04 ಮೇ 2026

ಬಹುಮುಖ ಪ್ರತಿಭೆಯ ಕಲಾವಿದ‌ ಬಿ‌ ಎಸ್ ದೇಸಾಯಿ

 


ಬಹುಮುಖ ಪ್ರತಿಭೆಯ ಕಲಾವಿದ‌ ಬಿ‌ ಎಸ್ ದೇಸಾಯಿ




ನಮ್ಮ ನಾಡಿನ ಹಿರಿಯ ಕಲಾವಿದರು ಹಾಗೂ ಛಾಯಾಚಿತ್ರಗಾರರು ಆದ   ಬಿ ಎಸ್ ದೇಸಾಯಿ ರವರಿಗೆ   ಇತ್ತೀಚಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರ ಹುಡುಕಿಕೊಂಡು ಬಂದಿದೆ.
ಸರಳ ಸಜ್ಜನ ಮೃದು ಭಾಷಿ  ಬಿ.ಎಸ್. ದೇಸಾಯಿಯವರು ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಸಮಕಾಲೀನ ದೃಶ್ಯ ಕಲಾವಿದ. ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ಇವರು  ಚಿತ್ರಕಲೆಯ ಮೂಲಕ ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡಿದ್ದಾರೆ.  ಇವರ ಕಲಾ ಪಯಣವು ಪ್ರಕೃತಿಯ ಸೂಕ್ಷ್ಮ ಸಂವೇದನೆಗಳನ್ನು ವೈಯಕ್ತಿಕ ಹಾಗೂ ಸಾರ್ವತ್ರಿಕ ಭಾಷೆಯಾಗಿ ಬಣ್ಣಗಳು ಮತ್ತು ರೂಪಗಳ ಮೂಲಕ ಭಾಷಾಂತರಿಸುವ ದಾಖಲಾಗಿದೆ.

ಇವರ  ಚಿತ್ರಕಲೆಗೆ ಪ್ರಕೃತಿಯೇ (Nature) ಮೂಲ ಸ್ಫೂರ್ತಿ ಮತ್ತು ಕ್ಯಾನ್ವಾಸ್  ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿದೆ.  ಹೆಚ್ಚಾಗಿ ಜಲವರ್ಣ (Watercolors) ಮತ್ತು ಪಾರದರ್ಶಕ ಮಾಧ್ಯಮವನ್ನು (Transparent media) ಬಳಸಿ ಚಿತ್ರಗಳನ್ನು ರಚಿಸಲು ಇಷ್ಟಪಡುವ ದೇಸಾಯಿಯವರು ಕೇವಲ ಪ್ರಕೃತಿಯನ್ನು ಯಥಾವತ್ತಾಗಿ ನಕಲು ಮಾಡುವುದಕ್ಕಿಂತ ಅದರ ಆತ್ಮವನ್ನು, ಶಾಂತಿಯನ್ನು  ಚಿತ್ರಗಳಲ್ಲಿ ತರಲು  ಸದಾ ಪ್ರಯತ್ನಿಸುತ್ತಾರೆ. ಇವರ  ವರ್ಣಚಿತ್ರಗಳು ಅಮೂರ್ತ (abstract) ರೂಪಗಳನ್ನು ಹೊಂದಿದ್ದು ಪ್ರಕೃತಿಯಲ್ಲಿನ ಬೆಳಕು, ದೂರದ ದೃಶ್ಯಗಳು, ಮರಗಳು ಮತ್ತು ನೈಸರ್ಗಿಕ ಸೌಂದರ್ಯದ ಆಳವಾದ ಭಾವನೆಗಳನ್ನು ಸೆರೆಹಿಡಿಯುತ್ತವೆ.
ಇವರ ಕಲಾ ಜೀವನದಲ್ಲಿ  ಅಪಾರ ಮೆಚ್ಚುಗೆ ತಂದುಕೊಟ್ಟ ಸರಣಿಯೆಂದರೆ 'ಯೋಗದರ್ಶನ' (Yogadarshana). ಇದು ಸಾಂಪ್ರದಾಯಿಕ ಭಾರತೀಯ ತತ್ವಶಾಸ್ತ್ರ ಮತ್ತು ಆಧುನಿಕ ದೃಶ್ಯ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಯೋಗ, ಧ್ಯಾನ ಮತ್ತು ಪ್ರಕೃತಿಯೊಡನೆ ಒಂದಾಗುವ ಪ್ರಕ್ರಿಯೆ  ಕಲೆಯ ಅವಿಭಾಜ್ಯ ಅಂಗ. ಉದಾಹರಣೆಗೆ, ನೀರಿನ ಮೇಲೆ ಪದ್ಮಾಸನ ಹಾಕಿ ಧ್ಯಾನಿಸುವ ಮತ್ತು ಪ್ರಕೃತಿಯೊಂದಿಗೆ ತೇಲುವಂತಹ ಅನುಭವಗಳನ್ನು  ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ.







ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಸುಮಾರು 650 ಕ್ಕೂ ಹೆಚ್ಚು ಕಲಾಕೃತಿಗಳು ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿ ನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಸ್ವಿಜ್ಜರ್‍ಲ್ಯಾಂಡ್,  ಆಸ್ಟ್ರೀಯಾ  ಮುಂತಾದ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ.
ಕೆಲವು ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಗಾರದಲ್ಲಿ ಭಾಗವಹಿಸಿ ಪಡೆದ ಅನುಭವದೊಂದಿಗೆ  ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್, ಪಾಂಡಿಚೆರಿ, ಮುಂಬೈ,ವಾರಣಾಸಿ  ಹಾಗೂ ದೆಹಲಿ  ಮುಂತಾದ ಕಡೆಗಳಲ್ಲಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದ್ದಾರೆ.
ಇವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇದರ  ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅವಧಿಯಲ್ಲಿ ಹಾಸನದಲ್ಲಿ ಅಕಾಡೆಮಿಯ ಹಲವು ಕಾರ್ಯಕ್ರಮ ಸಂಘಟಿಸಿ ನಗರದಲ್ಲಿ ಕಲಾ ಚಟುವಟಿಕೆಯಿಂದ ಕಲಾವಿದರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗಿದ್ದಾರೆ. ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ನಗರದಲ್ಲಿ ಅನೇಕ ಹಿರಿಯ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಹಲವಾರು ಚಿತ್ರಕಲಾ ಚಟುವಟಿಕೆ ಪ್ರದರ್ಶನ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಹೊರ ರಾಜ್ಯ ಅಷ್ಟೇ ಅಲ್ಲ ಹೊರದೇಶಗಳಲ್ಲೂ ತಮ್ಮ ಕಲಾಕೃತಿಗಳೊಂದಿಗೆ ಪ್ರದರ್ಶನ ಮತ್ತು ಶಿಬಿರಗಳಲ್ಲಿ ಭಾಗವಹಿಸಿದ ಅನುಭವಿ. ಜಹಾಂಗೀರ್ ಆರ್ಟ್ ಗ್ಯಾಲರಿ ಮುಂಬಯಿ, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್‍ನ ಚಿತ್ರಸಂತೆ, ಅಲಂಕೃತ್ ಆರ್ಟ್ ಗ್ಯಾಲರಿ, ಹೈದ್ರಾಬಾದ್, ಅಲಿಯಾನ್ಸ್ ಫ್ರಾನ್ಸಿಸ್, ನವದೆಹಲಿ, ಆರೋಧನ ಗ್ಯಾಲರಿ, ಪಾಂಡಿಚೇರಿ, ದರ್ಬಾರ್ ಹಾಲ್ ಎರ್ನಾಕುಲಂ ಕೇರಳ, ಕ್ಯಾಮಲಿನ್ ಚಿತ್ರಕಲಾ ಪ್ರದರ್ಶನ, ಚಿನೈ, ರಾಷ್ಟ್ರೀಯ ಚಿತ್ರಕಲಾ ಶಿಬಿರ, ಮೌಂಟ್ ಅಬು, ರಾಜಸ್ಥಾನ, ವರ್ಣಯಾಗ ಗ್ಯಾಲರಿ ಮಸ್ಕತ್ ಹೀಗೆ ಇವರ ಭಾಗವಹಿಸುವಿಕೆಯ ಪಟ್ಟಿಯೇ ಸಾಕಷ್ಟು ಉದ್ದವಿದೆ. ಇವರ  ಮನೆ ಸಮೀಪವಿರುವ ಹುಣಸಿನಕೆರೆ ಪರಿಸರದಲ್ಲಿ 20 ಅಡಿ ಉದ್ದನೆಯ ಲ್ಯಾಂಡ್‍ಸ್ಕೇಪ್ ಚಿತ್ರ ರಚನೆ ಇಂಡಿಯಾ ಬುಕ್ ಆಪ್ ರೆಕಾರ್ಡ್‍ನಲ್ಲಿ ದಾಖಲಾಗಿದೆ. ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು   ಅತಿ ವೇಗದ ಅತಿದೊಡ್ಡ ವಿಶ್ವ ದಾಖಲೆಯ ವರ್ಣಚಿತ್ರವನ್ನು ಬರೆಸುವ ಮೂಲಕ ಕಲೆಯ ಮೂಲಕ ಪರಿಸರ ಜಾಗೃತಿ ಮೂಡಿಸುವ ದೇಸಾಯಿಯವರ ಕಾಯಕ ಜನಮೆಚ್ಚುಗೆ ಗಳಿಸಿತು.


ಇವರ ಕಲಾಕೃತಿಗಳು ಓಮೆನ್, ಕೆನಡಾ, ಅಮೇರಿಕಾ, ಸಿಂಗಪೂರ್, ಮಸ್ಕತ್, ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಡ್ಜರ್‍ಲ್ಯಾಂಡ್, ಜರ್ಮನಿ, ಆಸ್ಟ್ರೀಯಾ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬು ರಾಜಸ್ಥಾನ, ಬೆನಾನ್‍ಸ್ಮಿತ್ ಆರ್ಟ್ ಸೊಸೈಟಿ, ಬೆಳಗಾಂ ಸೇರಿದಂತೆ ಇನ್ನೂ ಹಲವಾರು ಖಾಸಗಿಯವರ ಸಂಗ್ರಹದಲ್ಲಿವೆ.
ನನ್ನ ಕಲೆಯ ಕುರಿತು ಕಲಾ ವಿಮರ್ಶಕರು ಆಡಿರುವ ಮಾತುಗಳು ನನ್ನೆಲ್ಲಾ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಭಾವಿಸುವ ದೇಸಾಯಿಯವರು. ನವದೆಹಲಿಯ ಕಲಾ ವಿಮರ್ಶಕರಾದ ಪದ್ಮಶ್ರೀ ಕೇಶವ್ ಮಲಿಕ್ ಅವರು ದೇಸಾಯಿಯವರ ಕೃತಿಗಳನ್ನು "ಅವನ ಆತ್ಮದ ಭೂದೃಶ್ಯ" (landscape of his soul) ಎಂದು ಬಣ್ಣಿಸಿರುವುದನ್ನು ಮೆಲುಕು ಹಾಕುತ್ತಾರೆ. ಹಾಗೆಯೇ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿ.ಎಸ್. ಕೃಷ್ಣಶೆಟ್ಟಿ ಅವರು, "ದೇಸಾಯಿಯವರ ವರ್ಣಚಿತ್ರಗಳು ಕೇವಲ ದೃಶ್ಯ ಅನುಭವಗಳಲ್ಲ; ಅವು ಭಾವನಾತ್ಮಕ ಪ್ರಯಾಣಗಳು ಮತ್ತು ಅಮೂರ್ತ ರೂಪಗಳ ಮೂಲಕ ಆಳವಾದ ಭಾವನೆಗಳನ್ನು ಹುಟ್ಟುಹಾಕುವ ಅವರ ಸಾಮರ್ಥ್ಯ ಗಮನಾರ್ಹವಾದುದು" ಎಂದು ವಿಮರ್ಶಿಸಿದ್ದಾರೆ.
ಇವರ   ಈ ಸುದೀರ್ಘ ಕಲಾ ಪಯಣಕ್ಕೆ ಹಲವಾರು ಮನ್ನಣೆಗಳು ಸಿಕ್ಕಿವೆ; ೧೯೮೯ ರಲ್ಲಿ ಮೈಸೂರು ದಸರಾ ಕಲಾ ಪ್ರದರ್ಶನ ಪ್ರಶಸ್ತಿ, ೧೯೯೪ ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ೨೦೦೮ ರಲ್ಲಿ ಹಾಸನ   ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿ   ಇವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ, ಹಾಸನದಲ್ಲಿ ಓರ್ವ ಕಲಾ ಶಿಕ್ಷಕನಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಬಗ್ಗೆ ಒಲವು ಮೂಡಿಸುವ ಕೆಲಸವನ್ನೂ  ತೃಪ್ತಿಯಿಂದ ಮಾಡಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ.
ಇವರ ಪಾಲಿಗೆ ಕಲೆ ಎಂಬುದು ಕೇವಲ ಬಣ್ಣಗಳ ಆಟವಲ್ಲ; ಅದು ಆತ್ಮ, ಪ್ರಕೃತಿ ಮತ್ತು ಧ್ಯಾನದ ನಡುವಿನ ಒಂದು ಸುಂದರ ಸಂವಾದ. ಈ ಪಯಣದಲ್ಲಿ ಸದಾ ಹೊಸತನ್ನು ಹುಡುಕುವ  ಕಲಾ ಸೇವೆ ನಿರಂತರವಾಗಿ ಸಾಗಲಿ ಎಂದು ನಾವು ಹಾರೈಸೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

28 ಏಪ್ರಿಲ್ 2026

ಮಾಪ್ಲಾಂಗ್ ದೇವರ ಕಾಡು.


 


ಮಾಪ್ಲಾಂಗ್ ದೇವರ ಕಾಡು.


ನಮ್ಮ ಕರ್ನಾಟಕದ ‌ಕೊಡುಗು ಮುಂತಾದ ಕಡೆಗಳಲ್ಲಿ ದೇವರ ಕಾಡು ಪರಿಕಲ್ಪನೆ ಇದೆ. ಇತ್ತೀಚಿನ ದಿನಗಳಲ್ಲಿ ‌ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಂಡ ಕಾಂತಾರ ಸರಣಿಯ ಚಿತ್ರಗಳಲ್ಲಿ ಕೂಡಾ ದೈವದ ಹೆಸರಿನಲ್ಲಿ ಕಾಡಿನ ಸಂರಕ್ಷಣಾ ಸಂದೇಶಗಳನ್ನು ಕಾಣಬಹುದು. ಇಂತದೇ ಸಂದೇಶ ಸಾರುವ ದೇವರ ಕಾಡು ಮೇಘಾಲಯದಲ್ಲಿ ಇದೆ.  ಅದೇ ದೇವರ ಕಾಡು ಅಥವಾ ಮಾಪ್ಲಾಂಗ್ ಕಾಡು.

ಈಶಾನ್ಯ ಭಾರತದ ಪ್ರವಾಸ ಸಮಯದಲ್ಲಿ ‌ಮೇಘಾಲಯದ ಶಿಲ್ಲಾಂಗ್ ನಿಂದ ಹೊರಟು ಎಲಿಫೆಂಟ್ ಜಲಪಾತದ ಸೌಂದರ್ಯವನ್ನು ಸವಿದು ನಾವು ತಲುಪಿದ ತಾಣವೇ ಈ ದೇವರ ಕಾಡು.
ನಾವು ದೇವರ ಕಾಡು ತಲಪಿದಾಗ ಸೂರ್ಯ ದೇವ ನಿಧಾನವಾಗಿ ಬಾನದಾರಿಯಲ್ಲಿ ಜಾರಿದ್ದ.ಆದರೂ ದೇವರ ಕಾಡೊಳಗೆ ಹೆಜ್ಜೆ ಹಾಕುತ್ತಾ ಗೈಡ್ ಸಹಾಯದಿಂದ ಕಾಡನ್ನು ಅಲ್ಲಿನ ಸಂಪ್ರದಾಯ ಆಚರಣೆಗಳ ಬಗ್ಗೆ ಮಾಹಿತಿಯನ್ನು ಪಡೆದೆವು.

  ಶಿಲ್ಲಾಂಗ್‌ನಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್‌ಗಳ ದೂರದಲ್ಲಿರುವ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಮಡಿಲಿನಲ್ಲಿರುವ  ಈ ಕಾಡಿನ ಪ್ರಕೃತಿಯ ಮೌನವು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಈ ನಾಡಿನ ಪ್ರತಿ ಕಲ್ಲಿಗೂ ಒಂದು ಕಥೆಯಿದೆ. ಸ್ಥಳೀಯ ಖಾಸಿ ಭಾಷೆಯಲ್ಲಿ 'ಮಾ'  ಎಂದರೆ ಕಲ್ಲು 'ಮಾಫ್ಲಾಂಗ್' ಎಂದರೆ 'ಹುಲ್ಲಿನ ಕಲ್ಲು' ಎಂದರ್ಥ. ಈ ಹಸಿರು ಹಾಸಿನ ಮೇಲೆ ತಲೆ ಎತ್ತಿ ನಿಂತಿರುವ ಏಕಶಿಲೆಗಳೇ  ಈ ಗ್ರಾಮಕ್ಕೆ ಆ ಹೆಸರನ್ನು ತಂದಿವೆ.
ಪ್ರವಾಸಿಗರು ಈ ತಾಣವನ್ನು ಪವಿತ್ರ ವನ ಅಥವಾ 'ಸೇಕ್ರೆಡ್ ಗ್ರೋವ್' ಎಂದು ಕರೆದರೆ  ಅಲ್ಲಿನ ಜನರು ಇದನ್ನು 'ಲಾ ಲಿಂಗ್ಡೋ'  ಎಂದು ಕರೆಯುತ್ತಾರೆ. ನೂರಾರು ವರ್ಷಗಳಿಂದ ಅಸ್ಪೃಶ್ಯವಾಗಿ ಉಳಿದಿರುವ ಈ ಕಾಡು ಕೇವಲ ಮರಗಿಡಗಳ ಗುಂಪಲ್ಲ, ಬದಲಿಗೆ ಖಾಸಿ ಜನರ ನಂಬಿಕೆಯ ಸಂಕೇತ. ಜೈಂತಿಯಾ ಮೂಲದ 'ಇಯಾಂಗ್‌ಬ್ಲಾ' ಎಂಬ ಪಂಗಡವು ಈ ವನವನ್ನು 'ಯು ಬಾಸಾ'  ಅಥವಾ 'ಯು ರಂಗ್‌ಕ್ಯೂ'   ಎಂಬ ರಕ್ಷಕ ಆತ್ಮದ ವಾಸಸ್ಥಾನವಾಗಿ ಪ್ರತಿಷ್ಠಾಪಿಸಿದೆ ಎಂದು ಇಲ್ಲಿನ ಜನಪದ ಕಥೆಗಳು ಹೇಳುತ್ತವೆ. ಈ ಪವಿತ್ರ ಕಾಡಿನಿಂದ ಒಂದು ಎಲೆಯನ್ನು ಅಥವಾ ರೆಂಬೆಯನ್ನು ಕಿತ್ತರೂ ಇಲ್ಲಿನ ಕಾವಲು ದೇವತೆಯು ಕೋಪಗೊಳ್ಳುತ್ತಾನೆ ಮತ್ತು ಶಿಕ್ಷಿಸುತ್ತಾನೆ ಎಂಬ ಗಾಢವಾದ ನಂಬಿಕೆ ಇಂದಿಗೂ ಜೀವಂತವಾಗಿದೆ.
ಈ ಹಸಿರು ಕಾನನದ ಪಕ್ಕದಲ್ಲೇ 'ಖಾಸಿ ಹೆರಿಟೇಜ್ ವಿಲೇಜ್' (Khasi heritage village) ಇದೆ. ಇದು ಖಾಸಿ ಸಂಸ್ಕೃತಿಯ ಕೇಂದ್ರಬಿಂದು ಎಂದು ಹೆಸರುವಾಸಿಯಾಗಿದೆ. ಆದರೆ ಸಮಯದ ಅಭಾವದಿಂದ ‌ನಾವು ಹಳ್ಳಿಗೆ ಹೋಗಲಾಗಲಿಲ್ಲ.






ಮಾಫ್ಲಾಂಗ್ ಇತಿಹಾಸದ ಪುಟಗಳಲ್ಲೂ ತನ್ನ ಗುರುತು ಮೂಡಿಸಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ  ಇದು ವೇಲ್ಸ್‌ನ ಪ್ರೆಸ್‌ಬಿಟೇರಿಯನ್ ಚರ್ಚ್‌ನ ಮಿಷನರಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. 1878ರಲ್ಲಿ ಡಾ. ಗ್ರಿಫಿತ್ ಗ್ರಿಫಿತ್ಸ್ ಎಂಬುವವರು ಇಲ್ಲಿ ಚಿಕಿತ್ಸಾಲಯವನ್ನು ಸ್ಥಾಪಿಸಿ ಸ್ಥಳೀಯರಿಗೆ ಸೇವೆ ಸಲ್ಲಿಸಿದ್ದರು. ಅವರೂ ಸೇರಿದಂತೆ ಅನೇಕ ಮಿಷನರಿಗಳು ಇದೇ ಮಣ್ಣಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದು ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.

ಈ   ಮಾಫ್ಲಾಂಗ್‌ನ ಪವಿತ್ರ ಕಾಡಿನಿಂದ ಸ್ಥಳೀಯರು ಹಾಗೂ ಪ್ರವಾಸಿಗರು  ಏನನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಒಂದು ಬೆಣಚುಕಲ್ಲು ಅಥವಾ ಒಣಗಿದ ಮರದ ರೆಂಬೆ,ಹಣ್ಣು ಎಲೆಗಳು ಹೀಗೆ ಯಾವುದೇ ವಸ್ತುಗಳನ್ನು ಕಾಡಿನಿಂದ ಹೊರಗೆ ತರುವುದಿಲ್ಲ.
ಪ್ರವಾಸಿಗರಿಗೆ ಇಲ್ಲಿ ಫುಲ್ ಟ್ರಕ್ ಮಾಡಲು ಅವಕಾಶ ನೀಡಲಾಗುತ್ತದೆ. ಅದು ಇಡೀ ಕಾಡಿನಲ್ಲಿ ಗೈಡ್ ಸಹಾಯದಿಂದ ವಾಕ್ ಮಾಡುವ ಅನುಭವ.ಸಂಜೆಯಾಗಿ ಕ್ರಮೇಣ ಕತ್ತಲಾವರಿಸಿದ್ದರಿಂದ
ನಾವು ಹಾಫ್  ಟ್ರಕ್ ಮಾಡಿ ಕಾಡಿನಲ್ಲಿ ಒಂದು ಸುತ್ತ ಹಾಕಿದಾಗ ಆ ಕಾಡು ಮಾನವನ  ನಿರ್ನಾಮ ಚಟುವಟಿಕೆಗಳಿಂದ ದೂರವಿರುವುದು ಕಂಡುಬಂದಿತು.

ನಮ್ಮ ಗೈಡ್ ಕೆರಿ  ಹಳೆಯ ಕಾಲದ ಖಾಸಿ ಜನಾಂಗದ ಮುಖಸ್ಥನ    ಪಟ್ಟಾಭಿಷೇಕ ಮತ್ತು ತ್ಯಾಗದ ಸ್ಥಳಗಳ ತೋರಿಸಿ ಮಾಹಿತಿ ನೀಡಿದರು.ಇಲ್ಲಿ ಖಾಸಿ ರಾಜರು  ನಾಯಕರು  ಅವರ ಸಭೆಗಳನ್ನು ಮಾಡುತ್ತಿದ್ದರು ಎಂಬ ಮಾಹಿತಿ ತಿಳಿಸಿದರು. ನಾವು ಆ ಕಾಡಿಗೆ ತರಳಿದಾಗ ಸಂಜೆ ಯಾಗಿದ್ದರಿಂದ ಬೇಗನೆ ಹಿಂತಿರುಗಬೇಕಾಯಿತು.ಮುಂದೆ ಸಮಯ ಸಿಕ್ಕರೆ ಆ ಕಾಡಿನಲ್ಲಿ ಪೂರ್ಣ ಟ್ರೆಕ್ಕಿಂಗ್ ಮಾಡುವಾಸೆಯುಂಟಾಯಿತು.ನಮ್ಮ ‌ಗೈಡ್  ಅಲ್ಲಲ್ಲಿ‌ ಇರುವ ರುದ್ರಾಕ್ಷಿ ಮರಗಳನ್ನು ತೋರಿಸಿ ಕೆಳಗೆ ಬಿದ್ದ ರುದ್ರಾಕ್ಷಿ ಗಳನ್ನು ಯಾರೂ ಮುಟ್ಟದಂತೆ  ನಮಗೆ ತಾಕೀತು ಮಾಡಿದ.


