18 ಜುಲೈ 2022

ಮುಂಗಾರು ಅಧಿವೇಶನ ...

 


#ಮುಂಗಾರುಅಧಿವೇಶನ 


ಶುರುವಾಗುತ್ತಿದೆ ಈ ಬಾರಿಯ 

ಮುಂಗಾರಿನಸಂಸತ್  ಅಧಿವೇಶನ |

ಜನ ಹಿತ ಬಯಸುವ ಚರ್ಚೆಗಳಾಗಲಿ 

ಜನಪ್ರತಿನಿಧಿಗಳು ಪರಸ್ಪರ ಜಗಳವಾಡಿ ಸದನದಲ್ಲಿ ಮಾಡದಿರಲಿ

ಕೈ ಕೈ ಮಿಲಾಯಿಸಿ  ಕದನ ||


@ಸಿಹಿಜೀವಿ

ನನ್ನೊಳಗಿನ ನೀನು.


 



#ನನ್ನೊಳಗಿರುವ_ನೀನು 


ಎಷ್ಟು ಪ್ರಯತ್ನ

ಪಟ್ಟರೂ ಆಗುತ್ತಿಲ್ಲ 

ಮರೆಯಲು ನಿನ್ನನ್ನು ನಾನು |

ಬಿಡದಂತೆ ಸದಾ

ಕಾಡುತ್ತಲೇ ಇರುವೆ 

ನನ್ನೊಳಗಿನ ನೀನು ||


@ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

07 ಜುಲೈ 2022

ಪ್ರಕೃತಿಯ ಶಿಶು


 


#ಪ್ರಕೃತಿಯ_ಶಿಶು


ಮರೆತೇ ಬಿಡುವೆನು 

ನನ್ನನ್ನೇ ನಾನು

ನೋಡುತಲಿದ್ದರೆ

ಈ ಇಳೆ, ಆ ಬಾನು|| 

ಹೇಳಿಕೊಳ್ಳಲು ನನಗೆ

ಖಂಡಿತ ಹೆಮ್ಮೆ ಏಕೆಂದರೆ

ಪ್ರಕೃತಿಯ ಶಿಶು ನಾನು


#ಸಿಹಿಜೀವಿ

ಬೆಳಕು


 


#ಬೆಳಕು 

ಕತ್ತಲಲ್ಲಿ ತೊಳಲಿ

ಬಳಲಿದುದು ಸಾಕು||

ಮುನ್ನಡೆ ,ಪ್ರಯತ್ನಿಸು

ಮುಂದಿದೆ ಬೆಳಕು ||


#ಸಿಹಿಜೀವಿ



06 ಜುಲೈ 2022

ಕಜ್ಜಾಯ .ಹನಿ

 

ಬಾಲ್ಯದಲ್ಲಿ ಗೆಳೆಯರ 

ಕೂಡಿ ಮನೆಯಿಂದ

ಆಡಲು ಹೊರಟರೆ

ಕಳೆದದ್ದೇ ಗೋತ್ತಾಗುತ್ತಿರಲಿಲ್ಲ

ಸಮಯ|

ಸಂಜೆ ಮನೆಗೆ ಹೋದಾಗ

ಅಮ್ಮನಿಂದ ಸಿಗುತ್ತಿತ್ತು

ಬಿಸಿ ಬಿಸಿ ಕಜ್ಜಾಯ||


ಸಿಹಿಜೀವಿ