This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
02 ಜುಲೈ 2025
DHL ನ ಸ್ಪೂರ್ತಿದಾಯಕ ಕಥೆ
DHL ನ ಸ್ಪೂರ್ತಿದಾಯಕ ಕಥೆ 1969 ರಲ್ಲಿ ಮೂವರು ಯುವಕರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ತಮ್ಮ ವಿತರಣಾ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಮೊದಲನೆಯವನ ಹೆಸರು ಆಡ್ರಿಯನ್ ಡಾಲ್ಸಿ.ಎರಡನೆಯವ ಲ್ಯಾರಿ ಹಿಲ್ಬ್ಲೋಮ್. ಮೂರನೆಯವ ರಾಬರ್ಟ್ ಲಿನ್. ಹೀಗೇ ಆ ಮೂವರ ಹೆಸರಿನಲ್ಲಿ ಒಂದೊಂದು ಪದ ತೆಗೆದುಕೊಂಡು ಆರಂಭಿಸಿದ ಕಂಪನಿಯೇ DHL ! . 55 ವರ್ಷಗಳ ನಂತರ ಇಂದು DHL ಕಂಪನಿ 250 ವಿಮಾನಗಳನ್ನು ಹೊಂದಿದೆ. 32,000 ವಾಹನಗಳು, 550,000 ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಇಂದು DHL ಪ್ರಪಂಚದ ಎಲ್ಲೆಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.ಅದರ ಆದಾಯ ನೂರಾರು ಶತಕೋಟಿ ಡಾಲರ್ಗಳು! ಜೀವನದಲ್ಲಿ ಯೋಜನೆಗಳು, ವ್ಯವಹಾರ, ಯಶಸ್ಸು, ಕನಸುಗಳು, ಗುರಿಗಳ ಬಗ್ಗೆ ಮಾತನಾಡುವ ಜನರು ಯಾವಾಗಲೂ ನಿಮ್ಮ ಸುತ್ತ ಮುತ್ತ ಇರಲಿ. ನಕಾತ್ಮಕ, ಭಯಭೀತ, ಸೋಮಾರಿ ಜನರಿಂದ ದೂರವಿರಿ. ನೀವು ವ್ಯವಹಾರಕ್ಕೆ ಇಳಿದರೆ.ದೃಢವಾಗಿ ಇರಿ. ಅಂದಿನ DHL ಇಂದಿನ DHL ಆಗಲು 55 ವರ್ಷಗಳು ಬೇಕಾಯಿತು. ಯಶಸ್ಸಿಗೆ ಸಮಯ, ಶ್ರಮ, ಬುದ್ಧಿವಂತಿಕೆ ಮತ್ತು ತಾಳ್ಮೆ ಬೇಕು. ಯಶಸ್ಸು ನಿಮ್ಮದಾಗಲಿ... ಸಿಹಿಜೀವಿ ವೆಂಕಟೇಶ್ವರEntrepreneurship #EntrepreneurMindset #StartUpLife #BizTips #EntrepreneurJourney #SmallBusinessSuccess #GrowthMindset #InnovativeThinking #HustleAndGrind #BusinessMotivation #Suc
ಚಾಣಕ್ಯ ನೀತಿ ಶ್ಲೋಕ:
ಚಾಣಕ್ಯ ನೀತಿ ಶ್ಲೋಕ:-
ರೂಪಯೌವನ ಸಂಪನ್ನಾ ವಿಶಾಲಕುಲ ಸಂಭವಾ |
ವಿದ್ಯಾಹೀನಾ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾಃ ||
ಸೌಂದರ್ಯದಿಂದಲೂ ಯೌವನದಿಂದಲೂ ಯುಕ್ತರು ಮಹಾಕುಲೀನರೂ ವಿದ್ಯಾ ವಿಹೀನರಾದರೆ ಪರಿಮಳವಿಲ್ಲದ ಪುಷ್ಪಗಳಂತೆ ಸ್ವಲ್ಪವೂ ಶೋಭಿಸುವುದಿಲ್ಲ.ಅಂದರೆ ಯಾರಿಂದಲೂ ಆದರಿಸಲ್ಪಡುವುದಿಲ್ಲ.
01 ಜುಲೈ 2025
ನುಡಿ ತೋರಣ ಸಮಾಗಮ..
30 ಜೂನ್ 2025
ಮಕ್ಕಳಿಗಾಗಿ ಮಾಹಾತ್ಮರ ಮಾತುಗಳು ಕೃತಿ ಲೋಕಾರ್ಪಣೆ...
