26 ಏಪ್ರಿಲ್ 2020

ತವರ ಕಾಪಾಡು ( ಜನಪದ ಗೀತೆ) ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಜಾನಪದ ಗೀತೆ


ಜನಪದ ಗೀತೆ

*ತವರ ಕಾಪಾಡು*

ನನ್ನಯ ತವರೂರ ನಾಹ್ಯಾಗೆ ಮರೆಯಲಿ
ಚಿನ್ನಕ್ಕಿಂತಲೂ  ಮೇಲು| ಕೇಳೆ ಗೆಳತಿ
ರನ್ನದ ಗುಣದ ನನ್ನಪ್ಪ.||

ಅಮ್ಮನ ಕೈತುತ್ತು ಅಮೃತಕೆ ಸಮಾನ
ಕಮ್ಮನೆಯ ಕುರುಕಲು ನೀಡುತ್ತ| ದಿನಕೊಂದು
ಹಣ್ಣು ತಿನಿಸಿ ನಲಿಯೋಳು||


ಕೀಟಲೆ ಮಾಡುತ್ತ ತಮ್ಮ ಬರುತಿದ್ದ
ಕ್ವಾಟಲೆ ಕೊಟ್ಟರೂ ನನ್ನ ಪ್ರಾಣ|ಅಂತಹವನು
ಕೋಟಿ ಕೊಟ್ಟರೂ ಸಿಗೋದಿಲ್ಲ||

ಸಣ್ಣವನು ಅಲ್ಲ ನನ್ನ ಅಣ್ಣ
ಕಣ್ಣ ರೆಪ್ಪೆ ಹಂಗೆ ಕಾಪಾಡಿದ|ಅವನು
ಕೊಟ್ಟ ಉಡುಗೊರೆಗೆ ಸಮವಿಲ್ಲ||


ಇಂದ್ರನ ಅರಮನೆ ನನ್ನ ತವರ್ಮನೆ
ಚಂದಾಗಿ ಹಾಲ್ಕೊಡುವ ಕಾಮಧೇನು|ನಮ್ಮನೆ
ನಾರಾಯಣನ ಹ್ಯಾಗೆ ಮರೆಯಲಿ||

ಬಂಗಾರ ಬೆಳ್ಳಿ ಬ್ಯಾಡ ತವರಿಂದ
ತೊಂದರೆಯು ಬರದಂತೆ| ಶಿವನೆ
ನನ ತವರ ಕಾಪಾಡು||


*ಇಂದಿನ ಪ್ರಜಾಪ್ರಗತಿಯಲ್ಲಿ ನಾಗಾರಾಜ್ ಜಿ‌ ನಾಗಸಂದ್ರ ರವರ ಕಾದಂಬರಿ ಅಂತರ ಬಗ್ಗೆ ನನ್ನ ವಿಮರ್ಶೆ*

*ಇಂದಿನ ಪ್ರಜಾಪ್ರಗತಿಯಲ್ಲಿ ನಾಗಾರಾಜ್ ಜಿ‌ ನಾಗಸಂದ್ರ ರವರ ಕಾದಂಬರಿ ಅಂತರ ಬಗ್ಗೆ ನನ್ನ ವಿಮರ್ಶೆ*

ಇಂದಿನ *ಪ್ರತಿನಿಧಿ* ಪತ್ರಿಕೆಯಲ್ಲಿ ನನ್ನ ಶಿಶುಗೀತೆ *ಸಂಪತ್ತನ ದಿನಚರಿ* ಪ್ರಕಟವಾಗಿದೆ


ಇಂದಿನ  *ಪ್ರತಿನಿಧಿ*  ಪತ್ರಿಕೆಯಲ್ಲಿ ನನ್ನ ಶಿಶುಗೀತೆ *ಸಂಪತ್ತನ ದಿನಚರಿ*  ಪ್ರಕಟವಾಗಿದೆ

25 ಏಪ್ರಿಲ್ 2020

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿ

ಎರಡು ಚುಟುಕುಗಳು

ಎರಡು ಚುಟುಕುಗಳು


*ದೇಗುಲಗಳು*

ಸಕಲ ಕಾಲಕೂ ಮನಕಾನಂದ ನೀಡುತ್ತಿವೆ
ಬೇಲೂರು ಹಳೇಬೀಡಿನ ಶಿಲಾಬಾಲಿಕೆಗಳು
ಕಲಾರಸಿಕರನ್ನು ಕೈಬೀಸಿ ಕರೆಯುತ್ತಲಿವೆ
ಕನ್ನಡ ನಾಡಿನ ವಿಶ್ವ ಪ್ರಸಿದ್ಧ ದೇಗುಲಗಳು.


*ನಿಲ್ಲುತ್ತಿಲ್ಲ*

ವೈರಾಣುವಿನ ಪ್ರವರಕ್ಕೆ ಹೈರಾಣಾಗಿದೆ ಜಗ
ಎಲ್ಲಡೆ ಮರಣಮೃದಂಗವು  ನಿಲ್ಲುತ್ತಿಲ್ಲ
ವೈದ್ಯರು,ನಾರಾಯಣ,ಶ್ರಮಿಸುತ್ತಲಿದ್ದಾರೆ
ಕಾಲವನ್ನು ತಡೆಯೋರು ಯಾರೂ ಇಲ್ಲ.

*ಸಿ ಜಿ ವೆಂಕಟೇಶ್ವರ*
*ತುಮಕೂರು*