ಪವಿತ್ರ ವನದ ಕಗ್ಗತ್ತಲ ದಾರಿಯಲ್ಲಿ ನಡೆಯುವಾಗ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧದ ಅರಿವಾಗುತ್ತದೆ. ಮಾಫ್ಲಾಂಗ್ ಕೇವಲ ಪ್ರವಾಸಿ ತಾಣವಲ್ಲ, ಅದು ಆಧುನಿಕತೆಯ  ಸುಳಿಗೆ ಸಿಲುಕದ ಸಂಪ್ರದಾಯಗಳ ಜೀವಂತ ಪಾಠಶಾಲೆ. ಇಂತಹ  ಸಂಪ್ರದಾಯಗಳಿಂದಲಾದರೂ ನಮ್ಮ ಪ್ರಕೃತಿಯಲ್ಲಿ ಸಮತೋಲನ ‌ಉಂಟಾದರೆ. ಬಹಳಷ್ಟು ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಿ.ನಮ್ಮ ಧರಣಿ ಸ್ವರ್ಗವಾಗುವುದರಲ್ಲಿ ಸಂದೇಹವಿಲ್ಲ.


ಇದೇ ಭಾವನೆಗಳನ್ನು ಹೊತ್ತು ಪವಿತ್ರ ಕಾಡಿನಿಂದ‌ ಹೊರಬಂದು ನಮ್ಮ ಬಸ್ ಹೊಕ್ಕು ಕುಳಿತೆವು.ಅರ್ಧ ಗಂಟೆಯ ದಾರಿ ಕ್ರಮಿಸಿ ಶಿಲಾಂಗ್ ತಲುಪಿದೆವು. ಶಿಲಾಂಗ್ ನಗರದ ಟ್ರಾಫಿಕ್ ಬೆಂಗಳೂರಿಗಿಂತ ಹೆಚ್ಚಾಗಿತ್ತು. ಶಿಲಾಂಗ್ ನಗರದಲ್ಲಿನ ಐದು ಕಿಲೋಮೀಟರ್ ದೂರದಲ್ಲಿನ ನಮ್ಮ ಲಾಡ್ಜ್ ತಲುಪಲು ಬರೋಬ್ಬರಿ ಒಂದು ಗಂಟೆಯಾಯಿತು ಎಂದರೆ ನೀವು ನಂಬಲ್ಲ. ಆಗ  ಮಾಪ್ಲಾಂಗ್ ಪವಿತ್ರ ಕಾಡು ಮತ್ತೆ ನೆನಪಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು





24 ಏಪ್ರಿಲ್ 2026

ಮೂವತ್ತನೇ ಹೆರಿಗೆಯ ಕಡೆ ಚಿತ್ತ!.


 ಮೂವತ್ತನೇ ಹೆರಿಗೆಯ ಕಡೆ ಚಿತ್ತ ..



ಮೂರು ವರ್ಷಗಳ ಹಿಂದೆ ಕೀರ್ತಿಶೇಷ    ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ರವರ ಮನೆಯಲ್ಲಿ ನನ್ನ ಅನುಭವ ಕಥನ "ಯಂಗ್ಟಿ" ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ನಮ್ಮ  ನಾಡಿನ  ಹಿರಿಯ ಲೇಖಕರಾದ ಜಿ ಕೆ ಕುಲಕರ್ಣಿರವರು  ಕವಿ ಅಥವಾ ಲೇಖಕರಿಗೆ ಪುಸ್ತಕ ಪ್ರಕಟಣೆ ಎಂಬುದು ಒಂದು ಹೆರಿಗೆ ಇದ್ದಂತೆ ನಾನು ನಾಲ್ಕು ಹೆರಿಗೆಗೆ ಸುಸ್ತಾಗಿರುವೆ ಸಿಹಿಜೀವಿಯವರು ಹನ್ನೆರಡು ಹೆರಿಗೆ ಸಂಭ್ರಮ ಪ್ರಶಂಸನಾರ್ಹ ಎಂದಿದ್ದರು. ಇತ್ತೀಚಿನ ವಿಶ್ವ ಪುಸ್ತಕ ದಿನದಂದು ಅದು ನೆನೆಪಾಯಿತು.
ನನ್ನ ಇದುವರೆಗೆ ಪ್ರಕಟವಾದ ಕೆಲ ಪುಸ್ತಕಗಳ ಬಗ್ಗೆ ನೆನಪಾಯಿತು.
  ನನ್ನ  ಸಾಹಿತ್ಯದ ಬಹುಪಾಲು ಮಕ್ಕಳು ಮತ್ತು ಶಿಕ್ಷಣದ ಸುತ್ತ ಸುಳಿಯುತ್ತದೆ.  ‘ಬಾರೋ ಬಾರೋ ಗುಬ್ಬಚ್ಚಿ’ ಎಂಬ ಶಿಶುಗೀತೆಗಳ ಸಂಕಲನವು 34 ಸರಳ ಶಿಶು  ಗೀತೆಗಳನ್ನು ಒಳಗೊಂಡಿದ್ದು, ಮಕ್ಕಳಲ್ಲಿ ಪ್ರಕೃತಿ ಪ್ರೇಮ, ಸ್ವಚ್ಛತೆ ಮತ್ತು ಶಾಲಾ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ನಾನು   ಬರೆದ ‘ಶಿಕ್ಷಣವೇ ಶಕ್ತಿ’ ಕೃತಿಯು ಆನ್‌ಲೈನ್ ಶಿಕ್ಷಣ, 'ದೀಕ್ಷಾ ಆಪ್' ಮತ್ತು ಡಿಜಿಟಲ್ ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ‘ಸವಿ ಜ್ಞಾನ’, ‘ನಮ್ಮ ಇತಿಹಾಸ’ ಮತ್ತು ‘ಸಾಮಾನ್ಯ ಜ್ಞಾನ ಕ್ವಿಜ್’ ನಂತಹ ಪರಾಮರ್ಶನ ಗ್ರಂಥಗಳನ್ನು ರಚಿಸಿರುವೆ.
ಕಾದಂಬರಿ ಮತ್ತು ಕಥಾ ಸಂಕಲನಗಳ ಮೂಲಕ ಸಾಮಾಜಿಕ ಚಿತ್ರಣ ನೀಡುವ ಪ್ರಯತ್ನದ ಫಲವಾಗಿ  ನನ್ನ  ಚೊಚ್ಚಲ ಕಾದಂಬರಿ ‘ಉದಕದೊಳಗಿನ ಕಿಚ್ಚು’ ಗ್ರಾಮೀಣ ಬದುಕಿನ ವಾಸ್ತವತೆಗಳನ್ನು ತೆರೆದಿಡುತ್ತದೆ. ಈ ಕಾದಂಬರಿಯಲ್ಲಿ ಜೀತ ಪದ್ಧತಿಯ ನೋವು, ಹಳ್ಳಿಯ ಹಬ್ಬಗಳ ಸಡಗರ ಮತ್ತು ದಲಿತರ ದೇಗುಲ ಪ್ರವೇಶದಂತಹ ಗಂಭೀರ ಸಾಮಾಜಿಕ ವಿಚಾರಗಳನ್ನು ಮನೋಜ್ಞವಾಗಿ ಚಿತ್ರಿಸುವ ಪ್ರಯತ್ನ ಮಾಡಿರುವೆ. ನನ್ನ ‘ರಂಗಣ್ಣನ ಗುಡಿಸಲು’ ಕಥಾ ಸಂಕಲನವು ಹದಿಹರೆಯದ ಮನಸ್ಸಿನ ತಳಮಳಗಳು ಮತ್ತು ಮಾನವೀಯ ಸಂಬಂಧಗಳ ಮೌಲ್ಯವನ್ನು ಸಾರುವ ಕಥೆಗಳನ್ನು ಹೊಂದಿದೆ. ಅತಿ ಸಣ್ಣ ಕಥೆಗಳ ಪ್ರಕಾರದಲ್ಲಿ  ಬರೆದ ‘ಸಿಹಿಜೀವಿಯ ನ್ಯಾನೋ ಕಥೆಗಳು’ ಮನುಷ್ಯನ ಅಂತರಾತ್ಮವನ್ನು ಪ್ರಶ್ನಿಸುವ ಶಕ್ತಿಯನ್ನು ಹೊಂದಿವೆ.
 ಕವಿಯಾಗಿ ನನ್ನನ್ಬು ಗುರ್ತಿಸಿದ ಕೃತಿ  ‘ಸಾಲು ದೀಪಾವಳಿ’ ಕವನ ಸಂಕಲನ. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಗಜಲ್ ಪ್ರಕಾರವನ್ನು ಆರಿಸಿಕೊಂಡ ನಾನು, ‘ಸಿಹಿಜೀವಿಯ ಗಜಲ್’ ಮೂಲಕ ಭಕ್ತಿ, ಪ್ರೇಮ ಮತ್ತು ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿರುವೆ. ಕನಕದಾಸರ ತತ್ವಗಳನ್ನು ಮತ್ತು ಆಧುನಿಕ ಜೀವನದ ಸಂಘರ್ಷಗಳನ್ನು ಗಜಲ್‌ಗಳ ಮೂಲಕ ಚಿತ್ರಿಸಿರುವೆ.  ಅಲ್ಲದೆ, ಚುಟುಕು ಮತ್ತು ಹನಿಗವನಗಳ ಸಂಕಲನ ‘ಸಿಹಿಜೀವಿಯ ಹನಿಗಳು’ ಮೂಲಕ ಸಣ್ಣ ಸಾಲುಗಳಲ್ಲಿ ದೊಡ್ಡ ಅರ್ಥವನ್ನು ತುಂಬಿ ಹನಿಗವನ ರಚನೆ ಮಾಡಿರುವೆ.
ನಾನು ಕೇವಲ ಕಲ್ಪನಾ ಜಗತ್ತಿಗೆ ಸೀಮಿತವಾಗದೆ ನೈಜ ಜಗತ್ತಿನ ಇತಿಹಾಸ ಮತ್ತು ಪ್ರವಾಸದ ಬಗೆಗೂ ಆಸಕ್ತಿ ಹೊಂದಿದ . ‘ಐತಿಹಾಸಿಕ ತಾಣಗಳು’ ಮತ್ತು ‘ಕರ್ನಾಟಕದ 7 ಅದ್ಭುತಗಳು’ ಎಂಬ ಕೃತಿಗಳಲ್ಲಿ ಉಜ್ಜಯಿನಿ, ತಾಜ್ ಮಹಲ್, ಹಂಪಿ ಮತ್ತು ಮೈಸೂರು ಅರಮನೆಯಂತಹ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿರುವೆ. ನನ್ನ ಪ್ರವಾಸ ಕಥನ ‘ಕ್ಯಾತಸಂದ್ರ ಟು ಕ್ಯಾತನಮಕ್ಕಿ’ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತು ಚಾರಣದ ಅನುಭವವನ್ನು ಹಂಚಿಕೊಳ್ಳುತ್ತದೆ. ನನ್ನ 25ನೇ ಕೃತಿ ‘ವಿಶ್ವ ಭಾರತ’ ಪತ್ರಿಕಾ ಲೇಖನಗಳ ಸಂಕಲನವಾಗಿದ್ದು, ಭ್ರಷ್ಟಾಚಾರ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ.
ನವ ಪೀಳಿಗೆಗೆ ದೇಶದ ಮಹಾನ್ ಚೇತನಗಳಾದ ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ತಲುಪಿಸಲು ಇವರು ‘ಗಾಂಧೀಜಿ ಮತ್ತು ಅಂಬೇಡ್ಕರ್ ನುಡಿಮುತ್ತುಗಳು’ ಕೃತಿಯನ್ನು ಸಿದ್ಧಪಡಿಸಿ ಪ್ರಕಟಿಸಿರುವೆ.
"ಸಿಹಿಜೀವಿ ಕಂಡ ಅಂಡಮಾನ್" ಕೃತಿಯಲ್ಲಿ ಅಂಡಮಾನ್ ನ ಪ್ರಕೃತಿ ಸೊಬಗು ಹಾಗೂ ಅಲ್ಲಿಯ ಜನಜೀವನ ಬಿಂಬಿಸುವ ಕಾರ್ಯ ಮಾಡಿರುವೆ ಜಿ ಕೆ ಕುಲಕರ್ಣಿ ರವರ ಭಾಷೆಯಲ್ಲಿ ಅದು ನನ್ನ ಇಪ್ಪತ್ತೊಂಬನೇ ಹೆರಿಗೆ  ಪ್ರಸ್ತುತ. ಭೂತಾನ್ ಪ್ರವಾಸದ ಅನುಭವವನ್ನು ಬರೆದು ಪ್ರಕಟಿಸುವ ಪ್ರಯತ್ನದಲ್ಲಿರುವೆ.ಇದು ನನ್ನ ಮೂವತ್ತನೇ ಹೆರಿಗೆ! ಗೆಳೆಯರು ಆತ್ಮೀಯರು,ಹಿತೈಷಿಗಳು ನಿಮ್ಮ ‌ಹೆರಿಗೆ ಮುಂದುವರೆಯಲಿ ಆಪರೇಶನ್ ಮಾಡಿಸಿಕೊಳ್ಳಬೇಡಿ.ಕುಟುಂಬ ಯೋಜನೆಯ ನಿಯಮಗಳು ನಿಮಗೆ ಬೇಡ ಎಂದಿದ್ದಾರೆ. ನೀವೇನಂತೀರಿ?

ಸಿಹಿಜೀವಿ ವೆಂಕಟೇಶ್ವರ
ತುಮಕೂರು

19 ಏಪ್ರಿಲ್ 2026

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕಲಾವಿದೆ ರೇಣುಕಾ ಕೆಸರಮಡು

 




ನೆಲದ ನಕ್ಷತ್ರಗಳು..




ನೆಲದ ನಕ್ಷತ್ರ:1

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕಲಾವಿದೆ ರೇಣುಕಾ ಕೇಸರಮಡು


ಕಲೆ ಎಂಬುದು ಸಾಮಾನ್ಯಕ್ಕಿಂತ ಭಿನ್ನವಾದ, ವಿಶೇಷವಾದ ಹಾಗೂ ಗಮನ ಸೆಳೆಯುವ ಕಾಯಕ. ನಮ್ಮ ನಾಡಿನ ಪ್ರಮುಖ ಕಲಾವಿದರಲ್ಲಿ ಒಬ್ಬರಾದ ರೇಣುಕಾ ಕೆಸರಮಡು ಅವರು ಈ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ. ಅವರು ಕೇವಲ ಚಿತ್ರಕಲಾವಿದೆಯಷ್ಟೇ ಅಲ್ಲ, ಹಲವಾರು ವರ್ಷಗಳಿಂದ ಶಿಲ್ಪಿಯಾಗಿ, ಕಲಾ ಸಂಘಟನಕಾರರಾಗಿ, ಕಲಾ ವಿಮರ್ಶಕಿಯಾಗಿ ಹಾಗೂ ಕಲಾ ಉಪನ್ಯಾಸಕಿಯಾಗಿ ಕಲಾಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.


ತುಮಕೂರು ತಾಲೂಕಿನ ಕ್ಯಾತಸಂದ್ರ ಸಮೀಪದ ಕೇಸರಮಡು ಗ್ರಾಮದಲ್ಲಿ ೧೧ ಮಾರ್ಚ್ ೧೯೫೭ರಂದು ಟಿ.ಕೆ. ಚಂದ್ರಶೇಖರಯ್ಯ ಹಾಗೂ ಸಿದ್ದಗಂಗಮ್ಮ ಅವರ ಮಗಳಾಗಿ ಜನಿಸಿದ ರೇಣುಕಾ ಅವರದು ಸಾಮಾನ್ಯ ರೈತ ಹಾಗೂ ಪುರೋಹಿತ ಕುಟುಂಬ. ತುಮಕೂರಿನ ಸಿದ್ದಗಂಗಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಅವರು, ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಪ್ರಸಿದ್ಧ ಕಲಾಗುರು ಆರ್.ಎಂ. ಹಡಪದ್ ಅವರ ಮಾರ್ಗದರ್ಶನದಲ್ಲಿ ಐದು ವರ್ಷಗಳ ಡ್ರಾಯಿಂಗ್ ಡಿಪ್ಲೊಮಾ ಪಡೆದರು. ಈ ಕೋರ್ಸ್ನಲ್ಲಿ ಪ್ರತಿ ವರ್ಷವೂ ಮೊದಲ ರ‍್ಯಾಂಕ್ ಹಾಗೂ ಚಿನ್ನದ ಪದಕವನ್ನು ಅವರು ಮುಡಿಗೇರಿಸಿಕೊಂಡಿದ್ದರು. ತದನಂತರ ಅಣ್ಣಾಮಲೈನಲ್ಲಿ ಇತಿಹಾಸದಲ್ಲಿ ಎಂ.ಎ, ಹಾಗೂ  ಬೆಂಗಳೂರಿನಲ್ಲಿ ಕಲಾ ಇತಿಹಾಸದಲ್ಲಿ  ಪದವಿಯನ್ನೂ ಪಡೆದರು.




ತಮ್ಮ ಕಲಾ ಪ್ರಯಾಣದ ಪ್ರಾರಂಭದಲ್ಲಿ ಟೆರಾಕೊಟಾ ಹಾಗೂ ಅಲ್ಯುಮಿನಿಯಂ ಶಿಲ್ಪಗಳನ್ನು ರಚಿಸುತ್ತಿದ್ದ ರೇಣುಕಾ ಅವರು, ವಿದೇಶಗಳಲ್ಲಿ ಪ್ರದರ್ಶನಕ್ಕೆ ತೆರಳುವಾಗ ತೂಕದ ಸಮಸ್ಯೆಯಿಂದಾಗಿ ಚಿತ್ರಗಳ ರಚನೆಗೆ ಹೆಚ್ಚು ಒತ್ತು ನೀಡಿದರು. ತೈಲವರ್ಣದ  ಬಳಕೆಗೆ ಹೆಚ್ಚು ಸಮಯ ಬೇಕಾಗುವುದರಿಂದ, ಅವರು ಕಾಲಕ್ರಮೇಣ ಅಕ್ರಿಲಿಕ್ ಪ್ಲಾಸ್ಟಿಕ್ ಬಣ್ಣಗಳನ್ನು ಬಳಸುವುದನ್ನು ರೂಢಿಸಿಕೊಂಡರು. ಅವರ ಕಲಾಕೃತಿಗಳಲ್ಲಿ ಮುಖ್ಯವಾಗಿ ಹೆಣ್ಣಿಗೆ ಸಂಬಂಧಪಟ್ಟ ಸ್ವಯಂ ಭಾವಗಳು ಕೇಂದ್ರವಿಷಯವಾಗಿರುತ್ತವೆ. ತಮ್ಮ ಕಲಾ ಸರಣಿಗಳಲ್ಲಿ  ಪ್ರಕೃತಿ , ಬುದ್ಧ, ನವರಸ, ಹಂಪಿ ಮುಂತಾದ ವಿಷಯಗಳನ್ನು ಚಿತ್ರಿಸಿದ್ದಾರೆ. ಕೊರೋನಾ ಸಮಯದಲ್ಲಿ ಅವರು 'ಕೊರೋನಾ ಕಿರೀಟ', 'ಕೊರೋನಾ ವೇವ್ಸ್' ಸೇರಿದಂತೆ ೬೦ರಷ್ಟು ರೇಖಾ ಚಿತ್ರಗಳನ್ನು ರಚಿಸಿದ್ದು, ಅವು ಇಟಲಿ ಹಾಗೂ ಭಾರತದ ಹಲವೆಡೆ ಪ್ರದರ್ಶನಗೊಂಡಿವೆ. ಇತ್ತೀಚೆಗೆ ಅವರು ತಮ್ಮದೇ ಚಿತ್ರಗಳನ್ನು ಬಳಸಿಕೊಂಡು ಡಿಜಿಟಲ್ ಕಲಾಕೃತಿಗಳನ್ನೂ ರಚಿಸುತ್ತಿದ್ದಾರೆ.
ಇವರ ಕಲಾ ಸೇವೆಗೆ  ಅಂತರರಾಷ್ಟ್ರೀಯ ಗೌರವ ಲಭಿಸಿದೆ.
ರೇಣುಕಾ ಅವರ ಕಲಾಕೃತಿಗಳು ಭಾರತದ ವಿವಿಧ ನಗರಗಳಲ್ಲದೆ ಇಟಲಿ (ಮಿಲಾನ್, ಕೊರ್ಸಿಕೋ), ಫಿನ್ಲ್ಯಾಂಡ್, ಅಮೆರಿಕಾ, ರೊಮೇನಿಯಾ, ಸ್ಪೇನ್, ರಷ್ಯಾ, ಜರ್ಮನಿ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರದರ್ಶಿತಗೊಂಡಿವೆ ಹಾಗೂ ಅಲ್ಲಿನ ಸಂಗ್ರಹಾಲಯಗಳಲ್ಲಿ ಸ್ಥಾನ ಪಡೆದಿವೆ. ೨೦೦೮ರಲ್ಲಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ನೂರನೇ ವರ್ಷದ ಸಂದರ್ಭದಲ್ಲಿ ೧೫ ವಿದೇಶಿ ಹಾಗೂ ೧೫ ದೇಶಿಯ ಕಲಾವಿದರನ್ನು ಒಬ್ಬರೇ ವೇದಿಕೆಗೆ ತಂದು  ಅಂತರರಾಷ್ಟ್ರೀಯ ಕಲಾ ಶಿಬಿರವನ್ನು ತುಮಕೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದರು.






ಇತ್ತೀಚೆಗಿನ ದಿನಗಳಲ್ಲಿ ಕಲಾಶಾಲೆಗಳು ಪ್ರೋತ್ಸಾಹವಿಲ್ಲದೆ ಮುಚ್ಚಲ್ಪಡುತ್ತಿರುವುದರ ಬಗ್ಗೆ ಹಾಗೂ ಕಳೆದ ೧೦-೧೫ ವರ್ಷಗಳಿಂದ ಕಲಾ ಶಿಕ್ಷಕರ ನೇಮಕಾತಿ ಆಗದೆ ಕಲಾ ಶಿಕ್ಷಣ ಕನಿಷ್ಠವಾಗುತ್ತಿರುವುದಕ್ಕೆ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. "ನಮ್ಮದೇ ಆದ ಕಲಾ ಚಿಂತನೆ, ಪ್ರಯೋಗಗಳು ಇಲ್ಲದಿದ್ದರೆ ಮುಂದೆ ಎಲ್ಲದಕ್ಕೂ ಕೃತಕ ಬುದ್ಧಮತ್ತೆ  ಸಿದ್ಧವಾಗಿರುತ್ತದೆ ಹಾಗೂ ಕಲಾವಿದರು ಸಿಗುವುದಿಲ್ಲ" ಎಂದು ಅವರು ಎಚ್ಚರಿಸುತ್ತಾರೆ. ಕಲಾಕೃತಿಗಳನ್ನು ಕೊಂಡುಕೊಳ್ಳುವ ಹವ್ಯಾಸ ಜನರಲ್ಲಿ ವಿರಳವಾಗಿರುವುದರಿಂದ, ಕಲೆಯನ್ನೇ ನಂಬಿ ಬದುಕುವುದು ತುಂಬಾ ಕಷ್ಟ ಎಂದು ಅವರು ಅಭಿಪ್ರಾಯಪಡುತ್ತಾರೆ.


ರೇಣುಕಾ ಅವರ ಪತಿ ಬಿ.ಎಸ್. ಮಲ್ಲಿಕಾರ್ಜುನ ಅವರು ಸುಗಮ ಸಂಗೀತ ಹಾಗೂ ನಾಟಕ ಕಲಾವಿದರಾಗಿದ್ದು, 'ಶ್ರೀ ಬಸವೇಶ್ವರ' ನಾಟಕದಲ್ಲಿ ಒಂದು ಸಾವಿರದಷ್ಟು ಬಾರಿ ಪಾತ್ರ ನಿರ್ವಹಿಸಿದ್ದಾರೆ. ಅವರ ಮಕ್ಕಳು ಕೂಡ ಆರ್ಕೆಟೆಕ್ಟ್ ಹಾಗೂ ಮ್ಯೂಜಿಕ್ ಟೆಕ್ನಾಲಜಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಕುಟುಂಬವೇ ಸದಾ ಕಲಾತ್ಮಕ ಲೋಕದೊಂದಿಗೆ ಸಂಪರ್ಕ ಹೊಂದಿದೆ. "ಉತ್ತಮ ಕಲಾಕೃತಿಗಳನ್ನು ಮಾಡಿ ಪ್ರದರ್ಶಿಸುವ ಮೂಲಕ ನಮ್ಮ ದೇಶವನ್ನು ಉತ್ತಮವಾಗಿ ಬಿಂಬಿಸಬೇಕು, ಅದೇ ನಾವು ದೇಶಕ್ಕೆ ಕೊಡುವ ಸೇವೆ" ಎಂಬುದು ಈ ಕಲಾವಿದೆಯ ಆಶಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
#Art #Artist #Drawing #RenukaKesaramadu #ArtLovers #CreativeProcess #ArtInspiration #Sketching #ArtCommunity #VisualArt #Illustration #ArtisticExpression #ArtistOnInstagram #ArtVideo #DrawingTutorial #Artwork #ArtJourney #InstaArt #Suppo

03 ಏಪ್ರಿಲ್ 2026

ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕತಿರುಪತಿ!


