16 ಫೆಬ್ರವರಿ 2026

ಜನಪದರ ಕಣ್ಣಲ್ಲಿ ಕಮ್ಮಾರ ಕಲ್ಲಯ್ಯ


 ಜನಪದರ ಕಣ್ಣಲ್ಲಿ  ಕಮ್ಮಾರ ಕಲ್ಲಯ್ಯ


ಕುರಿತೋದದೆಯುಂ ಕಾವ್ಯ ಪ್ರಯೋಗ ಮತಿಗಳ್  ಎಂದು ಕವಿರಾಜಮಾರ್ಗಕಾರ ವರ್ಣಿಸಿರುವಂತೆ ನಮ್ಮ ಜನಪದರು ನಮಗೆ ‌ಜ್ಞಾನದ ಆಗರ. ಲಿಖಿತ ದಾಖಲೆಗಳಿರದ ಸಂದರ್ಭಗಳಲ್ಲಿ ಇವರ ಮೌಖಿಕ ಆಕರಗಳೇ ನಮಗೆ ಆಧಾರ.
ಶರಣ ಕಲ್ಲಯ್ಯ ರವರ ಬಗ್ಗೆ ತಿಳಿಯಲು ನಮಗೆ ಜನಪದರ ಹಾಡುಗಳು ಪ್ರಮುಖ ಆಕರವಾಗಿವೆ.

'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು.  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಆತ್ಮೀಯರಾದ  ಮಂಜುನಾಥ್ ರವರು ಶರಣ ಕಲ್ಲಯ್ಯ ರವರ ಬಗ್ಗೆ ರಚಿತವಾದ ಜನಪದ ಗೀತೆಯ ಲಿಂಕ್ ಕಳಿಸಿದ್ದರು ಅದನ್ನು ಕೇಳಿದಾಗ ಶರಣ ಕಲ್ಲಯ್ಯನವರ ಬಗ್ಗೆ  ಒಂದು ಲೇಖನ ಬರೆಯಬೇಕು ಎಂಬ ಮನಸಾಯಿತು ಅದರ ಫಲವೇ ಈ ಲೇಖನ





ಓಂ ಶ್ರೀ ಗುರು ಬಸವಲಿಂಗಾಯ ನಮಃ ಜನಪದರ ಕಂಡ ಕಮ್ಮಾರ ಕಲ್ಲಯ್ಯ ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಧರಣೀಯ ಶರಣ ಗಣಕಟ್ಟಿ ಧರಣೀಯ ಶರಣ ಗಣಕಟ್ಟಿ ಬಯಲಾದಿ ಶರಣರ ನೆನೆವೆ ನಾನೆದ್ದು ಎಂದು ಆರಂಭವಾಗುವ ಈ ಗೀತೆಗಳು ಶರಣ ಕಲ್ಲಯ್ಯನವರ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.

ಶರಣರ ನೆನೆವೆ ನಾನೆದ್ದು ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ನಿತ್ಯ ಕಾಸುನು ಕಬ್ಬಿಣ ನಿತ್ಯ ಕಾಸುನು ಕಬ್ಬಿಣ ವಕ್ಕಲಿಗೆ ಬಿತ್ತು ಉತ್ತು ಕೆಲಸಗಾರೆಕೆ ಬಿತ್ತು ಉತ್ತೋ ಕೆಲಸಗಾರೇಕೆ ಸಣ್ಣ ಗುಡಿಸಲ ಮುಂದ ಮಣ್ಣಿನ ಒಲೆ ಹೂಡಿ ಸಣ್ಣ ಗುಡಿಸಲ ಮುಂದೆ ಮಣ್ಣಿನ ಒಲೆ ಹೂಡಿ ತಣ್ಣಗಾಳಿ ಊದೋ ಕುಲುಮೆಯ ತಣ್ಣಗಾಳಿ ಊದೋ ಕುಲುಮೆಯ ಇಟ್ಟಕೊಂಡು ಮಣ್ಣಿಗೆ ಬೆವರ ಸುರಿಸೋನು ಎಂದು ಅವರ ವೃತ್ತಿಯ ಬಗ್ಗೆ  ಹೇಳಿದ್ದಾರೆ.

ಮಣ್ಣಿಗೆ ಬೆವರ ಸುರಿಸೋನು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಎತ್ತು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಶುದ್ಧ ಕಾಯಕವ ಮಾಡುತ್ತ ಶುದ್ಧ ಕಾಯಕವ ಮಾಡುತ್ತ ಕಲ್ಲಯ್ಯ ಇದ್ದ ಅನುಭಾವ ಹೇಳ್ಯನ ಎಂಬ ಕಾಯಕ ತತ್ವ ನೆನಪಿಸುತ್ತದೆ.

ಇದ್ದ ಅನುಭಾವ ಹೇಳ್ಯಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಗುಣದಲ್ಲಿ ಗಣ್ಯ ಗುರುತನದ ಗುಣದಲ್ಲಿ ಗಣ್ಯ ಗುಣತನದ ಕಲ್ಲಯ್ಯ ಜನರಲ್ಲಿ ಬೆರೆತಾ ದಿನ ಜನನಲ್ಲಿ ಬೆಳೆತಾ ದಿನ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಬರಿಮೈಲಿ ಕುಳಿತು ಬಡಿವನು. ಎಂದು ಬಡತನವಿದ್ದರೂ ಜನರೊಂದಿಗೆ ಬೆರೆತು ಬೆಳೆದರು.


ಬರಿಮೈಲಿ ಕುಳಿತು ಬಡಿವನು ಕಬ್ಬಿಣ ಉಲಿಮೆಗೆ ಬೇಕಾದ ಕುಡುಮುಂಜಿ ಉಲುಮೆಗೆ ಬೇಕಾದ ಕುಡುಮುಂಜಿ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ತಾಳ ಹಾಕಿದಂಗ ತಿಳಿಯುದಿ ತಾಳ ಹಾಕಿದಂಗ ತಿಳಿಯುದಿ ಕಲ್ಲಯ್ಯ ಬಾಳ ಬೀಸಣಕಿ ಆಗ್ಯಾಳ ಬಾಳ ಬೀಸಣಕಿ ಎಂದು ಅವರ ಸತಿಯ ಬಗ್ಗೆ  ಮಾಹಿತಿ ನೀಡಿದ್ದಾರೆ.

ಆಗ್ಯಾಳ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಕೊಂಡ ಸುತ್ತಿಗೆ ಯ ಹಣಿವಾಳು ಕೊಂಡು ಸುತ್ತಿಗೆಯ ಹಣಿವಾಳು ಕಾಸಿದ್ದು ಗಂಡ ತೋರಿಸಿದಂಗ ಕೈಸನ್ನೆ ಗಂಡ ತೋರಿಸಿದಂಗ ಕೈಸನ್ನೆ ಸುತ್ತೂರು ಆಳುಗಳು
ಹೊತ್ತಂದ ದಿಂಡಿಗೆ ಸುತ್ತೂರು ಆಳುಗಳು ಹೊತ್ತಂದ ದಿಂಡಿಗೆ ಎತ್ತಿನ ಗಾಡಿಗಳಿಗೆಲ್ಲ ಎತ್ತಿನ ಗಾಡಿಗಳಿಗೆಲ್ಲ ಕಲ್ಲಯ್ಯ ಮುತ್ತಿನಂಗ ಬಳೆ ತುಳಿಸುವನು ಮುತಿನಂಗ ಬಳೆ ತೊಡಿಸುವನು ಎಂದು ಕಾವ್ಯಾತ್ಮಕವಾಗಿ ಕಲ್ಲಯ್ಯನ ಕೆಲಸಕ್ಕೆ ಅವರ ಸತಿ ಕೈಗೂಡಿಸಿದ  ಬಗ್ಗೆ  ವರ್ಣನೆ ಮಾಡಿರುವರು.

ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ನಾಯಕರ ಸುದ್ದಿ ಹೇಳುತ್ತ ನಾಯಕರ ಸುದ್ದಿ ಹೇಳುತ್ತ ಕಲ್ಲಯ್ಯ ಹಾಯಾಗಿದ್ದಾನ ಊರಲ್ಲಿ ಹಾಯಾಗಿದ್ದಾನ, ಊರಲ್ಲಿ ಮೂತಾಳ ಕೂರಿಗೆ ಪ್ರೀತಿಲೇ ಬಳೆತೊಳಿಸಿ ಮೂತಾಳ ಊರಿಗೆ ಪೀತಿಲೆ ಬಳೆತೊಳಿಸಿ ಭೂತಾಯಿ ಬೆಳೆಯ ಬೆಳೆಸೆಂದು ಭೂತಾಯಿ ಬೆಳೆಯ ಬೆಳೆಸೆಂದು ಒಕ್ಕಲಿಗೆ ತಾತಾಳ ಹಿಡಿದು ನಿಡಿಯುವನು ತಾತಾಳ ಹಿಡಿದು ನೀಡುವನು ಕಡೆತಾಳ ಆಯರಿಗೆ ಅಡತಾಳ ಅರಸಂಗೆ ಕಡೆತಾಳ ಆಯರಿಗೆ ಎಡತಾಳ ಅರಸಂಗೆ ನಡುತಾಳ ನಿನ್ನ ಕರ್ಮಕ್ಕೆ ನಡುತಾಳ ನಿನ್ನ ಕರ್ಮಕ್ಕೆ ಎಂದಹೇಳಿ ಕೊಡುವ ಕೂರಿಗೆ ಯವಕ್ಕಲಿಗೆ ಕೊಡುವ ಕೂರಿಗೆ ಯಾವ ಒಕ್ಕಲಿಗೆ ಮಮತೆಯ ಮಾತಿಂದ ನಿಜತೆಯ ನಿಲುವಿಂದ ಮಮತೆಯ ಮಾತಿಂದ ನಿಜತೆಯ ನೆಲುವಿಂದ ಘನತೆಯ ದುಡಿಮೆ ನಲಿವಿಂದ ಘನತೆಯ ದುಡಿಮೆ ನಲಿವಿಂದ ಕಲ್ಲಯ್ಯ.

ಕಲ್ಲಯ್ಯ ಕಾಯಕದ ಜೊತೆಯಲ್ಲಿ ಬಾಂಧವ್ಯ ಬೆಸೆಯುವ, ಊರಿಂದೂರಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿಯೂ ಕಾರ್ಯ ಮಾಡಿದ್ದರು ಎಂಬುದನ್ನು ಈ ಮುಂದಿನ ಪದ ತಿಳಿಸುತ್ತದೆ.

ಜನತೆಗೆ ಬೇಕಾದ ಶರಣಾದ ಜನತೆಗೆ ಬೇಕಾದ ಶರಣಾದ ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು
ಬಿತ್ತಿ ಬೆಳೆವವರ ಬಗೆಯನ್ನು ಬಿತ್ತಿ ಬೆಳೆಯವರ ಬಗೆಯನ್ನು ಕಲ್ಲಯ್ಯ ಎತ್ತಿ ಹೇಳುತಲಿ ಕಬ್ಬಿಣ ಎತ್ತು ಹೇಳುತವ ಕಬ್ಬಿಣ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆದ ಕಾಳಕಡ್ಡಿ ತರುವನು ಎಂಬ ಮಾತಲ್ಲಿ ಹಿಂದಿನ ಕಾಲದಲ್ಲಿ ರೈತನಿಗೆ ವ್ಯವಸಾಯಕ್ಕೆ  ಸಹಾಯ ಮಾಡುವ ಕುಲಸ್ತರಿಗೆ ಕಾಳು ಕಡಿ ನೀಡುವ ವ್ಯವಸ್ಥೆ ಕಾಣಬಹುದು.

ಬೆಳೆದ ಕಾಳಕಡ್ಡಿ ತರುವನು ಕಲ್ಲಯ್ಯ ಗುಳಿ ಮಾಡಿಡುವ ಸಂಸಾರಕೆ ಗುಳಿ ಮಾಡಿಡುವ ಸಂಸಾರಕೆ ತಂದೆಲ್ಲ ಕಾಳನ್ನು ತಂದೆಗೆಂದು ಬಗೆಯದೆ ತಂದೆಲ್ಲ ಕಾಳನ್ನು ತಂದೆಂದು ಬಗೆಯದೆ ನೊಂದ ಬಡವರಿಗೆ ಕೊಡುವನು ನೊಂದ ಬಡವರಿಗೆ ಕೊಡುವನು ಊರಲ್ಲಿ ಒಂದಾಗಿ ನಡೆದ ಎಡಬಡಕೆ ಒಂದಾಗಿ ನಡೆದ ಎಡೆಬಲಕೆ ಗುಮ್ಮ ಶಿವ ಶರಣಾಗಿ ಹುಮ್ಮದಿ ದುಡಿಯುತ್ತ ಗುಮ್ಮ ಶಿವ ಶರಣಾಗಿ ಹುಮ್ಮನದಿ ದುಡಿಯುತ್ತ ಕಮ್ಮೆಲರಾದ ಶಿವಪದಕೆ ಕಮ್ಮೆಲರಾದ ಶಿವಪದಕೆ ಕಲ್ಲಯ್ಯ ಕಮ್ಮಾರ ಕಟ್ಟೆ ಕಮ್ಮಟಕೆ ಕಮ್ಮಾರ ಕಟ್ಟೆ ಕಮ್ಮಟಕೆ ಕುಲುಮೆಟ್ಟಿಗೆ ಬರುವ ಬಲಹೀನ ಜನರಿಗೆ ಕುಲುಮೆಟ್ಟಿಗೆ ಮೆಟ್ಟಿಗೆ ಬರುವ ಬಲಹೀನ ಜನರಿಗೆ ನಲುಮೆಯ ಮಾತು ಹೇಳುತ್ತ ನಲುಮೆಯ ಮಾತು ಹೇಳುತ್ತ ಬಾಳಲ್ಲಿ ಬಲ್ಮೆ ತುಂಬುವ.
ನೋಡಿ ಕಲ್ಲಯ್ಯ ತಾನು ಪಡೆದ ದವಸದಲ್ಲಿ ಇತರರಿಗೂ ನೀಡಿ ಅನ್ಯೋನ್ಯವಾಗಿ ಬಾಳಿ ಶಿವಶರಣರ ತತ್ವಗಳನ್ನು ಎತ್ತಿ ಹಿಡಿದಿದ್ದರು.

ಬದುಕಿಗೆ ಬಲ್ಮೆ ತುಂಬುವ ಬದುಕಿಗೆ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ನಗುನಗುತಾ ದುಡಿದು ಊರಲ್ಲಿ ನಗುನಗುತಾ ದುಡಿದು ಊರಲ್ಲಿ ಬಯಲಾಗ ಹಗಲಿರಳು ಜನರ ನಡುವಲ್ಲಿ ಹಗಲಿರುಳು ಜನರ ನಡುವಲ್ಲಿ ಕಲ್ಯಾಣ ಬಸವಣ್ಣ ಕಾರುಣ್ಯ ಪಥವನು ಕಲ್ಯಾಣ ಬಸವನ ಕಾರುಣ್ಯ ಪಥವನು ದಾರಿ ಹೋಕರಿಂದ ತಿಳಿದಾನ ದಾರಿ ಹೋಕರಿಂದ ತಿಳಿದಾನ ಕಲ್ಲಯ್ಯ ಎಲ್ಲರಿಗೆ ತಿಳಿಸಿ ನಲಿದಾನ ಎಲ್ಲರಿಗೆ ತಿಳಿಸಿ ನಲಿದಾನ ಬಸವನ ಕಾಣುವ ವ್ಯಸನದಲಿ ಕಲ್ಲ ಬಸವನ ಕಾಣುವ ವ್ಯಸನದಲಿಕಲ್ಲ ತುಸುಹೊತ್ತು ಚಿಂತೆ ಮಾಡ್ಯಾನ ತುಸುಹೊತ್ತಿ ಚಿಂತೆ ಮಾಡಯಾನ.ಎಂಬ ಮಾತಲ್ಲಿ ಕಲ್ಲಯ್ಯ ಬಸವೇಶ್ವರರ ಬಗ್ಗೆ ಮಾಹಿತಿಯನ್ನು ತಿಳಿದು ಅವರನ್ನು ಕಾಣಲು ಹಂಬಲಿಸಿದ ಮಾಹಿತಿ ತಿಳಿಯುತ್ತದೆ.

ಸೊನ್ನಲಿಗೆಯ ಸಿದ್ದರಾಮ ರ ಭೇಟಿಯಾದ ಬಗೆಯನ್ನು ‌ಮುಂದಿನ ಪದ ನೀಡುತ್ತದೆ.

