ಸಂಸಾರದ ಗಾಡಿ
ಜರಿಯದಿರು ಇದು ನನ್ನ ಜೋಪಡಿ
ನೀನೇ ಬೆರಗಾಗುವೆ ನನ್ನಪ್ರೀತಿ ನೋಡಿ
ಮಲಗಿಸುವೆ ನಿನ್ನ ಲಾಲಿ ಹಾಡಿ
ಇಬ್ಬರೂ ಎಳೆಯೋಣ ಸಂಸಾರದ ಗಾಡಿ
ಕರೆದರೆ ಎಲ್ಲಿದ್ದರೂ ಬರುವೆ ಓಡಿ
ಜೀವಿಸೋಣ ಹಕ್ಕಿಗಳಂತೆ ಜೊತೆಗೂಡಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸಂಸಾರದ ಗಾಡಿ
ಜರಿಯದಿರು ಇದು ನನ್ನ ಜೋಪಡಿ
ನೀನೇ ಬೆರಗಾಗುವೆ ನನ್ನಪ್ರೀತಿ ನೋಡಿ
ಮಲಗಿಸುವೆ ನಿನ್ನ ಲಾಲಿ ಹಾಡಿ
ಇಬ್ಬರೂ ಎಳೆಯೋಣ ಸಂಸಾರದ ಗಾಡಿ
ಕರೆದರೆ ಎಲ್ಲಿದ್ದರೂ ಬರುವೆ ಓಡಿ
ಜೀವಿಸೋಣ ಹಕ್ಕಿಗಳಂತೆ ಜೊತೆಗೂಡಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ರೋಗಮುಕ್ತರಾಗಿ ದೀರ್ಘಕಾಲ ಜೀವಿಸೋಣ.
ಸಾವೆಂದರೆ ಎಲ್ಲರಿಗೂ ಅವ್ಯಕ್ತ ಭಯ. ಸಾಯಲು ಯಾರೂ ತಯಾರಿರುವುದಿಲ್ಲ.ಅದರಲ್ಲೂ ಅಕಾಲಿಕ ಸಾವನ್ನು ಯಾರೂ ಬಯಸುವುದಿಲ್ಲ.ಆದರೂ ಇತ್ತೀಚಿನ ದಿನಗಳಲ್ಲಿ ಪ್ರಾಂತ್ಯ ಭೇದಗಳಿಲ್ಲದೇ ಸಾಯಬಾರದ ವಯಸ್ಸಿನಲ್ಲಿ ಎಲ್ಲಾ ವಯೋಮಾನದವರು ಮರಣಹೊಂದುತ್ತಿರುವುದು ಆಘಾತಕಾರಿ ಸಂಗತಿ.ಇದಕ್ಕೆ ಹವಾಮಾನ ವೈಪರೀತ್ಯ, ಆಹಾರ ಪದ್ದತಿ, ಮಾಲಿನ್ಯ,ಒತ್ತಡದ ಜೀವನ, ಆಶಿಸ್ತಿನ ಜೀವನಶೈಲಿ ಹೀಗೆ ನಾನಾ ಕಾರಣಗಳನ್ನು ಪಟ್ಟಿ ಮಾಡಬಹುದು.
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡು ನಮ್ಮ ಜೀವನ ಶೈಲಿಯನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಂಡರೆ ಮಧ್ಯವಯಸ್ಕ ವ್ಯಕ್ತಿಗಳ ಜೀವಿತಾವಧಿಯನ್ನು ಸುಮಾರು ಒಂದು ದಶಕದವರೆಗೆ ವಿಸ್ತರಿಸಬಹುದು ಎಂಬ ಮಾಹಿತಿಯನ್ನು ನೀಡಿದೆ. ಈ ವಾರದ ಆರಂಭದಲ್ಲಿ ನೇಚರ್ ಫುಡ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸುವ ಸುಮಾರು ಅರ್ಧ ಮಿಲಿಯನ್ ಬ್ರಿಟಿಷ್ ನಿವಾಸಿಗಳ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿದೆ, ಕಾಲಾನಂತರದಲ್ಲಿ ಅವರ ಆಹಾರ ಪದ್ಧತಿಯನ್ನು ದಾಖಲಿಸಿದೆ.
