This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
03 ಏಪ್ರಿಲ್ 2026
ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕತಿರುಪತಿ!
ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕತಿರುಪತಿ!
ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕ ತಿರುಪತಿ ಇದೆ. ದಿನವೂ ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸ್ವಾಮಿ ನೆಲೆಸಿರುವ ಚಿಕ್ಕತಿರುಪತಿ ಎಂದು ಹೆಸರಾದ ತಾಣವೇ ಸಿದ್ದನಹಳ್ಳಿ. ಶಿರಾ ತಾಲ್ಲೂಕಿನ ಸಿದ್ದನಹಳ್ಳಿಯು ತಾಲ್ಲೂಕು ಕೇಂದ್ರದಿಂದ 14 ಕಿಲೋಮೀಟರ್ ಅಂತರದಲ್ಲಿದೆ.ಶಿರಾದಿಂದ ಅಮರಾಪುರ ರಸ್ತೆಯ ಮೂಲಕ 12 ಕಿಲೋಮೀಟರ್ ಚಲಿಸಿ ತಿರುವಿನಲ್ಲಿ 2 ಕಿಲೋಮೀಟರ್ ದಾರಿ ಕ್ರಮಿಸಿದರೆ ಸಿಗುವುದೇ ಸಿದ್ದನಹಳ್ಳಿ ಶ್ರೀಕ್ಷೇತ್ರ. ಇದಕ್ಕೆ ವೆಂಕಟೇಶ್ವರ ದೇವಾಲಯ ಹಾಗೂ ತಿಮ್ಮಪ್ಪ ದೇವಾಲಯ ಎಂತಲೂ ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಶ್ರೀತಿಮ್ಮಪ್ಪ ಸ್ವಾಮಿಯು 200 ವರ್ಷಗಳಿಂದ ನೆಲೆಗೊಂಡಿದ್ದಾರೆ. 1992ರಿಂದ 1995ರವರೆಗೆ ನವೀನ ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.
1995ರಲ್ಲಿ ತಿರುಮಲ ತಿರುಪತಿದೇವಸ್ಥಾನಂ ವತಿಯಿಂದ ಕೊಡುಗೆಯಾಗಿ 5 ಆಡಿ ಎತ್ತರ ಸುಂದರ ಕೃಷ್ಣಶೀಲಾಮೂರ್ತಿ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ನೀಡಲಾಗಿದೆ. ಶ್ರೀಸ್ವಾಮಿಯು ಹಸನ್ಮುಖಿಯಾಗಿ ಭಕ್ತರನ್ನು ಸೆಳೆಯುತ್ತಾ ಕಷ್ಟಕಾರ್ಪಣ್ಯವನ್ನು ನಿವಾರಿಸುತ್ತಾ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರಿಗೆ ದರ್ಶನ ಕರುಣಿಸಿ ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ವರ್ಷವಿಡೀ ಎಲ್ಲಾ ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಕಾರ್ಯಕಲಾಪಗಳು ನೆಡೆಯುತ್ತಿವೆ. ದಿವಂಗತ ಶಿಕ್ಷಕರಾದ ಶ್ರೀಬಿ.ನಂಜಯ್ಯ ರವರು ಜವಾಬ್ದಾರಿ ವಹಿಸಿಕೊಂಡು ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ತನ್ನ ಆಪ್ತ ಶಿಷ್ಯರ ಸಹಕಾರದಿಂದ ಭಕ್ತರಿಂದ ದೇಗುಲ ನಿರ್ಮಾಣ ಮಾಡಲು ಸಾಧ್ಯವಾಯಿತು. ಜೊತೆಗೆ ತಮ್ಮ ಸಮುದಾಯದ ಗುಡಿಕಟ್ಟಿನ ಅಣ್ಣತಂದಿರುಗಳ ಹಾಗೂ ಕಾರ್ಯಕಾರಿ ಸಮಿತಿಯ ಮತ್ತು ಗ್ರಾಮದ ಭಕ್ತರ ಸರ್ವವಿಧವಾದ ಸಹಕಾರ ಸಿಕ್ಕಿತ್ತು.
1995 ಮೇ 10, 11, 12, ಮೂರು ದಿನಗಳ ಕಾಲ ವಿಜೃಂಭಣೆಯಿಂದ ಉನ್ನತ ವೇದೋಕ್ತ ವಿದ್ವಾಂಸರಿಂದ ಹೋಮ, ಹವನಾದಿಗಳು-ಪಾರಾಯಣಗಳು, ಅಧಿವಾಸಗಳು, ಧಾರ್ಮಿಕ ಪೂಜಾವಿಧಿವಿಧಾನಗಳೊಂದಿಗೆ ಪರಮ ಪೂಜ್ಯ ಶ್ರೀಶ್ರೀಗಳ ದಿವ್ಯಸಾನಿದ್ಯದಲ್ಲಿ ಬೆಂಗಳೂರು ಜಿಲ್ಲೆ, ಬಸವನಹಳ್ಳಿಯ ಪಾಂಚರಾತ್ರಗಮ ಉ।ವೇ॥ಪು॥ವಿದ್ವಾನ್ ಶ್ರೀ ರಾಮಕೃಷ್ಣಚಾರ್ಯರ ಮತ್ತು 11 ಜನರ ಆಗಮಿಕರ ತಂಡದೊಂದಿಗೆ ಶ್ರೀಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಟಾಪನೆ ಕಾರ್ಯ ನೆರವೇರಿತು.
ವಿಮಾನಗೋಪುರ, ಕಳಸಪ್ರತಿಷ್ಠೆ, ಮತ್ತು ಕುಂಭಾಭಿಷೇಕದ ಕಾರ್ಯವನ್ನು ನೆರವೇರಿಸುವಾಗ ವಿಷ್ಣುವಿನ ವಾಹನವಾದ ಶ್ರೀ ಗರುಡಸ್ವಾಮಿಯು ಗೋಪುರವನ್ನು ಮೂರು ಬಾರಿ ಪ್ರದಕ್ಷಿಣೆ ಬಂದು ಆಶಿರ್ವಾದ ಮಾಡಿದನ್ನ ಜನ ಇನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸುಮಾರು 8 ರಿಂದ 10 ಸಾವಿರ ಜನರ ಸಮಕ್ಷಮದಲ್ಲಿ ಈ ಮಹಾಕಾರ್ಯ ಅಂದು ನಿರ್ವಿಘ್ನವಾಗಿ ನೆರವೇರಿತು.
ಸಿದ್ದನಹಳ್ಳಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವರಿಗೆ ಆರತಿ ಉತ್ಸವನ್ನು ಸಂಭ್ರಮದಿಂದ ಗ್ರಾಮದ ಜನತೆ, ಹಿರಿಯರು, ಮಹಿಳೆಯರು ಭಕ್ತಿಪೂರ್ವಕವಾಗಿ ನೆರವೇರಿಸಿದರು. ಅಂದು ಸಾಂಕೇತಿಕವಾಗಿ ಉಚಿತ ವಿವಾಹ ನೆರವೇರಿಸಲಾಯಿತು. ನಂತರ 48 ದಿನ ವಿವಿಧ ಭಕ್ತಮಹಾಷಯರು ಮಂಡಲ ಪೂಜೆಯನ್ನು ನೆರವೇರಿಸಿದರು. ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷವು ವೈಶಾಖಮಾಸ ಶುದ್ಧ ಚಾಂದ್ರಮಾನ ಶ್ರೀ ವೈಷ್ಣವ ಜಯಂತಿ ಚಿತ್ತಾ ನಕ್ಷತ್ರದಂದು ಶ್ರೀ ವೆಂಕಟೇಶ್ವರಸ್ವಾಮಿಯ ವಾರ್ಷಿಕೋತ್ಸವನ್ನು ವೈಭವದೊಂದಿಗೆ ನಡೆಸುತ್ತಾ ಬರಲಾಗಿದೆ.
ಜೊತೆಗೆ ಪ್ರತಿವರ್ಷವೂ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಲಡ್ಡು-ತೀರ್ಥ ಪ್ರಸಾದವೂ ವಿತರಣೆಯಾಗುತ್ತಿದೆ. ತುಮಕೂರು ಜಿಲ್ಲೆಗೆ ಪ್ರಪ್ರಥಮವಾಗಿ ತಿರುಪತಿಯಿಂದ ಬಂದ ಸ್ವಾಮಿ ಇದಾಗಿರುತ್ತದೆ. ಧಾರ್ಮಿಕ ಸಮಾರಂಭಗಳಲ್ಲಿ ಗ್ರಾಮದ ಹಿರಿಯರಿಗೆ, ಸಮುದಾಯದ ಗಣ್ಯರನ್ನು ಗೌರವಿಸುತ್ತಾ ಪ್ರತಿವರ್ಷವೂ ಪೂಜ್ಯಶ್ರೀಗಳನ್ನ ಕರೆಸಿ ಪಾದಪೂಜೆಯೊಂದಿಗೆ ಕಲಾಪ ಜರುಗುತ್ತಿದೆ. ಸದರಿ ದೇವಾಲಯದಲ್ಲಿ ಮದುವೆ ನಾಮಕರಣ, ಚೌಲೋಪನಯನ ಕಾರ್ಯಗಳು ಜರುಗುತ್ತಿವೆ. ವೈಕುಂಠ ಏಕಾದಶಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳಲ್ಲಿ ದೇವಾಲಯದಲ್ಲಿ ವಿಶೇಷವಾಗಿ ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹೊರಗಡೆಯಿಂದ ಬರುವ ಭಕ್ತರ ಅನುಕೂಲಕ್ಕೆ ಉಳಿದುಕೊಳ್ಳಲು ಸರ್ಕಾರ ಅನುದಾನವಿಲ್ಲದೆ ಬರೀ ಗ್ರಾಮೀಣ ಭಕ್ತರುಗಳ ಗುಡಿಕಟ್ಟಿನ ಅಣ್ಣತಮ್ಮಂದಿರ ಸಹಕಾರದಿಂದ ವಿಶ್ರಾಂತಿಗೃಹ ನಿರ್ಮಾಣವಾಗಿದೆ. ಈ ದೇಗುಲಕ್ಕೆ ಸರ್ಕಾರದಿಂದ ಸರ್ಕಾರೇತರ ಸಹಕಾರ ಸಿಕ್ಕಿದಲ್ಲಿ ಉತ್ತಮ ಕಾರ್ಯಗಳು ನಡೆದು ಧಾರ್ಮಿಕ ಸೊಗಡು ಹೆಚ್ಚಿ ಉತ್ತಮ ಕ್ಷೇತ್ರವಾಗುವುದರಲ್ಲಿ ಸಂದೇಹವೇವಿಲ್ಲ.
ಗ್ರಾಮೀಣ ಜನತೆ, ಮಕ್ಕಳಲ್ಲಿ ಭಕ್ತಿ-ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ಧರ್ಮವನ್ನು ರಕ್ಷಿಸಿದ್ದೇ ಆದಲ್ಲಿ ಧರ್ಮವು ನಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ ಇಂತಹ ಚಿಕ್ಕ ತಿರುಪತಿಗೆ ಒಮ್ಮೆಯಾದರು ಹೋಗಿ ಸ್ವಾಮಿಯ ದರ್ಶನ ಪಡೆದರೆ ಜೀವನ ಸಾರ್ಥಕವಾದೀತು. ಈ ದೇಗುಲಕ್ಕೆ ಮಾಜಿ ಸಚಿವರು ಕರ್ನಾಟಕ ಸರ್ಕಾರದ ದೆಹಲಿಯಲ್ಲಿ ವಿಶೇಷ ಪ್ರತಿನಿಧಿಯಾದ ಟಿ ಬಿ ಜಯಚಂದ್ರ ಹಾಗೂ ಮಾಜಿ ಶಾಸಕರಾದ ರಾಜೇಶ್ ಗೌಡರ ಕೊಡುಗೆಗಳನ್ನು ಟ್ರಸ್ಟ್ ನ ಪದಾಧಿಕಾರಿಗಳು ಮನದುಂಬಿ ಸ್ಮರಿಸಿಕೊಳ್ಳುತ್ತಾರೆ. ಇದೇ ರೀತಿಯಲ್ಲಿ ಭಕ್ತರ ಹಾಗೂ ಜನಪ್ರತಿನಿಧಿಗಳ ಸಹಕಾರ ದೊರೆತರೆ ಈ ಕ್ಷೇತ್ರ ಬೆಳೆಯುತ್ತಾ ಬೆಳಗುವಲ್ಲಿ ಸಂದೇಹವಿಲ್ಲ.
ಈ ವರ್ಷದ 31 ನೇ ವಾರ್ಷಿಕೋತ್ಸವದ ಹಾಗೂ ಸಾಮೂಹಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ತಿರುಮಲ ತಿರುಪತಿ ದೇವಸ್ಥಾನದ ಅನುಗ್ರಹದೊಂದಿಗೆ ಏಪ್ರಿಲ್ 11 ಮತ್ತು 12 ರಂದು ನಡೆಯಲಿದೆ. ಮಹಾಶರಣ ಶ್ರೀ ಕಮ್ಮಾರ ಕಲ್ಲಯ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಟ್ಟರಹಳ್ಳಿಯ ನಿಜಶರಣ ಕಮ್ಮಾರ ಕಲ್ಲಯ್ಯ ಶ್ರೀಮಠದ ಪೀಠಾದ್ಯಕ್ಷರಾದ ಪರಮ ಪೂಜ್ಯ
ಶ್ರೀ ಶ್ರೀ ಶ್ರೀ ಡಾ. ನೀಲಕಂಠಾಚಾರ್ಯ ಸ್ವಾಮೀಜಿ ಹಾಗೂ ಪಟ್ಟನಾಯಕನ ಹಳ್ಳಿಯ ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ
ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ ರವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇವಾಲಯದ ವತಿಯಿಂದ ಗೌರವ ಶ್ರೀರಕ್ಷೆ ನೀಡಲಾಗುತ್ತದೆ. ತುಮಕೂರಿನ ಸಾಧಕ ರತ್ನ ಶ್ರೀ ಗುರುಮೂರ್ತಿ, ಸಾಹಿತಿಗಳಾದ ಶ್ರೀಮತಿ ರತ್ನಮ್ಮ ಹಾಗೂ ಸಾಹಿತಿಗಳು ಶಿಕ್ಷಕರೂ ಆದ ಸಿಹಿಜೀವಿ ವೆಂಕಟೇಶ್ವರ ರವರು ಈ ಬಾರಿಯ ಶ್ರೀರಕ್ಷೆ ಪಡೆಯಲಿದ್ದಾರೆ.
ವೇದಿಕೆ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ವೆಂಕಟೇಶ್ವರ ಸ್ವಾಮಿಯ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಲ್ ಎನ್ ಮಂಜುನಾಥ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಬನ್ನಿ ಚಿಕ್ಕ ತಿರುಪತಿ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗೋಣ.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು ಹಾಗೂ ಸಾಹಿತಿಗಳು
ತುಮಕೂರು
9900925529
ಸಿಹಿಜೀವಿಯ ಹನಿ
ಭರವಸೆಯ ನಾಳೆಗಳನ್ನು
ಅರಸುತ್ತಾ ಸಾಗುತ್ತಿದೆ ನಮ್ಮ ಪಯಣ|
ಕಷ್ಟಗಳು ನೂರಿರಲಿ
ನಿಲ್ಲದು ನಮ್ಮ ಬಾಳ ಯಾನ||
ಸಿಹಿಜೀವಿ ವೆಂಕಟೇಶ್ವರ
#Quote #KannadaQuote #Sihijeevi #SihijeeviyaPayana #Motivation #Inspiration #Wisdom #LifeLessons #CulturalQuotes #IlluminateYourJourney #StayPositive #QuotesToLiveBy #LoveKannada #JoyfulJourney #Mindfulness #Empowerment #HeartfeltQuotes #QuoteOfTheDay #Philosophy
28 ಮಾರ್ಚ್ 2026
Ipl ಫ್ಯಾನ್ ಪಾರ್ಕ್ ತುಮಕೂರಲ್ಲಿ..
ತುಮಕೂರಿನಲ್ಲಿ
ಕಳೆದ ವರ್ಷ ನಾನು IPL ಫ್ಯಾನ್ ಪಾರ್ಕ್ ಬಗ್ಗೆ ವೀಡಿಯೋ ಹಾಕಿದ್ದೆ ಬಹಳಷ್ಟು ಮುಖಪುಟದ ಬಂಧುಗಳು ಪ್ಯಾನ್ ಪಾರ್ಕ್ ಗೆ ಬರಲು ಉತ್ಸುಕರಾಗಿದ್ದರು. ಇಂದು ಮತ್ತು ನಾಳೆ ಮಾತ್ರ ತುಮಕೂರಿನಲ್ಲಿ ಫ್ಯಾನ್ ಪಾರ್ಕ್ ಇರುತ್ತದೆ.ಅಂದರೆ 28 ಮತ್ತು 29 ದಿನಾಂಕ ಮಾತ್ರ. ಇಂದು ನಮ್ಮ RCB ಮತ್ತು ಹೈದರಾಬಾದ್ ನಡುವಿನ ಪಂದ್ಯವನ್ನು ದೊಡ್ಡ ಪರದೆಯ ಮೇಲೆ ಅಲ್ಲಿಯೇ ನೋಡೋಣ ಬನ್ನಿ..
ಬರಲಾಗದವರು
ನನ್ನ sihijeeviya payana ಯೂಟ್ಯೂಬ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು..
#TataIPL #IPLMatches #TumkurFanPark #RCB #Hyderabad #Sihijeevi #SihijeeviyaPayana #CricketFan #MatchDay #IPL2023 #RoyalChallengersBangalore #CricketLovers #LiveCricket #FanExperience #SportsFan #CricketInIndia #GameDay #CheerForRCB #LovelyIndia #TeamRCB
24 ಮಾರ್ಚ್ 2026
ಪಾರೋದ ಐತಿಹಾಸಿಕ ರಿನ್ ಪುಂಗ್ ಕೋಟೆ.
ಪಾರೋದ ಐತಿಹಾಸಿಕ ರಿನ್ ಪುಂಗ್ ಕೋಟೆ.
ಭೂತಾನ್ ನ ಥಿಂಪು ನಂತರ ಸುಂದರ ನಗರ ಪಾರೋ. ಇಡೀ ದೇಶದಲ್ಲಿ ಇಲ್ಲಿ ಮಾತ್ರ ಏರ್ಪೋರ್ಟ್ ಇರುವುದು. ನಮ್ಮ ಪ್ರವಾಸದ ಎರಡನೇ ದಿನ ನಾವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ರಿನ್ ಪುಂಗ್ ಝಾಂಗ್ ನೊಡಲು ಹೊರಟೆವು. ರಿನ್ ಪುಂಗ್ ಕೋಟೆ. ಕೆಲವರು ಹಾಗೂ ಪಾರೋ ಝಾಂಗ್ ಎಂದು ಕರೆತ್ತಾರೆ. ಇದು ಭೂತಾನಿನ ಪಾರೋ ಜಿಲ್ಲೆಯ ಕಾಗ್ಯು ಶಾಲೆಯ ಡ್ರುಕ್ಪಾ ವಂಶಾವಳಿಯ ಒಂದು ದೊಡ್ಡ ಕೋಟೆಯಾಗಿದೆ.
ನಾವು ಈ ಕೋಟೆಗೆ ಹಿಂದಿನ ಭಾಗದಿಂದ ಪ್ರವೇಶ ಪಡೆದೆವು.ಈ ಕೋಟೆಗೆ ಹೋಗುವ ಮೊದಲು ನಮ್ಮ ಗೈಡ್ ತೆಂದಿನ್ ಒಂದು ರೀತಿಯ ವಿಶೇಷವಾದ ವೇಲ್ ರೀತಿಯ ಬಟ್ಟೆಯನ್ನು ಹಾಕಿದರು.ಇದರ ಬಗ್ಗೆ ಕೇಳಿದಾಗ ಭೂತಾನ್ ನ ಜನತೆ ಅವರ ಪ್ರಮುಖ ದೇವಾಲಯ, ಬೌದ್ಧ ಸ್ತೂಪ, ಸರ್ಕಾರಿ ಕಛೇರಿ ,ಸಂಸತ್ ಗೆ ಭೇಟಿ ನೀಡುವಾಗ ಈ ರೀತಿಯ ವಿಶೇಷವಾದ ಅಡ್ಡ ವಸ್ತ್ರಗಳನ್ನು ಹಾಕಬೇಕು ಇದರಲ್ಲಿ ಮೂರು ಬಗೆಯ ವಸ್ತ್ರಗಳನ್ನು ಅವರ ಆಕರ್ಷಣೀಯ ಮತ್ತು ಹುದ್ದೆಗಳ ಆಧಾರದ ಮೇಲೆ ಹಾಕಲಾಗುತ್ತದೆ.
ರಿನ್ ಪುಂಗ್ ಕೋಟೆಯು ಕೇವಲ ಕೋಟೆಯಾಗಿರದೇ ಇದು ಬೌದ್ಧ ಮಠವೂ ಹೌದು ಹಾಗೂ ಜಿಲ್ಲಾ ಸನ್ಯಾಸಿಗಳ ಮಂಡಳಿ ಮತ್ತು ಪಾರೋ ಝಾಂಗ್ಖಾಗ್ನ ಸರ್ಕಾರಿ ಆಡಳಿತ ಕಚೇರಿಗಳನ್ನು ಹೊಂದಿದೆ. ಇದನ್ನು ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಸೇರ್ಪಡೆಗಾಗಿ ಭೂತಾನ್ನ ತಾತ್ಕಾಲಿಕ ಪಟ್ಟಿಯಲ್ಲಿ ತಾತ್ಕಾಲಿಕ ತಾಣವಾಗಿ ಪಟ್ಟಿ ಮಾಡಲಾಗಿದೆ. ಆದಷ್ಟು ಬೇಗ ಇದು ಯುನೆಸ್ಕೋ ಸಾಂಸ್ಕೃತಿಕ ತಾಣವಾಗಿ ಸೇರ್ಪಡೆಯಾಗಲಿ ಎಂದು ಆಶಿಸೋಣ.
ಈ ಕೋಟೆಯ ಪ್ರವೇಶ ದ್ವಾರದಲ್ಲಿ ನಮ್ಮನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.ಆ ಸಮಯದಲ್ಲಿ ಸಭ್ಯ ಉಡುಪು ಧರಿಸಿದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು.ನಮ್ಮ ತಂಡದ ಸ್ನೇಹಿತರಲ್ಲಿ ಒಬ್ಬರು ಬರ್ಮುಡ ಧರಿಸಿದ್ದರು ಅವರನ್ನು ಒಳಗಡೆ ಬಿಡಲಿಲ್ಲ. ಅಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಅಲ್ಲಿ ಪಾಲಿಸಲಾಗುತ್ತದೆ. ಜೊತೆಯಲ್ಲಿ ನಾವು ಆ ಕೋಟೆಯಲ್ಲಿ ಪ್ರಶಾಂತವಾಗಿ ಇರುವಂತೆ ಸೂಚನೆ ನೀಡಿದರು.
