21 ಜುಲೈ 2024

ಕನ್ನಡಿಗರ ಹೆಮ್ಮೆಯ ಬೇಲೂರು ಹಾಗೂ ಹಳೇಬೀಡಿನ ದೇಗುಲಗಳು

 


ಕನ್ನಡಿಗರ ಹೆಮ್ಮೆಯ ಹಳೇಬೀಡಿನ ದೇಗುಲ 


ಯುನೆಸ್ಕೋ ಸಂಸ್ಥೆಯು ಪ್ರಪಂಚದಾದ್ಯಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಪಡಿಸಿ  ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದರ ಅಂಗವಾಗಿ ಪ್ರತಿವರ್ಷ ಒಂದೊಂದು ದೇಶದಲ್ಲಿ ಸಮ್ಮೇಳನ ನಡೆಸಿಕೊಂಡು ಬಂದಿದೆ. 

ನಮ್ಮ  ದೇಶದಲ್ಲಿ ಮೊದಲ ಬಾರಿಗೆ ಯುನೆಸ್ಕೋದ ವಿಶ್ವಪಾರಂಪರಿಕ ಸಮ್ಮೇಳನವು

  ಜುಲೈ 21ರಿಂದ 31ರವರೆಗೆ ದೆಹಲಿಯಲ್ಲಿ 46ನೇ ವಿಶ್ವ ಪಾರಂಪರಿಕ ಸಮ್ಮೇಳನ  ನಡೆಯಲಿದ್ದು  ದೇಶದ 3 ವಿಶ್ವಪಾರಂಪರಿಕತಾಣಗಳಪ್ರದರ್ಶನ ಸಮ್ಮೇಳನದಲ್ಲಿನಡೆಯಲಿದೆ. ಅದರಲ್ಲಿ ಕರ್ನಾಟಕದ ಹಳೇಬೀಡಿನ ಹೊಯ್ಸಳ ದೇಗುಲ ಕೂಡ ವರ್ಚುವಲ್ರಿ ಯಾಲಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.


ಸಮ್ಮೇಳನದಲ್ಲಿ ವಿಶ್ವ ಪಾರಂಪರಿಕ ಪಟ್ಟಿ

ಯಲ್ಲಿನ ಒಟ್ಟು 27 ತಾಣಗಳನ್ನು ಎಆರ್ 

ಮತ್ತು ವಿಆ‌ರ್ ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ಭಾರತದಿಂದ 3

ಪಾರಂಪರಿಕ ತಾಣಗಳು ಸಾಂಸ್ಕೃತಿಕ ತಾಣಗಳ ವಿಭಾಗದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ

ಕರ್ನಾಟದ ಇತಿಹಾಸ ಪ್ರಸಿದ್ಧ ಹಳೆಬೀಡಿನ ಹೊಯ್ಸಳ ದೇಗುಲ ಕೂಡ ಸೇರಿದೆ. ಈ

ಕಾರ್ಯಕ್ರಮಕ್ಕೆ ಲಾಂಛನವಾಗಿ ಹಂಪಿಯ ಕಲ್ಲಿನ ರಥವನ್ನು ಬಳಸಿಕೊಂಡಿರುವುದು ಕನ್ನಡಿಗರಿಗೆ ಇನ್ನೂ ಹೆಚ್ಚಿನ ಸಂತಸ ನೀಡಿದೆ.

 


17 ಜುಲೈ 2024

ಸಿಹಿಜೀವಿಯ ಹನಿಗಳು

 


ಪಂಚೆ ನಮ್ಮ ಅಸ್ಮಿತೆ 


ಓ ಮಾಲಿನ ಮಾಲಿಕರೆ

ರೈತ ಪಂಚೆ ಉಟ್ಟು ಬಂದರೆ

ತೆಗೆಯಬೇಡಿ ಕ್ಯಾತೆ|

ಮನದಟ್ಟು ಮಾಡಿಕೊಳ್ಳಿ 

ಪಂಚೆ ನಮ್ಮ ಅಸ್ಮಿತೆ||


ಕಾಯುತ್ತ ಕೂರಬೇಡ

ಸಿಗಲಿಲ್ಲವೆಂದು ಅವಕಾಶ|

ಸತತ ಪ್ರಯತ್ನ ಪಡುತ್ತಲಿದ್ದರೆ 

ಮುಟ್ಟಿಬಿಡಬಹುದು ಆಕಾಶ||


ಸಿಹಿಜೀವಿ ವೆಂಕಟೇಶ್ವರ 

ತುಮಕೂರು


12 ಜುಲೈ 2024

ವಾಕಿಂಗ್ ಲೈಬ್ರರಿ #walking library

 


ವಾಕಿಂಗ್ ಲೈಬ್ರರಿ.


