ಸಿಹಿಜೀವಿಯ ನುಡಿ.
ಬದ್ಧತೆ ಇಲ್ಲದಿದ್ದರೆ ಯಾವುದೇ
ಕೆಲಸ ಆರಂಭ ಮಾಡಲಾಗದು|
ನಿರಂತರ ಪ್ರಯತ್ನ ಇಲ್ಲದಿದ್ದರೆ
ಯಾವುದೇ ಗುರಿ ಮುಟ್ಟಲಾಗದು||
ಸಿಹಿಜೀವಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸಿಹಿಜೀವಿಯ ನುಡಿ.
ಬದ್ಧತೆ ಇಲ್ಲದಿದ್ದರೆ ಯಾವುದೇ
ಕೆಲಸ ಆರಂಭ ಮಾಡಲಾಗದು|
ನಿರಂತರ ಪ್ರಯತ್ನ ಇಲ್ಲದಿದ್ದರೆ
ಯಾವುದೇ ಗುರಿ ಮುಟ್ಟಲಾಗದು||
ಸಿಹಿಜೀವಿ ವೆಂಕಟೇಶ್ವರ
ನಾನಲ್ಲ ದರ್ಪತೋರತ
ಶೋಷಣೆಯ ಮಾಡುವ
ದೊಡ್ಡ ನಾಯಕ|
ದಿನವೂ ನನ್ನ ಪಾಡಿನ
ಕೆಲಸವನ್ನು ಶ್ರದ್ದೆಯಿಂದ
ಮಾಡುವ ಕಾರ್ಮಿಕ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಸಿಹಿಜೀವಿಯ ಹನಿ
ಎನಿತು ಕಾಲ ಕುಳಿತೇ
ಇರುವೆ ಚಿಂತಿಸುತಾ|
ಏಳು ಎದ್ದೇಳು ಸಂತಸಪಡೆ
ಕಾಯಕ ಮಾಡುತಾ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಅಪ್ಪನೂ ಗ್ರೇಟ್..
ನನ್ನ ಬಾಲ್ಯದ ದಿನಗಳಲ್ಲಿ ಅಪ್ಪ
ಕೊಡಿಸಿದ್ದರು ಸೂಟು ಬೂಟು
ದುಬಾರಿ ಬೆಲೆ ತೆತ್ತು|
ಯಾರಿಗೂ ಗೊತ್ತೇ ಆಗಿರಲಿಲ್ಲ ಅವರ ಬೂಟುಗಳಲ್ಲಿನ ತೂತು||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಸಿರಿಬಂದ ಕಾಲಕ್ಕೆ ನೆಂಟರು
ನೂರು|
ಆಪತ್ಕಾಲದಲ್ಲಿ ತಿಳಿವುದು ನಮಗೆ ನಮ್ಮವರಾರು?||
#sihijeeviVenkateshwara #quotes #kannada #quoteoftheday
*ಸರಳತೆಗೆ ಮೆರಗು*
ಆಡಂಬರ ಯಾರಿಗೆ ಬೇಕು
ಮೈ ಮುಚ್ಚಿಕೊಂಡರೆ ಸಾಕು
ಸಭ್ಯವಾಗಿರಲಿ ನಮ್ಮ ಪೋಷಾಕು
ಸರಳತೆಗೇ ಮೆರಗು ಎಲ್ಲಾಕಾಲಕು
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
ಬದುಕು
ಅತಿಯಾಗಿ ಬಾಯಿ ತೆರೆಯುವುದನ್ನು ನಿಲ್ಲಿಸು
ನೀನು|
ಅತಿಯಾಗಿ ಬಾಯಿ ತೆರೆದರೆ
ನೀರಲ್ಲೂ ಬದುಕಲಾರದು
ಮೀನು||
ಸಿಹಿಜೀವಿ ವೆಂಕಟೇಶ್ವರ.