ಸಂಶೋಧಕರು 467,354 ಭಾಗವಹಿಸುವವರನ್ನು ಅವರ ಆಹಾರದ ಆಯ್ಕೆಗಳ ಆಧಾರದ ಮೇಲೆ ವರ್ಗೀಕರಿಸಿ ಈ ಅಭ್ಯಾಸಗಳು ಹೇಗೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಟ್ರ್ಯಾಕ್ ಮಾಡಿದ್ದಾರೆ. ಆರೋಗ್ಯಕರ ಆಹಾರದಿಂದ ದೀರ್ಘಾಯುಷ್ಯಕ್ಕೆ ಸಂಬಂಧಿಸಿದ 40 ರ ವಯಸ್ಸಿನ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ ಸುಮಾರು 10 ವರ್ಷಗಳಷ್ಟು ಹೆಚ್ಚು ಕಾಲ ಜೀವಿಸಬಹುದು ಎಂಬುದನ್ನು ಬಹಿರಂಗಪಡಿಸಿದೆ.
ಹೆಚ್ಚಿನ ಜೀವಿತಾವಧಿಯು ನಮ್ಮದಾಗಲು ಆರೋಗ್ಯಕರ ಆಹಾರದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಆಹಾರ ಪದ್ಧತಿ ಈ ಕೆಳಗಿನಂತಿದ್ದರೆ ಉತ್ತಮ ಆಯುರಾರೋಗ್ಯ ನಮ್ಮದಾಗುವಲ್ಲಿ ಸಂದೇಹವಿಲ್ಲ.
ಅನಾರೋಗ್ಯಕರ ಕೊಬ್ಬು ,ಸಕ್ಕರೆ, ಸೋಡಿಯಂ ಪದಾರ್ಥಗಳನ್ನು ಅಧಿಕವಾಗಿ ಸೇವಿಸಿದರೆ ಹೃದ್ರೋಗ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗಬಹುದು. ಆದಷ್ಟು ಇಂತಹ ಆಹಾರವನ್ನು ಕಡಿಮೆ ಸೇವಿಸೋಣ.
ಪೈಬರ್,ಜೀವಸತ್ವಗಳು, ಖನಿಜಗಳು, ಮತ್ತು ಪೋಷಕಾಂಶಗಳನ್ನು ಅಗತ್ಯಕ್ಕೆ ಅನುಗುಣವಾಗಿ ತೆಗೆದುಕೊಳ್ಳೋಣ. ಇಂತಹ ಸಮತೋಲಿತ ಆಹಾರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಹಣ್ಣು ತರಕಾರಿಗಳಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತವೆ ಮತ್ತು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅದ್ದರಿಂದ ಪ್ರತಿ ದಿನ ಇವುಗಳು ನಮ್ಮ ಆಹಾರದಲ್ಲಿರುವಂತೆ ಗಮನಹರಿಸೋಣ.
ಶಾಖಾಹಾರಿಗಳು ಮೀನುಗಳನ್ನು ಸೇವಿಸಬಹುದು ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್ಗಳಂತಹ ಮೀನುಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ
ಬೀಜಗಳು ಮತ್ತು ಧಾನ್ಯಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇವು ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ
ಕಂದು ಅಕ್ಕಿ, ಗೋಧಿಯಂತಹ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತವೆ.