 ತುಮಕೂರು ಜಿಲ್ಲೆಯಲ್ಲೊಂದು   ಚಿಕ್ಕತಿರುಪತಿ!




ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕ ತಿರುಪತಿ ಇದೆ. ದಿನವೂ  ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸ್ವಾಮಿ ನೆಲೆಸಿರುವ ಚಿಕ್ಕತಿರುಪತಿ ಎಂದು ಹೆಸರಾದ ತಾಣವೇ ಸಿದ್ದನಹಳ್ಳಿ.     ಶಿರಾ ತಾಲ್ಲೂಕಿನ ಸಿದ್ದನಹಳ್ಳಿಯು ತಾಲ್ಲೂಕು ಕೇಂದ್ರದಿಂದ 14 ಕಿಲೋಮೀಟರ್ ಅಂತರದಲ್ಲಿದೆ.ಶಿರಾದಿಂದ‌  ಅಮರಾಪುರ ರಸ್ತೆಯ ಮೂಲಕ  12 ಕಿಲೋಮೀಟರ್ ಚಲಿಸಿ   ತಿರುವಿನಲ್ಲಿ 2 ಕಿಲೋಮೀಟರ್ ದಾರಿ ಕ್ರಮಿಸಿದರೆ ಸಿಗುವುದೇ   ಸಿದ್ದನಹಳ್ಳಿ ಶ್ರೀಕ್ಷೇತ್ರ. ಇದಕ್ಕೆ ವೆಂಕಟೇಶ್ವರ ದೇವಾಲಯ ಹಾಗೂ ತಿಮ್ಮಪ್ಪ ದೇವಾಲಯ   ಎಂತಲೂ ಕರೆಯುತ್ತಾರೆ. ಈ  ಕ್ಷೇತ್ರದಲ್ಲಿ ಶ್ರೀತಿಮ್ಮಪ್ಪ ಸ್ವಾಮಿಯು 200 ವರ್ಷಗಳಿಂದ ನೆಲೆಗೊಂಡಿದ್ದಾರೆ.  1992ರಿಂದ 1995ರವರೆಗೆ ನವೀನ ‌ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.

1995ರಲ್ಲಿ ತಿರುಮಲ ತಿರುಪತಿದೇವಸ್ಥಾನಂ ವತಿಯಿಂದ ಕೊಡುಗೆಯಾಗಿ 5 ಆಡಿ ಎತ್ತರ ಸುಂದರ ಕೃಷ್ಣಶೀಲಾಮೂರ್ತಿ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ನೀಡಲಾಗಿದೆ. ಶ್ರೀಸ್ವಾಮಿಯು ಹಸನ್ಮುಖಿಯಾಗಿ ಭಕ್ತರನ್ನು ಸೆಳೆಯುತ್ತಾ ಕಷ್ಟಕಾರ್ಪಣ್ಯವನ್ನು ನಿವಾರಿಸುತ್ತಾ ರಾಜ್ಯದ ನಾನಾ ಭಾಗಗಳಿಂದ ಬರುವ  ಭಕ್ತರಿಗೆ ದರ್ಶನ ಕರುಣಿಸಿ ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ವರ್ಷವಿಡೀ ಎಲ್ಲಾ ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಕಾರ್ಯಕಲಾಪಗಳು ನೆಡೆಯುತ್ತಿವೆ. ದಿವಂಗತ ಶಿಕ್ಷಕರಾದ  ಶ್ರೀಬಿ.ನಂಜಯ್ಯ ರವರು ಜವಾಬ್ದಾರಿ ವಹಿಸಿಕೊಂಡು ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ತನ್ನ ಆಪ್ತ ಶಿಷ್ಯರ  ಸಹಕಾರದಿಂದ ಭಕ್ತರಿಂದ ದೇಗುಲ ನಿರ್ಮಾಣ ಮಾಡಲು ಸಾಧ್ಯವಾಯಿತು. ಜೊತೆಗೆ ತಮ್ಮ ಸಮುದಾಯದ ಗುಡಿಕಟ್ಟಿನ ಅಣ್ಣತಂದಿರುಗಳ ಹಾಗೂ ಕಾರ್ಯಕಾರಿ ಸಮಿತಿಯ ಮತ್ತು ಗ್ರಾಮದ ಭಕ್ತರ ಸರ್ವವಿಧವಾದ ಸಹಕಾರ ಸಿಕ್ಕಿತ್ತು.

1995 ಮೇ 10, 11, 12, ಮೂರು ದಿನಗಳ ಕಾಲ ವಿಜೃಂಭಣೆಯಿಂದ ಉನ್ನತ ವೇದೋಕ್ತ ವಿದ್ವಾಂಸರಿಂದ ಹೋಮ, ಹವನಾದಿಗಳು-ಪಾರಾಯಣಗಳು, ಅಧಿವಾಸಗಳು, ಧಾರ್ಮಿಕ ಪೂಜಾವಿಧಿವಿಧಾನಗಳೊಂದಿಗೆ ಪರಮ ಪೂಜ್ಯ ಶ್ರೀಶ್ರೀಗಳ ದಿವ್ಯಸಾನಿದ್ಯದಲ್ಲಿ ಬೆಂಗಳೂರು ಜಿಲ್ಲೆ, ಬಸವನಹಳ್ಳಿಯ ಪಾಂಚರಾತ್ರಗಮ ಉ।ವೇ॥ಪು॥ವಿದ್ವಾನ್ ಶ್ರೀ ರಾಮಕೃಷ್ಣಚಾರ್ಯರ ಮತ್ತು 11 ಜನರ ಆಗಮಿಕರ ತಂಡದೊಂದಿಗೆ ಶ್ರೀಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಟಾಪನೆ ಕಾರ್ಯ ನೆರವೇರಿತು.


ವಿಮಾನಗೋಪುರ, ಕಳಸಪ್ರತಿಷ್ಠೆ, ಮತ್ತು ಕುಂಭಾಭಿಷೇಕದ ಕಾರ್ಯವನ್ನು ನೆರವೇರಿಸುವಾಗ ವಿಷ್ಣುವಿನ ವಾಹನವಾದ ಶ್ರೀ ಗರುಡಸ್ವಾಮಿಯು ಗೋಪುರವನ್ನು ಮೂರು ಬಾರಿ ಪ್ರದಕ್ಷಿಣೆ ಬಂದು ಆಶಿರ್ವಾದ ಮಾಡಿದನ್ನ ಜನ ಇನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸುಮಾರು 8 ರಿಂದ 10 ಸಾವಿರ ಜನರ ಸಮಕ್ಷಮದಲ್ಲಿ ಈ ಮಹಾಕಾರ್ಯ ಅಂದು ನಿರ್ವಿಘ್ನವಾಗಿ ನೆರವೇರಿತು.

ಸಿದ್ದನಹಳ್ಳಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವರಿಗೆ ಆರತಿ ಉತ್ಸವನ್ನು ಸಂಭ್ರಮದಿಂದ ಗ್ರಾಮದ ಜನತೆ, ಹಿರಿಯರು, ಮಹಿಳೆಯರು ಭಕ್ತಿಪೂರ್ವಕವಾಗಿ ನೆರವೇರಿಸಿದರು. ಅಂದು ಸಾಂಕೇತಿಕವಾಗಿ ಉಚಿತ ವಿವಾಹ ನೆರವೇರಿಸಲಾಯಿತು. ನಂತರ 48 ದಿನ ವಿವಿಧ ಭಕ್ತಮಹಾಷಯರು ಮಂಡಲ ಪೂಜೆಯನ್ನು ನೆರವೇರಿಸಿದರು. ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷವು ವೈಶಾಖಮಾಸ ಶುದ್ಧ ಚಾಂದ್ರಮಾನ ಶ್ರೀ ವೈಷ್ಣವ ಜಯಂತಿ ಚಿತ್ತಾ ನಕ್ಷತ್ರದಂದು ಶ್ರೀ ವೆಂಕಟೇಶ್ವರಸ್ವಾಮಿಯ ವಾರ್ಷಿಕೋತ್ಸವನ್ನು ವೈಭವದೊಂದಿಗೆ ನಡೆಸುತ್ತಾ ಬರಲಾಗಿದೆ.

ಜೊತೆಗೆ ಪ್ರತಿವರ್ಷವೂ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಲಡ್ಡು-ತೀರ್ಥ ಪ್ರಸಾದವೂ ವಿತರಣೆಯಾಗುತ್ತಿದೆ. ತುಮಕೂರು ಜಿಲ್ಲೆಗೆ ಪ್ರಪ್ರಥಮವಾಗಿ ತಿರುಪತಿಯಿಂದ ಬಂದ ಸ್ವಾಮಿ ಇದಾಗಿರುತ್ತದೆ. ಧಾರ್ಮಿಕ ಸಮಾರಂಭಗಳಲ್ಲಿ ಗ್ರಾಮದ ಹಿರಿಯರಿಗೆ, ಸಮುದಾಯದ ಗಣ್ಯರನ್ನು  ಗೌರವಿಸುತ್ತಾ ಪ್ರತಿವರ್ಷವೂ ಪೂಜ್ಯಶ್ರೀಗಳನ್ನ ಕರೆಸಿ ಪಾದಪೂಜೆಯೊಂದಿಗೆ ಕಲಾಪ ಜರುಗುತ್ತಿದೆ. ಸದರಿ ದೇವಾಲಯದಲ್ಲಿ ಮದುವೆ ನಾಮಕರಣ, ಚೌಲೋಪನಯನ ಕಾರ್ಯಗಳು ಜರುಗುತ್ತಿವೆ. ವೈಕುಂಠ ಏಕಾದಶಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳಲ್ಲಿ ದೇವಾಲಯದಲ್ಲಿ ವಿಶೇಷವಾಗಿ ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹೊರಗಡೆಯಿಂದ ಬರುವ ಭಕ್ತರ ಅನುಕೂಲಕ್ಕೆ ಉಳಿದುಕೊಳ್ಳಲು ಸರ್ಕಾರ ಅನುದಾನವಿಲ್ಲದೆ ಬರೀ ಗ್ರಾಮೀಣ ಭಕ್ತರುಗಳ ಗುಡಿಕಟ್ಟಿನ ಅಣ್ಣತಮ್ಮಂದಿರ ಸಹಕಾರದಿಂದ ವಿಶ್ರಾಂತಿಗೃಹ ನಿರ್ಮಾಣವಾಗಿದೆ. ಈ ದೇಗುಲಕ್ಕೆ ಸರ್ಕಾರದಿಂದ ಸರ್ಕಾರೇತರ ಸಹಕಾರ ಸಿಕ್ಕಿದಲ್ಲಿ ಉತ್ತಮ ಕಾರ್ಯಗಳು ನಡೆದು ಧಾರ್ಮಿಕ ಸೊಗಡು ಹೆಚ್ಚಿ ಉತ್ತಮ ಕ್ಷೇತ್ರವಾಗುವುದರಲ್ಲಿ ಸಂದೇಹವೇವಿಲ್ಲ.

ಗ್ರಾಮೀಣ ಜನತೆ, ಮಕ್ಕಳಲ್ಲಿ ಭಕ್ತಿ-ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ಧರ್ಮವನ್ನು ರಕ್ಷಿಸಿದ್ದೇ ಆದಲ್ಲಿ ಧರ್ಮವು ನಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ  ಇಂತಹ ಚಿಕ್ಕ ತಿರುಪತಿಗೆ ಒಮ್ಮೆಯಾದರು ಹೋಗಿ ಸ್ವಾಮಿಯ ದರ್ಶನ ಪಡೆದರೆ ಜೀವನ ಸಾರ್ಥಕವಾದೀತು. ಈ ದೇಗುಲಕ್ಕೆ ಮಾಜಿ ಸಚಿವರು ಕರ್ನಾಟಕ ಸರ್ಕಾರದ ‌ದೆಹಲಿ‌ಯಲ್ಲಿ ವಿಶೇಷ ಪ್ರತಿನಿಧಿಯಾದ ಟಿ ಬಿ ಜಯಚಂದ್ರ ಹಾಗೂ ಮಾಜಿ ಶಾಸಕರಾದ ರಾಜೇಶ್ ಗೌಡರ ಕೊಡುಗೆಗಳನ್ನು ಟ್ರಸ್ಟ್ ನ ಪದಾಧಿಕಾರಿಗಳು ಮನದುಂಬಿ ಸ್ಮರಿಸಿಕೊಳ್ಳುತ್ತಾರೆ. ಇದೇ ರೀತಿಯಲ್ಲಿ   ಭಕ್ತರ ಹಾಗೂ ಜನಪ್ರತಿನಿಧಿಗಳ ಸಹಕಾರ ದೊರೆತರೆ ಈ ಕ್ಷೇತ್ರ ಬೆಳೆಯುತ್ತಾ ಬೆಳಗುವಲ್ಲಿ ಸಂದೇಹವಿಲ್ಲ.

ಈ ವರ್ಷದ 31 ನೇ ವಾರ್ಷಿಕೋತ್ಸವದ ಹಾಗೂ ಸಾಮೂಹಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ತಿರುಮಲ ತಿರುಪತಿ ದೇವಸ್ಥಾನದ ಅನುಗ್ರಹದೊಂದಿಗೆ ಏಪ್ರಿಲ್ 11 ಮತ್ತು 12 ರಂದು ನಡೆಯಲಿದೆ. ಮಹಾಶರಣ ಶ್ರೀ ಕಮ್ಮಾರ ಕಲ್ಲಯ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ನಿಟ್ಟರಹಳ್ಳಿಯ ನಿಜಶರಣ ಕಮ್ಮಾರ ಕಲ್ಲಯ್ಯ ಶ್ರೀಮಠದ ಪೀಠಾದ್ಯಕ್ಷರಾದ ಪರಮ ಪೂಜ್ಯ
  ಶ್ರೀ ‌ಶ್ರೀ ಶ್ರೀ ಡಾ. ನೀಲಕಂಠಾಚಾರ್ಯ ಸ್ವಾಮೀಜಿ ಹಾಗೂ ಪಟ್ಟನಾಯಕನ ಹಳ್ಳಿಯ  ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ
  ಶ್ರೀ ‌ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ ರವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇವಾಲಯದ ವತಿಯಿಂದ ಗೌರವ ಶ್ರೀರಕ್ಷೆ ನೀಡಲಾಗುತ್ತದೆ. ತುಮಕೂರಿನ ಸಾಧಕ ರತ್ನ ಶ್ರೀ ಗುರುಮೂರ್ತಿ, ಸಾಹಿತಿಗಳಾದ ಶ್ರೀಮತಿ ರತ್ನಮ್ಮ ಹಾಗೂ ಸಾಹಿತಿಗಳು ಶಿಕ್ಷಕರೂ ಆದ ಸಿಹಿಜೀವಿ ವೆಂಕಟೇಶ್ವರ ರವರು ಈ ಬಾರಿಯ ಶ್ರೀರಕ್ಷೆ ಪಡೆಯಲಿದ್ದಾರೆ.
ವೇದಿಕೆ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ವೆಂಕಟೇಶ್ವರ ಸ್ವಾಮಿಯ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಲ್ ಎನ್ ಮಂಜುನಾಥ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಬನ್ನಿ ಚಿಕ್ಕ ತಿರುಪತಿ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗೋಣ.


ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು ಹಾಗೂ ಸಾಹಿತಿಗಳು
ತುಮಕೂರು
9900925529

ಸಿಹಿಜೀವಿಯ ಹನಿ


 ಭರವಸೆಯ ನಾಳೆಗಳನ್ನು‌ 

ಅರಸುತ್ತಾ ಸಾಗುತ್ತಿದೆ ನಮ್ಮ ಪಯಣ|

ಕಷ್ಟಗಳು‌ ನೂರಿರಲಿ 

ನಿಲ್ಲದು ನಮ್ಮ ಬಾಳ ಯಾನ||


ಸಿಹಿಜೀವಿ ವೆಂಕಟೇಶ್ವರ


#Quote #KannadaQuote #Sihijeevi #SihijeeviyaPayana #Motivation #Inspiration #Wisdom #LifeLessons #CulturalQuotes #IlluminateYourJourney #StayPositive #QuotesToLiveBy #LoveKannada #JoyfulJourney #Mindfulness #Empowerment #HeartfeltQuotes #QuoteOfTheDay #Philosophy

28 ಮಾರ್ಚ್ 2026

Ipl ಫ್ಯಾನ್ ಪಾರ್ಕ್ ತುಮಕೂರಲ್ಲಿ..


 

ತುಮಕೂರಿನಲ್ಲಿ 
ಕಳೆದ ವರ್ಷ ನಾನು‌ IPL ಫ್ಯಾನ್ ಪಾರ್ಕ್ ಬಗ್ಗೆ ವೀಡಿಯೋ ಹಾಕಿದ್ದೆ  ಬಹಳಷ್ಟು ಮುಖಪುಟದ ಬಂಧುಗಳು ಪ್ಯಾನ್ ಪಾರ್ಕ್ ಗೆ ಬರಲು ಉತ್ಸುಕರಾಗಿದ್ದರು. ಇಂದು ಮತ್ತು ನಾಳೆ ಮಾತ್ರ ತುಮಕೂರಿನಲ್ಲಿ ಫ್ಯಾನ್ ಪಾರ್ಕ್ ಇರುತ್ತದೆ.ಅಂದರೆ 28 ಮತ್ತು 29 ದಿನಾಂಕ ಮಾತ್ರ. ಇಂದು ನಮ್ಮ RCB ಮತ್ತು ಹೈದರಾಬಾದ್ ನಡುವಿನ ಪಂದ್ಯವನ್ನು ದೊಡ್ಡ ಪರದೆಯ ಮೇಲೆ ಅಲ್ಲಿಯೇ ನೋಡೋಣ ಬನ್ನಿ..
ಬರಲಾಗದವರು
ನನ್ನ sihijeeviya payana ಯೂಟ್ಯೂಬ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು..

#TataIPL #IPLMatches #TumkurFanPark #RCB #Hyderabad #Sihijeevi #SihijeeviyaPayana #CricketFan #MatchDay #IPL2023 #RoyalChallengersBangalore #CricketLovers #LiveCricket #FanExperience #SportsFan #CricketInIndia #GameDay #CheerForRCB #LovelyIndia #TeamRCB

24 ಮಾರ್ಚ್ 2026

ಪಾರೋದ ಐತಿಹಾಸಿಕ ರಿನ್ ಪುಂಗ್ ಕೋಟೆ.


  

 
ಪಾರೋದ   ಐತಿಹಾಸಿಕ ರಿನ್ ಪುಂಗ್ ಕೋಟೆ.


ಭೂತಾನ್ ನ ಥಿಂಪು ನಂತರ ಸುಂದರ ‌ನಗರ ಪಾರೋ. ಇಡೀ ದೇಶದಲ್ಲಿ ಇಲ್ಲಿ ಮಾತ್ರ ಏರ್ಪೋರ್ಟ್ ಇರುವುದು.   ನಮ್ಮ ಪ್ರವಾಸದ ಎರಡನೇ ದಿನ ನಾವು  ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ  ರಿನ್ ಪುಂಗ್ ಝಾಂಗ್ ನೊಡಲು ಹೊರಟೆವು.    ರಿನ್ ಪುಂಗ್ ಕೋಟೆ. ಕೆಲವರು  ಹಾಗೂ  ಪಾರೋ ಝಾಂಗ್ ಎಂದು ಕರೆತ್ತಾರೆ. ಇದು ಭೂತಾನಿನ ಪಾರೋ ಜಿಲ್ಲೆಯ ಕಾಗ್ಯು ಶಾಲೆಯ ಡ್ರುಕ್ಪಾ ವಂಶಾವಳಿಯ ಒಂದು ದೊಡ್ಡ ಕೋಟೆಯಾಗಿದೆ.

ನಾವು ಈ ಕೋಟೆಗೆ ಹಿಂದಿನ ಭಾಗದಿಂದ ಪ್ರವೇಶ ಪಡೆದೆವು.ಈ ಕೋಟೆಗೆ ಹೋಗುವ ಮೊದಲು ನಮ್ಮ ಗೈಡ್ ತೆಂದಿನ್ ಒಂದು ರೀತಿಯ ವಿಶೇಷವಾದ ವೇಲ್ ರೀತಿಯ ಬಟ್ಟೆಯನ್ನು ಹಾಕಿದರು.ಇದರ ಬಗ್ಗೆ ಕೇಳಿದಾಗ ಭೂತಾನ್ ನ ಜನತೆ ಅವರ ಪ್ರಮುಖ ದೇವಾಲಯ, ಬೌದ್ಧ ಸ್ತೂಪ, ಸರ್ಕಾರಿ ಕಛೇರಿ ,ಸಂಸತ್ ಗೆ ಭೇಟಿ ನೀಡುವಾಗ ಈ ರೀತಿಯ ವಿಶೇಷವಾದ ಅಡ್ಡ ವಸ್ತ್ರಗಳನ್ನು ಹಾಕಬೇಕು ಇದರಲ್ಲಿ ಮೂರು ಬಗೆಯ ವಸ್ತ್ರಗಳನ್ನು ಅವರ ಆಕರ್ಷಣೀಯ ಮತ್ತು ಹುದ್ದೆಗಳ ಆಧಾರದ ಮೇಲೆ ಹಾಕಲಾಗುತ್ತದೆ.

 ರಿನ್ ಪುಂಗ್ ಕೋಟೆಯು ಕೇವಲ ಕೋಟೆಯಾಗಿರದೇ ಇದು  ಬೌದ್ಧ ಮಠವೂ ಹೌದು ಹಾಗೂ  ಜಿಲ್ಲಾ ಸನ್ಯಾಸಿಗಳ ಮಂಡಳಿ ಮತ್ತು ಪಾರೋ ಝಾಂಗ್‌ಖಾಗ್‌ನ ಸರ್ಕಾರಿ ಆಡಳಿತ ಕಚೇರಿಗಳನ್ನು ಹೊಂದಿದೆ. ಇದನ್ನು ಯುನೆಸ್ಕೋ  ಸಾಂಸ್ಕೃತಿಕ ಪರಂಪರೆಯ ತಾಣವಾಗಿ   ಸೇರ್ಪಡೆಗಾಗಿ ಭೂತಾನ್‌ನ ತಾತ್ಕಾಲಿಕ ಪಟ್ಟಿಯಲ್ಲಿ ತಾತ್ಕಾಲಿಕ ತಾಣವಾಗಿ ಪಟ್ಟಿ ಮಾಡಲಾಗಿದೆ. ಆದಷ್ಟು ಬೇಗ ಇದು ಯುನೆಸ್ಕೋ ಸಾಂಸ್ಕೃತಿಕ ತಾಣವಾಗಿ ಸೇರ್ಪಡೆಯಾಗಲಿ ಎಂದು ಆಶಿಸೋಣ.



ಈ ಕೋಟೆಯ ಪ್ರವೇಶ ದ್ವಾರದಲ್ಲಿ ನಮ್ಮನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.ಆ ಸಮಯದಲ್ಲಿ ಸಭ್ಯ ಉಡುಪು ಧರಿಸಿದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು.ನಮ್ಮ ತಂಡದ ಸ್ನೇಹಿತರಲ್ಲಿ ಒಬ್ಬರು ಬರ್ಮುಡ ಧರಿಸಿದ್ದರು ಅವರನ್ನು ಒಳಗಡೆ ಬಿಡಲಿಲ್ಲ. ಅಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಅಲ್ಲಿ ಪಾಲಿಸಲಾಗುತ್ತದೆ.   ಜೊತೆಯಲ್ಲಿ ನಾವು ಆ ಕೋಟೆಯಲ್ಲಿ ಪ್ರಶಾಂತವಾಗಿ ಇರುವಂತೆ ಸೂಚನೆ ನೀಡಿದರು.

