19 ಜುಲೈ 2025

ಲಲಿತಾಸನಲ್ಲಿ ಕುಳಿತ ಶ್ರೀಕೃಷ್ಣ.


 



ಸಾಮಾನ್ಯ ಶಕ ವರ್ಷ 

950 ರ ಕಾಲದ 

ಚೋಳರ ಕಾಲಕ್ಕೆ ಸೇರಿದ ಈ  ವಿಷ್ಣುವಿನ ವಿಶೇಷವಾದ ಮೂರ್ತಿ ಪ್ರಸ್ತುತ ಬ್ರಿಟಿಷ್‌ ಮ್ಯೂಸಿಯಂ ನಲ್ಲಿದೆ.


 ಲಂಬವಾದ ಅಡ್ಡ ಪಟ್ಟಿಗಳನ್ನು ಹೊಂದಿರುವ ಮೆಟ್ಟಿಲು ಸಿಂಹಾಸನದ ಮೇಲೆ ಲಲಿತಾಸನದಲ್ಲಿ ಕುಳಿತಿರುವ, ಅಗಲವಾದ ಭುಜಗಳು ಮತ್ತು ಕಿರಿದಾದ ಸೊಂಟವನ್ನು ಹೊಂದಿರುವ ಕಿರೀಟಧಾರಿ ವಿಷ್ಣುವಿನ ಕಂಚಿನ ಆಕೃತಿಯು ಆ ಕಾಲದ  ಶಿಲ್ಪಿಗಳ ಚಾಕಚಕ್ಯತೆಗೊಂದು ಉದಾಹರಣೆ.

ನಮ್ಮ ಸಾಂಸ್ಕೃತಿಕ ಪರಂಪರೆ

ನಮ್ಮ ಹೆಮ್ಮೆ..


ಸಿಹಿಜೀವಿ ವೆಂಕಟೇಶ್ವರ.


#CulturalHeritage #HeritagePreservation #CulturalDiversity #Tradition #CulturalIdentity #History #Authenticity #CulturalAwareness #ArtAndCulture #WorldHeritage #CulturalLegacy #RichHeritage #CulturalMapping #CulturalExpression #Folklore #PreserveOurHeritage #CulturalRoots #CulturalFestival #Ethnic

Diversity


14 ಜುಲೈ 2025

ನಾಲ್ಕು ಸೇಬುಗಳ ಕಥೆ.



ನಾಲ್ಕು ಸೇಬುಗಳ ಕಥೆ


ಆರು ವರ್ಷದ ಮಗುವಿಗೆ ಗಣಿತ ಕಲಿಸುತ್ತಿದ್ದ ಶಿಕ್ಷಕಿಯೊಬ್ಬರು "ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ ಮತ್ತೊಂದು ಸೇಬು ಕೊಟ್ಟರೆ ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?" ಎಂದು ಕೇಳಿದರು.

ಮನದಲ್ಲೇ ಲೆಕ್ಕ ಹಾಕಿ 

ಕೆಲವು ಸೆಕೆಂಡುಗಳಲ್ಲಿ ಹುಡುಗ ಆತ್ಮವಿಶ್ವಾಸದಿಂದ, "ನಾಲ್ಕು!" ಎಂದು ಉತ್ತರಿಸಿದನು.


ನಿರಾಶೆಗೊಂಡ ಶಿಕ್ಷಕಿಯು   ಸರಿಯಾದ ಉತ್ತರ ಮೂರನ್ನು  ನಿರೀಕ್ಷಿಸುತ್ತಿದ್ದರು.

 ಮಗು ಸರಿಯಾಗಿ ಕೇಳದಿರಬಹುದೆಂದು ಯೋಚಿಸಿ

ಪ್ರಶ್ನೆಯನ್ನು ಪುನರಾವರ್ತಿಸಿದರು"ದಯವಿಟ್ಟು ಎಚ್ಚರಿಕೆಯಿಂದ ಆಲಿಸು‌

ಇದು ತುಂಬಾ ಸರಳವಾಗಿದೆ. ನೀನು ಎಚ್ಚರಿಕೆಯಿಂದ ಆಲಿಸಿದರೆ ಸರಿಯಾದ ಉತ್ತರ ನೀಡಬಹುದು" ಎಂದು 

"ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ  ಮತ್ತೊಂದು ಸೇಬು ಕೊಟ್ಟರೆ, ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?"


