದಾ ಹಾಡುವುದು ಸುಂದರ ಹಾಡ|

ಕೊರತೆ ನೆನದು ಕೊರಗುವುದು ಬೇಡ

ಇರುವುದ ನೆನೆದು ಹಂಚಿಬಿಡು ಪೇಡ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು 


06 ಸೆಪ್ಟೆಂಬರ್ 2020

ಎರಡು ಚುಟುಕುಗಳು


 ಚುಟುಕು ೧


*ಸುಖನಿದ್ರೆ*



ದೇವರ ಮಗುವು ನಾನು 

ಈ ಧರೆಯೇ ಮಂಚವು|

ಅಂಬರವೇ ಹೊದಿಕೆ ನನಗೆ

ಸುಖ ನಿದ್ರೆಯು ಅನು ದಿನವು||


ಚುಟುಕು ೨


*ಸುಸ್ತಿರ*


ಏಕೆ ಬೇಡ ಕೈಗಾರಿಕೆ,ಸಾರಿಗೆ ಸಂಪರ್ಕ

ತಂತ್ರಜ್ಞಾನ ಅಭಿವೃದ್ಧಿಗೆ ಅವೇ ಆಧಾರ|

ಮಿತಿ ಮೀರದೆ ಮಿತವಾಗಿ ಬಳಸಿಕೊಂಡು

ಹಸಿರುಳಿಸಿ ಭುವಿಯ ಮಾಡೋಣ ಸುಸ್ಥಿರ||



*ಸಿಹಿಜೀವಿ*


ಸಿ ಜಿ ವೆಂಕಟೇಶ್ವರ

ತುಮಕೂರು


05 ಸೆಪ್ಟೆಂಬರ್ 2020

ಚುಟುಕು


 ಉಳಿಗಾಲವಿಲ್ಲ*


ಬಯಕೆಗಳು ಮಿತವಾದರೆ 

ರಸ್ತೆಯಲ್ಲಿ ಮಲಗಿದರೂ ನಿದ್ರೆಗೆ ಚಿಂತೆಯಿಲ್ಲ |

ಹಸಿರು ನಮ್ಮ ಉಸಿರು ಎಂದು 

ತಿಳಿಯದಿದ್ದರೆ  ಸುಸ್ಥಿರ ಪರಿಸರದ ಉಳಿಗಾಲವಿಲ್ಲ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

07 ಜೂನ್ 2020

ಮುಖವೇ ಕನ್ನಡಿ ( ಚುಟುಕು)

*ಮುಖವೆ ಕನ್ನಡಿ* ಚುಟುಕು

ಪ್ರಿಯೆ ಮೋಸ ಮಾಡಲು ಏನೋನೋ
ಸಮಜಾಯಿಷಿ ಕೊಡಲು ಹಾಕದಿರು ಮುನ್ನುಡಿ.
ಮರೆಮಾಚಲಾಗದು ನಿನ್ನ ದುರುಳತನ
ಪ್ರತಿಫಲನ ಮಾಡುತಿಹುದು ನಿನ್ನ ಮುಖದ ಕನ್ನಡಿ.

ಸಿ ಜಿ ವೆಂಕಟೇಶ್ವರ
ತುಮಕೂರು

03 ಮೇ 2020

ಸಿಹಿಜೀವಿಯ ಹತ್ತು ಹನಿಗಳು ( ಇಂದು ವಿಶ್ವ ನಗುವಿನ ದಿನ)


*ಸಿಹಿಜೀವಿಯ ಹತ್ತು ಹನಿಗಳು*

( ಇಂದು ವಿಶ್ವ ನಗುವಿನ ದಿನ)

*೧*

*ಜಗಜಟ್ಟಿ*

ಅವನೊಬ್ಬ
ಅಸಾಧಾರಣ
ಜಗಜಟ್ಟಿ |
ಮರೆತೇಹೋಗಿದ್ದಾನೆ
ಪಟ್ಟುಗಳನ್ನು
ಲಾಕ್ಡೌನ್ ನಲ್ಲಿ
ರೊಟ್ಟಿಗಳನ್ನು
ತಟ್ಟಿ ತಟ್ಟಿ||

