ಶಿಶುಗೀತೆ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಿಶುಗೀತೆ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಆಗಸ್ಟ್ 2022

ಮಕ್ಕಳೆ ಗುಟ್ಟೊಂದ ಹೇಳುವೆ...


 


ಗುಟ್ಟೊಂದು ಹೇಳುವೆ ಕೇಳಿ....



ಗುಟ್ಟೊಂದ ಹೇಳುವೆ ಕೇಳಿ ಮಕ್ಕಳೆ

ಸಾಧಕರಾಗಿ ,ಮುಂದೆ ನಿಮ್ಮದೇ ಇಳೆ||


ಆಹಾರದಲ್ಲಿ ಇರಲಿ ಹಿತಮಿತ 

ನಿನ್ನದಾಗುವುದು ಆರೋಗ್ಯಪಥ ||


ಯಶಸ್ಸಿಗೆ ವಾಮಮಾರ್ಗಗಳಿಲ್ಲ

ಪ್ರಾಮಾಣಿಕ ಪ್ರಯತ್ನಕ್ಕೆ ಸೋಲಿಲ್ಲ ||


ರೂಢಿಸಿಕೊಳ್ಳಿ ಸರಳಜೀವನ 

ಗೌರವಿಸುವರು ನಿನ್ನ ಸಕಲಜನ ||


ಪೂಜಿಸದಿದ್ದರೂ ತಪ್ಪಿಲ್ಲ ದೇವರ

ಗೌರವಿಸುವುದ ಕಲಿ ಗುರುಹಿರಿಯರ ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


02 ಆಗಸ್ಟ್ 2022

ಎಳೆಯರು ನಾವು....

 #ಕನಸು_ಕಂಗಳ_ಎಳೆಯರು_ನಾವು 


ಎಳೆಯರು ನಾವು 

ಗೆಳೆಯರು ನಾವು 

ಕಣಿದಾಡುವೆವು 

ನಲಿದಾಡುವೆವು.


ಅತಿಯಾಸೆ ನಮಗಿಲ್ಲ

ಸವಿವೆವು ತುಂಡುಬೆಲ್ಲ 

ನಾವು ಚಿಕ್ಕವರಲ್ಲ 

ಎಲ್ಲರಿಗಿಂತ ದೊಡ್ಡವರಲ್ಲ



ನಮ್ಮ ಬಾಲ್ಯ ನಮಗಿರಲಿ 

ಏನೇನೋ ಕಟ್ಟಳೆ ನಿಮಗಿರಲಿ

ಜಾತಿ ಮತಗಳ ಹಂಗು ಬೇಡ

ನಮ್ಮದು ಸುಂದರ ತೋಟ 



#ಸಿಹಿಜೀವಿ

23 ಏಪ್ರಿಲ್ 2022

ನೀವು ನೀವಾಗಿ .ಶಿಶುಗೀತೆ


 *ನೀವು ನೀವಾಗಿ*

 ಶಿಶುಗೀತೆ


ಒಂದು  ಕಾಡಿನಲಿ ಕೋಳಿಯು

ಬೆಟ್ಟವು ಉಭಯ ಕುಶಲ

ಮಾತಾಡಿದವು .


ಕೋಳಿಯು ಬೆಟ್ಟಕೆ 

ಬೇಸರದಿ  ಹೇಳಿತು 

ನೀನು  ಎತ್ತರ ನಾನೇಕೆ

ಕುಳ್ಳ ಎಂದು ಕರುಬಿತು.


ಬೇಡ ನೀನು ನೀನಾಗಿರು

ಎಂಬ  ಬೆಟ್ಟದ ಸಲಹೆ 

ಕೋಳಿಗೆ ರುಚಿಸಲಿಲ್ಲ

ಕಾಳು ಕಡಿ‌ತಿಂದು 

ಬೆಟ್ಟದೆತ್ತಕೇರುವ ಪ್ರಯತ್ನ

ನಿಲ್ಲಿಸಲಿಲ್ಲ .