ಪಾರೋ ಝೋಂಗ್‌ನ ಐತಿಹಾಸಿಕ ದಾಖಲೆಗಳ ಪ್ರಕಾರ  ಈ ಸ್ಥಳದ ಕೆಳಗಿನ ಬಂಡೆಯ ಮುಖವನ್ನು 8 ನೇ ಶತಮಾನದಲ್ಲಿ ಗುರು ರಿನ್‌ಪೋಚೆರವರು ಈ ಸ್ಥಳವನ್ನು   ರಿಂಗ್‌ಪಂಗ್ ಎಂದು ಕರೆದರು. ನಂತರ ಈ ಸ್ಥಳದಲ್ಲಿ ಝೋಂಗ್ ಅನ್ನು ನಿರ್ಮಿಸಿದಾಗ ಅದು   ರಿಂಗ್ ಫಂಗ್ ಝೋಂಗ್   ಎಂದು ಕರೆಯಲ್ಪಟ್ಟಿತು.
15 ನೇ ಶತಮಾನದಲ್ಲಿ ಸ್ಥಳೀಯ ಸಮುದಾಯವು ಪಾರೊದಲ್ಲಿರುವ ಹಂಗ್ರೆಲ್ ಬಂಡೆಯನ್ನು ಫಾಜೊ ಡ್ರುಗೊಮ್ ಝಿಗ್ಪೊ ಅವರ ವಂಶಸ್ಥ ಲಾಮಾ ಡ್ರುಂಗ್ ಡ್ರುಂಗ್ ಗಯಾಲ್‌ಗೆ ಅರ್ಪಿಸಿತು. ಡ್ರುಂಗ್ ಡ್ರುಂಗ್ ಗಯಾಲ್ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು.  ನಂತರ ಹಂಗ್ರೆಲ್ ಡ್ಜಾಂಗ್ ಎಂದು ಕರೆಯಲ್ಪಡುವ ಐದು ಅಂತಸ್ತಿನ ಕೋಟೆಯನ್ನು ನಿರ್ಮಿಸಿದರು.
17 ನೇ ಶತಮಾನದ ವೇಳೆಗೆ ಹಂಗ್ರೆಲ್‌ನ ಪ್ರಭುಗಳು ಎಂದು ಕರೆಯಲ್ಪಡುವ ಅವರ ವಂಶಸ್ಥರು ಈ ಕೋಟೆಯನ್ನು ಏಕೀಕೃತ ಭೂತಾನ್ ರಾಜ್ಯದ ಸ್ಥಾಪಕ ಮತ್ತು ಡ್ರುಕ್ಪಾ ವಂಶಾವಳಿಯ ಮುಖ್ಯಸ್ಥ ಝಬ್ಡ್ರಂಗ್ ನ್ಗಾವಾಂಗ್ ನಮ್ಗ್ಯಾಲ್‌ಗೆ ಅವರ ಧಾರ್ಮಿಕ ಮತ್ತು ರಾಜಕೀಯ ಅಧಿಕಾರವನ್ನು ಗುರುತಿಸಿ ಅರ್ಪಿಸಿದರು. 1644 ರಲ್ಲಿ ಝಬ್ಡ್ರಂಗ್ ಹಳೆಯ ರಚನೆಯನ್ನು ಕೆಡವಿ ಹೊಸ ಝೋಂಗ್‌ಗೆ ಅಡಿಪಾಯ ಹಾಕಿದರು. 


23 ನೇ ಪೆನ್‌ಲೋಪ್ ದಾವಾ ಪೆಂಜೋರ್‌ನ ಆಳ್ವಿಕೆಯಲ್ಲಿ  ಮೊದಲ ರಾಜ ಗೊಂಗ್ಸಾ ಉಗ್ಯೆನ್ ವಾಂಗ್‌ಚುಕ್ ಸಿಂಹಾಸನಾರೋಹಣ ಮಾಡುವ ಮೊದಲು ಕೋಟೆಯು  ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಯಿತು.20 ಮೀಟರ್ ಅಗಲದ ಥೊಂಗ್‌ಡ್ರೆಲ್ ಹೊರತುಪಡಿಸಿ, ಹೆಚ್ಚಿನ ಅವಶೇಷಗಳು ಮತ್ತು ಪ್ರತಿಮೆಗಳು ನಾಶವಾದವು. ಥೊಂಗ್‌ಡ್ರೆಲ್‌ಗೆ ಗೌರವ ಸಲ್ಲಿಸುವುದರಿಂದ ಆಧ್ಯಾತ್ಮಿಕ ಅರ್ಹತೆ ಮತ್ತು ವಿಮೋಚನೆಯ ಸಾಮರ್ಥ್ಯ ಬರುತ್ತದೆ ಎಂದು ಭಕ್ತರು ನಂಬಿದ್ದಾರೆ. 1993 ರ ಚಲನಚಿತ್ರ ಲಿಟಲ್ ಬುದ್ಧದ ಹಲವಾರು ದೃಶ್ಯಗಳನ್ನು ಪಾರೋ ರಿನ್‌ಪುಂಗ್ ಝೋಂಗ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕೋಟೆಯಲ್ಲಿರುವ ಪ್ರಮುಖ ಸ್ಮಾರಕಗಳನ್ನು ನಮಗೆ ನಮ್ಮ ಗೈಡ್ ನಮಗೆ ತೋರಿಸುತ್ತಾ ವಿವರಣೆ ನೀಡುತ್ತಾ ಕೋಟೆಯಲ್ಲಿ ಒಂದು ಸುತ್ತು ಹಾಕಿಸಿ ನಮಗೆ ಕೋಟೆಯ ಪರಿಚಯ ಮಾಡಿಸಿದರು.ಸೂರ್ಯಾಸ್ತದ ಸಮಯದಲ್ಲಿ ರಿನ್‌ಪುಂಗ್ ಡ್ಜಾಂಗ್ ಮತ್ತು ನೇಮಿ ಝಾಮ್ ಸೇತುವೆ
ರಿನ್‌ಪುಂಗ್ ಡ್ಜಾಂಗ್ ಒಳಗೆ ಹದಿನಾಲ್ಕು ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ಅವೆಂದರೆ ಕುಂಗರ್ವ,ಸನ್ಯಾಸಿಗಳ ಸಭಾ ಭವನ,ಶ್ರೀಗಂಧದ ಸ್ತೂಪ,ರಕ್ಷಕ ದೇವಾಲಯ,ಗುರುವಿನ ಎಂಟು ಅಭಿವ್ಯಕ್ತಿಗಳ ದೇವಾಲಯ,ಲಾಮಾ ಮುಖ್ಯಸ್ಥರ ಪ್ರಾರ್ಥನಾ ಮಂದಿರ,ಅಮಿತಾಯಸ್ ಪ್ರಾರ್ಥನಾ ಮಂದಿರ,ದಿ ಕ್ಲಿಯರ್ ಕ್ರಿಸ್ಟಲ್ ಶ್ರೈನ್,ಹನ್ನೊಂದು ಮುಖದ ಅವಲೋಕಿತೇಶ್ವರನ ಪ್ರಾರ್ಥನಾ ಮಂದಿರ,ಅಬಾಟ್‌ನ ಅಪಾರ್ಟ್‌ಮೆಂಟ್‌ಗಳು,ಅಕ್ಷೋಭ್ಯ ದೇಗುಲ,ನಿಧಿ ಬಹಿರಂಗಪಡಿಸುವವರ ದೇವಾಲಯ,ರಾಜನ ಅಪಾರ್ಟ್‌ಮೆಂಟ್‌ಗಳು,ಬುರ್ಸಾರನ ದೇವಾಲಯ
ಮುಖ್ಯ ಝೊಂಗ್‌ನ ಹೊರಗೆ ದೇಯಾಂಗ್ಖಾ ದೇವಸ್ಥಾನವಿದೆ.
ರಿನ್‌ಪುಂಗ್ ಡ್ಜಾಂಗ್ ಮೇಲಿನ ಬೆಟ್ಟದ ಮೇಲೆ 1649 ರಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಕಾವಲು ಗೋಪುರ ಕೋಟೆ ಅಥವಾ ಟಾ ಡ್ಜಾಂಗ್ ಇದೆ. 1968 ರಲ್ಲಿ ಇದನ್ನು ಭೂತಾನ್ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನೆಲೆಯಾಗಿ ಸ್ಥಾಪಿಸಲಾಯಿತು .
ರಿನ್‌ಪುಂಗ್ ಡ್ಜಾಂಗ್‌ನ ಸ್ವಲ್ಪ ಕೆಳಗೆ ಸಾಂಪ್ರದಾಯಿಕ ಮುಚ್ಚಿದ ಕ್ಯಾಂಟಿಲಿವರ್ ಸೇತುವೆ ಇದೆ.
ಈ ಕೋಟೆಯ ಸೌಂದರ್ಯವನ್ನು ಸವಿಯುತ್ತಾ ಸಾಗಿದ ನಮ್ಮನ್ನು  ನಮ್ಮ ಗೈಡ್ ಮಿಲೆನಿಯಮ್ ವ್ಯೂ ಪಾಯಿಂಟ್ ಬಳಿ ಕರೆದುಕೊಂಡು ಹೋದರು.ಅದು ಬಹಳ ಸುಂದರವಾದ ದೃಶ್ಯಗಳನ್ನು ಹೊಂದಿ ನಮ್ಮ ಮನ ತಣಿಸಿತು. ಪಾರೋ ಏರ್ಪೋರ್ಟ್, ನದಿ ಕಣಿವೆ, ಕಾಡುಗಳು, ಮನೆಗಳು ಮುಂತಾದ ಸೀನರಿಗಳು ನೋಡುಗರನ್ನು ಸೆಳೆಯುತ್ತವೆ.ಅದೇ ಪ್ರದೇಶದಲ್ಲಿ ಇರುವ ಒಂದು ಮನೆಯ ಕಡೆ ತೋರಿಸಿದ ನಮ್ಮ ‌ಗೈಡ್ ಆ ಮನೆಯು ರಾಜ ಮನೆತನದವರು ಪಾರೋಗೆ ಬಂದಾಗ ಉಳಿದುಕೊಳ್ಳಲು ಇರುವ ಮನೆ. ಭಾರತದಲ್ಲಿ  ಇಂದಿರಾಗಾಂಧಿ ರವರ ಹತ್ಯೆ ಆದಾಗ ರಾಜೀವ್ ಗಾಂಧಿಯವರನ್ನು ಆ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು ಎಂದು ಹೇಳಿದರು.



ಆ ಕೋಟೆಯಲ್ಲಿ ಇರುವ ಕೆಲ ವಿಶೇಷವಾದ ಪೋಟೋಗಳ ಕಡೆಗೆ ನಮ್ಮ ಗಮನ ಸೆಳೆದ ನಮ್ಮ ಗೈಡ್ ತೆಂದಿನ್ ಆ ಕೋಟೆಯಲ್ಲಿ ವಾರ್ಷಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಸಿದರು.

ಸಾಂಪ್ರದಾಯಿಕ ಭೂತಾನೀಸ್ ಚಂದ್ರಮಾನ  ಕ್ಯಾಲೆಂಡರ್‌ನ ಎರಡನೇ ತಿಂಗಳಿನ ಹನ್ನೊಂದನೇ ತಾರೀಖಿನಿಂದ ಹದಿನೈದನೇ ದಿನದವರೆಗೆ ಅಂದರೆ ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ  ರಿನ್‌ಪುಂಗ್ ಕೋಟೆಯಲ್ಲಿ ಒಂದು ದೊಡ್ಡ ವಾರ್ಷಿಕ ಉತ್ಸವ ಅಥವಾ ತ್ಶೆಚು ನಡೆಯುತ್ತದೆ. ಈ ಸಂದರ್ಭದಲ್ಲಿ ಪವಿತ್ರ ಚಿತ್ರಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಧಾರ್ಮಿಕ ಕಥೆಗಳನ್ನು ತಿಳಿಸುವ ಸಾಂಪ್ರದಾಯಿಕ ಮುಖವಾಡ ನೃತ್ಯಗಳ ಸರಣಿಯನ್ನು ಸನ್ಯಾಸಿಗಳು ಹಲವಾರು ದಿನಗಳವರೆಗೆ ಪ್ರದರ್ಶಿಸುತ್ತಾರೆ.
ಹದಿನೈದನೇ ದಿನದ ಬೆಳಗಿನ ಜಾವದಲ್ಲಿ, ಪದ್ಮಸಂಭವನ ಎಂಟು ಅವತಾರಗಳಾದ     ಗುರು ಪೆಮಾ ಜಂಗ್ನಿ, ಗುರು ನಿಮಾ ಯೋಯೆಜರ್, ಗುರು ಸಿಂಗ್ಯೆ ಡ್ರಾಡ್ರಾಂಗ್, ಗುರು ತ್ಶೋಕಿ ದೋರ್ಜಿ, ಗುರು ಶಾಚಾ ಸಿಂಗ್ಯೆ, ಗುರು ಪೆಮಾ ಗೈಲ್ಪೋ, ಗುರು ದೋರ್ಜಿ ಡೋಲೋ ಮತ್ತು ಗುರು ಲೋಡನ್ ಚೋಕ್ಸೆ ಗಳನ್ನು ಚಿತ್ರಿಸುವ ಒಂದು ದೊಡ್ಡ ಪವಿತ್ರ ಥೋಂಗ್ಡ್ರೆಲ್ ಬ್ಯಾನರ್ ಥಂಗ್ಕಾವನ್ನು  ಬೆಳಗಿನ ಜಾವದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಸೂರ್ಯನ ಬೆಳಕು ಅದರ ಮೇಲೆ ಬೀಳಲು ಬಿಡದಿರುವ ಸಂಪ್ರದಾಯವನ್ನು ಉಳಿಸಿಕೊಳ್ಳಲು ಬೌದ್ಧ  ಸನ್ಯಾಸಿಗಳು ಮುಖವಾಡ ನೃತ್ಯ ಮಾಡುವ ನೆಲವನ್ನು ದೆಯಾಂಗ್ಖಾ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕೋಟೆಯ ಐತಿಹಾಸಿಕ ಜಾಗೂ ಧಾರ್ಮಿಕ ಮಹತ್ವ ತಿಳಿದ ನಾವು ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿ ನಮ್ಮ ತಂಡದ ಜೊತೆಯಲ್ಲಿ ನೆನಪಿಗಾಗಿ ಪೋಟೋ ತೆಗೆದುಕೊಂಡು ಭೂತಾನ್ ನ ಮತ್ತೊಂದು ದೇಗುಲ ಕಿಚು ಲಕಾಂಗ್ ಕಡೆಗೆ ಪಯಣ ಬೆಳೆಸಿದೆವು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು.

21 ಮಾರ್ಚ್ 2026

ನಮ್ಮೂರ ಪಾತೇದೇವರು.

 


ಪಾತಲಿಂಗೇಶ್ವರ ಮಹಿಮೆ.


ನಮ್ಮೂರ ಅಧಿ ದೇವತೆ ಚೌಡೇಶ್ವರಿಯಷ್ಟೇ ಪ್ರಮುಖವಾದ ಮೂರು ದೇವಾಲಯಗಳಲ್ಲಿ ಪಾತಲಿಂಗೇಶ್ವರ ಅಥವಾ ಪಾರ್ಥಲಿಂಗೇಶ್ವರ ಗುಡಿಯು ನಮ್ಮೂರ ಜನರ ಪ್ರಾರ್ಥನಾ ತಾಣವಾಗಿದೆ.
ಬಾಲ್ಯದಲ್ಲಿ  ನಮ್ಮೂರ ಶಾಲೆಯಲ್ಲಿ ಓದುವಾಗ ಸೋಮವಾರ ಮತ್ತು ಪ್ರಮುಖವಾದ ದೇವರ ಕಾರ್ಯವಿದ್ದಾಗ ನಮ್ಮ ಸಹಪಾಠಿ ಚಂದ್ರ ಶಾಲೆಗೆ ಬರುತ್ತಿರಲಿಲ್ಲ. ನಮ್ಮ TNT ಅರ್ಥಾತ್  ತಿಪ್ಪೇಶಪ್ಪ  ‌ಮೇಷ್ಟ್ರು ಚಂದ್ರನ ಅಕ್ಷರಶಃ ಹೊತ್ತುಕೊಂಡು ಬನ್ನಿ ಎಂದು  ನಮ್ಮನ್ನು ಕಳಿಸುತ್ತಿದ್ದರು.ನಾವು ಕೆಲವೊಮ್ಮೆ ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸಿ ಅವನನ್ನು ಎತ್ತಾಕಿಕೊಂಡು ಬಂದಿದ್ದೆವು.ಹೀಗೆ ಒಮ್ಮೆ ಚಂದ್ರನನ್ನು ಎತ್ತಾಕಿಕೊಂಡು ಬರಲು ಹೋದಾಗ ಅವರಪ್ಪ ನಮ್ಮನ್ನು ಗದರಿ ಕಳಿಸಿ‌‌ ಶಾಲೆಗೆ ಬಂದು " ಮೇಷ್ಟ್ರೇ ನಮ್ ಹುಡ್ಗ ಸೋಮಾರ ಇಸ್ಕೂಲ್ ಗೆ ಬರಲ್ಲ ಅಷ್ಟೇ, ಇನ್ಮೇಲೆ ಈ ಹುಡುಗ್ರು ನಮ್ ಮನೆ ಹತ್ರ ಬಂದ್ರೆ ನೆಟ್ಗಿರಲ್ಲ ನೋಡು" ಎಂದು ಗದರಿ ಹೋಗಿದ್ದರು. ಅಲ್ಲಿ ಗೆ ನಮ್ ಮಾಷ್ಟ್ರು ಚಂದ್ರು ಬಂದಾಗ ಬರಲಿ ಎಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದರು.ಚಂದ್ರಪ್ಪನಿಗೆ ಪಾತಲಿಂಗೇಶ್ವರನ ಸೇವೆ ಮಾಡುವ ಪುಣ್ಯ ಲಭಿಸಿತ್ತು.ದೊಡ್ಡಪ್ಪ ಜಡಿಯಪ್ಪ,ಹಾಗೂ  ಅಪ್ಪ ತಮ್ಮಣ್ಣನವರ ದೈವ ಭಕ್ತಿಯಿಂದ ಪ್ರೇರಿತನಾದ ಚಂದ್ರಪ್ಪ ದೇವರ ಪೂಜೆಗೆ ತನ್ನ ‌ಜೀವನ ಮೀಸಲಿಟ್ಟ.ಈಗ ಪಾತಲಿಂಗೇಶ್ವರ ಸ್ವಾಮಿಯ ಪ್ರಮುಖ ಅರ್ಚಕನಾಗಿರುವ ನನ್ನ ಗೆಳೆಯ ಚಂದ್ರಪ್ಪ ನಮ್ಮ  ಪಾತೇದೇವರ ದೈವಿಕ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದಾನೆ.ಯುಗಾದಿ ಹಬ್ಬಕ್ಕೆ ‌ಊರಿಗೆ ಹೋದಾಗ ಪಾತೇದೇವರ ಗುಡಿಯ  ಬಾಗಿಲು ಮುಚ್ಚಿತ್ತು.ಎಲ್ಲಿದ್ದನೋ ಗೆಳೆಯ ಕ್ಷಣಾರ್ಧದಲ್ಲಿ ಬಂದು  ಬಾಗಿಲು ತೆರೆದು ನಮ್ಮ ಕುಟುಂಬಕ್ಕೆ ಸ್ವಾಮಿಯ ದರ್ಶನ ಮಾಡಿಸಿ ಪ್ರಸಾದ ಕೊಟ್ಟ. ಅದಕ್ಕಿಂತ ಮಿಗಿಲಾಗಿ ಒಂದು ವಿಶೇಷ ಪುಸ್ತಕದ ಪ್ರಸಾದ ನೀಡಿದ. ಅದು ಪಾತಲಿಂಗೇಶ್ವರ ಸ್ವಾಮಿ ಕುರಿತಾಗಿ ನಮ್ಮೂರ ಕಂಡಕ್ಟರ್ ರಾಮಣ್ಣ ಬರೆದ ಪುಸ್ತಕ. ಅದರಲ್ಲಿ ಸ್ವಾಮಿಯ ಜೀವನ ಮತ್ತು ಪವಾಡಗಳ ಕುರಿತಾದ ಹತ್ತಾರು ಪ್ರಸಂಗಗಳಿವೆ.ಮುಂದೆ ಅವುಗಳ ಬಗ್ಗೆ ತಿಳಿಸುವೆ.ಸ್ವಾಮಿಯ ಕೃಪೆಯಾದರೆ ನಾನು ಪಾತೇದೇವರ ಕುರಿತೊಂದು ಪುಸ್ತಕ ಬರೆಯುವ ಬಯಕೆಯಿದೆ.
ಪಾತೇದೇವರು ನಿಮ್ಮನ್ನು ಹರಸಲಿ..

17 ಮಾರ್ಚ್ 2026

SSLC ವಿದ್ಯಾರ್ಥಿಗಳಿಗೆ ಶುಭವಾಗಲಿ...


 










ಶುಭವಾಗಲಿ ವಿದ್ಯಾರ್ಥಿಗಳೇ..


ಆತ್ಮೀಯ sslc ವಿದ್ಯಾರ್ಥಿಗಳೇ ವರ್ಷ ಪೂರ್ತಿ ಬಹಳ ಚೆನ್ನಾಗಿ ಅಭ್ಯಾಸ ಮಾಡಿರುವಿರಿ.ಪರೀಕ್ಷೆ ಬರೆಯುವ ಕ್ರಮ ಅರಿಯಲು ಒಂದು ಅರ್ಧವಾರ್ಷಿಕ ಪರೀಕ್ಷೆ ಮೂರು ಪೂರ್ವ ಸಿದ್ದತಾ  ಪರೀಕ್ಷೆಗಳನ್ನು ಬರೆದು ನಿಮ್ಮ ಆತ್ಮ ವಿಶ್ವಾಸ ವೃಧ್ದಿಸಿಕೊಂಡಿರುವಿರಿ.ನಾಳೆಯಿಂದ ವಾರ್ಷಿಕ ಮುಖ್ಯ ಪರೀಕ್ಷೆ ಆರಂಭವಾಗುತ್ತಿದೆ.ಇದುವರೆಗೆ ಬರೆದ ಪರೀಕ್ಷೆಯಂತೆ ಈ ಪರೀಕ್ಷೆಯನ್ನು ಬರೆಯಿರಿ ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಬರೆಯಿರಿ. ಯಶಸ್ಸು ಖಂಡಿತವಾಗಿ ನಿಮ್ಮದಾಗಲಿದೆ. 
ಪರೀಕ್ಷೆ ಕೊಠಡಿಯಲ್ಲಿ ನೀವು ಹೇಗೆ ವರ್ತಿಸುತ್ತೀರಿ ಎಂಬುದು ನಿಮ್ಮ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ.

ಇಂದು ನಾನು ಪರೀಕ್ಷೆ ಕೊಠಡಿಯಲ್ಲಿ ನೀವು  ಪಾಲಿಸಬೇಕಾದ ಅಂಶಗಳ ಬಗ್ಗೆ ಕೆಲ  ಸಲಹೆಗಳನ್ನು ನೀಡಬಯಸುವೆ.


ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ಬನ್ನಿ.ಇದರಿಂದಾಗಿ ಲೇಟ್ ಆಗಿ ಬಂದು ನಿಮ್ಮ ಕೊಠಡಿ ದೊರಕದೆ ಉದ್ವೇಗಕ್ಕೆ ಒಳಗಾಗುವುದು ತಪ್ಪುತ್ತದೆ.ಕೊಠಡಿ ಪ್ರವೇಶಕ್ಕೆ ಮುನ್ನ ಅಗತ್ಯ ದಾಖಲೆಗಳಾದ ಹಾಲ್ ಟಿಕೆಟ್ , ಪೆನ್ ,ಪೆನ್ಸಿಲ್, ಜಿಯೋಮೆಟ್ರಿ ಬಾಕ್ಸ್ ಮುಂತಾದವುಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.

ಕೊಠಡಿ ಪ್ರವೇಶಿದ ಕೂಡಲೇ ನೀವು ಕುಳಿತಿರುವ ಜಾಗ ನಿಮ್ಮದೇ ಎಂದು ನಿಮ್ಮ ಹಾಲ್ ಟಿಕೆಟ್ ಹಾಗೂ ಡೆಸ್ಕ್ ಮೇಲೆ ಇರುವ ರಿಜಿಸ್ಟರ್ ನಂಬರ್ ನಿಮ್ಮದೇ ಎಂದು ನೋಡಿಕೊಂಡು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ. ಪರೀಕ್ಷಾ ಕೊಠಡಿಯಲ್ಲಿ ಇತರೆ ವಿದ್ಯಾರ್ಥಿಗಳ ಜೊತೆಯಲ್ಲಿ ಅನವಶ್ಯಕ ಮಾತು ಬೇಡ. ಆರಂಭದ ಐದು ನಿಮಿಷ  ಶಾಂತತೆ ಕಾಪಾಡಿಕೊಂಡು ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ತೆಗೆದುಕೊಂಡು ಉಸಿರು ಬಿಡಿ.


ಈ ಬಾರಿ ಕೊಠಡಿಯಲ್ಲಿ ಮೊದಲು ಪ್ರಶ್ನೆ ಪತ್ರಿಕೆ ನೀಡುವರು ಅದಾಗಿ ಹದಿನೈದು ನಿಮಿಷಗಳ ನಂತರ ಉತ್ತರ ಪತ್ರಿಕೆ ನೀಡುತ್ತಾರೆ.  ಪ್ರಶ್ನೆಪತ್ರಿಕೆಯನ್ನು ಚೆನ್ನಾಗಿ ಓದಿ
ಎಲ್ಲಾ ಪ್ರಶ್ನೆಗಳ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಿ.