*೨*

*ಬೇಡಿಕೆ*

ಮಹಿಳಾಮಣಿಗಳ
ಒಂದೇ ಬೇಡಿಕೆ
ಮುಂದುವರೆಸಲೇಬೇಕು
ಲಾಕ್ಡೌನನ್ನ|
ಕಾರಣ ಇನ್ನೂ ಸರಿಯಾಗಿ
ತೊಳೆಯುತ್ತಿಲ್ಲ
ನಮ್ಮ ಪತಿಯರು
ತಟ್ಟೆ ಲೋಟಗಳನ್ನ||


*೩*

*ಸಾಮಾಜಿಕ ಅಂತರ*

ನನ್ನವಳಿಗೆ ಮುತ್ತಿಕ್ಕಲು
ಅವಳೆಡೆ ಹೋದೆ
ತೋರುತ ಅವಸರ|
ನಿರಾಸೆ ಮಾಡುತ
ನುಡಿದಳು ಇನ್ನೂ
ಮುಗಿದಿಲ್ಲ ಲಾಕ್ಡೌನ್
ಪಾಲಿಸಿ ನೀವು
ಸಾಮಾಜಿಕ ಅಂತರ||

*೪*

*ಕಾಟ*

ಉಚಿತವಾಗಿ ಸಿಗುವ
ನಂದಿನಿ ಗಾಗಿ( ಹಾಲು)
ಎಲ್ಲಡೆ ಕಿತ್ತಾಟ|
ಮನದಲೆ
ಅಂದುಕೊಂಡಳು
ಅಮುಲ್
ನಾನು ದುಬಾರಿ
ಸದ್ಯ ತಪ್ಪಿತು
ಜನರ ಕಾಟ||

*೫*

*ಗಾಯನ*

ನಾನೂ ಶುರು
ಮಾಡೇ ಬಿಟ್ಟೆ
ಪಾಶ್ಚಾತ್ಯ ಗಾಯನ|
ಮನೆ ಮುಂದೆ
ಸದ್ದಾಯಿತು
ಗೆಳೆಯನ ನೋಡಲು
ಬಂದಿತ್ತು ಶ್ವಾನ||

*೬*

*ಬೇಡಿಕೆ*

ಬಾವಿ ಅಳಿಯನಿಗೆ
ಮಾವ ಕೇಳಿದರು
ಏನಾದರೂ ಬೇಡಿಕೆಯಿದ್ದರೆ
ಕೇಳಿ ಸಂಕೋಚ ಇರಬಾರದು|
ಒಂದೇ ಬೇಡಿಕೆ ನನ್ನದು ಮಾವ
ಮುಂದೇನಾದರೂ ಲಾಕ್ಡೌನ್
ಆದರೆ ನಿಮ್ಮ ಮಗಳು
ನನ್ನಿಂದ ಪಾತ್ರೆ ತೊಳೆಸಬಾರದು||

*೭*

*ಮನವಿ*

ಪ್ರಿಯೆ ಬೇಡಿಕೊಳ್ಳುವೆ
ನಿನ್ನಲಿ ಕೈಜೋಡಿಸಿ|
ದಯವಿಟ್ಟು ಹೇಳದಿರು
ಎರಡನೇ ಬಾರಿ ಗುಡಿಸಿ||



*೮*


*ಚುರುಮುರಿ*

ಮಗಳು ಹಠ ಹಿಡಿದಳು
ಬೇಕೇ ಬೇಕು
ಗೋಬಿಮಂಚೂರಿ|
ಅದು ಚೀನಾದವರದು ಅಂದೆ
ಮಗಳಂದಳು
ಬಾಳ ಚೆಂದಾಗಿರುತ್ತೆ
ನಮ್ಮ ಚುರುಮುರಿ||

*೯*

*ಗುಗ್ಗು*

ನೀನಗೆ ಸಂತಸವಾದರೆ
ನಗು
ಬೇಕಾದರೆ ಖುಷಿಯಿಂದ
ಗುನುಗು|
ಮುಖ ಗಂಟುಹಾಕಿಕೊಂಡು
ಅವರಿವರಿಂದ ಅನಿಸಿಕೊಳ್ಳದಿರು
ಗುಗ್ಗು||