ಹೀಗೆ ಆಹಾರಕ್ಕೂ ನಮ್ಮ ಸರಾಸರಿ ಜೀವಿತಾವಧಿಗೂ ಪರಸ್ಪರ ಸಂಬಂಧವಿರುವುದರಿಂದ ಉತ್ತಮ ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ ಮತ್ತು ರೋಗಮುಕ್ತರಾಗಿ ಆರೋಗ್ಯದಿಂದ ದೀರ್ಘಕಾಲ ಬಾಳೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಕೈಲಾಸಪತಿಯನ್ನು ಜಯಿಸಿದ ನಕ್ಕೀರ
ಅವನ ಹೆಸರು ನಕ್ಕೀರ ಯಾವಾಗಲೂ ಸಮುದ್ರದ ತಡಿಯಲ್ಲೇ ಇರುವವನು. ಅವನ ಕೆಲಸವೆಂದರೆ ಸಮುದ್ರದ ಆಳಕ್ಕೆ ಮುಳುಗಿ ಅಲ್ಲಿದ್ದ ಮುತ್ತುಗಳನ್ನು ಆಯ್ದು ತರುವುದು. ಅದು ಅವನಿಗೆ ದೈಹಿಕ ಕೆಲಸವಾದರೂ ಅವನ ಪ್ರತಿ ಉಸಿರಿನಲ್ಲಿ ಶಿವನಿದ್ದ. ಅವನು ನೀರಿನಲ್ಲಿ ಮುಳುಗುವಾಗ, ಮುತ್ತುಗಳನ್ನು ಆಯುವಾಗ, ನೀರಿನಿಂದ ಹೊರಬಂದು ಅವುಗಳನ್ನು ಬೇರ್ಪಡಿಸುವಾಗ ಪ್ರತಿಕ್ಷಣವೂ ಶಿವಧ್ಯಾನ. ಅವನಿಗೆ ಶಿವಭಕ್ತನೆಂದು ಅಷ್ಟು ದೊಡ್ಡ ಹೆಸರು ಬಂದದ್ದನ್ನು ಕಂಡು ಶಿವನಿಗೂ ಅಸೂಯೆಯಾಯಿತಂತೆ. ಅವನನ್ನು ಕಂಡು ಪರೀಕ್ಷಿಸಬೇಕೆಂದು ಶಿವ ಸಮುದ್ರ ದಂಡೆಗೆ ಬಂದು ಪ್ರತ್ಯಕ್ಷನಾದ. ನಕ್ಕೀರ ತನ್ನ ಕಾಯಕದಲ್ಲಿ ಎಷ್ಟು ತನ್ಮಯನಾಗಿದ್ದನೆಂದರೆ ಮುಂದೆ ಶಿವ ನಿಂತದ್ದು ಕಾಣಲಿಲ್ಲವಂತೆ! ಅವನನ್ನು ಗಮನಿಸದೇ ನೀರಿನಲ್ಲಿ ಮುಳುಗು ಹಾಕಿದ. ಶಿವನಿಗೆ ಕೋಪ ಬಂತು. ತನ್ನ ಭಕ್ತನೆಂದು ಜನ ಈತನನ್ನು ಕೊಂಡಾಡುತ್ತಿದ್ದರೆ ಈತ ಸಾಕ್ಷಾತ್ ತಾನೇ ಮುಂದೆ ಬಂದು ನಿಂತರೂ ಗಮನಿಸುತ್ತಿಲ್ಲ. ಶಿವನ ಕೋಪ ಹೆಚ್ಚಾಯಿತು.