ಉತ್ತರ ಪತ್ರಿಕೆ ನೀಡಿದ ಮೇಲೆ ಅದರ ಮೇಲೆ   ನಿಮ್ಮ ರಿಜಿಸ್ಟರ್ ನಂಬರ್ ಸರಿಯಾದ ಜಾಗದಲ್ಲಿ ತಪ್ಪಿಲ್ಲದಂತೆ ಬರೆಯಿರಿ. ಮಾಧ್ಯಮ, ವಿಷಯ, ಮುಂತಾದ ವಿವರಗಳನ್ನು ತಪ್ಪಿಲ್ಲದಂತೆ ಬರೆದು ‌ಕೊಠಡಿ ಮೇಲ್ವಿಚಾರಕರ ಸಹಿ ಪಡೆಯಿರಿ.ನಂತರ
ನಿಮಗೆ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ.
ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಪ್ರತಿ ಪ್ರಶ್ನೆಗೆ ಸರಿಯಾದ ಸಮಯ ಮೀಸಲಿಡಿ.
ಕೊನೆಯಲ್ಲಿ ಉತ್ತರ ಪರಿಶೀಲನೆಗೆ 5–10 ನಿಮಿಷ ಉಳಿಸಿಕೊಳ್ಳಿ.

ನಿಮ್ಮ ಬರವಣಿಗೆ ಸ್ಪಷ್ಟ ಮತ್ತು ಸ್ವಚ್ಛವಾಗಿರಲಿ ಅದು ಮೌಲ್ಯಮಾಪಕರು ಓದುವಂತಿರಲಿ
ನಿಮ್ಮ ಉತ್ತರಪತ್ರಿಕೆಯು ಅನವಶ್ಯಕ ಚಿತ್ತು ಕಾಟುಗಳಿಂದ ಕೂಡಿರದೇ  ನೀಟ್  ಆಗಿರಲಿ.
ಮುಖ್ಯ ಅಂಶಗಳನ್ನು  ಅಂಡರ್ಲೈನ್ ಹಾಕಿ  ಹೈಲೈಟ್ಸ್ ‌ಮಾಡಬಹುದು.ಪ್ರಶ್ನೆ ಸಂಖ್ಯೆಯನ್ನು  ಮತ್ತು ಉಪಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ  ಬರೆಯಿರಿ.
ನೀವೂ ಪರೀಕ್ಷಾ ಕೊಠಡಿಯಲ್ಲಿ ಸಿ ಸಿ ಕಣ್ಗಾವಲಿನಲ್ಲಿ ನೇರಪ್ರಸಾರದಲ್ಲಿ ಇರುವ  ಕಾರಣ ಪರೀಕ್ಷಾ ಅಕ್ರಮಗಳಿಂದ  ದೂರವಿರಿ
ನಕಲು  ಮಾಡುವ ಪ್ರಯತ್ನ ಬೇಡವೇ ಬೇಡ.
ಇದು ನಿಮ್ಮ ಭವಿಷ್ಯಕ್ಕೆ ಹಾನಿಕರ.

ಕೆಲ  ಅರ್ಥವಾಗದ ಪ್ರಶ್ನೆಗಳಿದ್ದರೆ ಆತಂಕ ಬೇಡ
ಗೊತ್ತಿಲ್ಲದ ಪ್ರಶ್ನೆ ಬಂದರೆ ತಕ್ಷಣ ಬಿಟ್ಟು ಮುಂದಿನ ಪ್ರಶ್ನೆಗೆ ಹೋಗಿ. ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬೇಡಿ ಅಂತಹ  ಪ್ರಶ್ನೆಗಳನ್ನು ನಂತರ
ಮತ್ತೆ ಪ್ರಯತ್ನಿಸಿ. ಹೆಚ್ಚುವರಿ ಹಾಳೆ ಬೇಕಾದರೆ ಕೊಠಡಿ ಮೇಲ್ವಿಚಾರಕರನ್ನು ಕೇಳಿ ಪಡೆಯಿರಿ. ಹೆಚ್ಚುವರಿ ಹಾಳೆಯನ್ನು ಮುಖ್ಯ ಉತ್ತರ ಪತ್ರಿಕೆಯ ಜೊತೆಯಲ್ಲಿ ಕಟ್ಟುವುದು ನೆನಪಿರಲಿ. ಗಣಿತದ ವಿಷಯದಲ್ಲಿ ಗ್ರಾಫ್ ಉತ್ತರ ಪತ್ರಿಕೆಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ.ಸಮಾಜ ವಿಜ್ಞಾನ ವಿಷಯದ ದಿನ  ಪ್ರಿಂಟೆಡ್ ಭಾರತದ ಮ್ಯಾಪ್ ಪಡೆದು ಸ್ಥಳಗಳನ್ನು ಪೆನ್ಸಿಲ್ ನಿಂದ ಗುರ್ತಿಸಿ ಮುಖ್ಯ ಉತ್ತರ ಪತ್ರಿಕೆಯಲ್ಲಿ ಒಳಭಾಗದಲ್ಲಿ ಇಟ್ಟು ದಾರದಿಂದ ಕಟ್ಟುವುದನ್ನು ಮರೆಯಬೇಡಿ.

ಪರೀಕ್ಷೆಯ   ಕೊನೆಯ ಹದಿನೈದು ನಿಮಿಷಗಳಲ್ಲಿ ನೀವು ಬರೆದ   ಉತ್ತರಗಳನ್ನು ಪರಿಶೀಲಿಸಿ
ತಪ್ಪುಗಳು, ಬಿಟ್ಟ ಪ್ರಶ್ನೆಗಳು ಇರುವುದನ್ನು ಪರಿಶೀಲಿಸಿ.
ಅಗತ್ಯವಿದ್ದರೆ ತಿದ್ದುಪಡಿ ಮಾಡಿರಿ. ಮುಖ್ಯ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ನಿಗದಿತ ಜಾಗದಲ್ಲಿ   ಎಷ್ಟು ಪುಟಗಳ  ಉತ್ತರ ಬರೆದಿರುವಿರಿ  ಎಂಬ ಮಾಹಿತಿಯನ್ನು ತುಂಬಿ ಕೊನೆಯಲ್ಲಿ ಲಾಂಗ್ ಬೆಲ್ ಆದ ನಂತರ ಕೊಠಡಿ ಮೇಲ್ವಿಚಾರಕರಿಗೆ ನೀಡಿ..

ವರ್ಷ ಪೂರ್ತಿ ಓದಿದ ನೀವು ಅದನ್ನು ಸರಿಯಾಗಿ ಪ್ರಸ್ತುತಪಡಿಸಲು  ಪರೀಕ್ಷೆ ಕೊಠಡಿಯಲ್ಲಿ ಶಿಸ್ತು, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ.ಈ ಮೇಲಿನ ಸಲಹೆಗಳನ್ನು ಪಾಲಿಸಿ ಪರೀಕ್ಷೆ ಬರೆದು ಸಂಭ್ರಮಿಸಿ. ಉತ್ತಮ ಫಲಿತಾಂಶ ನಿಮ್ಮದಾಗಲಿ.ಆಲ್ ದಿ ಬೆಸ್ಟ್...


ಸಿಹಿಜೀವಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ.


#SchoolAnnouncement #Education #SSLCExam #StudentSuccess #ExamTips #AcademicJourney #FutureLeaders #LearningTogether #MotivationalSpeech #ExamPreparation #SuccessMindset #EducationalGoals #StudentMotivation #ClassroomVibes #AcademicExcellence #ParentsGuide #SchoolLife #AchievementUnlocked #ExamsSeason

14 ಮಾರ್ಚ್ 2026

ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!



ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!







ಭೂತಾನ್ ನ ರಾಜಧಾನಿ ಥಿಂಪು ನಗರದ ಏಕೈಕ ಹಿಂದೂ ದೇವಾಲಯದ ದರ್ಶನ ಮಾಡಿದ ನಂತರ ಭೂತಾನ್ ನ ರಾಜರ ಮನೆ ಮತ್ತು ಭೂತಾನ್ ಸಂಸತ್ ನೋಡಲು ಹೊರಟೆವು. ನಮ್ಮ ಭೂತಾನ್ ಪ್ರವಾಸದುದ್ದಕ್ಕೂ ನಮ್ಮ ಗೈಡ್ ತೆಂದಿನ್ ಅಲ್ಲಿನ ರಾಜರ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ರಿದ್ದ.ಹಾಗಾಗಿ ಭೂತಾನ್ ದೊರೆಯ ಅರಮನೆ ನೋಡಲು ನಾನು ಹಾಗೂ ನನ್ನ ಸ್ನೇಹಿತರು ಕಾತುರರಾಗಿದ್ದೆವು.
ಆದರೆ ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಆ ಸ್ಮಾರಕಗಳ ಹತ್ತಿರ ಬಿಡಲಿಲ್ಲ. ದೂರದಿಂದಲೇ ಅಲ್ಲಿನ ಸಂಸತ್ ಹಾಗೂ ರಾಜರ  ಅರಮನೆ ನೋಡಿದೆವು. ವಾಸ್ತವವಾಗಿ ಅದು ಅರಮನೆಯಾಗಿರದೇ ಡಬಲ್ ಬೆಡ್ ರೂಂ‌ನ ಮನೆ ಎಂದು ತಿಳಿದು ರಾಜನ ಸರಳ ಜೀವನ ಕಂಡು ಅವರ ಬಗ್ಗೆ ನನಗೂ ಗೌರವ ಭಾವನೆ ಉಂಟಾಯಿತು. ನಮ್ಮಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದರೆ ಅವರ ವರ್ತನೆ, ದರ್ಪ, ತೋರ್ಪಡಿಸುವ ಗುಣಗಳನ್ನು ಕಂಡಿದ್ದೇವೆ.ಇಡೀ ದೇಶಕ್ಕೆ  ನಾಯಕನಾಗಿರುವ ದೊರೆಯ  ಸರಳ ಜೀವನ ಶೈಲಿ ನಮಗೂ ಅನುಕರಣೀಯ.




ಥಿಂಫು ನಗರದ ಉತ್ತರ ಭಾಗದಲ್ಲಿರುವ ಡೆಚೆಂಚೋಲಿಂಗ್ ಅರಮನೆ ಭೂತಾನ್ ರಾಜಕುಟುಂಬದ ಅಧಿಕೃತ ವಾಸಸ್ಥಳವಾಗಿದೆ. ಅರಮನೆಯ ಸುತ್ತಲೂ ವಿಶಾಲವಾದ ಹಸಿರು ತೋಟಗಳು ಮತ್ತು ಭದ್ರತಾ ವ್ಯವಸ್ಥೆ ಇದೆ. ಸಾಂಪ್ರದಾಯಿಕ ಭೂತಾನಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆ ಬಿಳಿ ಗೋಡೆಗಳು, ಕೆಂಪು ಮೇಲ್ಚಾವಣಿ ಮತ್ತು ನವೀನ ಮರದ ಕೆತ್ತನೆಗಳಿಂದ ಕಂಗೊಳಿಸುತ್ತದೆ.
ಅರಮನೆಯೊಳಗೆ ಪ್ರವೇಶಿಸಲು ಸಾಮಾನ್ಯ ಪ್ರವಾಸಿಗರಿಗೆ ಅವಕಾಶವಿಲ್ಲದಿದ್ದರೂ, ಹೊರಗಿನಿಂದಲೇ ಅದರ ಶಾಂತ ಮತ್ತು ಭವ್ಯ ವಾತಾವರಣ ಗೌರವಭಾವ ಮೂಡಿಸುತ್ತದೆ. ಸ್ಥಳೀಯ ಮಾರ್ಗದರ್ಶಕರು ತಿಳಿಸಿದಂತೆ ಭೂತಾನ್ ರಾಜಮನೆತನ ಜನರೊಂದಿಗೆ ಆಪ್ತ ಸಂಬಂಧ ಹೊಂದಿದೆ. ದೇಶದ ಇಂದಿನ ರಾಜರಾದ ಜನಪ್ರಿಯ ನಾಯಕರೆಂದು ಪರಿಚಿತರು. ಅವರ ಸರಳ ಜೀವನಶೈಲಿ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವದ ಬಗ್ಗೆ ಸ್ಥಳೀಯರು ಹೆಮ್ಮೆಪಡುವುದನ್ನು ನಾನು ಕಂಡೆ.





  ದೊರೆಯ ಮನೆಯ ಮುಂಭಾಗದಲ್ಲಿ ಥಿಂಫು ನಗರದ ಪ್ರಮುಖ ಆಕರ್ಷಣೆಯಾದ ಟಾಶಿಚೋ ಜೋಂಗ್ ಕಟ್ಟಡವು ರಾಜಕೀಯ ಮತ್ತು ಧಾರ್ಮಿಕ ಎರಡೂ ಮಹತ್ವವನ್ನು ಹೊಂದಿದೆ. ಇಲ್ಲಿ ಭೂತಾನ್ ಸರ್ಕಾರದ ಕಚೇರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಕಟ್ಟಡದ ವಿಶಾಲ ಅಂಗಣ, ಸಾಂಪ್ರದಾಯಿಕ ಚಿತ್ರಕಲೆ, ಬೌದ್ಧ ಶೈಲಿಯ ಕಂಬಗಳು ಮತ್ತು ಚಿನ್ನದ ಅಲಂಕಾರಗಳು ಮನಸೆಳೆಯುತ್ತವೆ.
ಭೂತಾನ್ ಸಂಸತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ದೇಶದ ಕಾನೂನುಗಳು ಮತ್ತು ನೀತಿಗಳ ಚರ್ಚೆ ನಡೆಯುತ್ತದೆ. ಸಾಂಪ್ರದಾಯಿಕ ವೇಷಭೂಷಣದಲ್ಲಿ ಸಂಸತ್ ಸದಸ್ಯರು ಭಾಗವಹಿಸುವ ದೃಶ್ಯ, ಆಧುನಿಕ ಆಡಳಿತ ಮತ್ತು ಸಂಸ್ಕೃತಿಯ ಸಮನ್ವಯವನ್ನು ತೋರಿಸುತ್ತದೆ.



ಭೂತಾನ್ ಒಂದು ಸಾಂವಿಧಾನಿಕ ರಾಜಪ್ರಭುತ್ವವಾಗಿದ್ದು  ಸಂಸದೀಯ ಸ್ವರೂಪದ ಸರ್ಕಾರವನ್ನು ಹೊಂದಿದೆ.ಅಲ್ಲಿನ ಪ್ರಸ್ತುತ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಅವರು ಮಾದರಿ ಆಡಳಿತ ನೀಡುತ್ತಿದ್ದಾರೆ. ಅವರಿಗೆ  ಭೂತಾನ್‌ನ ಪ್ರಸ್ತುತ ಪ್ರಧಾನ ಮಂತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ತ್ಶೆರಿಂಗ್ ಟೋಬ್ಗೇ ರವರು ಕೈಜೋಡಿಸಿದ್ದಾರೆ. 2008 ರಲ್ಲಿ ಭೂತಾನ್‌ನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಕಂಡಿತು. 1907 ರಿಂದ ರಾಜಪ್ರಭುತ್ವದೊಂದಿಗಿನ ಅದರ ಸಾಮಾಜಿಕ ಒಪ್ಪಂದದ ವಿಕಸನವೆಂದು ನೋಡಲಾಗುತ್ತದೆ. ವರ್ಲ್ಡ್ ವರ್ಗೀಕರಣದ ಆಡಳಿತಗಳಲ್ಲಿ ವಿ ಡೆಮ್ ಡೆಮಾಕ್ರಸಿ ಸೂಚ್ಯಂಕಗಳ ಪ್ರಕಾರ 2024 ರ ವರ್ಷದಿಂದ ಭೂತಾನ್ ಅನ್ನು ಚುನಾವಣಾ ಪ್ರಜಾಪ್ರಭುತ್ವ ಎಂದು ವರ್ಗೀಕರಿಸಲಾಗಿದೆ.

ಭೂತಾನ್ ನ   ರಾಜಕೀಯ ವ್ಯವಸ್ಥೆಯು ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡುತ್ತದೆ. ಇದು 25 ಚುನಾಯಿತ ಸದಸ್ಯರನ್ನು ಹೊಂದಿರುವ ಮೇಲ್ಮನೆಯಾದ ರಾಷ್ಟ್ರೀಯ ಮಂಡಳಿಯನ್ನು ಮತ್ತು ರಾಜಕೀಯ ಪಕ್ಷಗಳಿಂದ 47 ಚುನಾಯಿತ ಶಾಸಕರನ್ನು ಹೊಂದಿರುವ ರಾಷ್ಟ್ರೀಯ ಸಭೆಯನ್ನು ಒಳಗೊಂಡಿದೆ.
ಕಾರ್ಯನಿರ್ವಾಹಕ ಅಧಿಕಾರವನ್ನು ಪ್ರಧಾನ ಮಂತ್ರಿ ನೇತೃತ್ವದ ಮಂತ್ರಿ ಮಂಡಳಿಯು ಚಲಾಯಿಸುತ್ತದೆ. ಶಾಸಕಾಂಗ ಅಧಿಕಾರವು ಸರ್ಕಾರ ಮತ್ತು ರಾಷ್ಟ್ರೀಯ ಸಭೆ ಎರಡರಲ್ಲೂ ಇರುತ್ತದೆ. ನ್ಯಾಯಾಂಗ ಅಧಿಕಾರವು ನ್ಯಾಯಾಲಯಗಳಲ್ಲಿದೆ. ಕಾನೂನು ವ್ಯವಸ್ಥೆಯು ಅರೆ-ದೇವಪ್ರಭುತ್ವವಾದಿ ತ್ಸಾ ಯಿಗ್ ಸಂಹಿತೆಯಿಂದ ಹುಟ್ಟಿಕೊಂಡಿದೆ ಮತ್ತು 20 ನೇ ಶತಮಾನದಲ್ಲಿ ಇಂಗ್ಲಿಷ್ ಸಾಮಾನ್ಯ ಕಾನೂನಿನಿಂದ ಪ್ರಭಾವಿತವಾಗಿದೆ . ಮುಖ್ಯ ನ್ಯಾಯಾಧೀಶರು ನ್ಯಾಯಾಂಗದ ಆಡಳಿತ ಮುಖ್ಯಸ್ಥರಾಗಿದ್ದಾರೆ.
ಅಸೆಂಬ್ಲಿಗೆ ಮೊದಲ ಸಾರ್ವತ್ರಿಕ ಚುನಾವಣೆಗಳು ಮಾರ್ಚ್ 24, 2008 ರಂದು ನಡೆದವು. ಜಿಗ್ಮೆ ಥಿನ್ಲೆ ನೇತೃತ್ವದ ಭೂತಾನ್ ಶಾಂತಿ ಮತ್ತು ಸಮೃದ್ಧಿ ಪಕ್ಷ (ಡಿಪಿಟಿ) ಮತ್ತು ಸಂಗಯ್ ನ್ಗೆಡಪ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಪ್ರಮುಖ ಸ್ಪರ್ಧಿಗಳಾಗಿದ್ದವು. ಡಿಪಿಟಿ 47 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಪಡೆದು ಚುನಾವಣೆಯಲ್ಲಿ ಗೆದ್ದಿತು. ಜಿಗ್ಮೆ ಥಿನ್ಲೆ 2008 ರಿಂದ 2013 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
2013 ರ ಚುನಾವಣೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದಿತು. ಅದು 32 ಸ್ಥಾನಗಳನ್ನು ಮತ್ತು 54.88% ಮತಗಳನ್ನು ಗಳಿಸಿತು. ಪಿಡಿಪಿ ನಾಯಕಿ ತ್ಸೆರಿಂಗ್ ಟೋಬ್ಗೆ 2013 ರಿಂದ 2018 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
೨೦೧೮ ರ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರು. ಲೋಟೇ ತ್ಶೆರಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಮತ್ತು ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅವರನ್ನು ಮೊದಲ ಬಾರಿಗೆ ಸರ್ಕಾರಕ್ಕೆ ಕರೆತಂದರು. 
2024 ರ ಚುನಾವಣೆಯ ನಂತರ ಪಿಡಿಪಿ 30 ಸ್ಥಾನಗಳನ್ನು ಗಳಿಸುವುದರೊಂದಿಗೆ ಟೋಬ್ಗೆ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬಂದು ಪ್ರಸ್ತುತ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ನಮ್ಮ ಗೈಡ್ ಮಾಹಿತಿ ನೀಡಿದರು.ಭೂತಾನ್ ‌ನ ಸಂಸತ್ತು ಮತ್ತು ದೊರೆಯ ಬಗ್ಗೆ ಗೌರವ ಭಾವದಿಂದ ಆ ಪ್ರದೇಶದಿಂದ ಹೊರ ನಡೆದು ಭೂತಾನ್ ನ ಇತರೆ ಸ್ಥಳಗಳನ್ನು ಅನ್ವೇಷಣೆ ಮಾಡಲು ಹೊರಟೆವು.


ಭಾರತದ ನೆರೆಯ ದೇಶವಾದ ಭೂತಾನ್ ನ ಪ್ರಕೃತಿ ಸೌಂದರ್ಯ ಸವಿದಿದ್ದ ನಾವು ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಸಂಸತ್ತಿನ ರಚನೆಯ ಬಗ್ಗೆ ತಿಳಿದು ಭೂತಾನ್ ಬಗ್ಗೆ ಇದ್ದ ಗೌರವ  ಇಮ್ಮಡಿಯಾಯಿತು.ನೀವೂ ಭೂತಾನ್ ಪ್ರವಾಸಕ್ಕೆ ಬಂದರೆ ಭೂತಾನ್ ಸಂಸತ್ ಮತ್ತು ದೊರೆಯ ಮನೆ ನೋಡಲು ಮರೆಯದಿರಿ.

ಸಿಹಿಜೀವಿ ವೆಂಕಟೇಶ್ವರ.
ತುಮಕೂರು
9900925529


BhutanTour #KingPalace #Sihijeevi #Sihijeeviya #Payana #TravelBhutan #ExploreBhutan #BhutanAdventures #PalaceTour #CulturalExperience #HimalayanJourney #BhutanDiaries #TouristAttractions #BhutanTravel #DiscoverBhutan #TravelVlog #AdventureTravel #NatureLovers #BucketListTravel

02 ಮಾರ್ಚ್ 2026

ನಮ್ಮ ಟೀಮ್ ಇಂಡಿಯಾ ನಮ್ಮ ಹೆಮ್ಮೆ.