ಸ್ಟಾಂಡರ್ಡ್ ಆಪ್ ಗಿವಿಂಗ್
ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಿದಾಗ ಹೆಚ್ಚಿಸಿಕೊಳ್ಳದಿದ್ದರೂ ಚಿಂತೆಯಿಲ್ಲ ಸ್ಟಾಂಡರ್ಡ್ ಆಪ್ ಲಿವಿಂಗ್|
ಹೆಚ್ಚಿಸಿಕೊಳ್ಳೋಣ ಸ್ಟಾಂಡರ್ಡ್ ಆಪ್ ಗಿವಿಂಗ್ ||
ಸಿಹಿಜೀವಿ ವೆಂಕಟೇಶ್ವರ
ಒತ್ತಾಯ ಮಾಡದಿರಿ ಪ್ರತಿಬಾರಿ|
ತನ್ನ ಸ್ವಂತ ಆಸಕ್ತಿಯಿಂದ ಮಗು
ತಾನೆ ನಿರ್ಧರಿಸಲಿ ಮುಂದಿನ ಗುರಿ||
ನಮ್ಮ ಆಯ್ಕೆ.
ನಮ್ಮ ಆಯ್ಕೆಯಿಂದಲೇ ತಂದಿರುತ್ತೇವೆ ಹೆಂಡತಿ ಮತ್ತು ಸರ್ಕಾರ|
ಇವು ನಮಗೇ ತಿರುಗಿ ಬೀಳುತ್ತವೆ
ಸಿಕ್ಕರೆ ಅಧಿಕಾರ||
ಸಿಹಿಜೀವಿ ವೆಂಕಟೇಶ್ವರ
ಭದ್ರಾ.
ರೈತರ ಜೀವನಾಡಿಯಾಗಿ
ನಿಂತಿದೆ ನಮ್ಮ ಹೆಮ್ಮೆಯ ಅಣೆಕಟ್ಟು ತುಂಗಭದ್ರಾ|
ಜಲಾಶಯದ ನೀರು ಅನವಶ್ಯಕವಾಗಿ ಪೋಲಾಗದಂತೆ ಮಾಡ್ರಪ್ಪ ಗೇಟ್ ಗಳನ್ನು ಭದ್ರಾ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಇಂಧನ
ಸಂಕಷ್ಟಗಳು ಬಂದಾಗ
ಬಗೆಹರಿಸದಿರಬಹುದು ಧನ`
ಎಲ್ಲಾ ಕಷ್ಟಗಳ ಜಯಿಸಿಬಿಡಬಹುದು
ನಮ್ಮಲಿದ್ದರೆ ಜ್ನಾನವೆಂಬ ಇಂಧನ||
ಸಿಹಿಜೀವಿ ವೆಂಕಟೇಶ್ವರ
*ಬೆಳ್ಳಿಯ ಭರ್ಜಿ*
ಭಾರತಕ್ಕೆ ಬೆಳ್ಳಿಯ
ಪದಕ ತಂದಿದೆ
ನೀರಜ್ ಚೋಪ್ರ
ರವರ ಭರ್ಜಿ ಎಸೆತ|
ಇಡೀ ಭಾರತ ಇಂದು
ಸಂತಸದಲ್ಲಿ ಹುಚ್ಚೆದ್ದು
ಕುಣಿಯುತ್ತಿದೆ ಸತತ||
ಸಿಹಿಜೀವಿ ವೆಂಕಟೇಶ್ವರ
ಹಾಕಿಯಲ್ಲಿ ಪದಕ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ
ಭಾರತ ಹಾಕಿಯಲ್ಲಿ ಗೆದ್ದಿದೆ
ಕಂಚಿನ ಪದಕ|
ಭಾರತೀಯರ ಮನವು
ಸಂತಸದಿಂದ ಕುಣಿದು ಕುಪ್ಪಳಿಸುತಿದೆ ತಕ ತಕ ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು