28 ಜುಲೈ 2022

ಸಾತ್ವಿಕ ಸಂಸ್ಕಾರ

 #ಸಾತ್ವಿಕ_ಸಂಸ್ಕಾರ 


ಸಮಾಜದಲ್ಲಿದಿನವು 

ಹೆಚ್ಚುತ್ತಿರುವ ದುಷ್ಟಕೂಟಗಳ

ಮಾಡಬೇಕಿದೆ ಸಂಹಾರ |

ಬೆಳಸಬೇಕಿದೆ ಸರ್ವರಲೂ

ಸಾತ್ವಿಕ ಸಂಸ್ಕಾರ ||


#ಸಿಹಿಜೀವಿ

24 ಜುಲೈ 2022

ಸಾಕು ಮಗ...

 



ಸಾಕು ಮಗ 


ಮದುವೆಯಾಗಿ ವರ್ಷಗಳೇ 

ಕಳೆದರೂ ದಂಪತಿಗೆ ಮಕ್ಕಳಾಗಲಿಲ್ಲ

ದತ್ತು ಪಡೆದ ನಂತರ ಮನೆಗೆ ಬಂದ ಸಾಕು ಮಗ |

ಮಗನಿಗೆ ಮಗುವಾದಾಗ ವಂಶೋದ್ಧಾರಕ ಬಂದನೆಂದು ಬೀಗಿದರು. ವರ್ಷಕ್ಕೊಂದರಂತೆ  ಮೂರ್ನಾಲ್ಕು ಮಕ್ಕಳಾದಾಗ  ಮಗನನ್ನು ಪ್ರೀತಿಯಿಂದ ಗದರಿದರು "ಸಾಕುಮಗ"||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ಇಂದಿನ ಸಿನಿಮಾಗಳು

 ಇಂದಿನ ಸಿನಿಮಾಗಳು


ವರ್ಷಗಟ್ಟಲೇ ಓಡುತ್ತಿದ್ದವು 

ಉತ್ತಮ ಸಂದೇಶವುಳ್ಳ, 

ಕುಟುಂಬ ಸಮೇತ

ನೋಡುತ್ತಿದ್ದ  ಅಂದಿನಸಿನಿಮಾಗಳು |

ಬರೀ ಮಚ್ಚು ಕೊಚ್ಚು ಎಂದು ಹಿಂಸೆ 

ಅಶ್ಲೀಲತೆಯನ್ನುಬಿಂಬಿಸುತ್ತಾ 

ಚಿತ್ರಮಂದಿರಕ್ಕೆ ಬಂದ ವೇಗದಲ್ಲೇ ಓಡುತ್ತಿವೆ ಇಂದಿನ ಸಿನಿಮಾಗಳು ||


#ಸಿಹಿಜೀವಿ

23 ಜುಲೈ 2022

ಸ್ವರಾಜ್ಯಕ್ಕೆ ಮುಕ್ಕಾಲ್ನೂರು ....

 

*#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು @75*



ಪರಕೀಯರ ಸಂಕೋಲೆಯಿಂದ ಬಿಡಿಸಿಕೊಳ್ಳಲು

ಬಲಿದಾನ ಮಾಡಿದ ಮಹನೀಯರು ನೂರಾರು | 

ಅವರೆಲ್ಲರನ್ನೂ ಸ್ಮರಿಸುತ್ತಾ ನಮ್ಮರಾಷ್ಟ್ರವನ್ನು ಇನ್ನೂ ಸದೃಡಗೊಳಿಸುವ ಸಂಕಲ್ಪದಿಂದ 

ಆಚರಿಸೋಣ ಸ್ವರಾಜ್ಯದ ಮುಕ್ಕಾಲ್ನೂರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

ನಾವುಗಳೇ ಹಾಗೆ....


 


ನಾವುಗಳೇ ಹಾಗೆ....


ನಾವುಗಳೇ ಹಾಗೇ 

ಗೊತ್ತಾಗುವುದೇ ಇಲ್ಲ 

ನಮಗೇನು ಇಷ್ಟ

ಅರ್ಥ ಮಾಡಿಕೊಳ್ಳಲು 

ನಮಗೇ ಬಲು ಕಷ್ಟ  


ವಯಸ್ಸಾದ ಹಿರಿಯರಿಗೆ 

ಅನ್ನ ನೀಡಲು ಯೋಚಿಸುವರು ಈ ಜನ 

ಅವರು ಸತ್ತಾಗ ತಿಥಿಯಂದು ಎಲ್ಲರನೂ ಕರೆದು ಹಾಕುವರು ಭರ್ಜರಿ ಬೋಜನ .


ಬದುಕಿದ್ದಾಗ ಕೆಲವರಿಗೆ ತೊಡಲು

ಸಿಗುವುದಿಲ್ಲ ಒಳ್ಳೆಯ ಬಟ್ಟೆ 

ಹೆಣಕ್ಕೆ ಸಿಂಗಾರ ಮಾಡಲು 

ತಂದೇ ತರುವರು ಹೊಸ ಬಟ್ಟೆ 


ನಮಗೆ ಆರೋಗ್ಯ ಕೆಟ್ಟಾಗ 

ಯಾರೂ ಬಂದು ಮೂಸುವುದಿಲ್ಲ

ಅಂತಿಮ ಯಾತ್ರೆಯಲ್ಲಿ ಶವಕ್ಕೆ

ಹಾಕಿದ  ಸುಗಂಧ ಮಾಸುವುದಿಲ್ಲ .


ಬದುಕಿದ್ದಾಗ ಕಷ್ಟದಲ್ಲಿರುವವರ ಕಂಡು ಹಂಗಿಸಿ ನಗುವರು 

ಅದೇ ವ್ಯಕ್ತಿ ಸತ್ತಾಗ ತೋರ್ಪಡಿಕೆಗೆ   ಬಿಕ್ಕಿ ಬಿಕ್ಕಿ ಅಳುವರು .


ಬದುಕಿದ್ದಾಗ ಕನಿಷ್ಟ ಗೌರವ ಕೊಡದೆ 

ಮಾಡುವರು ತಿರಸ್ಕಾರ 

ಸತ್ತಾಗ ಭಯ ಭಕ್ತಿಯಿಂದ ಮಾಡುವರು ನಮಸ್ಕಾರ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529