 


ಟಾಸ್ ಗೆದ್ದಾಗಲೇ ನಾವು ಗೆದ್ದಾಗಿತ್ತು.ಹಿಡಿಯುವ ಕ್ಯಾಚ್ ಗಳನ್ನು ನೆಲಕ್ಕೆ ಹಾಕಿದ್ದು ತೂತ್ ಫೀಲ್ಡಿಂಗ್ ಮಾಡಿ ಕನಿಷ್ಟ 25 ಹೆಚ್ಚು ರನ್ ಕೊಟ್ಟಾಗ ನನಗೆ ನಮ್ಮ ಟೀಮ್ ಮೇಲೆ ಕೋಪ ಬಂದಿದ್ದು ನಿಜ.ಆದರೆ ನಾವು ಪಕ್ಕಾ ಚೇಸಿಂಗ್ ಮಾಸ್ಟರ್ಸ್ ಎಂಬುದನ್ನು ಇಡೆನ್ ಗಾರ್ಡನ್ ‌ನಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದೇವೆ.ಸಂಜು ಸಾಮ್ ಸನ್ ರ ಜವಾಬ್ದಾರಿಯುತ ಆಟಕ್ಕೆ ಮೆಚ್ಚುಗೆ ಸೂಚಿಸಲೇಬೇಕು ಆಫ್ ಕೋರ್ಸ್ ಈ ಗೆಲುವಿಹೆ  ತಂಡದ ಎಲ್ಲರೂ ತಮ್ಮ  ಯೋಗದಾನ ನೀಡಿರುವರು.ಇದೇ ಆತ್ಮವಿಶ್ವಾಸದಿಂದ ಆಂಗ್ಲರನ್ನು ಜಯಿಸೋಣ.ಮತ್ತೆ ಓವರ್ ಕಾನ್ಫಿಡೆನ್ಸ್ ಬೇಡ.ಪ್ರತಿ ಓವರ್ ನಲ್ಲಿ ಉತ್ತಮವಾಗಿ ಆಡೋಣ.ಸೇಮೀಸ್ ಅಷ್ಟೇ ಅಲ್ಲ ಪೈನಲ್ ನಲ್ಲೂ ಗೆಲ್ಲೋಣ.ಈ ಸಲನೂ ಕಪ್ ನಮ್ದೇ...
ಅಭಿನಂದನೆಗಳು ಟೀಮ್ ಇಂಡಿಯಾ ಇನ್ ಅಡ್ವಾನ್ಸ್...
ನೀವೂ ವಿಶ್ ಮಾಡಬಹುದು..
#T20WorldCup #ICC #BCCi #TeamIndia #SihijeeviyaPayana #CricketFever #IndiaCricket #T20Cricket #WorldCup2023 #CricketHighlight #GoIndia #SupportIndia #InternationalCricket #CricketLife #SportsHighlights #PlayBold #ChaseYourDreams #CricketPassion #BlueArmy


ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ

 

ಮಂತ್ರಮುಗ್ದಗೊಳಿಸುವ ಮೇಘಾಲಯದ  ಉಮ್ಮಿಯಾಮ್ ಸರೋವರ




ಈಶಾನ್ಯ ರಾಜ್ಯಗಳನ್ನು ನೆನೆದರೇನೊ ಪುಳಕ. ಬಹು ಕಾಲದಿಂದ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡಬೇಕೆಂಬ ಕನಸು ಕೊನೆಗೂ ನನಸಾಗಿತ್ತು. ಅಸ್ಸಾಂನ  ಗುವಾಹಟಿ ನಗರದಿಂದ ನಮ್ಮ ಪ್ರವಾಸ ತಂಡದೊಂದಿಗೆ ಹೊರಟ ನಾವು ಮೇಘಾಲಯದ ಪ್ರಕೃತಿ ಸೌಂದರ್ಯ ಸವಿಯಲು ಸಿದ್ದವಾಗಿತ್ತು. ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಚಲಿಸಲು ಸೂಕ್ತವಾದ ಎರಡು ಟೆಂಪೋ ಟ್ರಾವೆಲರ್ಸ್‌‌ ಏರಿ ಉತ್ತಮ ರಸ್ತೆಯಲ್ಲಿ ನಮ್ಮ ಪಯಣ ಮುಂದುವರೆಯಿತು. ರಸ್ತೆಯ ಎಡಬಲಗಳಲ್ಲಿ ಕಾಣುವ ದೃಶ್ಯಗಳನ್ನು ಸವಿಯುತ್ತಾ ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಕಂಡ ಮೊದಲ ಸ್ವರ್ಗ ಸದೃಶ ತಾಣವೇ ಉಮಿಯಾಮ್ ಸರೋವರ!



ಮೊದಲ ಬಾರಿಗೆ ಕೇಳಿದಾಗ ನನಗೂ ಈ ಸ್ಥಳದ ಉಚ್ಚಾರಣೆ ವಿಚಿತ್ರ ಎನಿಸಿದರೂ ಅದರ  ಅದ್ಭುತ ದೃಶ್ಯಗಳನ್ನು ನಾನು ಕಣ್ತುಂಬಿಕೊಂಡಾಗ ಬಣ್ಣದ ಚಿತ್ರಗಳು ಈಗಲೂ ನನ್ನ ನೆನಪಿನ ಕೋಶದಲ್ಲಿ ಅಚ್ಚಳಿಯದೇ ಉಳಿದಿವೆ. 
ಶಿಲ್ಲಾಂಗ್ ನಗರಕ್ಕೆ ಹೋಗುವ ದಾರಿಯಲ್ಲಿ ಬೆಟ್ಟಗಳ ನಡುವೆ ನೀಲಿ ಬಣ್ಣದಲ್ಲಿ ಮಿನುಗುತ್ತಿರುವ ಉಮಿಯಾಮ್ ಸರೋವರದ ಮೊದಲ ನೋಟವೇ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಸ್ಥಳೀಯರು ಇದನ್ನು “ಬಾರಾ ಪಾನಿ” ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ‌ಇದೊಂದು   ವಿಶಾಲವಾದ ಮಾನವ ನಿರ್ಮಿತ  ನೀರಿನ ಸಾಗರ!

ನಗರದಿಂದ ಸುಮಾರು 15 ಕಿಮೀ ದೂರದಲ್ಲಿ ಹರಡಿಕೊಂಡಿರುವ ಈ ಜಲಾಶಯವನ್ನು 1960ರ ದಶಕದಲ್ಲಿ  ಅಣೆಕಟ್ಟು ನಿರ್ಮಿಸಿ ಸೃಷ್ಟಿಸಲಾಗಿದೆ. ಬೆಟ್ಟಗಳು, ಹಸಿರು ಕಾಡುಗಳು ಮತ್ತು ನೀರಿನ ನೀಲಿ ಪ್ರತಿಬಿಂಬ  ಇವುಗಳ ಸಮನ್ವಯವು ಈ ಸ್ಥಳವನ್ನು ಸ್ವರ್ಗಸಮಾನವಾಗಿಸುತ್ತದೆ.
ಬೆಳಿಗ್ಗೆ ಹೊತ್ತು ಸರೋವರದ ತೀರದಲ್ಲಿ ನಿಂತಾಗ ಮಂಜಿನ ಚಾದರ ನೀರಿನ ಮೇಲೆ ಹರಡಿಕೊಂಡ  ಸೂರ್ಯೋದಯದ ಕಿರಣಗಳು ನೀರಿನ ಮೇಲೆ ಬಂಗಾರದ ಹಚ್ಚನ್ನು ಹಚ್ಚಿದಂತೆ ಕಾಣುವ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆ ಕ್ಷಣದಲ್ಲಿ ಕಾಲವೇ ನಿಂತಂತಾಯಿತು.




ಸ್ಥಳೀಯ ಮಾರ್ಗದರ್ಶಕನಿಂದ ತಿಳಿದುಕೊಂಡಾಗ ಈ ಸರೋವರದ ಹಿಂದೆ ಒಂದು ದೊಡ್ಡ ಕಥೆಯಿದೆ ಎಂದು ಅರಿತುಕೊಂಡೆ.  ಈ ಲೇಕ್  ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾದ ಈಶಾನ್ಯ ಭಾರತದ ಮೊದಲ ಮಹತ್ವದ ಜಲಾಶಯ ಯೋಜನೆಗಳಲ್ಲಿ ಒಂದಾಗಿದೆ.
ಒಮ್ಮೆ ಇಲ್ಲಿ ಖಾಸಿ ಸಮುದಾಯದ ಗ್ರಾಮಗಳು ನೆಲೆಸಿದ್ದವು. ಅಣೆಕಟ್ಟು ನಿರ್ಮಾಣದಿಂದಾಗಿ ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಯಿತು. ಈ ವಿಚಾರ ತಿಳಿದಾಗ ಪ್ರಕೃತಿ ಸೌಂದರ್ಯದ ಹಿಂದೆ ಇರುವ ಮಾನವ ಕುಲದ ಮನ ಕಲಕುವ  ಕಥೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿದವು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡುವುದು ಈಗಲೂ ಮುಂದುವರೆದಿರುವುದನ್ನು ಕಾಣುತ್ತೇವೆ.




ಉಮಿಯಾಮ್ ಸರೋವರ ಪ್ರವಾಸಿಗರಿಗೆ ಕೇವಲ ದೃಶ್ಯ ಸೌಂದರ್ಯವಲ್ಲ  ಸಾಹಸಕ್ಕೂ ಪ್ರಸಿದ್ಧ ಎಂದು ನಮ್ಮ ಟೂರ್ ಗೈಡ್ ಬೆಳಿಗ್ಗೆ ಹೇಳಿದ್ದ ಮಾತು ಕೇಳುತ್ತಾ  ನಾನು ಕಯಾಕಿಂಗ್ ಮಾಡಲು ನಿರ್ಧರಿಸಿದ್ದೆ. ನೀರಿನ ಮಧ್ಯೆ ತೇಲುತ್ತಾ ಬೆಟ್ಟಗಳ ನಡುವೆ ನನ್ನ ಸಣ್ಣ ದೋಣಿ ಸಾಗುತ್ತಿದ್ದ ಕ್ಷಣವನ್ನು ಕಲ್ಪಿಸಿಕೊಂಡು ಮನದಲ್ಲೇ ಖುಷಿ ಪಟ್ಟಿದ್ದೆ ಆದರೆ ಆ ಸ್ಥಳಕ್ಕೆ ಹೋದಾಗ ನನ್ನ ಆಸೆ ಈಡೇರದೇ ಭ್ರಮನಿರಸನಗೊಂಡೆ.
ವಾಟರ್ ಸೈಕ್ಲಿಂಗ್, ಬೋಟ್ ರೈಡ್, ಸ್ಕೂಟಿಂಗ್  ಎಲ್ಲವೂ ಇಲ್ಲಿ ಲಭ್ಯ. ಕುಟುಂಬ ಸಮೇತ ಬಂದ ಪ್ರವಾಸಿಗರು ಹರ್ಷದಿಂದ ಕಾಲ ಕಳೆಯಲು ಅವಕಾಶವಿದೆ ಅದರೆ ನಮ್ಮ ದುರಾದೃಷ್ಟಕ್ಕೆ ಅಂದು ಆ ಎಲ್ಲಾ ಜಲಕ್ರೀಡೆಗಳನ್ನು ಬಂದ್ ಮಾಡಿದ್ದರು.ಆದರೆ ಪ್ರಕೃತಿ ಸೌಂದರ್ಯ ಬಂದ್ ಮಾಡಲು ಸಾಧ್ಯವೆ? ಇನ್ನಷ್ಟು ನಿಸರ್ಗದ ದೃಶ್ಯಗಳನ್ನು ನನ್ನ ಮನದಲ್ಲಿ ತುಂಬಿಕೊಂಡು ಆನಂದಿಸಿದೆ.


ಮಾಮೂಲಿನಂತೆ ನಾವು ಮಾನವರು ಸುಂದರ ತಾಣಗಳನ್ನು ಸುಂದರವಾಗಿರಲು ಎಲ್ಲಿ ಬಿಟ್ಟಿದ್ದೇವೆ?  ಈ ಸುಂದರ ಸರೋವರವೂ ಸವಾಲುಗಳನ್ನು ಎದುರಿಸುತ್ತಿದೆ. ನಗರದ ವೃದ್ಧಿಯಾಗುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸರೋವರಕ್ಕೆ ಸೇರುವ ವಾಹ್ ಉಮ್ಖ್ರಾ ಮತ್ತು ವಾಹ್ ಉಮ್ಶಿರ್ಪಿ ನದಿಗಳು ನಗರ ಒಳಚರಂಡಿಯನ್ನು ತರುತ್ತಿವೆ ಎಂದು ತಿಳಿದು ಬೇಸರವಾಯಿತು.
ಮೊದಲು ಡೀಸೆಲ್ ಚಾಲಿತ ದೋಣಿಗಳನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು.
2023ರಲ್ಲಿ ಮೇಘಾಲಯ ಸರ್ಕಾರ ಸೌರಶಕ್ತಿ ಚಾಲಿತ AI ದೋಣಿಯನ್ನು ನಿಯೋಜಿಸಿದೆ ಎಂಬುದು ಆಶಾದಾಯಕ ಸುದ್ದಿ ಕೇಳಿ ಸಂತಸವಾಯಿತು. ಈ ನವೀನ ಪ್ರಯತ್ನವು ಸರೋವರದ ಸ್ವಚ್ಛತೆಯನ್ನು ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ.





ಸಂಜೆ ಸಮಯದಲ್ಲಿ ಸರೋವರದ ಲೇಕ್ ವ್ಯೂ ಪಾಯಿಂಟ್‌ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಕಾಶ ಕೆಂಪು-ಕಿತ್ತಳೆ ಬಣ್ಣಗಳಿಂದ ತುಂಬಿಕೊಂಡ. ನೀರಿನ ಮೇಲಿನ ಪ್ರತಿಬಿಂಬ ಚಿತ್ರಕಾರನ ಕಲಾಕೃತಿಯಂತೆ ಕಾಣುತ್ತದೆ. ಇದು ಕೇವಲ ಜಲಾಶಯವಲ್ಲ. ಇದು ಪ್ರಕೃತಿಯ ಮಹತ್ವದ ಪಾಠ. ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ ಎಂಬ ಸಂದೇಶ ಈ ಸರೋವರ ನೀಡುತ್ತದೆ.

ಉಮಿಯಾಮ್ ಸರೋವರ ಪ್ರವಾಸವು ನನಗೆ ಪ್ರಕೃತಿಯ ಸೌಂದರ್ಯ, ಇತಿಹಾಸದ ಸ್ಪರ್ಶ ಮತ್ತು ಪರಿಸರ ಜಾಗೃತಿ ಮೂರನ್ನೂ ಒಟ್ಟಿಗೆ ನೀಡಿದ ಅನುಭವ ನೀಡಿತು. ಮೇಘಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಸ್ಥಳವನ್ನು ತಪ್ಪದೇ ನೋಡಬೇಕು ಎಂದು ನಾನು ಮನಪೂರ್ವಕವಾಗಿ ಸಲಹೆ ನೀಡುತ್ತೇನೆ.
ಬೆಟ್ಟಗಳ ನಡುವೆ ಮೌನವಾಗಿ ಮಲಗಿರುವ ಆ ನೀಲಿ ಸರೋವರ ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿಯೇ ಇರುತ್ತದೆ. ಆ ತಾಣದಲ್ಲಿ  ನಾನು ಮಿಸ್ ಮಾಡಿಕೊಂಡ ವಾಟರ್ ಸ್ಪೋರ್ಟ್ಸ್ ಆಡಲು ಮತ್ತು ಸನ್ ಸೆಟ್ ನೋಡಲು ಮತ್ತೊಮ್ಮೆ ಉಮ್ಮಿಯಾಮ್ ಸರೋವರಕ್ಕೆ ಹೋಗಲು ನನ್ನ ಮನ ಹಾತೊರೆಯುತ್ತಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಫೆಬ್ರವರಿ 2026

ಪೋಷಕರೇ ದಯವಿಟ್ಟು ಗಮನಿಸಿ...


 ಪೋಷಕರೇ ದಯವಿಟ್ಟು ಗಮನಿಸಿ...



ಇತ್ತೀಚಿಗೆ ಹತ್ತನೇ  ಓದುವ ಮಗುವಿನ   ಪೋಷಕರ ಮನೆಗೆ ಭೇಟಿ ನೀಡಿದಾಗ ತಂದೆಯು   ಅವರ ಮಗನ ಬಗ್ಗೆ ಮಾತನಾಡುತ್ತಾ ದಿನವೂ ಮಗ ಹಣ ಕೇಳುತ್ತಾನೆ.ಬೈಕ್ ಕೊಡಿಸು ಎನ್ನುತ್ತಾನೆ.ಮೊಬೈಲ್ ನಲ್ಲಿ ಸದಾ ಮುಳುಗಿರುತ್ತಾನೆ ಎಂಬ ದೂರುಗಳನ್ನು ನೀಡುತ್ತಾ ನೀವಾದರೂ ಬುದ್ದಿ ಹೇಳಿ ಸರ್ ನಮ್ಮ ಮಾತುಗಳನ್ನು ಕೇಳೊಲ್ಲ.ನಮ್ಮ ಎದುರಿಗೆ ಮಾತನಾಡುತ್ತಾನೆ ಎಂದು ಕಂಪ್ಲೇಂಟ್ ಲಿಸ್ಟ್ ನೀಡಿದರು.ಹೌದು ನಾನು ಇತ್ತೀಚಿನ ದಿನಗಳಲ್ಲಿ ಬಹುತೇಕ ಪೋಷಕರ ಕಡೆಯಿಂದ ಅವರ ಮಕ್ಕಳ ‌ಬಗ್ಗೆ ಹೆಚ್ಚು ಕಡಿಮೆ ಇಂತವೇ ದೂರುಗಳನ್ನು ಸ್ವೀಕರಿಸುವುದು ಮಾಮೂಲಾಗಿದೆ.ನಿಮಗೂ ಈ ಅನುಭವವಾಗಿರಬಹುದು.

ಹತ್ತನೇ ತರಗತಿಯವರೆಗೆ ಶಾಲೆಗಳಲ್ಲಿ ಬೆಳಗಿನ ಅವಧಿಯಲ್ಲಿ ರಾಗಿ ಮಾಲ್ಟ್, ಮಧ್ಯಾಹ್ನ ಮೊಟ್ಟೆ ಬಾಳೆ ಹಣ್ಣಿನ ಜೊತೆಯಲ್ಲಿ ಬಿಸಿಯೂಟ ಹಾಗೂ ಕೆಲವೆಡೆ ಸಂಜೆಯೂ ವಿವಿಧ ಕಾಳುಗಳ ಸ್ನಾಕ್ಸ್ ನೀಡುತ್ತಾರೆ. ಮತ್ತೇಕೆ ಮಕ್ಕಳಿಗೆ ‌ಹಣ? ಆದರೂ ಕೆಲ ಪೋಷಕರು ಮಕ್ಕಳಿಗೆ ಅವರು ಕೇಳದಿದ್ದರೂ ಅಗತ್ಯ ಇಲ್ಲದಿದ್ದರೂ ಹಣ ನೀಡುವುದು ಕಂಡುಬರುತ್ತದೆ.
ಮಕ್ಕಳಿಗೆ ಪೋಷಕರಾದ ನಾವು ಬಾಲ್ಯದಲ್ಲೇ ಆರ್ಥಿಕ ಸಾಕ್ಷರತೆಯ ಪಾಠ ಹೇಳಿಕೊಡಬೇಕಿದೆ. ಆದರೆ   ಬಹುತೇಕ ಪೋಷಕರು ತಮ್ಮ ಬಾಲ್ಯದ ಅನುಭವದ ಆಧಾರದ ಮೇಲೆ ನಮಗೆ ಇದ್ದ ಕಷ್ಟ ನಮ್ಮ ಮಕ್ಕಳಿಗೆ ‌ಇಲ್ಲ ಆದ್ದರಿಂದ ಹಣ ಕೊಡುವೆ ಎಂದು ಅನವಶ್ಯಕವಾಗಿ ಹಣ ನೀಡಿ ದುಂದುವೆಚ್ಚಮಾಡಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಇನ್ನೂ ಕೆಲ ಪೋಷಕರು ನಾನು ಚಿಕ್ಕವನಿದ್ದಾಗ ನನಗೆ ಸೈಕಲ್ ಗತಿ ಇರಲಿಲ್ಲ ನನ್ನ ಮಗ ಬೈಕ್ ಓಡಿಸಲಿ ಎಂದು‌ ಎಂಟು ಒಂಭತ್ತು ಓದುವ ಮಕ್ಕಳಿಗೆ  ಬೈಕ್ ನೀಡುವರು ಹತ್ತಕ್ಕೆ ಬಂದಾಗ  ಮಗು ಬೇರೆ ಬ್ರಾಂಡ್ ಬೈಕ್ ಗೆ ಡಿಮಾಂಡ್ ಮಾಡದೇ ಮತ್ತೆನು ಮಾಡಿಯಾನೂ? ಇನ್ನೂ ಮೊಬೈಲ್ ಕಥೆ ಹೇಳುವುದೇ ಬೇಡ ವರ್ಷದ ಮಗುವಿನ ಕೈಗೆ ಮೊಬೈಲ್ ನೀಡಿ ಊಟ ಮಾಡಿಸುವ ಎಷ್ಟೋ ಪೋಷಕರಿದ್ದರೆ.ಇನ್ನೂ ಕೆಲ ಪೋಷಕರು ತಮ್ಮ ಮಕ್ಕಳ ಮೊಬೈಲ್ ಗೀಳನ್ನು ಬೇರೆಯವರ ಬಳಿ ಪಾಸಿಟೀವ್ ಆಗಿ ನನಗೇ ಮೊಬೈಲ್ ಬಳಸಲು ಬರಲ್ಲ ನನ್ನ ಮಗ ನೋಡಿ ಎಷ್ಟು ಚೆನ್ನಾಗಿ ಬಳಸ್ತಾನೆ ಎಂದು ಕೊಚ್ಚಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆದ ಮೇಲೆ ಊರು ಹಾಳಾದ ಮೇಲೆ‌ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಶಿಕ್ಷಕರು ಮಕ್ಕಳ ತಿದ್ದಲಿ ಎಂದು ಅಲವತ್ತುಕೊಂಡರೆ ಏನು ಉಪಯೋಗ.

ಇದಕ್ಕೆ ಪರಿಹಾರ ಪೋಷಕರ ನಡೆಗಳಲ್ಲೇ ಇದೆ.
ಮೊದಲು ‌ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಲಿ. ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವುದನ್ನು ನಿಲ್ಲಿಸಲಿ  ಮಕ್ಕಳಿಗೆ ಹಣದ ಬೆಲೆ ತಿಳಿಸಿಕೊಡಬೇಕು‌
ಅದಕ್ಕೆ ‌ಈ‌ ಕೆಳಗಿನ ಸರಳ ಸಲಹೆ ಪಾಲಿಸಿದರೆ ಒಳಿತು.

ದಿನವೂ ಎಷ್ಟು ಖರ್ಚು ಮಾಡಿದ್ದೀರಿ ಎಂದು ಬರೆಯಲು ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ.ತಿಂಗಳ ಅಂತ್ಯದಲ್ಲಿ ವಿಶ್ಲೇಷಿಸಿ.ಅನಗತ್ಯ ಖರ್ಚುಗಳು ಯಾವವು? ಎಂಬುದರ ಕಡೆ ಗಮನ ಸೆಳೆದು ಮುಂದಿನ ದಿನಗಳಲ್ಲಿ ಅವುಗಳನ್ನು ನಿಯಂತ್ರಿಸಲು‌ ತಿಳಿಸಿ.
ಉಳಿಸಿದ ಒಂದು ರೂಪಾಯಿ ಗಳಿಸಿದ ರೂಪಾಯಿಗೆ ಸಮ ಎಂಬ ಪಾಠವನ್ನು ಹೇಳಿ   ವಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಲು ಪ್ರೋತ್ಸಾಹ ಮಾಡಿ. ಇದಕ್ಕೆ ಪಿಗ್ಗಿ ಬ್ಯಾಂಕ್ ‌ಅಥವಾ ಬ್ಯಾಂಕ್ ಗಳಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ‌ಕೊಡಿ. ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಹಾಲು ನೀಡಲಾಗುತ್ತದೆ. ಕಾಲೇಜಿನ ಮಕ್ಕಳು
ಕಾಲೇಜ್ ಕ್ಯಾಂಟೀನ್  ನಲ್ಲಿ ಅನವಶ್ಯಕ ತಿನ್ನುವುದು ಹಾಗೂ  ಫಾಸ್ಟ್ ಫುಡ್ ಮೇಲೆ ವಿಪರೀತ ಖರ್ಚು ಮಾಡುವುದನ್ನು  ನಿಯಂತ್ರಿಸಿ.ಮನೆ ಊಟ ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆ ಎಂಬುದನ್ನು ಮನದಟ್ಟು ಮಾಡಿಕೊಡಿ.ಮಕ್ಕಳ ಕೈಗೆ ಫೋನ್ ಕೊಟ್ಟಾಗ  ಆಫರ್  ನೋಡಿ ಖರೀದಿ ಮಾಡದಂತೆ ಮಕ್ಕಳಿಗೆ ಮನವರಿಕೆ ಮಾಡಿಕೊಡಿ  ಅಗತ್ಯವೇ ಎಂದು ಕೇಳಿಕೊಳ್ಳಿ. ತೀರ ಅಗತ್ಯವಾಗಿ ಬೇಕಾದ ವಿಶ್ ಲಿಸ್ಟ್  ಮಾಡಿ 48 ಗಂಟೆ ನಂತರ ಖರೀದಿ ನಿಯಮ ಅನುಸರಿಸಿ.ಏಕೆಂದರೆ ಕೆಲವೊಂದು ವಸ್ತುಗಳು ಮೊದಲು ಬೇಕಿನಿಸಿ ನಿಧಾನವಾಗಿ ಯೋಚಿಸಿದಾಗ ಆ ವಸ್ತು ಅನಗತ್ಯ ಎನಿಸಬಹುದು.
ಮಕ್ಕಳಿಗೆ ಬೈಕ್ ಕೊಡಿಸುವ ಬದಲಿಗೆ ಸೈಕಲ್ ‌ಕೊಡಿಸಿ.  ಅಗತ್ಯವಿದ್ದರೆ ಬಸ್ ಪಾಸ್ ಅಥವಾ ಸ್ಟೂಡೆಂಟ್ ಪಾಸ್ ಬಳಸಲು  ಬಳಸಲು ಪ್ರೇರೇಪಿಸಿ.