ನಮ್ಮ ಕನ್ನಡದ ಸಾಹಿತಿಗಳಾದ ಗಳಗನಾಥರು ತಲೆಯ ಮೇಲೆ ಪುಸ್ತಕ ಹೊತ್ತು ಮಾರಾಟ ಮಾಡಿ ಕನ್ನಡ ಸೇವೆಯ ಮಾಡುತ್ತಾ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿದ್ದು ನಮಗೆಲ್ಲ ತಿಳಿದಿದೆ.

 1930 ರ ದಶಕದಲ್ಲಿ ಲಂಡನ್‌ನಲ್ಲಿನ "ವಾಕಿಂಗ್ ಲೈಬ್ರರಿ" ಪರಿಕಲ್ಪನೆಯು ಪುಸ್ತಕಗಳನ್ನು ತಮ್ಮೊಂದಿಗೆ ಕೊಂಡೊಯ್ಯುವ ಮತ್ತು ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ನೀಡುವ ವ್ಯಕ್ತಿಗಳನ್ನು ಕಾಣಬಹುದಾಗಿತ್ತು. ಇವರೇ ವಾಕಿಂಗ್ ಲೈಬ್ರರಿ!  ಈ ವಾಕಿಂಗ್ ಲೈಬ್ರರಿಗಳು ಮೂಲಭೂತವಾಗಿ ಮೊಬೈಲ್ ಗ್ರಂಥಾಲಯಗಳಾಗಿದ್ದು, ಸಾಂಪ್ರದಾಯಿಕ ಗ್ರಂಥಾಲಯಗಳಿಗೆ ಸುಲಭ ಪ್ರವೇಶವನ್ನು ಹೊಂದಿರದ ಜನರಿಗೆ ಪುಸ್ತಕಗಳನ್ನು ತಲುಪಿಸುವ ಮಹತ್ಕಾರ್ಯ ಮಾಡುತ್ತಿದ್ದವು.

 

 ಜನರಲ್ಲಿ ಸಾಕ್ಷರತೆ ಮತ್ತು ಓದುವ ಪ್ರೀತಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು.  ವಾಕಿಂಗ್ ಲೈಬ್ರರಿಗಳಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಬೀದಿಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಾ, ಪುಸ್ತಕಗಳನ್ನು ಕೊಡುತ್ತಿದ್ದರು.ಅನಿವಾರ್ಯ ಕಾರಣದಿಂದಾಗಿ  ಗ್ರಂಥಾಲಯಗಳಿಗೆ  ಭೇಟಿ ಮಾಡಲು ಸಾಧ್ಯವಾಗದವರಿಗೆ ಈ ವಾಕಿಂಗ್ ಗ್ರಂಥಾಲಯಗಳು ವರದಾನವಾಗಿದ್ದವು.

 

 1930 ರ ದಶಕವು ಆರ್ಥಿಕ ಸವಾಲುಗಳಿಂದ ಗುರುತಿಸಲ್ಪಟ್ಟ ಅವಧಿಯಾಗಿತ್ತು. ಅಂತಹ ನವೀನ ಆಲೋಚನೆಗಳು ಜನಸಾಮಾನ್ಯರಿಗೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದವು.  ವಾಕಿಂಗ್ ಲೈಬ್ರರಿಗಳು ಸಮುದಾಯದ ಪ್ರಜ್ಞೆಯನ್ನು ಬೆಳೆಸಿದವು ಮತ್ತು ಕಲಿಕೆಯ ಅನುಭವಗಳನ್ನು ಹಂಚಿಕೊಂಡವು.


