#ಬೆಳಕು
ಕತ್ತಲಲ್ಲಿ ತೊಳಲಿ
ಬಳಲಿದುದು ಸಾಕು||
ಮುನ್ನಡೆ ,ಪ್ರಯತ್ನಿಸು
ಮುಂದಿದೆ ಬೆಳಕು ||
#ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬಾಲ್ಯದಲ್ಲಿ ಗೆಳೆಯರ
ಕೂಡಿ ಮನೆಯಿಂದ
ಆಡಲು ಹೊರಟರೆ
ಕಳೆದದ್ದೇ ಗೋತ್ತಾಗುತ್ತಿರಲಿಲ್ಲ
ಸಮಯ|
ಸಂಜೆ ಮನೆಗೆ ಹೋದಾಗ
ಅಮ್ಮನಿಂದ ಸಿಗುತ್ತಿತ್ತು
ಬಿಸಿ ಬಿಸಿ ಕಜ್ಜಾಯ||
ಸಿಹಿಜೀವಿ
*ಸಿಹಿಜೀವಿಯ ಹನಿ*
ಮದುವೆಯಾದ ಪುರುಷ
ಬೀಗುವನು ಎಲ್ಲರ ಮುಂದೆ
ನನಗೆ ಸಿಕ್ಕಿದೆ ಸಂಸಾರಸ್ತ
ಎಂಬ ಮಹಾಗಾದಿ|
ಕ್ರಮೇಣ ಅರಿವಾಗುವಾಗುವುದು
ಅದು ಅರಸನ ಗಾದಿಯಲ್ಲ
ಅಗೋಚರ ಕಾಡಿನ ಹಾದಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ನುಡಿತೋರಣ*
ಊರು ಬೇರೆ ಕೆಲಸ ಬೇರೆ
ಸಂಬಂಧಿಗಳಂತೂ ಅಲ್ಲವೇ ಅಲ್ಲ
ಆದರೂ ಹೇಳುತ್ತಿದೆ
ನಾವೆಲ್ಲರೂ ಒಂದೇ
ಎಂದು ನಮ್ಮ ಕಣ ಕಣ|
ಹನಿ,ಕವನ,ಕಥೆ,ಲೇಖನ
ಮನದ ಭಾವನೆಗಳ ಹಂಚಿ
ಕಟ್ಟಿ ಬಿಡೋಣ ನಮ್ಮ
ಕನ್ನಡಾಂಬೆಗೆ ನುಡಿತೋರಣ||
*ಸಿಹಿಜೀವಿ*
ತುಮಕೂರು