*೧೦*

*ಗಾಂಧಿ ಮಾರ್ಗ*

ನನಗೂ ಆಸೆ
ಗಾಂಧಿ ಮಾರ್ಗದಲ್ಲಿ
(ಎಂ ಜಿ ರೋಡ್)
ನಡೆಯಲು|
ಏನು ಮಾಡಲಿ
ನನಗೆ ಬರುವುದಿಲ್ಲ
ಧಮ್ ಹೊಡೆಯಲು
ಮದ್ಯ ಕುಡಿಯಲು||


*ಸಿ ಜಿ ವೆಂಕಟೇಶ್ವರ*
*ತುಮಕೂರು*

28 ಏಪ್ರಿಲ್ 2020

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಚುಟುಕುಗಳು



*ಚುಟುಕು ೧*

*ಕೃತಿ ಚೌರ್ಯ*

ಎಲ್ಲರೂ ಹೊಗಳಿದ್ದೇ ಹೊಗಳಿದ್ದು
ಆ ಲೇಖಕರ ಪಾಂಡಿತ್ಯ ಮತ್ತು ಶೌರ್ಯ
ಉಗುಳಲು‌ ಶುರು ಮಾಡಿದರು ಜನ
ತಿಳಿಯುತ್ತಲೇ ಅವರ ಕೃತಿ ಚೌರ್ಯ

*ಚುಟುಕು ೨*

*ಅರವಟ್ಟಿಗೆ*

ಬೇಸಿಗೆಯಲಿ ದಾಹವ ತಣಿಸಿಕೊಳ್ಳಲು
ನಾವು ಕುಡಿಯಲೇ ಬೇಕು ನೀರು ಆಗಾಗ್ಗೆ
ಮೂಕ ಪ್ರಾಣಿ ಪಕ್ಷಿಗಳ ದಾಹ ನೀಗಿಸಲು
ಕಾಡು,ನಾಡಿನಲಿ ಇಡಬೇಕಿದೆ ಅರವಟ್ಟಿಗೆ

*ಸಿ ಜಿ ವೆಂಕಟೇಶ್ವರ*
*ತುಮಕೂರು*

27 ಏಪ್ರಿಲ್ 2020

ಎರಡು ಶಾಯರಿಗಳು

ಎರಡು ಶಾಯರಿಗಳು

*ಶಾಯರಿ೧*

ಕನಸು ಕಂಡಿದ್ದೆ ಗೆಳತಿ
ನಿನ್ನ ಜತೆಗೂಡಿ ನಡೆಯಬೇಕು
ಜೀವನವೆಲ್ಲಾ|
ನಡೆಯದೇ ನಿಂತು ಬಿಟ್ಟಿರುವೆ
ಈಗೀಗ ನಿನ್ನ ಸಮಾದಿಯ ಬಳಿ
ನಿನಗೆ ಕಾಣುತ್ತಿದೆಯಲ್ಲ?||

*ಶಾಯರಿ೨*

ಮರೆತು ಬಿಡು ಚೆಲುವೆ
ಇಂದಿನಿಂದ ನನ್ನ
ಅವಳು ಕನಸಲಿ ಬಂದಿದ್ದಳು
ಕಳೆದ ರಾತ್ರಿ|
ಮನಸು ಮೈಲಿಗೆಯಾಗಿದೆ
ಇನ್ನೆಲ್ಲಿದೆ ನನ್ನ ಶುದ್ದ
ಪ್ರೇಮಕ್ಕೆ ಖಾತ್ರಿ||.