ಶಕ್ತಿ ಪಡೆದು ಹಂತ ಹಂತದಿ

ಮರವನೇರಿ ಬೆಟ್ಟದ ಸಮಕ್ಕೆ 

ಏರಲು ಎತ್ತರದ ಕೊಂಬೆ ತಲುಪಿತು .

ನಾನೂ ಎತ್ತರದಲ್ಲಿರುವೆ 

ಎಂದು ಸಂತಸದಿ ಬೀಗಿತು.


ಬೇಟೆಗಾರ ಎತ್ತರದಲ್ಲಿರುವ ಕೋಳಿ

ನೋಡಿ ಕೋವಿಯಿಂದ ಕೊಂದ 

ಬೆಟ್ಟ ಮರುಗಿ ಜಗಕೆ ಸಾರಿತು 

ನೀವು ನೀವಾಗಿ ಅದೇ ಆನಂದ .


ಸಿಹಿಜೀವಿ

*ಸಿ.ಜಿ.ವೆಂಕಟೇಶ್ವರ*

ತುಮಕೂರು





23 ಫೆಬ್ರವರಿ 2022

ಯಾರು ಸರಿ .


 


ಯಾರು  ಸರಿ 


ಕೂಗುತ ಬಂದನು ಬೀದಿಯ ಬದಿಯಲಿ ಪ್ಲಾಸ್ಟಿಕ್ ಮಾರುವ

ಮಾಮಣ್ಣ|

ಬ್ರಷ್ಷು, ಬಾಕ್ಸು, ತಟ್ಟೇ ಲೋಟ

ಎಲ್ಲಾ ಪ್ಲಾಸ್ಟಿಕ್ ಕೊಳ್ಳಿರಿ ಎನ್ನತ್ತಾ

ಕೂಗಿದನು ಕೇಳಣ್ಣ||


ಪುಟ್ಟನ ಅಮ್ಮ ಸರಸರ ನಡೆದಳು

ಪ್ಲಾಸ್ಟಿಕ್ ತೇರಿನ ಸನಿಹಕ್ಕೆ|

ಬಾಲಂಗೋಚಿಯ ತರದಲಿ ಅವನೂ

ಓಡಿದ ಪ್ಲಾಸ್ಟಿಕ್ ಗುಡ್ಡದ ಪಕ್ಕಕ್ಕೆ ||


ಪುಟ್ಟನು ಕೇಳಿದ ಅಮ್ಮನಿಗೆ 

ಪ್ಲಾಸ್ಟಿಕ್ ಬೇಡ ಎಂದರು ನಮ್ಮ

ಮಿಸ್ಸು ಯಾಕೆ ಕೊಳ್ಳುವೆ ಪ್ಲಾಸ್ಟಿಕ್ಕು |

ಅಮ್ಮ ನುಲಿಯುತ ನುಡಿದಳು 

ಕಮ್ಮಿ ಬೆಲೆಗೆ ವಸ್ತುಗಳು ಸಿಕ್ಕರೆ

ಸುಮ್ಮನೆ ಕೊಳ್ಳುಬೇಕು ಅದೇ ಲಾಜಿಕ್ಕು ||


ಪುಟ್ಟ ಮತ್ತೆ ಹೇಳಿದನು 

ಅಮ್ಮಾ ಪ್ಲಾಸ್ಟಿಕ್ ಬೇಡ ಪರಿಸರ ವನ್ನು ಉಳಿಸೋಣ| 

ಅಮ್ಮ ಗದರಿದಳು  ಕಡಿಮೆ ದುಡ್ಡಿನಲ್ಲಿ 

ಸಿಕ್ಕ ವಸ್ತುಗಳ ಬಳಸಿ ಹಣವ ಉಳಿಸೋಣ||


ಪುಟ್ಟನ ಮನದಲಿ ಅನುಮಾನ  ಮೂಡುತ ಹಿಡಿದನು ಮನೆಯ ದಾರಿ|

ಶಾಲೆಯ ಮಿಸ್ಸು, ಅಮ್ಮ 

ಇವರಲಿ  ಯಾರು  ಸರಿ??


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.