ಒಟ್ಟಾರೆ ಯುವ ಜನಾಂಗಕ್ಕೆ ಆಗಾಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ಮೂಲಕ ದುಂದುವೆಚ್ಚ ಕಡಿಮೆ ಮಾಡಬಹುದು. ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಕಡಿಮೆ ಮಾಡಿ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕಿದೆ.ಈ ನಿಟ್ಟಿನಲ್ಲಿ ಹಲ ದೇಶಗಳಲ್ಲಿ ಹದಿಹರೆಯದ ಮಕ್ಕಳಿಗೆ ಮನನ ಮೊಬೈಲ್ ಬಳಕೆಗೆ ಕೆಲ ನಿರ್ಬಂಧಗಳನ್ನು ಹೇರಿರುವುದು ಸ್ವಾಗತಾರ್ಹ.ನಮ್ಮ ರಾಜ್ಯದಲದಲ್ಲೂ ಇಂತಹ ಚಿಂತನೆ ಶುರವಾಗಿರುವುದು ಸ್ವಾಗತಾರ್ಹ.ನಮ್ಮ ಮಕ್ಕಳು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಲು ಸಂಸ್ಕಾರವಂತರಾಗಲು ಪೋಷಕರ ಪಾತ್ರ ಬಹಳ ಮುಖ್ಯ ನಾವು ಜವಾಬ್ದಾರಿಯುತ ಪೋಷಕರಾಗೋಣ.ಇದಕ್ಕೆ ಸಮಾಜ ಮತ್ತು ಸರ್ವರ ಸಕಾಲಿಕ ಬೆಂಬಲವೂ ಅಗತ್ಯ.

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900025529

ಸಿಹಿಜೀವಿಯ ಹನಿ.


 

ಇತರರ ಬಗ್ಗೆ ಕೆಟ್ಟದಾಗಿ ಮಾತಾಡುವವರ ಜೊತೆಯಲ್ಲಿ ಕುಳಿತುಕೊಳ್ಳಬೇಡ| ನೀ ಎದ್ದು ಹೋದ ಕ್ಷಣವೇ ನಿನ್ನ ಬಗ್ಗೆ ಕೆಟ್ಟ ಮಾತು ಶುರು ನೋಡಾ||

ಸಿಹಿಜೀವಿ ವೆಂಕಟೇಶ್ವರ


16 ಫೆಬ್ರವರಿ 2026

ಜನಪದರ ಕಣ್ಣಲ್ಲಿ ಕಮ್ಮಾರ ಕಲ್ಲಯ್ಯ


 ಜನಪದರ ಕಣ್ಣಲ್ಲಿ  ಕಮ್ಮಾರ ಕಲ್ಲಯ್ಯ


ಕುರಿತೋದದೆಯುಂ ಕಾವ್ಯ ಪ್ರಯೋಗ ಮತಿಗಳ್  ಎಂದು ಕವಿರಾಜಮಾರ್ಗಕಾರ ವರ್ಣಿಸಿರುವಂತೆ ನಮ್ಮ ಜನಪದರು ನಮಗೆ ‌ಜ್ಞಾನದ ಆಗರ. ಲಿಖಿತ ದಾಖಲೆಗಳಿರದ ಸಂದರ್ಭಗಳಲ್ಲಿ ಇವರ ಮೌಖಿಕ ಆಕರಗಳೇ ನಮಗೆ ಆಧಾರ.
ಶರಣ ಕಲ್ಲಯ್ಯ ರವರ ಬಗ್ಗೆ ತಿಳಿಯಲು ನಮಗೆ ಜನಪದರ ಹಾಡುಗಳು ಪ್ರಮುಖ ಆಕರವಾಗಿವೆ.

'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು.  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಆತ್ಮೀಯರಾದ  ಮಂಜುನಾಥ್ ರವರು ಶರಣ ಕಲ್ಲಯ್ಯ ರವರ ಬಗ್ಗೆ ರಚಿತವಾದ ಜನಪದ ಗೀತೆಯ ಲಿಂಕ್ ಕಳಿಸಿದ್ದರು ಅದನ್ನು ಕೇಳಿದಾಗ ಶರಣ ಕಲ್ಲಯ್ಯನವರ ಬಗ್ಗೆ  ಒಂದು ಲೇಖನ ಬರೆಯಬೇಕು ಎಂಬ ಮನಸಾಯಿತು ಅದರ ಫಲವೇ ಈ ಲೇಖನ





ಓಂ ಶ್ರೀ ಗುರು ಬಸವಲಿಂಗಾಯ ನಮಃ ಜನಪದರ ಕಂಡ ಕಮ್ಮಾರ ಕಲ್ಲಯ್ಯ ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಶರಣು ಶರಣೆಲೆ ಬಸವ ಕರುಣದಲಿ ಕಾಪಾಡು ಧರಣೀಯ ಶರಣ ಗಣಕಟ್ಟಿ ಧರಣೀಯ ಶರಣ ಗಣಕಟ್ಟಿ ಬಯಲಾದಿ ಶರಣರ ನೆನೆವೆ ನಾನೆದ್ದು ಎಂದು ಆರಂಭವಾಗುವ ಈ ಗೀತೆಗಳು ಶರಣ ಕಲ್ಲಯ್ಯನವರ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.

ಶರಣರ ನೆನೆವೆ ನಾನೆದ್ದು ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ಮುತಗಿಯ ಕಲ್ಲಯ್ಯ ಸುತ್ತೂರು ಕಮ್ಮಾರ ನಿತ್ಯ ಕಾಸುನು ಕಬ್ಬಿಣ ನಿತ್ಯ ಕಾಸುನು ಕಬ್ಬಿಣ ವಕ್ಕಲಿಗೆ ಬಿತ್ತು ಉತ್ತು ಕೆಲಸಗಾರೆಕೆ ಬಿತ್ತು ಉತ್ತೋ ಕೆಲಸಗಾರೇಕೆ ಸಣ್ಣ ಗುಡಿಸಲ ಮುಂದ ಮಣ್ಣಿನ ಒಲೆ ಹೂಡಿ ಸಣ್ಣ ಗುಡಿಸಲ ಮುಂದೆ ಮಣ್ಣಿನ ಒಲೆ ಹೂಡಿ ತಣ್ಣಗಾಳಿ ಊದೋ ಕುಲುಮೆಯ ತಣ್ಣಗಾಳಿ ಊದೋ ಕುಲುಮೆಯ ಇಟ್ಟಕೊಂಡು ಮಣ್ಣಿಗೆ ಬೆವರ ಸುರಿಸೋನು ಎಂದು ಅವರ ವೃತ್ತಿಯ ಬಗ್ಗೆ  ಹೇಳಿದ್ದಾರೆ.

ಮಣ್ಣಿಗೆ ಬೆವರ ಸುರಿಸೋನು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಎತ್ತು ಎದ್ದು ಬೇಗನೆ ನಿತ್ಯ ಸಿದ್ದ ಕಾಳಿಯ ನೆನೆದು ಶುದ್ಧ ಕಾಯಕವ ಮಾಡುತ್ತ ಶುದ್ಧ ಕಾಯಕವ ಮಾಡುತ್ತ ಕಲ್ಲಯ್ಯ ಇದ್ದ ಅನುಭಾವ ಹೇಳ್ಯನ ಎಂಬ ಕಾಯಕ ತತ್ವ ನೆನಪಿಸುತ್ತದೆ.

ಇದ್ದ ಅನುಭಾವ ಹೇಳ್ಯಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಮನೆಯಲ್ಲಿ ಬಡತಾನ ಮನದಲ್ಲಿ ಸಿರಿತಾನ ಗುಣದಲ್ಲಿ ಗಣ್ಯ ಗುರುತನದ ಗುಣದಲ್ಲಿ ಗಣ್ಯ ಗುಣತನದ ಕಲ್ಲಯ್ಯ ಜನರಲ್ಲಿ ಬೆರೆತಾ ದಿನ ಜನನಲ್ಲಿ ಬೆಳೆತಾ ದಿನ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಎಡಗೈಲಿ ಇಕ್ಕಳ ಬಲಗೈಲಿ ಬಗ್ಗಸ ಬರಿಮೈಲಿ ಕುಳಿತು ಬಡಿವನು. ಎಂದು ಬಡತನವಿದ್ದರೂ ಜನರೊಂದಿಗೆ ಬೆರೆತು ಬೆಳೆದರು.


ಬರಿಮೈಲಿ ಕುಳಿತು ಬಡಿವನು ಕಬ್ಬಿಣ ಉಲಿಮೆಗೆ ಬೇಕಾದ ಕುಡುಮುಂಜಿ ಉಲುಮೆಗೆ ಬೇಕಾದ ಕುಡುಮುಂಜಿ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ಕಲ್ಲಯ್ಯನ ಹೆಂಡತಿ ಕಾಳವೆ ತಿದಿಗಾರ ತಾಳ ಹಾಕಿದಂಗ ತಿಳಿಯುದಿ ತಾಳ ಹಾಕಿದಂಗ ತಿಳಿಯುದಿ ಕಲ್ಲಯ್ಯ ಬಾಳ ಬೀಸಣಕಿ ಆಗ್ಯಾಳ ಬಾಳ ಬೀಸಣಕಿ ಎಂದು ಅವರ ಸತಿಯ ಬಗ್ಗೆ  ಮಾಹಿತಿ ನೀಡಿದ್ದಾರೆ.

ಆಗ್ಯಾಳ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಗಂಡು ಗಚ್ಚಿಯ ಹಾಕಿ ಚಂಡಿಯಂತೆ ನಿಂತಾಕೆ ಕೊಂಡ ಸುತ್ತಿಗೆ ಯ ಹಣಿವಾಳು ಕೊಂಡು ಸುತ್ತಿಗೆಯ ಹಣಿವಾಳು ಕಾಸಿದ್ದು ಗಂಡ ತೋರಿಸಿದಂಗ ಕೈಸನ್ನೆ ಗಂಡ ತೋರಿಸಿದಂಗ ಕೈಸನ್ನೆ ಸುತ್ತೂರು ಆಳುಗಳು
ಹೊತ್ತಂದ ದಿಂಡಿಗೆ ಸುತ್ತೂರು ಆಳುಗಳು ಹೊತ್ತಂದ ದಿಂಡಿಗೆ ಎತ್ತಿನ ಗಾಡಿಗಳಿಗೆಲ್ಲ ಎತ್ತಿನ ಗಾಡಿಗಳಿಗೆಲ್ಲ ಕಲ್ಲಯ್ಯ ಮುತ್ತಿನಂಗ ಬಳೆ ತುಳಿಸುವನು ಮುತಿನಂಗ ಬಳೆ ತೊಡಿಸುವನು ಎಂದು ಕಾವ್ಯಾತ್ಮಕವಾಗಿ ಕಲ್ಲಯ್ಯನ ಕೆಲಸಕ್ಕೆ ಅವರ ಸತಿ ಕೈಗೂಡಿಸಿದ  ಬಗ್ಗೆ  ವರ್ಣನೆ ಮಾಡಿರುವರು.

ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ಕಾಯಕ ಮಾಡುತ್ತ ಸ್ವಾಯತವ ನುಡಿಯುತ್ತ ನಾಯಕರ ಸುದ್ದಿ ಹೇಳುತ್ತ ನಾಯಕರ ಸುದ್ದಿ ಹೇಳುತ್ತ ಕಲ್ಲಯ್ಯ ಹಾಯಾಗಿದ್ದಾನ ಊರಲ್ಲಿ ಹಾಯಾಗಿದ್ದಾನ, ಊರಲ್ಲಿ ಮೂತಾಳ ಕೂರಿಗೆ ಪ್ರೀತಿಲೇ ಬಳೆತೊಳಿಸಿ ಮೂತಾಳ ಊರಿಗೆ ಪೀತಿಲೆ ಬಳೆತೊಳಿಸಿ ಭೂತಾಯಿ ಬೆಳೆಯ ಬೆಳೆಸೆಂದು ಭೂತಾಯಿ ಬೆಳೆಯ ಬೆಳೆಸೆಂದು ಒಕ್ಕಲಿಗೆ ತಾತಾಳ ಹಿಡಿದು ನಿಡಿಯುವನು ತಾತಾಳ ಹಿಡಿದು ನೀಡುವನು ಕಡೆತಾಳ ಆಯರಿಗೆ ಅಡತಾಳ ಅರಸಂಗೆ ಕಡೆತಾಳ ಆಯರಿಗೆ ಎಡತಾಳ ಅರಸಂಗೆ ನಡುತಾಳ ನಿನ್ನ ಕರ್ಮಕ್ಕೆ ನಡುತಾಳ ನಿನ್ನ ಕರ್ಮಕ್ಕೆ ಎಂದಹೇಳಿ ಕೊಡುವ ಕೂರಿಗೆ ಯವಕ್ಕಲಿಗೆ ಕೊಡುವ ಕೂರಿಗೆ ಯಾವ ಒಕ್ಕಲಿಗೆ ಮಮತೆಯ ಮಾತಿಂದ ನಿಜತೆಯ ನಿಲುವಿಂದ ಮಮತೆಯ ಮಾತಿಂದ ನಿಜತೆಯ ನೆಲುವಿಂದ ಘನತೆಯ ದುಡಿಮೆ ನಲಿವಿಂದ ಘನತೆಯ ದುಡಿಮೆ ನಲಿವಿಂದ ಕಲ್ಲಯ್ಯ.

ಕಲ್ಲಯ್ಯ ಕಾಯಕದ ಜೊತೆಯಲ್ಲಿ ಬಾಂಧವ್ಯ ಬೆಸೆಯುವ, ಊರಿಂದೂರಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿಯೂ ಕಾರ್ಯ ಮಾಡಿದ್ದರು ಎಂಬುದನ್ನು ಈ ಮುಂದಿನ ಪದ ತಿಳಿಸುತ್ತದೆ.

ಜನತೆಗೆ ಬೇಕಾದ ಶರಣಾದ ಜನತೆಗೆ ಬೇಕಾದ ಶರಣಾದ ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು ಹತ್ತೂರು ಸುದ್ದಿಯನ್ನು ಮುತ್ತೂರು ಮಾತನ್ನು
ಬಿತ್ತಿ ಬೆಳೆವವರ ಬಗೆಯನ್ನು ಬಿತ್ತಿ ಬೆಳೆಯವರ ಬಗೆಯನ್ನು ಕಲ್ಲಯ್ಯ ಎತ್ತಿ ಹೇಳುತಲಿ ಕಬ್ಬಿಣ ಎತ್ತು ಹೇಳುತವ ಕಬ್ಬಿಣ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆ ಬಂದ ವ್ಯಾಳಕ ಕಣಕಣಕೆ ಹೋಗುತ್ತ ಬೆಳೆದ ಕಾಳಕಡ್ಡಿ ತರುವನು ಎಂಬ ಮಾತಲ್ಲಿ ಹಿಂದಿನ ಕಾಲದಲ್ಲಿ ರೈತನಿಗೆ ವ್ಯವಸಾಯಕ್ಕೆ  ಸಹಾಯ ಮಾಡುವ ಕುಲಸ್ತರಿಗೆ ಕಾಳು ಕಡಿ ನೀಡುವ ವ್ಯವಸ್ಥೆ ಕಾಣಬಹುದು.

ಬೆಳೆದ ಕಾಳಕಡ್ಡಿ ತರುವನು ಕಲ್ಲಯ್ಯ ಗುಳಿ ಮಾಡಿಡುವ ಸಂಸಾರಕೆ ಗುಳಿ ಮಾಡಿಡುವ ಸಂಸಾರಕೆ ತಂದೆಲ್ಲ ಕಾಳನ್ನು ತಂದೆಗೆಂದು ಬಗೆಯದೆ ತಂದೆಲ್ಲ ಕಾಳನ್ನು ತಂದೆಂದು ಬಗೆಯದೆ ನೊಂದ ಬಡವರಿಗೆ ಕೊಡುವನು ನೊಂದ ಬಡವರಿಗೆ ಕೊಡುವನು ಊರಲ್ಲಿ ಒಂದಾಗಿ ನಡೆದ ಎಡಬಡಕೆ ಒಂದಾಗಿ ನಡೆದ ಎಡೆಬಲಕೆ ಗುಮ್ಮ ಶಿವ ಶರಣಾಗಿ ಹುಮ್ಮದಿ ದುಡಿಯುತ್ತ ಗುಮ್ಮ ಶಿವ ಶರಣಾಗಿ ಹುಮ್ಮನದಿ ದುಡಿಯುತ್ತ ಕಮ್ಮೆಲರಾದ ಶಿವಪದಕೆ ಕಮ್ಮೆಲರಾದ ಶಿವಪದಕೆ ಕಲ್ಲಯ್ಯ ಕಮ್ಮಾರ ಕಟ್ಟೆ ಕಮ್ಮಟಕೆ ಕಮ್ಮಾರ ಕಟ್ಟೆ ಕಮ್ಮಟಕೆ ಕುಲುಮೆಟ್ಟಿಗೆ ಬರುವ ಬಲಹೀನ ಜನರಿಗೆ ಕುಲುಮೆಟ್ಟಿಗೆ ಮೆಟ್ಟಿಗೆ ಬರುವ ಬಲಹೀನ ಜನರಿಗೆ ನಲುಮೆಯ ಮಾತು ಹೇಳುತ್ತ ನಲುಮೆಯ ಮಾತು ಹೇಳುತ್ತ ಬಾಳಲ್ಲಿ ಬಲ್ಮೆ ತುಂಬುವ.
ನೋಡಿ ಕಲ್ಲಯ್ಯ ತಾನು ಪಡೆದ ದವಸದಲ್ಲಿ ಇತರರಿಗೂ ನೀಡಿ ಅನ್ಯೋನ್ಯವಾಗಿ ಬಾಳಿ ಶಿವಶರಣರ ತತ್ವಗಳನ್ನು ಎತ್ತಿ ಹಿಡಿದಿದ್ದರು.

ಬದುಕಿಗೆ ಬಲ್ಮೆ ತುಂಬುವ ಬದುಕಿಗೆ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ಜಗದೊಳಗೆ ಕಲ್ಲಯ್ಯ ಮಗುವಂತೆ ಮಾತಾಡಿ ನಗುನಗುತಾ ದುಡಿದು ಊರಲ್ಲಿ ನಗುನಗುತಾ ದುಡಿದು ಊರಲ್ಲಿ ಬಯಲಾಗ ಹಗಲಿರಳು ಜನರ ನಡುವಲ್ಲಿ ಹಗಲಿರುಳು ಜನರ ನಡುವಲ್ಲಿ ಕಲ್ಯಾಣ ಬಸವಣ್ಣ ಕಾರುಣ್ಯ ಪಥವನು ಕಲ್ಯಾಣ ಬಸವನ ಕಾರುಣ್ಯ ಪಥವನು ದಾರಿ ಹೋಕರಿಂದ ತಿಳಿದಾನ ದಾರಿ ಹೋಕರಿಂದ ತಿಳಿದಾನ ಕಲ್ಲಯ್ಯ ಎಲ್ಲರಿಗೆ ತಿಳಿಸಿ ನಲಿದಾನ ಎಲ್ಲರಿಗೆ ತಿಳಿಸಿ ನಲಿದಾನ ಬಸವನ ಕಾಣುವ ವ್ಯಸನದಲಿ ಕಲ್ಲ ಬಸವನ ಕಾಣುವ ವ್ಯಸನದಲಿಕಲ್ಲ ತುಸುಹೊತ್ತು ಚಿಂತೆ ಮಾಡ್ಯಾನ ತುಸುಹೊತ್ತಿ ಚಿಂತೆ ಮಾಡಯಾನ.ಎಂಬ ಮಾತಲ್ಲಿ ಕಲ್ಲಯ್ಯ ಬಸವೇಶ್ವರರ ಬಗ್ಗೆ ಮಾಹಿತಿಯನ್ನು ತಿಳಿದು ಅವರನ್ನು ಕಾಣಲು ಹಂಬಲಿಸಿದ ಮಾಹಿತಿ ತಿಳಿಯುತ್ತದೆ.

ಸೊನ್ನಲಿಗೆಯ ಸಿದ್ದರಾಮ ರ ಭೇಟಿಯಾದ ಬಗೆಯನ್ನು ‌ಮುಂದಿನ ಪದ ನೀಡುತ್ತದೆ.