ಪಾರೋ ಝೋಂಗ್ನ ಐತಿಹಾಸಿಕ ದಾಖಲೆಗಳ ಪ್ರಕಾರ ಈ ಸ್ಥಳದ ಕೆಳಗಿನ ಬಂಡೆಯ ಮುಖವನ್ನು 8 ನೇ ಶತಮಾನದಲ್ಲಿ ಗುರು ರಿನ್ಪೋಚೆರವರು ಈ ಸ್ಥಳವನ್ನು ರಿಂಗ್ಪಂಗ್ ಎಂದು ಕರೆದರು. ನಂತರ ಈ ಸ್ಥಳದಲ್ಲಿ ಝೋಂಗ್ ಅನ್ನು ನಿರ್ಮಿಸಿದಾಗ ಅದು ರಿಂಗ್ ಫಂಗ್ ಝೋಂಗ್ ಎಂದು ಕರೆಯಲ್ಪಟ್ಟಿತು.
15 ನೇ ಶತಮಾನದಲ್ಲಿ ಸ್ಥಳೀಯ ಸಮುದಾಯವು ಪಾರೊದಲ್ಲಿರುವ ಹಂಗ್ರೆಲ್ ಬಂಡೆಯನ್ನು ಫಾಜೊ ಡ್ರುಗೊಮ್ ಝಿಗ್ಪೊ ಅವರ ವಂಶಸ್ಥ ಲಾಮಾ ಡ್ರುಂಗ್ ಡ್ರುಂಗ್ ಗಯಾಲ್ಗೆ ಅರ್ಪಿಸಿತು. ಡ್ರುಂಗ್ ಡ್ರುಂಗ್ ಗಯಾಲ್ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು. ನಂತರ ಹಂಗ್ರೆಲ್ ಡ್ಜಾಂಗ್ ಎಂದು ಕರೆಯಲ್ಪಡುವ ಐದು ಅಂತಸ್ತಿನ ಕೋಟೆಯನ್ನು ನಿರ್ಮಿಸಿದರು.
17 ನೇ ಶತಮಾನದ ವೇಳೆಗೆ ಹಂಗ್ರೆಲ್ನ ಪ್ರಭುಗಳು ಎಂದು ಕರೆಯಲ್ಪಡುವ ಅವರ ವಂಶಸ್ಥರು ಈ ಕೋಟೆಯನ್ನು ಏಕೀಕೃತ ಭೂತಾನ್ ರಾಜ್ಯದ ಸ್ಥಾಪಕ ಮತ್ತು ಡ್ರುಕ್ಪಾ ವಂಶಾವಳಿಯ ಮುಖ್ಯಸ್ಥ ಝಬ್ಡ್ರಂಗ್ ನ್ಗಾವಾಂಗ್ ನಮ್ಗ್ಯಾಲ್ಗೆ ಅವರ ಧಾರ್ಮಿಕ ಮತ್ತು ರಾಜಕೀಯ ಅಧಿಕಾರವನ್ನು ಗುರುತಿಸಿ ಅರ್ಪಿಸಿದರು. 1644 ರಲ್ಲಿ ಝಬ್ಡ್ರಂಗ್ ಹಳೆಯ ರಚನೆಯನ್ನು ಕೆಡವಿ ಹೊಸ ಝೋಂಗ್ಗೆ ಅಡಿಪಾಯ ಹಾಕಿದರು.
23 ನೇ ಪೆನ್ಲೋಪ್ ದಾವಾ ಪೆಂಜೋರ್ನ ಆಳ್ವಿಕೆಯಲ್ಲಿ ಮೊದಲ ರಾಜ ಗೊಂಗ್ಸಾ ಉಗ್ಯೆನ್ ವಾಂಗ್ಚುಕ್ ಸಿಂಹಾಸನಾರೋಹಣ ಮಾಡುವ ಮೊದಲು ಕೋಟೆಯು ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಯಿತು.20 ಮೀಟರ್ ಅಗಲದ ಥೊಂಗ್ಡ್ರೆಲ್ ಹೊರತುಪಡಿಸಿ, ಹೆಚ್ಚಿನ ಅವಶೇಷಗಳು ಮತ್ತು ಪ್ರತಿಮೆಗಳು ನಾಶವಾದವು. ಥೊಂಗ್ಡ್ರೆಲ್ಗೆ ಗೌರವ ಸಲ್ಲಿಸುವುದರಿಂದ ಆಧ್ಯಾತ್ಮಿಕ ಅರ್ಹತೆ ಮತ್ತು ವಿಮೋಚನೆಯ ಸಾಮರ್ಥ್ಯ ಬರುತ್ತದೆ ಎಂದು ಭಕ್ತರು ನಂಬಿದ್ದಾರೆ. 1993 ರ ಚಲನಚಿತ್ರ ಲಿಟಲ್ ಬುದ್ಧದ ಹಲವಾರು ದೃಶ್ಯಗಳನ್ನು ಪಾರೋ ರಿನ್ಪುಂಗ್ ಝೋಂಗ್ನಲ್ಲಿ ಚಿತ್ರೀಕರಿಸಲಾಗಿದೆ.
ಈ ಕೋಟೆಯಲ್ಲಿರುವ ಪ್ರಮುಖ ಸ್ಮಾರಕಗಳನ್ನು ನಮಗೆ ನಮ್ಮ ಗೈಡ್ ನಮಗೆ ತೋರಿಸುತ್ತಾ ವಿವರಣೆ ನೀಡುತ್ತಾ ಕೋಟೆಯಲ್ಲಿ ಒಂದು ಸುತ್ತು ಹಾಕಿಸಿ ನಮಗೆ ಕೋಟೆಯ ಪರಿಚಯ ಮಾಡಿಸಿದರು.ಸೂರ್ಯಾಸ್ತದ ಸಮಯದಲ್ಲಿ ರಿನ್ಪುಂಗ್ ಡ್ಜಾಂಗ್ ಮತ್ತು ನೇಮಿ ಝಾಮ್ ಸೇತುವೆ
ರಿನ್ಪುಂಗ್ ಡ್ಜಾಂಗ್ ಒಳಗೆ ಹದಿನಾಲ್ಕು ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ಅವೆಂದರೆ ಕುಂಗರ್ವ,ಸನ್ಯಾಸಿಗಳ ಸಭಾ ಭವನ,ಶ್ರೀಗಂಧದ ಸ್ತೂಪ,ರಕ್ಷಕ ದೇವಾಲಯ,ಗುರುವಿನ ಎಂಟು ಅಭಿವ್ಯಕ್ತಿಗಳ ದೇವಾಲಯ,ಲಾಮಾ ಮುಖ್ಯಸ್ಥರ ಪ್ರಾರ್ಥನಾ ಮಂದಿರ,ಅಮಿತಾಯಸ್ ಪ್ರಾರ್ಥನಾ ಮಂದಿರ,ದಿ ಕ್ಲಿಯರ್ ಕ್ರಿಸ್ಟಲ್ ಶ್ರೈನ್,ಹನ್ನೊಂದು ಮುಖದ ಅವಲೋಕಿತೇಶ್ವರನ ಪ್ರಾರ್ಥನಾ ಮಂದಿರ,ಅಬಾಟ್ನ ಅಪಾರ್ಟ್ಮೆಂಟ್ಗಳು,ಅಕ್ಷೋಭ್ಯ ದೇಗುಲ,ನಿಧಿ ಬಹಿರಂಗಪಡಿಸುವವರ ದೇವಾಲಯ,ರಾಜನ ಅಪಾರ್ಟ್ಮೆಂಟ್ಗಳು,ಬುರ್ಸಾರನ ದೇವಾಲಯ
ಮುಖ್ಯ ಝೊಂಗ್ನ ಹೊರಗೆ ದೇಯಾಂಗ್ಖಾ ದೇವಸ್ಥಾನವಿದೆ.
ರಿನ್ಪುಂಗ್ ಡ್ಜಾಂಗ್ ಮೇಲಿನ ಬೆಟ್ಟದ ಮೇಲೆ 1649 ರಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಕಾವಲು ಗೋಪುರ ಕೋಟೆ ಅಥವಾ ಟಾ ಡ್ಜಾಂಗ್ ಇದೆ. 1968 ರಲ್ಲಿ ಇದನ್ನು ಭೂತಾನ್ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನೆಲೆಯಾಗಿ ಸ್ಥಾಪಿಸಲಾಯಿತು .
ರಿನ್ಪುಂಗ್ ಡ್ಜಾಂಗ್ನ ಸ್ವಲ್ಪ ಕೆಳಗೆ ಸಾಂಪ್ರದಾಯಿಕ ಮುಚ್ಚಿದ ಕ್ಯಾಂಟಿಲಿವರ್ ಸೇತುವೆ ಇದೆ.
ಈ ಕೋಟೆಯ ಸೌಂದರ್ಯವನ್ನು ಸವಿಯುತ್ತಾ ಸಾಗಿದ ನಮ್ಮನ್ನು ನಮ್ಮ ಗೈಡ್ ಮಿಲೆನಿಯಮ್ ವ್ಯೂ ಪಾಯಿಂಟ್ ಬಳಿ ಕರೆದುಕೊಂಡು ಹೋದರು.ಅದು ಬಹಳ ಸುಂದರವಾದ ದೃಶ್ಯಗಳನ್ನು ಹೊಂದಿ ನಮ್ಮ ಮನ ತಣಿಸಿತು. ಪಾರೋ ಏರ್ಪೋರ್ಟ್, ನದಿ ಕಣಿವೆ, ಕಾಡುಗಳು, ಮನೆಗಳು ಮುಂತಾದ ಸೀನರಿಗಳು ನೋಡುಗರನ್ನು ಸೆಳೆಯುತ್ತವೆ.ಅದೇ ಪ್ರದೇಶದಲ್ಲಿ ಇರುವ ಒಂದು ಮನೆಯ ಕಡೆ ತೋರಿಸಿದ ನಮ್ಮ ಗೈಡ್ ಆ ಮನೆಯು ರಾಜ ಮನೆತನದವರು ಪಾರೋಗೆ ಬಂದಾಗ ಉಳಿದುಕೊಳ್ಳಲು ಇರುವ ಮನೆ. ಭಾರತದಲ್ಲಿ ಇಂದಿರಾಗಾಂಧಿ ರವರ ಹತ್ಯೆ ಆದಾಗ ರಾಜೀವ್ ಗಾಂಧಿಯವರನ್ನು ಆ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು ಎಂದು ಹೇಳಿದರು.
ಆ ಕೋಟೆಯಲ್ಲಿ ಇರುವ ಕೆಲ ವಿಶೇಷವಾದ ಪೋಟೋಗಳ ಕಡೆಗೆ ನಮ್ಮ ಗಮನ ಸೆಳೆದ ನಮ್ಮ ಗೈಡ್ ತೆಂದಿನ್ ಆ ಕೋಟೆಯಲ್ಲಿ ವಾರ್ಷಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಸಿದರು.
ಸಾಂಪ್ರದಾಯಿಕ ಭೂತಾನೀಸ್ ಚಂದ್ರಮಾನ ಕ್ಯಾಲೆಂಡರ್ನ ಎರಡನೇ ತಿಂಗಳಿನ ಹನ್ನೊಂದನೇ ತಾರೀಖಿನಿಂದ ಹದಿನೈದನೇ ದಿನದವರೆಗೆ ಅಂದರೆ ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ನ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ರಿನ್ಪುಂಗ್ ಕೋಟೆಯಲ್ಲಿ ಒಂದು ದೊಡ್ಡ ವಾರ್ಷಿಕ ಉತ್ಸವ ಅಥವಾ ತ್ಶೆಚು ನಡೆಯುತ್ತದೆ. ಈ ಸಂದರ್ಭದಲ್ಲಿ ಪವಿತ್ರ ಚಿತ್ರಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಧಾರ್ಮಿಕ ಕಥೆಗಳನ್ನು ತಿಳಿಸುವ ಸಾಂಪ್ರದಾಯಿಕ ಮುಖವಾಡ ನೃತ್ಯಗಳ ಸರಣಿಯನ್ನು ಸನ್ಯಾಸಿಗಳು ಹಲವಾರು ದಿನಗಳವರೆಗೆ ಪ್ರದರ್ಶಿಸುತ್ತಾರೆ.
ಹದಿನೈದನೇ ದಿನದ ಬೆಳಗಿನ ಜಾವದಲ್ಲಿ, ಪದ್ಮಸಂಭವನ ಎಂಟು ಅವತಾರಗಳಾದ ಗುರು ಪೆಮಾ ಜಂಗ್ನಿ, ಗುರು ನಿಮಾ ಯೋಯೆಜರ್, ಗುರು ಸಿಂಗ್ಯೆ ಡ್ರಾಡ್ರಾಂಗ್, ಗುರು ತ್ಶೋಕಿ ದೋರ್ಜಿ, ಗುರು ಶಾಚಾ ಸಿಂಗ್ಯೆ, ಗುರು ಪೆಮಾ ಗೈಲ್ಪೋ, ಗುರು ದೋರ್ಜಿ ಡೋಲೋ ಮತ್ತು ಗುರು ಲೋಡನ್ ಚೋಕ್ಸೆ ಗಳನ್ನು ಚಿತ್ರಿಸುವ ಒಂದು ದೊಡ್ಡ ಪವಿತ್ರ ಥೋಂಗ್ಡ್ರೆಲ್ ಬ್ಯಾನರ್ ಥಂಗ್ಕಾವನ್ನು ಬೆಳಗಿನ ಜಾವದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಸೂರ್ಯನ ಬೆಳಕು ಅದರ ಮೇಲೆ ಬೀಳಲು ಬಿಡದಿರುವ ಸಂಪ್ರದಾಯವನ್ನು ಉಳಿಸಿಕೊಳ್ಳಲು ಬೌದ್ಧ ಸನ್ಯಾಸಿಗಳು ಮುಖವಾಡ ನೃತ್ಯ ಮಾಡುವ ನೆಲವನ್ನು ದೆಯಾಂಗ್ಖಾ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಕೋಟೆಯ ಐತಿಹಾಸಿಕ ಜಾಗೂ ಧಾರ್ಮಿಕ ಮಹತ್ವ ತಿಳಿದ ನಾವು ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿ ನಮ್ಮ ತಂಡದ ಜೊತೆಯಲ್ಲಿ ನೆನಪಿಗಾಗಿ ಪೋಟೋ ತೆಗೆದುಕೊಂಡು ಭೂತಾನ್ ನ ಮತ್ತೊಂದು ದೇಗುಲ ಕಿಚು ಲಕಾಂಗ್ ಕಡೆಗೆ ಪಯಣ ಬೆಳೆಸಿದೆವು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
21 ಮಾರ್ಚ್ 2026
ನಮ್ಮೂರ ಪಾತೇದೇವರು.
ಪಾತಲಿಂಗೇಶ್ವರ ಮಹಿಮೆ.
ನಮ್ಮೂರ ಅಧಿ ದೇವತೆ ಚೌಡೇಶ್ವರಿಯಷ್ಟೇ ಪ್ರಮುಖವಾದ ಮೂರು ದೇವಾಲಯಗಳಲ್ಲಿ ಪಾತಲಿಂಗೇಶ್ವರ ಅಥವಾ ಪಾರ್ಥಲಿಂಗೇಶ್ವರ ಗುಡಿಯು ನಮ್ಮೂರ ಜನರ ಪ್ರಾರ್ಥನಾ ತಾಣವಾಗಿದೆ.
ಬಾಲ್ಯದಲ್ಲಿ ನಮ್ಮೂರ ಶಾಲೆಯಲ್ಲಿ ಓದುವಾಗ ಸೋಮವಾರ ಮತ್ತು ಪ್ರಮುಖವಾದ ದೇವರ ಕಾರ್ಯವಿದ್ದಾಗ ನಮ್ಮ ಸಹಪಾಠಿ ಚಂದ್ರ ಶಾಲೆಗೆ ಬರುತ್ತಿರಲಿಲ್ಲ. ನಮ್ಮ TNT ಅರ್ಥಾತ್ ತಿಪ್ಪೇಶಪ್ಪ ಮೇಷ್ಟ್ರು ಚಂದ್ರನ ಅಕ್ಷರಶಃ ಹೊತ್ತುಕೊಂಡು ಬನ್ನಿ ಎಂದು ನಮ್ಮನ್ನು ಕಳಿಸುತ್ತಿದ್ದರು.ನಾವು ಕೆಲವೊಮ್ಮೆ ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸಿ ಅವನನ್ನು ಎತ್ತಾಕಿಕೊಂಡು ಬಂದಿದ್ದೆವು.ಹೀಗೆ ಒಮ್ಮೆ ಚಂದ್ರನನ್ನು ಎತ್ತಾಕಿಕೊಂಡು ಬರಲು ಹೋದಾಗ ಅವರಪ್ಪ ನಮ್ಮನ್ನು ಗದರಿ ಕಳಿಸಿ ಶಾಲೆಗೆ ಬಂದು " ಮೇಷ್ಟ್ರೇ ನಮ್ ಹುಡ್ಗ ಸೋಮಾರ ಇಸ್ಕೂಲ್ ಗೆ ಬರಲ್ಲ ಅಷ್ಟೇ, ಇನ್ಮೇಲೆ ಈ ಹುಡುಗ್ರು ನಮ್ ಮನೆ ಹತ್ರ ಬಂದ್ರೆ ನೆಟ್ಗಿರಲ್ಲ ನೋಡು" ಎಂದು ಗದರಿ ಹೋಗಿದ್ದರು. ಅಲ್ಲಿ ಗೆ ನಮ್ ಮಾಷ್ಟ್ರು ಚಂದ್ರು ಬಂದಾಗ ಬರಲಿ ಎಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದರು.ಚಂದ್ರಪ್ಪನಿಗೆ ಪಾತಲಿಂಗೇಶ್ವರನ ಸೇವೆ ಮಾಡುವ ಪುಣ್ಯ ಲಭಿಸಿತ್ತು.ದೊಡ್ಡಪ್ಪ ಜಡಿಯಪ್ಪ,ಹಾಗೂ ಅಪ್ಪ ತಮ್ಮಣ್ಣನವರ ದೈವ ಭಕ್ತಿಯಿಂದ ಪ್ರೇರಿತನಾದ ಚಂದ್ರಪ್ಪ ದೇವರ ಪೂಜೆಗೆ ತನ್ನ ಜೀವನ ಮೀಸಲಿಟ್ಟ.ಈಗ ಪಾತಲಿಂಗೇಶ್ವರ ಸ್ವಾಮಿಯ ಪ್ರಮುಖ ಅರ್ಚಕನಾಗಿರುವ ನನ್ನ ಗೆಳೆಯ ಚಂದ್ರಪ್ಪ ನಮ್ಮ ಪಾತೇದೇವರ ದೈವಿಕ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದಾನೆ.ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಪಾತೇದೇವರ ಗುಡಿಯ ಬಾಗಿಲು ಮುಚ್ಚಿತ್ತು.ಎಲ್ಲಿದ್ದನೋ ಗೆಳೆಯ ಕ್ಷಣಾರ್ಧದಲ್ಲಿ ಬಂದು ಬಾಗಿಲು ತೆರೆದು ನಮ್ಮ ಕುಟುಂಬಕ್ಕೆ ಸ್ವಾಮಿಯ ದರ್ಶನ ಮಾಡಿಸಿ ಪ್ರಸಾದ ಕೊಟ್ಟ. ಅದಕ್ಕಿಂತ ಮಿಗಿಲಾಗಿ ಒಂದು ವಿಶೇಷ ಪುಸ್ತಕದ ಪ್ರಸಾದ ನೀಡಿದ. ಅದು ಪಾತಲಿಂಗೇಶ್ವರ ಸ್ವಾಮಿ ಕುರಿತಾಗಿ ನಮ್ಮೂರ ಕಂಡಕ್ಟರ್ ರಾಮಣ್ಣ ಬರೆದ ಪುಸ್ತಕ. ಅದರಲ್ಲಿ ಸ್ವಾಮಿಯ ಜೀವನ ಮತ್ತು ಪವಾಡಗಳ ಕುರಿತಾದ ಹತ್ತಾರು ಪ್ರಸಂಗಗಳಿವೆ.ಮುಂದೆ ಅವುಗಳ ಬಗ್ಗೆ ತಿಳಿಸುವೆ.ಸ್ವಾಮಿಯ ಕೃಪೆಯಾದರೆ ನಾನು ಪಾತೇದೇವರ ಕುರಿತೊಂದು ಪುಸ್ತಕ ಬರೆಯುವ ಬಯಕೆಯಿದೆ.
ಪಾತೇದೇವರು ನಿಮ್ಮನ್ನು ಹರಸಲಿ..
17 ಮಾರ್ಚ್ 2026
SSLC ವಿದ್ಯಾರ್ಥಿಗಳಿಗೆ ಶುಭವಾಗಲಿ...
ಶುಭವಾಗಲಿ ವಿದ್ಯಾರ್ಥಿಗಳೇ..
ಆತ್ಮೀಯ sslc ವಿದ್ಯಾರ್ಥಿಗಳೇ ವರ್ಷ ಪೂರ್ತಿ ಬಹಳ ಚೆನ್ನಾಗಿ ಅಭ್ಯಾಸ ಮಾಡಿರುವಿರಿ.ಪರೀಕ್ಷೆ ಬರೆಯುವ ಕ್ರಮ ಅರಿಯಲು ಒಂದು ಅರ್ಧವಾರ್ಷಿಕ ಪರೀಕ್ಷೆ ಮೂರು ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಬರೆದು ನಿಮ್ಮ ಆತ್ಮ ವಿಶ್ವಾಸ ವೃಧ್ದಿಸಿಕೊಂಡಿರುವಿರಿ.ನಾಳೆಯಿಂದ ವಾರ್ಷಿಕ ಮುಖ್ಯ ಪರೀಕ್ಷೆ ಆರಂಭವಾಗುತ್ತಿದೆ.ಇದುವರೆಗೆ ಬರೆದ ಪರೀಕ್ಷೆಯಂತೆ ಈ ಪರೀಕ್ಷೆಯನ್ನು ಬರೆಯಿರಿ ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಬರೆಯಿರಿ. ಯಶಸ್ಸು ಖಂಡಿತವಾಗಿ ನಿಮ್ಮದಾಗಲಿದೆ.
ಪರೀಕ್ಷೆ ಕೊಠಡಿಯಲ್ಲಿ ನೀವು ಹೇಗೆ ವರ್ತಿಸುತ್ತೀರಿ ಎಂಬುದು ನಿಮ್ಮ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ.
ಇಂದು ನಾನು ಪರೀಕ್ಷೆ ಕೊಠಡಿಯಲ್ಲಿ ನೀವು ಪಾಲಿಸಬೇಕಾದ ಅಂಶಗಳ ಬಗ್ಗೆ ಕೆಲ ಸಲಹೆಗಳನ್ನು ನೀಡಬಯಸುವೆ.
ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ಬನ್ನಿ.ಇದರಿಂದಾಗಿ ಲೇಟ್ ಆಗಿ ಬಂದು ನಿಮ್ಮ ಕೊಠಡಿ ದೊರಕದೆ ಉದ್ವೇಗಕ್ಕೆ ಒಳಗಾಗುವುದು ತಪ್ಪುತ್ತದೆ.ಕೊಠಡಿ ಪ್ರವೇಶಕ್ಕೆ ಮುನ್ನ ಅಗತ್ಯ ದಾಖಲೆಗಳಾದ ಹಾಲ್ ಟಿಕೆಟ್ , ಪೆನ್ ,ಪೆನ್ಸಿಲ್, ಜಿಯೋಮೆಟ್ರಿ ಬಾಕ್ಸ್ ಮುಂತಾದವುಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.
ಕೊಠಡಿ ಪ್ರವೇಶಿದ ಕೂಡಲೇ ನೀವು ಕುಳಿತಿರುವ ಜಾಗ ನಿಮ್ಮದೇ ಎಂದು ನಿಮ್ಮ ಹಾಲ್ ಟಿಕೆಟ್ ಹಾಗೂ ಡೆಸ್ಕ್ ಮೇಲೆ ಇರುವ ರಿಜಿಸ್ಟರ್ ನಂಬರ್ ನಿಮ್ಮದೇ ಎಂದು ನೋಡಿಕೊಂಡು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ. ಪರೀಕ್ಷಾ ಕೊಠಡಿಯಲ್ಲಿ ಇತರೆ ವಿದ್ಯಾರ್ಥಿಗಳ ಜೊತೆಯಲ್ಲಿ ಅನವಶ್ಯಕ ಮಾತು ಬೇಡ. ಆರಂಭದ ಐದು ನಿಮಿಷ ಶಾಂತತೆ ಕಾಪಾಡಿಕೊಂಡು ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ತೆಗೆದುಕೊಂಡು ಉಸಿರು ಬಿಡಿ.
ಈ ಬಾರಿ ಕೊಠಡಿಯಲ್ಲಿ ಮೊದಲು ಪ್ರಶ್ನೆ ಪತ್ರಿಕೆ ನೀಡುವರು ಅದಾಗಿ ಹದಿನೈದು ನಿಮಿಷಗಳ ನಂತರ ಉತ್ತರ ಪತ್ರಿಕೆ ನೀಡುತ್ತಾರೆ. ಪ್ರಶ್ನೆಪತ್ರಿಕೆಯನ್ನು ಚೆನ್ನಾಗಿ ಓದಿ
ಎಲ್ಲಾ ಪ್ರಶ್ನೆಗಳ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಿ.
ಉತ್ತರ ಪತ್ರಿಕೆ ನೀಡಿದ ಮೇಲೆ ಅದರ ಮೇಲೆ ನಿಮ್ಮ ರಿಜಿಸ್ಟರ್ ನಂಬರ್ ಸರಿಯಾದ ಜಾಗದಲ್ಲಿ ತಪ್ಪಿಲ್ಲದಂತೆ ಬರೆಯಿರಿ. ಮಾಧ್ಯಮ, ವಿಷಯ, ಮುಂತಾದ ವಿವರಗಳನ್ನು ತಪ್ಪಿಲ್ಲದಂತೆ ಬರೆದು ಕೊಠಡಿ ಮೇಲ್ವಿಚಾರಕರ ಸಹಿ ಪಡೆಯಿರಿ.ನಂತರ
ನಿಮಗೆ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ.
ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಪ್ರತಿ ಪ್ರಶ್ನೆಗೆ ಸರಿಯಾದ ಸಮಯ ಮೀಸಲಿಡಿ.
ಕೊನೆಯಲ್ಲಿ ಉತ್ತರ ಪರಿಶೀಲನೆಗೆ 5–10 ನಿಮಿಷ ಉಳಿಸಿಕೊಳ್ಳಿ.
ನಿಮ್ಮ ಬರವಣಿಗೆ ಸ್ಪಷ್ಟ ಮತ್ತು ಸ್ವಚ್ಛವಾಗಿರಲಿ ಅದು ಮೌಲ್ಯಮಾಪಕರು ಓದುವಂತಿರಲಿ
ನಿಮ್ಮ ಉತ್ತರಪತ್ರಿಕೆಯು ಅನವಶ್ಯಕ ಚಿತ್ತು ಕಾಟುಗಳಿಂದ ಕೂಡಿರದೇ ನೀಟ್ ಆಗಿರಲಿ.
ಮುಖ್ಯ ಅಂಶಗಳನ್ನು ಅಂಡರ್ಲೈನ್ ಹಾಕಿ ಹೈಲೈಟ್ಸ್ ಮಾಡಬಹುದು.ಪ್ರಶ್ನೆ ಸಂಖ್ಯೆಯನ್ನು ಮತ್ತು ಉಪಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ.
ನೀವೂ ಪರೀಕ್ಷಾ ಕೊಠಡಿಯಲ್ಲಿ ಸಿ ಸಿ ಕಣ್ಗಾವಲಿನಲ್ಲಿ ನೇರಪ್ರಸಾರದಲ್ಲಿ ಇರುವ ಕಾರಣ ಪರೀಕ್ಷಾ ಅಕ್ರಮಗಳಿಂದ ದೂರವಿರಿ
ನಕಲು ಮಾಡುವ ಪ್ರಯತ್ನ ಬೇಡವೇ ಬೇಡ.
ಇದು ನಿಮ್ಮ ಭವಿಷ್ಯಕ್ಕೆ ಹಾನಿಕರ.
ಕೆಲ ಅರ್ಥವಾಗದ ಪ್ರಶ್ನೆಗಳಿದ್ದರೆ ಆತಂಕ ಬೇಡ
ಗೊತ್ತಿಲ್ಲದ ಪ್ರಶ್ನೆ ಬಂದರೆ ತಕ್ಷಣ ಬಿಟ್ಟು ಮುಂದಿನ ಪ್ರಶ್ನೆಗೆ ಹೋಗಿ. ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬೇಡಿ ಅಂತಹ ಪ್ರಶ್ನೆಗಳನ್ನು ನಂತರ
ಮತ್ತೆ ಪ್ರಯತ್ನಿಸಿ. ಹೆಚ್ಚುವರಿ ಹಾಳೆ ಬೇಕಾದರೆ ಕೊಠಡಿ ಮೇಲ್ವಿಚಾರಕರನ್ನು ಕೇಳಿ ಪಡೆಯಿರಿ. ಹೆಚ್ಚುವರಿ ಹಾಳೆಯನ್ನು ಮುಖ್ಯ ಉತ್ತರ ಪತ್ರಿಕೆಯ ಜೊತೆಯಲ್ಲಿ ಕಟ್ಟುವುದು ನೆನಪಿರಲಿ. ಗಣಿತದ ವಿಷಯದಲ್ಲಿ ಗ್ರಾಫ್ ಉತ್ತರ ಪತ್ರಿಕೆಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ.ಸಮಾಜ ವಿಜ್ಞಾನ ವಿಷಯದ ದಿನ ಪ್ರಿಂಟೆಡ್ ಭಾರತದ ಮ್ಯಾಪ್ ಪಡೆದು ಸ್ಥಳಗಳನ್ನು ಪೆನ್ಸಿಲ್ ನಿಂದ ಗುರ್ತಿಸಿ ಮುಖ್ಯ ಉತ್ತರ ಪತ್ರಿಕೆಯಲ್ಲಿ ಒಳಭಾಗದಲ್ಲಿ ಇಟ್ಟು ದಾರದಿಂದ ಕಟ್ಟುವುದನ್ನು ಮರೆಯಬೇಡಿ.
ಪರೀಕ್ಷೆಯ ಕೊನೆಯ ಹದಿನೈದು ನಿಮಿಷಗಳಲ್ಲಿ ನೀವು ಬರೆದ ಉತ್ತರಗಳನ್ನು ಪರಿಶೀಲಿಸಿ
ತಪ್ಪುಗಳು, ಬಿಟ್ಟ ಪ್ರಶ್ನೆಗಳು ಇರುವುದನ್ನು ಪರಿಶೀಲಿಸಿ.
ಅಗತ್ಯವಿದ್ದರೆ ತಿದ್ದುಪಡಿ ಮಾಡಿರಿ. ಮುಖ್ಯ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ನಿಗದಿತ ಜಾಗದಲ್ಲಿ ಎಷ್ಟು ಪುಟಗಳ ಉತ್ತರ ಬರೆದಿರುವಿರಿ ಎಂಬ ಮಾಹಿತಿಯನ್ನು ತುಂಬಿ ಕೊನೆಯಲ್ಲಿ ಲಾಂಗ್ ಬೆಲ್ ಆದ ನಂತರ ಕೊಠಡಿ ಮೇಲ್ವಿಚಾರಕರಿಗೆ ನೀಡಿ..
ವರ್ಷ ಪೂರ್ತಿ ಓದಿದ ನೀವು ಅದನ್ನು ಸರಿಯಾಗಿ ಪ್ರಸ್ತುತಪಡಿಸಲು ಪರೀಕ್ಷೆ ಕೊಠಡಿಯಲ್ಲಿ ಶಿಸ್ತು, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ.ಈ ಮೇಲಿನ ಸಲಹೆಗಳನ್ನು ಪಾಲಿಸಿ ಪರೀಕ್ಷೆ ಬರೆದು ಸಂಭ್ರಮಿಸಿ. ಉತ್ತಮ ಫಲಿತಾಂಶ ನಿಮ್ಮದಾಗಲಿ.ಆಲ್ ದಿ ಬೆಸ್ಟ್...
ಸಿಹಿಜೀವಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ.
#SchoolAnnouncement #Education #SSLCExam #StudentSuccess #ExamTips #AcademicJourney #FutureLeaders #LearningTogether #MotivationalSpeech #ExamPreparation #SuccessMindset #EducationalGoals #StudentMotivation #ClassroomVibes #AcademicExcellence #ParentsGuide #SchoolLife #AchievementUnlocked #ExamsSeason
14 ಮಾರ್ಚ್ 2026
ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!
ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!
ಭೂತಾನ್ ನ ರಾಜಧಾನಿ ಥಿಂಪು ನಗರದ ಏಕೈಕ ಹಿಂದೂ ದೇವಾಲಯದ ದರ್ಶನ ಮಾಡಿದ ನಂತರ ಭೂತಾನ್ ನ ರಾಜರ ಮನೆ ಮತ್ತು ಭೂತಾನ್ ಸಂಸತ್ ನೋಡಲು ಹೊರಟೆವು. ನಮ್ಮ ಭೂತಾನ್ ಪ್ರವಾಸದುದ್ದಕ್ಕೂ ನಮ್ಮ ಗೈಡ್ ತೆಂದಿನ್ ಅಲ್ಲಿನ ರಾಜರ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ರಿದ್ದ.ಹಾಗಾಗಿ ಭೂತಾನ್ ದೊರೆಯ ಅರಮನೆ ನೋಡಲು ನಾನು ಹಾಗೂ ನನ್ನ ಸ್ನೇಹಿತರು ಕಾತುರರಾಗಿದ್ದೆವು.
ಆದರೆ ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಆ ಸ್ಮಾರಕಗಳ ಹತ್ತಿರ ಬಿಡಲಿಲ್ಲ. ದೂರದಿಂದಲೇ ಅಲ್ಲಿನ ಸಂಸತ್ ಹಾಗೂ ರಾಜರ ಅರಮನೆ ನೋಡಿದೆವು. ವಾಸ್ತವವಾಗಿ ಅದು ಅರಮನೆಯಾಗಿರದೇ ಡಬಲ್ ಬೆಡ್ ರೂಂನ ಮನೆ ಎಂದು ತಿಳಿದು ರಾಜನ ಸರಳ ಜೀವನ ಕಂಡು ಅವರ ಬಗ್ಗೆ ನನಗೂ ಗೌರವ ಭಾವನೆ ಉಂಟಾಯಿತು. ನಮ್ಮಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದರೆ ಅವರ ವರ್ತನೆ, ದರ್ಪ, ತೋರ್ಪಡಿಸುವ ಗುಣಗಳನ್ನು ಕಂಡಿದ್ದೇವೆ.ಇಡೀ ದೇಶಕ್ಕೆ ನಾಯಕನಾಗಿರುವ ದೊರೆಯ ಸರಳ ಜೀವನ ಶೈಲಿ ನಮಗೂ ಅನುಕರಣೀಯ.
ಥಿಂಫು ನಗರದ ಉತ್ತರ ಭಾಗದಲ್ಲಿರುವ ಡೆಚೆಂಚೋಲಿಂಗ್ ಅರಮನೆ ಭೂತಾನ್ ರಾಜಕುಟುಂಬದ ಅಧಿಕೃತ ವಾಸಸ್ಥಳವಾಗಿದೆ. ಅರಮನೆಯ ಸುತ್ತಲೂ ವಿಶಾಲವಾದ ಹಸಿರು ತೋಟಗಳು ಮತ್ತು ಭದ್ರತಾ ವ್ಯವಸ್ಥೆ ಇದೆ. ಸಾಂಪ್ರದಾಯಿಕ ಭೂತಾನಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆ ಬಿಳಿ ಗೋಡೆಗಳು, ಕೆಂಪು ಮೇಲ್ಚಾವಣಿ ಮತ್ತು ನವೀನ ಮರದ ಕೆತ್ತನೆಗಳಿಂದ ಕಂಗೊಳಿಸುತ್ತದೆ.
ಅರಮನೆಯೊಳಗೆ ಪ್ರವೇಶಿಸಲು ಸಾಮಾನ್ಯ ಪ್ರವಾಸಿಗರಿಗೆ ಅವಕಾಶವಿಲ್ಲದಿದ್ದರೂ, ಹೊರಗಿನಿಂದಲೇ ಅದರ ಶಾಂತ ಮತ್ತು ಭವ್ಯ ವಾತಾವರಣ ಗೌರವಭಾವ ಮೂಡಿಸುತ್ತದೆ. ಸ್ಥಳೀಯ ಮಾರ್ಗದರ್ಶಕರು ತಿಳಿಸಿದಂತೆ ಭೂತಾನ್ ರಾಜಮನೆತನ ಜನರೊಂದಿಗೆ ಆಪ್ತ ಸಂಬಂಧ ಹೊಂದಿದೆ. ದೇಶದ ಇಂದಿನ ರಾಜರಾದ ಜನಪ್ರಿಯ ನಾಯಕರೆಂದು ಪರಿಚಿತರು. ಅವರ ಸರಳ ಜೀವನಶೈಲಿ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವದ ಬಗ್ಗೆ ಸ್ಥಳೀಯರು ಹೆಮ್ಮೆಪಡುವುದನ್ನು ನಾನು ಕಂಡೆ.
ದೊರೆಯ ಮನೆಯ ಮುಂಭಾಗದಲ್ಲಿ ಥಿಂಫು ನಗರದ ಪ್ರಮುಖ ಆಕರ್ಷಣೆಯಾದ ಟಾಶಿಚೋ ಜೋಂಗ್ ಕಟ್ಟಡವು ರಾಜಕೀಯ ಮತ್ತು ಧಾರ್ಮಿಕ ಎರಡೂ ಮಹತ್ವವನ್ನು ಹೊಂದಿದೆ. ಇಲ್ಲಿ ಭೂತಾನ್ ಸರ್ಕಾರದ ಕಚೇರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಕಟ್ಟಡದ ವಿಶಾಲ ಅಂಗಣ, ಸಾಂಪ್ರದಾಯಿಕ ಚಿತ್ರಕಲೆ, ಬೌದ್ಧ ಶೈಲಿಯ ಕಂಬಗಳು ಮತ್ತು ಚಿನ್ನದ ಅಲಂಕಾರಗಳು ಮನಸೆಳೆಯುತ್ತವೆ.
ಭೂತಾನ್ ಸಂಸತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ದೇಶದ ಕಾನೂನುಗಳು ಮತ್ತು ನೀತಿಗಳ ಚರ್ಚೆ ನಡೆಯುತ್ತದೆ. ಸಾಂಪ್ರದಾಯಿಕ ವೇಷಭೂಷಣದಲ್ಲಿ ಸಂಸತ್ ಸದಸ್ಯರು ಭಾಗವಹಿಸುವ ದೃಶ್ಯ, ಆಧುನಿಕ ಆಡಳಿತ ಮತ್ತು ಸಂಸ್ಕೃತಿಯ ಸಮನ್ವಯವನ್ನು ತೋರಿಸುತ್ತದೆ.
ಭೂತಾನ್ ಒಂದು ಸಾಂವಿಧಾನಿಕ ರಾಜಪ್ರಭುತ್ವವಾಗಿದ್ದು ಸಂಸದೀಯ ಸ್ವರೂಪದ ಸರ್ಕಾರವನ್ನು ಹೊಂದಿದೆ.ಅಲ್ಲಿನ ಪ್ರಸ್ತುತ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರು ಮಾದರಿ ಆಡಳಿತ ನೀಡುತ್ತಿದ್ದಾರೆ. ಅವರಿಗೆ ಭೂತಾನ್ನ ಪ್ರಸ್ತುತ ಪ್ರಧಾನ ಮಂತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ತ್ಶೆರಿಂಗ್ ಟೋಬ್ಗೇ ರವರು ಕೈಜೋಡಿಸಿದ್ದಾರೆ. 2008 ರಲ್ಲಿ ಭೂತಾನ್ನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಕಂಡಿತು. 1907 ರಿಂದ ರಾಜಪ್ರಭುತ್ವದೊಂದಿಗಿನ ಅದರ ಸಾಮಾಜಿಕ ಒಪ್ಪಂದದ ವಿಕಸನವೆಂದು ನೋಡಲಾಗುತ್ತದೆ. ವರ್ಲ್ಡ್ ವರ್ಗೀಕರಣದ ಆಡಳಿತಗಳಲ್ಲಿ ವಿ ಡೆಮ್ ಡೆಮಾಕ್ರಸಿ ಸೂಚ್ಯಂಕಗಳ ಪ್ರಕಾರ 2024 ರ ವರ್ಷದಿಂದ ಭೂತಾನ್ ಅನ್ನು ಚುನಾವಣಾ ಪ್ರಜಾಪ್ರಭುತ್ವ ಎಂದು ವರ್ಗೀಕರಿಸಲಾಗಿದೆ.
ಭೂತಾನ್ ನ ರಾಜಕೀಯ ವ್ಯವಸ್ಥೆಯು ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡುತ್ತದೆ. ಇದು 25 ಚುನಾಯಿತ ಸದಸ್ಯರನ್ನು ಹೊಂದಿರುವ ಮೇಲ್ಮನೆಯಾದ ರಾಷ್ಟ್ರೀಯ ಮಂಡಳಿಯನ್ನು ಮತ್ತು ರಾಜಕೀಯ ಪಕ್ಷಗಳಿಂದ 47 ಚುನಾಯಿತ ಶಾಸಕರನ್ನು ಹೊಂದಿರುವ ರಾಷ್ಟ್ರೀಯ ಸಭೆಯನ್ನು ಒಳಗೊಂಡಿದೆ.
ಕಾರ್ಯನಿರ್ವಾಹಕ ಅಧಿಕಾರವನ್ನು ಪ್ರಧಾನ ಮಂತ್ರಿ ನೇತೃತ್ವದ ಮಂತ್ರಿ ಮಂಡಳಿಯು ಚಲಾಯಿಸುತ್ತದೆ. ಶಾಸಕಾಂಗ ಅಧಿಕಾರವು ಸರ್ಕಾರ ಮತ್ತು ರಾಷ್ಟ್ರೀಯ ಸಭೆ ಎರಡರಲ್ಲೂ ಇರುತ್ತದೆ. ನ್ಯಾಯಾಂಗ ಅಧಿಕಾರವು ನ್ಯಾಯಾಲಯಗಳಲ್ಲಿದೆ. ಕಾನೂನು ವ್ಯವಸ್ಥೆಯು ಅರೆ-ದೇವಪ್ರಭುತ್ವವಾದಿ ತ್ಸಾ ಯಿಗ್ ಸಂಹಿತೆಯಿಂದ ಹುಟ್ಟಿಕೊಂಡಿದೆ ಮತ್ತು 20 ನೇ ಶತಮಾನದಲ್ಲಿ ಇಂಗ್ಲಿಷ್ ಸಾಮಾನ್ಯ ಕಾನೂನಿನಿಂದ ಪ್ರಭಾವಿತವಾಗಿದೆ . ಮುಖ್ಯ ನ್ಯಾಯಾಧೀಶರು ನ್ಯಾಯಾಂಗದ ಆಡಳಿತ ಮುಖ್ಯಸ್ಥರಾಗಿದ್ದಾರೆ.
ಅಸೆಂಬ್ಲಿಗೆ ಮೊದಲ ಸಾರ್ವತ್ರಿಕ ಚುನಾವಣೆಗಳು ಮಾರ್ಚ್ 24, 2008 ರಂದು ನಡೆದವು. ಜಿಗ್ಮೆ ಥಿನ್ಲೆ ನೇತೃತ್ವದ ಭೂತಾನ್ ಶಾಂತಿ ಮತ್ತು ಸಮೃದ್ಧಿ ಪಕ್ಷ (ಡಿಪಿಟಿ) ಮತ್ತು ಸಂಗಯ್ ನ್ಗೆಡಪ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಪ್ರಮುಖ ಸ್ಪರ್ಧಿಗಳಾಗಿದ್ದವು. ಡಿಪಿಟಿ 47 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಪಡೆದು ಚುನಾವಣೆಯಲ್ಲಿ ಗೆದ್ದಿತು. ಜಿಗ್ಮೆ ಥಿನ್ಲೆ 2008 ರಿಂದ 2013 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
2013 ರ ಚುನಾವಣೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದಿತು. ಅದು 32 ಸ್ಥಾನಗಳನ್ನು ಮತ್ತು 54.88% ಮತಗಳನ್ನು ಗಳಿಸಿತು. ಪಿಡಿಪಿ ನಾಯಕಿ ತ್ಸೆರಿಂಗ್ ಟೋಬ್ಗೆ 2013 ರಿಂದ 2018 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
೨೦೧೮ ರ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರು. ಲೋಟೇ ತ್ಶೆರಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಮತ್ತು ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅವರನ್ನು ಮೊದಲ ಬಾರಿಗೆ ಸರ್ಕಾರಕ್ಕೆ ಕರೆತಂದರು.
2024 ರ ಚುನಾವಣೆಯ ನಂತರ ಪಿಡಿಪಿ 30 ಸ್ಥಾನಗಳನ್ನು ಗಳಿಸುವುದರೊಂದಿಗೆ ಟೋಬ್ಗೆ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬಂದು ಪ್ರಸ್ತುತ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ನಮ್ಮ ಗೈಡ್ ಮಾಹಿತಿ ನೀಡಿದರು.ಭೂತಾನ್ ನ ಸಂಸತ್ತು ಮತ್ತು ದೊರೆಯ ಬಗ್ಗೆ ಗೌರವ ಭಾವದಿಂದ ಆ ಪ್ರದೇಶದಿಂದ ಹೊರ ನಡೆದು ಭೂತಾನ್ ನ ಇತರೆ ಸ್ಥಳಗಳನ್ನು ಅನ್ವೇಷಣೆ ಮಾಡಲು ಹೊರಟೆವು.
