ಕಡಲಾಗಬೇಕು
ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|
ಜಗದೆಲ್ಲ ಕಣ್ಣೀರನ್ನು ಒರೆಸಿ
ತನ್ನಲ್ಲಿ ಇಂಗಿಸಿಕೊಂಡು
ತಾನು ಉಪ್ಪಾದರೂ
ಸರಿ ನೋಡುವವರಿಗೆ
ಬರೀ ಸೌಂದರ್ಯ
ತೋರಬೇಕು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಡಲಾಗಬೇಕು
ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|
ಜಗದೆಲ್ಲ ಕಣ್ಣೀರನ್ನು ಒರೆಸಿ
ತನ್ನಲ್ಲಿ ಇಂಗಿಸಿಕೊಂಡು
ತಾನು ಉಪ್ಪಾದರೂ
ಸರಿ ನೋಡುವವರಿಗೆ
ಬರೀ ಸೌಂದರ್ಯ
ತೋರಬೇಕು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಜಯಂತಿಯವರಿಗೆ ಎರಡು ಹನಿ ನಮನ
೧
ಅಭಿನಯ ಶಾರದೆ
ಇನ್ನಿಲ್ಲ ಎಂದು
ಏಕೆ ಚಿಂತಿಸುತಿ|
ಅವರ ಚಿತ್ರಗಳು
ಜೀವಂತ ,ಅವರ
ಹೆಸರಲ್ಲೇ ಇದೆ
ಜಯಂತಿ||
೨
ಐನೂರು ಚಿತ್ರಗಳಲ್ಲಿ
ಜಯಂತಿಯವರು
ಅಭಿನಯಿಸಿದ
ಪಾತ್ರಗಳ ಪಟ್ಟಿ
ಬೆಳೆಯುತ್ತದೆ,ನಾಯಕಿ,
ಅಜ್ಜಿ, ಅವ್ವ |
ಇವುಗಳಲ್ಲೆಲ್ಲಾ ನಾವು
ಮರೆಯೋದಿಲ್ಲ
ನಾಗರಹಾವು ಚಿತ್ರದ
ಓಬವ್ಚ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮಳೆಯಲಿ...
ಮಳೆಗೆ ಮುಖವೊಡ್ಡಿ
ನಿಂತಿದ್ದೆ
ನನ್ನ ಕಣ್ಣಿಂದ
ಬೀಳುವ
ಕಣ್ಣೀರ ಹನಿಗಳು
ಯಾರಿಗೂ
ಗೊತ್ತಾಗದಿರಲೆಂದು!
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಹಣ ಪಾಶಾಣ* ನ್ಯಾನೋ ಕಥೆ
ಹಣವೆಂದರೆ ಪಾಷಾಣ, ಬದುಕಲು ಹಣವೊಂದೇ ಬೇಕಿಲ್ಲ, ಹಣ ಸಂಬಂಧಗಳನ್ನು ಬೇರ್ಪಡಿಸುತ್ತದೆ .ಆದಷ್ಟೂ ಹಣದಿಂದ ದೂರವಿರಿ ಎಂದು ವೇದಿಕೆಯಲ್ಲಿ ಭಾಷಣ ಮಾಡಿದ ಸ್ವಾಮಿಜಿಗಳು ವೇದಿಕೆಯ ಕೆಳಭಾಗದಲ್ಲಿ ನಮಸ್ಕರಿಸಿದ ಭಕ್ತನಿಗೆ ತನ್ನ ಮಠಕ್ಕೆ ದೇಣಿಗೆ ಕೇಳಿದರು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