ನಕ್ಕೀರ ನೀರಿನಿಂದ ಮೇಲೆ ಬಂದೊಡನೆ ಕ್ರುದ್ಧನಾಗಿ ತನ್ನ ಮೂರನೆಯ ಕಣ್ಣನ್ನು ತೆರೆದ! ಶಿವನ ಹಣೆಗಣ್ಣು ತೆರೆದರೆ ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ. ನಕ್ಕೀರ ಹೇಗೆ ಬದುಕಿ ಉಳಿದಾನು? ಆದರೆ ಆಶ್ಚರ್ಯ! ಶಿವನ ತೆರೆದ ಕಣ್ಣೀರಿನ ಬೆಂಕಿಯ ಉರಿ ನಕ್ಕೀರನಿಗೆ ತಗುಲಲಿಲ್ಲ. ಅವನು ತನ್ನ ಕೆಲಸದಲ್ಲೇ ತೊಡಗಿದ್ದ. ಶಿವ ಆಶ್ಚರ್ಯದಿಂದ ನಕ್ಕೀರನನ್ನು ಕೇಳಿದ, ‘ಅಲ್ಲಯ್ಯ, ನನ್ನನ್ನು ಕಾಣಲೆಂದು ಅನೇಕಾನೇಕ ಶರಣರು ನೂರಾರು ವರ್ಷ ತಪಸ್ಸು ಮಾಡಿದರೂ ದೊರೆಯದ ನಾನು, ನಿನ್ನ ಮುಂದೆಯೇ ನಿಂತಿದ್ದರೂ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತೀದ್ದೀಯಾ. ಇದಕ್ಕೆ ಏನು ಕಾರಣ?’ ಆಗ ನಕ್ಕೀರ, ‘ದೇವಾ, ನಾನು ನನ್ನ ಕೆಲಸದಲ್ಲಿ ತನ್ಮಯನಾಗಿದ್ದೆ. ನನಗೆ ಕಾಯಕವೇ ಪೂಜೆ. ಆ ಕಾಯಕ ನೀನೇ.ನೀನೇ ನನ್ನ ಕಾಯಕದ ಉದ್ದೇಶ’ ಎಂದಾಗ ಶಿವ, ‘ಹೌದು, ಆದರೆ ನನ್ನ ಉರಿಗಣ್ಣಿನ ಬೆಂಕಿ ನಿನ್ನನ್ನು ಯಾಕೆ ಸುಡಲಿಲ್ಲ?’ ಎಂದು ಕೇಳುತ್ತಾನೆ.
ಅದಕ್ಕೆ ನಕ್ಕೀರ, ‘ದೇವಾ, ನಾನು ದುಡಿದು ತಿನ್ನುವವನು, ನೀನು ತಿರಿದು ತಿನ್ನುವವನು. ದುಡಿದು ತಿನ್ನುವವನು ತಿರಿದು ತಿನ್ನುವವನಿಗಿಂತ ದೊಡ್ಡವನು. ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿ ಹೆಚ್ಚು’ ಎನ್ನುತ್ತಾನೆ. ಈ ಮಾತಿಗೆ ಶಿವ ಮೆಚ್ಚುತ್ತಾನೆ, ನಕ್ಕೀರನ ಕಾಯಕದ ಶಕ್ತಿಯನ್ನು ಹೊಗಳುತ್ತಾನೆ, ಆಶೀರ್ವದಿಸುತ್ತಾನೆ.
ಕಾಯಕವೇ ಕೈಲಾಸ ಎಂದ ಶರಣರ ಚಿಂತನೆಯು ಇದೇ ಆಶಯವನ್ನು ಹೊಂದಿದೆ.ನಮ್ಮ ಕರ್ತವ್ಯವೇ ನಮಗೆ ದೇವರಾಗಲಿ ಎಲ್ಲರೂ ದುಡಿದು ತಿನ್ನುವ ಗುಣವನ್ನು ಬೆಳೆಸಿಕೊಳ್ಳೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಯಶಸ್ಸಿಗೆ ಐದು ಪಾಠಗಳು.
ನಾವು ಯಾವುದೇ ಸಾಧಕರ ಯಶೋಗಾಥೆಗಳನ್ನು ಕೇಳುವಾಗ ಎಲ್ಲದರಲ್ಲೂ ಕೆಲ ಸಾಮಾನ್ಯ ಅಂಶಗಳು ಕಂಡುಬರುತ್ತವೆ.ಆ ಸಾಧಕರ ಸಾಧನೆಯ ಹಿಂದೆ ಈ ಕೆಳಕಂಡ ಅಂಶಗಳಿದ್ದೇ ಇರುತ್ತವೆ.
1. ನಮ್ಮನ್ನು ನಂಬೋಣ .
ನಮ್ಮನ್ನು ನಾವು ನಂಬದಿದ್ದರೆ ಮತ್ತಾರು ನಂಬುತ್ತಾರೆ. ಎಲ್ಲಾ ಯಶಸ್ಸಿನ ಅಡಿಪಾಯವೇ ನಂಬಿಕೆ ನಮ್ಮ ಮೇಲೆ ನಮಗೆ ನಂಬಿಕೆ ಬರಲು ಮೊದಲು ನಾವು ಸಣ್ಣ ಪುಟ್ಟ ಯಶಸ್ಸು ಗಳಿಸುವುದು ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಮೂಡುತ್ತದೆ. ನಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅದಕ್ಕೆ ತಾಳ್ಮೆ ನಮ್ಮ ಜೊತೆಯಲ್ಲಿರಬೇಕು ಮತ್ತು ಸಕಾರಾತ್ಮಕ ಸ್ವಯಂಚಿತ್ರಣವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.
2. ಗುರಿಯಿರಲಿನಮಗೆನಾವು ಜೀವನದಲ್ಲಿ ಏನನ್ನು ಸಾಧಿಸಲು ಬಯಸುತ್ತೇವೆ ಎಂಬುದು ನಮಗೆ ಸ್ಪಷ್ಟವಾದ ಗುರಿಯಿರಬೇಕು. ಪ್ರತಿದಿನ ಆ ಗುರಿಯನ್ನು ಜ್ಞಾಪಿಸಿಕೊಳ್ಳುತ್ತಾ , ಕ್ರಮೇಣ ಆ ಗುರಿಯೆಡೆಗೆ ಸಾಗುವ ಪ್ರಮಾಣಿಕ ಪ್ರಯತ್ನ ಮಾಡುತ್ತಲೇ ಇರಬೇಕು. ಆ ಗುರಿ ತಲುಪಲು ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು.
3. ಚಲನೆಯಿರಲಿ.
ನಾವು ಬಹುತೇಕರು ಆರಂಭಶೂರರು.ಮೊದಲು ಸ್ವಲ್ಪ ದಿನ ನಮ್ಮ ಗುರಿ ತಲುಪಲು ಬಹಳ ಜೋಶ್ ನಲ್ಲಿ ನಡೆದು,ಕ್ರಮೇಣವಾಗಿ ಸೋಮಾರಿತನ ನಮ್ಮನ್ನು ತಬ್ಬಿದಾಗ ಹೊದ್ದು ಮಲಗಿಬಿಡುತ್ತೇವೆ. ಈಗಾಗಬಾರದು.
ಸದಾ ಸುಮ್ಮನೆ ಕುಳಿತುಕೊಳ್ಳದೇ ಮತ್ತು ಏನಾಗುತ್ತದೆ ಎಂದು ಕಾಯದೇ. ನಮ್ಮ ಕಾರ್ಯದಲ್ಲಿ ಚಲನಶೀಲರಾಗಬೇಕು ಮತ್ತು ನಮ್ಮ ಗುರಿಗಳತ್ತ ಸಾಗಲು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಬೇಕು. ಈ ಹೆಜ್ಜೆಗಳು ಕೂಡ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ದೊಡ್ಡ ದಾರಿ ತಲುಪಲು ಸಣ್ಣ ಹೆಜ್ಜೆಗಳು ಅಗತ್ಯವಲ್ಲವೆ?
4. ನಿರಂತರ ಪ್ರಯತ್ನ.
ನಮ್ಮ ಸಾಧನೆಯ ಹಾದಿಯಲ್ಲಿ ಅಲ್ಲಲ್ಲಿ ಅಡತಡೆಗಳು, ಕಲ್ಲುಮುಳ್ಳುಗಳು ಸಿಗಬಹುದು.