ಭಾರತದ ನೆರೆಯ ದೇಶವಾದ ಭೂತಾನ್ ನ ಪ್ರಕೃತಿ ಸೌಂದರ್ಯ ಸವಿದಿದ್ದ ನಾವು ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಸಂಸತ್ತಿನ ರಚನೆಯ ಬಗ್ಗೆ ತಿಳಿದು ಭೂತಾನ್ ಬಗ್ಗೆ ಇದ್ದ ಗೌರವ ಇಮ್ಮಡಿಯಾಯಿತು.ನೀವೂ ಭೂತಾನ್ ಪ್ರವಾಸಕ್ಕೆ ಬಂದರೆ ಭೂತಾನ್ ಸಂಸತ್ ಮತ್ತು ದೊರೆಯ ಮನೆ ನೋಡಲು ಮರೆಯದಿರಿ.
ಸಿಹಿಜೀವಿ ವೆಂಕಟೇಶ್ವರ.
ತುಮಕೂರು
9900925529
BhutanTour #KingPalace #Sihijeevi #Sihijeeviya #Payana #TravelBhutan #ExploreBhutan #BhutanAdventures #PalaceTour #CulturalExperience #HimalayanJourney #BhutanDiaries #TouristAttractions #BhutanTravel #DiscoverBhutan #TravelVlog #AdventureTravel #NatureLovers #BucketListTravel
02 ಮಾರ್ಚ್ 2026
ನಮ್ಮ ಟೀಮ್ ಇಂಡಿಯಾ ನಮ್ಮ ಹೆಮ್ಮೆ.
ಟಾಸ್ ಗೆದ್ದಾಗಲೇ ನಾವು ಗೆದ್ದಾಗಿತ್ತು.ಹಿಡಿಯುವ ಕ್ಯಾಚ್ ಗಳನ್ನು ನೆಲಕ್ಕೆ ಹಾಕಿದ್ದು ತೂತ್ ಫೀಲ್ಡಿಂಗ್ ಮಾಡಿ ಕನಿಷ್ಟ 25 ಹೆಚ್ಚು ರನ್ ಕೊಟ್ಟಾಗ ನನಗೆ ನಮ್ಮ ಟೀಮ್ ಮೇಲೆ ಕೋಪ ಬಂದಿದ್ದು ನಿಜ.ಆದರೆ ನಾವು ಪಕ್ಕಾ ಚೇಸಿಂಗ್ ಮಾಸ್ಟರ್ಸ್ ಎಂಬುದನ್ನು ಇಡೆನ್ ಗಾರ್ಡನ್ ನಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದೇವೆ.ಸಂಜು ಸಾಮ್ ಸನ್ ರ ಜವಾಬ್ದಾರಿಯುತ ಆಟಕ್ಕೆ ಮೆಚ್ಚುಗೆ ಸೂಚಿಸಲೇಬೇಕು ಆಫ್ ಕೋರ್ಸ್ ಈ ಗೆಲುವಿಹೆ ತಂಡದ ಎಲ್ಲರೂ ತಮ್ಮ ಯೋಗದಾನ ನೀಡಿರುವರು.ಇದೇ ಆತ್ಮವಿಶ್ವಾಸದಿಂದ ಆಂಗ್ಲರನ್ನು ಜಯಿಸೋಣ.ಮತ್ತೆ ಓವರ್ ಕಾನ್ಫಿಡೆನ್ಸ್ ಬೇಡ.ಪ್ರತಿ ಓವರ್ ನಲ್ಲಿ ಉತ್ತಮವಾಗಿ ಆಡೋಣ.ಸೇಮೀಸ್ ಅಷ್ಟೇ ಅಲ್ಲ ಪೈನಲ್ ನಲ್ಲೂ ಗೆಲ್ಲೋಣ.ಈ ಸಲನೂ ಕಪ್ ನಮ್ದೇ...
ಅಭಿನಂದನೆಗಳು ಟೀಮ್ ಇಂಡಿಯಾ ಇನ್ ಅಡ್ವಾನ್ಸ್...
ನೀವೂ ವಿಶ್ ಮಾಡಬಹುದು..
#T20WorldCup #ICC #BCCi #TeamIndia #SihijeeviyaPayana #CricketFever #IndiaCricket #T20Cricket #WorldCup2023 #CricketHighlight #GoIndia #SupportIndia #InternationalCricket #CricketLife #SportsHighlights #PlayBold #ChaseYourDreams #CricketPassion #BlueArmy
ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ
ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ
ಈಶಾನ್ಯ ರಾಜ್ಯಗಳನ್ನು ನೆನೆದರೇನೊ ಪುಳಕ. ಬಹು ಕಾಲದಿಂದ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡಬೇಕೆಂಬ ಕನಸು ಕೊನೆಗೂ ನನಸಾಗಿತ್ತು. ಅಸ್ಸಾಂನ ಗುವಾಹಟಿ ನಗರದಿಂದ ನಮ್ಮ ಪ್ರವಾಸ ತಂಡದೊಂದಿಗೆ ಹೊರಟ ನಾವು ಮೇಘಾಲಯದ ಪ್ರಕೃತಿ ಸೌಂದರ್ಯ ಸವಿಯಲು ಸಿದ್ದವಾಗಿತ್ತು. ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಚಲಿಸಲು ಸೂಕ್ತವಾದ ಎರಡು ಟೆಂಪೋ ಟ್ರಾವೆಲರ್ಸ್ ಏರಿ ಉತ್ತಮ ರಸ್ತೆಯಲ್ಲಿ ನಮ್ಮ ಪಯಣ ಮುಂದುವರೆಯಿತು. ರಸ್ತೆಯ ಎಡಬಲಗಳಲ್ಲಿ ಕಾಣುವ ದೃಶ್ಯಗಳನ್ನು ಸವಿಯುತ್ತಾ ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಕಂಡ ಮೊದಲ ಸ್ವರ್ಗ ಸದೃಶ ತಾಣವೇ ಉಮಿಯಾಮ್ ಸರೋವರ!
ಮೊದಲ ಬಾರಿಗೆ ಕೇಳಿದಾಗ ನನಗೂ ಈ ಸ್ಥಳದ ಉಚ್ಚಾರಣೆ ವಿಚಿತ್ರ ಎನಿಸಿದರೂ ಅದರ ಅದ್ಭುತ ದೃಶ್ಯಗಳನ್ನು ನಾನು ಕಣ್ತುಂಬಿಕೊಂಡಾಗ ಬಣ್ಣದ ಚಿತ್ರಗಳು ಈಗಲೂ ನನ್ನ ನೆನಪಿನ ಕೋಶದಲ್ಲಿ ಅಚ್ಚಳಿಯದೇ ಉಳಿದಿವೆ.
ಶಿಲ್ಲಾಂಗ್ ನಗರಕ್ಕೆ ಹೋಗುವ ದಾರಿಯಲ್ಲಿ ಬೆಟ್ಟಗಳ ನಡುವೆ ನೀಲಿ ಬಣ್ಣದಲ್ಲಿ ಮಿನುಗುತ್ತಿರುವ ಉಮಿಯಾಮ್ ಸರೋವರದ ಮೊದಲ ನೋಟವೇ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಸ್ಥಳೀಯರು ಇದನ್ನು “ಬಾರಾ ಪಾನಿ” ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ಇದೊಂದು ವಿಶಾಲವಾದ ಮಾನವ ನಿರ್ಮಿತ ನೀರಿನ ಸಾಗರ!
ನಗರದಿಂದ ಸುಮಾರು 15 ಕಿಮೀ ದೂರದಲ್ಲಿ ಹರಡಿಕೊಂಡಿರುವ ಈ ಜಲಾಶಯವನ್ನು 1960ರ ದಶಕದಲ್ಲಿ ಅಣೆಕಟ್ಟು ನಿರ್ಮಿಸಿ ಸೃಷ್ಟಿಸಲಾಗಿದೆ. ಬೆಟ್ಟಗಳು, ಹಸಿರು ಕಾಡುಗಳು ಮತ್ತು ನೀರಿನ ನೀಲಿ ಪ್ರತಿಬಿಂಬ ಇವುಗಳ ಸಮನ್ವಯವು ಈ ಸ್ಥಳವನ್ನು ಸ್ವರ್ಗಸಮಾನವಾಗಿಸುತ್ತದೆ.
ಬೆಳಿಗ್ಗೆ ಹೊತ್ತು ಸರೋವರದ ತೀರದಲ್ಲಿ ನಿಂತಾಗ ಮಂಜಿನ ಚಾದರ ನೀರಿನ ಮೇಲೆ ಹರಡಿಕೊಂಡ ಸೂರ್ಯೋದಯದ ಕಿರಣಗಳು ನೀರಿನ ಮೇಲೆ ಬಂಗಾರದ ಹಚ್ಚನ್ನು ಹಚ್ಚಿದಂತೆ ಕಾಣುವ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆ ಕ್ಷಣದಲ್ಲಿ ಕಾಲವೇ ನಿಂತಂತಾಯಿತು.
ಸ್ಥಳೀಯ ಮಾರ್ಗದರ್ಶಕನಿಂದ ತಿಳಿದುಕೊಂಡಾಗ ಈ ಸರೋವರದ ಹಿಂದೆ ಒಂದು ದೊಡ್ಡ ಕಥೆಯಿದೆ ಎಂದು ಅರಿತುಕೊಂಡೆ. ಈ ಲೇಕ್ ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾದ ಈಶಾನ್ಯ ಭಾರತದ ಮೊದಲ ಮಹತ್ವದ ಜಲಾಶಯ ಯೋಜನೆಗಳಲ್ಲಿ ಒಂದಾಗಿದೆ.
ಒಮ್ಮೆ ಇಲ್ಲಿ ಖಾಸಿ ಸಮುದಾಯದ ಗ್ರಾಮಗಳು ನೆಲೆಸಿದ್ದವು. ಅಣೆಕಟ್ಟು ನಿರ್ಮಾಣದಿಂದಾಗಿ ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಯಿತು. ಈ ವಿಚಾರ ತಿಳಿದಾಗ ಪ್ರಕೃತಿ ಸೌಂದರ್ಯದ ಹಿಂದೆ ಇರುವ ಮಾನವ ಕುಲದ ಮನ ಕಲಕುವ ಕಥೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿದವು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡುವುದು ಈಗಲೂ ಮುಂದುವರೆದಿರುವುದನ್ನು ಕಾಣುತ್ತೇವೆ.
ಉಮಿಯಾಮ್ ಸರೋವರ ಪ್ರವಾಸಿಗರಿಗೆ ಕೇವಲ ದೃಶ್ಯ ಸೌಂದರ್ಯವಲ್ಲ ಸಾಹಸಕ್ಕೂ ಪ್ರಸಿದ್ಧ ಎಂದು ನಮ್ಮ ಟೂರ್ ಗೈಡ್ ಬೆಳಿಗ್ಗೆ ಹೇಳಿದ್ದ ಮಾತು ಕೇಳುತ್ತಾ ನಾನು ಕಯಾಕಿಂಗ್ ಮಾಡಲು ನಿರ್ಧರಿಸಿದ್ದೆ. ನೀರಿನ ಮಧ್ಯೆ ತೇಲುತ್ತಾ ಬೆಟ್ಟಗಳ ನಡುವೆ ನನ್ನ ಸಣ್ಣ ದೋಣಿ ಸಾಗುತ್ತಿದ್ದ ಕ್ಷಣವನ್ನು ಕಲ್ಪಿಸಿಕೊಂಡು ಮನದಲ್ಲೇ ಖುಷಿ ಪಟ್ಟಿದ್ದೆ ಆದರೆ ಆ ಸ್ಥಳಕ್ಕೆ ಹೋದಾಗ ನನ್ನ ಆಸೆ ಈಡೇರದೇ ಭ್ರಮನಿರಸನಗೊಂಡೆ.
ವಾಟರ್ ಸೈಕ್ಲಿಂಗ್, ಬೋಟ್ ರೈಡ್, ಸ್ಕೂಟಿಂಗ್ ಎಲ್ಲವೂ ಇಲ್ಲಿ ಲಭ್ಯ. ಕುಟುಂಬ ಸಮೇತ ಬಂದ ಪ್ರವಾಸಿಗರು ಹರ್ಷದಿಂದ ಕಾಲ ಕಳೆಯಲು ಅವಕಾಶವಿದೆ ಅದರೆ ನಮ್ಮ ದುರಾದೃಷ್ಟಕ್ಕೆ ಅಂದು ಆ ಎಲ್ಲಾ ಜಲಕ್ರೀಡೆಗಳನ್ನು ಬಂದ್ ಮಾಡಿದ್ದರು.ಆದರೆ ಪ್ರಕೃತಿ ಸೌಂದರ್ಯ ಬಂದ್ ಮಾಡಲು ಸಾಧ್ಯವೆ? ಇನ್ನಷ್ಟು ನಿಸರ್ಗದ ದೃಶ್ಯಗಳನ್ನು ನನ್ನ ಮನದಲ್ಲಿ ತುಂಬಿಕೊಂಡು ಆನಂದಿಸಿದೆ.
ಮಾಮೂಲಿನಂತೆ ನಾವು ಮಾನವರು ಸುಂದರ ತಾಣಗಳನ್ನು ಸುಂದರವಾಗಿರಲು ಎಲ್ಲಿ ಬಿಟ್ಟಿದ್ದೇವೆ? ಈ ಸುಂದರ ಸರೋವರವೂ ಸವಾಲುಗಳನ್ನು ಎದುರಿಸುತ್ತಿದೆ. ನಗರದ ವೃದ್ಧಿಯಾಗುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸರೋವರಕ್ಕೆ ಸೇರುವ ವಾಹ್ ಉಮ್ಖ್ರಾ ಮತ್ತು ವಾಹ್ ಉಮ್ಶಿರ್ಪಿ ನದಿಗಳು ನಗರ ಒಳಚರಂಡಿಯನ್ನು ತರುತ್ತಿವೆ ಎಂದು ತಿಳಿದು ಬೇಸರವಾಯಿತು.
ಮೊದಲು ಡೀಸೆಲ್ ಚಾಲಿತ ದೋಣಿಗಳನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು.
2023ರಲ್ಲಿ ಮೇಘಾಲಯ ಸರ್ಕಾರ ಸೌರಶಕ್ತಿ ಚಾಲಿತ AI ದೋಣಿಯನ್ನು ನಿಯೋಜಿಸಿದೆ ಎಂಬುದು ಆಶಾದಾಯಕ ಸುದ್ದಿ ಕೇಳಿ ಸಂತಸವಾಯಿತು. ಈ ನವೀನ ಪ್ರಯತ್ನವು ಸರೋವರದ ಸ್ವಚ್ಛತೆಯನ್ನು ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ.
ಸಂಜೆ ಸಮಯದಲ್ಲಿ ಸರೋವರದ ಲೇಕ್ ವ್ಯೂ ಪಾಯಿಂಟ್ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಕಾಶ ಕೆಂಪು-ಕಿತ್ತಳೆ ಬಣ್ಣಗಳಿಂದ ತುಂಬಿಕೊಂಡ. ನೀರಿನ ಮೇಲಿನ ಪ್ರತಿಬಿಂಬ ಚಿತ್ರಕಾರನ ಕಲಾಕೃತಿಯಂತೆ ಕಾಣುತ್ತದೆ. ಇದು ಕೇವಲ ಜಲಾಶಯವಲ್ಲ. ಇದು ಪ್ರಕೃತಿಯ ಮಹತ್ವದ ಪಾಠ. ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ ಎಂಬ ಸಂದೇಶ ಈ ಸರೋವರ ನೀಡುತ್ತದೆ.
ಉಮಿಯಾಮ್ ಸರೋವರ ಪ್ರವಾಸವು ನನಗೆ ಪ್ರಕೃತಿಯ ಸೌಂದರ್ಯ, ಇತಿಹಾಸದ ಸ್ಪರ್ಶ ಮತ್ತು ಪರಿಸರ ಜಾಗೃತಿ ಮೂರನ್ನೂ ಒಟ್ಟಿಗೆ ನೀಡಿದ ಅನುಭವ ನೀಡಿತು. ಮೇಘಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಸ್ಥಳವನ್ನು ತಪ್ಪದೇ ನೋಡಬೇಕು ಎಂದು ನಾನು ಮನಪೂರ್ವಕವಾಗಿ ಸಲಹೆ ನೀಡುತ್ತೇನೆ.
ಬೆಟ್ಟಗಳ ನಡುವೆ ಮೌನವಾಗಿ ಮಲಗಿರುವ ಆ ನೀಲಿ ಸರೋವರ ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿಯೇ ಇರುತ್ತದೆ. ಆ ತಾಣದಲ್ಲಿ ನಾನು ಮಿಸ್ ಮಾಡಿಕೊಂಡ ವಾಟರ್ ಸ್ಪೋರ್ಟ್ಸ್ ಆಡಲು ಮತ್ತು ಸನ್ ಸೆಟ್ ನೋಡಲು ಮತ್ತೊಮ್ಮೆ ಉಮ್ಮಿಯಾಮ್ ಸರೋವರಕ್ಕೆ ಹೋಗಲು ನನ್ನ ಮನ ಹಾತೊರೆಯುತ್ತಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
26 ಫೆಬ್ರವರಿ 2026
ಪೋಷಕರೇ ದಯವಿಟ್ಟು ಗಮನಿಸಿ...
ಪೋಷಕರೇ ದಯವಿಟ್ಟು ಗಮನಿಸಿ...
ಇತ್ತೀಚಿಗೆ ಹತ್ತನೇ ಓದುವ ಮಗುವಿನ ಪೋಷಕರ ಮನೆಗೆ ಭೇಟಿ ನೀಡಿದಾಗ ತಂದೆಯು ಅವರ ಮಗನ ಬಗ್ಗೆ ಮಾತನಾಡುತ್ತಾ ದಿನವೂ ಮಗ ಹಣ ಕೇಳುತ್ತಾನೆ.ಬೈಕ್ ಕೊಡಿಸು ಎನ್ನುತ್ತಾನೆ.ಮೊಬೈಲ್ ನಲ್ಲಿ ಸದಾ ಮುಳುಗಿರುತ್ತಾನೆ ಎಂಬ ದೂರುಗಳನ್ನು ನೀಡುತ್ತಾ ನೀವಾದರೂ ಬುದ್ದಿ ಹೇಳಿ ಸರ್ ನಮ್ಮ ಮಾತುಗಳನ್ನು ಕೇಳೊಲ್ಲ.ನಮ್ಮ ಎದುರಿಗೆ ಮಾತನಾಡುತ್ತಾನೆ ಎಂದು ಕಂಪ್ಲೇಂಟ್ ಲಿಸ್ಟ್ ನೀಡಿದರು.ಹೌದು ನಾನು ಇತ್ತೀಚಿನ ದಿನಗಳಲ್ಲಿ ಬಹುತೇಕ ಪೋಷಕರ ಕಡೆಯಿಂದ ಅವರ ಮಕ್ಕಳ ಬಗ್ಗೆ ಹೆಚ್ಚು ಕಡಿಮೆ ಇಂತವೇ ದೂರುಗಳನ್ನು ಸ್ವೀಕರಿಸುವುದು ಮಾಮೂಲಾಗಿದೆ.ನಿಮಗೂ ಈ ಅನುಭವವಾಗಿರಬಹುದು.
ಹತ್ತನೇ ತರಗತಿಯವರೆಗೆ ಶಾಲೆಗಳಲ್ಲಿ ಬೆಳಗಿನ ಅವಧಿಯಲ್ಲಿ ರಾಗಿ ಮಾಲ್ಟ್, ಮಧ್ಯಾಹ್ನ ಮೊಟ್ಟೆ ಬಾಳೆ ಹಣ್ಣಿನ ಜೊತೆಯಲ್ಲಿ ಬಿಸಿಯೂಟ ಹಾಗೂ ಕೆಲವೆಡೆ ಸಂಜೆಯೂ ವಿವಿಧ ಕಾಳುಗಳ ಸ್ನಾಕ್ಸ್ ನೀಡುತ್ತಾರೆ. ಮತ್ತೇಕೆ ಮಕ್ಕಳಿಗೆ ಹಣ? ಆದರೂ ಕೆಲ ಪೋಷಕರು ಮಕ್ಕಳಿಗೆ ಅವರು ಕೇಳದಿದ್ದರೂ ಅಗತ್ಯ ಇಲ್ಲದಿದ್ದರೂ ಹಣ ನೀಡುವುದು ಕಂಡುಬರುತ್ತದೆ.
ಮಕ್ಕಳಿಗೆ ಪೋಷಕರಾದ ನಾವು ಬಾಲ್ಯದಲ್ಲೇ ಆರ್ಥಿಕ ಸಾಕ್ಷರತೆಯ ಪಾಠ ಹೇಳಿಕೊಡಬೇಕಿದೆ. ಆದರೆ ಬಹುತೇಕ ಪೋಷಕರು ತಮ್ಮ ಬಾಲ್ಯದ ಅನುಭವದ ಆಧಾರದ ಮೇಲೆ ನಮಗೆ ಇದ್ದ ಕಷ್ಟ ನಮ್ಮ ಮಕ್ಕಳಿಗೆ ಇಲ್ಲ ಆದ್ದರಿಂದ ಹಣ ಕೊಡುವೆ ಎಂದು ಅನವಶ್ಯಕವಾಗಿ ಹಣ ನೀಡಿ ದುಂದುವೆಚ್ಚಮಾಡಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಇನ್ನೂ ಕೆಲ ಪೋಷಕರು ನಾನು ಚಿಕ್ಕವನಿದ್ದಾಗ ನನಗೆ ಸೈಕಲ್ ಗತಿ ಇರಲಿಲ್ಲ ನನ್ನ ಮಗ ಬೈಕ್ ಓಡಿಸಲಿ ಎಂದು ಎಂಟು ಒಂಭತ್ತು ಓದುವ ಮಕ್ಕಳಿಗೆ ಬೈಕ್ ನೀಡುವರು ಹತ್ತಕ್ಕೆ ಬಂದಾಗ ಮಗು ಬೇರೆ ಬ್ರಾಂಡ್ ಬೈಕ್ ಗೆ ಡಿಮಾಂಡ್ ಮಾಡದೇ ಮತ್ತೆನು ಮಾಡಿಯಾನೂ? ಇನ್ನೂ ಮೊಬೈಲ್ ಕಥೆ ಹೇಳುವುದೇ ಬೇಡ ವರ್ಷದ ಮಗುವಿನ ಕೈಗೆ ಮೊಬೈಲ್ ನೀಡಿ ಊಟ ಮಾಡಿಸುವ ಎಷ್ಟೋ ಪೋಷಕರಿದ್ದರೆ.ಇನ್ನೂ ಕೆಲ ಪೋಷಕರು ತಮ್ಮ ಮಕ್ಕಳ ಮೊಬೈಲ್ ಗೀಳನ್ನು ಬೇರೆಯವರ ಬಳಿ ಪಾಸಿಟೀವ್ ಆಗಿ ನನಗೇ ಮೊಬೈಲ್ ಬಳಸಲು ಬರಲ್ಲ ನನ್ನ ಮಗ ನೋಡಿ ಎಷ್ಟು ಚೆನ್ನಾಗಿ ಬಳಸ್ತಾನೆ ಎಂದು ಕೊಚ್ಚಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆದ ಮೇಲೆ ಊರು ಹಾಳಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಶಿಕ್ಷಕರು ಮಕ್ಕಳ ತಿದ್ದಲಿ ಎಂದು ಅಲವತ್ತುಕೊಂಡರೆ ಏನು ಉಪಯೋಗ.