*ಸಿ‌ ಜಿ ವೆಂಕಟೇಶ್ವರ*
*ತುಮಕೂರು*



25 ಏಪ್ರಿಲ್ 2020

ಎರಡು ಚುಟುಕುಗಳು

ಎರಡು ಚುಟುಕುಗಳು


*ದೇಗುಲಗಳು*

ಸಕಲ ಕಾಲಕೂ ಮನಕಾನಂದ ನೀಡುತ್ತಿವೆ
ಬೇಲೂರು ಹಳೇಬೀಡಿನ ಶಿಲಾಬಾಲಿಕೆಗಳು
ಕಲಾರಸಿಕರನ್ನು ಕೈಬೀಸಿ ಕರೆಯುತ್ತಲಿವೆ
ಕನ್ನಡ ನಾಡಿನ ವಿಶ್ವ ಪ್ರಸಿದ್ಧ ದೇಗುಲಗಳು.


*ನಿಲ್ಲುತ್ತಿಲ್ಲ*

ವೈರಾಣುವಿನ ಪ್ರವರಕ್ಕೆ ಹೈರಾಣಾಗಿದೆ ಜಗ
ಎಲ್ಲಡೆ ಮರಣಮೃದಂಗವು  ನಿಲ್ಲುತ್ತಿಲ್ಲ
ವೈದ್ಯರು,ನಾರಾಯಣ,ಶ್ರಮಿಸುತ್ತಲಿದ್ದಾರೆ
ಕಾಲವನ್ನು ತಡೆಯೋರು ಯಾರೂ ಇಲ್ಲ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

23 ಏಪ್ರಿಲ್ 2020

ಸಹೃದಯಿ (ವಿಶ್ವ ಪುಸ್ತಕ ದಿನದ ಹನಿ)

*ಸಹೃದಯಿ*

ಮುಂಗಾರು ಮಳೆಯನ್ನು
ಕಲ್ಪಿಸಿಕೊಳ್ಳುವನು
ಕವಿಯು ತನ್ನ ಮಸ್ತಕದಿ
ಸಹೃದಯಿ ಓದುಗ
ಮಳೆಯಲಿ ಮಿಂದು
ಪುಳಕಗೊಳ್ಳವ ಓದಿ ಪುಸ್ತಕದಿ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

(ಇಂದು ವಿಶ್ವ ಪುಸ್ತಕ ದಿನ)

22 ಏಪ್ರಿಲ್ 2020

ಸಿಹಿಜೀವಿಯ ನಾಲ್ಕು ಶಾಯರಿಗಳು


*ಸಿಹಿಜೀವಿಯ ನಾಲ್ಕು ಶಾಯರಿಗಳು*

*ಶಾಯರಿ೧*


ಅವಳ ಮನೆ ಮುಂದೆ ನಿಂತು
ದಿನವೂ ಅವಳ ನೋಡುವುದೇ ವಿಸ್ಮಯ
ಅವರಮ್ಮ ಬಂದಳು ಬೈಯುತ
ಯಾವುದರಲ್ಲಿ  ಹೊಡೀ ಬೇಕು ನಿನ್ನ ಮನೆಕಾಯ.

*ಶಾಯಿರಿ೨*

ನೀನೆಷ್ಟು ಬೈದರೂ, ದೂರ ಸರಿದರೂ
ನನ್ನ ಹೃದಯದಲ್ಲಿ ಕಟ್ಟವೆ ನಿನಗೆ ಮಂದಿರ
ಪ್ರೀತಿಯಲಿ ನಾ ಸೋತರೂ ಚಿಂತೆಯಿಲ್ಲ
ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲವೂಸುಂದರ.

*ಶಾಯರಿ ೩*

ಆ ಮುಂಗುರುಳ ನಾರಿ ಸಿಗದಿದ್ದರೆ
ನೇಣು ಹಾಕಿಕೊಳ್ಳಲು ಹುಡುಕಿದ ಹಗ್ಗ
ತಲೆ ಕಡಿಯುತ್ತಿದೆ ಎಂದು ಕೆರೆಯಲು
ಅವಳು ತೆಗೆದು ಬಿಟ್ಟಳು ವಿಗ್ಗ .

