31 ಮಾರ್ಚ್ 2018

ಪ್ರಜಾಪ್ರಭುತ್ವ ಉಳಿಸೋಣ (ಭಾವಗೀತೆ) ಮತದಾರರ ಜಾಗೃತಿ ಗೀತೆ

*ಪ್ರಜಾಪ್ರಭುತ್ವ ಉಳಿಸೋಣ*

ಆರಿಸೋಣ  ಉತ್ತಮ ನಾಯಕರ
ಮಾಡಿಕೊಳ್ಳೋಣ ಜೀವನ ಶುಭಕರ
ಮಾಡೋಣ  ಎಲ್ಲರು ಮತದಾನ
ನಿರಾಕರಿಸೋಣ   ನೀಡಿದರೆ ಧನ

ಮರುಗದಿರಿ ಮೊಸಳೆ ಕಣ್ಣೀರಿಗೆ
ಕೊರಗದಿರಿ ಮೈಮರೆತು ಅರೆಘಳಿಗೆ
ಓಟಿನ ದಿನ ಬದಿಗೊತ್ತಿ ನಿಮ್ಮ ಕೆಲಸ
ಸರ್ಕಾರ ರಚಿಸುವುದು ನಮ್ಮ ಕೆಲಸ

ಬೇಡಿಕೆ ಇಡದಿರಿ ಸ್ವಾರ್ಥದಿ ನಿಮಗಾಗಿ
ಹಕ್ಕು ಚಲಾವಣೆ ಮಾಡಿ ದೇಶಕ್ಕಾಗಿ
ಮಾರಿಕೊಳ್ಳದಿರಿ ನಿಮ್ಮ ಮತ
ಒಳ್ಳೆಯ ನಾಯಕಗಿರಲಿ ಸಹಮತ

ಮತಗಟ್ಟೆಗೆ ಎಲ್ಲರೂ ಹೋಗೋಣ
ಓಟು ಮಾಡುವ ಪಣ ತೊಡೋಣ
ನಮ್ಮಯ ಸೇವಕರ ಆರಿಸೋಣ
ಪ್ರಜಾಪ್ರಭುತ್ವವನ್ನು ಉಳಿಸೋಣ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

30 ಮಾರ್ಚ್ 2018

ತಿಥಿ ವಡೆ ( ಹನಿಗವನ ವಿಶ್ವ ಇಡ್ಲಿದಿನ ಹಾಗೂ ಗುಡ್ ಪ್ರೈಡೆ ನಿಮಿತ್ತ)

*ಹನಿಗವನ*

(ವಿಶ್ವ ಇಡ್ಲಿ ದಿನ ಮತ್ತು ಗುಡ್ ಪ್ರೈಡೆ ನಿಮಿತ್ತ)

*ತಿಥಿ ವಡೆ*

ಇಂದು ವಿಶ್ವ ಇಡ್ಲಿ ದಿನ
ತಿಂತಾರೆ ಪಿಜ್ಹಾ ದಿನ
ಇಂದು‌ ಗುಡ್ ಪ್ರೈಡೆ
ಯೇಸು ತತ್ವ ಸಮಾಧಿ
ಮಾಡಿ ತಿನ್ನುತ್ತಿದ್ದಾರೆ
ಮರೆಯದೆ ತಿಥಿ ವಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್೩೬ (ಮಾಡಬಹುದಿತ್ತು)

*ಗಜ಼ಲ್ ೩೬*

ಓ ದೇವಾ ಧರೆಯನು ನಂದನವನವನಾಗಿ  ಮಾಡಬಹುದಿತ್ತು
ಧರಣಿಯನು ಸುಂದರ ಸ್ವರ್ಗವನಾಗಿ ಮಾಡಬಹುದಿತ್ತು

ಅತಿ ವೃಷ್ಟಿ ಅನಾವೃಷ್ಟಿ ಬರಗಾಲ ಭೂಕಂಪಗಳೇಕೆ ಮಾಡಿಸುವೆ
ಕಾಲ ಕಾಲಕೆ ಮಳೆ ಬೆಳೆನೀಡಿ ಸುಭಿಕ್ಷ  ನಾಡಾಗಿ ಮಾಡಬಹುದಿತ್ತು

