20 ಏಪ್ರಿಲ್ 2018

ಮತದಾನ ಮಾಡೋಣ(ಕವಿ ಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಲೇಖನ)


ಲೇಖನ
ಎಲ್ಲ ವಿಷಯದಲ್ಲೂ
ಮುಂದುವರಿದಿರುವ
ನಾವುಮತದಾನದತ್ತವಿಷಯದಲ್ಲಿ ಮಾತ್ರ
ಹಿಂದುಳಿಯಲು ಕಾರಣವೇನು? ಪರಿಹಾರವೇನು?

ಬಹುತೇಕ ಟೆಕಿಗಳು ಮತ್ತು ನೌಕರರು ಮೇ ೧೨ ರ ಶನಿವಾರದಂದು ವೀಕೆಂಡ್ ಮಜಾ ಮಾಡಲು ಎಲ್ಲಿ ಹೋಗೋಣ ಎಂಬ ಯೋಜನೆ ಮಾಡುತ್ತಿರುತ್ತಾರೆ .ಕಾರಣ ಅವರಿಗೆ  ನಮ್ಮ ಸರ್ಕಾರ ಆಯ್ಕೆ ಮಾಡುವ ಮಹಾನ್ ಜವಾಬ್ದಾರಿ ಕೆಲಸಕ್ಕಿಂತ ಮೋಜು ಮಸ್ತಿ ಮಾಡಲು ಪ್ರಥಮ ಪ್ರಾಶಸ್ತ್ಯ. ಇದರ ಪರಿಣಾಮವಾಗಿ ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಯಾವುದೇ ಚುನಾವಣೆಯಲ್ಲಿ ನೂರು ಪ್ರತಿಶತ ಮತದಾನ ಆಗಿರುವುದು ಅತಿ ವಿರಳ
ಈ ರೀತಿಯಾಗಲು ಕಾರಣಗಳೇನು?

೧ ಮತದಾರರ ಲ್ಲಿ ನಾನೊಬ್ಬ ಮತ ಹಾಕದಿದ್ದರೆ ಪ್ರಪಂಚ ಹಾಳಾಗಲ್ಲ ಎಂಬ ಉಡಾಪೆಯ ನಿರ್ಲಕ್ಷ್ಯ ಮನೋಭಾವ

೨ ಕಲುಷಿತ ರಾಜಕೀಯ ವಾತಾವರಣದಲ್ಲಿ ಎಲ್ಲಾ ಪಕತ ಎಲ್ಲಾ ನಾಯಕರು ಸರಿಯಿಲ್ಲ ಎಂಬ ಪೂರ್ವಾಗ್ರಹ ಪೀಡಿತ ಮನಸುಗಳು
೩ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರ

೪ ಕೆಲ ಬಹುರಾಷ್ಟೀಯ ಕಂಪನಿಯ ನೌಕರರರಿಗೆ ರಜೆ ಕೊಡದೇ ಇರುವುದು

೫  ತಂತ್ರಜ್ಞಾನದ ಅರಿವಿರುವವರಿಗೆ ಆನ್ಲೈನ್ ಮತದಾನಕ್ಕೆ ಅವಕಾಶ ಇಲ್ಲದಿರುವುದು

ಪರಿಹಾರಗಳು

೧  ಪ್ರತಿಯೊಬ್ಬರೂ ಮತದಾನ ನಮ್ಮ ಕರ್ತವ್ಯವೆಂದು ತಿಳಿದು ಮತ ಚಲಾಯಿಸುವ ಮನೋಭಾವ ಬೆಳಿಸಿಕೊಳ್ಳಬೇಕು

೨ ಮತದಾನ ಖಡ್ಡಾಯ ಕಾನೂನು ಜಾರಿಗೆ ತರಬೇಕು ಮತದಾನ ಮಾಡದವರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು

೩ ಅವಕಾಶ ಇರುವವರಿಗೆ ಆನ್ಲೈನ್ ಮತದಾನ ಮಾಡಲು ಅವಕಾಶ ನೀಡಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 ಏಪ್ರಿಲ್ 2018

ಅವನು ಬೀಳಿಸಿದರೆ? (ಚಿತ್ರ ಕವನ)

ಚಿತ್ರಕವನ

*ಅವನು ಬೀಳಿಸಿದರೆ?*

ಜೀವನದ ತುತ್ತ ತುದಿಯಲ್ಲಿರುವೆ
ಬೀಳುವೆನೆಂದು ಭಾವಿಸಿದಿರಾ ?
ಬೀಳಲಾರೆ ಈಗಾಗಲೇ ಬಿದ್ದು ಬಿದ್ದು
ಎದ್ದಿದ್ದೇನೆ ನೀವು  ಬಲ್ಲಿರಾ ?