*ಶಾಯರಿ ೪*

ತಿಳಿದವರೆಂದರು
ಪ್ರೀತಿ ಮಾಯೆ ಹುಷಾರು
ಈಗ ನಾನಾಗಿರುವೆ ದೇವದಾಸ್
ಹುಡುಕುತಿಹೆನು ನನ್ನ ಪಾರು

*ಸಿ ಜಿ ವೆಂಕಟೇಶ್ವರ*
*ತುಮಕೂರು*

20 ಏಪ್ರಿಲ್ 2020

ಸಿಹಿಜೀವಿಯ ಮೂರು ಹನಿಗಳು

*ಸಿಹಿಜೀವಿಯ ಮೂರು ಹನಿಗಳು*

*೧*

*ಮರಳಿ ಗೂಡಿಗೆ*

ಹಳ್ಳಿಯನು ಕಾಲಕಸವಾಗಿ
ಕಂಡು ಪಟ್ಟಣಕ್ಕೆ
ಹಾರಿದರು |
ನಗರವೇ ಲೋಕವೆಂದು
ಮೆರೆದರು
ಕಾಲನು ಅಬ್ಬರಿಸಲು
ಮರಳಿ ಗೂಡಿಗೆ
ಸೇರಿದರು.||

*೨*

*ನಾಕ ಸಿಗದು*

ಎಲ್ಲಾ ಕಾಲಕೂ
ನಮ್ಮ ನಡೆ ನುಡಿ
ಒಂದೇ ಆಗಿದ್ದರೆ
ಲೋಕ ಮೆಚ್ಚುವುದು|
ಗೋಸುಂಬೆಯಂತೆ
ಕ್ಷಣಕೊಂದೊಂದು
ಬಣ್ಣ ಬದಲಾಯಿಸಿದರೆ
ನಮಗೆ ನಾಕ ಸಿಗದು.||

*೩*

*ಹುಷಾರು*

ಅವನಂದ ನಾನು
ಯಾವಾಗಲೂ
ಕಾಣುವೆ
ಸಿಹಿ ಕನಸು|
ಅವಳೆಂದಳು
ಹುಷಾರು
ಬರಬಹುದು
ಡಯಾಬಿಟಿಸ್ಸು.||

*ಸಿ ಜಿ ವೆಂಕಟೇಶ್ವರ*
*ತುಮಕೂರು*


16 ಏಪ್ರಿಲ್ 2020

ಮರೆಯದಿರು (ಬಹುಮಾನ ಪಡೆದ ಚುಟುಕು)

*ಮರೆಯದಿರು* 
(ಹನಿ ಹನಿ ವಿಸ್ಮಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಚುಟುಕು )

ಸೋತೆನೆಂದು ಚಿಂತಿಸುತ ನೀ ಕೂರುವೆ ಏಕೀಗ
ಬಿದ್ದರು ಬಲೆಯನು ಹೆಣೆಯುವ ಜೇಡವ ನೋಡೀಗ
ನಿನ್ನೊಳಗಿರುವ ಶಕ್ತಿಯು ಹೆಚ್ಚಿದೆ ಮರೆಯದಿರು
ಗೆಲುವದು ಬಂದಾಗ ಹುಚ್ಚಾಗಿ ಮೆರೆಯದಿರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

15 ಏಪ್ರಿಲ್ 2020

ಸಿಹಿಜೀವಿಯ ಹತ್ತು ಹನಿಗಳು (ಸಹನೆ)

*ಚುಟುಕುಗಳು*

*೧*

*ವರ*

ದೇವರಿಗೆ ನೂರು ನಮನ
ಕೊಟ್ಟ ನನಗೆ ಸಾವಿರ ವರ
ಅಮ್ಮನೆಂಬ ಸಹನಾಮೂರ್ತಿ
ಕೊಡುಗೆಯು ದೊಡ್ಡ ವರ.

*೨*

*ಆತುರ*

ಸಹನೆಯಿಲ್ಲ ಎಲ್ಲೆಡೆ ಆತುರದ
ಪಾಸ್ಟ್ ಪುಡ್ ಜಮಾನ
ಇಂದು ಗಿಡ ನೆಟ್ಟು
ನಾಳೆ ಬಯಸುವರು ಹಣ್ಣನ್ನ.