ಜನರಲ್ಲಿ ಹೊಸಮತ ಸುದ್ದಿ ತಿಳಿಸಯಾನ ಹೊಸಮತದ ಸುದ್ದಿ ತಿಳಿಸಯಾನ ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ವರತೆಯ ನೀರುಬ ಬತ್ತಿತ್ತು ವರತೆಯ ನೀರು ಬತ್ತಿತ್ತು ಜನರೆಲ್ಲ ಸರತಿಯಲಿ ಗುಳಿವು ಹೊರಟಿತ್ತು ಜನರೆಲ್ಲ ಸರತಿಯಲಿ ಗುಳೆವು ಹೊರಟಿತ್ತು ಎಲ್ಲಿಗೆ ಹೋಗುವುದೆಂದು ಬಲ್ಲವರ ಒಳಗೂಡಿ ಎಲ್ಲಿ ಹೋಗುವುದೆಂದು ಬಲ್ಲವರ ಒಡೆಗೂಡಿ ಕಲ್ಲಯ್ಯ ಚಿಂತೆ ಮಾಡ್ಯಾನ ಕಲ್ಲಯ್ಯ ಚಿಂತೆ ಮಾಡ್ಯಾನ ಗುಡಿ ಮುಂದ ಸೊನ್ನಲಿಗೆ ಸ್ವಾಮಿ ಬಂದಾನ ಸೊನ್ನಲಗಿ ಸ್ವಾಮಿ ಬಂದಾನ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಬಂದ ಜಳೆಬಿಟ್ಟು ಸನ್ಯಾಸಿ ಬಂದ ಜಳೆಬಿಟ್ಟ ಸನ್ಯಾಸಿ ಜನರಿಗೆ ಅಂದು ಶರಣೆಂದು ನಿಂತಾನ. ಅಂದು ಶರಣೆಂದು ನಿಂತಾನ ಕಲ್ಯಾಣ ಬಸವನ ಮಹಿಮೆಯ ಹೇಳುತ್ತ ಕಲ್ಯಾಣ ಬಸವ ನ ಮಹಿಮೆಯ ಹೇಳುತ್ತ ಎಲ್ಲವನು ತಿಳಿಸಿ ನಿಂತಾನ ಎಲ್ಲವನು ತಿಳಿಸಿ ನಿಂತಾನ ಸೊನ್ನಲಗಿ ಶಿವಸಿದ್ದರಾಮನ ಕಾರ್ಯವ ಶಿವಸಿದ್ದರಾಮನ ಕಾರ್ಯವ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಬರದಲ್ಲು ಕೆಲಸ ಕೊಟ್ಟಾನ ಬರದಲ್ಲು ಕೆಲಸ ಕೊಟ್ಟಾನ ದುಡಿವ ವರಿಗೆ ಚರದೇವ ಎನಿಸಿಕೊಂಡಾನ ಚರದೇವ ಎನಿಸಿಕೊಂಡಾನ ಒಡ್ಡರ ಪಡೆಯುಂಟು ಗುಡ್ಡಾರ ಗುಂಪುಂಟು ಒಡ್ಡಾರ ಪಡೆಯುಂಟು ಗುಡ್ಡಾರ ಗುಂಪುಂಟು ಪಡ್ಡೆ ಜನರು ಸೇರಿ ನಿಂತಾರ ಪಡ್ಡೆ ಜನ ಸೇರಿ ನಿಂತಾರ ಸಿದ್ದೇಶ ಮಡ್ಡಿ ಹೊಲದಲ್ಲಿ ಮಡಿಹೂಡಿ ಮಡ್ಡಿ ಹೊಲದಲ್ಲಿ ಮನೆಹೂಡಿ ಕಾಯಕಜೀವಿ ವಿಗೆ ನಾಯಕ ಸಿದ್ದೇಶ.
ಕಾಯಕ ಜೀವಿಗೆ ನಾಯಕ ಸಿದ್ದೇಶ ಸಾಯಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಕೆರೆಕಟ್ಟಿ ಪಾಯ ಹಾಕ್ಯಾನೆಂದು ಸನ್ಯಾಸಿ ಪಾಯ ಹಾಕ್ಯಾನೆಂದ ಸನ್ಯಾಸಿ ಕನ್ನಡದ ಕಲ್ಯಾಣದ ಮಹಿಮೆಯ ಕೇಳಿದ ಕಲ್ಲಯ್ಯ ಕಲ್ಯಾಣದ ಮಹಿಮೆಯ ಕೇಳಿದ್ದ ಕಲ್ಲಯ್ಯ ಎಲ್ಲ ಮಾಹಿತಿಯ ತಿಳಿದಾನ ಎಲ್ಲ ಮಾಹಿತಿಯ ತಿಳಿದಾನ ಸಮಯದಿ ಬಲ್ಲ ಸನ್ಯಸಿಯ ನುಡಿಯಲ್ಲಿ ಬಲ್ಲ ಸನ್ಯಾಸಿಯ ನುಡಿಯಲ್ಲಿ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಮರವೊಂದು ಕಂಡಂತೆ ಬಿಸಿಲಲ್ಲಿ ಮರವೊಂದು ಕಂಡಂತೆ ಬಿಸಿಲಲ್ಲಿ ಕಲ್ಲಯ್ಯ ಹೊರಟ ಸೊನ್ನಲಿಗೆ ಕಡೆಗಾನ ಹೊರಟ ಸೊನ್ನಲಿಗೆ ಕಡೆಗಾಗ ಕಾಳಿಕಾಂಬೆಯ ಭಕ್ತ ಕಾಳವೆ ಜೊತೆಯಲ್ಲಿ ಬಾಳ ಕಟ್ಟಲು ನಡೆದ ಗೊಂಟೋತು ಬಾಳ ಕಟ್ಟಲು ನಡೆದ ಗಂಟೋತು ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸೊನ್ನಲಗಿ ಊರಲ್ಲಿ ಮನೆಯ ಸಿದ್ದರಾಮ ಕನ್ನಲಿಗೆ ಊರಲ್ಲಿ ಮನೆಯ ಸಿದ್ದರಾಮ ಹೊನ್ನ ಕಳಸಿಟ್ಟು ಗುಡಿಕಟ್ಟಿ ಹೊನ್ನ ಕಳಸಿಟ್ಟು ಗುಡುಕಟ್ಟಿ ಕೆರೆಕಟ್ಟಿದ್ದ ಧನ್ಯ ಶಿವ ತಾನಾಗಿ ಮೆರೆದ ಇದ್ದ ಧನ್ಯಶಿವನಾಗಿ ಮೆರೆದಿದ್ದ ಊರ ಹಳ್ಳದ ಮುಂದೆ ನೂರಾರು ಒಡ್ಡರು ಊರ ಹಳ್ಳದ ಮುಂದೆ ನೂರಾರು ಒಡ್ಡರು ಹಾರೆಗುದಲೆ ಹಿಡಿದು ದುಡಿಯೋದು ಹಾರೆಗುದಲೆ ಹಿಡಿದು ದುಡಿಯೋದು ಕಂಡಾನ ದೂರದಲಿ ಬರುತಾ ಕಲ್ಲಯ್ಯ ದೂರದಲಿ ಬರುತಾ ಕಲ್ಲಯ್ಯ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕರೆ ಮುಗಿದು ನಿಂತ ಸಿದ್ದೇಶ ಕರೆ ಮುಗಿದು ನಿಂತ ಸಿದ್ದೇಶ ಶರಣನ ಹರನಂತೆ ಕಂಡು ಕೈಮುಗಿದ ಹರನಂತೆ ಕಂಡು ಕೈಮುಗಿದ ದರ್ಶನಕ್ಕೆ ಬಂಧನವ ಹರುಷದಿ ಮಾತಾಡಿ ದರ್ಶನಕ್ಕೆ ಬಂಧನವ ಹರುಷದಿ ಮಾತನಾಡಿಸಿ ಗುರುತು ಪರಿಚಯ ಕೇಳಿದನ ಗುರುತು ಪರಿಚಯ ಕೇಳಿದನ ಸಿದ್ದರಾಮ ವರ್ಷವೆಲ್ಲ ದಾರಿ ಕಾಯ್ದಂತೆ ವರ್ಷವೆಲ್ಲ ದಾರಿ ಕಾದಂತೆ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ಮೌನಾಗಿ ಎಲ್ಲ ತಿಳಿದಾನ ಮೌನಾಗಿ ಎಲ್ಲ ತಿಳಿದಾನ ಸಿದ್ದೇಶ ತಾಣ ತೋರ್ಯಾನ ಕೆಲಸಕ್ಕ ತಾಣ ತೋರ್ಯಾನ ಕೆಲಸಕ್ಕ ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ಊಟೋಪಚಾರ ಮಾಡಿಸಿ ಊಟೋಪಚಾರ ಮಾಡಿಸಿ ಕಲ್ಲೆಗೆ ಕೂಟಸ್ಥ ಕೆಲಸ ಒಪ್ಪಿಸಿದ ಕೂಟಸ್ತ ಕೆಲಸ ಒಪ್ಪಿಸಿದ ಬೊಮ್ಮಯ್ಯ ಗಣದಲ್ಲಿ ಸಿಮ್ಮಲಿಗೆ ಶರಣರು ಬೊಮ್ಮಯ್ಯನ ಗಣದಲ್ಲಿ ಸಿಮ್ಮಲಿಗೆ ಶರಣರು ಕಮ್ಮಾರ ಕಲ್ಲಯ್ಯ ಸೇರ್ಯಾರ.

ಕಲ್ಲಯ್ಯ ನಾಡ ಶಿಲ್ಪಿಯಾಗಿ ಬೆಳೆದ ಪರಿಯನ್ನ ಜನಪದರು ಹೀಗೆ ಹಾಡಿದ್ದಾರೆ.
ಕಮ್ಮಾರ ಕಲ್ಲಯ್ಯ ಸೇರ್ಯಾರ ದಿನನಿತ್ಯ ಹಮ್ಮಿಲೆ ಕೆಲಸ ಮಾಡ್ಯಾರ ಹಮ್ಮಿಲೆ ಕೆಲಸ ಮಾಡ್ಯಾರ ಶಿಲ್ಪತನ ವಿದ್ಯೆಯ ಸಂಗಡ ಬಂದಿತ್ತು ಶಿಲ್ಪತನವಿ ವಿದ್ಯೆಯು ಸಂಗಡ ಬಂದಿತು ಕಲ್ಪಿತಾಯುತವ ರಚಿಸುತ ಕಲ್ಪಿತಾಯುಧವ ರಚಿಸುತ ಕಲ್ಲಯ್ಯ ಶಿಲ್ಪಿ ಸಿದ್ದೇಶನ ಮನಗೆದ್ದ ಶಿಲ್ಪಿ ಸಿದ್ದೇಶನ ಮನಗೆದ್ದ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ವರಸಿಸಿದ್ದರಾಮಗೆ ಜೊತೆಯಾದ ವರ ಸಿದ್ದರಾಮಗೆ ಜೊತೆಯಾದ ಕಲ್ಲಯ್ಯ ಬರದಿಂದ ಕೆಲಸ ಮಾಡಿದ.

ಬರದಿಂದ ಕೆಲಸ ಮಾಡಿದ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಎದ್ದು ಕಂಡ ಶರಣ ಕಲ್ಲಯ್ಯ ಎದ್ದು ಕಂಡ ಶರಣ ಕಲ್ಲಯ್ಯ ದಿನನಿತ್ಯ ಶುದ್ಧ ಕಾಯಕ ಹೆಸರಾದ ಶುದ್ಧ ಕಾಯಕ ಹೆಸರಾದ ಕುಲವರತಿಯಲಿಕಲ್ಲ ಛಲದಂಕ ಮಲ್ಲ ಕುಲವರತಿಯಲಿಕಲ್ಲ ಚಲದಂಕ ಮಲ್ಲನು ಒಲವಿಂದ ದುಡಿದ ಹಗಲಿರುಳು.
ಒಲವಿಂದ ದುಡಿದ ಹಗಲಿರುಳು ಸಿದ್ದೇಶನ ಬಲಗಯ್ಯ ಭಂಟ ತಾನಾದ ಬಲಗಯ್ಯ ಭಂಟ ತಾನಾದ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ನಾಡ ಶಿಲ್ಪಿ ಎಂದು ಹೆಸರಾದ.

ನಾಡ ಶಿಲ್ಪಿ ಎಂದು ಹೆಸರಾದ ಕಲ್ಲಯ್ಯ ನೋಡಿ ಹೊಗಳಿದ ಸಿದ್ದೇಶ ನೋಡಿ ಹೊಗಳಿದ ಸಿದ್ದೇಶ ದೇವರಥ ಶಿಲ್ಪದಲಿ ಜೀವನದ ಕೀಲಿಟ್ಟು ದೇವರಥ ಶಿಲ್ಪದಲಿ ಜೀವನ ಕೀಲಿಟ್ಟು ಕಾವಲಾಗಿ ನಿಂತ ಜಾತ್ರೆಯಲಿ ಕಾವಲಾಗಿ ನಿಂತ ಜಾತ್ರೆಯಲಿ ಕಲ್ಲಯ್ಯ ಸೇವೆ ಮಾಡಿದ ಜನ ಮೆಚ್ಚುವಂತೆ ಸೇವೆ ಮಾಡಿದ ಜನ ಮೆಚ್ಚುವಂತೆ ಕಲ್ಲಯ್ಯ ಮುಂದಾಗಿ ಬುಲ್ಲೇಶ ಹಿಂದಾಗಿ ಕಲ್ಲಯ್ಯ ಮುಂದಾಗಿ ಬಿಲ್ಲೇಶ ಹಿಂದಾಗಿ ಪಲ್ಲಕ್ಕಿ ಹೊತ್ತು ನಡೆದಾರ ಪಲ್ಲಕ್ಕಿ ಹೊಡೆತು ನಡೆದಾರ ಮಡಿಹಾಸಿ ಎಲ್ಲಾ ಜನ ನಿಂತು ನಮಿಶಾರ ಎಲ್ಲಾ ಜನ ನಿಂತು ನಮಿಶಾರ ಜಯಜ ಜಯ ಎನ್ನುತ್ತ ಜೈಕಾರ ಹಾಕ್ಯಾರ ಜಯ ಜಯ ಎನ್ನುತ್ತ ಜೈಕಾರ ಹಾಕೆರ ಜಯ ಮಲ್ಲಿನಾಥ ಎನುತೆಲ್ಲ ಜಯ ಮಲ್ಲಿನಾಥ ಎನುತೆಲ್ಲ ಜನಸೇರಿ ಜಯಸಿದ್ದೇಶ್ವರ ಎಂದಾರ ಜಯಸಿದ್ದೇಶ್ವರ ಎಂದಾರ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಸಾಲಾಗಿ ಕುಂತ ಜನಕೆಲ್ಲ ಸಾಲಾಗಿ ಕುಂತ ಜನಕೆಲ್ಲ ಉಣಶಾರ.
ಮ್ಯಾಲೆ ಹುಳಿಬಾನ ನೀಡುತ್ತ ಮ್ಯಾಲೆ ಹುಳಿಬಾನ ನೀಡುತ್ತ.

ಶ್ರಿಶೈಲಕ್ಕೆ ಪಾದಯಾತ್ರೆ ಹೊರಟ ಕಲ್ಲಯ್ಯನ ಸಂಭ್ರಮವನ್ನು ಈ ಮುಂದಿನಂತೆ ವರ್ಣಿಸಲಾಗಿದೆ.
ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಹೊರಳಿತು ಹೊತ್ತು ಚಿಗುರೆಡೆಗೆ ಹೊರಳಿತು ಹೊತ್ತು ಚಿಗುರೆಡೆಗೆ ಶ್ರೀಶೈಲಗೆ ತೆರಳಲು ನಿಂತಾರ ಭಕ್ತರು ಶ್ರೀಶೈಲೆಗೆ ತೆರಳ ಲು ನಿಂತಾರ ಭಕ್ತರು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ಕಂಬಿ ಜೊತೆ ಹೊರಟ ಕಲ್ಲಯ್ಯ ಕಂಬಿಜ ಕಂಬಿ ಜೊತೆ ಹೊರಟ ಕಲ್ಲಯ್ಯ ದೊಂದುಬೆ ಹೊರಟಂಗ ಹೂಕಡೆಗೆ ದುಂಬಿ ಹೊರಟಂಗ ಹೂಕಡೆಗೆ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಬರುತೀವಿ ನಿನ್ನ ದರ್ಶನಕ ಬರುತೀವಿ ನಿನ್ನ ದರ್ಶನಕ ಎನ್ನುತ ಬೆರೆತೋದ ಕಲ್ಲಯ್ಯ ಭಕ್ತರನು ಬೆರೆತೋದ ಕಲ್ಲಯ್ಯ ಭಕ್ತರನು ನಿತ್ಯ ದಾರಿ ನಡೆದು ಹೊತ್ತು ಹೋದಲ್ಲಿ ಉಳಿದು ನಿತ್ಯ ದಾರಿಯ ನಡೆದು ಹೊತ್ತು ಹೋದಲ್ಲಿಉಳಿದು ಸತ್ಯಶಿವ ನೆನೆದು ಸಾಗ್ಯಾರ ಸತ್ಯಶಿವ ನೆನೆದು ಸಾಗ್ಯಾರ ದಾರಿಯಲ್ಲಿ ಸುತ್ತ ಸುತ್ತಹುಬಳ್ಳಿ ಕಾಣುತ್ತ.

ಸುತ್ತ ಹೂಬಳ್ಳಿ ಕಾಣುತ್ತ ಎತ್ತೆತ್ತ ನೋಡಿದರ ಎತ್ತರದ ಕರಿಗುಡ್ಡ ಎತ್ತೆತ್ತ ನೋಡಿದರ ಎತ್ತರದ ಕಡಿಗುಡ್ಡ ಮುತ್ತಕೊಂಡವಲ್ಲಿ ಪಶುಭಕ್ತಿ ಮುತ್ತಿಕೊಂಡವಲ್ಲಿ ಪಶುಭಕ್ತಿ ಅಲ್ಲಲ್ಲಿ ಒತ್ತಿ ಹರಿತಾವ ತಿಳಿನೀರ ಒತ್ತಿ ಹರಿತಾವ ತಿಳಿನಾರ ಶಿವಭಕ್ತ ಮಲ್ಲಯ್ಯಶಿವ ಶಿವಶಿವ ಎನ್ನುತ್ತ ಶಿವಭಕ್ತ ಶಿವಭಕ್ತ ಕಲ್ಲಯ್ಯ.
ಶಿವ ಶಿವ ಎನ್ನುತ್ತ ಮಲ್ಲಯ್ಯನಗಂಗ್ಯಾಲ ವೈದಾನ ಮಲ್ಲಗ್ಯಾಲ ವೈದಾನ ಮಲೈ ಮಲ್ಲಯ್ಯಗ್ಯಾಲ ವೈದಾನ ಶ್ರೀಶೈಲಕೆ ಬಲ್ಲ ಶರಣಾಗಿ ನಿಂತಾನ ಬಲ್ಲ ಶರಣಾಗಿ ನಿಂತಾನ ಜೋಡಾದ ಐಗಳು ತೋಡಿ ಹೇಳುತಿಹರು ಜೋಡಾದ ಐಗಳು  ತೋಡಿ ಹೇಳುತಿಹರು ರೂಢಯ ಮಾತು ಆಡುತ್ತ ರೂಢಯ ಮಾತು ಆಡುತ್ತ ದಾರಿಯಲಿ ಹಾಡಶಾರ ಕಲ್ಲನ ಕರೆ ಕರೆದು ಹಾಡಶಾರ ಕಲ್ಲನ ಕರೆ ಕರೆದು ಸುತ್ತ ಮಹಾಗಡ್ಡ ಎತ್ತರದ ಗಿಡಮರ ಸುತ್ತ ಮಹಾಗುಡ್ಡ ಎತ್ತರದ ಗಿಡಮರ ಚಿತ್ತ ಬಂದೆಳೆಗೆ ಹಾರುವ ಚಿತ್ತ ಬಂದೆಳೆಗೆ ಹಾರುವ ಗಣ ಉತ್ತುಂಗ ತಾಣ ಶಿವಸದನ ಉತ್ತುಂಗ ತಾಣ ಶಿವಸದನ.
ಶ್ರೀಶೈಲದ ದೇಗುಲ ಕಂಡ ಕಲ್ಲಯ್ಯ ಅಚ್ಚರಿಗೊಂಡ ಪರಿಯನ್ನು ಈ ಮುಂದೆ ಬಣ್ಣಿಸಿದ್ದಾರೆ.

ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಸುಂದರಲಿಂಗ ಕಂಡಾನ ಸುಂದರಲಿಂಗ ಕಂಡಾನ ಗುಡ್ಡದಲಿ ತಂದೆ ಮಲ್ಲಯ್ಯನೆಂದು ನಮಿಶಾನ ತಂದೆ ಮಲ್ಲಯ್ಯನೆಂದು ನಮಿಶಾನ ಬೇಡುವಜನ ಜನವಿತ್ತು ಹಾಡುವರ ಗುಂಪಿತ್ತು ಬೇಡುವ ಜನವಿತ್ತು ಹಾಡುವರ ಗುಂಪಿತ್ತು ನೋಡಿ ನಲಿವವರ ಬಳಗೆ ಇತ್ತು ನೋಡಿ ನಲಿವವರ ಬಳಗಿತ್ತು ಗುಡಿಯಲ್ಲಿ ಓಡಾಡುತ ಕಂಡ ಕಲ್ಲಯ್ಯ ಓಡಾಡುತ ಕಂಡ ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಹಾಡ ಕೇಳಿ ಮೆಚ್ಚಿದ ಸಿದ್ದೇಶ ಹಾಡು ಕೇಳಿ ಮೆಚ್ಚಿದ ಸಿದ್ದೇಶನ ಗುಡಿಯಲ್ಲಿ ಮೂಡಿಗೊಳಗಾಗಿತ್ತು ಜನ ಮೂಡಿಗೊಳಗಾಗಿತ್ತು ಜನ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕೂಡಿಸಿದ್ದಾನ ಜೊತೆ ಉಳಿದಾನ ಕೂಡಿಸಿದ್ದಾನ ಜೊತೆ ಉಳಿದಾನ ಗಿರಿಯಲ್ಲಿ ನೋಡ ನೋಡಿ ದಿನ ಕಳಿದ ನ ನೋಡ ನೋಡಿ ದಿನ ಕಳೆದಾನ ಹೊಳ್ಳಿ ಬಂದರಿಗೆ ಒಳ್ಳೆ ಕಾರ್ಯವ ಮಾಡಿ ಹೊಳ್ಳಿ ಬಂದೂರಿಗೆ ಒಳ್ಳೆ ಕಾರ್ಯವ ಮಾಡಿ ಹಳ್ಳಿಯಲಿ ಬೆಳೆಸಾನ ಭಕ್ತಿಯ ಎಂಬುದಾಗಿ ಕಲ್ಲಯ್ಯ ಹಳ್ಳಿಯಲ್ಲಿ ಭಕ್ತಿ ಚಳುವಳಿಯ ಆರಂಭಮಾಡಿದ ಬಗೆಯ ಹೇಳಿರುವರು.


