26 ಏಪ್ರಿಲ್ 2018

ಮಾನವೀಯತೆ?(ನ್ಯಾನೋ ಕಥೆ)

ನ್ಯಾನೋ ಕಥೆ

*ಮಾನವೀಯತೆ?*

ಖಾಸಗಿ ಬಸ್ಸಿನಲ್ಲಿ ವಿಪರೀತವಾದ ಜನಸಂದಣಿ ೩೦ ವರ್ಷದ ರಮೇಶ್ ಸೀಟಲ್ಲಿ ಕುಳಿತಿದ್ದ ಒಂದು ನಿಲ್ದಾಣದಲ್ಲಿ ಎಪ್ಪತ್ತು ವರ್ಷದ ಮುದುಕಿ ಮತ್ತು ಮಗು ಎತ್ತಿಕೊಂಡು ಒಬ್ಬ ಮಹಿಳೆ  ಬಸ್ಸನ್ನೇರಿದರು .ಯಾರಿಗೆ ಸೀಟು ಕೊಡಲಿ‌?  ಎಂಬ ಗೊಂದಲದಲ್ಲಿ ಸೀಟಿನಿಂದ ಎದ್ದ ಅಷ್ಟರಲ್ಲಿ ೧೮ ವರ್ಷದ ಯುವತಿ "ಥಾಂಕ್ ಯು" ಎಂದು ಸೀಟಿನಲ್ಲಿ ಕುಳಿತೇಬಿಟ್ಟಳು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಏಪ್ರಿಲ್ 2018

ಭವಿಷ್ಯ (ನ್ಯಾನೋ ಕಥೆ)


ನ್ಯಾನೋ ಕಥೆ

*ಭವಿಷ್ಯ*

ಸುತ್ತ ಹತ್ತು ಹಳ್ಳಿಗಳಿಗೆ ಅವರದೇ ಪೌರೋಹಿತ್ಯ.          ಸುಂದರಯ್ಯ ಅವರ ಮಾರ್ಗದರ್ಶನದಲ್ಲಿ ನೂರಾರು ಮದುವೆಗಳ ಮುಹೂರ್ತ ನಿಗದಿ ಮಾಡಿ "ನಿಮ್ಮ ಸಂಸಾರ ನೂರ್ಕಾಲ ಸುಖವಾಗಿ ಬಾಳಲಿದೆ ಎಂದಿದ್ದರು" ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಮೇಲೆ ಮುನಿಸಿಕೊಂಡು ಮಗಳ ಮನೆಗೆ ಹೋಗಿ ವಾಸವಿದ್ದರು ."ಸ್ವಾಮಿ ಈ ವಯಸ್ಸಿನಲ್ಲಿ ನಾವು ನಿಮಗೆ ಬುದ್ದಿ ಹೇಳಬಾರದು ದಯವಿಟ್ಡು ಮನೆಗೆ ಬನ್ನಿ " ಎಂದು ೨೫ ವರ್ಷದ ಬಾಲಾಜಿ ೭೫ ವರ್ಷದ ಸುಂದರಯ್ಯಗೆ  ಹೇಳಿದ . "ಎಲ್ಲರ ಸಂಸಾರದ ಬಗ್ಗೆ  ಭವಿಷ್ಯ ನುಡಿವ ಹಲವು ಮದುವೆ ಮಾಡಿಸುವ  ಇವರ ಸಂಸಾರ ನಾವು ಸರಿಮಾಡಬೇಕಿದೆ " ಎಂದು ಬಾಲಜಿ ಜೊತೆ ಬಂದಿದ್ದ ನರೇಶ್ ಅಂದ ಮಾತು   ಎಲ್ಲರಿಗೂ ಕೇಳಿಸಿದರೂ ಯಾರೂ ಮಾತಾಡಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 ಏಪ್ರಿಲ್ 2018

ನಾವೇ ಮೇಲು (ಹನಿಗವನ)


*ನಾವೇ ಮೇಲು*
ಈಗ ಆಟವೆಂದರೆ ಕಂಪ್ಯೂಟರ್ ಮೊಬೈಲು
ನಾವು ಕಲ್ಲಾದರೂ ಆಟದಿ ನಾವೇ ಮೇಲು
ಕಟ್ಟುವ ಬೆಳೆಸುವ ಕಾರ್ಯ ಮಾಡೋಣ
ಕಡಿಯುವ ಕೆಡಿಸುವ ಗುಣ ಬಿಡೋಣ
ಅಣ್ಣ ತಂಗಿಯರಿಗೆ ಹಾಡಲು ಸಮಯವಿದೆ ಇಲ್ಲಿ
ನಮ್ಮ ನೋಡಿ ಕಲಿಯಿರಿ ಈಗಲಾದರೂ ನೀವಿಲ್ಲಿ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 ಏಪ್ರಿಲ್ 2018

ಚೌ ಚೌಪದಿ (ಬಾ ಗೆಳತಿ)

ಚೌ ಚೌಪದಿ

*ಸೀರೆ,ಸಂಕೋಲೆ,ಚಂದಿರ, ತೇರು*

*ಬಾಗೆಳತಿ*

ಚಂದಿರನ ಬೆಳಂದಿಗಳ ಬೆಳಕಲ್ಲಿ
ನಿನ್ನ ರೇಷಿಮೆ ಸೀರೆ ಮಿನುಗುತಿದೆ
ನಾಚಿಕೆಯ ಸಂಕೋಲೆಯ ತೊರೆದು
ನನ್ನದೆಯ ತೇರನೇರು ಬಾ ಗೆಳತಿ

*ಸಿ .ಜಿ.ವೆಂಕಟೇಶ್ವರ*
*ಗೌರಿಬಿದನೂರು*


21 ಏಪ್ರಿಲ್ 2018

ಎರಡು ಶಾಯಿರಿಗಳು

*ಶಾಯಿರಿ ೧*

ನೀನಂದು ನನ್ನ ತೊರೆದಾಗ
ಜೋರು ಮಳೆಸುರಿದಿತ್ತು
ಮಳೆಗೆ  ನಾ‌‌ ಚಿರ ಋಣಿ
ನನ್ನ ಕಣ್ಣೀರ  ಮರೆಮಾಚಿತ್ತು

*ಶಾಯಿರಿ ೨*


ಮಳೆ ಬಿಲ್ಲು ನಿನ್ನ ಮುಂದೆ
ಏನೂ ಅಲ್ಲ ಗೆಳತಿ
ದಿನಕೊಂದು ಬಣ್ಣ ಬದಲಾಯಿಸಿ
ಮಾತಿನಲ್ಲೇ ಮೈಮರೆಸಿ
ಮೋಸ ಮಾಡುವ
ನಿನಗೆ ನೀನೇ ಸಾಟಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*