ಹುಡುಗನು ತನ್ನ ಶಿಕ್ಷಕಿಯ ಮುಖದಲ್ಲಿನ  ನಿರಾಶೆಯನ್ನು ಕಂಡು ಮತ್ತೆ ತನ್ನ ಬೆರಳುಗಳ ಮೇಲೆ ಲೆಕ್ಕ ಹಾಕಿದನು. ತನ್ನ ಶಿಕ್ಷಕಿಯನ್ನು ಸಂತೋಷಪಡಿಸುವ ಉತ್ತರವನ್ನು ಹುಡುಕುತ್ತಿದ್ದನು.

ಈ  ಬಾರಿ ಸ್ವಲ್ಪ ಹಿಂಜರಿಕೆಯಿಂದ ಅವನು "ನಾಲ್ಕು..." ಎಂದು ಉತ್ತರಿಸಿದನು.

 ಶಿಕ್ಷಕಿಯ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು.

ಪ್ರಯತ್ನ ಬಿಡದ ಶಿಕ್ಷಕಿ 

ಆ ಹುಡುಗನಿಗೆ ಸೇಬು ಇಷ್ಟವಿಲ್ಲ ಆದರೆ ಸ್ಟ್ರಾಬೆರಿಗಳು ತುಂಬಾ ಇಷ್ಟ ಎಂದು  ನೆನಪಿಸಿಕೊಂಡು ಪ್ರಶ್ನೆ ಕೇಳಲು ಶುರುಮಾಡಿದಳು .


ಈ ಬಾರಿ ಶಿಕ್ಷಕಿಯು ಉತ್ಸಾಹ ಮತ್ತು ಮಿನುಗುವ ಕಣ್ಣುಗಳೊಂದಿಗೆ ಕೇಳಿದರು.

“ನಾನು ನಿನಗೆ ಒಂದು ಸ್ಟ್ರಾಬೆರಿ,ಮತ್ತೊಂದು ಸ್ಟ್ರಾಬೆರಿ ಹಾಗೂ ಮತ್ತೊಂದು ಸ್ಟ್ರಾಬೆರಿ ಕೊಟ್ಟರೆ, ನಿನ್ನಲ್ಲಿ ಎಷ್ಟು ಸ್ಟ್ರಾಬೆರಿ ಇರುತ್ತವೆ ?”

 

ಶಿಕ್ಷಕಿ ಸಂತೋಷವಾಗಿರುವುದನ್ನು ನೋಡಿ,  ಹುಡುಗ ಮತ್ತೆ ತನ್ನ ಬೆರಳುಗಳ ಮೇಲೆ ಲೆಕ್ಕ ಹಾಕಿದನು.

ಅವನ ಮೇಲೆ ಯಾವುದೇ ಒತ್ತಡವಿರಲಿಲ್ಲ, ಆದರೆ ಶಿಕ್ಷಕಿಯ ಮೊಗದಲ್ಲಿ ಸರಿ ಉತ್ತರ ನೀಡುವನೋ ಇಲ್ಲವೋ ಎಂಬ    ಒತ್ತಡ ಕಾಣುತ್ತಿತ್ತು.


ಅವಳು ತನ್ನ ಹೊಸ ವಿಧಾನವು ಯಶಸ್ವಿಯಾಗಬೇಕೆಂದು ಬಯಸಿದ್ದಳು.

ಹಿಂಜರಿಯುತ್ತಲೇ  ನಗುವಿನೊಂದಿಗೆ ಚಿಕ್ಕ ಹುಡುಗ "ಮೂರು?" ಎಂದು ಉತ್ತರಿಸಿದನು.

ಶಿಕ್ಷಕಿಗೆ ಈಗ ಸಂತಸಗೊಂಡು  ನಕ್ಕರು. ಅವರ ವಿಧಾನವು ಯಶಸ್ವಿಯಾಗಿತ್ತು.

