ಹನಿಗವನ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನಿಗವನ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

10 ಜುಲೈ 2025

ಗುರು ಪೂರ್ಣಿಮೆ


 ಇಂದಿನ ಸುಭಾಷಿತ:-


 "ಗು"ಕಾರಶ್ಚಾಂಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ । ಅಂಧಕಾರ ನಿರೋಧಿತ್ವಾತ್ "ಗುರು"ರೀತ್ಯಭಿಧೀಯತೇ ।। ಗುರು ಎಂಬ ಪಾದದಲ್ಲಿ ಗುಕಾರವು ಅಂಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಹೀಗಾಗಿ ಗುರು ಶಬ್ದಕ್ಕೆ ಅಂಧಕಾರವನ್ನು ನಾಶಮಾಡುವವನು ಎಂದರ್ಥ.


#TeacherLife #TeachersofInstagram #TeachingTips #InspireTeachers #TeacherAppreciation #ClassroomCommunity #TeacherGoals #EducationMatters #FutureLeaders #TeachTheFuture #EducatorLife #PassionForTeaching #TeacherTravel #LearnThroughPlay #ClassroomStories #TeachingInspiration #BackToSchool #TeachAndInspire #CultivatingYoungMinds

28 ಜೂನ್ 2025

ಸಿಹಿಜೀವಿಯ ಹನಿ...


ಗುರಿಯೆಡೆಗೆ ನಡೆ

ಎಷ್ಟೇ ಬಂದರೂ ಅಡೆ ತಡೆ ನೋಡದಿರು ಸೋಮಾರಿಗಳ ಕಡೆ। ನಿಲ್ಲದಿರಲಿ ಗುರಿಯೆಡೆಗೆ ನಡೆ||

ಸಿಹಿಜೀವಿ ವೆಂಕಟೇಶ್ವರ

25 ಜೂನ್ 2025

ನಮ್ಮ ದಾರಿ...


 


ತಲುಪಲು ನಮ್ಮ 

ಜೀವನದ ಗುರಿ। 

ನಾವೇ ಸವೆಸಬೇಕು 

ನಮ್ಮ ದಾರಿ|


ಸಿಹಿಜೀವಿ ವೆಂಕಟೇಶ್ವರ


#KannadaKavana #Kavana #KannadaPoetry #KannadaLiterature #PoetryLovers #KannadaWriters #LiteraryArt #WrittenWord #IndianPoetry #CulturalHeritage #Verses #CreativeWriting #SpokenWord #ArtInWords #PoeticExpressions #LanguageOfLove #Storytelling #Inspiration


23 ಜೂನ್ 2025

ಸುಭಾಷಿತ


 ಸತ್ಯೇನ ರಕ್ಷತೇ ಧರ್ಮ: ವಿದ್ಯಾ ಯೋಗೇನ ರಕ್ಷ್ಯತೇ | ಮೃಜಯಾ ರಕ್ಷತೇ ರೂಪಂ ಕುಲಂ ವೃತ್ತೇನ ರಕ್ಷತೇ ||

-

  "ಸತ್ಯದಿಂದ ಧರ್ಮವು ರಕ್ಷಿತವಾಗುತ್ತದೆ. ವಿದ್ಯೆಗೆ ಯೋಗದಿಂದ, ಸ್ವಚ್ಛತೆಯಿಂದ ರೂಪಕ್ಕೆ ರಕ್ಷಣೆಯೊದಗುತ್ತದೆ. ಸದ್ವರ್ತನೆಯಿಂದ ಕುಲದ ರಕ್ಷಣೆಯಾಗುತ್ತದೆ."

28 ಮೇ 2025

ಸಿಹಿಜೀವಿಯ ನುಡಿ

 


ಸಿಹಿಜೀವಿಯ ನುಡಿ.