ಹಳ್ಳಿಯಲಿ ಬೆಳೆಸಾನ ಭಕ್ತಿಯ ಪ್ರೀತಿಯಲಿ ತಳ್ಳಿ ಹಾಕಿ ಜಾತಿ ಭೇದವನು ತಳ್ಳಿಹಾಕಿ ಜಾತಿ ಭೇದವನು ಬಂದವರ ಬಾಯನುತ ನಿಂದವರ ಕೂಡೆನುತ ಬಂದವರ ಬಾಯನುತ ನಿಂದವರ ಕೂಡೆನುತ ನೊಂದವರ ಕಷ್ಟಕ್ಕೆ ಆಗ್ಯಾನ ನೊಂದವರ ಕಷ್ಟಕ್ಕೆ ಆಗ್ಯಾನ ಕಲ್ಲಯ್ಯ ಹೊಂದಿಸಿ ಭಕ್ತಿ ಊರಲ್ಲಿ ಹೊಂದಿಸಿ ಭಕ್ತಿ ಊರಲ್ಲಿ ಭಕ್ತಿಯಲ್ಲಿ ದಾಸೋಹ ಯುಕ್ತಿಯಲಿ ಕಾಯಕ ಭಕ್ತಿಯಲಿ ದಾಸೋಹ ಯುಕ್ತಿಯಲಿ ಕಾಯೋಕ ವಿರಕ್ತಿಯಲಿ ಪಥವ ಹಿಡಿದಾನ ವಿರಕ್ತಿಯ ಪತವ ಹಿಡಿದಾನ ಸೇವೆಯಲ್ಲಿ ಮುಕ್ತಿ ತೋರೋ ಶರಣ ಎನಿ ಶ್ಯಾನ ಮುಕ್ತಿ ತೋರೋ ಶರಣ ಎನಿ ಶ್ಯಾನ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಶುದ್ಧ ಶಿಷ್ಯನಾಗಿ ನಿಂತಾನ ಶುದ್ಧ ಶಿಷನಾಗಿ ನಿಂತಾನ ಕಲ್ಯಾಣದ ಶಿವ ಬೆಳಕ ಹಂಚಿ ಬಾಳಯಾನ ಶಿವ ಬೆಳಕ ಹಂಚಿ ಬಾಳ ನ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ಚಿತ್ತದಲಿ ಶಿವನ ನೆನೆಯುತ್ತ ಚಿತ್ತದಲಿ ಶಿವನ ನೆನೆಯುತ್ತ ಕಲ್ಲಯ್ಯ ಬಿತ್ತಿ ಶರಣರ ನೂಡಿ ಬಯಲಾದ ಬಿತ್ತಿ ಶರಣರ ನುಡಿ ಬಯಲಾದ ಬಿತ್ತಿ ಶರಣು ನುಡಿ ಬಯಲಾದ ಎಂದು ಮುಕ್ತಾಯ ವಾಗುವ ಜನಪದ ಗೀತೆಯು ಶರಣ ಕಲ್ಲಯ್ಯನವರ ಜೀವನ ದರ್ಶನ ಮಾಡುತ್ತದೆ.
ಇಂತಹ ಎಲೆಮರೆಯ ನೂರಾರು ಶರಣರು ನಮ್ಮ ನಾಡಿನಲ್ಲಿ  ಕಾಯಕ ಮಾಡುತ್ತಾ  ಭಕ್ತಿಯ ರಸಧಾರೆ ಹರಿಸಿರುವರು ಅವರ ಬಗ್ಗೆ ನಮ್ಮ ಜನಪದರು ಹಾಡಿರುವ ಹಾಡುಗಳನ್ನು ಗುರ್ತಿಸಿ ಸಂಶೋಧನೆ ಮಾಡಿ.ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

02 ಫೆಬ್ರವರಿ 2026

ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..


 ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..



ಫೆಬ್ರವರಿ ತಿಂಗಳು ವರ್ಷದ ಉಳಿದ ತಿಂಗಳುಗಳಿಗಿಂತ ವಿಭಿನ್ನ ಮತ್ತು ವಿಶೇಷ. ಪ್ರಕೃತಿಯ ಬದಲಾವಣೆ, ಸಾಂಸ್ಕೃತಿಕ ಮಹತ್ವ ಹಾಗೂ ಕಾಲಗಣನೆಯ ವೈಚಿತ್ರ್ಯದಿಂದಾಗಿ ಇದು ತನ್ನದೇ ಆದ ಆಕರ್ಷಣೆ ಹೊಂದಿದೆ.
ಫೆಬ್ರವರಿ ತಿಂಗಳು ಕೇವಲ 28 ಅಥವಾ 29 ದಿನಗಳನ್ನು ಹೊಂದಿರುವ ವರ್ಷದ ಏಕೈಕ ತಿಂಗಳು. ಸೌರಮಂಡಲದ ಲೆಕ್ಕಾಚಾರದ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ 'ಅಧಿಕ ವರ್ಷ' (Leap Year) ಬರುತ್ತದೆ. ಆಗ ಈ ತಿಂಗಳು 29 ದಿನಗಳನ್ನು ಹೊಂದಿರುತ್ತದೆ. ಈ ವೈಶಿಷ್ಟ್ಯವೇ ಫೆಬ್ರವರಿಯನ್ನು ಇತರ 11 ತಿಂಗಳುಗಳಿಗಿಂತ ವಿಭಿನ್ನವಾಗಿ ನಿಲ್ಲಿಸುತ್ತದೆ.

ಈ ತಿಂಗಳು ಮನೆ ಮಾಲೀಕರಿಗೆ ಖುಷಿಯ ವಿಚಾರವಾದರೆ ಬಾಡಿಗೆದಾರರಿಗೆ ಬೇಸರದ ತಿಂಗಳು.

ಫೆಬ್ರವರಿ ತಿಂಗಳೆಂದರೆ
ಮನೆ ಓನರ್ ಗಳಿಗೆ
ಎಲ್ಲಿಲ್ಲದ ಸಂತಸ|
ಎರಡು ದಿನ  ಮೊದಲೇ
ತುಂಬಿ ಬಿಡುವುದು
ಅವರ ಬೊಕ್ಕಸ ||

ಭಾರತದಲ್ಲಿ ಫೆಬ್ರವರಿ ತಿಂಗಳು ಶೀತಗಾಲದ ಅಂತ್ಯ ಮತ್ತು ವಸಂತ ಕಾಲದ ಆಗಮನದ ಸಮಯ. ಮರದ ಎಲೆಗಳು ಉದುರಿ ಹೊಸ ಚಿಗುರು ಕಾಣಿಸಿಕೊಳ್ಳುವ ಹಾಗೂ  ಹೂವುಗಳು ಅರಳುವ ಸುಂದರ ಕಾಲವಿದು. ಅತಿಯಾದ ಚಳಿಯೂ ಇಲ್ಲದ ವಿಪರೀತ ಸೆಕೆಯೂ ಇಲ್ಲದ ಹಿತಕರವಾದ ಹವಾಮಾನ ಇರುವುದರಿಂದ ಪ್ರವಾಸಕ್ಕೆ ಇದು ಅತ್ಯುತ್ತಮ ಸಮಯ.

ಈ ತಿಂಗಳು  ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನೂ ಹೊಂದಿದೆ
ಫೆಬ್ರವರಿ ತಿಂಗಳಿನಲ್ಲಿ ಹಲವಾರು ಪ್ರಮುಖ ದಿನಾಚರಣೆಗಳಿವೆ.ಅದರಲ್ಲಿ
ಫೆಬ್ರವರಿ 14  ರಂದು ಆಚರಿಸುವ  ಪ್ರೇಮಿಗಳ ದಿನ ಒಂದು.ಅದು ವಿಶ್ವದಾದ್ಯಂತ ಪ್ರೀತಿ ಮತ್ತು ಸ್ನೇಹವನ್ನು ಸಂಭ್ರಮಿಸುವ ದಿನ.

ಕಾತರಿಸುವನು ಅವನು
ಎಂದು ಬರುವುದೋ
ಫೆಬ್ರವರಿ ಹದಿನಾಲಕ್ಕು|
ಅವಳು ಇವನ
ಪ್ರೀತಿ ಸ್ವೀಕರಿಸಿದರೆ
ಅದೇ ದೊಡ್ಡ ಲಕ್ಕು||




ಫೆಬ್ರವರಿ 21 ರಂದು  ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತೇವೆ. ನಮ್ಮ ತಾಯ್ನುಡಿಯ ಮಹತ್ವವನ್ನು ಸಾರುವ ದಿನವು ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವ ದಿನ
  ಫೆಬ್ರವರಿ 28 ರಂದು  ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಸರ್ ಸಿ.ವಿ. ರಾಮನ್ ಅವರು 'ರಾಮನ್ ಎಫೆಕ್ಟ್' ಸಂಶೋಧಿಸಿದ ದಿನದ ನೆನಪಿಗಾಗಿ ಇದನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಇದೇ ತಿಂಗಳಲ್ಲಿ ನಮ್ಮ ನಾಡಿನಲ್ಲಿ ಅನೇಕ ಹಬ್ಬ ಹಾಗೂ ಜಾತ್ರೆಗಳನ್ನು ಆಚರಿಸುತ್ತೇವೆ.
ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಬರುವ 'ಮಹಾಶಿವರಾತ್ರಿ' ಹಬ್ಬವು ಧಾರ್ಮಿಕವಾಗಿ ಈ ಕಾಲಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.

ಇಷ್ಟೆಲ್ಲಾ ಮಹತ್ವದ ಈ ತಿಂಗಳ ಕಂಡರೆ ಕೆಲವರು ಬೇಸರ ವ್ಯಕ್ತಪಡಿಸುವರು.ಅವರೇ ಫೆಬ್ರವರಿ ತಿಂಗಳ 29 ರಂದು ಜನಿಸಿವರು.

ಫೆಬ್ರವರಿ 29 ರಂದು
ಹುಟ್ಟಿದವರ ಪಾಡು
ಹೇಳತೀರದು|
ಅವರ ಹುಟ್ಟು
ಪ್ರತಿ ವರ್ಷ ಬಾರದು||


ಫೆಬ್ರವರಿ ಎಂದರೆ ಕೇವಲ ಒಂದು ತಿಂಗಳಲ್ಲ.ಅದು ಹಳೆಯದನ್ನು ಕಳೆದು ಹೊಸತನಕ್ಕೆ ಸಿದ್ಧವಾಗುವ ಸಂಧಿಕಾಲ. ವರ್ಷದ ಚಿಕ್ಕ ತಿಂಗಳಾದರೂ ಇದು ಹೊತ್ತು ತರುವ ಸಂಭ್ರಮ ಮತ್ತು ಸಾರ್ಥಕತೆ ದೊಡ್ಡದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು

11 ಜನವರಿ 2026

ಜಗದ ಎತ್ತರದ ಹಾಗೂ ಭಾರವಾದ ಶಿಬಲಿಂಗ..


 ಜಗದ ಅತಿ ಎತ್ತರದ ಹಾಗೂ ಭಾರವಾದ ಏಕ‌ ಶಿಲಾ ಶಿವಲಿಂಗ ಬಿಹಾರದ ದೇವಾಲಯವೊಂದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.


ಗ್ರಾನೈಟ್ ಶಿಲೆಯಲ್ಲಿ ಕೆತ್ತಿರುವ ಈ ಲಿಂಗವು‌ 33 ಅಡಿ ಉದ್ದವಿದ್ದು ಬರೊಬ್ವರಿ 210 ಟನ್ ಭಾರವಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಹತ್ತು ವರ್ಷಗಳಿಂದ ಕೆತ್ತನೆ ಮಾಡಿ ಈಗ ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದ ಕಡೆಗೆ ಪಯಣ ಆರಂಭಿಸಿದೆ.ಲಿಂಗವೇ ಈ ಮಟ್ಟದ ದಾಖಲೆಯನ್ನು ಹೊಂದಿದೆ ಎಂದರೆ ಆ ದೇವಾಲಯದ ಬಗ್ಗೆ ನನಗೆ ಇನ್ನೂ ಕುತೂಹಲ ಇದೆ.


ಈ ಬೃಹತ್  ಲಿಂಗದ ಸಾಗಣೆಗೆ 96 ಚಕ್ರದ ಹೈಡ್ರಾಲಿಕ್ ಲಾರಿ ಬಳಸಲಾಗಿದೆ.2100 ಕಿಲೋಮೀಟರ್ ದಾರಿ ಸುಸೂತ್ರವಾಗಿ ಸಾಗಿ ಪ್ರಸಾವಿತ ದೇವಳ ತಲುಪಲಿ ಎಂದು ಆಶಿಸೋಣ.ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರೋಣ.


#sihijeevi #tumkur 

 #harharmahadev #omnamahshivaya 

#Bihar #mahabalipuram #tamilnadupolitics

09 ಜನವರಿ 2026

ನೆಲದ ನಕ್ಷತ್ರ ದೀಪೆಂದರ್ ಗೋಯಲ್..

 


ಅವರು ತಮ್ಮ ಬಾಲ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಅವರು ಕುಳ್ಳಗಿದ್ದರು, ಕಪ್ಪಗಿದ್ದರು.    ತೊದಲುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಅವರ ಸ್ನೇಹಿತರು ಕೀಟಲೆ ಮಾಡಿ ಅವಮಾನ ಮಾಡಿದ್ದರು.  ಅವರು ಮಾತನಾಡುವಾಗ ಜನರು ಅವರ ಕಡೆ ಗಮನ ಕೊಡುತ್ತಿರಲಿಲ್ಲ ಅಥವಾ ಅವರ ಮಾತಿನ ಮಧ್ಯದಲ್ಲೇ ಬೇರೆಡೆ ನೋಡುತ್ತಿದ್ದರು. ಈ ಕೀಳರಿಮೆಯೇ ಅವರನ್ನು ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಪ್ರೇರೇಪಿಸಿತು. ಇಂದು ಅವರು ಯಶಸ್ವಿ ಉದ್ಯಮಿ 700000 ಕ್ಕೂ ಜನರ ಉದ್ಯೋಗದಾತ.ಈಗ  ತಾವು ತೊದಲುತ್ತಾ ಮಾತನಾಡೊದರೂ  ಜನರು ಅವರ  ಮಾತನ್ನು ಗಮನವಿಟ್ಟು ಕೇಳುತ್ತಾರೆ.ಅವರೇ ಜೊಮಾಟೋ ಕಂಪನಿಯ ಸಂಸ್ಥಾಪಕ ದೀಪೇಂದರ್ ಗೋಯಲ್.


ಗೋಯಲ್ ಜನವರಿ 26, 1983 ರಂದು ಭಾರತದ ಪಂಜಾಬ್‌ನ ಮುಕ್ತಸರ್‌ನಲ್ಲಿ ಜನಿಸಿದರು. ಅವರು 2005 ರಲ್ಲಿ ದೆಹಲಿಯ ಐ ಐಟಿ  ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದ
ನಂತರ ಜನವರಿ 2006 ರಲ್ಲಿ ಬೈನ್ ಅಂಡ್ ಕಂಪನಿಯಲ್ಲಿ ಹಿರಿಯ ಸಹಾಯಕ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬೈನ್‌ನಲ್ಲಿದ್ದಾಗ ಗೋಯಲ್ ತಮ್ಮ ಸಹೋದ್ಯೋಗಿ ಪಂಕಜ್ ಅವರೊಂದಿಗೆ ಆಹಾರ ಆರ್ಡರ್‌ಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅನಾನುಕೂಲತೆಯಿಂದ ಪ್ರೇರಿತರಾಗಿ ಜೊಮ್ಯಾಟೊದ ಕಲ್ಪನೆಯನ್ನು ರೂಪಿಸಿದರು.  ಬೈನ್ ಉದ್ಯೋಗಿಗಳಿಗೆ ಆಹಾರ ಆರ್ಡರ್ ಮಾಡುವ ವೆಬ್‌ಸೈಟ್ ಎಂಬ ಅವರ ಆರಂಭಿಕ ಯೋಜನೆಯು ಯಶಸ್ವಿಯಾಯಿತು. ಇದು 2008 ರಲ್ಲಿ ಜೊಮ್ಯಾಟೊ ಸ್ಥಾಪನೆಗೆ ಕಾರಣವಾಯಿತು. 
ಆರಂಭದಲ್ಲಿ ಫುಡೀಬೇ ಎಂದು ಹೆಸರಿಸಲಾದ ಜೊಮ್ಯಾಟೊ ಭಾರತೀಯ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಮತ್ತು ಆಹಾರ ವಿತರಣಾ ಕಂಪನಿಯಾಗಿದೆ. ಇದು ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು ಮತ್ತು ವಿತರಣಾ ಪಾಲುದಾರರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ  ಜೊಮ್ಯಾಟೊ ಜಾಗತಿಕವಾಗಿ ವಿಸ್ತರಿಸಿದೆ.ಸುಮಾರು 22 ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಗ್ರ ರೆಸ್ಟೋರೆಂಟ್ ಮಾಹಿತಿ, ಮೆನು ವಿವರಗಳು, ಬೆಲೆ ಮತ್ತು ವಿಮರ್ಶೆಗಳನ್ನು ನೀಡುತ್ತದೆ. 
ಗೋಯಲ್ ಅವರ ನಾಯಕತ್ವದಲ್ಲಿ, ಜೊಮಾಟೊ ಪೋಲೆಂಡ್‌ನಲ್ಲಿ ಗ್ಯಾಸ್ಟ್ರೋನೌಸಿ , ಇಟಲಿಯಲ್ಲಿ ಸಿಬಾಂಡೋ ಮತ್ತು ಭಾರತದಲ್ಲಿ ಬ್ಲಿಂಕಿಟ್  ಗಳ   ಸ್ವಾಧೀನಗಳ ಮೂಲಕ ತನ್ನ ಜಾಗತಿಕ ಉಪಸ್ಥಿತಿಯನ್ನು ಬೆಳೆಸಿಕೊಂಡಿದೆ.
ಝೊಮಾಟೊದ ಯಶಸ್ಸು ಕಂಡು ಸುಮ್ಮನೆ ಕೂರದ ಗೋಯಲ್   ಮೇನ್‌ಸ್ಟ್ರೀಟ್, ಗ್ಯಾಬಿಟ್, ಥೆರಾಡೊ, ಶಿಪ್‌ರಾಕೆಟ್, ಬ್ಲಿಂಕಿಟ್,  ಬಿರಾ 91, ಹೈಪರ್‌ಟ್ರಾಕ್, ಟೆರ್ರಾಡೊ, ಚೆಫ್‌ಕಾರ್ಟ್, ಸ್ಕ್ವಾಡ್‌ಸ್ಟ್ಯಾಕ್ ಮತ್ತು ಅನ್‌ಅಕಾಡೆಮಿ ಸೇರಿದಂತೆ ವಿವಿಧ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇವರ ಸಾಧನೆಯನ್ನು ಗುರ್ತಿಸಿದ ಹಲವಾರು ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
೨೦೧೧ ರಲ್ಲಿ, ಗೋಯಲ್ ಅವರಿಗೆ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ಅಪ್ ಆಫ್ ದಿ ಇಯರ್ ಪ್ರಶಸ್ತಿ ೨೦೧೨ ರಲ್ಲಿ  ಬಿಸಿನೆಸ್ ಟುಡೇ ಯಂಗ್ ಬಿಸಿನೆಸ್ ಲೀಡರ್ ಪ್ರಶಸ್ತಿ,೨೦೧೮ ರಲ್ಲಿ  ಐಐಟಿ ದೆಹಲಿಯಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ  ಪ್ರಶಸ್ತಿ,   ೨೦೧೯ ರಲ್ಲಿ  ವರ್ಷದ ಜಿಕ್ಯೂ ಪುರುಷರ ಪ್ರಶಸ್ತಿ  ಸ್ವೀಕರಿಸಿದ್ದಾರೆ. 2020 ರಲ್ಲಿ ಗೋಯಲ್  ಫಾರ್ಚೂನ್ ಇಂಡಿಯಾ 40 ವರ್ಷದೊಳಗಿನವರ ಪಟ್ಟಿಯಲ್ಲಿ ಸೇರಿಸಲಾಯಿತು.ಅವರು 2023 ರ EY ಉದ್ಯಮಿ ಪ್ರಶಸ್ತಿಗೆ ಅಂತಿಮ ಸ್ಪರ್ಧಿಯೂ ಆಗಿದ್ದರು.

ಗೋಯಲ್ ಅವರು ಐಐಟಿ ದೆಹಲಿಯಲ್ಲಿ ಕಾಲೇಜು ವರ್ಷಗಳಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ವಿವಾಹವಾಗಿದ್ದು. ಅವರಿಗೆ ಸಿಯಾರಾ ಎಂಬ ಮಗಳಿದ್ದಾಳೆ.ಇತ್ತೀಚಿಗೆ ಮಾಧ್ಯಮದವರ ಜೊತೆಯಲ್ಲಿ ಮುಕ್ತವಾಗಿ ಮಾತನಾಡಿದ ಗೋಯಲ್ ರವರು ತಮ್ಮ ಆದ್ಯತೆ, ಮುಂದಿನ ಗುರಿಗಳ ಬಗ್ಗೆ ವಿವರ ನೀಡಿದ್ದಾರೆ.

