ಯುದ್ಧ ನಿಲ್ಲುವುದಾವಾಗ?
ರಷ್ಯಾ ,ಉಕ್ರೇನ್ ಯುದ್ಧ
ಶುರುವಾಗಿ ಉರುಳಿಹೋಗಿವೆ
ದಿನಗಳು ಮುನ್ನೂರ ಅರವತ್ತೈದು|
ಯುದ್ಧದಾಯಿ ನಾಯಕರಿಗೆ
ಬುದ್ಧಿ ಹೇಳುವರಾರು ಬೈದು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಯುದ್ಧ ನಿಲ್ಲುವುದಾವಾಗ?
ರಷ್ಯಾ ,ಉಕ್ರೇನ್ ಯುದ್ಧ
ಶುರುವಾಗಿ ಉರುಳಿಹೋಗಿವೆ
ದಿನಗಳು ಮುನ್ನೂರ ಅರವತ್ತೈದು|
ಯುದ್ಧದಾಯಿ ನಾಯಕರಿಗೆ
ಬುದ್ಧಿ ಹೇಳುವರಾರು ಬೈದು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
#ಕನಸಲು_ನಿನ್ನದೆ_ಕನವರಿಕೆ
ನನ್ನ ಪ್ರೀತಿಯ ಆಳ ತಿಳಿಸಲು
ಇನ್ನೇನು ಸಬೂತು ಕೊಟ್ಟು
ಮಾಡಲಿ ಮನವರಿಕೆ |
ಹಗಲಿನಲ್ಲೂ, ಇರುಳಿನಲ್ಲೂ
ಕನಸಿನಲ್ಲೂ ನಿನ್ನದೆ ಕನವರಿಕೆ ||
#ಸಿಹಿಜೀವಿಯ_ಹನಿ
*ಸುಸ್ತು*
ಕಂಡು ಹಿಡಿದಿರುವರಂತೆ
ಹೆಂಡತಿಯೆಂಬ ಮೂಲವಸ್ತು |
ಅದರ ಗುಣಲಕ್ಷಣಗಳನ್ನು
ಅರ್ಥಮಾಡಿಕೊಳ್ಳವಲ್ಲಿ
ಎಲ್ಲಾ ಗಂಡಂದಿರು ಸುಸ್ತು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಹೇಳುವರಾರು?*
ಈ ದರ್ಮದವರ ಕಂಡರೆ
ಅವರಿಗಾಗದು
ಆ ಧರ್ಮದವರ ಕಂಡರೆ ಇವರಿಗೆ
ಕಣ್ಣು ಕೆಂಪು|
ಇವರಿಗೆ ಬಿಡಿಸಿ ಹೇಳುವರಾರು
ಎಲ್ಲರ ರಕ್ತವೂ ಕೆಂಪು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