*೩*

*ಜೀವನದಿ*

ರೂಢಿಸಿಕೊಂಡರೆ ನೀನು
ಸತ್ಯ, ಶಾಂತಿ ,ಸಹನೆಯ ಜೀವನದಿ
ಸರಾಗವಾಗಿ ಸಾಗರವ
ಸೇರುವುದು ಬದುಕೆಂಬ ‌ಜೀವನದಿ

*೪*

*ಸಿಂಹಿಣಿ*

ನನ್ನವಳು ಸಾಮಾನ್ಯವಾಗಿ
ಸಹನಾಮಣಿ ಸಹಧರ್ಮಿಣಿ
ಕೆರಳಿ ನಿಂತರೆ ನೋಡಬೇಕು
ಅವಳೊಂದು ಸಿಂಹಿಣಿ.

*೫*

*ಸಾಧನೆಯ ಮೂಲ*

ಮಾಡುವ ಕೆಲಸದಲ್ಲಿದ್ದರೆ
ಸಹನೆ, ಶ್ರದ್ಧೆ ಯಶ ಪಡೆವೆ
ಕಾಟಾಚಾರದ ಗುಣವಿದ್ದರೆ
ಏನೂ ಸಾಧಿಸದೆ ಮಡಿವೆ.

*೬*

*ತಾಯಿ*

ಸಹನೆಗೆ ಮತ್ತೊಂದು ಹೆಸರೇ
ನಮ್ಮ ಭೂಮಿತಾಯಿ
ಭೂತಾಯಿಯ ಪ್ರತಿರೂಪ
ನನ್ನನೆತ್ತ  ತಾಯಿ .

*೭*

*ನಮನ*

ಸಹನೆಗೆ ಮತ್ತೊಂದು ಹೆಸರೇ
ಜನ್ಮ ಕೊಟ್ಟ ನನ್ನಮ್ಮ
ಮಹಾನ್ ಕೊಡುಗೆಗೆ ಇದೋ
ನಮನ ನಿನಗೆ ಬ್ರಹ್ಮ .

*೮*

*ಮಹಾಜಾಣ*

ಸಾಧಕನಾದವನಿಗೆ ಇರಲೇಬೇಕು
ಸಹನೆಯೆಂಬ ಮಹಾಗುಣ
ಅಂತಹವನ ಹೊಗಳುವುದು
ಜಗವು ಮಹಾಜಾಣ .

*೯*

*ಪಶ್ಚಾತ್ತಾಪ ಪಡೆದಿರು*

ಸಹನೆಯು ದೌರ್ಬಲ್ಯದ
ಸಂಕೇತವೆಂದು ತಿಳಿಯದಿರು
ಕೋಪದ ಕೈಗೆ ಬುದ್ದಿ
ನೀಡಿ ಪಶ್ಚಾತ್ತಾಪ ಪಡೆದಿರು.

*೧೦*

*ತೂತು ಮಡಿಕೆ*

ಸಹನೆಯಲಿ ಕೇಳುವವನು
ಉತ್ತಮ ಮಾತುಗಾರನಾಗುವ
ಅರೆಬರೆ ಕಲಿತವನು
ತೂತು ಮಡಕೆಯಾಗುವ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

12 ಏಪ್ರಿಲ್ 2020

ನೆಮ್ಮದಿ (ಮೂರು ಚುಟುಕುಗಳು)

*ಮೂರು ಚುಟುಕುಗಳು*

*೧*

*ನನ್ನೊಳಗೆ*

ಹುಡುಕುತ್ತಿದ್ದೆನು ಇದುವರೆಗೂ
ನೆಮ್ಮದಿಯನು ಹೊರಗೆ
ಈಗೀಗ ತಿಳಿಯುತ್ತಿದೆ ನನಗೆ
ಅದು ಇರುವುದು ನನ್ನೊಳಗೆ.