ಜೋಮಾಟೊದಲ್ಲಿ ಯಾವುದೇ ತ್ರೈಮಾಸಿಕ ಅಥವಾ ವಾರ್ಷಿಕ ಗುರಿಗಳಿಲ್ಲ  ಗುರಿಗಳನ್ನು ನಿಗದಿಪಡಿಸುವುದರಿಂದ ಜನರು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ  ಎಂದಿದ್ದಾರೆ.
  ಬ್ಲಿಂಕಿಟ್ ಸೇವೆಯು ದೀಪಿಂದರ್ ಅವರಿಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಗಿದ್ದರಿಂದ  ಗೆಳೆಯ ಅಲ್ಬಿಂದರ್ ಧಿಂದ್ಸಾ  ಅವರಿಂದ ಖರೀದಿಸಿದರು.   ಪ್ರಸ್ತುತ ಜೋಮಾಟೊ ಮತ್ತು ಬ್ಲಿಂಕಿಟ್‌ನಲ್ಲಿ 7,50000 ಕೆಲಸಗಾರರಿಗೆ ಉದ್ಯೋಗ ನೀಡಿದೆ.  ಒಬ್ಬ ಸವಾರ ದಿನಕ್ಕೆ 8 ರಿಂದ 10 ಗಂಟೆ ಕೆಲಸ ಮಾಡಿದರೆ ತಿಂಗಳಿಗೆ ₹25,000 ಕ್ಕಿಂತ ಹೆಚ್ಚು ಗಳಿಸಬಹುದು ಎಂದು ಅವರು ತಿಳಿಸಿದ್ದಾರೆ.


ಇತರೆ ಡೆಲಿವರಿ ಕಂಪನಿಗಳಿಗಿಂತ ಜೊಮಾಟೊ 10 ನಿಮಿಷಗಳ ಡೆಲಿವರಿ ನೀಡುವ ಬಗ್ಗೆ ಕೇಳಿದಾಗ ಇದು  ಸವಾರರ ಬರವೇಗದಿಂದ ಸಾಧ್ಯವಾಗುತ್ತಿಲ್ಲ ಬದಲಾಗಿ ಮಳಿಗೆಗಳ ಸಾಂದ್ರತೆಯಿಂದ  ಸಾಧ್ಯವಾಗುತ್ತಿದೆ. ಸವಾರರಿಗೆ ಯಾವುದೇ ಸಮಯದ ಮಿತಿಯನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಷ್ಟಕ್ಕೇ ನಿಲ್ಲದ ಗೋಯಲ್ ರವರ ವಿಷನ್ ವಿಸ್ತರಿಸುತ್ತಲೇ ಇದೆ.
ಸಣ್ಣ ವಿಮಾನಗಳನ್ನು ತಯಾರಿಸುವ  ಯೋಜನೆಗಾಗಿ ದೀಪಿಂದರ್ ಅವರು 50 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧರಾಗಿದ್ದಾರೆ. ಇದು ನಗರಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಅವರ ಆಶಯ.ಮೆದುಳಿಗೆ ರಕ್ತದ ಹರಿವನ್ನು ಮೇಲ್ವಿಚಾರಣೆ ಮಾಡುವ ಟೆಂಪಲ್ ಎಂಬ ಮತ್ತೊಂದು ಸಾಧನ ಆವಿಷ್ಕಾರಕ್ಕೆ ಕೈಹಾಕಿದ್ದಾರೆ.   ಭೂಮಿಯ ಗುರುತ್ವಾಕರ್ಷಣೆಯು ನಮ್ಮ ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸುವುದು ಇದರ ಉದ್ದೇಶ.
ದೀಪಿಂದರ್ ಗೋಯಲ್ ಅವರ ವ್ಯವಹಾರ ಶೈಲಿಯು  ಬಲು ವಿಭಿನ್ನ ಅದಕ್ಕೆ ಅವರು ಈ ಎತ್ತರಕ್ಕೆ ಏರಿದ್ದಾರೆ. ಅವರ ವ್ಯವಹಾರ ಶೈಲಿಯನ್ನು ಹೀಗೆ ಹೇಳಬಹುದು ಒಂದು ರೇಸ್ ಕಾರ್  ಎಂಜಿನ್ ಎಷ್ಟು ದೂರ ಹೋಗಬೇಕು ಎಂದು ಅವರು ಮೊದಲೇ ಗುರಿಯೊಂದಿಗೆ ನಿರ್ಧರಿಸುವುದಿಲ್ಲ. ಆದರೆ ಪ್ರತಿ ಭಾಗವೂ ಅತ್ಯಂತ ನಿಖರವಾಗಿ ಮತ್ತು ತೀವ್ರತೆಯಿಂದ ಕೆಲಸ ಮಾಡಬೇಕೆಂದು ಅವರು ಬಯಸುತ್ತಾರೆ.ಆಗ ಮಾತ್ರ ಕಾರು ಯಾರಿಗೂ ತಲುಪಲಾಗದ ವೇಗವನ್ನು ತಲುಪಲು ಸಾಧ್ಯವಾಗುತ್ತದೆ.
ಗೋಯಲ್ ನಮ್ಮ ನೆಲದ ನಕ್ಷತ್ರ! ಇಂತಹ ಸಾವಿರಾರು ನಕ್ಷತ್ರಗಳಿಗೆ ಗೋಯಲ್ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

08 ಜನವರಿ 2026

ಪೋರಿಯಲ್ಲ ಹೆಂಗಸು!


 

ನಿನ್ನೆ ಸಂಜೆ ಪಾರ್ಕ್‌ ನಲ್ಲಿ ವಾಕ್ ಮಾಡುವಾಗ ಈ ಪುಟ್ಟ ಪೋರಿಯ ಕಂಡೆ ಕಂಕುಳಲ್ಲೊಂದು ಬೊಂಬೆ ಎತ್ತಿಕೊಂಡು ಆ ಬೊಂಬೆಯೊಂದಿಗೆ ಮಾತನಾಡುತ್ತಾ ವಾಕ್ ಮಾಡುತ್ತಿತ್ತು ನಾನು‌ ದೂರದಿಂದಲೇ ಗಮನಿಸಿ ಖುಷಿ ಪಟ್ಟೆ.ಮಕ್ಕಳ ಆಟವೇ ನೋಡಲು ಚೆಂದ. ನನಗೆ ನನ್ನ ಬಾಲ್ಯ ನೆನಪಾಯಿತು ನಾವೂ ಹೀಗೆಯೇ ಗೊಂಬೆಗಳಿಗೆ ಮದುವೆ ಮಾಡಿ.ಆಟ ಆಡಿದ ಸವಿನೆನಪುಗಳು ಮಧುರ. ಆ ಬಾಲಕಿ ನಾನು ದೊಡ್ಡ ಹೆಂಗಸು ಅಂದುಕೊಂಡು ಹೆಂಗಸಿನ ಪಾತ್ರದಲ್ಲಿ ಆಟವಾಡುತ್ತಿತ್ತು.ಇದಕ್ಕೆ ಒಂದು ಸಾಕ್ಷಿ ‌ಕೈಯಲ್ಲಿರುವ ಬೊಂಬೆ. ಇನ್ನೂ ಎರಡು ವಸ್ತುಗಳನ್ನು ಆ ಬಾಲಕಿ ನಾನು ದೊಡ್ಡ ಹೆಂಗಸು ಎಂದು ಬಿಂಬಿಸಿಕೊಳ್ಳಲು ಬಳಸಿದೆ. ಆ ವಸ್ತುಗಳು ಯಾವು ಕಾಮೆಂಟ್ ಮಾಡಿ‌ ಹೇಳಿ.
#sihijeevi #childhood #children #play #playtime

05 ಜನವರಿ 2026

ರಾಷ್ಟ್ರೀಯ ಪಕ್ಷಿಗಳ ದಿನ


 ರಾಷ್ಟ್ರೀಯ ಪಕ್ಷಿಗಳ ದಿನ



ದೇಶಾದ್ಯಂತ ಪ್ರಕೃತಿ ಪ್ರಿಯರು, ಪಕ್ಷಿ ಪ್ರಿಯರು ಮತ್ತು ಪಕ್ಷಿ ವೀಕ್ಷಕರು ವಾರ್ಷಿಕವಾಗಿ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸುತ್ತಾರೆ. ಅಮೆರಿಕ ದ ಬಾರ್ನ್ ಫ್ರೀ ಎಂಬ ಸಂಸ್ಥೆಯ ಪ್ರಯತ್ನ ದ ಪರಿಣಾಮವಾಗಿ   ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ.
ಇದು  ಬಂಧಿತ ಮತ್ತು ಕಾಡು ಪಕ್ಷಿಗಳ ರಕ್ಷಣೆ ಮತ್ತು ಉಳಿವಿಗೆ ನಿರ್ಣಾಯಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ದಿನವಾಗಿದೆ.
ಬಾರ್ನ್ ಫ್ರೀ ಸಂಸ್ಥೆಯ ಪ್ರಕಾರ  ವಿಶ್ವದ ಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ ಸುಮಾರು 12 ಪ್ರತಿಶತ ಅಳಿವಿನ ಅಪಾಯದಲ್ಲಿದೆ.ಇವುಗಳ ಸಂರಕ್ಷಣೆ ನಮ್ಮ ಕರ್ತವ್ಯ. ಇದಕ್ಕೆ ಈ ಕೆಳಗಿನ ಚಟುವಟಿಕೆಗಳಲ್ಲಿ ನಾವು ಪಾಲ್ಗೊಳ್ಳಬಹುದು.

ಪಕ್ಷಿ ವೀಕ್ಷಣೆ,ಪಕ್ಷಿಗಳನ್ನು ಅಧ್ಯಯನ ಮಾಡುವುದು,ಇತರರಿಗೆ ಶಿಕ್ಷಣ ನೀಡುವುದು,ಇತರ ಪಕ್ಷಿ ಸಂಬಂಧಿತ ಚಟುವಟಿಕೆಗಳು,ರಾಷ್ಟ್ರೀಯ ಪಕ್ಷಿ ದಿನದ ಒಂದು ಪ್ರಮುಖ ಚಟುವಟಿಕೆಯೆಂದರೆ ಪಕ್ಷಿ ದತ್ತು ಸ್ವೀಕಾರ ಮಾಡುವುದು.
ಅಟ್ಲಾಂಟಾ ಜರ್ನಲ್ ಕಾನ್ಸ್ಟಿಟ್ಯೂಷನ್ ಪತ್ರಿಕೆಯ ಲೇಖನದ ಪ್ರಕಾರ, ಅನೇಕ ಪಕ್ಷಿ ಉತ್ಸಾಹಿಗಳು ಈ ದಿನದಂದು ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಆಚರಿಸುತ್ತಾರೆ. ಅವರು ಭವಿಷ್ಯದ ಪಕ್ಷಿ ಮಾಲೀಕರಿಗೆ ಪಕ್ಷಿಗಳ ಆರೈಕೆಯಲ್ಲಿ ಒಳಗೊಂಡಿರುವ ವಿಶೇಷ ಸಮಸ್ಯೆಗಳ ಬಗ್ಗೆ ಶಿಕ್ಷಣ ನೀಡುತ್ತಾರೆ, ಅವುಗಳಲ್ಲಿ "ಸರಿಯಾದ ಆರೈಕೆ, ಶುಚಿಗೊಳಿಸುವಿಕೆ, ಶಬ್ದ ಮತ್ತು ಕಚ್ಚುವಿಕೆ, ಆಹಾರ, ಆಹಾರ ಮತ್ತು ದೈನಂದಿನ ಸಂವಹನದ ಅಗತ್ಯತೆ" ಸೇರಿವೆ.

ನನಗೆ ವೈಯಕ್ತಿಕವಾಗಿ ಗುಬ್ಬಚ್ಚಿ ಇಷ್ಟ ನಿಮಗೆ ಯಾವ ಪಕ್ಷಿ ಇಷ್ಟ ಎಂದು ತಿಳಿಸಬಹುದು.



ಸಿಹಿಜೀವಿ ವೆಂಕಟೇಶ್ವರ

04 ಜನವರಿ 2026

ಅಭಿನಂದನೆಗಳು


 ದೈಹಿಕ ಶಿಕ್ಷಕರ ಇಲ್ಲದೇ ಯಾವುದೇ ಮೂಲಸೌಕರ್ಯಗಳಿಲ್ಲದೆ ಹಳ್ಳಿಯ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಪ್ರಯತ್ನ ಪೋಷಕರ ಬೆಂಬಲ ಶಿಕ್ಷಕರ ಮಾರ್ಗದರ್ಶನದ ಫಲಿತವಾಗಿ ರಾಷ್ಟ್ರ ಮಟ್ಟದಲ್ಲಿ ಥ್ರೋ ಬಾಲ್ ನಲ್ಲಿ   ಪ್ರಶಸ್ತಿ ಪಡೆದ ತಿಪಟೂರಿನ ಹೊಸಹಳ್ಳಿ ಸರ್ಕಾರಿ ಶಾಲೆಯ   ಮಾನ್ಯ ಹಾಗೂ ಶಾಂಭವಿ ಇವರಿಗೆ ಒಂದು ಅಭಿನಂದನೆ ಸಲ್ಲಿಸೋಣ.

Congratulations ಮಕ್ಕಳೇ.. ನಿಮ್ಮ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ.

#sports #game #throwball #school #studentsuccess

ಹನಿಗವನ


 

02 ಜನವರಿ 2026

ವಾರ್ಷಿಕ ಹಿ(ಮು)ನ್ನೋಟ


 


ವಾರ್ಷಿಕ ಹಿ(ಮು)ನ್ನೋಟ


ಕಳೆದ ವರ್ಷ ಹತ್ತಾರು ಸಂಕಲ್ಪ ಮಾಡಿಕೊಂಡು ಅವುಗಳನ್ನು ಈಡೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದೆ.ಅದರಲ್ಲಿ ‌ಕೆಲವು ಈಡೇರಿ ಕೆಲವು ಹಾಗೆಯೇ ಉಳಿದವು.ಕಳೆದ ಕ್ಯಾಲೆಂಡರ್ ವರ್ಷದ ಬಗ್ಗೆ ಸಿಂಹಾವಲೋಕನ ಮಾಡುವ ಪ್ರಯತ್ನ ಮಾಡುವೆ.
ಇದು ಈ ವರ್ಷ ಹೇಗಿರಬೇಕು ಎಂದು ಯೋಜಿಸಿ ಜೀವಿಸಲು ಅನುಕೂಲವಾದೀತೆಂಬುದು‌ ನನ್ನ ಭಾವನೆ.

ವೃತ್ತಿ: ಕಳೆದ ವರ್ಷ ನನ್ನ ಶಾಲೆಯ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ಉಣಬಡಿಸುವ ಕಾರ್ಯದ ಜೊತೆಯಲ್ಲಿ ಅವರಲ್ಲಿರುವ ಇತರೆ ಕೌಶಲಗಳನ್ನು ಮತ್ತು ಪ್ರತಿಭೆಯನ್ನು ಹೊರತರುವ ಕಾಯಕವನ್ನು ಮಾಡಿರುವುದು ಆತ್ಮ ತೃಪ್ತಿ ನೀಡಿದೆ.

ಪುಸ್ತಕ ಓದು ಬರಹ: ಕಳೆದ ಐದಾರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಹದಿನೈದು ಪುಸ್ತಕ ಮಾತ್ರ ಓದಿರುವೆ.ಪುಸ್ತಕ ಪ್ರಕಟಣೆಯನ್ನು ಗಮನಿಸುವುದಾದರೆ ಈ ಬಾರಿ ನನ್ನ ಮೂರು ಪುಸ್ತಕಗಳು ಲೋಕಾರ್ಪಣೆಯಾದವು."ಸಿಹಿಜೀವಿ ಕಂಡ ಅಂಡಮಾನ್ " ಪ್ರವಾಸ ಕಥನವನ್ನು ಕಾರ್ಕಳದ ಪುಸ್ತಕ ಮನೆ ಪ್ರಕಟಿಸಿ ಅಮೋಘವಾಗಿ ಬಿಡುಗಡೆ ಕಾರ್ಯಕ್ರಮ ಮಾಡಿ ನನ್ನ ಸನ್ಮಾನಿಸಿದ್ದು ಮರೆಯಲಾಗದ ಘಟನೆ.ಮತ್ತೊಂದು ಪುಸ್ತಕ " "ಮಕ್ಕಳಿಗಾಗಿ ಮಹಾತ್ಮರ ಮಾತುಗಳು " ಪುಸ್ತಕವನ್ನು ನುಡಿತೋರಣ ಬಂಧುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು ಸಂತಸ ನೀಡಿತು. ಮತ್ತೊಂದು ಪುಸ್ತಕ "ಐತಿಹಾಸಿಕ ತಾಣಗಳು" ಪ್ರಿಂಟ್ ಆಗಿ ಮನೆ ಸೇರಿದೆ. ಈ ವರ್ಷ ಹೆಚ್ಚು ಪುಸ್ತಕಗಳನ್ನು ಓದಲು ಹಾಗೂ ಇನ್ನೂ ಉತ್ತಮ ‌ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಂಕಲ್ಪ ಮಾಡಿರುವೆ.


ಸಮಾಜದೊಂದಿಗೆ ನಾನು: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸನಾತನ ವಾಣಿಯನ್ನು ಬಲವಾಗಿ ನಂಬಿರುವ ನಾನು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯ ಮಾಡಲು ಆರಂಭಿಸಿರುವೆ.ಕೊಡುವುದರಲ್ಲಿ ಇರುವ ಸುಖ ನೆಮ್ಮದಿ ಅನುಭವಿಸಲಾರಂಬಿಸಿರುವೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದು ಎಂಬ ಮಾತಿನಂತೆ ನಾನು ಕೊಟ್ಟ ಬಗ್ಗೆ ವಿವರ ನೀಡದಿರಲು ತೀರ್ಮಾನ ಮಾಡಿರುವೆ.ಈ ವರ್ಷವೂ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವೆ.

ಪುರಸ್ಕಾರ: ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನನ್ನ ಶಿಕ್ಷಣ ಮತ್ತು ಸಾಹಿತ್ಯದ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದ್ದು ನನ್ನ ಜೀವನದ ಮತ್ತೊಂದು ಅವಿಸ್ಮರಣೀಯ ದಿನ.

ಪತ್ರಿಕೆಯಲ್ಲಿ ಬರಹ : ಹವ್ಯಾಸವಾಗಿ ಆರಂಭವಾದ ನನ್ನ ಬರಹ ಇಂದು ಪತ್ರಿಕೆಗಳಲ್ಲಿ ಅಂಕಣ ಬರಹವಾಗಿ ಪ್ರಕಟವಾಗುತ್ತಿರುವುದಯ ಖುಷಿಯ ವಿಷಯ. ಗೌರವ ಸಂಭಾವನೆ ನೀಡಿ ನನ್ನ ಬರಹಗಳನ್ನು ಪ್ರಕಟಿಸುವ ಎಲ್ಲಾ ಪತ್ರಿಕೆಗಳಿಗೆ ನಾನು ನಮನ ಸಲ್ಲುಸಲೇಬೇಕು.ಈ ವರ್ಷವೂ ಪತ್ರಿಕೆಯಲ್ಲಿ ಬರೆಯುವ ಕಾಯಕ ಮುಂದುವೆರೆಸುವೆ.

ಗಾಯನ: ಹವ್ಯಾಸ ಕ್ಕೆ ಹಾಡುವ ನಾನು ನಮ್ಮ ಶಾಲೆಯಲ್ಲಿ ನಮ್ಮ ಮಕ್ಕಳ ಮುಂದೆ ಹಾಡಿ ಖುಷಿ ಪಡುತ್ತಿದ್ದೆ.ಈಗ ಕೆಲ ಸಮಾರಂಭಗಳಲ್ಲಿ ಹಾಡಿದಾಗ ಕೇಳುಗರು ಮೆಚ್ಚುಗೆಯಿಂದ ತಟ್ಟುವ ಚಪ್ಪಾಳೆ ಇನ್ನೂ ಹಾಡಲು ಪ್ರೇರಣೆ ನೀಡಿವೆ.

