28 ಏಪ್ರಿಲ್ 2020

ಅವನಾಗು ನೀನು( ಶಂಕರ ಜಯಂತಿ ನೆನಪಿಗೆ ಹನಿ)



*ಅವನಾಗು ನೀನು*

(ಇಂದು ಶಂಕರ ಭಗವತ್ಪಾದರು ಮತ್ತು ರಾಮಾನುಜಾಚಾರ್ಯರ ಜಯಂತಿ)

ಶಂಕರರು ಅಂದರು ಅದ್ವೈತ
ಮಧ್ವಾಚಾರ್ಯರಂದರು ದ್ವೈತ
ರಾಮಾನುಜರದು ವಿಶಿಷ್ಟಾದ್ವೈತ
ಬಸವೇಶ್ವರರದು ಶಕ್ತಿ ವಿಶಿಷ್ಟಾದ್ವೈತ
ಹೆಸರು ಬೇರೆಯಾದರೂ
ಎಲ್ಲರೂ ಹೇಳಿದ್ದೊಂದೆ
ಅವನಿಯಲಿ ಅವನಿರುವನು
ನಿದ್ದೆಯಿಂದ ಎದ್ದೇಳು
ಅವನಾಗು ನೀನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಚುಟುಕುಗಳು



*ಚುಟುಕು ೧*

*ಕೃತಿ ಚೌರ್ಯ*

ಎಲ್ಲರೂ ಹೊಗಳಿದ್ದೇ ಹೊಗಳಿದ್ದು
ಆ ಲೇಖಕರ ಪಾಂಡಿತ್ಯ ಮತ್ತು ಶೌರ್ಯ
ಉಗುಳಲು‌ ಶುರು ಮಾಡಿದರು ಜನ
ತಿಳಿಯುತ್ತಲೇ ಅವರ ಕೃತಿ ಚೌರ್ಯ

*ಚುಟುಕು ೨*

*ಅರವಟ್ಟಿಗೆ*

ಬೇಸಿಗೆಯಲಿ ದಾಹವ ತಣಿಸಿಕೊಳ್ಳಲು
ನಾವು ಕುಡಿಯಲೇ ಬೇಕು ನೀರು ಆಗಾಗ್ಗೆ
ಮೂಕ ಪ್ರಾಣಿ ಪಕ್ಷಿಗಳ ದಾಹ ನೀಗಿಸಲು
ಕಾಡು,ನಾಡಿನಲಿ ಇಡಬೇಕಿದೆ ಅರವಟ್ಟಿಗೆ

*ಸಿ ಜಿ ವೆಂಕಟೇಶ್ವರ*
*ತುಮಕೂರು*

27 ಏಪ್ರಿಲ್ 2020

ಎರಡು ಶಾಯರಿಗಳು

ಎರಡು ಶಾಯರಿಗಳು

*ಶಾಯರಿ೧*

ಕನಸು ಕಂಡಿದ್ದೆ ಗೆಳತಿ
ನಿನ್ನ ಜತೆಗೂಡಿ ನಡೆಯಬೇಕು
ಜೀವನವೆಲ್ಲಾ|
ನಡೆಯದೇ ನಿಂತು ಬಿಟ್ಟಿರುವೆ
ಈಗೀಗ ನಿನ್ನ ಸಮಾದಿಯ ಬಳಿ
ನಿನಗೆ ಕಾಣುತ್ತಿದೆಯಲ್ಲ?||

*ಶಾಯರಿ೨*

ಮರೆತು ಬಿಡು ಚೆಲುವೆ
ಇಂದಿನಿಂದ ನನ್ನ
ಅವಳು ಕನಸಲಿ ಬಂದಿದ್ದಳು
ಕಳೆದ ರಾತ್ರಿ|
ಮನಸು ಮೈಲಿಗೆಯಾಗಿದೆ
ಇನ್ನೆಲ್ಲಿದೆ ನನ್ನ ಶುದ್ದ
ಪ್ರೇಮಕ್ಕೆ ಖಾತ್ರಿ||.

*ಸಿ‌ ಜಿ ವೆಂಕಟೇಶ್ವರ*
*ತುಮಕೂರು*



26 ಏಪ್ರಿಲ್ 2020

ತವರ ಕಾಪಾಡು ( ಜನಪದ ಗೀತೆ) ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಜಾನಪದ ಗೀತೆ


ಜನಪದ ಗೀತೆ

*ತವರ ಕಾಪಾಡು*

ನನ್ನಯ ತವರೂರ ನಾಹ್ಯಾಗೆ ಮರೆಯಲಿ
ಚಿನ್ನಕ್ಕಿಂತಲೂ  ಮೇಲು| ಕೇಳೆ ಗೆಳತಿ
ರನ್ನದ ಗುಣದ ನನ್ನಪ್ಪ.||

ಅಮ್ಮನ ಕೈತುತ್ತು ಅಮೃತಕೆ ಸಮಾನ
ಕಮ್ಮನೆಯ ಕುರುಕಲು ನೀಡುತ್ತ| ದಿನಕೊಂದು
ಹಣ್ಣು ತಿನಿಸಿ ನಲಿಯೋಳು||


ಕೀಟಲೆ ಮಾಡುತ್ತ ತಮ್ಮ ಬರುತಿದ್ದ
ಕ್ವಾಟಲೆ ಕೊಟ್ಟರೂ ನನ್ನ ಪ್ರಾಣ|ಅಂತಹವನು
ಕೋಟಿ ಕೊಟ್ಟರೂ ಸಿಗೋದಿಲ್ಲ||

ಸಣ್ಣವನು ಅಲ್ಲ ನನ್ನ ಅಣ್ಣ
ಕಣ್ಣ ರೆಪ್ಪೆ ಹಂಗೆ ಕಾಪಾಡಿದ|ಅವನು
ಕೊಟ್ಟ ಉಡುಗೊರೆಗೆ ಸಮವಿಲ್ಲ||


ಇಂದ್ರನ ಅರಮನೆ ನನ್ನ ತವರ್ಮನೆ
ಚಂದಾಗಿ ಹಾಲ್ಕೊಡುವ ಕಾಮಧೇನು|ನಮ್ಮನೆ
ನಾರಾಯಣನ ಹ್ಯಾಗೆ ಮರೆಯಲಿ||

ಬಂಗಾರ ಬೆಳ್ಳಿ ಬ್ಯಾಡ ತವರಿಂದ
ತೊಂದರೆಯು ಬರದಂತೆ| ಶಿವನೆ
ನನ ತವರ ಕಾಪಾಡು||


*ಇಂದಿನ ಪ್ರಜಾಪ್ರಗತಿಯಲ್ಲಿ ನಾಗಾರಾಜ್ ಜಿ‌ ನಾಗಸಂದ್ರ ರವರ ಕಾದಂಬರಿ ಅಂತರ ಬಗ್ಗೆ ನನ್ನ ವಿಮರ್ಶೆ*

*ಇಂದಿನ ಪ್ರಜಾಪ್ರಗತಿಯಲ್ಲಿ ನಾಗಾರಾಜ್ ಜಿ‌ ನಾಗಸಂದ್ರ ರವರ ಕಾದಂಬರಿ ಅಂತರ ಬಗ್ಗೆ ನನ್ನ ವಿಮರ್ಶೆ*