*೨*


*ಮೂಲ*

ತುಪ್ಪ ತಿನ್ನಲು ಸಿದ್ದರಿರುವರು
ಮಾಡಿಯಾದರೂ ಸಾಲ
ಹಾಸಿಗೆ ಇದ್ದಷ್ಟು ಕಾಲುಚಾಚಿದರೆ
ನೆಮ್ಮದಿಗೆ ಅದುವೆ ಮೂಲ

*೩*

*ಮಿತಿಗೊಳಿಸು*


ಹುಡುಕುವುದೇಕೆ ಎಲ್ಲಿಹುದು ನೆಮ್ಮದಿ  ಎಂದು  ಆ ಬದಿ ಈ ಬದಿ
ಆಸೆಗಳ ಮಿತಿಗೊಳಿಸಿದರೆ ಸಿಕ್ಕೇ ಸಿಗುವುದು ನೆಮ್ಮದಿ

*ಸಿ ಜಿ ವೆಂಕಟೇಶ್ವರ*
*ತುಮಕೂರು*




10 ಏಪ್ರಿಲ್ 2020

ಮೂರು ಶಾಯರಿಗಳು


*ಮೂರು  ಶಾಯರಿಗಳು*

*೧*

ನಾನು ಸದಾ ಅವಳ ಹೊಗಳುತ್ತಲೇ ಇದ್ದೆ
ಲಾವಣ್ಯವತಿ‌ ಗುಣವತಿ ಸೌಂದರ್ಯವತಿ|
ಬಿಟ್ಟೇ ಹೋದಳು ನನ್ನನು ಗೊಣಗುತ್ತ
ಮಾಡದೆ ಕೆಲಸ ವರ್ಣನೆಯಾಯಿತು ಅತಿ||.

*೨*

ನನಗೂ ಆಸೆ ಕಣೇ ಕೊಡಿಸಲು ನಿನಗೆ
ಬಂಗಾರದ ,ಬೆಳ್ಳಿಯ, ವಜ್ರದ ಒಡವೆಗಳನ್ನ|
ಮೊದಲು ನೋಡಿಕೋ ಧರಿಸಬೇಕಿರುವ
ನಿನ್ನ ಕೈ ಕಾಲು ಮೂಗು ಕಿವಿಗಳನ್ನ||

*೩*

ಕಾಯುತಲೇ ಇದ್ದೆ ಒಂದಲ್ಲ ಒಂದು
ದಿನ ಅವಳು ಬೀರುವಳು ಕಿರುನಗೆ|
ಧನವಿರುವವನ  ಮದುವೆಯಾಗಿ
ನನ್ನ ಹೃದಯಕ್ಕೆ ಹಾಕಿ ಹೋದಳು ಹೊಗೆ||

08 ಏಪ್ರಿಲ್ 2020

ಮನವಿ(ಹನುಮ ಜಯಂತಿಯ ಶುಭಾಶಯಗಳು)

ಮನವಿ

(ಇಂದು ಹನುಮ ಜಯಂತಿ)

ಇಂದು ನಿಮ್ಮ ‌ಜನಮದಿನ
ಮಾರುತಿ ತುಂಬಿಹನು ನನ್ನ ಮ‌ನ
ಕೊಡದಿದ್ದರೂ ಸರಿ ಧನ
ಹರಸು‌ ನೀಡಿ ಒಳ್ಳೆಯ ಗುಣ
ಆಗಲಿ ನನ್ನ ಜನ್ಮ ಪಾವನ

*ಸಿ ಜಿ ವೆಂಕಟೇಶ್ವರ*
*ತುಮಕೂರು*

07 ಏಪ್ರಿಲ್ 2020

ಸಿಹಿಜೀವಿಯ ಹನಿಗಳು ( ವಿಶ್ವ ಆರೋಗ್ಯ ದಿನದ ನೆನಪಿಗಾಗಿ)


*ಸಿಹಿಜೀವಿಯ ಹನಿಗಳು*

*೧*

*ಪರಲೋಕ ರವಾನೆ*

ಅಶುದ್ಧ ಗಾಳಿಯ ಸೇವನೆ 
ದೇಹವಾಗಿದೆ ರೋಗದ ಮನೆ
ಕಾಲನ ಮಹಾಚಿತಾವಣೆ 
ಶೀಘ್ರ ಪರಲೋಕಕೆ ರವಾನೆ 

*೨*

*ಜೀವಿಸು*

ಕಾಲ ಕಾಲಕೆ ದೇಹವ ದಂಡಿಸು
ಒಳ್ಳೆಯ ಗಾಳಿಯ ಸೇವಿಸು
ಒಳ್ಳೆಯ ಸ್ನೇಹಲೋಕ ಗಳಿಸು
ಆರೋಗ್ಯದಿಂದ ಜೀವಿಸು 

