#ಸಾತ್ವಿಕ_ಸಂಸ್ಕಾರ
ಸಮಾಜದಲ್ಲಿದಿನವು
ಹೆಚ್ಚುತ್ತಿರುವ ದುಷ್ಟಕೂಟಗಳ
ಮಾಡಬೇಕಿದೆ ಸಂಹಾರ |
ಬೆಳಸಬೇಕಿದೆ ಸರ್ವರಲೂ
ಸಾತ್ವಿಕ ಸಂಸ್ಕಾರ ||
#ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
#ಸಾತ್ವಿಕ_ಸಂಸ್ಕಾರ
ಸಮಾಜದಲ್ಲಿದಿನವು
ಹೆಚ್ಚುತ್ತಿರುವ ದುಷ್ಟಕೂಟಗಳ
ಮಾಡಬೇಕಿದೆ ಸಂಹಾರ |
ಬೆಳಸಬೇಕಿದೆ ಸರ್ವರಲೂ
ಸಾತ್ವಿಕ ಸಂಸ್ಕಾರ ||
#ಸಿಹಿಜೀವಿ
ಸಾಕು ಮಗ
ಮದುವೆಯಾಗಿ ವರ್ಷಗಳೇ
ಕಳೆದರೂ ದಂಪತಿಗೆ ಮಕ್ಕಳಾಗಲಿಲ್ಲ
ದತ್ತು ಪಡೆದ ನಂತರ ಮನೆಗೆ ಬಂದ ಸಾಕು ಮಗ |
ಮಗನಿಗೆ ಮಗುವಾದಾಗ ವಂಶೋದ್ಧಾರಕ ಬಂದನೆಂದು ಬೀಗಿದರು. ವರ್ಷಕ್ಕೊಂದರಂತೆ ಮೂರ್ನಾಲ್ಕು ಮಕ್ಕಳಾದಾಗ ಮಗನನ್ನು ಪ್ರೀತಿಯಿಂದ ಗದರಿದರು "ಸಾಕುಮಗ"||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ಇಂದಿನ ಸಿನಿಮಾಗಳು
ವರ್ಷಗಟ್ಟಲೇ ಓಡುತ್ತಿದ್ದವು
ಉತ್ತಮ ಸಂದೇಶವುಳ್ಳ,
ಕುಟುಂಬ ಸಮೇತ
ನೋಡುತ್ತಿದ್ದ ಅಂದಿನಸಿನಿಮಾಗಳು |
ಬರೀ ಮಚ್ಚು ಕೊಚ್ಚು ಎಂದು ಹಿಂಸೆ
ಅಶ್ಲೀಲತೆಯನ್ನುಬಿಂಬಿಸುತ್ತಾ
ಚಿತ್ರಮಂದಿರಕ್ಕೆ ಬಂದ ವೇಗದಲ್ಲೇ ಓಡುತ್ತಿವೆ ಇಂದಿನ ಸಿನಿಮಾಗಳು ||
#ಸಿಹಿಜೀವಿ
*#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು @75*
ಪರಕೀಯರ ಸಂಕೋಲೆಯಿಂದ ಬಿಡಿಸಿಕೊಳ್ಳಲು
ಬಲಿದಾನ ಮಾಡಿದ ಮಹನೀಯರು ನೂರಾರು |
ಅವರೆಲ್ಲರನ್ನೂ ಸ್ಮರಿಸುತ್ತಾ ನಮ್ಮರಾಷ್ಟ್ರವನ್ನು ಇನ್ನೂ ಸದೃಡಗೊಳಿಸುವ ಸಂಕಲ್ಪದಿಂದ
ಆಚರಿಸೋಣ ಸ್ವರಾಜ್ಯದ ಮುಕ್ಕಾಲ್ನೂರು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ನಾವುಗಳೇ ಹಾಗೆ....
ನಾವುಗಳೇ ಹಾಗೇ
ಗೊತ್ತಾಗುವುದೇ ಇಲ್ಲ
ನಮಗೇನು ಇಷ್ಟ
ಅರ್ಥ ಮಾಡಿಕೊಳ್ಳಲು
ನಮಗೇ ಬಲು ಕಷ್ಟ
ವಯಸ್ಸಾದ ಹಿರಿಯರಿಗೆ
ಅನ್ನ ನೀಡಲು ಯೋಚಿಸುವರು ಈ ಜನ
ಅವರು ಸತ್ತಾಗ ತಿಥಿಯಂದು ಎಲ್ಲರನೂ ಕರೆದು ಹಾಕುವರು ಭರ್ಜರಿ ಬೋಜನ .
ಬದುಕಿದ್ದಾಗ ಕೆಲವರಿಗೆ ತೊಡಲು
ಸಿಗುವುದಿಲ್ಲ ಒಳ್ಳೆಯ ಬಟ್ಟೆ
ಹೆಣಕ್ಕೆ ಸಿಂಗಾರ ಮಾಡಲು
ತಂದೇ ತರುವರು ಹೊಸ ಬಟ್ಟೆ
ನಮಗೆ ಆರೋಗ್ಯ ಕೆಟ್ಟಾಗ
ಯಾರೂ ಬಂದು ಮೂಸುವುದಿಲ್ಲ
ಅಂತಿಮ ಯಾತ್ರೆಯಲ್ಲಿ ಶವಕ್ಕೆ
ಹಾಕಿದ ಸುಗಂಧ ಮಾಸುವುದಿಲ್ಲ .
ಬದುಕಿದ್ದಾಗ ಕಷ್ಟದಲ್ಲಿರುವವರ ಕಂಡು ಹಂಗಿಸಿ ನಗುವರು
ಅದೇ ವ್ಯಕ್ತಿ ಸತ್ತಾಗ ತೋರ್ಪಡಿಕೆಗೆ ಬಿಕ್ಕಿ ಬಿಕ್ಕಿ ಅಳುವರು .
ಬದುಕಿದ್ದಾಗ ಕನಿಷ್ಟ ಗೌರವ ಕೊಡದೆ
ಮಾಡುವರು ತಿರಸ್ಕಾರ
ಸತ್ತಾಗ ಭಯ ಭಕ್ತಿಯಿಂದ ಮಾಡುವರು ನಮಸ್ಕಾರ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು
9900925529