This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
28 ಏಪ್ರಿಲ್ 2020
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಚುಟುಕುಗಳು
*ಚುಟುಕು ೧*
*ಕೃತಿ ಚೌರ್ಯ*
ಎಲ್ಲರೂ ಹೊಗಳಿದ್ದೇ ಹೊಗಳಿದ್ದು
ಆ ಲೇಖಕರ ಪಾಂಡಿತ್ಯ ಮತ್ತು ಶೌರ್ಯ
ಉಗುಳಲು ಶುರು ಮಾಡಿದರು ಜನ
ತಿಳಿಯುತ್ತಲೇ ಅವರ ಕೃತಿ ಚೌರ್ಯ
*ಚುಟುಕು ೨*
*ಅರವಟ್ಟಿಗೆ*
ಬೇಸಿಗೆಯಲಿ ದಾಹವ ತಣಿಸಿಕೊಳ್ಳಲು
ನಾವು ಕುಡಿಯಲೇ ಬೇಕು ನೀರು ಆಗಾಗ್ಗೆ
ಮೂಕ ಪ್ರಾಣಿ ಪಕ್ಷಿಗಳ ದಾಹ ನೀಗಿಸಲು
ಕಾಡು,ನಾಡಿನಲಿ ಇಡಬೇಕಿದೆ ಅರವಟ್ಟಿಗೆ
*ಸಿ ಜಿ ವೆಂಕಟೇಶ್ವರ*
*ತುಮಕೂರು*
27 ಏಪ್ರಿಲ್ 2020
ಎರಡು ಶಾಯರಿಗಳು
ಎರಡು ಶಾಯರಿಗಳು
*ಶಾಯರಿ೧*
ಕನಸು ಕಂಡಿದ್ದೆ ಗೆಳತಿ
ನಿನ್ನ ಜತೆಗೂಡಿ ನಡೆಯಬೇಕು
ಜೀವನವೆಲ್ಲಾ|
ನಡೆಯದೇ ನಿಂತು ಬಿಟ್ಟಿರುವೆ
ಈಗೀಗ ನಿನ್ನ ಸಮಾದಿಯ ಬಳಿ
ನಿನಗೆ ಕಾಣುತ್ತಿದೆಯಲ್ಲ?||
*ಶಾಯರಿ೨*
ಮರೆತು ಬಿಡು ಚೆಲುವೆ
ಇಂದಿನಿಂದ ನನ್ನ
ಅವಳು ಕನಸಲಿ ಬಂದಿದ್ದಳು
ಕಳೆದ ರಾತ್ರಿ|
ಮನಸು ಮೈಲಿಗೆಯಾಗಿದೆ
ಇನ್ನೆಲ್ಲಿದೆ ನನ್ನ ಶುದ್ದ
ಪ್ರೇಮಕ್ಕೆ ಖಾತ್ರಿ||.
*ಸಿ ಜಿ ವೆಂಕಟೇಶ್ವರ*
*ತುಮಕೂರು*
*ಶಾಯರಿ೧*
ಕನಸು ಕಂಡಿದ್ದೆ ಗೆಳತಿ
ನಿನ್ನ ಜತೆಗೂಡಿ ನಡೆಯಬೇಕು
ಜೀವನವೆಲ್ಲಾ|
ನಡೆಯದೇ ನಿಂತು ಬಿಟ್ಟಿರುವೆ
ಈಗೀಗ ನಿನ್ನ ಸಮಾದಿಯ ಬಳಿ
ನಿನಗೆ ಕಾಣುತ್ತಿದೆಯಲ್ಲ?||
*ಶಾಯರಿ೨*
ಮರೆತು ಬಿಡು ಚೆಲುವೆ
ಇಂದಿನಿಂದ ನನ್ನ
ಅವಳು ಕನಸಲಿ ಬಂದಿದ್ದಳು
ಕಳೆದ ರಾತ್ರಿ|
ಮನಸು ಮೈಲಿಗೆಯಾಗಿದೆ
ಇನ್ನೆಲ್ಲಿದೆ ನನ್ನ ಶುದ್ದ
ಪ್ರೇಮಕ್ಕೆ ಖಾತ್ರಿ||.
*ಸಿ ಜಿ ವೆಂಕಟೇಶ್ವರ*
*ತುಮಕೂರು*
26 ಏಪ್ರಿಲ್ 2020
ತವರ ಕಾಪಾಡು ( ಜನಪದ ಗೀತೆ) ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಜಾನಪದ ಗೀತೆ
ಜನಪದ ಗೀತೆ
*ತವರ ಕಾಪಾಡು*
ನನ್ನಯ ತವರೂರ ನಾಹ್ಯಾಗೆ ಮರೆಯಲಿ
ಚಿನ್ನಕ್ಕಿಂತಲೂ ಮೇಲು| ಕೇಳೆ ಗೆಳತಿ
ರನ್ನದ ಗುಣದ ನನ್ನಪ್ಪ.||
ಅಮ್ಮನ ಕೈತುತ್ತು ಅಮೃತಕೆ ಸಮಾನ
ಕಮ್ಮನೆಯ ಕುರುಕಲು ನೀಡುತ್ತ| ದಿನಕೊಂದು
ಹಣ್ಣು ತಿನಿಸಿ ನಲಿಯೋಳು||
ಕೀಟಲೆ ಮಾಡುತ್ತ ತಮ್ಮ ಬರುತಿದ್ದ
ಕ್ವಾಟಲೆ ಕೊಟ್ಟರೂ ನನ್ನ ಪ್ರಾಣ|ಅಂತಹವನು
ಕೋಟಿ ಕೊಟ್ಟರೂ ಸಿಗೋದಿಲ್ಲ||
ಸಣ್ಣವನು ಅಲ್ಲ ನನ್ನ ಅಣ್ಣ
ಕಣ್ಣ ರೆಪ್ಪೆ ಹಂಗೆ ಕಾಪಾಡಿದ|ಅವನು
ಕೊಟ್ಟ ಉಡುಗೊರೆಗೆ ಸಮವಿಲ್ಲ||
ಇಂದ್ರನ ಅರಮನೆ ನನ್ನ ತವರ್ಮನೆ
ಚಂದಾಗಿ ಹಾಲ್ಕೊಡುವ ಕಾಮಧೇನು|ನಮ್ಮನೆ
ನಾರಾಯಣನ ಹ್ಯಾಗೆ ಮರೆಯಲಿ||
ಬಂಗಾರ ಬೆಳ್ಳಿ ಬ್ಯಾಡ ತವರಿಂದ
ತೊಂದರೆಯು ಬರದಂತೆ| ಶಿವನೆ
ನನ ತವರ ಕಾಪಾಡು||
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)