ಇದಕ್ಕೆ ಪರಿಹಾರ ಪೋಷಕರ ನಡೆಗಳಲ್ಲೇ ಇದೆ.
ಮೊದಲು ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಲಿ. ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವುದನ್ನು ನಿಲ್ಲಿಸಲಿ ಮಕ್ಕಳಿಗೆ ಹಣದ ಬೆಲೆ ತಿಳಿಸಿಕೊಡಬೇಕು
ಅದಕ್ಕೆ ಈ ಕೆಳಗಿನ ಸರಳ ಸಲಹೆ ಪಾಲಿಸಿದರೆ ಒಳಿತು.
ದಿನವೂ ಎಷ್ಟು ಖರ್ಚು ಮಾಡಿದ್ದೀರಿ ಎಂದು ಬರೆಯಲು ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ.ತಿಂಗಳ ಅಂತ್ಯದಲ್ಲಿ ವಿಶ್ಲೇಷಿಸಿ.ಅನಗತ್ಯ ಖರ್ಚುಗಳು ಯಾವವು? ಎಂಬುದರ ಕಡೆ ಗಮನ ಸೆಳೆದು ಮುಂದಿನ ದಿನಗಳಲ್ಲಿ ಅವುಗಳನ್ನು ನಿಯಂತ್ರಿಸಲು ತಿಳಿಸಿ.
ಉಳಿಸಿದ ಒಂದು ರೂಪಾಯಿ ಗಳಿಸಿದ ರೂಪಾಯಿಗೆ ಸಮ ಎಂಬ ಪಾಠವನ್ನು ಹೇಳಿ ವಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಲು ಪ್ರೋತ್ಸಾಹ ಮಾಡಿ. ಇದಕ್ಕೆ ಪಿಗ್ಗಿ ಬ್ಯಾಂಕ್ ಅಥವಾ ಬ್ಯಾಂಕ್ ಗಳಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿಕೊಡಿ. ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಹಾಲು ನೀಡಲಾಗುತ್ತದೆ. ಕಾಲೇಜಿನ ಮಕ್ಕಳು
ಕಾಲೇಜ್ ಕ್ಯಾಂಟೀನ್ ನಲ್ಲಿ ಅನವಶ್ಯಕ ತಿನ್ನುವುದು ಹಾಗೂ ಫಾಸ್ಟ್ ಫುಡ್ ಮೇಲೆ ವಿಪರೀತ ಖರ್ಚು ಮಾಡುವುದನ್ನು ನಿಯಂತ್ರಿಸಿ.ಮನೆ ಊಟ ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆ ಎಂಬುದನ್ನು ಮನದಟ್ಟು ಮಾಡಿಕೊಡಿ.ಮಕ್ಕಳ ಕೈಗೆ ಫೋನ್ ಕೊಟ್ಟಾಗ ಆಫರ್ ನೋಡಿ ಖರೀದಿ ಮಾಡದಂತೆ ಮಕ್ಕಳಿಗೆ ಮನವರಿಕೆ ಮಾಡಿಕೊಡಿ ಅಗತ್ಯವೇ ಎಂದು ಕೇಳಿಕೊಳ್ಳಿ. ತೀರ ಅಗತ್ಯವಾಗಿ ಬೇಕಾದ ವಿಶ್ ಲಿಸ್ಟ್ ಮಾಡಿ 48 ಗಂಟೆ ನಂತರ ಖರೀದಿ ನಿಯಮ ಅನುಸರಿಸಿ.ಏಕೆಂದರೆ ಕೆಲವೊಂದು ವಸ್ತುಗಳು ಮೊದಲು ಬೇಕಿನಿಸಿ ನಿಧಾನವಾಗಿ ಯೋಚಿಸಿದಾಗ ಆ ವಸ್ತು ಅನಗತ್ಯ ಎನಿಸಬಹುದು.
ಮಕ್ಕಳಿಗೆ ಬೈಕ್ ಕೊಡಿಸುವ ಬದಲಿಗೆ ಸೈಕಲ್ ಕೊಡಿಸಿ. ಅಗತ್ಯವಿದ್ದರೆ ಬಸ್ ಪಾಸ್ ಅಥವಾ ಸ್ಟೂಡೆಂಟ್ ಪಾಸ್ ಬಳಸಲು ಬಳಸಲು ಪ್ರೇರೇಪಿಸಿ.
ಒಟ್ಟಾರೆ ಯುವ ಜನಾಂಗಕ್ಕೆ ಆಗಾಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ಮೂಲಕ ದುಂದುವೆಚ್ಚ ಕಡಿಮೆ ಮಾಡಬಹುದು. ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಕಡಿಮೆ ಮಾಡಿ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕಿದೆ.ಈ ನಿಟ್ಟಿನಲ್ಲಿ ಹಲ ದೇಶಗಳಲ್ಲಿ ಹದಿಹರೆಯದ ಮಕ್ಕಳಿಗೆ ಮನನ ಮೊಬೈಲ್ ಬಳಕೆಗೆ ಕೆಲ ನಿರ್ಬಂಧಗಳನ್ನು ಹೇರಿರುವುದು ಸ್ವಾಗತಾರ್ಹ.ನಮ್ಮ ರಾಜ್ಯದಲದಲ್ಲೂ ಇಂತಹ ಚಿಂತನೆ ಶುರವಾಗಿರುವುದು ಸ್ವಾಗತಾರ್ಹ.ನಮ್ಮ ಮಕ್ಕಳು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಲು ಸಂಸ್ಕಾರವಂತರಾಗಲು ಪೋಷಕರ ಪಾತ್ರ ಬಹಳ ಮುಖ್ಯ ನಾವು ಜವಾಬ್ದಾರಿಯುತ ಪೋಷಕರಾಗೋಣ.ಇದಕ್ಕೆ ಸಮಾಜ ಮತ್ತು ಸರ್ವರ ಸಕಾಲಿಕ ಬೆಂಬಲವೂ ಅಗತ್ಯ.
ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900025529
ಸಿಹಿಜೀವಿಯ ಹನಿ.
ಇತರರ ಬಗ್ಗೆ ಕೆಟ್ಟದಾಗಿ ಮಾತಾಡುವವರ ಜೊತೆಯಲ್ಲಿ ಕುಳಿತುಕೊಳ್ಳಬೇಡ| ನೀ ಎದ್ದು ಹೋದ ಕ್ಷಣವೇ ನಿನ್ನ ಬಗ್ಗೆ ಕೆಟ್ಟ ಮಾತು ಶುರು ನೋಡಾ||
ಸಿಹಿಜೀವಿ ವೆಂಕಟೇಶ್ವರ
16 ಫೆಬ್ರವರಿ 2026
ಜನಪದರ ಕಣ್ಣಲ್ಲಿ ಕಮ್ಮಾರ ಕಲ್ಲಯ್ಯ
ಜನಪದರ ಕಣ್ಣಲ್ಲಿ ಕಮ್ಮಾರ ಕಲ್ಲಯ್ಯ
ಕುರಿತೋದದೆಯುಂ ಕಾವ್ಯ ಪ್ರಯೋಗ ಮತಿಗಳ್ ಎಂದು ಕವಿರಾಜಮಾರ್ಗಕಾರ ವರ್ಣಿಸಿರುವಂತೆ ನಮ್ಮ ಜನಪದರು ನಮಗೆ ಜ್ಞಾನದ ಆಗರ. ಲಿಖಿತ ದಾಖಲೆಗಳಿರದ ಸಂದರ್ಭಗಳಲ್ಲಿ ಇವರ ಮೌಖಿಕ ಆಕರಗಳೇ ನಮಗೆ ಆಧಾರ.
ಶರಣ ಕಲ್ಲಯ್ಯ ರವರ ಬಗ್ಗೆ ತಿಳಿಯಲು ನಮಗೆ ಜನಪದರ ಹಾಡುಗಳು ಪ್ರಮುಖ ಆಕರವಾಗಿವೆ.
'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು. 64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಆತ್ಮೀಯರಾದ ಮಂಜುನಾಥ್ ರವರು ಶರಣ ಕಲ್ಲಯ್ಯ ರವರ ಬಗ್ಗೆ ರಚಿತವಾದ ಜನಪದ ಗೀತೆಯ ಲಿಂಕ್ ಕಳಿಸಿದ್ದರು ಅದನ್ನು ಕೇಳಿದಾಗ ಶರಣ ಕಲ್ಲಯ್ಯನವರ ಬಗ್ಗೆ ಒಂದು ಲೇಖನ ಬರೆಯಬೇಕು ಎಂಬ ಮನಸಾಯಿತು ಅದರ ಫಲವೇ ಈ ಲೇಖನ
ಓಂ ಶ್ರೀ ಗುರು ಬಸವಲಿಂಗಾಯ ನಮಃ ಜನಪದರ ಕಂಡ ಕಮ್ಮಾರ ಕಲ್ಲಯ್ಯ ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಧರಣೀಯ ಶರಣ ಗಣಕಟ್ಟಿ ಧರಣೀಯ ಶರಣ ಗಣಕಟ್ಟಿ ಬಯಲಾದಿ ಶರಣರ ನೆನೆವೆ ನಾನೆದ್ದು ಎಂದು ಆರಂಭವಾಗುವ ಈ ಗೀತೆಗಳು ಶರಣ ಕಲ್ಲಯ್ಯನವರ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.
ಶರಣರ ನೆನೆವೆ ನಾನೆದ್ದು ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ನಿತ್ಯ ಕಾಸುನು ಕಬ್ಬಿಣ ನಿತ್ಯ ಕಾಸುನು ಕಬ್ಬಿಣ ವಕ್ಕಲಿಗೆ ಬಿತ್ತು ಉತ್ತು ಕೆಲಸಗಾರೆಕೆ ಬಿತ್ತು ಉತ್ತೋ ಕೆಲಸಗಾರೇಕೆ ಸಣ್ಣ ಗುಡಿಸಲ ಮುಂದ ಮಣ್ಣಿನ ಒಲೆ ಹೂಡಿ ಸಣ್ಣ ಗುಡಿಸಲ ಮುಂದೆ ಮಣ್ಣಿನ ಒಲೆ ಹೂಡಿ ತಣ್ಣಗಾಳಿ ಊದೋ ಕುಲುಮೆಯ ತಣ್ಣಗಾಳಿ ಊದೋ ಕುಲುಮೆಯ ಇಟ್ಟಕೊಂಡು ಮಣ್ಣಿಗೆ ಬೆವರ ಸುರಿಸೋನು ಎಂದು ಅವರ ವೃತ್ತಿಯ ಬಗ್ಗೆ ಹೇಳಿದ್ದಾರೆ.
ಮಣ್ಣಿಗೆ ಬೆವರ ಸುರಿಸೋನು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಎತ್ತು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಶುದ್ಧ ಕಾಯಕವ ಮಾಡುತ್ತ ಶುದ್ಧ ಕಾಯಕವ ಮಾಡುತ್ತ ಕಲ್ಲಯ್ಯ ಇದ್ದ ಅನುಭಾವ ಹೇಳ್ಯನ ಎಂಬ ಕಾಯಕ ತತ್ವ ನೆನಪಿಸುತ್ತದೆ.
ಇದ್ದ ಅನುಭಾವ ಹೇಳ್ಯಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಗುಣದಲ್ಲಿ ಗಣ್ಯ ಗುರುತನದ ಗುಣದಲ್ಲಿ ಗಣ್ಯ ಗುಣತನದ ಕಲ್ಲಯ್ಯ ಜನರಲ್ಲಿ ಬೆರೆತಾ ದಿನ ಜನನಲ್ಲಿ ಬೆಳೆತಾ ದಿನ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಬರಿಮೈಲಿ ಕುಳಿತು ಬಡಿವನು. ಎಂದು ಬಡತನವಿದ್ದರೂ ಜನರೊಂದಿಗೆ ಬೆರೆತು ಬೆಳೆದರು.
ಬರಿಮೈಲಿ ಕುಳಿತು ಬಡಿವನು ಕಬ್ಬಿಣ ಉಲಿಮೆಗೆ ಬೇಕಾದ ಕುಡುಮುಂಜಿ ಉಲುಮೆಗೆ ಬೇಕಾದ ಕುಡುಮುಂಜಿ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ತಾಳ ಹಾಕಿದಂಗ ತಿಳಿಯುದಿ ತಾಳ ಹಾಕಿದಂಗ ತಿಳಿಯುದಿ ಕಲ್ಲಯ್ಯ ಬಾಳ ಬೀಸಣಕಿ ಆಗ್ಯಾಳ ಬಾಳ ಬೀಸಣಕಿ ಎಂದು ಅವರ ಸತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಗ್ಯಾಳ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಕೊಂಡ ಸುತ್ತಿಗೆ ಯ ಹಣಿವಾಳು ಕೊಂಡು ಸುತ್ತಿಗೆಯ ಹಣಿವಾಳು ಕಾಸಿದ್ದು ಗಂಡ ತೋರಿಸಿದಂಗ ಕೈಸನ್ನೆ ಗಂಡ ತೋರಿಸಿದಂಗ ಕೈಸನ್ನೆ ಸುತ್ತೂರು ಆಳುಗಳು
ಹೊತ್ತಂದ ದಿಂಡಿಗೆ ಸುತ್ತೂರು ಆಳುಗಳು ಹೊತ್ತಂದ ದಿಂಡಿಗೆ ಎತ್ತಿನ ಗಾಡಿಗಳಿಗೆಲ್ಲ ಎತ್ತಿನ ಗಾಡಿಗಳಿಗೆಲ್ಲ ಕಲ್ಲಯ್ಯ ಮುತ್ತಿನಂಗ ಬಳೆ ತುಳಿಸುವನು ಮುತಿನಂಗ ಬಳೆ ತೊಡಿಸುವನು ಎಂದು ಕಾವ್ಯಾತ್ಮಕವಾಗಿ ಕಲ್ಲಯ್ಯನ ಕೆಲಸಕ್ಕೆ ಅವರ ಸತಿ ಕೈಗೂಡಿಸಿದ ಬಗ್ಗೆ ವರ್ಣನೆ ಮಾಡಿರುವರು.
ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ನಾಯಕರ ಸುದ್ದಿ ಹೇಳುತ್ತ ನಾಯಕರ ಸುದ್ದಿ ಹೇಳುತ್ತ ಕಲ್ಲಯ್ಯ ಹಾಯಾಗಿದ್ದಾನ ಊರಲ್ಲಿ ಹಾಯಾಗಿದ್ದಾನ, ಊರಲ್ಲಿ ಮೂತಾಳ ಕೂರಿಗೆ ಪ್ರೀತಿಲೇ ಬಳೆತೊಳಿಸಿ ಮೂತಾಳ ಊರಿಗೆ ಪೀತಿಲೆ ಬಳೆತೊಳಿಸಿ ಭೂತಾಯಿ ಬೆಳೆಯ ಬೆಳೆಸೆಂದು ಭೂತಾಯಿ ಬೆಳೆಯ ಬೆಳೆಸೆಂದು ಒಕ್ಕಲಿಗೆ ತಾತಾಳ ಹಿಡಿದು ನಿಡಿಯುವನು ತಾತಾಳ ಹಿಡಿದು ನೀಡುವನು ಕಡೆತಾಳ ಆಯರಿಗೆ ಅಡತಾಳ ಅರಸಂಗೆ ಕಡೆತಾಳ ಆಯರಿಗೆ ಎಡತಾಳ ಅರಸಂಗೆ ನಡುತಾಳ ನಿನ್ನ ಕರ್ಮಕ್ಕೆ ನಡುತಾಳ ನಿನ್ನ ಕರ್ಮಕ್ಕೆ ಎಂದಹೇಳಿ ಕೊಡುವ ಕೂರಿಗೆ ಯವಕ್ಕಲಿಗೆ ಕೊಡುವ ಕೂರಿಗೆ ಯಾವ ಒಕ್ಕಲಿಗೆ ಮಮತೆಯ ಮಾತಿಂದ ನಿಜತೆಯ ನಿಲುವಿಂದ ಮಮತೆಯ ಮಾತಿಂದ ನಿಜತೆಯ ನೆಲುವಿಂದ ಘನತೆಯ ದುಡಿಮೆ ನಲಿವಿಂದ ಘನತೆಯ ದುಡಿಮೆ ನಲಿವಿಂದ ಕಲ್ಲಯ್ಯ.
ಕಲ್ಲಯ್ಯ ಕಾಯಕದ ಜೊತೆಯಲ್ಲಿ ಬಾಂಧವ್ಯ ಬೆಸೆಯುವ, ಊರಿಂದೂರಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿಯೂ ಕಾರ್ಯ ಮಾಡಿದ್ದರು ಎಂಬುದನ್ನು ಈ ಮುಂದಿನ ಪದ ತಿಳಿಸುತ್ತದೆ.
ಜನತೆಗೆ ಬೇಕಾದ ಶರಣಾದ ಜನತೆಗೆ ಬೇಕಾದ ಶರಣಾದ ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು
ಬಿತ್ತಿ ಬೆಳೆವವರ ಬಗೆಯನ್ನು ಬಿತ್ತಿ ಬೆಳೆಯವರ ಬಗೆಯನ್ನು ಕಲ್ಲಯ್ಯ ಎತ್ತಿ ಹೇಳುತಲಿ ಕಬ್ಬಿಣ ಎತ್ತು ಹೇಳುತವ ಕಬ್ಬಿಣ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆದ ಕಾಳಕಡ್ಡಿ ತರುವನು ಎಂಬ ಮಾತಲ್ಲಿ ಹಿಂದಿನ ಕಾಲದಲ್ಲಿ ರೈತನಿಗೆ ವ್ಯವಸಾಯಕ್ಕೆ ಸಹಾಯ ಮಾಡುವ ಕುಲಸ್ತರಿಗೆ ಕಾಳು ಕಡಿ ನೀಡುವ ವ್ಯವಸ್ಥೆ ಕಾಣಬಹುದು.
ಬೆಳೆದ ಕಾಳಕಡ್ಡಿ ತರುವನು ಕಲ್ಲಯ್ಯ ಗುಳಿ ಮಾಡಿಡುವ ಸಂಸಾರಕೆ ಗುಳಿ ಮಾಡಿಡುವ ಸಂಸಾರಕೆ ತಂದೆಲ್ಲ ಕಾಳನ್ನು ತಂದೆಗೆಂದು ಬಗೆಯದೆ ತಂದೆಲ್ಲ ಕಾಳನ್ನು ತಂದೆಂದು ಬಗೆಯದೆ ನೊಂದ ಬಡವರಿಗೆ ಕೊಡುವನು ನೊಂದ ಬಡವರಿಗೆ ಕೊಡುವನು ಊರಲ್ಲಿ ಒಂದಾಗಿ ನಡೆದ ಎಡಬಡಕೆ ಒಂದಾಗಿ ನಡೆದ ಎಡೆಬಲಕೆ ಗುಮ್ಮ ಶಿವ ಶರಣಾಗಿ ಹುಮ್ಮದಿ ದುಡಿಯುತ್ತ ಗುಮ್ಮ ಶಿವ ಶರಣಾಗಿ ಹುಮ್ಮನದಿ ದುಡಿಯುತ್ತ ಕಮ್ಮೆಲರಾದ ಶಿವಪದಕೆ ಕಮ್ಮೆಲರಾದ ಶಿವಪದಕೆ ಕಲ್ಲಯ್ಯ ಕಮ್ಮಾರ ಕಟ್ಟೆ ಕಮ್ಮಟಕೆ ಕಮ್ಮಾರ ಕಟ್ಟೆ ಕಮ್ಮಟಕೆ ಕುಲುಮೆಟ್ಟಿಗೆ ಬರುವ ಬಲಹೀನ ಜನರಿಗೆ ಕುಲುಮೆಟ್ಟಿಗೆ ಮೆಟ್ಟಿಗೆ ಬರುವ ಬಲಹೀನ ಜನರಿಗೆ ನಲುಮೆಯ ಮಾತು ಹೇಳುತ್ತ ನಲುಮೆಯ ಮಾತು ಹೇಳುತ್ತ ಬಾಳಲ್ಲಿ ಬಲ್ಮೆ ತುಂಬುವ.
ನೋಡಿ ಕಲ್ಲಯ್ಯ ತಾನು ಪಡೆದ ದವಸದಲ್ಲಿ ಇತರರಿಗೂ ನೀಡಿ ಅನ್ಯೋನ್ಯವಾಗಿ ಬಾಳಿ ಶಿವಶರಣರ ತತ್ವಗಳನ್ನು ಎತ್ತಿ ಹಿಡಿದಿದ್ದರು.
ಬದುಕಿಗೆ ಬಲ್ಮೆ ತುಂಬುವ ಬದುಕಿಗೆ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ನಗುನಗುತಾ ದುಡಿದು ಊರಲ್ಲಿ ನಗುನಗುತಾ ದುಡಿದು ಊರಲ್ಲಿ ಬಯಲಾಗ ಹಗಲಿರಳು ಜನರ ನಡುವಲ್ಲಿ ಹಗಲಿರುಳು ಜನರ ನಡುವಲ್ಲಿ ಕಲ್ಯಾಣ ಬಸವಣ್ಣ ಕಾರುಣ್ಯ ಪಥವನು ಕಲ್ಯಾಣ ಬಸವನ ಕಾರುಣ್ಯ ಪಥವನು ದಾರಿ ಹೋಕರಿಂದ ತಿಳಿದಾನ ದಾರಿ ಹೋಕರಿಂದ ತಿಳಿದಾನ ಕಲ್ಲಯ್ಯ ಎಲ್ಲರಿಗೆ ತಿಳಿಸಿ ನಲಿದಾನ ಎಲ್ಲರಿಗೆ ತಿಳಿಸಿ ನಲಿದಾನ ಬಸವನ ಕಾಣುವ ವ್ಯಸನದಲಿ ಕಲ್ಲ ಬಸವನ ಕಾಣುವ ವ್ಯಸನದಲಿಕಲ್ಲ ತುಸುಹೊತ್ತು ಚಿಂತೆ ಮಾಡ್ಯಾನ ತುಸುಹೊತ್ತಿ ಚಿಂತೆ ಮಾಡಯಾನ.ಎಂಬ ಮಾತಲ್ಲಿ ಕಲ್ಲಯ್ಯ ಬಸವೇಶ್ವರರ ಬಗ್ಗೆ ಮಾಹಿತಿಯನ್ನು ತಿಳಿದು ಅವರನ್ನು ಕಾಣಲು ಹಂಬಲಿಸಿದ ಮಾಹಿತಿ ತಿಳಿಯುತ್ತದೆ.