ಪ್ರಸ್ತುತ ಭಾರತದ ಇತರೆ ನಗರಗಳಲ್ಲಿ ಮೊಬೈಲ್ ಲೈಬ್ರರಿಗಳು ಕಾರ್ಯನಿರತವಾಗಿವೆ. ಬೆಂಗಳೂರಿನಲ್ಲಿ ಬಸ್ಸುಗಳ ಮೇಲೆ ಸಂಚರಿಸುವ ಸಂಚಾರಿ ಮೊಬೈಲ್ ಕಾಣಬಹುದು. ಗುಜರಿ ನೀತಿಯ ಪರಿಣಾಮವಾಗಿ ಹಳೆಯ ಬಸ್ ಗಳಲ್ಲಿನ ಸಂಚಾರಿ ಗ್ರಂಥಾಲಯಗಳು ನಿಂತಲ್ಲೇ ನಿಲ್ಲುವಂತಾಗಿದ್ದು ಇವುಗಳು ಚಲಿಸಲು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಮೊಬೈಲ್ ಲೈಬ್ರರಿ  ಪರಿಕಲ್ಪನೆ ಸಾಕಾರಗೊಳಿಸಲು ಕೆಲ ಖಾಸಗಿ ಸಂಸ್ಥೆಗಳು ಮತ್ತು ಪ್ರಕಾಶನ ಸಂಸ್ಥೆಗಳು ಪ್ರಯತ್ನ ಪಡುತ್ತಿರುವುದು ಆಶಾದಾಯಕ ಬೆಳೆವಣಿಗೆ. ಈ ನಿಟ್ಟಿನಲ್ಲಿ ವೀರಲೋಕ ಬುಕ್ಸ್ ನ ವೀರಕಪುತ್ರ ಶ್ರೀನಿವಾಸ್ ರವರು ಇಲ್ಲಿ ಉಲ್ಲೇಖಾರ್ಹ. ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಹಾಗೂ ರಾಜ್ಯದ ವಿವಿಧೆಡೆ ಮೊಬೈಲ್ ಲೈಬ್ರರಿಗಳು ಹೆಚ್ಚಾಗಲಿ ಎಲ್ಲೆಡೆಯೂ ಜ್ಞಾನ ಪಸರಿಸಲಿ ಎಂದು ಆಶಿಸೋಣ.

 ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


#kannada #books #booklover #library #walking #Veeraloka #sihijeevi #tumkur

ನಂಜುಂಡಪ್ಪನವರು


 


ಬೆನ್ನುಡಿ.


ನಂಜುಂಡಪ್ಪನವರು ಸರಳ ಸಜ್ಜನ ಅದ್ಯಾತ್ಮ ಸಾಧಕರು.ಕಳೆದ ಐದು ವರ್ಷಗಳ ಅವರ ಒಡನಾಟದಲ್ಲಿ ಅವರೊಂದಿಗೆ ಮಾತನಾಡುತ್ತಾ ಕುಳಿತರೆ ಅವರ ವ್ಯಕ್ತಿತ್ವ ಅನಾವರಣಗೊಳ್ಳುವುದು. ಅವರ ಮಾತುಗಳಲ್ಲಿ  ದೇಶಭಕ್ತಿ, ಯುವಕರ ಬಗ್ಗೆ ಕಾಳಜಿ, ಅದ್ಯಾತ್ಮದ ವಿಷಯಗಳು ಹೆಚ್ಚು ಕಂಡು ಬರುತ್ತವೆ.ಅವರೊಂದಿಗೆ ಮಾತನಾಡುತ್ತಿದ್ದರೆ ನಮ್ಮಲ್ಲಿ ಹೊಸ ಚಿಂತನೆಗಳು ಮೂಡುತ್ತವೆ.

ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಮೆಟ್ಟಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿ, ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಅವರ ಜೀವನವೇ ಒಂದು ಪವಾಡದಂತೆ ನನಗನ್ನಿಸುತ್ತದೆ.

