This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
02 ಜುಲೈ 2025
DHL ನ ಸ್ಪೂರ್ತಿದಾಯಕ ಕಥೆ
DHL ನ ಸ್ಪೂರ್ತಿದಾಯಕ ಕಥೆ 1969 ರಲ್ಲಿ ಮೂವರು ಯುವಕರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ತಮ್ಮ ವಿತರಣಾ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಮೊದಲನೆಯವನ ಹೆಸರು ಆಡ್ರಿಯನ್ ಡಾಲ್ಸಿ.ಎರಡನೆಯವ ಲ್ಯಾರಿ ಹಿಲ್ಬ್ಲೋಮ್. ಮೂರನೆಯವ ರಾಬರ್ಟ್ ಲಿನ್. ಹೀಗೇ ಆ ಮೂವರ ಹೆಸರಿನಲ್ಲಿ ಒಂದೊಂದು ಪದ ತೆಗೆದುಕೊಂಡು ಆರಂಭಿಸಿದ ಕಂಪನಿಯೇ DHL ! . 55 ವರ್ಷಗಳ ನಂತರ ಇಂದು DHL ಕಂಪನಿ 250 ವಿಮಾನಗಳನ್ನು ಹೊಂದಿದೆ. 32,000 ವಾಹನಗಳು, 550,000 ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಇಂದು DHL ಪ್ರಪಂಚದ ಎಲ್ಲೆಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.ಅದರ ಆದಾಯ ನೂರಾರು ಶತಕೋಟಿ ಡಾಲರ್ಗಳು! ಜೀವನದಲ್ಲಿ ಯೋಜನೆಗಳು, ವ್ಯವಹಾರ, ಯಶಸ್ಸು, ಕನಸುಗಳು, ಗುರಿಗಳ ಬಗ್ಗೆ ಮಾತನಾಡುವ ಜನರು ಯಾವಾಗಲೂ ನಿಮ್ಮ ಸುತ್ತ ಮುತ್ತ ಇರಲಿ. ನಕಾತ್ಮಕ, ಭಯಭೀತ, ಸೋಮಾರಿ ಜನರಿಂದ ದೂರವಿರಿ. ನೀವು ವ್ಯವಹಾರಕ್ಕೆ ಇಳಿದರೆ.ದೃಢವಾಗಿ ಇರಿ. ಅಂದಿನ DHL ಇಂದಿನ DHL ಆಗಲು 55 ವರ್ಷಗಳು ಬೇಕಾಯಿತು. ಯಶಸ್ಸಿಗೆ ಸಮಯ, ಶ್ರಮ, ಬುದ್ಧಿವಂತಿಕೆ ಮತ್ತು ತಾಳ್ಮೆ ಬೇಕು. ಯಶಸ್ಸು ನಿಮ್ಮದಾಗಲಿ... ಸಿಹಿಜೀವಿ ವೆಂಕಟೇಶ್ವರEntrepreneurship #EntrepreneurMindset #StartUpLife #BizTips #EntrepreneurJourney #SmallBusinessSuccess #GrowthMindset #InnovativeThinking #HustleAndGrind #BusinessMotivation #Suc
ಚಾಣಕ್ಯ ನೀತಿ ಶ್ಲೋಕ:
ಚಾಣಕ್ಯ ನೀತಿ ಶ್ಲೋಕ:-
ರೂಪಯೌವನ ಸಂಪನ್ನಾ ವಿಶಾಲಕುಲ ಸಂಭವಾ |
ವಿದ್ಯಾಹೀನಾ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾಃ ||
ಸೌಂದರ್ಯದಿಂದಲೂ ಯೌವನದಿಂದಲೂ ಯುಕ್ತರು ಮಹಾಕುಲೀನರೂ ವಿದ್ಯಾ ವಿಹೀನರಾದರೆ ಪರಿಮಳವಿಲ್ಲದ ಪುಷ್ಪಗಳಂತೆ ಸ್ವಲ್ಪವೂ ಶೋಭಿಸುವುದಿಲ್ಲ.ಅಂದರೆ ಯಾರಿಂದಲೂ ಆದರಿಸಲ್ಪಡುವುದಿಲ್ಲ.
01 ಜುಲೈ 2025
ನುಡಿ ತೋರಣ ಸಮಾಗಮ..
ನುಡಿತೋರಣ ಮೊದಲ ಸಮಾಗಮದಲ್ಲಿ ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಿರಲಿಲ್ಲ.ಎರಡು ಮತ್ತು ಮೂರನೇ ಸಮಾವೇಶದಲ್ಲಿ ಪಾಲ್ಗೊಂಡ ಸವಿನೆನಪುಗಳನ್ನು ಈಗಲೂ ಮೆಲುಕು ಹಾಕುತ್ತಿರುವೆ...
ಮೂರನೇ ಸಮಾವೇಶದ ದಿನ ಆರಕ್ಕೆ ತುಮಕೂರು ಬಿಟ್ಟು ಒಂಭತ್ತಕ್ಕೆ ಸಾಹಿತ್ಯ ಪರಿಷತ್ತು ಸೇರಿ ಕಿರಣ್ ಸರ್ ಮತ್ತು ನುಡಿ ಬಂಧುಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿ ಚಿನ್ನು ಪ್ರಿಯ ಸರ್ ರವರೊಂದಿಗೆ ಕನ್ನಡ ಹಾಡು ಹಾಡಿದ್ದು ಖುಷಿ ನೀಡಿತು.ಕಡೆಯ ಕ್ಷಣಗಳಲ್ಲಿ ಪುಸ್ತಕ ಬಿಡುಗಡೆಗೆ ಮನಸ್ಸು ಮಾಡಿದೆ. ನಮ್ಮ ಬಳಗದ ಮುಂದೆ ನನ್ನ ಕೃತಿ ಲೋಕಾರ್ಪಣೆಗೊಂಡಿದ್ದು ಖುಷಿ ನೀಡಿತು.
ಹಲವಾರು ಸಾಹಿತ್ಯ ಬಂಧುಗಳನ್ನು ಭೇಟಿ ಮಾಡಿದ್ದು ಸಂತಸ ತಂದಿತು.
ಜಿ ಬಿ ಹರೀಶ್ ಸರ್, ಮತ್ತು ಸೇತೂರಾಮ್ ಸರ್ ರವರ ಮಾತು ನೇರವಾಗಿ ಕೇಳಿ ಪುಳಕಗೊಂಡೆ.
ನನ್ನ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕೊಂಡ ನಮ್ಮ ನುಡಿ ಬಂಧುಗಳಿಗೆ ನಮನಗಳನ್ನು ಸಲ್ಲಿಸಲೇಬೇಕು.
ನುಡಿ ತಾಂಬೂಲ ವಿಶೇಷವಾಗಿತ್ತು. ನಮ್ಮ ಮನೆಯವರ ಮೆಚ್ಚುಗೆ ಗೆ ಪಾತ್ರವಾಗಿದೆ.
ಒಟ್ಟಾರೆ ಒಂದು ಉತ್ತಮ ಕೌಟುಂಬಿಕ ಭಾವನಾತ್ಮಕ ನುಡಿ ಹಬ್ಬದಲ್ಲಿ ಪಾಲ್ಗೊಂಡ ಸಾರ್ಥಕ ಭಾವನೆ ನನ್ನದು....
ನಿಮ್ಮ...
ಸಿಹಿಜೀವಿ ವೆಂಕಟೇಶ್ವರ
#Bangalore #BangaloreEvents #BookLaunch #AuthorMeet #LiteratureLovers #BookDiscussion #WritersCommunity #ReadingNook #CulturalScene #M
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)