*೩*

*ಜೀವನ*

ಲೋಕದಲ್ಲಿರುವ ಬಹುಪಾಲು
ಗಾಳಿಗೋಪುರದಲಿ ವಿಹರಿಸುವ ಜನ
ಕಾಲನು ಬಂದು ಈ ದೇಹ ನನ್ನದು
ಎಂದಾಗ ಅರಿವರು ಇಷ್ಟೆ ಜೀವನ 

*ಸಿ .ಜಿ ವೆಂಕಟೇಶ್ವರ*
*ತುಮಕೂರು*


31 ಮಾರ್ಚ್ 2020

ಸಿಹಿಜೀವಿಯ ಹನಿಗಳು


*ಸಿಹಿಜೀವಿಯ ಹನಿಗಳು*

*ಅಂತರ*
ಹಿಂದೆ ಮಾಹಾರಾಜರ ಆಸ್ಥಾನದಲ್ಲಿ
ಮಂತ್ರಿಗಳು ಆಸೀನರಾಗತ್ತಿದ್ದರು ದೂರ ದೂರ
ಇಂದು ಕರೋನ‌ ಪರಿಣಾಮವಾಗಿ ಎಲ್ಲರೂ ದೂರ ಪಾಲಿಸಲು  ಸಾಮಾಜಿಕ ಅಂತರ.
*ಐಸೋಲೇಷನ್* (I SOUL ATION)
ಕರೋನ ರೋಗ ಹರಡದಂತೆ
ಮಾಡಬೇಕು ಐಸೋಲೇಷನ್
ಆತ್ಮಸಾಕ್ಷಾತ್ಕಾರಕ್ಕೆ  ಮಾಡಬೇಕು
ಸಾಧನೆ ಮತ್ತು ಮೆಡಿಟೇಷನ್.
*

*ವರ*
ಅಂದು ಎಲ್ಲರಿಗೂ ಆಸೆಯಿತ್ತು
ಸಿಗಬೇಕು ವಿದೇಶದಲ್ಲಿ ನೆಲೆಸಿರುವ ವರ
ಇಂದು ವಿದೇಶದಲ್ಲಿ ನಲೆಸಿದವಗೆ
ವಧು ಬೇಕೆಂದರೆ ಹೆತ್ತವರು ಹೇಳುವರು ಇರಲಿ ಸಾಮಾಜಿಕ ಅಂತರ
*ಸಿ ಜಿ‌ ವೆಂಕಟೇಶ್ವರ*
*ತುಮಕೂರು*
9900925529
venkatesh.c.g9@gmail
Com

24 ಫೆಬ್ರವರಿ 2020

ಧನ (ಚುಟುಕು)


*ಧನ*

ಇಂದು ಬರುವುದು ಧನ
ನಾಳೆ ಆಗಬಹುದು ನಿರ್ಧನ
ಧನವಿದ್ದರೂ ನಿಲ್ಲಲ್ಲ ನಿಧನ
ಇದ್ದಾಗ ನೀನು ಮಾಡು ದಾನ.

*ಸಿ ಜಿ ವೆಂಕಟೇಶ್ವರ*

20 ಫೆಬ್ರವರಿ 2020

ದೇವದಾಸ್ (ಹನಿಗವನ)

*ದೇವದಾಸ* ಹನಿಗವನ

ಮೊದ ಮೊದಲು ಪ್ರೀತಿಸಿ ಪ್ರೇಮದಾಸ
ಪ್ರೀತಿಸಿದವಳು ಮಾಡಿದಳು ಮೋಸ
ಪ್ರೀತಿ ಕೈಕೊಟ್ಟಮೇಲೆ  ದೇವದಾಸ
ಆಮೇಲೆ ಚಟಗಳ  ದಾಸಾನುದಾಸ

*ಸಿ ಜಿ‌ ವೆಂಕಟೇಶ್ವರ*