ಅವರ ತನ್ನನ್ನು ತಾನೇ ಅಭಿನಂದಿಸಿಕೊಂಡು  ಕೊನೆಯದಾಗಿ ಸೇಬಿ‌ನ ಉದಾಹರಣೆ ಮೂಲಕ ಪ್ರಶ್ನೆ ಕೇಳಿ ಉತ್ತರ ಪಡೆಯಲು ಮುಂದಾದರು.

"ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ  ಮತ್ತೊಂದು ಸೇಬು ಕೊಟ್ಟರೆ, ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?"


ತಕ್ಷಣ ಹುಡುಗ ಆತ್ಮವಿಶ್ವಾಸದಿಂದ   “ನಾಲ್ಕು!” ಅಂದುಬಿಟ್ಟ.

ಶಿಕ್ಷಕಿ ಸಿಟ್ಟಿನಿಂದ ಅದೇಗೆ ನಾಲ್ಕು ಹೇಳು ನೋಡೋಣ ಅಂದರು. 


ಆ ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಾ "ಏಕೆಂದರೆ ನನ್ನ ಚೀಲದಲ್ಲಿ ಈಗಾಗಲೇ ಒಂದು ಸೇಬು ಇದೆ"  ಮೆಲುದನಿಯಲ್ಲಿ ಉತ್ತರಿಸಿದನು.


ನಾವೂ ಹಾಗೆಯೇ ಯಾರಾದರೂ ನಾವು ನಿರೀಕ್ಷಿಸುವುದಕ್ಕಿಂತ ಭಿನ್ನವಾದ ಉತ್ತರವನ್ನು ನೀಡಿದಾಗ  ಅವರು  ತಪ್ಪು‌ ನಾವು ಮಾತ್ರ ಸರಿ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಅವರ ಉತ್ತರದಲ್ಲಿ

ನಾವು ಅರ್ಥಮಾಡಿಕೊಳ್ಳದೇ ಇರುವ ಮತ್ತೊಂದು ಕೋನ ಇರಬಹುದು.ಆದ್ದರಿಂದ

ವಿಭಿನ್ನ ದೃಷ್ಟಿಕೋನಗಳನ್ನು ಪ್ರಶಂಸಿಸಲು ಮತ್ತು ಅರ್ಥಮಾಡಿಕೊಳ್ಳಲು ನಾವು ಕಲಿಯಬೇಕು.

ಆಗಾಗ್ಗೆ ನಾವು ನಮ್ಮ ದೃಷ್ಟಿಕೋನಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತೇವೆ.ಇದು ಸಲ್ಲ.

ಯಾರಾದರೂ ನಮಗಿಂತ ವಿಭಿನ್ನ ದೃಷ್ಟಿಕೋನದ ಮಾತುಗಳನ್ನು ಆಡಿದಾಗ  ಕುಳಿತು ನಿಧಾನವಾಗಿ ಕೇಳೋಣ ಇತರರ ತಾರ್ಕಿಕ ಹಾಗೂ ಮೌಲಿಕ ಮಾತುಗಳು ಮತ್ತು ವಿಚಾರಗಳಿಗೆ ಕಿವಿಯಾಗೋಣ.ನಮ್ಮ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

 #PersonalDevelopment #PersonalGrowth #LifeJourney #SelfImprovement #Motivation #Inspiration #GrowthMindset #Resilience #OvercomingObstacles #TransformationStory #SelfDiscovery #Empowerment #SuccessJourney #MindsetMatters #LifeLessons #GoalSetting #AchieveYourDreams #Positiv

11 ಜುಲೈ 2025

ಆತ್ಮೀಯ ಗೆಳೆಯ..


