*ಅಕಾಲಿಕ ಮಳೆ*
ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಅಕಾಲಿಕ ಮಳೆ*
ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ಮಾನವನ ಮೆದುಳು ಹೆಚ್ಚು ಭಾಷೆಗಳನ್ನು ಕಲಿಯಲು ಶಕ್ತಿ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ .ಹೆರಾಲ್ಡ್ ಸೃಜ್ ಎಂಬುವವರು ನಾಲ್ಕು ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು ಎಂಬುದೇ ಇದಕ್ಕೆ ಸಾಕ್ಷಿ. ನಮ್ಮ ಮಾತೃಭಾಷೆ ಜೊತೆಗೆ ನಾವೂ ಕೂಡಾ ಇತರೆ ಭಾಷೆಗಳ ಕಲಿಯೋಣ . ಇತರ ಭಾಷೆಗಳನ್ನು ಕಲಿಯುವ ಅನುಕೂಲಗಳಲ್ಲಿ ನಮ್ಮ ಸಂವಹನ ಉತ್ತಮವಾಗುತ್ತದೆ,ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವ್ಯಕ್ತಿತ್ವ ನಮಗರಿವಿಲ್ಲದೇ ಉತ್ತಮಗೊಳ್ಳುತ್ತದೆ.ಹಾಗಾದರೆ ತಡವೇಕೆ ಎರಡು ಸಾವಿರದ ಇಪ್ಪತ್ತೆರಡರ ಈ ವರ್ಷದಲ್ಲಿ ಕನಿಷ್ಟ ಎರಡು ಹೊಸ ಭಾಷೆ ಕಲಿಯೋಣ.
ಸಿಹಿಜೀವಿ
ಸಿ. ಜಿ ವೆಂಕಟೇಶ್ವರ
ಯಾರು ಸರಿ
ಕೂಗುತ ಬಂದನು ಬೀದಿಯ ಬದಿಯಲಿ ಪ್ಲಾಸ್ಟಿಕ್ ಮಾರುವ
ಮಾಮಣ್ಣ|
ಬ್ರಷ್ಷು, ಬಾಕ್ಸು, ತಟ್ಟೇ ಲೋಟ
ಎಲ್ಲಾ ಪ್ಲಾಸ್ಟಿಕ್ ಕೊಳ್ಳಿರಿ ಎನ್ನತ್ತಾ
ಕೂಗಿದನು ಕೇಳಣ್ಣ||
ಪುಟ್ಟನ ಅಮ್ಮ ಸರಸರ ನಡೆದಳು
ಪ್ಲಾಸ್ಟಿಕ್ ತೇರಿನ ಸನಿಹಕ್ಕೆ|
ಬಾಲಂಗೋಚಿಯ ತರದಲಿ ಅವನೂ
ಓಡಿದ ಪ್ಲಾಸ್ಟಿಕ್ ಗುಡ್ಡದ ಪಕ್ಕಕ್ಕೆ ||
ಪುಟ್ಟನು ಕೇಳಿದ ಅಮ್ಮನಿಗೆ
ಪ್ಲಾಸ್ಟಿಕ್ ಬೇಡ ಎಂದರು ನಮ್ಮ
ಮಿಸ್ಸು ಯಾಕೆ ಕೊಳ್ಳುವೆ ಪ್ಲಾಸ್ಟಿಕ್ಕು |
ಅಮ್ಮ ನುಲಿಯುತ ನುಡಿದಳು
ಕಮ್ಮಿ ಬೆಲೆಗೆ ವಸ್ತುಗಳು ಸಿಕ್ಕರೆ
ಸುಮ್ಮನೆ ಕೊಳ್ಳುಬೇಕು ಅದೇ ಲಾಜಿಕ್ಕು ||
ಪುಟ್ಟ ಮತ್ತೆ ಹೇಳಿದನು
ಅಮ್ಮಾ ಪ್ಲಾಸ್ಟಿಕ್ ಬೇಡ ಪರಿಸರ ವನ್ನು ಉಳಿಸೋಣ|
ಅಮ್ಮ ಗದರಿದಳು ಕಡಿಮೆ ದುಡ್ಡಿನಲ್ಲಿ
ಸಿಕ್ಕ ವಸ್ತುಗಳ ಬಳಸಿ ಹಣವ ಉಳಿಸೋಣ||
ಪುಟ್ಟನ ಮನದಲಿ ಅನುಮಾನ ಮೂಡುತ ಹಿಡಿದನು ಮನೆಯ ದಾರಿ|
ಶಾಲೆಯ ಮಿಸ್ಸು, ಅಮ್ಮ
ಇವರಲಿ ಯಾರು ಸರಿ??
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
*ನಿಲುವುಗನ್ನಡಿ*
ನಮ್ಮ ಮನೆಯಲ್ಲಿ
ನೋಡಿಕೊಳ್ಳುವುದಿಲ್ಲ
ನನ್ನ ಬಿಂಬವನ್ನು,
ಕಾಣದಂತೆ ಎತ್ತಿಟ್ಟಿರುವೆ
ನಮ್ಮ ಮನೆಯ ಕನ್ನಡಿ|
ಕಾರಣವಿಷ್ಟೇ ಈಗೀಗ
ನೋಡುತ್ತಲೇ ಇರುವೆ ನಿನ್ನ
ಕಣ್ಣುಗಳ ,ಅವುಗಳೇ ನಿಲುವುಗನ್ನಡಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