ದಾರಿಯುದ್ದಕ್ಕೂ ಹಿನ್ನಡೆಗಳು ಉಂಟಾಗಬಹುದು. ಆಗ ನಾವು ಛಲಬಿಡದ ತ್ರಿವಿಕ್ರಮರಾಗಬೇಕು.ಸತತ ಪ್ರಯತ್ನದಿಂದ ಒಂದಲ್ಲ ಒಂದು ದಿನ ಗೆದ್ದ ನಾವು ನಮ್ಮ ಗುರಿಗಳನ್ನು ತಲುಜೀವನದಲ್ಲಿನ
5. ಧನಾತ್ಮಕವಾಗಿರಿ.
ಸಣ್ಣ ಸೋಲು, ಗೆಳೆಯರ ಕೊಂಕು ಮಾತು ಮತ್ತು ನಕಾರಾತ್ಮಕ ಮಾತುಗಳು ನಮ್ಮನ್ನು ಎದೆಗುಂದುವಂತೆ ಮಾಡುತ್ತವೆ.ಇಂತಹ ಸಂದರ್ಭಗಳಲ್ಲಿ ನಾವು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳ ಬೇಕು.
ಸಕಾರಾತ್ಮಕ ಮನೋಭಾವವು ನಮಗೆ ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ. ನಮ್ಮ ಜೀವನದಲ್ಲಿನ ಒಳ್ಳೆಯ ವಿಷಯಗಳ ಮೇಲೆ ಸದಾ ಕೇಂದ್ರೀಕರಿಸಬೇಕು ಮತ್ತು ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಕೆಡಿಸಲು ಬಿಡಬಾರದು.ಧನಾತ್ಮಕ ಜನರೊಂದಿಗೆ ನಮ್ಮನ್ನು ಸುತ್ತುವರೆದಿರುವಂತೆ ನೋಡಿಕೊಳ್ಳೋಣ.ನಮ್ಮ ಸಮಯವನ್ನು ನಾವು ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು. ನಮ್ಮನ್ನು ಬೆಂಬಲಿಸುವ ಮತ್ತು ನಮ್ಮ ಗುರಿಗಳನ್ನು ತಲುಪಲು ನಮ್ಮನ್ನು ಪ್ರೋತ್ಸಾಹಿಸುವ ಸಕಾರಾತ್ಮಕ ಜನರೊಂದಿಗೆ ಹೆಚ್ಚು ಒಡನಾಟ ಹೊಂದಿದರೆ ನಮ್ಮ ಗುರಿ ಸಾಧಿಸಲು ಪೂರಕವಾಗುತ್ತದೆ.
ಈ 5 ಪಾಠಗಳನ್ನು ಅನುಸರಿಸುವ ಮೂಲಕ ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಯಶಸ್ಸಿನ ಸಾಧ್ಯತೆಗಳನ್ನು ನಾವು ಹೆಚ್ಚಿಸಬಹುದು. ನೆನಪಿಡಿ ಯಶಸ್ಸು ಅದೃಷ್ಟ ಅಥವಾ ಪ್ರತಿಭೆಯಿಂದಲ್ಲ. ಇದು ಕಠಿಣ ಪರಿಶ್ರಮ ಮತ್ತು ನಿರ್ಣಯ. ಆದ್ದರಿಂದ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಕಷ್ಟಪಟ್ಟು ಇಷ್ಟ ಪಟ್ಟು ಕೆಲಸ ಮಾಡುವುದನ್ನು ಮುಂದುವರಿಸೋಣ ತನ್ಮೂಲಕ ಉತ್ತಮವಾದ ಸಾಧನೆ ಮಾಡೋಣ.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529
ಬಾಳೋಣ ಬಾರ
ಜತನದಿ ಕಾಪಾಡೋಣ ಪರಿಸರ
ನೀಡುವುದದು ನಮಗೆ ಸಕಲ ವರ
ಸರ್ವ ಜೀವಿಗಳೂ ನಮ್ಮ ಪರಿವಾರ
ಸಮನ್ವಯದಿ ಬಾಳೋಣ ಬಾರಾ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು