This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
04 ಜನವರಿ 2026
26 ಅಕ್ಟೋಬರ್ 2025
ಬೆಲೆ. ಹನಿಗವನ
ಬೆಲೆ
ಜಂಭ ಕೊಚ್ಚಿಕೊಳ್ಳುತ್ತಾ ಹೇಳಿಕೊಳ್ಳಬೇಡ ಎಲ್ಲರೂ ನನ್ನನ್ನೇ ಇಷ್ಟಪಡುತ್ತಾರೆಂದು| ಕೆಲವೊಮ್ಮೆ ಕಡಿಮೆ ಕಿಮ್ಮತ್ತಿನ ವಸ್ತುಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಾರೆ ನಾ ಮುಂದು,ತಾ ಮುಂದು||
ಸಿಹಿಜೀವಿ ವೆಂಕಟೇಶ್ವರ #QuoteSubhashitha #Sihijeevi #Venkateswara #WisdomInKannada #LifeLessons #InspirationalQuotes #SpiritualWisdom #MotivationalQuotes #KannadaCulture #QuoteOfTheDay #SubhashithaWisdom #KannadaProverbs #SelfAwareness #SoulfulQuotes #PositiveVibes #LifeInspired #Venkateswar
18 ಅಕ್ಟೋಬರ್ 2025
ದೀಪ..
ದೀಪ..
ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ ತಮ||
11 ಸೆಪ್ಟೆಂಬರ್ 2025
ಕುಲದೀಪ.
ಭಾರತದ ವಿರುದ್ಧ ಯು ಎ ಇ
ಹೀನಾಯವಾಗಿ ಸೋತರು ಪಾಪ!
ಇದಕ್ಕೆ ಪ್ರಮುಖ ಕಾರಣ
ನಮ್ಮ ಸ್ಪಿನ್ ಬೌಲರ್ ಕುಲದೀಪ!!
ಸಿಹಿಜೀವಿ ವೆಂಕಟೇಶ್ವರ
ತುಮಕೂರು
10 ಜುಲೈ 2025
ಗುರು ಪೂರ್ಣಿಮೆ
ಇಂದಿನ ಸುಭಾಷಿತ:-
"ಗು"ಕಾರಶ್ಚಾಂಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ । ಅಂಧಕಾರ ನಿರೋಧಿತ್ವಾತ್ "ಗುರು"ರೀತ್ಯಭಿಧೀಯತೇ ।। ಗುರು ಎಂಬ ಪಾದದಲ್ಲಿ ಗುಕಾರವು ಅಂಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಹೀಗಾಗಿ ಗುರು ಶಬ್ದಕ್ಕೆ ಅಂಧಕಾರವನ್ನು ನಾಶಮಾಡುವವನು ಎಂದರ್ಥ.
#TeacherLife #TeachersofInstagram #TeachingTips #InspireTeachers #TeacherAppreciation #ClassroomCommunity #TeacherGoals #EducationMatters #FutureLeaders #TeachTheFuture #EducatorLife #PassionForTeaching #TeacherTravel #LearnThroughPlay #ClassroomStories #TeachingInspiration #BackToSchool #TeachAndInspire #CultivatingYoungMinds
28 ಜೂನ್ 2025
ಸಿಹಿಜೀವಿಯ ಹನಿ...
25 ಜೂನ್ 2025
ನಮ್ಮ ದಾರಿ...
ತಲುಪಲು ನಮ್ಮ
ಜೀವನದ ಗುರಿ।
ನಾವೇ ಸವೆಸಬೇಕು
ನಮ್ಮ ದಾರಿ|
ಸಿಹಿಜೀವಿ ವೆಂಕಟೇಶ್ವರ
#KannadaKavana #Kavana #KannadaPoetry #KannadaLiterature #PoetryLovers #KannadaWriters #LiteraryArt #WrittenWord #IndianPoetry #CulturalHeritage #Verses #CreativeWriting #SpokenWord #ArtInWords #PoeticExpressions #LanguageOfLove #Storytelling #Inspiration
23 ಜೂನ್ 2025
ಸುಭಾಷಿತ
ಸತ್ಯೇನ ರಕ್ಷತೇ ಧರ್ಮ: ವಿದ್ಯಾ ಯೋಗೇನ ರಕ್ಷ್ಯತೇ | ಮೃಜಯಾ ರಕ್ಷತೇ ರೂಪಂ ಕುಲಂ ವೃತ್ತೇನ ರಕ್ಷತೇ ||
-
"ಸತ್ಯದಿಂದ ಧರ್ಮವು ರಕ್ಷಿತವಾಗುತ್ತದೆ. ವಿದ್ಯೆಗೆ ಯೋಗದಿಂದ, ಸ್ವಚ್ಛತೆಯಿಂದ ರೂಪಕ್ಕೆ ರಕ್ಷಣೆಯೊದಗುತ್ತದೆ. ಸದ್ವರ್ತನೆಯಿಂದ ಕುಲದ ರಕ್ಷಣೆಯಾಗುತ್ತದೆ."