ಯುವ ಕವಿಗಳು ಮತ್ತು ಲೇಖಕರು ನಮ್ಮ ಪ್ರಾಚೀನ ಕವಿಗಳ ಸಾಹಿತ್ಯ ಓದಬೇಕು.ಆಗಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಅವಸರದ ಸಾಹಿತ್ಯಕ್ಕೆ ಆಯುಷ್ಯ ಕಡಿಮೆ ಎಂದು ಸಾಹಿತಿಗಳಾದ
ಡಾ ಕಬ್ಬಿನಾಲೆ ವಸಂತ್ ಭಾರದ್ವಾಜ್ ರವರು ಹೇಳಿದರು. ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದ ವತಿಯಿಂದ ನಡೆದ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿಹಿಜೀವಿ ವೆಂಕಟೇಶ್ವರ ರವರ 27 ನೇ ಕೃತಿ ಮಕ್ಕಳಿಗಾಗಿ ಮಹಾತ್ಮರ ಮಾತುಗಳು, ಕಿರಣ್ ಹಿರಿಸಾವೆ ರವರ ಹರಿವು ಕಾದಂಬರಿ ಹಾಗೂ ಡಾ ಗೀತಾ ಎನ್ ರವರ ಮುಕ್ತಕ ಮಂಜೂಷ ಕೃತಿಗಳು ಲೋಕಾರ್ಪಣೆಗೊಂಡವು.
ಲೇಖಕರಿಗೆ ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಹೊಮ್ಮಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಪಿಟೀಲು ವಾದಕರಾದ ಶ್ಯಾಮ್ ಸುಂದರ್ ರವರು, ಲೇಖಕರಾದ ಧನಂಜಯ ಜೀವಾಳ, ಸಾಹಿತಿಗಳು ಹಾಗೂ ಪ್ರಕಾಶಕರಾದ ಚಿನ್ನುಪ್ರಿಯ, ಸಾಹಿತಿಗಳಾದ ತ ನಾ ಶಿವಕುಮಾರ್,ಅನುಸೂಯ ಸಿದ್ದರಾಮ, ನೇತ್ರ ತಜ್ಞರಾದ ಉದಯ್ ಪಾಟೀಲ್, ಶ್ರೀಕಾಂತ್ ಪತ್ರೆಮರ, ರಾಸು ವೆಂಕಟೇಶ್ ಹಾಗೂ ನುಡಿ ಬಂಧುಗಳು ಉಪಸ್ಥಿತರಿದ್ದರು.
28 ಜೂನ್ 2025
ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.
ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.
ಪ್ರಸಿದ್ಧ ಇತಿಹಾಸ ಹೊಂದಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ತುಮಕೂರಿನಿಂದ 3 ಕಿ.ಮೀ. ದೂರದ ಆಗ್ನೇಯ ದಿಕ್ಕಿನಲ್ಲಿರುವ ಶೆಟ್ಟಿಹಳ್ಳಿ ಗ್ರಾಮದಲ್ಲಿದೆ. ಜಾತಿ, ಧರ್ಮ ಭೇದವಿಲ್ಲದೆ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ನಂಬಿದವರ ಬೇಡಿಕೆಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿಂದ ಭಕ್ತರು ಆಗಮಿಸುತ್ತಾರೆ.
ಚೈತ್ರ ಮಾಸದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಮಹಾಭಾರತ ಕಾವ್ಯದಲ್ಲಿ ಬರುವ ಜನಮೇಜಯ ಮಹಾರಾಜ ಯಾಗ ಮಾಡುವ ಮುನ್ನ ವಿಘ್ನಗಳು
ಬಾರದಂತೆ ಈ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿಸಿದರೆಂದು ಸ್ಥಳ ಪುರಾಣ ಹೊಂದಿರುವ ಈ ಪ್ರತಿಮೆಯು ಸುಮಾರು 10 ಅಡಿ ಎತ್ತರ ಹಾಗೂ 6 ಅಡಿ ಅಗಲವಾಗಿದ್ದು ಮುಳಬಾಗಿಲಿನಲ್ಲಿರುವ ಹನುಮಂತನನ್ನು ಬಿಟ್ಟರೆ ಎತ್ತರದಲ್ಲಿ ಎರಡನೇ ಆಂಜನೇಯಸ್ವಾಮಿ ಆಗಿದೆ. ಈ ಆಂಜನೇಯನ ಕೈಯಲ್ಲಿ ಮಾವಿನಹಣ್ಣುಗಳನ್ನು ಹಿಡಿದಿರುವುದು ವಿಶೇಷ,
1893 ರಲ್ಲಿ ಮೈಸೂರು ಪ್ರಾಂತ್ಯದ ಚೌಬೀನೆ ನಾಗ ಕುಮಾರಯ್ಯನವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರೆಂದು ದೇವಾಲಯದಲ್ಲಿರುವ ಶಿಲಾಫಲಕವೊಂದು ತಿಳಿಸುತ್ತದೆ.
#shettihally #anjaneya
#AnjaneyaTempleTumkur #TumkurTemples #IndianTemples #Anjaneya #DevotionalJourney #Spirituality #TemplesofIndia #VinayakaChaturthi #LocalTemples #ExploringTempleArchitecture #SacredSite #DivineVibes #CulturalHeritage #TempleVisiting #Pilgrimage #Devotees #GodsAndGoddesses #SpiritualTour #TumkurTourism

 