ಬದ್ಧತೆ ಇಲ್ಲದಿದ್ದರೆ ಯಾವುದೇ 

ಕೆಲಸ ಆರಂಭ ಮಾಡಲಾಗದು|

ನಿರಂತರ ಪ್ರಯತ್ನ ಇಲ್ಲದಿದ್ದರೆ

ಯಾವುದೇ ಗುರಿ ಮುಟ್ಟಲಾಗದು||


ಸಿಹಿಜೀವಿ ವೆಂಕಟೇಶ್ವರ

01 ಮೇ 2025

ಪ್ರಕೃತಿ ಹನಿಗವನ


 ಮಾನವ ನಿರ್ಮಿತ ಆಕೃತಿಗಳಿಗಿದೆ ಮಿತಿ। ನಾವಳಿದರೂ ಸದಾ ಉಳಿವುದು ಪ್ರಕೃತಿ॥


ಸಿಹಿಜೀವಿ ವೆಂಕಟೇಶ್ವರ

ಕಾರ್ಮಿಕ.ಹನಿಗವನ

 


ನಾನಲ್ಲ  ದರ್ಪತೋರತ

ಶೋಷಣೆಯ ಮಾಡುವ

ದೊಡ್ಡ ನಾಯಕ|

ದಿನವೂ ನನ್ನ ಪಾಡಿನ 

ಕೆಲಸವನ್ನು ಶ್ರದ್ದೆಯಿಂದ

ಮಾಡುವ ಕಾರ್ಮಿಕ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

18 ಏಪ್ರಿಲ್ 2025

ಸಿಹಿಜೀವಿಯ ಹನಿ


 


ಸಿಹಿಜೀವಿಯ ಹನಿ 


ಎನಿತು ಕಾಲ ಕುಳಿತೇ 

ಇರುವೆ ಚಿಂತಿಸುತಾ| 

ಏಳು ಎದ್ದೇಳು ಸಂತಸಪಡೆ 

ಕಾಯಕ ಮಾಡುತಾ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


01 ಅಕ್ಟೋಬರ್ 2024

ಅಮರ .ಹನಿಗವನ


 

#ಅಮರ

ಆ ಮರ
ತಬ್ಬಿದೆ
ಈ ಮರ
ಹೇಳುತ್ತಿವೆ
ನಮ್ಮ ಸ್ನೇಹ
ಅಮರ

ಸಿಹಿಜೀವಿ ವೆಂಕಟೇಶ್ವರ

ಚಿತ್ರ ಕೃಪೆ: ಅಂತರ್ಜಾಲ..

25 ಸೆಪ್ಟೆಂಬರ್ 2024

ಅಪ್ಪನೂ ಗ್ರೇಟ್ ...ಹನಿಗವನ..


 


ಅಪ್ಪನೂ ಗ್ರೇಟ್..


ನನ್ನ ಬಾಲ್ಯದ ದಿನಗಳಲ್ಲಿ ಅಪ್ಪ 

ಕೊಡಿಸಿದ್ದರು ಸೂಟು ಬೂಟು 

ದುಬಾರಿ ಬೆಲೆ ತೆತ್ತು|

ಯಾರಿಗೂ ಗೊತ್ತೇ ಆಗಿರಲಿಲ್ಲ  ಅವರ  ಬೂಟುಗಳಲ್ಲಿನ ತೂತು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

20 ಸೆಪ್ಟೆಂಬರ್ 2024

ಸಿಹಿಜೀವಿಯ ನುಡಿ


 



ಸವಾಲುಗಳೆಷ್ಟೇ ಇರಲಿ। 

ಗುರಿಮುಟ್ಟುವ ನಿರಂತರ ಪ್ರಯತ್ನ ಜಾರಿಯಲ್ಲಿರಲಿ॥


©ಸಿಹಿಜೀವಿ ವೆಂಕಟೇಶ್ವರ

19 ಸೆಪ್ಟೆಂಬರ್ 2024

ಹನಿಗವನ

 

ಸಿರಿಬಂದ ಕಾಲಕ್ಕೆ ನೆಂಟರು

ನೂರು|

ಆಪತ್ಕಾಲದಲ್ಲಿ ತಿಳಿವುದು ನಮಗೆ ನಮ್ಮವರಾರು?||


#sihijeeviVenkateshwara #quotes #kannada #quoteoftheday

16 ಸೆಪ್ಟೆಂಬರ್ 2024

ಸರಳತೆ..ಚುಟುಕು


 