28 ಮೇ 2025
ಸಿಹಿಜೀವಿಯ ನುಡಿ
ಸಿಹಿಜೀವಿಯ ನುಡಿ.
ಬದ್ಧತೆ ಇಲ್ಲದಿದ್ದರೆ ಯಾವುದೇ
ಕೆಲಸ ಆರಂಭ ಮಾಡಲಾಗದು|
ನಿರಂತರ ಪ್ರಯತ್ನ ಇಲ್ಲದಿದ್ದರೆ
ಯಾವುದೇ ಗುರಿ ಮುಟ್ಟಲಾಗದು||
ಸಿಹಿಜೀವಿ ವೆಂಕಟೇಶ್ವರ
01 ಮೇ 2025
ಕಾರ್ಮಿಕ.ಹನಿಗವನ
ನಾನಲ್ಲ ದರ್ಪತೋರತ
ಶೋಷಣೆಯ ಮಾಡುವ
ದೊಡ್ಡ ನಾಯಕ|
ದಿನವೂ ನನ್ನ ಪಾಡಿನ
ಕೆಲಸವನ್ನು ಶ್ರದ್ದೆಯಿಂದ
ಮಾಡುವ ಕಾರ್ಮಿಕ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
18 ಏಪ್ರಿಲ್ 2025
ಸಿಹಿಜೀವಿಯ ಹನಿ
ಸಿಹಿಜೀವಿಯ ಹನಿ
ಎನಿತು ಕಾಲ ಕುಳಿತೇ
ಇರುವೆ ಚಿಂತಿಸುತಾ|
ಏಳು ಎದ್ದೇಳು ಸಂತಸಪಡೆ
ಕಾಯಕ ಮಾಡುತಾ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
16 ಏಪ್ರಿಲ್ 2025
01 ಅಕ್ಟೋಬರ್ 2024
25 ಸೆಪ್ಟೆಂಬರ್ 2024
ಅಪ್ಪನೂ ಗ್ರೇಟ್ ...ಹನಿಗವನ..
ಅಪ್ಪನೂ ಗ್ರೇಟ್..
ನನ್ನ ಬಾಲ್ಯದ ದಿನಗಳಲ್ಲಿ ಅಪ್ಪ
ಕೊಡಿಸಿದ್ದರು ಸೂಟು ಬೂಟು
ದುಬಾರಿ ಬೆಲೆ ತೆತ್ತು|
ಯಾರಿಗೂ ಗೊತ್ತೇ ಆಗಿರಲಿಲ್ಲ ಅವರ ಬೂಟುಗಳಲ್ಲಿನ ತೂತು||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
20 ಸೆಪ್ಟೆಂಬರ್ 2024
19 ಸೆಪ್ಟೆಂಬರ್ 2024
ಹನಿಗವನ
ಸಿರಿಬಂದ ಕಾಲಕ್ಕೆ ನೆಂಟರು
ನೂರು|
ಆಪತ್ಕಾಲದಲ್ಲಿ ತಿಳಿವುದು ನಮಗೆ ನಮ್ಮವರಾರು?||
#sihijeeviVenkateshwara #quotes #kannada #quoteoftheday
16 ಸೆಪ್ಟೆಂಬರ್ 2024
ಸರಳತೆ..ಚುಟುಕು
*ಸರಳತೆಗೆ ಮೆರಗು*
ಆಡಂಬರ ಯಾರಿಗೆ ಬೇಕು
ಮೈ ಮುಚ್ಚಿಕೊಂಡರೆ ಸಾಕು
ಸಭ್ಯವಾಗಿರಲಿ ನಮ್ಮ ಪೋಷಾಕು
ಸರಳತೆಗೇ ಮೆರಗು ಎಲ್ಲಾಕಾಲಕು
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
14 ಸೆಪ್ಟೆಂಬರ್ 2024
ಬದುಕು .ಹನಿಗವನ
ಬದುಕು
ಅತಿಯಾಗಿ ಬಾಯಿ ತೆರೆಯುವುದನ್ನು ನಿಲ್ಲಿಸು
ನೀನು|
ಅತಿಯಾಗಿ ಬಾಯಿ ತೆರೆದರೆ
ನೀರಲ್ಲೂ ಬದುಕಲಾರದು
ಮೀನು||
ಸಿಹಿಜೀವಿ ವೆಂಕಟೇಶ್ವರ.



















