30 ಜುಲೈ 2021

ಕಡಲಾಗಬೇಕು .ಹನಿ


 


ಕಡಲಾಗಬೇಕು


ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|

ಜಗದೆಲ್ಲ ಕಣ್ಣೀರನ್ನು ಒರೆಸಿ

ತನ್ನಲ್ಲಿ ಇಂಗಿಸಿಕೊಂಡು

ತಾನು ಉಪ್ಪಾದರೂ 

ಸರಿ ನೋಡುವವರಿಗೆ

ಬರೀ ಸೌಂದರ್ಯ

ತೋರಬೇಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


27 ಜುಲೈ 2021

ಜಯಂತಿಯವರಿಗೆ ಹನಿ ನಮನ

ಜಯಂತಿಯವರಿಗೆ ಎರಡು ಹನಿ ನಮನ 



ಅಭಿನಯ ಶಾರದೆ 

ಇನ್ನಿಲ್ಲ ಎಂದು

ಏಕೆ ಚಿಂತಿಸುತಿ|

ಅವರ ಚಿತ್ರಗಳು

ಜೀವಂತ ,ಅವರ

ಹೆಸರಲ್ಲೇ ಇದೆ

ಜಯಂತಿ||



ಐನೂರು ಚಿತ್ರಗಳಲ್ಲಿ

ಜಯಂತಿಯವರು 

ಅಭಿನಯಿಸಿದ 

ಪಾತ್ರಗಳ ಪಟ್ಟಿ

ಬೆಳೆಯುತ್ತದೆ,ನಾಯಕಿ, 

ಅಜ್ಜಿ, ಅವ್ವ |

ಇವುಗಳಲ್ಲೆಲ್ಲಾ ನಾವು

ಮರೆಯೋದಿಲ್ಲ

ನಾಗರಹಾವು ಚಿತ್ರದ

ಓಬವ್ಚ||




ಸಿಹಿಜೀವಿ

ಸಿ ಜಿ ವೆಂಕಟೇಶ್ವರ


 

25 ಜುಲೈ 2021

ಮಳೆಯಲಿ ಹನಿ


 


ಮಳೆಯಲಿ...


ಮಳೆಗೆ ಮುಖವೊಡ್ಡಿ

ನಿಂತಿದ್ದೆ

ನನ್ನ ಕಣ್ಣಿಂದ

ಬೀಳುವ

ಕಣ್ಣೀರ ಹನಿಗಳು

ಯಾರಿಗೂ

ಗೊತ್ತಾಗದಿರಲೆಂದು!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಹಣ ಪಾಶಾಣ .ನ್ಯಾನೋ ಕಥೆ


 



*ಹಣ ಪಾಶಾಣ* ನ್ಯಾನೋ ಕಥೆ 


ಹಣವೆಂದರೆ ಪಾಷಾಣ, ಬದುಕಲು ಹಣವೊಂದೇ ಬೇಕಿಲ್ಲ, ಹಣ ಸಂಬಂಧಗಳನ್ನು ಬೇರ್ಪಡಿಸುತ್ತದೆ .ಆದಷ್ಟೂ ಹಣದಿಂದ ದೂರವಿರಿ ಎಂದು ವೇದಿಕೆಯಲ್ಲಿ ಭಾಷಣ ಮಾಡಿದ ಸ್ವಾಮಿಜಿಗಳು ವೇದಿಕೆಯ ಕೆಳಭಾಗದಲ್ಲಿ ನಮಸ್ಕರಿಸಿದ ಭಕ್ತನಿಗೆ ತನ್ನ ಮಠಕ್ಕೆ ದೇಣಿಗೆ ಕೇಳಿದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