ನಾಟಕ: ಹವ್ಯಾಸಿ ನಾಟಕ ಕಲಾವಿದನಾಗಿ ಕಳೆಸ ವರ್ಷ ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ಸಮಯದಲ್ಲಿ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದೊಂದಿಗೆ ಗೌತಮ ಬುದ್ಧ ನಾಟಕದಲ್ಲಿ ಅಭಿನಯಿಸಿದ್ದು ಖುಷಿ ನೀಡಿತು.ಉಡುಪಿಯಲ್ಲಿ ನಡೆಸ ರಾಜ್ಯ ಮಟ್ಟದ ‌ನಾಟಕ ಸ್ಪರ್ಧೆಯಲ್ಲಿ ಭಾಗವಿಸಿದ ನಮ್ಮ ತಂಡ ಅತ್ಯುತ್ತಮ ಶಿಸ್ತಿನ ತಂಡ ಎಂಬ ಬಹುಮಾನ ಪಡೆದದ್ದು ಮತ್ತೊಂದು ಸಾರ್ಥಕ ಕ್ಷಣ.ಈ ಬಾರಿಯೂ ಅಭಿನಯ ಮುಂದುವರೆಯಲಿದೆ.

ಪ್ತವಾಸ: ಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ಹತ್ತು ದಿನದ ಪ್ರವಾಸ ಮಾಡಿದ ನಾನು ಈ ವರ್ಷ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೂ ಸರ್ಕಾರದ ಗಣತಿ ಕಾರ್ಯಕ್ಲೆ ನಿಯೋಜನೆ ಗೊಂಡು ಕರ್ತವ್ಯ ಮಾಡಿದ ಪರಿಣಾಮವಾಗಿ ಪ್ರವಾಸ ಹೋಗಲಾಗಲಿಲ್ಲ.ಆದರೆ ಈ ಸಮಯದಲ್ಲಿ ವಿವಿಧ ಸಮಾಜೋ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಭೇಟಿಯು ವಿಶೇಷವಾದ ಅನುಭವಗಳನ್ನು ನೀಡಿತು.ಈ ಬಾರಿ ವಿಶೇಷವಾದ ಪ್ರವಾಸ ಮಾಡಲು ಯೋಜಿಸಿರುವೆ.

  ಯೂಟ್ಯೂಬರ್: ಪ್ರತಿ ವರ್ಷ ಏನಾದರೂ ಹೊಸ ಕೌಶಲಗಳನ್ನು ಕಲಿಯಲು ಹಾತೊರೆಯುವ ನಾನು ಕಳೆದ ಏಪ್ರಿಲ್ ನಲ್ಲಿ ಸಿಹಿಜೀವಿಯ ಪಯಣ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದೆ ಕೇವಲ ಎಂಟು ತಿಂಗಳಲ್ಲಿ950 ಸಬ್ ಸ್ಕ್ರೈಬರ್ ಗಳು ನನ್ನ ಚಾನೆಲ್ ನ ಚಂದಾದಾರರಾಗಿರುವರು ಎಂದು ಹೆಮ್ಮೆಯಿಂದ ಹೇಳುವೆ.ನಾನು ಪ್ರವಾಸ ಮಾಡಿದ ಸ್ಥಳಗಳನ್ನು ತೋರಿಸುವ ಪ್ರಯತ್ನ ಮುಂದುವರೆದಿದೆ.ಇದುವರೆಗೆ250 ಕ್ಕೂ ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿರುವೆ. ಕಡಿಮೆ  4 ಲಕ್ಷ ವೀಕ್ಷಣೆ ಕಂಡಿರುವುದು ಸಂತಸ ನೀಡಿದೆ.ಈ ವರ್ಷವೂ ಸಿಹಿಜೀವಿಯ ಪಯಣ ಮುಂದುವರೆಯಲಿದೆ.


ತುಸು ಬೇಸರದ ಸಂಗತಿಗಳು: ಅಮ್ಮನ ಅನಾರೋಗ್ಯ, ಆತ್ಮೀಯರ ಅಕಾಲಿಕ ನಿರ್ಗಮನ, ಸಮಾಜದಲ್ಲಿರುವ ಕೆಲ ಸ್ವಾರ್ಥಿಗಳ ನಡೆಗಳು,ಕಾಲೆಳೆಯುವ ನೀಚ ಮನಗಳನ್ನು‌ ಕಂಡಾಗ ಬೇಸರವಾಗುತ್ತದೆ.

ಏಳು ಬೀಳು ,ನೋವು ನಲಿವು ಜೀವನದ ಅವಿಭಾಜ್ಯ ಅಂಗ ಈ ಬಾರಿ ಅವುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗೋಣ.ಮತ್ತೊಮ್ಮೆ ‌ನಿಮಗೆ ಹೊಸ ಕ್ಯಾಲೆಂಡರ್ ನ ವರ್ಷದ ಶುಭಾಶಯಗಳು🌷


ನಿಮ್ಮ

ಸಿಹಿಜೀವಿ ವೆಂಕಟೇಶ್ವರ..


















01 ಜನವರಿ 2026

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹2026


 *ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹*


ಕಳೆದ ಕ್ಯಾಲೆಂಡರ್ ವರ್ಷದಲ್ಲಿ

ಕಂಡಿದ್ದೇವೆ ನೋವು ನಲಿವು

ನೂರಾರು|

ಸರ್ವರಿಗೂ ಶುಭವನ್ನುಂಟು ಮಾಡಲಿ ಬರಲಿರುವ ಎರಡು ಸಾವಿರದ ಇಪ್ಪತ್ತಾರು(2026)||


*ಸಿಹಿಜೀವಿ ವೆಂಕಟೇಶ್ವರ.*

30 ಡಿಸೆಂಬರ್ 2025

ಅಂಡಮಾನ್ ಸ್ವಾತಂತ್ರ ಪಡೆದ ದಿನ..


 ಇಂದು ನಾವು ಸ್ವಾತಂತ್ರ್ಯಹೊಂದಲು ಶುರು ಮಾಡಿದ ವರ್ಷ! ಹೌದು ಈ ಮಾತು ಕೇಳಿದ ಕೆಲವರು ಅಚ್ಚರಿ ಪಡಬಹುದು.ಆದರೆ ಅದೇ ಸತ್ಯ. 


1943 ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬೇರ್‌ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. 'ಆಜಾದ್ ಹಿಂದ್' ಸೇನೆ ಅಡಿಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆಗೊಂಡ ಮೊದಲ ತಾತ್ಕಾಲಿಕ ಭಾರತೀಯ ಪ್ರದೇಶವೆಂದು ಘೋಷಿಸಲಾಯಿತು. ಇದು ಭಾರತದ ಸ್ವಾತಂತ್ರ್ಯಕ್ಕೆ ಒಂದು ಮಹತ್ವದ ಸಾಂಕೇತಿಕ ಕಾರ್ಯವಾಗಿತ್ತು. ನೇತಾಜಿಯವರ ವಿವಾದಿತ ಅಂತ್ಯವಾಗದಿದ್ದರೆ ಅದೇ ವರ್ಷ ನಮಗೆ ಸ್ವತಂತ್ರ ಲಭಿಸುವ ಸಾಧ್ಯತೆ ಇತ್ತು.  ಸ್ವತಂತ್ರ ಭಾರತೀಯ ಆಡಳಿತವನ್ನು ಸ್ಥಾಪಿಸಿದ್ದ ನೇತಾಜಿಯವರ ನೆನಪಿಗಾಗಿ ಒಂದು   ದ್ವೀಪಕ್ಕೆ  'ಸ್ವರಾಜ್ ದ್ವೀಪ'   ಎಂದು ಮರುನಾಮಕರಣ ಮಾಡಲಾಗಿದೆ‌.ಎರಡು ವರ್ಷಗಳ ಹಿಂದೆ ಆ ದ್ವೀಪಕ್ಕೆ ನಾನು ಕಾಲಿಟ್ಟಾಗ   ನೇತಾಜಿಯವರು ಆ ಜಾಗದಲ್ಲಿ ಹೇಗೆಲ್ಲ ಓಡಾಡಿ,ಹೋರಾಡಿದರು ಎಂದು ಮನದಲ್ಲೇ ಊಹಿಸಿಕೊಂಡು‌ ರೋಮಾಂಚಕನಗೊಂಡಿದ್ದೆ..


27 ಡಿಸೆಂಬರ್ 2025

ಬಹುಮುಖ ಪ್ರತಿಭೆಯ ಕಲಾವಿದರು ನಮ್ಮ ಕೋಟೆ ಕುಮಾರ್.

 






ಬಹುಮುಖ ಪ್ರತಿಭೆಯ ಕಲಾವಿದ, ಕೋಟೆ ಕುಮಾರ್.



ಲಲಿತ ಕಲೆಗಳು ಮಾನವನ ವಿಕಾಸಕ್ಕೆ ತಮ್ಮದೇ ಆದ ಪ್ರಭಾವ ಬೀರುತ್ತವೆ. ಕೆಲವರು ತಮ್ಮ ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಂತಹವರ ಸಾಲಿಗೆ ಸೇರುವ ಮೇರು ವ್ಯಕ್ತಿತ್ವವೇ ಕೋಟೆಕುಮಾರ್.

ಕೋಟೆಕುಮಾರ್ ಎಂದು ಪ್ರಖ್ಯಾತವಾದ ಕಲಾವಿದರೂ ಲೇಖಕರೂ  ಸಂಘಟಕರೂ ಆದ ಇವರನ್ನು ಅವರ ವಿದ್ಯಾರ್ಥಿಗಳು ಎಮ್ ಎಸ್ ಕೆ ಎಂದೇ ಪ್ರೀತಿಯಿಂದ ಕರೆಯುತ್ತಾರೆ.
ಎಂ ಜಿ ಎಸ್ ಆರಾಧ್ಯ ಮತ್ತು ಎಂ ಬಿ ಶಿವಮ್ಮ ದಂಪತಿಗಳ ಮಗನಾಗಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಡಿಸೆಂಬರ್ ಒಂಭತ್ತರ 1965 ರಲ್ಲಿ ಜನಿಸಿದ ಇವರು  B A ,MA, MFA ಪದವಿ ಪಡೆದು
ಚಿತ್ರಕಲಾ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಾ 36 ವರ್ಷಗಳ ಕಾಲ ಬೋಧನಾ ಕಾರ್ಯದಲ್ಲಿ ತೊಡಗಿ ಸಾವಿರಾರು ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ. ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡ ಇವರು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಲೇಖನ ಮತ್ತು ವ್ಯಂಗ್ಯಚಿತ್ರ ಬರೆದು ಓದುಗರ ಮತ್ತು ಕಲಾರಸಿಕರ ಮೆಚ್ಚುಗೆ ಪಡೆದಿದ್ದಾರೆ. ಇವರು ಹವ್ಯಾಸಿ ಛಾಯಾಚಿತ್ರಕಾರರಾಗಿ ನೂರಾರು ವನ್ಯ ಜೀವಿ ಚಿತ್ರ ಮತ್ತು ಇತರೆ ಚಿತ್ರಗಳನ್ನು ತೆಗೆದು ಹಲವಾರು ಪತ್ರಿಕೆಗಳಿಗೆ ಕಳಿಸಿದ್ದಾರೆ.
ಇಂದಿನ ಆಧುನಿಕ ಕಾಲದ ಪ್ರಭಾವಿ ಸಮಾಜಿಕ ಮಾಧ್ಯಮ ವಾದ ಯೂಟ್ಯೂಬ್ ಬಳಸಿಕೊಂಡು ಪ್ರವಾಸಿ ತಾಣಗಳು, ವಿವಿಧ ಸಮಾರಂಭಗಳು,,ವಿಶೇಷವಾದ ಸ್ಥಳಗಳ ನೂರಾರು ವೀಡಿಯೋ ಮಾಡಿ ಕಲ್ಚರಲ್ ವ್ಯಾಲಿ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


ಮಾನವನ ಬದುಕು ಬೌದ್ಧಿಕ ಮತ್ತು ಅಂತರಂಗಿಕ ಸಂವೇದನೆಗಳ ಸಂಗಮವಾಗಿದ್ದು, ಪ್ರಕೃತಿಯಲ್ಲಿನ ಅನುಸಂದಾನದಲ್ಲಿ ಆಸೆ ಎಂಬ ಮುನ್ನೋಟದಲ್ಲಿ ಆನಂದವೆಂಬ ಹಂತಕ್ಕೆ ಸಮಷ್ಟಿಗೊಳಿಸುವ ಮನಸ್ಸಿನ ಕ್ರಿಯೆಯಾಗಿದೆ. ಭೌತಿಕವಾಗಿ ಅನುಭವಿಸಿದ ಅತ್ಯಂತ ಆನಂದ ಮತ್ತು ದುಃಖ ಕಷ್ಟ ಕ್ಷಣಗಳ ದಾಖಲೆ ಮನಸ್ಸಿನಲ್ಲಿ ನೆಲೆನಿಂತಿರುತ್ತದೆ. ಇಂತಹ ಘಟನೆಗಳು ಪದೇ ಪದೆ ನೆನಪಿನಲ್ಲಿ ಬಂದು ಮತ್ತೆ ಮತ್ತೆ ಅನುಭವಿಸುವ ಆಸೆ ಮಾನವನದ್ದಾಗಿದೆ. ಕಾಲಪಕ್ವತೆಯಲ್ಲಿ ಅಸ್ತಿತ್ವದ ಹುಡುಕಾಟ ಬದುಕಿನ ಗೊಂದಲದಲ್ಲಿ ಅಸ್ಪಷ್ಟ ಅನಿಸಿಕೆಗಳಿಗೊಂದು ಮೂರ್ತರೂಪ ಕೊಡುವ ಪ್ರಯತ್ನ, ಜೀವದ ತುಡಿತ ಪ್ರತಿಯೊಂದೂ ಉಸಿರಿನಲ್ಲೂ ಹುಡುಕಾಟ, ಆದಿ ಅಂತಿಮವಿಲ್ಲದ ಅಗೋಚರ ಅನಂತದತ್ತ ಈ ಮಹಾಯಾನದಲ್ಲಿ ಕಂಡ ಬೆಳಕು, ಶಬ್ದ, ಸ್ಪರ್ಶ, ಗಂಧ, ರುಚಿಗಳಲ್ಲಿ ಪಂಚಭೂತಗಳನ್ನೂ ಅನುಭವಿಸಿ ಮತ್ತೆ ಪಂಚಭೂತಗಳಲ್ಲೇ ಅಂತಿಮ ಸೇರುವ ಸತ್ಯದ ಹುಡುಕಾಟವೇ ಕಲೆ ಎನ್ನಬಹುದು.ಕಲಾ ಕ್ಷೇತ್ರ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ.ಅಂತಹ ವಿರಳ ಆಯ್ಕೆಯಲ್ಲಿ ಕೋಟೆ ಕುಮಾರ್ ಕೂಡಾ ಒಬ್ಬರು.




ಕೋಟೆ ಕುಮಾರ್ ರವರ ಬಾಲ್ಯವೇ ಅವರನ್ನು ಮುಂದೆ ಓರ್ವ ಸಮಾಜಮುಖಿ ವ್ಯಕ್ತಿಯನ್ನಾಗಿ ರೂಪಿಸಿತು.
ರಸ್ತೆ ಮತ್ತು ವಿದ್ಯುತ್‌ ಇಲ್ಲದ ಊರಿನಲ್ಲಿ   ಅಲ್ಲಿನ ಜನ ಪ್ರಾಕೃತಿಕವಾಗಿ ಬದುಕುತಿದ್ದ ಕಾಲ. ಸೂರ್ಯ ಚಂದ್ರರ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದವರು, ದನ, ಕರು, ಕುರಿ ಮೇಕೆಗಳೇ ಜೀವನಾಧಾರ. ವ್ಯವಸಾಯ ಅಲ್ಲಿನ ಮುಖ್ಯ ಕಸುಬು. ಸುತ್ತಲೂ ಗುಡ್ಡ, ಬೆಟ್ಟ, ತೊರೆ, ಕೆರೆಗಳ ಸಾಲು ಸಾಲು, ಊರ ಮಧ್ಯದ ಅರಳೀಮರ, ಈರೇಹಕ್ಕಿಗಳ ತವರು, ಬೆಳಗುರಾತ್ರಿ ಚಿಲಿಪಿಲಿ ನಾದ. ಅಲ್ಲಿನ ಜನರಲ್ಲಿ ಹಣದ ವ್ಯವಹಾರಕ್ಕಿಂತ ಮಧುರ ಮೈತ್ರಿಯ ಕಾಲ, ಯಾವ ನಾಗರೀಕತೆಯ ಸೊಂಕು ಇಲ್ಲದ ಅಪ್ಪಟ ಗ್ರಾಮೀಣ ಬದುಕು. ಊರ ಮುಂದಿನ ಮಾರಿ ಗುಡಿ, ಅರಳೀಕಟ್ಟೆ, ಊರ ಆಚೆಯ ಮಲ್ಲಪ್ಪ ಊರ ದೇವರುಗಳು. ವರ್ಷಕ್ಕೊಮ್ಮೆ ನಡೆವ ಊರ ಹಬ್ಬಕ್ಕೆ ಸೇರುವ ಬಂದುಬಳಗ: ರಾತ್ರಿ ಬೆಳಗು ಅರೆ ತಮಟೆಗಳ ನಾದ; ಕುರಿ, ಕೋಳಿ, ಕೋಣಗಳ ಬಲಿ; ರಾತ್ರಿ ಪೂರಾ ದೊಡ್ಡಾಟ ಚಿಕ್ಕಾಟ ಇವೆಲ್ಲಾ ಆಗೊಮ್ಮೆ ಈಗೊಮ್ಮೆ ಕಾಡುವ ನೆನಪುಗಳು, ಬೇಸಿಗೆ ಬಂತೆಂದರೆ ಗೊಂಬೆರಾಮರ ಚಕ್ಕಳದ ಗೊಂಬೆಯಾಟ, ದೊಂಬರಾಟ, ಕುಕ್ಕೆಮಾರಿ, ಪ್ಲೇಗಮ್ಮ, ಕೋಲೆಬಸವ, ಬುಡುಬುಡಿಕೆ ಇವರೆಲ್ಲರೂ ಹಳ್ಳಿ ಮಕ್ಕಳಿಗೆ ಸಾಂಸ್ಕೃತಿಕ ನೆಂಟರು. ಗೋಲಿ-ಬಳಪ ಆಡುವ ಹುಡುಗರು ಹಳ್ಳಿಗೆ ಹೊಸಬರು ಬಂದರೆ ಮಿಕಿಮಿಕಿ ನೋಡುವ, ಸೈಕಲ್ ಮೋಟಾರ್ ಗಾಡಿ ಬಂದರೆ ಓ.ಎಂದು ಹಿಂದೆ ಓಡುತ್ತಿದ್ದ  ಬಗೆ ವಾರಕ್ಕೊಮ್ಮೆ ಬರುತ್ತಿದ್ದ ಪಾಪಂಪಾಪ್‌ನ ಸಾಬರಿಗೆ ಹೊಂಗೆಬೀಜ, ಬೇವಿನಬೀಜ ಕೊಟ್ಟು ಜಿನುಗು ಬೆಲ್ಲ ತಿನ್ನುವ  ವಿಶೇಷ ತಿಂಡಿ.

ಅನ್ನ ಬಟ್ಟೆಗೆ ಬಲು ಕಷ್ಟ ವರ್ಷಕ್ಕೆ ಎರಡು ಕಾಕಿ ಚಡ್ಡಿ, ನೀಲಿ ಅಂಗಿ, ಹರಿದರೆ ಹಳೆ ಬಟ್ಟೆಯ ತೇಪೆ,ಪೆನ್ನು ಪೇಪ‌ರ್ ಅಪರೂಪ ಅದು ಸಿರಿವಂತರ ಸೊತ್ತು, ಇಂಥಹ ದಿನಗಳಲ್ಲಿ ಇದ್ದ ಬಳಪವೊಂದೇ ಬರೆಯುವ ಮಂತ್ರದಂಡ ವಾಗಿತ್ತು. ಮಾರಿಗುಡಿಯ ಬಂಡೆ, ಅದರ ಮೇಲೆ ಗಣೇಶ, ಲಿಂಗ, ಆನೆ, ಹೂವು ಚಿತ್ರಗಳ ಸರಮಾಲೆ. ಆಗ ಇವರಲ್ಲಿ ಚಿತ್ರಬಿಡಿಸುವ ಆಟ ಪದೇ ಪದೇ ನಡೆಯುತ್ತಿತ್ತು. ಇವರ  ಆಸೆ ಅರಿತ ಅಮ್ಮ ಕೂಲಿ ಮಾಡಿದ ನಾಲ್ಕು ರೂಪಾಯಿಯಲ್ಲಿ ಬಣ್ಣದ ಡಬ್ಬ, ಬರೆಯಲು ಪೆನ್ಸಿಲ್, ಪುಸ್ತಕ ತಂದುಕೊಟ್ಟಿದ್ದು ಮುಂದೆ ಇವರು ಕಲಾವಿದರಾಗಲು ಪ್ರೇರಣೆ ನೀಡಿದವು.
ಬಾಲ್ಯ ಕಳೆದು ಯೌವನದ ಕಾಲ ರಮ್ಯ ಜಗತ್ತಿನ ನಿಗೂಡ ಕತ್ತಲಲ್ಲಿ ಕಳೆದು ಹೋಗುವ ಕಾಲದಲ್ಲಿ ತುದಿ ಮೊದಲಿಲ್ಲದ ಕನಸಿನ ಪಯಣ ಅರಂಭವಾಯಿತು. ಬದುಕೆಂಬ ಮಾಯೆ ಎಲ್ಲವನ್ನೂ ನುಚ್ಚುನೂರು ಮಾಡುತ್ತಿದ್ದ ಬಡತನ! ಬದುಕಿಗಾಗಿ ಹೋರಾಟ ಒಂದೆಡೆಯಾದರೆ  ಮತ್ತೊಂದೆಡೆ ಕಲ್ಪನಾಲೋಕದ ಕುತೂಹಲ. ಎಸ್‌ಎಸ್‌ಎಲ್‌ಸಿ ಆದ ಮೇಲೆ ಮನೆಬಿಟ್ಟು ದೇಶ ಸುತ್ತಿದ್ದು! ಹೊಟ್ಟೆಪಾಡಿಗಾಗಿ ಕೂಲಿಮಾಡಿ ಮಣ್ಣುಕಲ್ಲು ಹೊತ್ತು ಅಲೆದದ್ದು, ಬದುಕಿನ ಒಂದೊಂದು ದಿನವೂ ಒಂದೊಂದು ಪಾಠ, ಲೋಕ ಸತ್ಯದ ಅರಿವು. ಮತ್ತೆ ತಂದೆಯ ಒಲವು ಮನೆ ಸೇರುವಂತೆ ಮಾಡಿತು. ಮುಂದೆ ಓದಲು ಬಲವಂತ ಮಾಡಿದ ಪರಿಣಾಮವಾಗಿ  ಚಿತ್ರ ಕಲಿತು ಶಿಕ್ಷಕನಾಗುವ ಆಸೆ ಕೈಗೂಡಿತು. ಬದುಕನ್ನು ಬಣ್ಣರೇಖೆಗಳಲ್ಲಿ ಕಟ್ಟಿಕೊಳ್ಳುವ ವಿಧಿ ಲಿಖಿತದಂತೆ  ಕೊನೆಗೂ ಬದುಕಿನಲ್ಲಿ ಹೋರಾಡಿ ನೆಲೆಕಂಡುಕೊಂಡರು.





ಗ್ರಾಮೀಣರಿಗೆ ಹೊಟ್ಟೆ ಬಟ್ಟೆಯಂತೆ ದೇವರು, ದೆವ್ವ, ಮಾಟಮಂತ್ರದೊಂದಿಗೆ ಬದುಕು ಹಾಸುಹೊಕ್ಕಾಗಿರುತ್ತದೆ.  ಸುಖವಿದ್ದರೆ ದೇವರು, ಕಷ್ಟಬಂದರೆ ಮಾಟ ಮಂತ್ರ ಅತಿಯಾದರೆ ದೆವ್ವ ಗಾಳಿ. ಓದು ಬರಹ, ವೈಚಾರಿಕತೆ ಇಲ್ಲದ ಮೂಢನಂಬಿಕೆಯ ಆಚರಣೆ. ಅದರಲ್ಲೂ ಒಂದೊಂದು ಸಾಂಸ್ಕೃತಿಕ ಆಚರಣೆ ಮಕ್ಕಳಾದ ನಮಗೆ ಅನುಕರಣೆಯ ಆರಂಭ. ರಾತ್ರಿ ಕುಣಿದ ದೈವ, ದೆವ್ವ ಬೆಳಗಾಗ ನಮ್ಮ ಮೇಲೆ ಬಂದು ಕುಣಿದ ಅನುಕರಣೆ ಇವುಗಳು ಕೋಟೆ ಕುಮಾರ್ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಮ್ಮ ಕಲೆ ಮತ್ತು ಲೇಖನಗಳಲ್ಲಿ ಅಭಿವಕ್ತಿಗೊಳಿಸಲು ಪ್ರೇರಣೆಯಾದವು.1981ರಲ್ಲಿ ತುಮಕೂರಿನ ರವೀಂದ್ರ ಕಲಾ ನಿಕೇತನದಲ್ಲಿ ಶ್ರೀ ಬಾಬೂರಾವ್ ಹಾಗೂ ಕಿಶೋರ್‌ಕುಮಾರ್‌ರವರ ಮಾರ್ಗದರ್ಶನದಲ್ಲಿ ಆರಂಭವಾದ ಇವರ   ಕಲಾ ಶಿಕ್ಷಣ ಬಣ್ಣ ರೇಖೆಗಳ ಆಕರ್ಷಣೆ, ಬಂದು ಹೋಗುವ ಹಿರಿಯ ಕಲಾವಿದರ ಹಾಗೂ ಕಲಾಕೃತಿಗಳ ಆಕರ್ಷಣೆ ಮತ್ತು ಎಸ್.ಎಂ.ಪಂಡಿತ್, ರವಿವರ್ಮರ ಕಲಾಕೃತಿಗಳು ಸಹಜವಾಗಿ ಸೆಳೆದವು. ಮರುಕೃತಿ ಮಾಡಿ ಆನಂದಿಸಿ  ಅರಳಗುಪ್ಪೆ, ಹಂಪೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಇಲ್ಲಿಯ ಶಿಲ್ಪ ವೈಭವ, ಉತ್ತರ ಕರ್ನಾಟಕದ ಜನಜೀವನ ಶೈಲಿ, ಶಿಲ್ಪಗಳ ರೇಖಾಚಿತ್ರ ರಚಿಸುವುದು, ನಿಸರ್ಗಚಿತ್ರ ರಚನೆ ಇವು ಮನಸ್ಸಿನ ಮೇಲೆ ಗಾಢ ಪ್ರಭಾವಬೀರಿದ ಸನ್ನಿವೇಶಗಳು, ಕಲಾಸಂಮೃದ್ಧಿಯ ಆಳ ಅಧ್ಯಯನ ಮಾಡಬೇಕೆಂಬ ಬಯಕೆಯ ಪರಿಣಾಮವಾಗಿ ಆರ್.ಎಂ.ಹಡಪದ್, ಜೆ.ಎಸ್.ಎಂ.ಮಣಿ, ಉಮೇಶ್ ಮುಂತಾದವರ ಮಾರ್ಗದರ್ಶನದಲ್ಲಿ ಶಿಕ್ಷಣ ಮುಂದುವರಿಸಿ ಸಂಯೋಜನೆ, ಭಾವಚಿತ್ರ, ವ್ಯಕ್ತಿಚಿತ್ರ, ಗ್ರಾಫಿಕಲ್ ಕಲೆ ಹೀಗೆ ವಿವಿಧ ಆಯಾಮದ ಕಲಾ ಪ್ರಾಕಾರಗಳನ್ನು ಅರಿತುಕೊಂಡ ಇವರಿಗೆ  ಸ್ವತಂತ್ರತೆಯ ಅರಿವಾದದ್ದು ಆರ್.ಎಂ.ಹಡಪದ್ ರವರಿಂದ. ಅಲ್ಲದೆ ಬೆಂಗಳೂರಿನ ಕಲಾಮಂದಿರ, ಚಿತ್ರಕಲಾ ಪರಿಷತ್, ವೆಂಕಟಪ್ಪ ಆರ್ಟ್ ಗ್ಯಾಲರಿಗಳಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನಗಳು, ರೋರಿಚ್, ರುಮಾಲೆ ಚನ್ನಬಸವಯ್ಯ, ಸುಬ್ರಹ್ಮಣ್ಯರಾಜು, ನಂಜುಂಡರಾವ್ ಮುಂತಾದವರ ಸಂಪರ್ಕ, ಅಲ್ಲದೆ ಕೆನ್ ಕಲಾ ಶಾಲೆಗೆ ಬಂದು ಹೋಗುತ್ತಿದ್ದ ಅನೇಕ ಜನ ಹಿರಿಯ ಕಲಾವಿದರು, ಕವಿಗಳು, ಚಿಂತಕರ ಮಾತುಗಳ ಸ್ಪೂರ್ತಿ ಪಿ.ಲಂಕೇಶ್, ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಎಂ.ಎಹಚ್.ಕೃಷ್ಣಯ್ಯ, ಜಾನ್ ದೇವರಾಜ್,  ಸಿ.ಚಂದ್ರಶೇಖರ್, ಎಂ.ಟಿ.ವಿ.ಆಚಾರ್ಯ, ಕೃಷ್ಣಶೆಟ್ಟಿ ಮುಂತಾದ ಹಿರಿಯರ ಪ್ರಭಾವ ಇವರ ಕಲಾಕೃತಿಗಳಲ್ಲಿ ಕಾಣಬಹುದು.






ಜಲವರ್ಣ, ತೈಲವರ್ಣ, ಅಕ್ರಲಿಕ್ ಮಾದ್ಯಮದಲ್ಲಿ ಸಮಕಾಲೀನ ತತ್ವಗಳ ಆಧಾರದಲ್ಲಿ ಪ್ರಸ್ತುತ ವಿದ್ಯಮಾನಗಳ ವಾಸ್ತವಿಕ ನೆಲೆಗಟ್ಟಿನ ಬದುಕಿನ ಅಂತರಾಳದ ಪ್ರೀತಿ, ಶಾಂತಿ, ಕೌರ್ಯ, ದ್ವಂದ್ವಗಳನ್ನು ಅಭಿವ್ಯಕ್ತಗೊಳಿಸುವ ಕೋಟೆ ಕುಮಾರ್ ರವರ ಕಲಾಕೃತಿಗಳಲ್ಲಿ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಪ್ರಖರ ವರ್ಣಗಳಲ್ಲಿ ಸಂಯೋಜಿಸಿರುವ ಕಲಾಕೃತಿಗಳಲ್ಲಿ ಭೌತಿಕತೆಗಿಂತ ಭಾವನಾತ್ಮಕತೆಯೇ ಹೆಚ್ಚು ಪ್ರಾಬಲ್ಯ ಸಾದಿಸಿದೆ.ಇದರ ಜೊತೆಗೆ ವ್ಯಂಗ್ಯಚಿತ್ರಕಾರನಾಗಿ, ಸಮಕಾಲೀನ ಸಾಮಾಜಿಕ, ರಾಜಾಕೀಯ ವಿದ್ಯಮಾನಗಳನ್ನು ಕುರಿತು, ಹೊಣೆಗೇಡಿತನ, ಕೋಮುವಾದ  ಭ್ರಷ್ಟಾಚಾರ, ಸ್ವಾರ್ಥಪರ ವ್ಯವಸ್ಥೆಗಳನ್ನು ಹಾಗೂ ಜನಪ್ರತಿನಿಧಿಗಳನ್ನು ತೀವ್ರವಾಗಿ ಇವರ  ವ್ಯಂಗ್ಯಚಿತ್ರಗಳು ಲೇವಡಿ ಮಾಡುತ್ತವೆ.  


ಕೋಟೆ ಕುಮಾರ್ ರವರ ಕಲಾ ಸೇವೆಯನ್ನು ಗುರ್ತಿಸಿ ನೂರಾರು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಪ್ರಜಾವಾಣಿ ದಿನಪತ್ರಿಕೆಯ ರಾಜ್ಯಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಡಾ. ರಾಜ್ ಕುಮಾರ್ ಅಪಹರಣದ ಹಿನ್ನಲೆಯಲ್ಲಿ ರಚಿಸಿದ ವ್ಯಂಗ್ಯಚಿತ್ರಕ್ಕೆ ಇವರಿಗೆ  ಪ್ರಶಸ್ತಿ ಲಭಿಸಿದೆ. 'ಕ್ಯಾರಿಕೇಚರ್' ವಿಭಾಗದಲ್ಲೂ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ವ್ಯಕ್ತಿತ್ವದ ಸೂಕ್ಷ್ಮವನ್ನು ಅಭಿವ್ಯಕ್ತಗೊಳಿಸುವಲ್ಲಿ ಪ್ರಯತ್ನಿಸಿದ್ದು 'ರಾಬ್ಬಿದೇವಿ' ಎಂಬ ಕ್ಯಾರಿಕೇಚರ್‌ಗೆ ದೆಹಲಿಯ ಹಿಂದೂಸ್ಥಾನ್ ಟೈಮ್‌ನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ನೀಡಿದ್ದಾರೆ. ಅಲ್ಲದೆ ಕ್ಯಾಮ್ಲನ್ ಆರ್ಟ್ ಫೌಂಡೇಶನ್ ನಡೆಸಿದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ "ಬುದ್ಧ ಮತ್ತು ಲ್ಯಾಡನ್" ಎಂಬ ತೈಲವರ್ಣದ ಕೃತಿಗೆ ಪ್ರಶಸ್ತಿ ಲಭಿಸಿದೆ. 'ಸ್ಥಿರ ಚಿತ್ರ' 'ಪ್ರಕೃತಿ ಚಿತ್ರ'ಕ್ಕೆ ಮೈಸೂರು ಸದರಾ ಪ್ರಶಸ್ತಿ ಅಲ್ಲದೆ 'ಜಾನಪದ ಮಹಿಳೆ' ಎಂಬ ಕಲಾಕೃತಿಗೆ ನಾಗಪುರದ ರಾಷ್ಟ್ರೀಯ ಕಲಾಸ್ಪರ್ಧೆಯಲ್ಲಿ ಪ್ರಶಸ್ತಿ, ಅಲ್ಲದೆ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ.ಇದುವರೆಗೂ ದೆಹಲಿ, ಹೈದ್ರಾಬಾದ್, ಬೆಂಗಳೂರು, ನಾಗಪುರ, ಗೋವಾ, ಪಾಂಡಿಚೆರಿ, ಚನೈ ಮುಂತಾದ ಕಡೆ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನ ನಡೆಸಿದ್ದಾರೆ. ಈ ಎಲ್ಲಾ ಸೃಜನಶೀಲ ಆಸಕ್ತಿಗಳ ನಡುವೆ ಹಿರಿಯ ಕಲಾವಿದರುಗಳು, ಸಾಹಿತಿಗಳ ಸಂಪರ್ಕ, ಅಲ್ಲದೆ ತುಮಕೂರಿನ ಕಲಾವಿದ ಗೆಳೆಯರ ಬಳಗದೊಂದಿಗೆ "ಕಲರ್ಸ್ ಗ್ರೂಪ್" ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಯುವ ಕಲಾವಿದರ ಕಲಾ ಶಿಬಿರ, ಮನೆಗೊಂದು ಕಲಾಕೃತಿ, ನಿಮ್ಮೊಂದಿಗೆ ನಾವು ಕಾರ್ಯಕ್ರಮದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್, ವಿಜ್ಞಾನಕೇಂದ್ರ, ಕರ್ನಾಟಕ ಲಲಿತ ಕಲಾ

ಅಕಾಡೆಮಿ, ಚಿತ್ರಕಲಾ ಶಿಕ್ಷಕರ ಸಂಘ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯನಾಗಿ ಸೇವೆ ಸಲ್ಲಿಸಿರುವ ಇವರು   ಹೊಸ ಹೊಸ ಶೈಲಿಯ ಸರಣಿ ಚಿತ್ರಗಳ ರಚನೆಯಲ್ಲಿ ಒಂದು ಗಟ್ಟಿತನವನ್ನು ಕಂಡುಕೊಳ್ಳಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.ಕೋಟೆ ಯವರ ಬಹುಪಾಲು ಕಲಾಕೃತಿಗಳು ಪ್ರಕೃತಿ ಮತ್ತು ಗ್ರಾಮೀಣ ಪರಿಸರದ ಬದುಕಿನ ಸಂವೇದನೆಯಲ್ಲಿ ಸೃಷ್ಟಿಗೊಂಡಿವೆ.  ಗ್ರಹಿಕೆಯಮೂರ್ತದಿಂದ ರೂಪಾಂತರ ಪಡೆದು ತನ್ನ ಸೃಜನಶೀಲತೆಯಲ್ಲಿ ಮಣ್ಣಿಗೆ ಹತ್ತಿರವಾಗಿ ಅದರ ಎಲ್ಲಾ ಧ್ವನಿ, ಸ್ಪರ್ಶ ಗಂಧಗಳೊಡನೆ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ನಮ್ಮ ಭವ್ಯ ಪರಂಪರೆ ಮತ್ತು ಸನಾತನ ಸಾಂಸ್ಕೃತಿಕ ಲೋಕವು ಪ್ರಕೃತಿದತ್ತವಾಗಿ ಬಂದಿದ್ದು ಈ ಪ್ರಕೃತಿಯು ತನ್ನದೇ ಆಶಯಗಳನ್ನು, ವೈಶಿಷ್ಟತೆಯನ್ನು, ಬದುಕಿನ ವಿಸ್ಮಯಗಳನ್ನು ಆಳವಾಗಿಹುದುಗಿಸಿಕೊಂಡಿದೆ. ಮಾನವ ಏನೇ ಕಲ್ಪನೆ ಮಾಡಿಕೊಂಡರೂ, ಅದು ಪ್ರಕೃತಿಕ ಒಂದು ಭಾಗವಾಗಿರುತ್ತದೆ. ಇದನ್ನು ಬಿಂಬಿಸುವ  ಈ ಪ್ರಯತ್ನ ಮಾಡಿದ ಇವರು ಜನಪದ ಕುರಿತಾದ ಚಿತ್ರ ಬಿಡಿಸಿದರು.

ಜನಪದ ಚಿತ್ರಗಳು ಪ್ರಾಚೀನ ಪರಂಪರೆಯನ್ನು ಹೊಂದಿದ್ದು ಇಂದಿಗೂ ತನ್ನಲ್ಲಿರುವ ಅನ್ವೇಷಣೆ, ಆಲೋಚನೆ, ಆನಂದ, ಸೌಂದರ್ಯ ಪ್ರಜ್ಞೆಗಳಿಂದ ಗತಕಾಲದ ವೈಭವವನ್ನು ವರ್ತಮಾನದಲ್ಲಿ ನಿಂತು ನೋಡಲು ಒಂದು ವೇದಿಕೆಯನ್ನು ನೀಡುತ್ತದೆ ಎಂಬುದನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.ಕಲಾಕೃತಿಗಳು ಅಲಂಕಾರಿಕ ಎಲ್ಲೆಯನ್ನು ಮೀರಿ ಸಾಮಾಜಿಕ ವಿಡಂಬನೆ, ಸಾಮಾಜಿಕ ಪರಿವರ್ತನೆಯ ಮಾಧ್ಯಮಗಳಾಗಿ ಹಾಗೂ ಜ್ಞಾನ ಚಿಂತನೆಗಳಾಗಿ ಬೆಳೆಯಬೇಕೆಂದು ಕೋಟೆಯವರ ಕಲಾಕೃತಿಗಳ  ಆಶಯ.
ಇವರ ಬಹುತೇಕ  ಕಲಾಕೃತಿಗಳು ವಿಶೇಷವಾಗಿ ಜನಪದ ಶೈಲಿಯ ನವ್ಯ ಕಲಾಕೃತಿಗಳಾಗಿದ್ದು ರೇಖಾ ಪ್ರಧಾನವಾದ ಚಿತ್ರ ಶೈಲಿಯನ್ನು ತನ್ನ ಅನುಕೂಲಕ್ಕೆತಕ್ಕಂತೆ ಬಣ್ಣಗಳ ಸಂಯೋಜನೆಯಿಂದ ಹೊಸ, ಹೊಸ ಸಾಧ್ಯತೆಗಳ ಹುಡುಕಾಟ ಮಾಡಿದ್ದಾರೆ. ಪ್ರಕೃತಿ ಮತ್ತು ಮಾನವ ಸಂಬಂಧಗಳನ್ನು ನೇರವಾಗಿ ನೀಡುವ ಪ್ರಯತ್ನ ಸರಳ ಅಲಂಕಾರವೂ ಭವ್ಯತೆಯನ್ನು ಸೃಷ್ಟಿಸುವಂತೆ ಸಂಯೋಜಿಸಲಾಗಿದೆ. ಹೆಚ್ಚು ಸಮತಲಾಕೃತಿಗಳಾಗಿದ್ದು, ಎರಡು ಆಯಾಮಗಳಲ್ಲಿ ಬಣ್ಣಗಳ ಬಳಕೆ ಮಾಡಲಾಗಿದೆ.