ಪ್ರಪಾತಗಳ ನೂರಾರು ಕಂಡಿರುವೆ
ಕಲ್ಲುಮುಳ್ಳುಗಳ ನೋವು ತಿಳಿದಿರುವೆ
ಸುಖದ ಸುಪ್ಪತ್ತಿಗೆ ಅನುಭವಿಸಿರುವೆ
ಈಗ ನಾನೇ ಬೀಳುವುದು ತರವೆ

ಗಿರಿಶಿಖರಗಳಂತಹ ಆಸೆಗಳಿದ್ದವು ಆಗ
ಪ್ರಕೃತಿ ಸೌಂದರ್ಯಕ್ಕೆ ಮಾರುಹೋದೆ ಈಗ
ಹಸುರಿನ ಬನಸಿರಿಯ ಸುಂದರ  ನೋಟ
ಕಣ್ಣುಗಳಿಗೆ  ಹಬ್ಬದ ರಸದೂಟ

ನಾನಗಿಯೆ ಬೀಳುವ ಪಾಪ ಮಾಡಲ್ಲ
ನರನು ಬೀಳಿಸಿದರೆ ಪುಟಿದೇಳುವೆನಲ್ಲ
ಬೀಳದೇ ಇರೆನು ಎಂಬ ಹುಂಬುತನವಿಲ್ಲ
ಅವನು ಬೀಳಿಸಿದರೆ ಉಳಿವ ಮಾತೇಇಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






16 ಏಪ್ರಿಲ್ 2018

ನಂದಾದೀಪ (ಚೌ ಚೌಪದಿ)

*ಚೌ ಚೌ ಪದಿ*

*ನಂದಾದೀಪ*

ನೀರಿಗೆ ನೈದಿಲೆ ಶೃಂಗಾರ
ನೀನೆ ನನ್ನ ಸಂಗೀತ
ನಿನ್ನ ಪ್ರೀತಿಯು ಕ್ಷಿತಿಜದಂತೆ ಅನಂತ
ನನ್ನ ಬಾಳಿಗೆ ನೀನೆ ನಂದಾದೀಪ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಏಪ್ರಿಲ್ 2018

ಪರಿಸರ ಉಳಿಸೋಣ (ಭಾವಗೀತೆ)

*ಪರಿಸರ ಉಳಿಸೋಣ*

ಮರಗಿಡಗಳ ಬೆಳೆಸೋಣ ನಾವು
ಪರಿಸರವನು ಉಳಿಸೋಣ |ಪ|

ನಾವು ಮಾಡಿದ ಮಲಿನತೊಳೆಯಲು
ನಮ್ಮ ಮುಂದಿನ ಪೀಳಿಗೆ ಉಳಿಸಲು
ಭಗ್ನಗೊಂಡ ಪ್ರಕೃತಿ ಬೆಳೆಸಲು
ಎಲ್ಲ ಜೀವಿಗಳಿಗೆ ಸಮಪಾಲು ನೀಡಲು|೧|

ನಿಲ್ಲಿಸಿ ಮರವ ಕಡಿವುದನಿಂದೆ
ಬೆಳೆಸಿ ಕಾಡನು ಬದುಕಲೆಂದೆ
ಪೋಲು ಮಾಡದಿರಿ ನೀರನ್ನು
ಉಳಿಸಿದ ನೀರು ಗಳಿಕೆಗೆ ಸಮಾನ|೨|

ಆಳಕೆ ಕೊರೆದರು ನೀರೆ ಇಲ್ಲ
ಮೇಳಕೆ ಹಕ್ಕಿಯ ಕಲರವ ಇಲ್ಲ
ಮೈಕಾಸುರನ ಹಾವಳಿ ನಿಂತಿಲ್ಲ
ಪ್ರಾಣಿ ಪಕ್ಷಿಗೆ ಉಳಿಗಾಲ ಇಲ್ಲ|೩|

ಉಸಿರಾಡೋ ಗಾಳಿ ಶುಧ್ದವೆ ಇಲ್ಲ
ವಾಹನ ಕಾರ್ಖಾನೆ ಬೆಳೆದಿವೆಯಲ್ಲ
ರೋಗಕೆ ವಾಯು ಕಾರಣವಾಯಿತಲ್ಲ
ಗಾಳಿಯ ಕೊಳ್ಳುವ ದಿನ‌ದೂರವಿಲ್ಲ|೪|

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

10 ಏಪ್ರಿಲ್ 2018

ಚುಟುಕುಗಳು (ಅನ್ನ ,ಅಮರ ಆತ್ಮರು)

ಚುಟುಕುಗಳು

*೧*

*ಅನ್ನ*

ಹಸಿದಿಹ ಹೊಟ್ಟೆಗಳು ಸಾವಿರಾರು
ಕೆಲವರು ಅನ್ನವ ಪೋಲುಮಾಡುವರು
ನೀಡಿ ಉಳಿದ ಅನ್ನವ ಓ ಅಣ್ಣ
ಒಂದು ಹಿಡಿ ಅನ್ನ ಅಮೃತ ಸಮಾನ

*೨*

*ಅಮರ ಆತ್ಮರು*

ಕೊರಗದಿರೋಣ ಪಾಪಿಗಳೆಂದು
ಮರುಗದಿರೋಣ ಕೆಟ್ಟವರೆಂದು
ಏಕೆಂದರೆ  ಅಮರ ಅತ್ಮರು ನಾವು
ತಿಳಿಯಿರಿ  ಅಮೃತ ಪುತ್ರರು ನಾವು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*