ಸೊನ್ನಲಿಗೆಯ ಸಿದ್ದರಾಮ ರ ಭೇಟಿಯಾದ ಬಗೆಯನ್ನು ಮುಂದಿನ ಪದ ನೀಡುತ್ತದೆ.
ಜನರಲ್ಲಿ ಹೊಸಮತ ಸುದ್ದಿ ತಿಳಿಸಯಾನ ಹೊಸಮತದ ಸುದ್ದಿ ತಿಳಿಸಯಾನ ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ವರತೆಯ ನೀರುಬ ಬತ್ತಿತ್ತು ವರತೆಯ ನೀರು ಬತ್ತಿತ್ತು ಜನರೆಲ್ಲ ಸರತಿಯಲಿ ಗುಳಿವು ಹೊರಟಿತ್ತು ಜನರೆಲ್ಲ ಸರತಿಯಲಿ ಗುಳೆವು ಹೊರಟಿತ್ತು ಎಲ್ಲಿಗೆ ಹೋಗುವುದೆಂದು ಬಲ್ಲವರ ಒಳಗೂಡಿ ಎಲ್ಲಿ ಹೋಗುವುದೆಂದು ಬಲ್ಲವರ ಒಡೆಗೂಡಿ ಕಲ್ಲಯ್ಯ ಚಿಂತೆ ಮಾಡ್ಯಾನ ಕಲ್ಲಯ್ಯ ಚಿಂತೆ ಮಾಡ್ಯಾನ ಗುಡಿ ಮುಂದ ಸೊನ್ನಲಿಗೆ ಸ್ವಾಮಿ ಬಂದಾನ ಸೊನ್ನಲಗಿ ಸ್ವಾಮಿ ಬಂದಾನ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಬಂದ ಜಳೆಬಿಟ್ಟು ಸನ್ಯಾಸಿ ಬಂದ ಜಳೆಬಿಟ್ಟ ಸನ್ಯಾಸಿ ಜನರಿಗೆ ಅಂದು ಶರಣೆಂದು ನಿಂತಾನ. ಅಂದು ಶರಣೆಂದು ನಿಂತಾನ ಕಲ್ಯಾಣ ಬಸವನ ಮಹಿಮೆಯ ಹೇಳುತ್ತ ಕಲ್ಯಾಣ ಬಸವ ನ ಮಹಿಮೆಯ ಹೇಳುತ್ತ ಎಲ್ಲವನು ತಿಳಿಸಿ ನಿಂತಾನ ಎಲ್ಲವನು ತಿಳಿಸಿ ನಿಂತಾನ ಸೊನ್ನಲಗಿ ಶಿವಸಿದ್ದರಾಮನ ಕಾರ್ಯವ ಶಿವಸಿದ್ದರಾಮನ ಕಾರ್ಯವ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಬರದಲ್ಲು ಕೆಲಸ ಕೊಟ್ಟಾನ ಬರದಲ್ಲು ಕೆಲಸ ಕೊಟ್ಟಾನ ದುಡಿವ ವರಿಗೆ ಚರದೇವ ಎನಿಸಿಕೊಂಡಾನ ಚರದೇವ ಎನಿಸಿಕೊಂಡಾನ ಒಡ್ಡರ ಪಡೆಯುಂಟು ಗುಡ್ಡಾರ ಗುಂಪುಂಟು ಒಡ್ಡಾರ ಪಡೆಯುಂಟು ಗುಡ್ಡಾರ ಗುಂಪುಂಟು ಪಡ್ಡೆ ಜನರು ಸೇರಿ ನಿಂತಾರ ಪಡ್ಡೆ ಜನ ಸೇರಿ ನಿಂತಾರ ಸಿದ್ದೇಶ ಮಡ್ಡಿ ಹೊಲದಲ್ಲಿ ಮಡಿಹೂಡಿ ಮಡ್ಡಿ ಹೊಲದಲ್ಲಿ ಮನೆಹೂಡಿ ಕಾಯಕಜೀವಿ ವಿಗೆ ನಾಯಕ ಸಿದ್ದೇಶ.
ಕಾಯಕ ಜೀವಿಗೆ ನಾಯಕ ಸಿದ್ದೇಶ ಸಾಯಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಕೆರೆಕಟ್ಟಿ ಪಾಯ ಹಾಕ್ಯಾನೆಂದು ಸನ್ಯಾಸಿ ಪಾಯ ಹಾಕ್ಯಾನೆಂದ ಸನ್ಯಾಸಿ ಕನ್ನಡದ ಕಲ್ಯಾಣದ ಮಹಿಮೆಯ ಕೇಳಿದ ಕಲ್ಲಯ್ಯ ಕಲ್ಯಾಣದ ಮಹಿಮೆಯ ಕೇಳಿದ್ದ ಕಲ್ಲಯ್ಯ ಎಲ್ಲ ಮಾಹಿತಿಯ ತಿಳಿದಾನ ಎಲ್ಲ ಮಾಹಿತಿಯ ತಿಳಿದಾನ ಸಮಯದಿ ಬಲ್ಲ ಸನ್ಯಸಿಯ ನುಡಿಯಲ್ಲಿ ಬಲ್ಲ ಸನ್ಯಾಸಿಯ ನುಡಿಯಲ್ಲಿ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಮರವೊಂದು ಕಂಡಂತೆ ಬಿಸಿಲಲ್ಲಿ ಮರವೊಂದು ಕಂಡಂತೆ ಬಿಸಿಲಲ್ಲಿ ಕಲ್ಲಯ್ಯ ಹೊರಟ ಸೊನ್ನಲಿಗೆ ಕಡೆಗಾನ ಹೊರಟ ಸೊನ್ನಲಿಗೆ ಕಡೆಗಾಗ ಕಾಳಿಕಾಂಬೆಯ ಭಕ್ತ ಕಾಳವೆ ಜೊತೆಯಲ್ಲಿ ಬಾಳ ಕಟ್ಟಲು ನಡೆದ ಗೊಂಟೋತು ಬಾಳ ಕಟ್ಟಲು ನಡೆದ ಗಂಟೋತು ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸೊನ್ನಲಗಿ ಊರಲ್ಲಿ ಮನೆಯ ಸಿದ್ದರಾಮ ಕನ್ನಲಿಗೆ ಊರಲ್ಲಿ ಮನೆಯ ಸಿದ್ದರಾಮ ಹೊನ್ನ ಕಳಸಿಟ್ಟು ಗುಡಿಕಟ್ಟಿ ಹೊನ್ನ ಕಳಸಿಟ್ಟು ಗುಡುಕಟ್ಟಿ ಕೆರೆಕಟ್ಟಿದ್ದ ಧನ್ಯ ಶಿವ ತಾನಾಗಿ ಮೆರೆದ ಇದ್ದ ಧನ್ಯಶಿವನಾಗಿ ಮೆರೆದಿದ್ದ ಊರ ಹಳ್ಳದ ಮುಂದೆ ನೂರಾರು ಒಡ್ಡರು ಊರ ಹಳ್ಳದ ಮುಂದೆ ನೂರಾರು ಒಡ್ಡರು ಹಾರೆಗುದಲೆ ಹಿಡಿದು ದುಡಿಯೋದು ಹಾರೆಗುದಲೆ ಹಿಡಿದು ದುಡಿಯೋದು ಕಂಡಾನ ದೂರದಲಿ ಬರುತಾ ಕಲ್ಲಯ್ಯ ದೂರದಲಿ ಬರುತಾ ಕಲ್ಲಯ್ಯ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕರೆ ಮುಗಿದು ನಿಂತ ಸಿದ್ದೇಶ ಕರೆ ಮುಗಿದು ನಿಂತ ಸಿದ್ದೇಶ ಶರಣನ ಹರನಂತೆ ಕಂಡು ಕೈಮುಗಿದ ಹರನಂತೆ ಕಂಡು ಕೈಮುಗಿದ ದರ್ಶನಕ್ಕೆ ಬಂಧನವ ಹರುಷದಿ ಮಾತಾಡಿ ದರ್ಶನಕ್ಕೆ ಬಂಧನವ ಹರುಷದಿ ಮಾತನಾಡಿಸಿ ಗುರುತು ಪರಿಚಯ ಕೇಳಿದನ ಗುರುತು ಪರಿಚಯ ಕೇಳಿದನ ಸಿದ್ದರಾಮ ವರ್ಷವೆಲ್ಲ ದಾರಿ ಕಾಯ್ದಂತೆ ವರ್ಷವೆಲ್ಲ ದಾರಿ ಕಾದಂತೆ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ಮೌನಾಗಿ ಎಲ್ಲ ತಿಳಿದಾನ ಮೌನಾಗಿ ಎಲ್ಲ ತಿಳಿದಾನ ಸಿದ್ದೇಶ ತಾಣ ತೋರ್ಯಾನ ಕೆಲಸಕ್ಕ ತಾಣ ತೋರ್ಯಾನ ಕೆಲಸಕ್ಕ ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ಊಟೋಪಚಾರ ಮಾಡಿಸಿ ಊಟೋಪಚಾರ ಮಾಡಿಸಿ ಕಲ್ಲೆಗೆ ಕೂಟಸ್ಥ ಕೆಲಸ ಒಪ್ಪಿಸಿದ ಕೂಟಸ್ತ ಕೆಲಸ ಒಪ್ಪಿಸಿದ ಬೊಮ್ಮಯ್ಯ ಗಣದಲ್ಲಿ ಸಿಮ್ಮಲಿಗೆ ಶರಣರು ಬೊಮ್ಮಯ್ಯನ ಗಣದಲ್ಲಿ ಸಿಮ್ಮಲಿಗೆ ಶರಣರು ಕಮ್ಮಾರ ಕಲ್ಲಯ್ಯ ಸೇರ್ಯಾರ.
ಕಲ್ಲಯ್ಯ ನಾಡ ಶಿಲ್ಪಿಯಾಗಿ ಬೆಳೆದ ಪರಿಯನ್ನ ಜನಪದರು ಹೀಗೆ ಹಾಡಿದ್ದಾರೆ.
ಕಮ್ಮಾರ ಕಲ್ಲಯ್ಯ ಸೇರ್ಯಾರ ದಿನನಿತ್ಯ ಹಮ್ಮಿಲೆ ಕೆಲಸ ಮಾಡ್ಯಾರ ಹಮ್ಮಿಲೆ ಕೆಲಸ ಮಾಡ್ಯಾರ ಶಿಲ್ಪತನ ವಿದ್ಯೆಯ ಸಂಗಡ ಬಂದಿತ್ತು ಶಿಲ್ಪತನವಿ ವಿದ್ಯೆಯು ಸಂಗಡ ಬಂದಿತು ಕಲ್ಪಿತಾಯುತವ ರಚಿಸುತ ಕಲ್ಪಿತಾಯುಧವ ರಚಿಸುತ ಕಲ್ಲಯ್ಯ ಶಿಲ್ಪಿ ಸಿದ್ದೇಶನ ಮನಗೆದ್ದ ಶಿಲ್ಪಿ ಸಿದ್ದೇಶನ ಮನಗೆದ್ದ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ವರಸಿಸಿದ್ದರಾಮಗೆ ಜೊತೆಯಾದ ವರ ಸಿದ್ದರಾಮಗೆ ಜೊತೆಯಾದ ಕಲ್ಲಯ್ಯ ಬರದಿಂದ ಕೆಲಸ ಮಾಡಿದ.
ಬರದಿಂದ ಕೆಲಸ ಮಾಡಿದ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಎದ್ದು ಕಂಡ ಶರಣ ಕಲ್ಲಯ್ಯ ಎದ್ದು ಕಂಡ ಶರಣ ಕಲ್ಲಯ್ಯ ದಿನನಿತ್ಯ ಶುದ್ಧ ಕಾಯಕ ಹೆಸರಾದ ಶುದ್ಧ ಕಾಯಕ ಹೆಸರಾದ ಕುಲವರತಿಯಲಿಕಲ್ಲ ಛಲದಂಕ ಮಲ್ಲ ಕುಲವರತಿಯಲಿಕಲ್ಲ ಚಲದಂಕ ಮಲ್ಲನು ಒಲವಿಂದ ದುಡಿದ ಹಗಲಿರುಳು.
ಒಲವಿಂದ ದುಡಿದ ಹಗಲಿರುಳು ಸಿದ್ದೇಶನ ಬಲಗಯ್ಯ ಭಂಟ ತಾನಾದ ಬಲಗಯ್ಯ ಭಂಟ ತಾನಾದ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ನಾಡ ಶಿಲ್ಪಿ ಎಂದು ಹೆಸರಾದ.
ನಾಡ ಶಿಲ್ಪಿ ಎಂದು ಹೆಸರಾದ ಕಲ್ಲಯ್ಯ ನೋಡಿ ಹೊಗಳಿದ ಸಿದ್ದೇಶ ನೋಡಿ ಹೊಗಳಿದ ಸಿದ್ದೇಶ ದೇವರಥ ಶಿಲ್ಪದಲಿ ಜೀವನದ ಕೀಲಿಟ್ಟು ದೇವರಥ ಶಿಲ್ಪದಲಿ ಜೀವನ ಕೀಲಿಟ್ಟು ಕಾವಲಾಗಿ ನಿಂತ ಜಾತ್ರೆಯಲಿ ಕಾವಲಾಗಿ ನಿಂತ ಜಾತ್ರೆಯಲಿ ಕಲ್ಲಯ್ಯ ಸೇವೆ ಮಾಡಿದ ಜನ ಮೆಚ್ಚುವಂತೆ ಸೇವೆ ಮಾಡಿದ ಜನ ಮೆಚ್ಚುವಂತೆ ಕಲ್ಲಯ್ಯ ಮುಂದಾಗಿ ಬುಲ್ಲೇಶ ಹಿಂದಾಗಿ ಕಲ್ಲಯ್ಯ ಮುಂದಾಗಿ ಬಿಲ್ಲೇಶ ಹಿಂದಾಗಿ ಪಲ್ಲಕ್ಕಿ ಹೊತ್ತು ನಡೆದಾರ ಪಲ್ಲಕ್ಕಿ ಹೊಡೆತು ನಡೆದಾರ ಮಡಿಹಾಸಿ ಎಲ್ಲಾ ಜನ ನಿಂತು ನಮಿಶಾರ ಎಲ್ಲಾ ಜನ ನಿಂತು ನಮಿಶಾರ ಜಯಜ ಜಯ ಎನ್ನುತ್ತ ಜೈಕಾರ ಹಾಕ್ಯಾರ ಜಯ ಜಯ ಎನ್ನುತ್ತ ಜೈಕಾರ ಹಾಕೆರ ಜಯ ಮಲ್ಲಿನಾಥ ಎನುತೆಲ್ಲ ಜಯ ಮಲ್ಲಿನಾಥ ಎನುತೆಲ್ಲ ಜನಸೇರಿ ಜಯಸಿದ್ದೇಶ್ವರ ಎಂದಾರ ಜಯಸಿದ್ದೇಶ್ವರ ಎಂದಾರ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಸಾಲಾಗಿ ಕುಂತ ಜನಕೆಲ್ಲ ಸಾಲಾಗಿ ಕುಂತ ಜನಕೆಲ್ಲ ಉಣಶಾರ.
ಮ್ಯಾಲೆ ಹುಳಿಬಾನ ನೀಡುತ್ತ ಮ್ಯಾಲೆ ಹುಳಿಬಾನ ನೀಡುತ್ತ.
ಶ್ರಿಶೈಲಕ್ಕೆ ಪಾದಯಾತ್ರೆ ಹೊರಟ ಕಲ್ಲಯ್ಯನ ಸಂಭ್ರಮವನ್ನು ಈ ಮುಂದಿನಂತೆ ವರ್ಣಿಸಲಾಗಿದೆ.
ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಹೊರಳಿತು ಹೊತ್ತು ಚಿಗುರೆಡೆಗೆ ಹೊರಳಿತು ಹೊತ್ತು ಚಿಗುರೆಡೆಗೆ ಶ್ರೀಶೈಲಗೆ ತೆರಳಲು ನಿಂತಾರ ಭಕ್ತರು ಶ್ರೀಶೈಲೆಗೆ ತೆರಳ ಲು ನಿಂತಾರ ಭಕ್ತರು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ಕಂಬಿ ಜೊತೆ ಹೊರಟ ಕಲ್ಲಯ್ಯ ಕಂಬಿಜ ಕಂಬಿ ಜೊತೆ ಹೊರಟ ಕಲ್ಲಯ್ಯ ದೊಂದುಬೆ ಹೊರಟಂಗ ಹೂಕಡೆಗೆ ದುಂಬಿ ಹೊರಟಂಗ ಹೂಕಡೆಗೆ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಬರುತೀವಿ ನಿನ್ನ ದರ್ಶನಕ ಬರುತೀವಿ ನಿನ್ನ ದರ್ಶನಕ ಎನ್ನುತ ಬೆರೆತೋದ ಕಲ್ಲಯ್ಯ ಭಕ್ತರನು ಬೆರೆತೋದ ಕಲ್ಲಯ್ಯ ಭಕ್ತರನು ನಿತ್ಯ ದಾರಿ ನಡೆದು ಹೊತ್ತು ಹೋದಲ್ಲಿ ಉಳಿದು ನಿತ್ಯ ದಾರಿಯ ನಡೆದು ಹೊತ್ತು ಹೋದಲ್ಲಿಉಳಿದು ಸತ್ಯಶಿವ ನೆನೆದು ಸಾಗ್ಯಾರ ಸತ್ಯಶಿವ ನೆನೆದು ಸಾಗ್ಯಾರ ದಾರಿಯಲ್ಲಿ ಸುತ್ತ ಸುತ್ತಹುಬಳ್ಳಿ ಕಾಣುತ್ತ.
ಸುತ್ತ ಹೂಬಳ್ಳಿ ಕಾಣುತ್ತ ಎತ್ತೆತ್ತ ನೋಡಿದರ ಎತ್ತರದ ಕರಿಗುಡ್ಡ ಎತ್ತೆತ್ತ ನೋಡಿದರ ಎತ್ತರದ ಕಡಿಗುಡ್ಡ ಮುತ್ತಕೊಂಡವಲ್ಲಿ ಪಶುಭಕ್ತಿ ಮುತ್ತಿಕೊಂಡವಲ್ಲಿ ಪಶುಭಕ್ತಿ ಅಲ್ಲಲ್ಲಿ ಒತ್ತಿ ಹರಿತಾವ ತಿಳಿನೀರ ಒತ್ತಿ ಹರಿತಾವ ತಿಳಿನಾರ ಶಿವಭಕ್ತ ಮಲ್ಲಯ್ಯಶಿವ ಶಿವಶಿವ ಎನ್ನುತ್ತ ಶಿವಭಕ್ತ ಶಿವಭಕ್ತ ಕಲ್ಲಯ್ಯ.
ಶಿವ ಶಿವ ಎನ್ನುತ್ತ ಮಲ್ಲಯ್ಯನಗಂಗ್ಯಾಲ ವೈದಾನ ಮಲ್ಲಗ್ಯಾಲ ವೈದಾನ ಮಲೈ ಮಲ್ಲಯ್ಯಗ್ಯಾಲ ವೈದಾನ ಶ್ರೀಶೈಲಕೆ ಬಲ್ಲ ಶರಣಾಗಿ ನಿಂತಾನ ಬಲ್ಲ ಶರಣಾಗಿ ನಿಂತಾನ ಜೋಡಾದ ಐಗಳು ತೋಡಿ ಹೇಳುತಿಹರು ಜೋಡಾದ ಐಗಳು ತೋಡಿ ಹೇಳುತಿಹರು ರೂಢಯ ಮಾತು ಆಡುತ್ತ ರೂಢಯ ಮಾತು ಆಡುತ್ತ ದಾರಿಯಲಿ ಹಾಡಶಾರ ಕಲ್ಲನ ಕರೆ ಕರೆದು ಹಾಡಶಾರ ಕಲ್ಲನ ಕರೆ ಕರೆದು ಸುತ್ತ ಮಹಾಗಡ್ಡ ಎತ್ತರದ ಗಿಡಮರ ಸುತ್ತ ಮಹಾಗುಡ್ಡ ಎತ್ತರದ ಗಿಡಮರ ಚಿತ್ತ ಬಂದೆಳೆಗೆ ಹಾರುವ ಚಿತ್ತ ಬಂದೆಳೆಗೆ ಹಾರುವ ಗಣ ಉತ್ತುಂಗ ತಾಣ ಶಿವಸದನ ಉತ್ತುಂಗ ತಾಣ ಶಿವಸದನ.
ಶ್ರೀಶೈಲದ ದೇಗುಲ ಕಂಡ ಕಲ್ಲಯ್ಯ ಅಚ್ಚರಿಗೊಂಡ ಪರಿಯನ್ನು ಈ ಮುಂದೆ ಬಣ್ಣಿಸಿದ್ದಾರೆ.
ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಸುಂದರಲಿಂಗ ಕಂಡಾನ ಸುಂದರಲಿಂಗ ಕಂಡಾನ ಗುಡ್ಡದಲಿ ತಂದೆ ಮಲ್ಲಯ್ಯನೆಂದು ನಮಿಶಾನ ತಂದೆ ಮಲ್ಲಯ್ಯನೆಂದು ನಮಿಶಾನ ಬೇಡುವಜನ ಜನವಿತ್ತು ಹಾಡುವರ ಗುಂಪಿತ್ತು ಬೇಡುವ ಜನವಿತ್ತು ಹಾಡುವರ ಗುಂಪಿತ್ತು ನೋಡಿ ನಲಿವವರ ಬಳಗೆ ಇತ್ತು ನೋಡಿ ನಲಿವವರ ಬಳಗಿತ್ತು ಗುಡಿಯಲ್ಲಿ ಓಡಾಡುತ ಕಂಡ ಕಲ್ಲಯ್ಯ ಓಡಾಡುತ ಕಂಡ ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಹಾಡ ಕೇಳಿ ಮೆಚ್ಚಿದ ಸಿದ್ದೇಶ ಹಾಡು ಕೇಳಿ ಮೆಚ್ಚಿದ ಸಿದ್ದೇಶನ ಗುಡಿಯಲ್ಲಿ ಮೂಡಿಗೊಳಗಾಗಿತ್ತು ಜನ ಮೂಡಿಗೊಳಗಾಗಿತ್ತು ಜನ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕೂಡಿಸಿದ್ದಾನ ಜೊತೆ ಉಳಿದಾನ ಕೂಡಿಸಿದ್ದಾನ ಜೊತೆ ಉಳಿದಾನ ಗಿರಿಯಲ್ಲಿ ನೋಡ ನೋಡಿ ದಿನ ಕಳಿದ ನ ನೋಡ ನೋಡಿ ದಿನ ಕಳೆದಾನ ಹೊಳ್ಳಿ ಬಂದರಿಗೆ ಒಳ್ಳೆ ಕಾರ್ಯವ ಮಾಡಿ ಹೊಳ್ಳಿ ಬಂದೂರಿಗೆ ಒಳ್ಳೆ ಕಾರ್ಯವ ಮಾಡಿ ಹಳ್ಳಿಯಲಿ ಬೆಳೆಸಾನ ಭಕ್ತಿಯ ಎಂಬುದಾಗಿ ಕಲ್ಲಯ್ಯ ಹಳ್ಳಿಯಲ್ಲಿ ಭಕ್ತಿ ಚಳುವಳಿಯ ಆರಂಭಮಾಡಿದ ಬಗೆಯ ಹೇಳಿರುವರು.