ಜನರಲ್ಲಿ ಹೊಸಮತ ಸುದ್ದಿ ತಿಳಿಸಯಾನ ಹೊಸಮತದ ಸುದ್ದಿ ತಿಳಿಸಯಾನ ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ಬರಗಾಲ ಬಂದಿತ್ತು ಉಳಿಗಾಲ ಕಷ್ಟಿತ್ತು ವರತೆಯ ನೀರುಬ ಬತ್ತಿತ್ತು ವರತೆಯ ನೀರು ಬತ್ತಿತ್ತು ಜನರೆಲ್ಲ ಸರತಿಯಲಿ ಗುಳಿವು ಹೊರಟಿತ್ತು ಜನರೆಲ್ಲ ಸರತಿಯಲಿ ಗುಳೆವು ಹೊರಟಿತ್ತು ಎಲ್ಲಿಗೆ ಹೋಗುವುದೆಂದು ಬಲ್ಲವರ ಒಳಗೂಡಿ ಎಲ್ಲಿ ಹೋಗುವುದೆಂದು ಬಲ್ಲವರ ಒಡೆಗೂಡಿ ಕಲ್ಲಯ್ಯ ಚಿಂತೆ ಮಾಡ್ಯಾನ ಕಲ್ಲಯ್ಯ ಚಿಂತೆ ಮಾಡ್ಯಾನ ಗುಡಿ ಮುಂದ ಸೊನ್ನಲಿಗೆ ಸ್ವಾಮಿ ಬಂದಾನ ಸೊನ್ನಲಗಿ ಸ್ವಾಮಿ ಬಂದಾನ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಮುಂದಿತ್ತು ಗುಡಿಯಾಗ ಗಂಧ ಬಸಿತ ಹಚ್ಚಿ ಬಂದ ಜಳೆಬಿಟ್ಟು ಸನ್ಯಾಸಿ ಬಂದ ಜಳೆಬಿಟ್ಟ ಸನ್ಯಾಸಿ ಜನರಿಗೆ ಅಂದು ಶರಣೆಂದು ನಿಂತಾನ. ಅಂದು ಶರಣೆಂದು ನಿಂತಾನ ಕಲ್ಯಾಣ ಬಸವನ ಮಹಿಮೆಯ ಹೇಳುತ್ತ ಕಲ್ಯಾಣ ಬಸವ ನ ಮಹಿಮೆಯ ಹೇಳುತ್ತ ಎಲ್ಲವನು ತಿಳಿಸಿ ನಿಂತಾನ ಎಲ್ಲವನು ತಿಳಿಸಿ ನಿಂತಾನ ಸೊನ್ನಲಗಿ ಶಿವಸಿದ್ದರಾಮನ ಕಾರ್ಯವ ಶಿವಸಿದ್ದರಾಮನ ಕಾರ್ಯವ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಗುರುಮಲ್ಲಿನಾಥನ ವರಶಿಷ್ಯ ಸಿದ್ದೇಶ ಬರದಲ್ಲು ಕೆಲಸ ಕೊಟ್ಟಾನ ಬರದಲ್ಲು ಕೆಲಸ ಕೊಟ್ಟಾನ ದುಡಿವ ವರಿಗೆ ಚರದೇವ ಎನಿಸಿಕೊಂಡಾನ ಚರದೇವ ಎನಿಸಿಕೊಂಡಾನ ಒಡ್ಡರ ಪಡೆಯುಂಟು ಗುಡ್ಡಾರ ಗುಂಪುಂಟು ಒಡ್ಡಾರ ಪಡೆಯುಂಟು ಗುಡ್ಡಾರ ಗುಂಪುಂಟು ಪಡ್ಡೆ ಜನರು ಸೇರಿ ನಿಂತಾರ ಪಡ್ಡೆ ಜನ ಸೇರಿ ನಿಂತಾರ ಸಿದ್ದೇಶ ಮಡ್ಡಿ ಹೊಲದಲ್ಲಿ ಮಡಿಹೂಡಿ ಮಡ್ಡಿ ಹೊಲದಲ್ಲಿ ಮನೆಹೂಡಿ ಕಾಯಕಜೀವಿ ವಿಗೆ ನಾಯಕ ಸಿದ್ದೇಶ.
ಕಾಯಕ ಜೀವಿಗೆ ನಾಯಕ ಸಿದ್ದೇಶ ಸಾಯಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಸಾಕಕ ಜನರ ಬದುಕಿಗೆ ಕೆರೆಕಟ್ಟಿ ಪಾಯ ಹಾಕ್ಯಾನೆಂದು ಸನ್ಯಾಸಿ ಪಾಯ ಹಾಕ್ಯಾನೆಂದ ಸನ್ಯಾಸಿ ಕನ್ನಡದ ಕಲ್ಯಾಣದ ಮಹಿಮೆಯ ಕೇಳಿದ ಕಲ್ಲಯ್ಯ ಕಲ್ಯಾಣದ ಮಹಿಮೆಯ ಕೇಳಿದ್ದ ಕಲ್ಲಯ್ಯ ಎಲ್ಲ ಮಾಹಿತಿಯ ತಿಳಿದಾನ ಎಲ್ಲ ಮಾಹಿತಿಯ ತಿಳಿದಾನ ಸಮಯದಿ ಬಲ್ಲ ಸನ್ಯಸಿಯ ನುಡಿಯಲ್ಲಿ ಬಲ್ಲ ಸನ್ಯಾಸಿಯ ನುಡಿಯಲ್ಲಿ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಬರಗಾಲ ಬಿಸಿಲಿಂದ ನೆರಳು ಹುಳುಕಾಕಾಗ ಮರವೊಂದು ಕಂಡಂತೆ ಬಿಸಿಲಲ್ಲಿ ಮರವೊಂದು ಕಂಡಂತೆ ಬಿಸಿಲಲ್ಲಿ ಕಲ್ಲಯ್ಯ ಹೊರಟ ಸೊನ್ನಲಿಗೆ ಕಡೆಗಾನ ಹೊರಟ ಸೊನ್ನಲಿಗೆ ಕಡೆಗಾಗ ಕಾಳಿಕಾಂಬೆಯ ಭಕ್ತ ಕಾಳವೆ ಜೊತೆಯಲ್ಲಿ ಬಾಳ ಕಟ್ಟಲು ನಡೆದ ಗೊಂಟೋತು ಬಾಳ ಕಟ್ಟಲು ನಡೆದ ಗಂಟೋತು ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸಿದ್ದೇಶನ ಮೇಳದಲ್ಲಿ ಸೇರಿ ಶರಣಾದ ಸೊನ್ನಲಗಿ ಊರಲ್ಲಿ ಮನೆಯ ಸಿದ್ದರಾಮ ಕನ್ನಲಿಗೆ ಊರಲ್ಲಿ ಮನೆಯ ಸಿದ್ದರಾಮ ಹೊನ್ನ ಕಳಸಿಟ್ಟು ಗುಡಿಕಟ್ಟಿ ಹೊನ್ನ ಕಳಸಿಟ್ಟು ಗುಡುಕಟ್ಟಿ ಕೆರೆಕಟ್ಟಿದ್ದ ಧನ್ಯ ಶಿವ ತಾನಾಗಿ ಮೆರೆದ ಇದ್ದ ಧನ್ಯಶಿವನಾಗಿ ಮೆರೆದಿದ್ದ ಊರ ಹಳ್ಳದ ಮುಂದೆ ನೂರಾರು ಒಡ್ಡರು ಊರ ಹಳ್ಳದ ಮುಂದೆ ನೂರಾರು ಒಡ್ಡರು ಹಾರೆಗುದಲೆ ಹಿಡಿದು ದುಡಿಯೋದು ಹಾರೆಗುದಲೆ ಹಿಡಿದು ದುಡಿಯೋದು ಕಂಡಾನ ದೂರದಲಿ ಬರುತಾ ಕಲ್ಲಯ್ಯ ದೂರದಲಿ ಬರುತಾ ಕಲ್ಲಯ್ಯ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕೆರೆಯ ದಂಡೆಯ ಮೇಲೆ ಹಿರಿದಾದ ಶಿವಲಿಂಗ ಕರೆ ಮುಗಿದು ನಿಂತ ಸಿದ್ದೇಶ ಕರೆ ಮುಗಿದು ನಿಂತ ಸಿದ್ದೇಶ ಶರಣನ ಹರನಂತೆ ಕಂಡು ಕೈಮುಗಿದ ಹರನಂತೆ ಕಂಡು ಕೈಮುಗಿದ ದರ್ಶನಕ್ಕೆ ಬಂಧನವ ಹರುಷದಿ ಮಾತಾಡಿ ದರ್ಶನಕ್ಕೆ ಬಂಧನವ ಹರುಷದಿ ಮಾತನಾಡಿಸಿ ಗುರುತು ಪರಿಚಯ ಕೇಳಿದನ ಗುರುತು ಪರಿಚಯ ಕೇಳಿದನ ಸಿದ್ದರಾಮ ವರ್ಷವೆಲ್ಲ ದಾರಿ ಕಾಯ್ದಂತೆ ವರ್ಷವೆಲ್ಲ ದಾರಿ ಕಾದಂತೆ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ತಾನು ಮಾಡುವ ಕೆಲಸ ಕೂನ ಹೇಳಿದ ಕಲ್ಲ ಮೌನಾಗಿ ಎಲ್ಲ ತಿಳಿದಾನ ಮೌನಾಗಿ ಎಲ್ಲ ತಿಳಿದಾನ ಸಿದ್ದೇಶ ತಾಣ ತೋರ್ಯಾನ ಕೆಲಸಕ್ಕ ತಾಣ ತೋರ್ಯಾನ ಕೆಲಸಕ್ಕ ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ನೋಟದಲಿ ಕಲ್ಲನ ನೀಟ ಕಾರ್ಯ ತಿಳಿದು ಊಟೋಪಚಾರ ಮಾಡಿಸಿ ಊಟೋಪಚಾರ ಮಾಡಿಸಿ ಕಲ್ಲೆಗೆ ಕೂಟಸ್ಥ ಕೆಲಸ ಒಪ್ಪಿಸಿದ ಕೂಟಸ್ತ ಕೆಲಸ ಒಪ್ಪಿಸಿದ ಬೊಮ್ಮಯ್ಯ ಗಣದಲ್ಲಿ ಸಿಮ್ಮಲಿಗೆ ಶರಣರು ಬೊಮ್ಮಯ್ಯನ ಗಣದಲ್ಲಿ ಸಿಮ್ಮಲಿಗೆ ಶರಣರು ಕಮ್ಮಾರ ಕಲ್ಲಯ್ಯ ಸೇರ್ಯಾರ.

ಕಲ್ಲಯ್ಯ ನಾಡ ಶಿಲ್ಪಿಯಾಗಿ ಬೆಳೆದ ಪರಿಯನ್ನ ಜನಪದರು ಹೀಗೆ ಹಾಡಿದ್ದಾರೆ.
ಕಮ್ಮಾರ ಕಲ್ಲಯ್ಯ ಸೇರ್ಯಾರ ದಿನನಿತ್ಯ ಹಮ್ಮಿಲೆ ಕೆಲಸ ಮಾಡ್ಯಾರ ಹಮ್ಮಿಲೆ ಕೆಲಸ ಮಾಡ್ಯಾರ ಶಿಲ್ಪತನ ವಿದ್ಯೆಯ ಸಂಗಡ ಬಂದಿತ್ತು ಶಿಲ್ಪತನವಿ ವಿದ್ಯೆಯು ಸಂಗಡ ಬಂದಿತು ಕಲ್ಪಿತಾಯುತವ ರಚಿಸುತ ಕಲ್ಪಿತಾಯುಧವ ರಚಿಸುತ ಕಲ್ಲಯ್ಯ ಶಿಲ್ಪಿ ಸಿದ್ದೇಶನ ಮನಗೆದ್ದ ಶಿಲ್ಪಿ ಸಿದ್ದೇಶನ ಮನಗೆದ್ದ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ಗುರುಮಲ್ಲಿಕಾರ್ಜುನನ ಮೆರೆಸುವ ಹಬ್ಬದಲಿ ವರಸಿಸಿದ್ದರಾಮಗೆ ಜೊತೆಯಾದ ವರ ಸಿದ್ದರಾಮಗೆ ಜೊತೆಯಾದ ಕಲ್ಲಯ್ಯ ಬರದಿಂದ ಕೆಲಸ ಮಾಡಿದ.

ಬರದಿಂದ ಕೆಲಸ ಮಾಡಿದ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಸಿದ್ದರಾಮನ ಗಣದ ಶುದ್ಧ ಶಿಷ್ಯರಲ್ಲಿ ಎದ್ದು ಕಂಡ ಶರಣ ಕಲ್ಲಯ್ಯ ಎದ್ದು ಕಂಡ ಶರಣ ಕಲ್ಲಯ್ಯ ದಿನನಿತ್ಯ ಶುದ್ಧ ಕಾಯಕ ಹೆಸರಾದ ಶುದ್ಧ ಕಾಯಕ ಹೆಸರಾದ ಕುಲವರತಿಯಲಿಕಲ್ಲ ಛಲದಂಕ ಮಲ್ಲ ಕುಲವರತಿಯಲಿಕಲ್ಲ ಚಲದಂಕ ಮಲ್ಲನು ಒಲವಿಂದ ದುಡಿದ ಹಗಲಿರುಳು.
ಒಲವಿಂದ ದುಡಿದ ಹಗಲಿರುಳು ಸಿದ್ದೇಶನ ಬಲಗಯ್ಯ ಭಂಟ ತಾನಾದ ಬಲಗಯ್ಯ ಭಂಟ ತಾನಾದ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ಮಾಡಿ ಕುಸುರಿ ಕೆಲಸ ನೀಡುತ್ತ ಕರಿಚಿನ್ನ ನಾಡ ಶಿಲ್ಪಿ ಎಂದು ಹೆಸರಾದ.

ನಾಡ ಶಿಲ್ಪಿ ಎಂದು ಹೆಸರಾದ ಕಲ್ಲಯ್ಯ ನೋಡಿ ಹೊಗಳಿದ ಸಿದ್ದೇಶ ನೋಡಿ ಹೊಗಳಿದ ಸಿದ್ದೇಶ ದೇವರಥ ಶಿಲ್ಪದಲಿ ಜೀವನದ ಕೀಲಿಟ್ಟು ದೇವರಥ ಶಿಲ್ಪದಲಿ ಜೀವನ ಕೀಲಿಟ್ಟು ಕಾವಲಾಗಿ ನಿಂತ ಜಾತ್ರೆಯಲಿ ಕಾವಲಾಗಿ ನಿಂತ ಜಾತ್ರೆಯಲಿ ಕಲ್ಲಯ್ಯ ಸೇವೆ ಮಾಡಿದ ಜನ ಮೆಚ್ಚುವಂತೆ ಸೇವೆ ಮಾಡಿದ ಜನ ಮೆಚ್ಚುವಂತೆ ಕಲ್ಲಯ್ಯ ಮುಂದಾಗಿ ಬುಲ್ಲೇಶ ಹಿಂದಾಗಿ ಕಲ್ಲಯ್ಯ ಮುಂದಾಗಿ ಬಿಲ್ಲೇಶ ಹಿಂದಾಗಿ ಪಲ್ಲಕ್ಕಿ ಹೊತ್ತು ನಡೆದಾರ ಪಲ್ಲಕ್ಕಿ ಹೊಡೆತು ನಡೆದಾರ ಮಡಿಹಾಸಿ ಎಲ್ಲಾ ಜನ ನಿಂತು ನಮಿಶಾರ ಎಲ್ಲಾ ಜನ ನಿಂತು ನಮಿಶಾರ ಜಯಜ ಜಯ ಎನ್ನುತ್ತ ಜೈಕಾರ ಹಾಕ್ಯಾರ ಜಯ ಜಯ ಎನ್ನುತ್ತ ಜೈಕಾರ ಹಾಕೆರ ಜಯ ಮಲ್ಲಿನಾಥ ಎನುತೆಲ್ಲ ಜಯ ಮಲ್ಲಿನಾಥ ಎನುತೆಲ್ಲ ಜನಸೇರಿ ಜಯಸಿದ್ದೇಶ್ವರ ಎಂದಾರ ಜಯಸಿದ್ದೇಶ್ವರ ಎಂದಾರ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಹಾಲುಗ್ಗಿ ಹೋಳುಗಿ ಮ್ಯಾಲೆ ಬದನಿ ಪಲ್ಯ ಸಾಲಾಗಿ ಕುಂತ ಜನಕೆಲ್ಲ ಸಾಲಾಗಿ ಕುಂತ ಜನಕೆಲ್ಲ ಉಣಶಾರ.
ಮ್ಯಾಲೆ ಹುಳಿಬಾನ ನೀಡುತ್ತ ಮ್ಯಾಲೆ ಹುಳಿಬಾನ ನೀಡುತ್ತ.

ಶ್ರಿಶೈಲಕ್ಕೆ ಪಾದಯಾತ್ರೆ ಹೊರಟ ಕಲ್ಲಯ್ಯನ ಸಂಭ್ರಮವನ್ನು ಈ ಮುಂದಿನಂತೆ ವರ್ಣಿಸಲಾಗಿದೆ.
ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಉರುಳಯಾವ ದಿನಗಳು ಮರಳಿತು ಸಂಕ್ರಾಂತಿ ಹೊರಳಿತು ಹೊತ್ತು ಚಿಗುರೆಡೆಗೆ ಹೊರಳಿತು ಹೊತ್ತು ಚಿಗುರೆಡೆಗೆ ಶ್ರೀಶೈಲಗೆ ತೆರಳಲು ನಿಂತಾರ ಭಕ್ತರು ಶ್ರೀಶೈಲೆಗೆ ತೆರಳ ಲು ನಿಂತಾರ ಭಕ್ತರು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ನಂಬಿ ಮಲ್ಲಯ್ಯಗ ಶಂಭು ಶಂಕರನೆಂದು ಕಂಬಿ ಜೊತೆ ಹೊರಟ ಕಲ್ಲಯ್ಯ ಕಂಬಿಜ ಕಂಬಿ ಜೊತೆ ಹೊರಟ ಕಲ್ಲಯ್ಯ ದೊಂದುಬೆ ಹೊರಟಂಗ ಹೂಕಡೆಗೆ ದುಂಬಿ ಹೊರಟಂಗ ಹೂಕಡೆಗೆ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಪರ್ವತದ ಮಲ್ಲಯ್ಯ ನಿರುತದಿ ಕಾಯ್ಯ ಬರುತೀವಿ ನಿನ್ನ ದರ್ಶನಕ ಬರುತೀವಿ ನಿನ್ನ ದರ್ಶನಕ ಎನ್ನುತ ಬೆರೆತೋದ ಕಲ್ಲಯ್ಯ ಭಕ್ತರನು ಬೆರೆತೋದ ಕಲ್ಲಯ್ಯ ಭಕ್ತರನು ನಿತ್ಯ ದಾರಿ ನಡೆದು ಹೊತ್ತು ಹೋದಲ್ಲಿ ಉಳಿದು ನಿತ್ಯ ದಾರಿಯ ನಡೆದು ಹೊತ್ತು ಹೋದಲ್ಲಿಉಳಿದು ಸತ್ಯಶಿವ ನೆನೆದು ಸಾಗ್ಯಾರ ಸತ್ಯಶಿವ ನೆನೆದು ಸಾಗ್ಯಾರ ದಾರಿಯಲ್ಲಿ ಸುತ್ತ ಸುತ್ತಹುಬಳ್ಳಿ ಕಾಣುತ್ತ.

ಸುತ್ತ ಹೂಬಳ್ಳಿ ಕಾಣುತ್ತ ಎತ್ತೆತ್ತ ನೋಡಿದರ ಎತ್ತರದ ಕರಿಗುಡ್ಡ ಎತ್ತೆತ್ತ ನೋಡಿದರ ಎತ್ತರದ ಕಡಿಗುಡ್ಡ ಮುತ್ತಕೊಂಡವಲ್ಲಿ ಪಶುಭಕ್ತಿ ಮುತ್ತಿಕೊಂಡವಲ್ಲಿ ಪಶುಭಕ್ತಿ ಅಲ್ಲಲ್ಲಿ ಒತ್ತಿ ಹರಿತಾವ ತಿಳಿನೀರ ಒತ್ತಿ ಹರಿತಾವ ತಿಳಿನಾರ ಶಿವಭಕ್ತ ಮಲ್ಲಯ್ಯಶಿವ ಶಿವಶಿವ ಎನ್ನುತ್ತ ಶಿವಭಕ್ತ ಶಿವಭಕ್ತ ಕಲ್ಲಯ್ಯ.
ಶಿವ ಶಿವ ಎನ್ನುತ್ತ ಮಲ್ಲಯ್ಯನಗಂಗ್ಯಾಲ ವೈದಾನ ಮಲ್ಲಗ್ಯಾಲ ವೈದಾನ ಮಲೈ ಮಲ್ಲಯ್ಯಗ್ಯಾಲ ವೈದಾನ ಶ್ರೀಶೈಲಕೆ ಬಲ್ಲ ಶರಣಾಗಿ ನಿಂತಾನ ಬಲ್ಲ ಶರಣಾಗಿ ನಿಂತಾನ ಜೋಡಾದ ಐಗಳು ತೋಡಿ ಹೇಳುತಿಹರು ಜೋಡಾದ ಐಗಳು  ತೋಡಿ ಹೇಳುತಿಹರು ರೂಢಯ ಮಾತು ಆಡುತ್ತ ರೂಢಯ ಮಾತು ಆಡುತ್ತ ದಾರಿಯಲಿ ಹಾಡಶಾರ ಕಲ್ಲನ ಕರೆ ಕರೆದು ಹಾಡಶಾರ ಕಲ್ಲನ ಕರೆ ಕರೆದು ಸುತ್ತ ಮಹಾಗಡ್ಡ ಎತ್ತರದ ಗಿಡಮರ ಸುತ್ತ ಮಹಾಗುಡ್ಡ ಎತ್ತರದ ಗಿಡಮರ ಚಿತ್ತ ಬಂದೆಳೆಗೆ ಹಾರುವ ಚಿತ್ತ ಬಂದೆಳೆಗೆ ಹಾರುವ ಗಣ ಉತ್ತುಂಗ ತಾಣ ಶಿವಸದನ ಉತ್ತುಂಗ ತಾಣ ಶಿವಸದನ.
ಶ್ರೀಶೈಲದ ದೇಗುಲ ಕಂಡ ಕಲ್ಲಯ್ಯ ಅಚ್ಚರಿಗೊಂಡ ಪರಿಯನ್ನು ಈ ಮುಂದೆ ಬಣ್ಣಿಸಿದ್ದಾರೆ.

ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಮಂದಿರದ ಪರಿಸರಕ್ಕೆ ಬೆರಗಾದ ಕಲ್ಲಯ್ಯ ಸುಂದರಲಿಂಗ ಕಂಡಾನ ಸುಂದರಲಿಂಗ ಕಂಡಾನ ಗುಡ್ಡದಲಿ ತಂದೆ ಮಲ್ಲಯ್ಯನೆಂದು ನಮಿಶಾನ ತಂದೆ ಮಲ್ಲಯ್ಯನೆಂದು ನಮಿಶಾನ ಬೇಡುವಜನ ಜನವಿತ್ತು ಹಾಡುವರ ಗುಂಪಿತ್ತು ಬೇಡುವ ಜನವಿತ್ತು ಹಾಡುವರ ಗುಂಪಿತ್ತು ನೋಡಿ ನಲಿವವರ ಬಳಗೆ ಇತ್ತು ನೋಡಿ ನಲಿವವರ ಬಳಗಿತ್ತು ಗುಡಿಯಲ್ಲಿ ಓಡಾಡುತ ಕಂಡ ಕಲ್ಲಯ್ಯ ಓಡಾಡುತ ಕಂಡ ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಜೋಡಿದ್ದ ಜನರಲ್ಲಿ ಹಾಡ್ಯಾನು ಕಲ್ಲಯ್ಯ ಹಾಡ ಕೇಳಿ ಮೆಚ್ಚಿದ ಸಿದ್ದೇಶ ಹಾಡು ಕೇಳಿ ಮೆಚ್ಚಿದ ಸಿದ್ದೇಶನ ಗುಡಿಯಲ್ಲಿ ಮೂಡಿಗೊಳಗಾಗಿತ್ತು ಜನ ಮೂಡಿಗೊಳಗಾಗಿತ್ತು ಜನ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕಾಡಲ್ಲಿ ಗಿಳಿಗೊಬ್ಬಿ ಹಾಡಿಕೊಂಡಿರುವಂತೆ ಕೂಡಿಸಿದ್ದಾನ ಜೊತೆ ಉಳಿದಾನ ಕೂಡಿಸಿದ್ದಾನ ಜೊತೆ ಉಳಿದಾನ ಗಿರಿಯಲ್ಲಿ ನೋಡ ನೋಡಿ ದಿನ ಕಳಿದ ನ ನೋಡ ನೋಡಿ ದಿನ ಕಳೆದಾನ ಹೊಳ್ಳಿ ಬಂದರಿಗೆ ಒಳ್ಳೆ ಕಾರ್ಯವ ಮಾಡಿ ಹೊಳ್ಳಿ ಬಂದೂರಿಗೆ ಒಳ್ಳೆ ಕಾರ್ಯವ ಮಾಡಿ ಹಳ್ಳಿಯಲಿ ಬೆಳೆಸಾನ ಭಕ್ತಿಯ ಎಂಬುದಾಗಿ ಕಲ್ಲಯ್ಯ ಹಳ್ಳಿಯಲ್ಲಿ ಭಕ್ತಿ ಚಳುವಳಿಯ ಆರಂಭಮಾಡಿದ ಬಗೆಯ ಹೇಳಿರುವರು.


ಹಳ್ಳಿಯಲಿ ಬೆಳೆಸಾನ ಭಕ್ತಿಯ ಪ್ರೀತಿಯಲಿ ತಳ್ಳಿ ಹಾಕಿ ಜಾತಿ ಭೇದವನು ತಳ್ಳಿಹಾಕಿ ಜಾತಿ ಭೇದವನು ಬಂದವರ ಬಾಯನುತ ನಿಂದವರ ಕೂಡೆನುತ ಬಂದವರ ಬಾಯನುತ ನಿಂದವರ ಕೂಡೆನುತ ನೊಂದವರ ಕಷ್ಟಕ್ಕೆ ಆಗ್ಯಾನ ನೊಂದವರ ಕಷ್ಟಕ್ಕೆ ಆಗ್ಯಾನ ಕಲ್ಲಯ್ಯ ಹೊಂದಿಸಿ ಭಕ್ತಿ ಊರಲ್ಲಿ ಹೊಂದಿಸಿ ಭಕ್ತಿ ಊರಲ್ಲಿ ಭಕ್ತಿಯಲ್ಲಿ ದಾಸೋಹ ಯುಕ್ತಿಯಲಿ ಕಾಯಕ ಭಕ್ತಿಯಲಿ ದಾಸೋಹ ಯುಕ್ತಿಯಲಿ ಕಾಯೋಕ ವಿರಕ್ತಿಯಲಿ ಪಥವ ಹಿಡಿದಾನ ವಿರಕ್ತಿಯ ಪತವ ಹಿಡಿದಾನ ಸೇವೆಯಲ್ಲಿ ಮುಕ್ತಿ ತೋರೋ ಶರಣ ಎನಿ ಶ್ಯಾನ ಮುಕ್ತಿ ತೋರೋ ಶರಣ ಎನಿ ಶ್ಯಾನ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಸಿದ್ದರಾಮೇಶ್ವರನ ಸಿದ್ದ ಶಿವ ಕಾರ್ಯದಲಿ ಶುದ್ಧ ಶಿಷ್ಯನಾಗಿ ನಿಂತಾನ ಶುದ್ಧ ಶಿಷನಾಗಿ ನಿಂತಾನ ಕಲ್ಯಾಣದ ಶಿವ ಬೆಳಕ ಹಂಚಿ ಬಾಳಯಾನ ಶಿವ ಬೆಳಕ ಹಂಚಿ ಬಾಳ ನ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ನಿತ್ಯ ಕೆಲ ದಿನಕ್ಕೆಲ್ಲ ಸತ್ಯ ಸೇವಕನಾಗಿ ಚಿತ್ತದಲಿ ಶಿವನ ನೆನೆಯುತ್ತ ಚಿತ್ತದಲಿ ಶಿವನ ನೆನೆಯುತ್ತ ಕಲ್ಲಯ್ಯ ಬಿತ್ತಿ ಶರಣರ ನೂಡಿ ಬಯಲಾದ ಬಿತ್ತಿ ಶರಣರ ನುಡಿ ಬಯಲಾದ ಬಿತ್ತಿ ಶರಣು ನುಡಿ ಬಯಲಾದ ಎಂದು ಮುಕ್ತಾಯ ವಾಗುವ ಜನಪದ ಗೀತೆಯು ಶರಣ ಕಲ್ಲಯ್ಯನವರ ಜೀವನ ದರ್ಶನ ಮಾಡುತ್ತದೆ.
ಇಂತಹ ಎಲೆಮರೆಯ ನೂರಾರು ಶರಣರು ನಮ್ಮ ನಾಡಿನಲ್ಲಿ  ಕಾಯಕ ಮಾಡುತ್ತಾ  ಭಕ್ತಿಯ ರಸಧಾರೆ ಹರಿಸಿರುವರು ಅವರ ಬಗ್ಗೆ ನಮ್ಮ ಜನಪದರು ಹಾಡಿರುವ ಹಾಡುಗಳನ್ನು ಗುರ್ತಿಸಿ ಸಂಶೋಧನೆ ಮಾಡಿ.ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529