ನಿವೃತ್ತ ಅಂಗ್ಲ ಉಪನ್ಯಾಸಕರಾದ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರದೊಂದಿಗೆ ಜ್ಞಾನವನ್ನು ನೀಡಿ ಅವರ ವ್ಯಕ್ತಿತ್ವ ಸುಧಾರಿಸಲು ಮಾರ್ಗದರ್ಶನ ನೀಡಿದ್ದಾರೆ. "ಪರೋಪಕಾರ್ಥಂ ಇದಮಿತ್ತಂ ಶರೀರಂ" ಎಂಬ ವಾಣಿಯಂತೆ ಪರೋಪಕಾರದಲ್ಲಿ ಇವರು ಎತ್ತಿದ ಕೈ. ದೇಶ ಸುತ್ತುವುದು ಕೋಶ ಓದುವುದು ಇವರ ಪ್ರಮುಖ ಹವ್ಯಾಸಗಳು.  ಇವರು ಪ್ರಸ್ತುತ ತಮ್ಮ ಚಾರ್ ಧಾಮ್ ಯಾತ್ರೆ ಮತ್ತು ಅಂಡಮಾನ್ ಪ್ರವಾಸ ಕಥನ ಬರೆದಿದ್ದಾರೆ. ಚಾರ್ ಧಾಮ್ ಯಾತ್ರೆಯ ಅವರ ಪ್ರವಾಸ ಕಥನ ಓದುವಾಗ ಒಬ್ಬ ಯೋಗಿಯ ಆತ್ಮಕಥೆ ಓದಿದ ಅನುಭವವಾಯಿತು.ಅಂತಹ ಸಾಧಕರ ಜೊತೆಯಲ್ಲಿ ಒಡನಾಡುವುದು ನಮ್ಮ ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ.

ನಾನು ಕಳೆದ ವರ್ಷ ಅಂಡಮಾನ್ ಗೆ ಅವರ ಜೊತೆಯಲ್ಲಿ ಪ್ರವಾಸ ಹೋಗಿದ್ದೆ. ಅವರ ಅಂಡಮಾನ್ ಪ್ರವಾಸದ ಅನುಭವಗಳನ್ನು ಓದುವಾಗ ನನ್ನ ಮನದ ಭಾವನೆಗಳೇನೋ ಎಂಬ ರೀತಿಯ ಸಾಮ್ಯತೆ ಕಂಡು ಸಂತಸವಾಯಿತು.ಅದರಲ್ಲೂ ಬಾರಾಟಂಗ್ ಐಲ್ಯಾಂಡ್‌ ನಲ್ಲಿ ಅವರಿಗಾದ ಅಲೌಕಿಕ ಅನುಭವಗಳನ್ನು ನಾವು ಓದಿಯೇ ತಿಳಿಯಬೇಕು. ಈಗಾಗಲೇ ಹಲವಾರು ಕವಿತೆ ಹಾಗೂ ಲೇಖನಗಳನ್ನು ಬರೆದಿರುವ ಇವರು ಅವುಗಳನ್ನು ಪ್ರಕಟ ಮಾಡಿರಲಿಲ್ಲ. ಗೆಳೆಯರ ಬಳಗದ ಒತ್ತಾಯದ ಮೇರೆಗೆ ಬರೆದ ಈ ಪ್ರವಾಸ ಕಥನ ಈಗ ಪ್ರಕಟವಾಗಿದೆ. ಇನ್ನೂ ಹೆಚ್ಚಿನ ಕೃತಿಗಳು ಇವರ ಲೇಖನಿಯಿಂದ ಹೊರಹೊಮ್ಮಿ ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆಯಲಿ ಎಂದು ಮನಃಪೂರ್ವಕವಾಗಿ  ಹಾರೈಸುವೆ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529


ದ್ರಾವಿಡ್

 


ಗೋಡೆಯ ಹೆಮ್ಮೆಯ ನಡೆ.


ಭಾರತದ ಗೋಡೆ ನಿರಾಕರಿಸಿದೆ ಹೆಚ್ಚವರಿ ಎರಡೂವರೆಕೋಟಿ ಬಹುಮಾನದ ಮೊತ್ತ!

ಹಣದಾಸೆಗೆ ಆರೋಗ್ಯ ಹಾಳು    ಮಾಡುವ ಜಾಹಿರಾತುಗಳನ್ನು ನೀಡುವ ನಟ ನಟಿಯರು ಗಮನಿಸಬೇಕು ಇತ್ತ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529