ಹಳ್ಳಿಯಲಿ ಬೆಳೆಸಾನ ಭಕ್ತಿಯ ಪ್ರೀತಿಯಲಿ ತಳ್ಳಿ ಹಾಕಿ ಜಾತಿ ಭೇದವನು ತಳ್ಳಿಹಾಕಿ ಜಾತಿ ಭೇದವನು ಬಂದವರ ಬಾಯನುತ ನಿಂದವರ ಕೂಡೆನುತ ಬಂದವರ ಬಾಯನುತ ನಿಂದವರ ಕೂಡೆನುತ ನೊಂದವರ ಕಷ್ಟಕ್ಕೆ ಆಗ್ಯಾನ ನೊಂದವರ ಕಷ್ಟಕ್ಕೆ ಆಗ್ಯಾನ ಕಲ್ಲಯ್ಯ ಹೊಂದಿಸಿ ಭಕ್ತಿ ಊರಲ್ಲಿ ಹೊಂದಿಸಿ ಭಕ್ತಿ ಊರಲ್ಲಿ ಭಕ್ತಿಯಲ್ಲಿ ದಾಸೋಹ ಯುಕ್ತಿಯಲಿ ಕಾಯಕ ಭಕ್ತಿಯಲಿ ದಾಸೋಹ ಯುಕ್ತಿಯಲಿ ಕಾಯೋಕ ವಿರಕ್ತಿಯಲಿ ಪಥವ ಹಿಡಿದಾನ ವಿರಕ್ತಿಯ ಪತವ ಹಿಡಿದಾನ ಸೇವೆಯಲ್ಲಿ ಮುಕ್ತಿ ತೋರೋ ಶರಣ ಎನಿ ಶ್ಯಾನ ಮುಕ್ತಿ ತೋರೋ ಶರಣ ಎನಿ ಶ್ಯಾನ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಶುದ್ಧ ಶಿಷ್ಯನಾಗಿ ನಿಂತಾನ ಶುದ್ಧ ಶಿಷನಾಗಿ ನಿಂತಾನ ಕಲ್ಯಾಣದ ಶಿವ ಬೆಳಕ ಹಂಚಿ ಬಾಳಯಾನ ಶಿವ ಬೆಳಕ ಹಂಚಿ ಬಾಳ ನ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ಚಿತ್ತದಲಿ ಶಿವನ ನೆನೆಯುತ್ತ ಚಿತ್ತದಲಿ ಶಿವನ ನೆನೆಯುತ್ತ ಕಲ್ಲಯ್ಯ ಬಿತ್ತಿ ಶರಣರ ನೂಡಿ ಬಯಲಾದ ಬಿತ್ತಿ ಶರಣರ ನುಡಿ ಬಯಲಾದ ಬಿತ್ತಿ ಶರಣು ನುಡಿ ಬಯಲಾದ ಎಂದು ಮುಕ್ತಾಯ ವಾಗುವ ಜನಪದ ಗೀತೆಯು ಶರಣ ಕಲ್ಲಯ್ಯನವರ ಜೀವನ ದರ್ಶನ ಮಾಡುತ್ತದೆ.
ಇಂತಹ ಎಲೆಮರೆಯ ನೂರಾರು ಶರಣರು ನಮ್ಮ ನಾಡಿನಲ್ಲಿ ಕಾಯಕ ಮಾಡುತ್ತಾ ಭಕ್ತಿಯ ರಸಧಾರೆ ಹರಿಸಿರುವರು ಅವರ ಬಗ್ಗೆ ನಮ್ಮ ಜನಪದರು ಹಾಡಿರುವ ಹಾಡುಗಳನ್ನು ಗುರ್ತಿಸಿ ಸಂಶೋಧನೆ ಮಾಡಿ.ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
02 ಫೆಬ್ರವರಿ 2026
ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..
ಫೆಬ್ರವರಿ ಎಂದರೆ ಸುಮ್ಮನೆ ಅಲ್ಲ..
ಫೆಬ್ರವರಿ ತಿಂಗಳು ವರ್ಷದ ಉಳಿದ ತಿಂಗಳುಗಳಿಗಿಂತ ವಿಭಿನ್ನ ಮತ್ತು ವಿಶೇಷ. ಪ್ರಕೃತಿಯ ಬದಲಾವಣೆ, ಸಾಂಸ್ಕೃತಿಕ ಮಹತ್ವ ಹಾಗೂ ಕಾಲಗಣನೆಯ ವೈಚಿತ್ರ್ಯದಿಂದಾಗಿ ಇದು ತನ್ನದೇ ಆದ ಆಕರ್ಷಣೆ ಹೊಂದಿದೆ.
ಫೆಬ್ರವರಿ ತಿಂಗಳು ಕೇವಲ 28 ಅಥವಾ 29 ದಿನಗಳನ್ನು ಹೊಂದಿರುವ ವರ್ಷದ ಏಕೈಕ ತಿಂಗಳು. ಸೌರಮಂಡಲದ ಲೆಕ್ಕಾಚಾರದ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ 'ಅಧಿಕ ವರ್ಷ' (Leap Year) ಬರುತ್ತದೆ. ಆಗ ಈ ತಿಂಗಳು 29 ದಿನಗಳನ್ನು ಹೊಂದಿರುತ್ತದೆ. ಈ ವೈಶಿಷ್ಟ್ಯವೇ ಫೆಬ್ರವರಿಯನ್ನು ಇತರ 11 ತಿಂಗಳುಗಳಿಗಿಂತ ವಿಭಿನ್ನವಾಗಿ ನಿಲ್ಲಿಸುತ್ತದೆ.
ಈ ತಿಂಗಳು ಮನೆ ಮಾಲೀಕರಿಗೆ ಖುಷಿಯ ವಿಚಾರವಾದರೆ ಬಾಡಿಗೆದಾರರಿಗೆ ಬೇಸರದ ತಿಂಗಳು.
ಫೆಬ್ರವರಿ ತಿಂಗಳೆಂದರೆ
ಮನೆ ಓನರ್ ಗಳಿಗೆ
ಎಲ್ಲಿಲ್ಲದ ಸಂತಸ|
ಎರಡು ದಿನ ಮೊದಲೇ
ತುಂಬಿ ಬಿಡುವುದು
ಅವರ ಬೊಕ್ಕಸ ||
ಭಾರತದಲ್ಲಿ ಫೆಬ್ರವರಿ ತಿಂಗಳು ಶೀತಗಾಲದ ಅಂತ್ಯ ಮತ್ತು ವಸಂತ ಕಾಲದ ಆಗಮನದ ಸಮಯ. ಮರದ ಎಲೆಗಳು ಉದುರಿ ಹೊಸ ಚಿಗುರು ಕಾಣಿಸಿಕೊಳ್ಳುವ ಹಾಗೂ ಹೂವುಗಳು ಅರಳುವ ಸುಂದರ ಕಾಲವಿದು. ಅತಿಯಾದ ಚಳಿಯೂ ಇಲ್ಲದ ವಿಪರೀತ ಸೆಕೆಯೂ ಇಲ್ಲದ ಹಿತಕರವಾದ ಹವಾಮಾನ ಇರುವುದರಿಂದ ಪ್ರವಾಸಕ್ಕೆ ಇದು ಅತ್ಯುತ್ತಮ ಸಮಯ.
ಈ ತಿಂಗಳು ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನೂ ಹೊಂದಿದೆ
ಫೆಬ್ರವರಿ ತಿಂಗಳಿನಲ್ಲಿ ಹಲವಾರು ಪ್ರಮುಖ ದಿನಾಚರಣೆಗಳಿವೆ.ಅದರಲ್ಲಿ
ಫೆಬ್ರವರಿ 14 ರಂದು ಆಚರಿಸುವ ಪ್ರೇಮಿಗಳ ದಿನ ಒಂದು.ಅದು ವಿಶ್ವದಾದ್ಯಂತ ಪ್ರೀತಿ ಮತ್ತು ಸ್ನೇಹವನ್ನು ಸಂಭ್ರಮಿಸುವ ದಿನ.
ಕಾತರಿಸುವನು ಅವನು
ಎಂದು ಬರುವುದೋ
ಫೆಬ್ರವರಿ ಹದಿನಾಲಕ್ಕು|
ಅವಳು ಇವನ
ಪ್ರೀತಿ ಸ್ವೀಕರಿಸಿದರೆ
ಅದೇ ದೊಡ್ಡ ಲಕ್ಕು||
ಫೆಬ್ರವರಿ 21 ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತೇವೆ. ನಮ್ಮ ತಾಯ್ನುಡಿಯ ಮಹತ್ವವನ್ನು ಸಾರುವ ದಿನವು ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವ ದಿನ
ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಸರ್ ಸಿ.ವಿ. ರಾಮನ್ ಅವರು 'ರಾಮನ್ ಎಫೆಕ್ಟ್' ಸಂಶೋಧಿಸಿದ ದಿನದ ನೆನಪಿಗಾಗಿ ಇದನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಇದೇ ತಿಂಗಳಲ್ಲಿ ನಮ್ಮ ನಾಡಿನಲ್ಲಿ ಅನೇಕ ಹಬ್ಬ ಹಾಗೂ ಜಾತ್ರೆಗಳನ್ನು ಆಚರಿಸುತ್ತೇವೆ.
ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಬರುವ 'ಮಹಾಶಿವರಾತ್ರಿ' ಹಬ್ಬವು ಧಾರ್ಮಿಕವಾಗಿ ಈ ಕಾಲಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.
ಇಷ್ಟೆಲ್ಲಾ ಮಹತ್ವದ ಈ ತಿಂಗಳ ಕಂಡರೆ ಕೆಲವರು ಬೇಸರ ವ್ಯಕ್ತಪಡಿಸುವರು.ಅವರೇ ಫೆಬ್ರವರಿ ತಿಂಗಳ 29 ರಂದು ಜನಿಸಿವರು.
ಫೆಬ್ರವರಿ 29 ರಂದು
ಹುಟ್ಟಿದವರ ಪಾಡು
ಹೇಳತೀರದು|
ಅವರ ಹುಟ್ಟು
ಪ್ರತಿ ವರ್ಷ ಬಾರದು||
ಫೆಬ್ರವರಿ ಎಂದರೆ ಕೇವಲ ಒಂದು ತಿಂಗಳಲ್ಲ.ಅದು ಹಳೆಯದನ್ನು ಕಳೆದು ಹೊಸತನಕ್ಕೆ ಸಿದ್ಧವಾಗುವ ಸಂಧಿಕಾಲ. ವರ್ಷದ ಚಿಕ್ಕ ತಿಂಗಳಾದರೂ ಇದು ಹೊತ್ತು ತರುವ ಸಂಭ್ರಮ ಮತ್ತು ಸಾರ್ಥಕತೆ ದೊಡ್ಡದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
11 ಜನವರಿ 2026
ಜಗದ ಎತ್ತರದ ಹಾಗೂ ಭಾರವಾದ ಶಿಬಲಿಂಗ..
ಜಗದ ಅತಿ ಎತ್ತರದ ಹಾಗೂ ಭಾರವಾದ ಏಕ ಶಿಲಾ ಶಿವಲಿಂಗ ಬಿಹಾರದ ದೇವಾಲಯವೊಂದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.
ಗ್ರಾನೈಟ್ ಶಿಲೆಯಲ್ಲಿ ಕೆತ್ತಿರುವ ಈ ಲಿಂಗವು 33 ಅಡಿ ಉದ್ದವಿದ್ದು ಬರೊಬ್ವರಿ 210 ಟನ್ ಭಾರವಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಹತ್ತು ವರ್ಷಗಳಿಂದ ಕೆತ್ತನೆ ಮಾಡಿ ಈಗ ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದ ಕಡೆಗೆ ಪಯಣ ಆರಂಭಿಸಿದೆ.ಲಿಂಗವೇ ಈ ಮಟ್ಟದ ದಾಖಲೆಯನ್ನು ಹೊಂದಿದೆ ಎಂದರೆ ಆ ದೇವಾಲಯದ ಬಗ್ಗೆ ನನಗೆ ಇನ್ನೂ ಕುತೂಹಲ ಇದೆ.
ಈ ಬೃಹತ್ ಲಿಂಗದ ಸಾಗಣೆಗೆ 96 ಚಕ್ರದ ಹೈಡ್ರಾಲಿಕ್ ಲಾರಿ ಬಳಸಲಾಗಿದೆ.2100 ಕಿಲೋಮೀಟರ್ ದಾರಿ ಸುಸೂತ್ರವಾಗಿ ಸಾಗಿ ಪ್ರಸಾವಿತ ದೇವಳ ತಲುಪಲಿ ಎಂದು ಆಶಿಸೋಣ.ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರೋಣ.
#sihijeevi #tumkur
#harharmahadev #omnamahshivaya
#Bihar #mahabalipuram #tamilnadupolitics
09 ಜನವರಿ 2026
ನೆಲದ ನಕ್ಷತ್ರ ದೀಪೆಂದರ್ ಗೋಯಲ್..
ಅವರು ತಮ್ಮ ಬಾಲ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಅವರು ಕುಳ್ಳಗಿದ್ದರು, ಕಪ್ಪಗಿದ್ದರು. ತೊದಲುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಅವರ ಸ್ನೇಹಿತರು ಕೀಟಲೆ ಮಾಡಿ ಅವಮಾನ ಮಾಡಿದ್ದರು. ಅವರು ಮಾತನಾಡುವಾಗ ಜನರು ಅವರ ಕಡೆ ಗಮನ ಕೊಡುತ್ತಿರಲಿಲ್ಲ ಅಥವಾ ಅವರ ಮಾತಿನ ಮಧ್ಯದಲ್ಲೇ ಬೇರೆಡೆ ನೋಡುತ್ತಿದ್ದರು. ಈ ಕೀಳರಿಮೆಯೇ ಅವರನ್ನು ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಪ್ರೇರೇಪಿಸಿತು. ಇಂದು ಅವರು ಯಶಸ್ವಿ ಉದ್ಯಮಿ 700000 ಕ್ಕೂ ಜನರ ಉದ್ಯೋಗದಾತ.ಈಗ ತಾವು ತೊದಲುತ್ತಾ ಮಾತನಾಡೊದರೂ ಜನರು ಅವರ ಮಾತನ್ನು ಗಮನವಿಟ್ಟು ಕೇಳುತ್ತಾರೆ.ಅವರೇ ಜೊಮಾಟೋ ಕಂಪನಿಯ ಸಂಸ್ಥಾಪಕ ದೀಪೇಂದರ್ ಗೋಯಲ್.
ಗೋಯಲ್ ಜನವರಿ 26, 1983 ರಂದು ಭಾರತದ ಪಂಜಾಬ್ನ ಮುಕ್ತಸರ್ನಲ್ಲಿ ಜನಿಸಿದರು. ಅವರು 2005 ರಲ್ಲಿ ದೆಹಲಿಯ ಐ ಐಟಿ ಗಣಿತ ಮತ್ತು ಕಂಪ್ಯೂಟಿಂಗ್ನಲ್ಲಿ ಎಂ.ಟೆಕ್ ಪದವಿ ಪಡೆದ
ನಂತರ ಜನವರಿ 2006 ರಲ್ಲಿ ಬೈನ್ ಅಂಡ್ ಕಂಪನಿಯಲ್ಲಿ ಹಿರಿಯ ಸಹಾಯಕ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬೈನ್ನಲ್ಲಿದ್ದಾಗ ಗೋಯಲ್ ತಮ್ಮ ಸಹೋದ್ಯೋಗಿ ಪಂಕಜ್ ಅವರೊಂದಿಗೆ ಆಹಾರ ಆರ್ಡರ್ಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅನಾನುಕೂಲತೆಯಿಂದ ಪ್ರೇರಿತರಾಗಿ ಜೊಮ್ಯಾಟೊದ ಕಲ್ಪನೆಯನ್ನು ರೂಪಿಸಿದರು. ಬೈನ್ ಉದ್ಯೋಗಿಗಳಿಗೆ ಆಹಾರ ಆರ್ಡರ್ ಮಾಡುವ ವೆಬ್ಸೈಟ್ ಎಂಬ ಅವರ ಆರಂಭಿಕ ಯೋಜನೆಯು ಯಶಸ್ವಿಯಾಯಿತು. ಇದು 2008 ರಲ್ಲಿ ಜೊಮ್ಯಾಟೊ ಸ್ಥಾಪನೆಗೆ ಕಾರಣವಾಯಿತು.
ಆರಂಭದಲ್ಲಿ ಫುಡೀಬೇ ಎಂದು ಹೆಸರಿಸಲಾದ ಜೊಮ್ಯಾಟೊ ಭಾರತೀಯ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಮತ್ತು ಆಹಾರ ವಿತರಣಾ ಕಂಪನಿಯಾಗಿದೆ. ಇದು ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು ಮತ್ತು ವಿತರಣಾ ಪಾಲುದಾರರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಜೊಮ್ಯಾಟೊ ಜಾಗತಿಕವಾಗಿ ವಿಸ್ತರಿಸಿದೆ.ಸುಮಾರು 22 ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಗ್ರ ರೆಸ್ಟೋರೆಂಟ್ ಮಾಹಿತಿ, ಮೆನು ವಿವರಗಳು, ಬೆಲೆ ಮತ್ತು ವಿಮರ್ಶೆಗಳನ್ನು ನೀಡುತ್ತದೆ.
ಗೋಯಲ್ ಅವರ ನಾಯಕತ್ವದಲ್ಲಿ, ಜೊಮಾಟೊ ಪೋಲೆಂಡ್ನಲ್ಲಿ ಗ್ಯಾಸ್ಟ್ರೋನೌಸಿ , ಇಟಲಿಯಲ್ಲಿ ಸಿಬಾಂಡೋ ಮತ್ತು ಭಾರತದಲ್ಲಿ ಬ್ಲಿಂಕಿಟ್ ಗಳ ಸ್ವಾಧೀನಗಳ ಮೂಲಕ ತನ್ನ ಜಾಗತಿಕ ಉಪಸ್ಥಿತಿಯನ್ನು ಬೆಳೆಸಿಕೊಂಡಿದೆ.
ಝೊಮಾಟೊದ ಯಶಸ್ಸು ಕಂಡು ಸುಮ್ಮನೆ ಕೂರದ ಗೋಯಲ್ ಮೇನ್ಸ್ಟ್ರೀಟ್, ಗ್ಯಾಬಿಟ್, ಥೆರಾಡೊ, ಶಿಪ್ರಾಕೆಟ್, ಬ್ಲಿಂಕಿಟ್, ಬಿರಾ 91, ಹೈಪರ್ಟ್ರಾಕ್, ಟೆರ್ರಾಡೊ, ಚೆಫ್ಕಾರ್ಟ್, ಸ್ಕ್ವಾಡ್ಸ್ಟ್ಯಾಕ್ ಮತ್ತು ಅನ್ಅಕಾಡೆಮಿ ಸೇರಿದಂತೆ ವಿವಿಧ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಇವರ ಸಾಧನೆಯನ್ನು ಗುರ್ತಿಸಿದ ಹಲವಾರು ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
೨೦೧೧ ರಲ್ಲಿ, ಗೋಯಲ್ ಅವರಿಗೆ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ಅಪ್ ಆಫ್ ದಿ ಇಯರ್ ಪ್ರಶಸ್ತಿ ೨೦೧೨ ರಲ್ಲಿ ಬಿಸಿನೆಸ್ ಟುಡೇ ಯಂಗ್ ಬಿಸಿನೆಸ್ ಲೀಡರ್ ಪ್ರಶಸ್ತಿ,೨೦೧೮ ರಲ್ಲಿ ಐಐಟಿ ದೆಹಲಿಯಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಪ್ರಶಸ್ತಿ, ೨೦೧೯ ರಲ್ಲಿ ವರ್ಷದ ಜಿಕ್ಯೂ ಪುರುಷರ ಪ್ರಶಸ್ತಿ ಸ್ವೀಕರಿಸಿದ್ದಾರೆ. 2020 ರಲ್ಲಿ ಗೋಯಲ್ ಫಾರ್ಚೂನ್ ಇಂಡಿಯಾ 40 ವರ್ಷದೊಳಗಿನವರ ಪಟ್ಟಿಯಲ್ಲಿ ಸೇರಿಸಲಾಯಿತು.ಅವರು 2023 ರ EY ಉದ್ಯಮಿ ಪ್ರಶಸ್ತಿಗೆ ಅಂತಿಮ ಸ್ಪರ್ಧಿಯೂ ಆಗಿದ್ದರು.
ಗೋಯಲ್ ಅವರು ಐಐಟಿ ದೆಹಲಿಯಲ್ಲಿ ಕಾಲೇಜು ವರ್ಷಗಳಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ವಿವಾಹವಾಗಿದ್ದು. ಅವರಿಗೆ ಸಿಯಾರಾ ಎಂಬ ಮಗಳಿದ್ದಾಳೆ.ಇತ್ತೀಚಿಗೆ ಮಾಧ್ಯಮದವರ ಜೊತೆಯಲ್ಲಿ ಮುಕ್ತವಾಗಿ ಮಾತನಾಡಿದ ಗೋಯಲ್ ರವರು ತಮ್ಮ ಆದ್ಯತೆ, ಮುಂದಿನ ಗುರಿಗಳ ಬಗ್ಗೆ ವಿವರ ನೀಡಿದ್ದಾರೆ.
ಜೋಮಾಟೊದಲ್ಲಿ ಯಾವುದೇ ತ್ರೈಮಾಸಿಕ ಅಥವಾ ವಾರ್ಷಿಕ ಗುರಿಗಳಿಲ್ಲ ಗುರಿಗಳನ್ನು ನಿಗದಿಪಡಿಸುವುದರಿಂದ ಜನರು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
ಬ್ಲಿಂಕಿಟ್ ಸೇವೆಯು ದೀಪಿಂದರ್ ಅವರಿಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಗಿದ್ದರಿಂದ ಗೆಳೆಯ ಅಲ್ಬಿಂದರ್ ಧಿಂದ್ಸಾ ಅವರಿಂದ ಖರೀದಿಸಿದರು. ಪ್ರಸ್ತುತ ಜೋಮಾಟೊ ಮತ್ತು ಬ್ಲಿಂಕಿಟ್ನಲ್ಲಿ 7,50000 ಕೆಲಸಗಾರರಿಗೆ ಉದ್ಯೋಗ ನೀಡಿದೆ. ಒಬ್ಬ ಸವಾರ ದಿನಕ್ಕೆ 8 ರಿಂದ 10 ಗಂಟೆ ಕೆಲಸ ಮಾಡಿದರೆ ತಿಂಗಳಿಗೆ ₹25,000 ಕ್ಕಿಂತ ಹೆಚ್ಚು ಗಳಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇತರೆ ಡೆಲಿವರಿ ಕಂಪನಿಗಳಿಗಿಂತ ಜೊಮಾಟೊ 10 ನಿಮಿಷಗಳ ಡೆಲಿವರಿ ನೀಡುವ ಬಗ್ಗೆ ಕೇಳಿದಾಗ ಇದು ಸವಾರರ ಬರವೇಗದಿಂದ ಸಾಧ್ಯವಾಗುತ್ತಿಲ್ಲ ಬದಲಾಗಿ ಮಳಿಗೆಗಳ ಸಾಂದ್ರತೆಯಿಂದ ಸಾಧ್ಯವಾಗುತ್ತಿದೆ. ಸವಾರರಿಗೆ ಯಾವುದೇ ಸಮಯದ ಮಿತಿಯನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಗೋಯಲ್ ರವರ ವಿಷನ್ ವಿಸ್ತರಿಸುತ್ತಲೇ ಇದೆ.