ಇರುವ ಖಾಲಿಜಾಗದಲ್ಲಿ ವಸ್ತು ವಿಷಯಕ್ಕನುಗುಣವಾಗಿ ಹೇಳಬೇಕಿರುವ ಮುಖ್ಯಾಂಶಗಳನ್ನು ಮೊದಲುಮಾಡಿ ಪೂರಕ ವಸ್ತು ವಿಷಯಗಳನ್ನು ಹಿನ್ನಲೆಯಾಗಿ ಬಳಸಿ ಸಾಂಕೇತಿಕ ಸನ್ನಿವೇಶಗಳನ್ನು ಸೃಷ್ಟಿಮಾಡಿ   ಮಾನವ ಸಂಬಂಧಗಳು ಆಶಯಗಳನ್ನು ಸಾಂಕೇತಿಕ ಸ್ವರೂಪವನ್ನು ಜನಪದ ಶೈಲಿಗೆ ಹೊಂದುವ ರೇಖಾಲಾಲಿತ್ಯವನ್ನು ಸಮನ್ವಯಗೊಳಿಸುವ ಇವರ ಶೈಲಿ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟ ಆಗುತ್ತದೆ.

ಕ್ಯಾನ್ವಸ್ ಮೇಲೆ ರೇಖಾ ಸಂಯೋಜನೆ ಆದ ನಂತರ ಆಕ್ರಲಿಕ್ ತೆಳುವರ್ಣಗಳ ಲೇಪಿಸಿ  ಬೇಕಾದ ಬಿಳಿಜಾಗವನ್ನು ಹಾಗೆಯೇ ಖಾಲಿ ಕ್ಯಾನ್‌ವಸ್ ಉಳಿಸಿಕೊಂಡು ನಂತರ ಎರಡು ಆಯಾಮದ ನೆರಳು ಬೆಳಕಿನ ಬಣ್ಣಗಳೊಂದಿಗೆ ಮುಖ್ಯ ಆಕೃತಿಗಳನ್ನು ಪೂರ್ಣಗೊಳಿಸಿಕೊಂಡು ಅದರ ಆಶಯಚಿತ್ರಗಳಿಗೆ ಅದೇ ಬಣ್ಣಗಳ ಬಳಕೆ ಮಾಡಿಕೊಂಡು ಹಿನ್ನೆಲೆ ಮತ್ತು ಮುಖ್ಯ ಆಕೃತಿಗಳಿಗೆ ಸಹಜವಾಗಿ ವಿರುದ್ಧ ಬಣ್ಣಗಳ ಲೇಪನ ಮಾಡಿ . ಉಳಿದ ಖಾಲಿ ಜಾಗ ಅಥವಾ ಹಿನ್ನೆಲೆ ದೃಢೀಕರಿಸುವ ಜಾಗಕ್ಕೆ ದಪ್ಪನಾಗಿ (ಸ್ಪೆಕ್ಟರ್) ಬಳಸಿ ವಿಭಿನ್ನ ಆಯಾಮ ಸೃಷ್ಟಿಸುವ ರೀತಿ ಗಮನ ಸೆಳೆಯಿತು. ಇವರು  ಅಕ್ರಲಿಕ್ ಬಣ್ಣಗಳನ್ನು ತೈಲವರ್ಣಗಳಂತೆ ಬಳಸಿಕೊಳ್ಳುವ ಜೊತೆಗೆ ಪೋಸ್ಟರ್ ವರ್ಣಗಳ ರೀತಿ ಹಾಗೂ ಜಲವರ್ಣಗಳ ರೀತಿ ಬಳಕೆ ಮಾಡುತ್ತಾರೆ.ಗ್ರಾಮ ಸಂಸ್ಕೃತಿಯ ಆಳ ಅಧ್ಯಯನದ ಜೊತೆಗೆ ಬೇರೆ ಬೇರೆ ಜನಪದ ಕಲೆಗಳಾದ ತೊಗಲುಗೊಂಬೆ, ಅಚ್ಚೆ, ರಂಗೋಲಿ, ಬೆಳದಿಂಗಳ ಕಲೆ, ಕಸೂತಿ, ಕೌದಿ, ಬೂತಾರಾದನೆ, ಯಕ್ಷಗಾನ, ಭಿತ್ತಿಚಿತ್ರ, ಮುಖವಾಡಗಳು, ಕಿನ್ನಾಳಕಲೆ ಮುಂತಾದ ಪ್ರಾಕರಗಳ ಸಂಕೇತಗಳನ್ನು ತೆಗೆದುಕೊಂಡು ಜನಪದರ ಮೂಲ ಆಶಯ ಮತ್ತು ಅನುಭವಗಳನ್ನು ಸಂಶೋದಿಸಿ ಕ್ರಿಯಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ.

ಇಂತಹ ಅಪ್ರತಿಮ ಬಹುಮುಖ ಪ್ರತಿಭೆಯ ಕೋಟೆ ಕುಮಾರ್ ರವರು ಆರು ವರ್ಷಗಳ ಕಾಲ ನನ್ನ ಸಹೋದ್ಯೋಗಿಯಾಗಿದ್ದರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.ನನ್ನ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಾಗೂ ವೈಯಕ್ತಿಕವಾಗಿ ನನಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಬೆಂಬಲಿಸಿದ್ದಾರೆ.ಶ್ರೀಯುತರು ಇದೇ ಡಿಸೆಂಬರ್ ತಿಂಗಳ 31 ರಂದು  ಸರ್ಕಾರಿ  ಕೆಲಸದಿಂದ ವಯೋ ನಿವೃತ್ತಿ ಹೊಂದುತ್ತಿದ್ದಾರೆ.ಇವರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಅವರ ಸಾಹಿತ್ಯ, ಕಲಾ ಸೇವೆ ಮುಂದುವರೆಯಲಿ ಎಂದು ನಾನು ಮನದುಂಬಿ ಹಾರೈಸುವೆ.ನೀವೂ ಕೋಟೆ ಕುಮಾರ್ ರವರಿಗೆ ಹಾರೈಸಲು ಈ ನಂಬರ್ 9886258195

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900925529.



11 ಡಿಸೆಂಬರ್ 2025

ಗಾಂಧಾರಿ ಕಲೆ ಯಿಂದ ಶಾಲಾ ಕಾಲೇಜುಗಳಲ್ಲಿ ಕಾಪಿ ತಡೆಯಬಹುದು!


 ಪರೀಕ್ಷೆಗಳಲ್ಲಿ ಕಾಪಿ ಮಾಡುವುದು  ದೊಡ್ಡ ಪಿಡುಗಾಗಿದ್ದು ಕೆಲ ಪರೀಕ್ಷೆಗಳಿಗೆ ಸಿ ಸಿ ಟಿ‌ವಿ ಕ್ಯಾಮರಾ ಹಾಕಿ ವೆಬ್ ಕಾಸ್ಟ್ ಮಾಡಿದರೂ ಕೆಲವೆಡ ನಕಲಾಗುತ್ತಿರುವ ಈ ಕಾಲದಲ್ಲಿ  ಬಳ್ಳಾರಿಯಲ್ಲಿ  ಓರ್ವ ವಿದ್ಯಾರ್ಥಿನಿ  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕತೆಯಿಂದ  ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಸರ್ವರ ಮೆಚ್ಚುಗೆ ಗಳಿಸಿದ್ದಾಳೆ.


  ಹಿಮಾಬಿಂದು ಎಂಬ ಈ ವಿದ್ಯಾರ್ಥಿನಿ
'ಗಾಂಧಾರಿ' ವಿದ್ಯೆ ಕಲಿತು  ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ 8ನೇ ತರಗತಿಯ ಎಫ್‌ಎ 4ರ ಆರು ವಿಷಯ ಗಳ ಪರೀಕ್ಷೆ ಬರೆದು  ಗಮನ ಸೆಳೆದಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿರುವುದು ವಿಶೇಷ.

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು ಹಿಮಾಬಿಂದು, ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ ನೀಡಿದ ಪಾಠಗಳ ನೆರವಿನಿಂದ ಈ ವಿದ್ಯೆ ಕಲಿತಿದ್ದಾಳೆ.

"ನನ್ನ ಮಗಳು ನಾಲ್ಕನೇ ತರಗತಿ ಯಲ್ಲಿದ್ದಾಗ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸದಾ ಕ್ರಿಯಾಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಈ ವಿದ್ಯೆ ಕಲಿಸಿದೆ. ಈ ಪ್ರಯೋಗದ ನಂತರ ಕ್ಲಾಸ್‌ಗೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದಾಳೆ,'' ಎಂದು ಆ ವಿದ್ಯಾರ್ಥಿನಿಯ ತಂದೆ  ರಾಮಾಂಜಿನಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಎಲ್ಲಾ ಸ್ತರಗಳ ಪರೀಕ್ಷೆಯಲ್ಲಿ ಇಂತಹ ಗಾಂಧಾರಿ ವಿದ್ಯೆ ಅಳವಡಿಸಿದರೆ ಹೇಗೆ? ಸಿ ಸಿ ಟಿ ವಿ ಪರೀಕ್ಷಾ ಸಿಬ್ಬಂದಿ ಇತರೆ ಖರ್ಚನ್ನು ಉಳಿಸಬಹುದೇ? ಈ ವಿಷಯದ ಬಗ್ಗೆ ಚರ್ಚೆ ಅಗತ್ಯವಿದೆ.ನೀವೇನಂತೀರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

21 ನವೆಂಬರ್ 2025

ಡಾಲ್ಬಿ ಅಟ್ಮಾಸ್ ನಲ್ಲಿ ಸಿನಿಮಾ ನೋಡೋದೆ ಮಜಾ...





ತಾವು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ತಮ್ಮ ಮನರಂಜನೆಗೆ ಮೀಸಲಿಡುವ ಜನರಲ್ಲಿ ನಾನೂ ಒಬ್ಬ.ಉತ್ತಮ ಕಥೆ, ಬಿಗಿಯಾದ ಚಿತ್ರಕಥೆ, ಹಿನ್ನೆಲೆ ಸಂಗೀತ, ಮಧುರವಾದ ಹಾಡು ಹಾಸ್ಯ ಇರುವ ಚಿತ್ರ ಯಾವುದಾದರೂ ಯಾವುದೇ ಭಾಷೆಯಾದರೂ ನಾನು ಥಿಯೇಟರ್‌ ಗೆ ಹೋಗುತ್ತೇನೆ‌.ಕೆಲವೊಮ್ಮೆ ಕುಟುಂಬ ಸಮೇತ ಕೆಲವೊಮ್ಮೆ ಒಂಟಿಯಾಗಿಯೇ ಸಿನಿಮಾ ವೀಕ್ಷಣೆ ಮಾಡಲು ಹೊರಡುವೆ.ಹತ್ತಾರು ಓಟಿಟಿ ನೂರಾರು ವೆಬ್ಸೈಟ್ ಗಳಲ್ಲಿ ಸಿನಿಮಾ ಲಭ್ಯವಿದ್ದರೂ ನಾನು ಅಲ್ಲಿ ಸಿನಿಮಾ ನೋಡಲು ಇಚ್ಚಿಸುವುದಿಲ್ಲ. ಸಿನಿಮಾ ಮಂದಿರದಲ್ಲಿ  ಡಾಲ್ಬಿ ಅಟ್ಮಾಸ್  ಎಫೆಕ್ಟ್ ನಲ್ಲಿ ಸಿನಿಮಾ ಎಂಜಾಯ್ ಮಾಡುವುದೇ ಇಂದು ಸುಂದರ ಅನುಭೂತಿಯನ್ನು ನೀಡುತ್ತದೆ.



ಸಿಹಿಜೀವಿ ವೆಂಕಟೇಶ್ವರ...

ತುಮಕೂರು

11 ನವೆಂಬರ್ 2025

ಅಮ್ಮ ಮಗನಿಗೆ ನಮನಗಳು..

ಕರುನಾಡಿನ ಜನತೆಯಾದ ನಾವು ಸದಾ ಕೃತಜ್ಞತೆ ಸೂಚಿಸಿ  ಸ್ಮರಿಸುವ ಹೆಸರುಗಳಲ್ಲಿ ಈ ಚಿತ್ರದಲ್ಲಿರುವ ತಾಯಿ ಮಗನ ಹೆಸರು ಅಗ್ರ ಸ್ಥಾನದಲ್ಲಿರುತ್ತದೆ.ಅಂದಿನ ನಮ್ಮ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಉತ್ತಮ ಕಾರ್ಯ ಮಾಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ರಾಜನಾದ ಮಗನಿಗೆ  ಬಾಲ್ಯದಿಂದಲೂ   ಉತ್ತಮ ಶಿಕ್ಷಣ ನೀಡಿ ಒಬ್ಬ ಆಡಳಿತಗಾರನಾಗಿ ಮಾಡುವ ಕಾರ್ಯ ಮಾಡುತ್ತಲೇ ತಾನೂ ಓರ್ವ ಶ್ರೇಷ್ಠ ಆಡಳಿತಗಾರ್ತಿ ಎಂದು ತೋರಿದ ವಾಣಿ ವಿಲಾಸ ಕೆಂಪರಾಜ ನಂಜಮ್ಮಣ್ಣಿ ರವರನ್ನು ನಾವು ದಿನವೂ ನೆನೆಯಬೇಕು.ಇತ್ತೀಚಿಗೆ ವಾಣಿ ವಿಲಾಸ ಪುರಕ್ಕೆ ಕುಟುಂಬ ಸಮೇತ ಭೇಟಿ ನೀಡಿದಾಗ ಈ ಪುತ್ತಳಿಗಳನ್ನು ಕಂಡು ಪುಳಕಗೊಂಡು ಮನದುಂಬಿ ನಮಿಸಿದೆ.ನಮ್ಮ ಮಕ್ಕಳಿಗೆ ಅವರ ಬಗ್ಗೆ ಹೆಮ್ಮೆಯಿಂದ ಪರಿಚಯ ಮಾಡಿದೆ..

ಹಿರಿಯೂರು ತಾಲ್ಲೂಕಿನ ರೈತರು ಇವರನ್ನು ಪೂಜಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗದ ವಿವಿಧ ನಗರಗಳು ಸಹ ಮಾರಿ ಕಣಿವೆ ನೀರನ್ನು ಕುಡಿಯುತ್ತಿದ್ದಾರೆ.

ಅಮ್ಮ ಮಗನಿಗೆ ಎಲ್ಲರ ಪರವಾಗಿ ಧನ್ಯವಾದಗಳು..

#VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism


 #VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism

31 ಅಕ್ಟೋಬರ್ 2025

ಕರುನಾಡ ಕಣ್ಮಣಿಗಳು.. ಭಾಗ ೧ ಸಿದ್ದಪ್ಪ ಕಂಬಳಿ

 


ಕರುನಾಡ ಕಣ್ಮಣಿಗಳು..

ಭಾಗ ೧

ಸಿದ್ದಪ್ಪ ಕಂಬಳಿ





ಕರ್ನಾಟಕದ ಏಕೀಕರಣದ ಕನಸು ಕಂಡು ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಸಿದ್ದಪ್ಪ ಕಂಬಳಿ ಕೂಡಾ ಒಬ್ವರು. ನಮ್ಮ ನಾಡಿನ ಜನರ ಶಿಕ್ಷಣಕ್ಕಾಗಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸಿದ್ದಪ್ಪ ನವರನ್ನು ಇಂದು ನಾವೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಿದೆ.

ತೋಟಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿದ್ದ ಸಿದ್ದಪ್ಪ ರವರು 1882ರಲ್ಲಿ ಜನಿಸಿದರು. ಈ ದಂಪತಿಗಳು ಕಂಬಳಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಆಶೀರ್ವಾದದಿಂದ ಸಿದ್ದಪ್ಪ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಸಮಾಜದ ಬಡ ವರ್ಗಗಳಿಗೆ ಸೇವೆ ಸಲ್ಲಿಸುವಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ವಿಕಸನಗೊಂಡರು. ಹುಬ್ಬಳ್ಳಿ ಮತ್ತು ಧಾರವಾಡದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ, ಸಿದ್ದಪ್ಪ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಯಲ್ಲಿ ಮುಗಿಸಿದರು. ನಂತರ ಧಾರವಾಡದಲ್ಲಿ ಪ್ರೌಢಶಾಲೆಗೆ ಹೋಗಿ ಪುಣೆಯಲ್ಲಿ ಪದವಿ ಪಡೆದರು. ಅವರು ಬಾಂಬೆಯ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು  ಪ್ರಸಿದ್ಧ ವಕೀಲರಾದರು. ಕಾಲ ಕಳೆದಂತೆ ಅವರು ದೀನದಲಿತರ ಪರವಾಗಿ ಹೋರಾಡಿದರು.  ಅನೇಕ ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕಂಬಳಿಯವರು
1917 ರಲ್ಲಿ  ಆಗಿನ  ಹುಬ್ಬಳ್ಳಿ  ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 1921 ರಲ್ಲಿ CMC ಯ ಕಾನೂನು ಸಲಹೆಗಾರರಾದರು.ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಜಾಗೂ  ಬಾಂಬೆ ಪ್ರಾಂತೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ತರಬೇತಿ ಅಗತ್ಯ ಕಂಡ ಅವರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜನ್ನು ಸ್ಥಾಪಿಸಿದರು. ಆದರೆ, ಸರ್ಕಾರವು ಕಠಿಣ ಕ್ರಮಗಳನ್ನು ಉಲ್ಲೇಖಿಸಿ 1922 ರಲ್ಲಿ ಅದನ್ನು ಮುಚ್ಚಿತು. ಕಾಲೇಜನ್ನು ಮತ್ತೆ ತೆರೆಯುವಂತೆ ಕಂಬಳಿಯವರು ನೋಡಿಕೊಂಡರು. 
ಹರಿದು ಹಂಚಿಹೋಗಿದ್ದ ನಮ್ಮ ನಾಡಿನ ಎಕೀಕರಣ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದ ಅವರು
1926 ರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಿನ  ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರ ಕರ್ತವ್ಯ, ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣೆಯಿಂದ ಬ್ರಿಟಿಷರು ಬೆರಗಾದರು. ವೆಚ್ಚವನ್ನು ಉಳಿಸಲು ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಯೋಜಿಸುತ್ತಿತ್ತು ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಂಬಳಿಯವರು  ಕಠಿಣ ನಿಲುವು ತೆಗೆದುಕೊಂಡರು.
ಈ ಕಾಲೇಜನ್ನು ಸರ್ಕಾರಿ ನಿಧಿಯಿಂದ ಸ್ಥಾಪಿಸಲಾಗಿಲ್ಲ, ಬದಲಾಗಿ ಜನರ ಕೊಡುಗೆಯಿಂದ ಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕಾಲೇಜು ಮುಚ್ಚಿದರೆ ಜನರು ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಅವರ ಒತ್ತಾಯದ ಮೇರೆಗೆ ಸರ್ಕಾರ ಕಾಲೇಜನ್ನು ಮುಚ್ಚುವ ಕ್ರಮವನ್ನು ಕೈಬಿಟ್ಟಿತು. ನಂತರದ ದಿನಗಳಲ್ಲಿ ಈ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಪ್ರಗತಿ ಸಾಧಿಸಿತು. 