ಮೋಸ ಕೊಲೆ ಸುಲಿಗೆ ಸುಳ್ಳು ಪೊಳ್ಳು ಮನಸುಗಳನೇಕಿತ್ತೆ
ನಿಷ್ಕಲ್ಮಶ ಮನಸುಗಳ ಸೃಷ್ಟಿಸಿ ರಾಮರಾಜ್ಯವಾಗಿ ಮಾಡಬಹುದಿತ್ತು

ಮೇಲು ಕೀಳು ಬಡವ ಬಲ್ಲಿದ ಜಾತಿ ಮತಗಳು ಏಕೆ ಬೇಕು
ಎಲ್ಲರಿಗೆ ಸಮಬಾಳು ನೀಡಿ ಏಕತೆಯ ಗೂಡಾಗಿ ಮಾಡಬಹುದಿತ್ತು

ಪರಿಸರ ಅಸಮತೋಲನ ಪರಿಸರ ಮಾಲಿನ್ಯ ಬೇಕೆ
ಸೀಜೀವಿಯ ಕನಸಿನ  ಆದರ್ಶ ಇಳೆಯಾಗಿ ಮಾಡಬಹುದಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಮಾರ್ಚ್ 2018

ದಿನ (ಭಾವಗೀತೆ)

*ದಿ‌ನ*

ದಿನವ ಬೆಳಗೊ ದಿನವು ನೀನು
ದಿನಕರನೆಂದೆನುವೆ ನಾನು
ನೀನು ಬರದೆ ದಿನವು ಇಲ್ಲ
ನೀನಿರದೇ ನಮ್ಮ ಜೀವನವಿಲ್ಲ

ತಮವ ತೊರೆದು ಬೆಳಕ ನೀಡುವೆ
ರಾತ್ರಿ ಚಂದಿರನಿಗೆ ಜಾಗ ಬಿಡುವೆ
ಥಳ  ಥಳ   ಹೊಳೆಸುವೆ  ಜಗವ
ನೀಡುತಲಿರುವೆ  ಶಕ್ತಿಯ ಮೂಲವ

ಹಳಿಯುವುದಿಲ್ಲ ಇತರರ ಕೆಲಸವ
ಮರೆಯುವುದಿಲ್ಲ ಬೆಳಗುವ ಕಾರ್ಯವ
ನನ್ನ  ಹಳೆಯ ದಿನಗಳ  ಮರೆಸುವೆ
ಹೊಸತು ಹುರುಪು ನೀಡಿ ಮೆರೆಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ಮಾರ್ಚ್ 2018

ನಾನು ಮುಖ್ಯ ಮುಂತ್ರಿ ಆದರೆ?!!! (ಲೇಖನ) ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


ನಾನು ಮುಖ್ಯ ಮಂತ್ರಿ ಆದರೆ

‌ನಾನು ಈ ರಾಜ್ಯದ ಮುಖ್ಯ ಮಂತ್ರಿಯಾದರೆ ಮೊದಲು ರಾಜ್ಯಾದ್ಯಂತ ಮದ್ಯಪಾನ ಮತ್ತು ಧೂಮಪಾನ ನಿಷೇಧ ಮಾಡುವೆ. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಿ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವೆ.ರೈತರ ಕಷ್ಟಗಳ ನಿವಾರಣೆಗೆ ಶ್ರಮಿಸುವೆ.ನದಿಗಳ ಜೋಡಣೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವೆ.ಕೈಗಾರಿಕೆಗಳು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡುವಂತೆ ರೈತರು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡಲು (ಎಂ ಆರ್.ಪಿ) ಅವಕಾಶ ಕೊಡುವೆ.ಕೃಷಿಯನ್ನು ಆಧುನೀಕರಣ ಗೊಳಿಸಿ ಲಾಭದಾಯಕ ಉದ್ಯೋಗ ವನ್ನಾಗಿ ಮಾಡುವೆ .ಶೈಕ್ಷಣಿಕ ವಾಗಿ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ಖಾಸಗಿ ಶಾಲೆಗಳ ರಾಷ್ಟ್ರೀಕರಣ ಮಾಡಿ ಸರ್ಕಾರದ ವಶಕ್ಕೆ ಪಡೆದು ಏಕರೂಪದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವೆ ಒಂದರಿಂದ ಎಂಟನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಕಲಿತಲು ಶಾಸನ ಮಾಡುವೆ .