ಸಣ್ಣ ವಿಮಾನಗಳನ್ನು ತಯಾರಿಸುವ ಯೋಜನೆಗಾಗಿ ದೀಪಿಂದರ್ ಅವರು 50 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧರಾಗಿದ್ದಾರೆ. ಇದು ನಗರಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಅವರ ಆಶಯ.ಮೆದುಳಿಗೆ ರಕ್ತದ ಹರಿವನ್ನು ಮೇಲ್ವಿಚಾರಣೆ ಮಾಡುವ ಟೆಂಪಲ್ ಎಂಬ ಮತ್ತೊಂದು ಸಾಧನ ಆವಿಷ್ಕಾರಕ್ಕೆ ಕೈಹಾಕಿದ್ದಾರೆ. ಭೂಮಿಯ ಗುರುತ್ವಾಕರ್ಷಣೆಯು ನಮ್ಮ ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸುವುದು ಇದರ ಉದ್ದೇಶ.
ದೀಪಿಂದರ್ ಗೋಯಲ್ ಅವರ ವ್ಯವಹಾರ ಶೈಲಿಯು ಬಲು ವಿಭಿನ್ನ ಅದಕ್ಕೆ ಅವರು ಈ ಎತ್ತರಕ್ಕೆ ಏರಿದ್ದಾರೆ. ಅವರ ವ್ಯವಹಾರ ಶೈಲಿಯನ್ನು ಹೀಗೆ ಹೇಳಬಹುದು ಒಂದು ರೇಸ್ ಕಾರ್ ಎಂಜಿನ್ ಎಷ್ಟು ದೂರ ಹೋಗಬೇಕು ಎಂದು ಅವರು ಮೊದಲೇ ಗುರಿಯೊಂದಿಗೆ ನಿರ್ಧರಿಸುವುದಿಲ್ಲ. ಆದರೆ ಪ್ರತಿ ಭಾಗವೂ ಅತ್ಯಂತ ನಿಖರವಾಗಿ ಮತ್ತು ತೀವ್ರತೆಯಿಂದ ಕೆಲಸ ಮಾಡಬೇಕೆಂದು ಅವರು ಬಯಸುತ್ತಾರೆ.ಆಗ ಮಾತ್ರ ಕಾರು ಯಾರಿಗೂ ತಲುಪಲಾಗದ ವೇಗವನ್ನು ತಲುಪಲು ಸಾಧ್ಯವಾಗುತ್ತದೆ.
ಗೋಯಲ್ ನಮ್ಮ ನೆಲದ ನಕ್ಷತ್ರ! ಇಂತಹ ಸಾವಿರಾರು ನಕ್ಷತ್ರಗಳಿಗೆ ಗೋಯಲ್ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
08 ಜನವರಿ 2026
ಪೋರಿಯಲ್ಲ ಹೆಂಗಸು!
ನಿನ್ನೆ ಸಂಜೆ ಪಾರ್ಕ್ ನಲ್ಲಿ ವಾಕ್ ಮಾಡುವಾಗ ಈ ಪುಟ್ಟ ಪೋರಿಯ ಕಂಡೆ ಕಂಕುಳಲ್ಲೊಂದು ಬೊಂಬೆ ಎತ್ತಿಕೊಂಡು ಆ ಬೊಂಬೆಯೊಂದಿಗೆ ಮಾತನಾಡುತ್ತಾ ವಾಕ್ ಮಾಡುತ್ತಿತ್ತು ನಾನು ದೂರದಿಂದಲೇ ಗಮನಿಸಿ ಖುಷಿ ಪಟ್ಟೆ.ಮಕ್ಕಳ ಆಟವೇ ನೋಡಲು ಚೆಂದ. ನನಗೆ ನನ್ನ ಬಾಲ್ಯ ನೆನಪಾಯಿತು ನಾವೂ ಹೀಗೆಯೇ ಗೊಂಬೆಗಳಿಗೆ ಮದುವೆ ಮಾಡಿ.ಆಟ ಆಡಿದ ಸವಿನೆನಪುಗಳು ಮಧುರ. ಆ ಬಾಲಕಿ ನಾನು ದೊಡ್ಡ ಹೆಂಗಸು ಅಂದುಕೊಂಡು ಹೆಂಗಸಿನ ಪಾತ್ರದಲ್ಲಿ ಆಟವಾಡುತ್ತಿತ್ತು.ಇದಕ್ಕೆ ಒಂದು ಸಾಕ್ಷಿ ಕೈಯಲ್ಲಿರುವ ಬೊಂಬೆ. ಇನ್ನೂ ಎರಡು ವಸ್ತುಗಳನ್ನು ಆ ಬಾಲಕಿ ನಾನು ದೊಡ್ಡ ಹೆಂಗಸು ಎಂದು ಬಿಂಬಿಸಿಕೊಳ್ಳಲು ಬಳಸಿದೆ. ಆ ವಸ್ತುಗಳು ಯಾವು ಕಾಮೆಂಟ್ ಮಾಡಿ ಹೇಳಿ.
#sihijeevi #childhood #children #play #playtime
05 ಜನವರಿ 2026
ರಾಷ್ಟ್ರೀಯ ಪಕ್ಷಿಗಳ ದಿನ
ರಾಷ್ಟ್ರೀಯ ಪಕ್ಷಿಗಳ ದಿನ
ದೇಶಾದ್ಯಂತ ಪ್ರಕೃತಿ ಪ್ರಿಯರು, ಪಕ್ಷಿ ಪ್ರಿಯರು ಮತ್ತು ಪಕ್ಷಿ ವೀಕ್ಷಕರು ವಾರ್ಷಿಕವಾಗಿ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸುತ್ತಾರೆ. ಅಮೆರಿಕ ದ ಬಾರ್ನ್ ಫ್ರೀ ಎಂಬ ಸಂಸ್ಥೆಯ ಪ್ರಯತ್ನ ದ ಪರಿಣಾಮವಾಗಿ ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ.
ಇದು ಬಂಧಿತ ಮತ್ತು ಕಾಡು ಪಕ್ಷಿಗಳ ರಕ್ಷಣೆ ಮತ್ತು ಉಳಿವಿಗೆ ನಿರ್ಣಾಯಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ದಿನವಾಗಿದೆ.
ಬಾರ್ನ್ ಫ್ರೀ ಸಂಸ್ಥೆಯ ಪ್ರಕಾರ ವಿಶ್ವದ ಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ ಸುಮಾರು 12 ಪ್ರತಿಶತ ಅಳಿವಿನ ಅಪಾಯದಲ್ಲಿದೆ.ಇವುಗಳ ಸಂರಕ್ಷಣೆ ನಮ್ಮ ಕರ್ತವ್ಯ. ಇದಕ್ಕೆ ಈ ಕೆಳಗಿನ ಚಟುವಟಿಕೆಗಳಲ್ಲಿ ನಾವು ಪಾಲ್ಗೊಳ್ಳಬಹುದು.
ಪಕ್ಷಿ ವೀಕ್ಷಣೆ,ಪಕ್ಷಿಗಳನ್ನು ಅಧ್ಯಯನ ಮಾಡುವುದು,ಇತರರಿಗೆ ಶಿಕ್ಷಣ ನೀಡುವುದು,ಇತರ ಪಕ್ಷಿ ಸಂಬಂಧಿತ ಚಟುವಟಿಕೆಗಳು,ರಾಷ್ಟ್ರೀಯ ಪಕ್ಷಿ ದಿನದ ಒಂದು ಪ್ರಮುಖ ಚಟುವಟಿಕೆಯೆಂದರೆ ಪಕ್ಷಿ ದತ್ತು ಸ್ವೀಕಾರ ಮಾಡುವುದು.
ಅಟ್ಲಾಂಟಾ ಜರ್ನಲ್ ಕಾನ್ಸ್ಟಿಟ್ಯೂಷನ್ ಪತ್ರಿಕೆಯ ಲೇಖನದ ಪ್ರಕಾರ, ಅನೇಕ ಪಕ್ಷಿ ಉತ್ಸಾಹಿಗಳು ಈ ದಿನದಂದು ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಆಚರಿಸುತ್ತಾರೆ. ಅವರು ಭವಿಷ್ಯದ ಪಕ್ಷಿ ಮಾಲೀಕರಿಗೆ ಪಕ್ಷಿಗಳ ಆರೈಕೆಯಲ್ಲಿ ಒಳಗೊಂಡಿರುವ ವಿಶೇಷ ಸಮಸ್ಯೆಗಳ ಬಗ್ಗೆ ಶಿಕ್ಷಣ ನೀಡುತ್ತಾರೆ, ಅವುಗಳಲ್ಲಿ "ಸರಿಯಾದ ಆರೈಕೆ, ಶುಚಿಗೊಳಿಸುವಿಕೆ, ಶಬ್ದ ಮತ್ತು ಕಚ್ಚುವಿಕೆ, ಆಹಾರ, ಆಹಾರ ಮತ್ತು ದೈನಂದಿನ ಸಂವಹನದ ಅಗತ್ಯತೆ" ಸೇರಿವೆ.
ನನಗೆ ವೈಯಕ್ತಿಕವಾಗಿ ಗುಬ್ಬಚ್ಚಿ ಇಷ್ಟ ನಿಮಗೆ ಯಾವ ಪಕ್ಷಿ ಇಷ್ಟ ಎಂದು ತಿಳಿಸಬಹುದು.
ಸಿಹಿಜೀವಿ ವೆಂಕಟೇಶ್ವರ
04 ಜನವರಿ 2026
ಅಭಿನಂದನೆಗಳು
ದೈಹಿಕ ಶಿಕ್ಷಕರ ಇಲ್ಲದೇ ಯಾವುದೇ ಮೂಲಸೌಕರ್ಯಗಳಿಲ್ಲದೆ ಹಳ್ಳಿಯ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಪ್ರಯತ್ನ ಪೋಷಕರ ಬೆಂಬಲ ಶಿಕ್ಷಕರ ಮಾರ್ಗದರ್ಶನದ ಫಲಿತವಾಗಿ ರಾಷ್ಟ್ರ ಮಟ್ಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಶಸ್ತಿ ಪಡೆದ ತಿಪಟೂರಿನ ಹೊಸಹಳ್ಳಿ ಸರ್ಕಾರಿ ಶಾಲೆಯ ಮಾನ್ಯ ಹಾಗೂ ಶಾಂಭವಿ ಇವರಿಗೆ ಒಂದು ಅಭಿನಂದನೆ ಸಲ್ಲಿಸೋಣ.
Congratulations ಮಕ್ಕಳೇ.. ನಿಮ್ಮ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ.
#sports #game #throwball #school #studentsuccess
02 ಜನವರಿ 2026
ವಾರ್ಷಿಕ ಹಿ(ಮು)ನ್ನೋಟ
ವಾರ್ಷಿಕ ಹಿ(ಮು)ನ್ನೋಟ
ಕಳೆದ ವರ್ಷ ಹತ್ತಾರು ಸಂಕಲ್ಪ ಮಾಡಿಕೊಂಡು ಅವುಗಳನ್ನು ಈಡೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದೆ.ಅದರಲ್ಲಿ ಕೆಲವು ಈಡೇರಿ ಕೆಲವು ಹಾಗೆಯೇ ಉಳಿದವು.ಕಳೆದ ಕ್ಯಾಲೆಂಡರ್ ವರ್ಷದ ಬಗ್ಗೆ ಸಿಂಹಾವಲೋಕನ ಮಾಡುವ ಪ್ರಯತ್ನ ಮಾಡುವೆ.
ಇದು ಈ ವರ್ಷ ಹೇಗಿರಬೇಕು ಎಂದು ಯೋಜಿಸಿ ಜೀವಿಸಲು ಅನುಕೂಲವಾದೀತೆಂಬುದು ನನ್ನ ಭಾವನೆ.
ವೃತ್ತಿ: ಕಳೆದ ವರ್ಷ ನನ್ನ ಶಾಲೆಯ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ಉಣಬಡಿಸುವ ಕಾರ್ಯದ ಜೊತೆಯಲ್ಲಿ ಅವರಲ್ಲಿರುವ ಇತರೆ ಕೌಶಲಗಳನ್ನು ಮತ್ತು ಪ್ರತಿಭೆಯನ್ನು ಹೊರತರುವ ಕಾಯಕವನ್ನು ಮಾಡಿರುವುದು ಆತ್ಮ ತೃಪ್ತಿ ನೀಡಿದೆ.
ಪುಸ್ತಕ ಓದು ಬರಹ: ಕಳೆದ ಐದಾರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಹದಿನೈದು ಪುಸ್ತಕ ಮಾತ್ರ ಓದಿರುವೆ.ಪುಸ್ತಕ ಪ್ರಕಟಣೆಯನ್ನು ಗಮನಿಸುವುದಾದರೆ ಈ ಬಾರಿ ನನ್ನ ಮೂರು ಪುಸ್ತಕಗಳು ಲೋಕಾರ್ಪಣೆಯಾದವು."ಸಿಹಿಜೀವಿ ಕಂಡ ಅಂಡಮಾನ್ " ಪ್ರವಾಸ ಕಥನವನ್ನು ಕಾರ್ಕಳದ ಪುಸ್ತಕ ಮನೆ ಪ್ರಕಟಿಸಿ ಅಮೋಘವಾಗಿ ಬಿಡುಗಡೆ ಕಾರ್ಯಕ್ರಮ ಮಾಡಿ ನನ್ನ ಸನ್ಮಾನಿಸಿದ್ದು ಮರೆಯಲಾಗದ ಘಟನೆ.ಮತ್ತೊಂದು ಪುಸ್ತಕ " "ಮಕ್ಕಳಿಗಾಗಿ ಮಹಾತ್ಮರ ಮಾತುಗಳು " ಪುಸ್ತಕವನ್ನು ನುಡಿತೋರಣ ಬಂಧುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು ಸಂತಸ ನೀಡಿತು. ಮತ್ತೊಂದು ಪುಸ್ತಕ "ಐತಿಹಾಸಿಕ ತಾಣಗಳು" ಪ್ರಿಂಟ್ ಆಗಿ ಮನೆ ಸೇರಿದೆ. ಈ ವರ್ಷ ಹೆಚ್ಚು ಪುಸ್ತಕಗಳನ್ನು ಓದಲು ಹಾಗೂ ಇನ್ನೂ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಂಕಲ್ಪ ಮಾಡಿರುವೆ.
ಸಮಾಜದೊಂದಿಗೆ ನಾನು: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸನಾತನ ವಾಣಿಯನ್ನು ಬಲವಾಗಿ ನಂಬಿರುವ ನಾನು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯ ಮಾಡಲು ಆರಂಭಿಸಿರುವೆ.ಕೊಡುವುದರಲ್ಲಿ ಇರುವ ಸುಖ ನೆಮ್ಮದಿ ಅನುಭವಿಸಲಾರಂಬಿಸಿರುವೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದು ಎಂಬ ಮಾತಿನಂತೆ ನಾನು ಕೊಟ್ಟ ಬಗ್ಗೆ ವಿವರ ನೀಡದಿರಲು ತೀರ್ಮಾನ ಮಾಡಿರುವೆ.ಈ ವರ್ಷವೂ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವೆ.
ಪುರಸ್ಕಾರ: ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನನ್ನ ಶಿಕ್ಷಣ ಮತ್ತು ಸಾಹಿತ್ಯದ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದ್ದು ನನ್ನ ಜೀವನದ ಮತ್ತೊಂದು ಅವಿಸ್ಮರಣೀಯ ದಿನ.
ಪತ್ರಿಕೆಯಲ್ಲಿ ಬರಹ : ಹವ್ಯಾಸವಾಗಿ ಆರಂಭವಾದ ನನ್ನ ಬರಹ ಇಂದು ಪತ್ರಿಕೆಗಳಲ್ಲಿ ಅಂಕಣ ಬರಹವಾಗಿ ಪ್ರಕಟವಾಗುತ್ತಿರುವುದಯ ಖುಷಿಯ ವಿಷಯ. ಗೌರವ ಸಂಭಾವನೆ ನೀಡಿ ನನ್ನ ಬರಹಗಳನ್ನು ಪ್ರಕಟಿಸುವ ಎಲ್ಲಾ ಪತ್ರಿಕೆಗಳಿಗೆ ನಾನು ನಮನ ಸಲ್ಲುಸಲೇಬೇಕು.ಈ ವರ್ಷವೂ ಪತ್ರಿಕೆಯಲ್ಲಿ ಬರೆಯುವ ಕಾಯಕ ಮುಂದುವೆರೆಸುವೆ.
ಗಾಯನ: ಹವ್ಯಾಸ ಕ್ಕೆ ಹಾಡುವ ನಾನು ನಮ್ಮ ಶಾಲೆಯಲ್ಲಿ ನಮ್ಮ ಮಕ್ಕಳ ಮುಂದೆ ಹಾಡಿ ಖುಷಿ ಪಡುತ್ತಿದ್ದೆ.ಈಗ ಕೆಲ ಸಮಾರಂಭಗಳಲ್ಲಿ ಹಾಡಿದಾಗ ಕೇಳುಗರು ಮೆಚ್ಚುಗೆಯಿಂದ ತಟ್ಟುವ ಚಪ್ಪಾಳೆ ಇನ್ನೂ ಹಾಡಲು ಪ್ರೇರಣೆ ನೀಡಿವೆ.
ನಾಟಕ: ಹವ್ಯಾಸಿ ನಾಟಕ ಕಲಾವಿದನಾಗಿ ಕಳೆಸ ವರ್ಷ ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ಸಮಯದಲ್ಲಿ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದೊಂದಿಗೆ ಗೌತಮ ಬುದ್ಧ ನಾಟಕದಲ್ಲಿ ಅಭಿನಯಿಸಿದ್ದು ಖುಷಿ ನೀಡಿತು.ಉಡುಪಿಯಲ್ಲಿ ನಡೆಸ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಿಸಿದ ನಮ್ಮ ತಂಡ ಅತ್ಯುತ್ತಮ ಶಿಸ್ತಿನ ತಂಡ ಎಂಬ ಬಹುಮಾನ ಪಡೆದದ್ದು ಮತ್ತೊಂದು ಸಾರ್ಥಕ ಕ್ಷಣ.ಈ ಬಾರಿಯೂ ಅಭಿನಯ ಮುಂದುವರೆಯಲಿದೆ.
ಪ್ತವಾಸ: ಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ಹತ್ತು ದಿನದ ಪ್ರವಾಸ ಮಾಡಿದ ನಾನು ಈ ವರ್ಷ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೂ ಸರ್ಕಾರದ ಗಣತಿ ಕಾರ್ಯಕ್ಲೆ ನಿಯೋಜನೆ ಗೊಂಡು ಕರ್ತವ್ಯ ಮಾಡಿದ ಪರಿಣಾಮವಾಗಿ ಪ್ರವಾಸ ಹೋಗಲಾಗಲಿಲ್ಲ.ಆದರೆ ಈ ಸಮಯದಲ್ಲಿ ವಿವಿಧ ಸಮಾಜೋ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಭೇಟಿಯು ವಿಶೇಷವಾದ ಅನುಭವಗಳನ್ನು ನೀಡಿತು.ಈ ಬಾರಿ ವಿಶೇಷವಾದ ಪ್ರವಾಸ ಮಾಡಲು ಯೋಜಿಸಿರುವೆ.
ಯೂಟ್ಯೂಬರ್: ಪ್ರತಿ ವರ್ಷ ಏನಾದರೂ ಹೊಸ ಕೌಶಲಗಳನ್ನು ಕಲಿಯಲು ಹಾತೊರೆಯುವ ನಾನು ಕಳೆದ ಏಪ್ರಿಲ್ ನಲ್ಲಿ ಸಿಹಿಜೀವಿಯ ಪಯಣ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದೆ ಕೇವಲ ಎಂಟು ತಿಂಗಳಲ್ಲಿ950 ಸಬ್ ಸ್ಕ್ರೈಬರ್ ಗಳು ನನ್ನ ಚಾನೆಲ್ ನ ಚಂದಾದಾರರಾಗಿರುವರು ಎಂದು ಹೆಮ್ಮೆಯಿಂದ ಹೇಳುವೆ.ನಾನು ಪ್ರವಾಸ ಮಾಡಿದ ಸ್ಥಳಗಳನ್ನು ತೋರಿಸುವ ಪ್ರಯತ್ನ ಮುಂದುವರೆದಿದೆ.ಇದುವರೆಗೆ250 ಕ್ಕೂ ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿರುವೆ. ಕಡಿಮೆ 4 ಲಕ್ಷ ವೀಕ್ಷಣೆ ಕಂಡಿರುವುದು ಸಂತಸ ನೀಡಿದೆ.ಈ ವರ್ಷವೂ ಸಿಹಿಜೀವಿಯ ಪಯಣ ಮುಂದುವರೆಯಲಿದೆ.
ತುಸು ಬೇಸರದ ಸಂಗತಿಗಳು: ಅಮ್ಮನ ಅನಾರೋಗ್ಯ, ಆತ್ಮೀಯರ ಅಕಾಲಿಕ ನಿರ್ಗಮನ, ಸಮಾಜದಲ್ಲಿರುವ ಕೆಲ ಸ್ವಾರ್ಥಿಗಳ ನಡೆಗಳು,ಕಾಲೆಳೆಯುವ ನೀಚ ಮನಗಳನ್ನು ಕಂಡಾಗ ಬೇಸರವಾಗುತ್ತದೆ.
ಏಳು ಬೀಳು ,ನೋವು ನಲಿವು ಜೀವನದ ಅವಿಭಾಜ್ಯ ಅಂಗ ಈ ಬಾರಿ ಅವುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗೋಣ.ಮತ್ತೊಮ್ಮೆ ನಿಮಗೆ ಹೊಸ ಕ್ಯಾಲೆಂಡರ್ ನ ವರ್ಷದ ಶುಭಾಶಯಗಳು🌷
ನಿಮ್ಮ
ಸಿಹಿಜೀವಿ ವೆಂಕಟೇಶ್ವರ..




