ಕರ್ನಾಟಕದ ಏಕೀಕರಣವು ಸಿದ್ದಪ್ಪರವರ ಬಹುಕಾಲದ ಕನಸಾಗಿತ್ತು. ದುರದೃಷ್ಟವಶಾತ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು.  ಆರು ವರ್ಷಗಳ ಅನಾರೋಗ್ಯದ ನಂತರ ಏಪ್ರಿಲ್ 1956 ರಲ್ಲಿ ನಿಧನರಾದರು. ಕೆಲವು ತಿಂಗಳುಗಳ ನಂತರ, ನವೆಂಬರ್ 1956 ರಲ್ಲಿ ಏಕೀಕೃತ ಕರ್ನಾಟಕ ಉದಯವಾದಾಗ ಅವರ ಕನಸು ನನಸಾಗಿತ್ತು.  ಆದರೆ ಅದನ್ನು ನೋಡಲು ಅವರಿರಲಿಲ್ಲ.
ಇಂದಿನ ‌ಕಲುಷಿತ ರಾಜಕೀಯ ವ್ಯವಸ್ಥೆಯನ್ನು ನೀಡಿದಾಗ
ರಾಜಕೀಯ ಪ್ರವೇಶಿಸಲು ಯೋಜಿಸುತ್ತಿರುವ ಯುವಕರಿಗೆ ಕಂಬಳಿಯವರು  ನೀಡಿದ ಸಂದೇಶವು ಗಮನ ಸೆಳೆಯುತ್ತದೆ. "ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪೋಷಿಸಲು ನಿಮಗೆ ಸಾಧನವಿದ್ದರೆ ಮಾತ್ರ ನೀವು ರಾಜಕೀಯಕ್ಕೆ ಧುಮುಕಿ. ಇಲ್ಲದಿದ್ದರೆ, ರಾಜಕೀಯ ಪ್ರವೇಶಿಸುವ ಕನಸು ಕಾಣಬೇಡಿ. ಸುರಕ್ಷಿತ ಮತ್ತು ಸುಸ್ಥಿರ ಆದಾಯದ ಮೂಲವಿಲ್ಲದ ರಾಜಕಾರಣಿ ಭ್ರಷ್ಟನಾಗುತ್ತಾನೆ" ಅವರ ಮಾತುಗಳು ಎಷ್ಟು ಸತ್ಯ ಎಂಬುದಕ್ಕೆ ಇಂದಿನ ರಾಜಕಾರಣಿಗಳೇ ಜೀವಂತ ಸಾಕ್ಷಿ.



ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು  ಸಿದ್ದಪ್ಪ ಕಾಂಬ್ಳಿಯವರ ಪ್ರತಿಮೆಯನ್ನು ಸ್ಥಾಪಿಸಿದೆ. ರಸ್ತೆಯೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಾಂಬ್ಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
 
ಇಂತಹ ಮಹಾನ್ ನಾಯಕರ ಆದರ್ಶಗಳನ್ನು ನಮ್ಮ ಯುವಕರು ಇಂದು ಮೈಗೂಡಿಸಿಕೊಳ್ಳಲಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 ಅಕ್ಟೋಬರ್ 2025

ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ. (ಲೇಖನ)

 


ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ.


ನಾವು ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ವಿವಿಧ ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಹಬ್ಬ, ಹುಟ್ಟು ಹಬ್ಬ, ಮದುವೆ, ಮುಂಜಿ   ಹೀಗೆ ವಿವಿಧ ಕಾರಣದಿಂದಾಗಿ ಬೇಕಿದ್ದು ಬೇಡವಾದ್ದು  ಖರೀದಿಸಿ  ನಮ್ಮ  ಬೀರುಗಳು,ವಾರ್ಡ್ ರೋಬ್ ಗಳು ತುಂಬಿ ತುಳುಕುವಷ್ಟು ಶಾಪಿಂಗ್ ಮಾಡುತ್ತೇವೆ.ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿಯಾದರೂ ಕೊಳ್ಳುತ್ತೇವೆ.  ಕೊಂಡ ವಸ್ತುಗಳನ್ನು ಮನೆಯಲ್ಲಿ ಪೇರಿಸಿಕೊಂಡು   ಇ ಎಂ ಐ ಕಟ್ಟುತ್ತಾ, ಸಾಲ ತೀರಿಸುವ ಟನ್ಷನ್ ನಲ್ಲಿ ಕೆಲವೊಮ್ಮೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸುತ್ತೇವೆ. ಮಾಲ್ ಸಂಸ್ಕೃತಿ ಇದಕ್ಕೆ ಪ್ರಚೋದನಕಾರಿ. ಹಾಗೆಂದ ಮಾತ್ರಕ್ಕೆ ನೀವು ಕಂಜ್ಯೂಸ್ ಆಗಿ ಎಂತಲೂ ನಾನು ಹೇಳುವುದಿಲ್ಲ.

ಬೇಕಾದ್ರೆ ಉಪಯೋಗಕ್ಕೆ ಎನ್ನುವ ಡಬ್ಬಿಗಳು, ನೆನಪಿಗೂ ಬರದ ಹಳೆಯ ಸ್ಮರಣಿಕೆಗಳು. ನಾವು ಖರೀದಿಸುತ್ತೇವೆ. ಸಂಗ್ರಹಿಸುತ್ತೇವೆ.ಅಪ್‌ಗ್ರೇಡ್ ಮಾಡುತ್ತೇವೆ.ಆದರೆ   ಕೊನೆಗೆ  ಯಾವುದೋ ನಮಗಿಷ್ಟದ ಹಳೆ  ಶರ್ಟ್ ಹುಡುಕಿ ಇದೊಂದೇ ಸಾಕು ಎಂದು ಹಾಕಿಕೊಂಡು ನಡೆದುಬಿಡುತ್ತೇವೆ. ಇವೆಲ್ಲವುಗಳ ಬಗ್ಗೆ
ಜೆಮ್ಸ್ ವಾಲ್ಮನ್ ರವರು “Stuffocation”  ಎಂಬ ಪುಸ್ತಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.

ನಾವೆಲ್ಲರೂ ಸಂತೋಷವನ್ನು ವಸ್ತುಗಳನ್ನು ಹೆಚ್ಚು ಗುಡ್ಡೇ ಹಾಕುವುದರಲ್ಲಿ ಬೇರೆಯವರಿಗಿಂತ ಹೆಚ್ಚು ವಸ್ತುಗಳನ್ನು ಶೇಖರಣೆ ಮಾಡುವುದರಲ್ಲಿ ಹುಡುಕುವ ಭರದಲ್ಲಿ ನಿಜಕ್ಕೂ ಈ ವಸ್ತುಗಳ ಅಗತ್ಯ ನನಗಿದೆಯಾ? ಎಂಬು ಸ್ವಯಂ ಪ್ರಶ್ನಿಸಿಕೊಳ್ಳುವ ಮನೋಭಾವ ಕಾಣೆಯಾಗಿದೆ.

   ಗ್ರಾಹಕ ಕೇಂದ್ರಿತ  ಕನಸುಗಳಿಂದ ತುಂಬಿರುವ ಮನೆಗಳು, ಸ್ಥಾನಮಾನಕ್ಕಾಗಿ ಕಟ್ಟಲ್ಪಟ್ಟ ದೊಡ್ಡ  ಕಚೇರಿಗಳು ಇಂದಿನ ಟ್ರೆಂಡ್. ಹೆಚ್ಚು ವಸ್ತುಗಳಿದ್ದರೆ  ಉತ್ತಮ ಜೀವನ  ಎಂಬ  ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡು ಜೀವಿಸುತ್ತಿದ್ದೇವೆ. 


ವಸ್ತುಗಳು ಕೇವಲ ನಮ್ಮ ಕೋಣೆ ಮತ್ತು ಕಟ್ಟಡಗಳನ್ನು ತುಂಬಿಸಬಹುದು.ಆದರೆ  ಆ ವಸ್ತುಗಳನ್ನು ಬಳಸಿದ   ನೆನಪುಗಳು  ವಸ್ತುವಿಗಿಂತ ಹೆಚ್ಚು ದೀರ್ಘಕಾಲದ ಸಂತೋಷವನ್ನು ನೀಡುತ್ತವೆ. ಉದಾಹರಣೆಗೆ   ನಾವು ಖರೀದಿಸಿದ ಬೂಟುಗಳನ್ನು ನೆನಪಿಡುವುದಿಲ್ಲ. ಆದರೆ ಅವುಗಳನ್ನು ಧರಿಸಿ ನೃತ್ಯ ಮಾಡಿದ ಆ ರಾತ್ರಿ ಎಂದಿಗೂ ಮರೆಯಲಾಗುವುದಿಲ್ಲ. ಅನುಭವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ.


ನಾವು ನಮ್ಮಲ್ಲಿರುವ ಆಸ್ತಿ   ಅಂತಸ್ತು  ಸಂಪತ್ತು ಪ್ರದರ್ಶನಕ್ಕೆ ಹಾತೊರೆಯುತ್ತೇವೆ. ತೋರಿಸಬೇಕಾದದ್ದು ಸ್ಥಾನಮಾನಗಳನ್ನಲ್ಲ.ಬದಲಿಗೆ ನಮ್ಮ ಜೀವನವನ್ನು ಪ್ರವಾಸಗಳು, ಆಳವಾದ ಸ್ನೇಹಗಳು, ಕಲಿತ ಕೌಶಲ್ಯಗಳು, ನೋಡಿದ ಸ್ಥಳಗಳಿಂದ ಅರ್ಥಪೂರ್ಣ ಮಾಡಿಕೊಳ್ಳಬೇಕು. ಇವೇ ನಿಜವಾದ ಟ್ರೋಫಿಗಳು!

  ನಾವು  ಸರಳವಾದಂತೆ  ಜೀವನ ವಿಸ್ತರಿಸುತ್ತದೆ.
ಅವ್ಯವಸ್ಥೆ ಹೋಗಿ  ಶಕ್ತಿ ಮರಳುತ್ತದೆ. ಬಯಕೆಗಳು ಕಡಿಮೆಯಾದಾಗ ಕೃತಜ್ಞತೆ ಬೆಳೆಯುತ್ತದೆ. ಹೆಚ್ಚು ಬೇಕು ಎಂದು ಓಡುವುದನ್ನು   ನಿಲ್ಲಿಸಿದಾಗ  ಸಾಕು ಎಂಬುದನ್ನು ಅರಿಯುತ್ತೇವೆ.ಇನ್ನಾದರೂ ನಾವು ನಮ್ಮದೇ ಅತಿಯಾದ  ವಸ್ತುಗಳಿಂದ ನಮಗರಿವಿಲ್ಲದೇ  ಉಸಿರುಗಟ್ಟುವುದನ್ನು ತಪ್ಪಿಸಿಕೊಂಡು ಅರ್ಥಪೂರ್ಣವಾಗಿ ಜೀವಿಸೋಣ.
ನಮ್ಮ ಯಶಸ್ಸಿನ ಮಾನಕಗಳು    ಎಷ್ಟು ವಸ್ತುಗಳನ್ನು ಹೊಂದಿದ್ದೇವೆ ಎಂಬುದಲ್ಲ. ಎಷ್ಟು ಕಾಲ   ಸಂತಸದಿಂದ  ಬದುಕಿದ್ದೇವೆ ಎಂಬುದರಿಂದ  ಅಳೆಯಬೇಕಾಗಿದೆ.
ಅದನ್ನು ಅರಿತ ಕ್ಷಣ ನಿಜವಾಗಿಯೂ ಮತ್ತೆ ನಾವು ಹೊಸದಾಗಿ ಉಸಿರಾಡಲು ಆರಂಭಿಸಿದಂತಾಗುತ್ತದೆ. ಅಂತಹ ಜೀವನದ ಕಡೆ ಸಾಗೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಅಕ್ಟೋಬರ್ 2025

ಬೆಲೆ. ಹನಿಗವನ


 

ಬೆಲೆ

ಜಂಭ ಕೊಚ್ಚಿಕೊಳ್ಳುತ್ತಾ ಹೇಳಿಕೊಳ್ಳಬೇಡ ಎಲ್ಲರೂ ನನ್ನನ್ನೇ ಇಷ್ಟಪಡುತ್ತಾರೆಂದು| ಕೆಲವೊಮ್ಮೆ ಕಡಿಮೆ ಕಿಮ್ಮತ್ತಿನ ವಸ್ತುಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಾರೆ ನಾ ಮುಂದು,ತಾ ಮುಂದು||

ಸಿಹಿಜೀವಿ ವೆಂಕಟೇಶ್ವರ #QuoteSubhashitha #Sihijeevi #Venkateswara #WisdomInKannada #LifeLessons #InspirationalQuotes #SpiritualWisdom #MotivationalQuotes #KannadaCulture #QuoteOfTheDay #SubhashithaWisdom #KannadaProverbs #SelfAwareness #SoulfulQuotes #PositiveVibes #LifeInspired #Venkateswar

22 ಅಕ್ಟೋಬರ್ 2025

ದೋಸೆ ಹಾಕಿ ವಿಶ್ವ ದಾಖಲೆ ನಿರ್ಮಿಸಿದ ವಿಷ್ಣು!


 ಬಹಳಷ್ಟು ಜನರಿಗೆ ದೋಸೆಯೆಂದರೆ ಪ್ರಾಣ.ತರಾವರಿ‌ ದೋಸೆಗಳು ಜನರ ಬಾಯಲ್ಲಿ ನೀರೂರಿಸುತ್ತವೆ.ನನಗೆ ವೈಯಕ್ತಿಕವಾಗಿ ಬೆಣ್ಣೆ ದೋಸೆ,ಈರುಳ್ಳಿ ದೋಸೆ ಇಷ್ಟವಾದರೆ ನಮ್ಮ ಮನೆಯವರಿಗೆ ಮಸಾಲೆ ದೋಸೆ ಇಷ್ಟ.

ಇಲ್ಲೊಬ್ಬರು ರೆಕಾರ್ಡ್ ನಿರ್ಮಿಸಿದ್ದಾರೆ. ದೋಸೆ ತಿನ್ನುವುದರಲ್ಲಿ  ಅಲ್ಲ. ದೋಸೆ ಮಾಡುವುದರಲ್ಲಿ.

ಹೌದು ಈ ದಾಖಲೆಯನ್ನು ನಿರ್ಮಿಸಿದವರು ಭಾರತದ ಪ್ರಸಿದ್ಧ ಬಾಣಸಿಗ ವಿಷ್ಣು ಮನೋಹರ್!


25 ಗಂಟೆಗಳಲ್ಲಿ 15,773 ದೋಸೆಗಳನ್ನು ಹಾಕಿ    ವಿಷ್ಣು ಮನೋಹರ್ ರವರು ತಮ್ಮದೇ  ಹೆಸರಲ್ಲಿ ಇದ್ದ ದಾಖಲೆಯನ್ನು ಮುರಿದು   ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಇಷ್ಟಕ್ಕೆ ಸುಮ್ಮನಾಗದ ಅವರು ಅಮೆರಿಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಕಾತರರಾಗಿದ್ದಾರೆ.

 


 ಪ್ರಸಿದ್ಧ ಶೆಫ್ ವಿಷ್ಣು ಮನೋಹರ್ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಿರಂತರವಾಗಿ 25 ಗಂಟೆಗಳ ಕಾಲ 15,773 ದೋಸೆಗಳನ್ನು ತಯಾರಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗ ಅವರು ಅಮೆರಿಕಾದಲ್ಲಿ 26 ಗಂಟೆಗಳ ದೋಸೆ ಮ್ಯಾರಥಾನ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ, ಅವರು ನಾಗಪುರದಲ್ಲಿ 24 ಗಂಟೆಗಳಲ್ಲಿ 14,400 ದೋಸೆಗಳನ್ನು ತಯಾರಿಸಿ ದಾಖಲೆ ಮಾಡಿದ್ದರು.


  ಅಕ್ಟೋಬರ್ 2025 ರ  ಶನಿವಾರ ಬೆಳಗ್ಗೆ 7 ಗಂಟೆಗೆ ದೋಸ ತಾವಾ  ಲಾನ್‌ನಲ್ಲಿ ದೋಸೆ ತಯಾರಿಕೆ ಪ್ರಾರಂಭಿಸಿದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಅವರು ಹಿಂದಿನ ದಾಖಲೆಯನ್ನು ಮುರಿದು 15,700 ದೋಸೆಗಳನ್ನು ತಯಾರಿಸಿದರು. 20 ನಿಮಿಷಗಳ ಅಧಿಕೃತ ವಿರಾಮದ ನಂತರ, ಅವರು ಮತ್ತೆ ಕೆಲಸಕ್ಕೆ ಮುಂದಾಗಿ ಅಮರಾವತಿ ಜನತೆಗೆ ಬಿಸಿ ಬಿಸಿ ದೋಸೆಗಳನ್ನು ನೀಡಿದರು.


ಬೆಳಗ್ಗೆ 8 ಗಂಟೆಗೆ ಅವರು 15,773ನೇ ದೋಸೆಯನ್ನು ತಯಾರಿಸಿ ಹೊಸ ದಾಖಲೆಯನ್ನು ಅಧಿಕೃತವಾಗಿ ಮುಗಿಸಿದರು. ಅದೇ ವೇಳೆ, ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಪ್ರವೀಣ್ ರಾಉತ್ ಅವರು ಮನೋಹರ್ ಅವರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಅಮರಾವತಿ ಜನರಿಂದ ದೋಸೆ ತಿನ್ನಲು ಹಾಗೂ ದಾಖಲೆಯನ್ನು ನೋಡಲು ಭಾರಿ ಪ್ರತಿಕ್ರಿಯೆಯು ವ್ಯಕ್ತವಾಯಿತು.ಶನಿವಾರ ಬೆಳಗ್ಗೆ 7 ಗಂಟೆಯಿಂದ ಮನೋಹರ್ ದೋಸೆ ತಯಾರಿಕೆ ಪ್ರಾರಂಭಿಸಿದ ನಂತರ ಸಾವಿರಾರು ಜನರು ಸಾಲಿನಲ್ಲಿ ನಿಂತು ದೋಸೆ ಸವಿದರು. ರಾತ್ರಿ 3 ರಿಂದ 5ರವರೆಗೆ ಜನರ ಸಂಖ್ಯೆ ಸ್ವಲ್ಪ ಕಡಿಮೆಯಾದರೂ, ಬೆಳಗ್ಗೆ 5 ರಿಂದ 8ರವರೆಗೆ ಮತ್ತೆ ಉತ್ಸಾಹ ತುಂಬಿತು.


ಈ ದಾಖಲೆಯ ಕಾರ್ಯಕ್ರಮದಲ್ಲಿ 30,000ಕ್ಕೂ ಹೆಚ್ಚು ಜನರು ಮನೋಹರ್, ಅವರ ಪತ್ನಿ ಅಪರ್ಣಾ, ಮತ್ತು ತಂಡ ತಯಾರಿಸಿದ ದೋಸೆಗಳನ್ನು ಸವಿದರು. ಭಾನುವಾರ ರಾತ್ರಿ ಬದ್ನೇರಾ ಶಾಸಕ ರವಿ ರಾಣಾ ಕೂಡ ಸ್ಥಳಕ್ಕೆ ಬಂದು ಸ್ವತಃ ಕೆಲವು ದೋಸೆಗಳನ್ನು ತಯಾರಿಸಿದರು. ಎಲ್ಲರಿಗೂ ಉಚಿತ ದೋಸೆಗಳನ್ನು ವಿತರಿಸಲಾಯಿತು.

ಈ ದಾಖಲೆಯ ದೋಸೆ ತಯಾರಿಸಲು ಅವರು ಒಂದೇ ಸಮಯದಲ್ಲಿ ನಾಲ್ಕು ತವಾಗಳಲ್ಲಿ  ದೋಸೆ ತಯಾರಿಸಲಾಯಿತು. ಪ್ರತಿ ಎರಡು ನಿಮಿಷಕ್ಕೆ ಸುಮಾರು 28 ಡೋಸೆ ಸಿದ್ಧವಾಗಿ ತಿನ್ನವವರ ಹೊಟ್ಟೆ ಸೇರಿದವು  ಇದಕ್ಕಾಗಿ  500 ಕೆ.ಜಿ. ದೋಸೆ ಹಿಟ್ಟನ್ನು ಮತ್ತು 800 ಕೆ.ಜಿ. ಚಟ್ನಿಯನ್ನು ಬಳಸಲಾಯಿತು


#Dosa #Food #WorldRecord #VishnuManohar #IndianCuisine #StreetFood #CulinaryArts #FoodLovers #Foodiegram #FoodInspiration #GourmetDosa #CulturalHeritage #TastyTreats #DosaLove #ChefVishnu #EpicureanDelight #GlobalCookoff #FoodChallenge #RecordBreakingFood

18 ಅಕ್ಟೋಬರ್ 2025

ದೀಪ..


 ದೀಪ..


ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ  ತಮ||

ಸಿಹಿಜೀವಿ ವೆಂಕಟೇಶ್ವರ