*ಸರಳತೆಗೆ ಮೆರಗು*


ಆಡಂಬರ ಯಾರಿಗೆ ಬೇಕು

ಮೈ ಮುಚ್ಚಿಕೊಂಡರೆ ಸಾಕು

ಸಭ್ಯವಾಗಿರಲಿ ನಮ್ಮ ಪೋಷಾಕು

ಸರಳತೆಗೇ ಮೆರಗು ಎಲ್ಲಾಕಾಲಕು


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

14 ಸೆಪ್ಟೆಂಬರ್ 2024

ಬದುಕು .ಹನಿಗವನ


 


 ಬದುಕು 


ಅತಿಯಾಗಿ ಬಾಯಿ ತೆರೆಯುವುದನ್ನು ನಿಲ್ಲಿಸು

ನೀನು|

ಅತಿಯಾಗಿ ಬಾಯಿ ತೆರೆದರೆ

ನೀರಲ್ಲೂ ಬದುಕಲಾರದು

ಮೀನು||


ಸಿಹಿಜೀವಿ ವೆಂಕಟೇಶ್ವರ.

28 ಆಗಸ್ಟ್ 2024

ದೀಪ.


 ದೀಪವು ಕತ್ತಲೆಯನ್ನು ಮೀರಿ

ನೀಡುವುದು ಬೆಳಕು| 

ಕಷ್ಟಗಳನ್ನು ಎದುರಿಸಿ ನಿಂತಾಗಲೇ

ಸುಂದರ ಬದುಕು||


20 ಆಗಸ್ಟ್ 2024

ಸ್ಟಾಂಡರ್ಡ್ ಆಪ್ ಗಿವಿಂಗ್

 


ಸ್ಟಾಂಡರ್ಡ್ ಆಪ್ ಗಿವಿಂಗ್


ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಿದಾಗ ಹೆಚ್ಚಿಸಿಕೊಳ್ಳದಿದ್ದರೂ ಚಿಂತೆಯಿಲ್ಲ ಸ್ಟಾಂಡರ್ಡ್ ಆಪ್ ಲಿವಿಂಗ್|

ಹೆಚ್ಚಿಸಿಕೊಳ್ಳೋಣ ಸ್ಟಾಂಡರ್ಡ್ ಆಪ್ ಗಿವಿಂಗ್ ||

ಸಿಹಿಜೀವಿ ವೆಂಕಟೇಶ್ವರ


18 ಆಗಸ್ಟ್ 2024

ನಿರ್ಧಾರ .ಹನಿಗವನ


 ಹೀಗೆಯೇ ಆಗಬೇಕೆಂದು ಮಗುವಿಗೆ

ಒತ್ತಾಯ ಮಾಡದಿರಿ ಪ್ರತಿಬಾರಿ|

ತನ್ನ ಸ್ವಂತ ಆಸಕ್ತಿಯಿಂದ ಮಗು

ತಾನೆ ನಿರ್ಧರಿಸಲಿ ಮುಂದಿನ ಗುರಿ||

17 ಆಗಸ್ಟ್ 2024

ಅತಿಯಾಸೆಯ ಫಲ


 ಕೆರೆ ,ನೆರೆ

ಮಹಲುಗಳ ಕಟ್ಟುತ್ತಾರೆ ನುಂಗಿ ಕೆರೆ||

ಪ್ರಕೃತಿಯ ದೂರುತ್ತಾರೆ ಬಂದಾಗ ನೆರೆ||

ಸಿಹಿಜೀವಿ ವೆಂಕಟೇಶ್ವರ

ತುಮಕೂರು

14 ಆಗಸ್ಟ್ 2024

ನಮ್ಮ ಆಯ್ಕೆ.

 


ನಮ್ಮ ಆಯ್ಕೆ.


ನಮ್ಮ ಆಯ್ಕೆಯಿಂದಲೇ  ತಂದಿರುತ್ತೇವೆ ಹೆಂಡತಿ ಮತ್ತು ಸರ್ಕಾರ|

ಇವು ನಮಗೇ ತಿರುಗಿ ಬೀಳುತ್ತವೆ

ಸಿಕ್ಕರೆ ಅಧಿಕಾರ||


ಸಿಹಿಜೀವಿ ವೆಂಕಟೇಶ್ವರ