04 ಏಪ್ರಿಲ್ 2025

ಗೇದು..ಬೂತಾನಿನ ಪ್ರಮುಖ ಪ್ರಾಕೃತಿಕ ತಾಣ.





 


ಭೂತಾನ್ ಪ್ರವಾಸ ೭ 

ಗೇದು..


ಕರ್ಬಂತಿ ಗಿಂಬ ನೋಡಿ ಬಸ್ ಏರಿ ಸಾಗುವಾಗ ನಮ್ಮ ನಾಡಿನ ಘಾಟಿಗಳಲ್ಲಿ ಸಂಚರಿಸಿದ ಅನುಭವವನ್ನು ಪಡೆಯುತ್ತೇವೆ.ಎಲ್ಲಾ ಕಡೆ ಹಸುರು ಮತ್ತು  ತಿರುವು ಮುರುವು ರಸ್ತೆಯಲ್ಲಿ ಸಾಗಿದೆವು.

ಹೀಗೆ ಸಾಗಿ ವಿಶ್ರಾಂತಿ ಗಾಗಿ ಗೇದು ಎಂಬ ಸ್ಥಳದಲ್ಲಿ ನಿಲ್ಲಿಸಿದೆವು.


ಚುಖಾ ಜಿಲ್ಲೆಯ ಒಂದು ಪಟ್ಟಣ ಗೆಡು. ಮೂಲತಃ ಸ್ಥಳೀಯ ಜಲವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವ ಜನರಿಗೆ ವಸತಿ ಕಲ್ಪಿಸಲು ಅಭಿವೃದ್ಧಿಪಡಿಸಲಾದ ಈ ಪಟ್ಟಣವು ಈಗ ಒಂದು ಸಣ್ಣ ಕಾಲೇಜಿಗೆ ನೆಲೆಯಾಗಿದೆ. ಬೆಟ್ಟದ ಸ್ಥಳಕ್ಕೆ ಅಂಟಿಕೊಂಡಿರುವ ಗೆಡುವಿನ ಸೌಂದರ್ಯ ಸವಿದು ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡೆವು.


   ಫ್ಯೂಯೆಂಟ್‌ಶೋಲಿಂಗ್ ಮತ್ತು ಥಿಂಫು  ನಡುವಿನ ಅತಿದೊಡ್ಡ ಜನಸಂಖ್ಯಾ ಕೇಂದ್ರವಾಗಿರುವುದರಿಂದ  ಇದು ಉಪಾಹಾರ ಸೇವಿಸಲು ಅನುಕೂಲಕರ ಸ್ಥಳವಾಗಿದೆ.

ಸ್ವಲ್ಪ ವಿಶ್ರಾಂತಿ ಪಡೆದ ನಂತರ ನಾವು ಗೆದುವಿನಲ್ಲಿ  ಇರುವ 

ಎಂಟು ಧರ್ಮ ಕಾಯ ಸ್ತೂಪಗಳನ್ನು ನೋಡಿದೆವು. 

ಎಂಟು ಮಹಾ ಬೌದ್ಧ ಸ್ತೂಪಗಳು  ಪ್ರಮುಖ ಟಿಬೆಟಿಯನ್ ಬೌದ್ಧಧರ್ಮದ  ಸಂಸ್ಕೃತಿಯಾಗಿದೆ.ಇದು ಬುದ್ಧ ಶಾಕ್ಯಮುನಿಯ ಜೀವನ ಮತ್ತು ಕೃತಿಗಳಲ್ಲಿನ ಎಂಟು ಪ್ರಮುಖ ಘಟನೆಗಳನ್ನು ಪ್ರತಿನಿಧಿಸುತ್ತದೆ. ಎಂಟು ಮಹಾ ಬೌದ್ಧ ಸ್ತೂಪಗಳು ಪ್ರಬುದ್ಧ ಮನಸ್ಸಿನ ಸಂಕೇತಗಳಾಗಿವೆ ಮತ್ತು ಅದರ ಸಾಕ್ಷಾತ್ಕಾರದ ಮಾರ್ಗವಾಗಿದೆ. 


ಎಂಟು ಮಹಾ ಬೌದ್ಧ ಸ್ತೂಪಗಳು ಬುದ್ಧನ ದೇಹ, ಮಾತು ಮತ್ತು ಮನಸ್ಸನ್ನು ಪ್ರತಿನಿಧಿಸುತ್ತವೆ. ಪರಿಣಾಮವಾಗಿ, ಎಂಟು ಸ್ತೂಪಗಳು ಬೌದ್ಧ ಅನುಯಾಯಿಗಳ ಪೂಜಾ ಸ್ಥಳಗಳಾಗಿವೆ.

ಮೊದಲ ಸ್ತೂಪ  ಬುದ್ಧನ ಜನನದ ಕಮಲದ ಹೂವು ಸ್ತೂಪ 

ಎರಡನೇಯದು ಜ್ಞಾನೋದಯ ಸ್ತೂಪ. 

ಮೂರನೆಯದು  ಧರ್ಮದ ಚಕ್ರವನ್ನು ತಿರುಗಿಸುವ ಸ್ತೂಪ. ನಾಲ್ಕನೆಯ ಸ್ತೂಪ ಮಹಾ ಪವಾಡ ಸ್ತೂಪ. 

ಐದು  ತುಶಿತ ಸ್ವರ್ಗದಿಂದ ಬಂದ ಸ್ತೂಪ.ಆರನೇ ಸ್ತೂಪ ಸಾಮರಸ್ಯದ ಸ್ತೂಪ. 

ಏಳನೇಯದು ಸರ್ವವಿಜಯಶಾಲಿ ಸ್ತೂಪ 

ಕೊನೆಯ ಮತ್ತು ಎಂಟನೇ ಸ್ತೂಪ  ಪರಿನಿರ್ವಾಣ ಸ್ತೂಪ.

ಎಲ್ಲಾ ಎಂಟೂ ಸ್ತೂಪಗಳನ್ನು ದರ್ಶಿಸಿ ಕೈಮುಗಿದು ಹೊರಬಂದು ಮತ್ತೊಮ್ಮೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಬಸ್ ಏರಿ ಥಿಂಫು ಕಡೆಗೆ ಪಯಣ ಮುಂದುವರೆಸಿದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