07 ಜುಲೈ 2022

ಬೆಳಕು


 


#ಬೆಳಕು 

ಕತ್ತಲಲ್ಲಿ ತೊಳಲಿ

ಬಳಲಿದುದು ಸಾಕು||

ಮುನ್ನಡೆ ,ಪ್ರಯತ್ನಿಸು

ಮುಂದಿದೆ ಬೆಳಕು ||


#ಸಿಹಿಜೀವಿ



06 ಜುಲೈ 2022

ಕಜ್ಜಾಯ .ಹನಿ

 

ಬಾಲ್ಯದಲ್ಲಿ ಗೆಳೆಯರ 

ಕೂಡಿ ಮನೆಯಿಂದ

ಆಡಲು ಹೊರಟರೆ

ಕಳೆದದ್ದೇ ಗೋತ್ತಾಗುತ್ತಿರಲಿಲ್ಲ

ಸಮಯ|

ಸಂಜೆ ಮನೆಗೆ ಹೋದಾಗ

ಅಮ್ಮನಿಂದ ಸಿಗುತ್ತಿತ್ತು

ಬಿಸಿ ಬಿಸಿ ಕಜ್ಜಾಯ||


ಸಿಹಿಜೀವಿ

05 ಜುಲೈ 2022

ಸಿಹಿಜೀವಿಯ ಹನಿ

 


*ಸಿಹಿಜೀವಿಯ ಹನಿ*


ಮದುವೆಯಾದ ಪುರುಷ

ಬೀಗುವನು ಎಲ್ಲರ ಮುಂದೆ

ನನಗೆ ಸಿಕ್ಕಿದೆ ಸಂಸಾರಸ್ತ 

ಎಂಬ ಮಹಾಗಾದಿ|

ಕ್ರಮೇಣ ಅರಿವಾಗುವಾಗುವುದು

ಅದು ಅರಸನ ಗಾದಿಯಲ್ಲ

ಅಗೋಚರ ಕಾಡಿನ ಹಾದಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ವಿಶ್ವವಾಣಿ .೩.೭/೨೨


 

01 ಜುಲೈ 2022

ನುಡಿತೋರಣ

 

*ನುಡಿತೋರಣ*


ಊರು ಬೇರೆ ಕೆಲಸ ಬೇರೆ

ಸಂಬಂಧಿಗಳಂತೂ ಅಲ್ಲವೇ ಅಲ್ಲ 

ಆದರೂ ಹೇಳುತ್ತಿದೆ

ನಾವೆಲ್ಲರೂ ಒಂದೇ

ಎಂದು ನಮ್ಮ ಕಣ ಕಣ|

ಹನಿ,ಕವನ,ಕಥೆ,ಲೇಖನ

ಮನದ ಭಾವನೆಗಳ ಹಂಚಿ

ಕಟ್ಟಿ ಬಿಡೋಣ ನಮ್ಮ

ಕನ್ನಡಾಂಬೆಗೆ ನುಡಿತೋರಣ||


*ಸಿಹಿಜೀವಿ*

ತುಮಕೂರು