 

ಇತ್ತೀಚೆಗೆ ಮೈಸೂರಿಗೆ ಹೋದಾಗ ಬಿ ಎಡ್ ಮಾಡುವಾಗ ಜೊತೆಯಲ್ಲಿ ಓದಿದ ಗೆಳೆಯ ಸುರೇಶ್ ಸಿಕ್ಕಿದ್ದರು. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನನ್ನ ಜೊತೆಗಿದ್ದು ನನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸ್ನೇಹಜೀವಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ,ಒಡನಾಡಿದ, ಸಂತಸದ ಕ್ಷಣಗಳನ್ನು ಮೆಲುಕು ಹಾಕಿದೆವು. ಸುರೇಶ್ ಈಗ P D O ಆಗಿ ಕಾರ್ಯ ಮಾಡುತ್ತಾರೆ.ಬಿ ಎಡ್ ಓದುವಾಗಲೇ   ನಾನು ಅವರಿಗೆ ತಲೈವ ಎಂದಿದ್ದು ಈಗ ನಿಜಕ್ಕೂ ತಲೈವ ಆಗಿದ್ದಾರೆ. ನಾನೀಗ 27 ಪುಸ್ತಕ ಬರೆದಿರುವ ಲೇಖಕ, ಕವಿ ಎಂಬುದನ್ನು ತನ್ನ ಮಡದಿ ಮಕ್ಕಳಿಗೆ ಹೆಮ್ಮೆಯಿಂದ ಪರಿಚಯಿಸಿದರು.ಒಳ್ಳೆಯ ಬಿರಿಯಾನಿ ಊಟ ಹಾಕಿಸಿದ ಗೆಳೆಯ ಕಳೆದ  ತೊಂಬತ್ತರ ದಶಕದ ನಮ್ಮ ದುರಿತ ಕಾಲ,ಹಾಗೂ ಆ ಕಾಲದಲ್ಲೂ ಎಂಜಾಯ್ ಮಾಡಿದ ಸವಿ ಕ್ಷಣಗಳನ್ನು ನೆ‌ನಪು ಮಾಡಿದರು. ಅವರ ಮಕ್ಕಳಿಗೆ ನನ್ನ ಕೃತಿಗಳನ್ನು ನೀಡಿ ಓದಲು ಹೇಳಿದೆ.ಧನ್ಯವಾದಗಳು🙏🙏 ತಲೈವ ಮತ್ತೊಮ್ಮೆ ಮಗದೊಮ್ಮೆ ಸಿಗೋಣ.ನಮ್ಮ ಸ್ನೇಹವನ್ನು ಸಂಭ್ರಮಿಸೋಣ...

ಇಂತಿ ನಿನ್ನ ಗೆಳೆಯ

ಸಿಹಿಜೀವಿ ವೆಂಕಟೇಶ್ವರ.

#FriendshipGoals #CherishedFriends #FriendshipMatters #BestiesForLife #TrueFriendship #FriendsForLife #BondingTime #BFFs #FriendshipVibes #MakingMemories #GoodFriends #FriendshipForever #UnderstoodByYou #LifelongFriends #CrazyAdventures #SupportSystem #FriendshipLove #DynamicDuos #FriendshipMoments #TogetherAlways

10 ಜುಲೈ 2025

ಗುರು ಪೂರ್ಣಿಮೆ


 ಇಂದಿನ ಸುಭಾಷಿತ:-


 "ಗು"ಕಾರಶ್ಚಾಂಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ । ಅಂಧಕಾರ ನಿರೋಧಿತ್ವಾತ್ "ಗುರು"ರೀತ್ಯಭಿಧೀಯತೇ ।। ಗುರು ಎಂಬ ಪಾದದಲ್ಲಿ ಗುಕಾರವು ಅಂಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಹೀಗಾಗಿ ಗುರು ಶಬ್ದಕ್ಕೆ ಅಂಧಕಾರವನ್ನು ನಾಶಮಾಡುವವನು ಎಂದರ್ಥ.


#TeacherLife #TeachersofInstagram #TeachingTips #InspireTeachers #TeacherAppreciation #ClassroomCommunity #TeacherGoals #EducationMatters #FutureLeaders #TeachTheFuture #EducatorLife #PassionForTeaching #TeacherTravel #LearnThroughPlay #ClassroomStories #TeachingInspiration #BackToSchool #TeachAndInspire #CultivatingYoungMinds