ವಚನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಚನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

01 ಮೇ 2025

ಅಂಚೆ ಇಲಾಖೆಯಿಂದ ಪಠ್ಯ ಪುಸ್ತಕ ಹಾಗೂ ಪುಸ್ತಕ ರವಾನೆಗೆ ‘ಜ್ಞಾನ ಅಂಚೆ’

 ಅಂಚೆ ಇಲಾಖೆಯಿಂದ ಪಠ್ಯ ಪುಸ್ತಕ ಹಾಗೂ ಪುಸ್ತಕ ರವಾನೆಗೆ ‘ಜ್ಞಾನ ಅಂಚೆ’

ಪಠ್ಯಪುಸ್ತಕ ಹಾಗೂ ಸಾಹಿತ್ಯ ಕೃತಿಗಳು ಹಾಗೂ ಇತರೆ ಮುದ್ರಿತ ಪುಸ್ತಕಗಳ ರವಾನೆಗಾಗಿ ಅಂಚೆ ಇಲಾಖೆ ನೂತನವಾಗಿ ಜ್ಞಾನ ಆಂಚೆ (ಗ್ಯಾನ್ ಪೋಸ್ಟ್) ಎಂಬ ಸೇವೆಯನ್ನು ಆರಂಭಿಸಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರಾದ ಹರೀಶ್ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಮೇ 1 ರಿಂದ ಆರಂಭವಾಗಿರುವ ಈ ಸೇವೆಯ ಅಡಿಯಲ್ಲಿ ಪ್ರಕಾಶಕರು, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು, ಸರ್ಕಾರದ ಸ್ವಾಯತ್ತ ಸಂಸ್ಥೆಗಳು, ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ರವಾನಿಸಲು ಅನೂಕೂಲವಾಗಲಿದ್ದು ಈ  ಸೇವೆಯು ಎಲ್ಲಾ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.

ಈ ಸೇವೆಯ ಅಡಿಯಲ್ಲಿ ಪುಸ್ತಕಗಳನ್ನು ಕಳುಹಿಸುವವರು ಪಾರ್ಸಲ್ ಮೇಲೆ “ಜ್ಞಾನ ಅಂಚೆ” ಎಂದು ಕಡ್ಡಾಯವಾಗಿ ಬರೆದಿರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಅಥವಾ ಬರಹದ ಸಂದೇಶ ಪತ್ರಗಳನ್ನು, ಬಿಲ್ ಬುಕ್ಸ್, ಆಹ್ವಾನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಈ ಸೇವೆಯಲ್ಲಿ ಕಳುಹಿಸಲು ಅವಕಾಶವಿರುವುದಿಲ್ಲ. ಕನಿಷ್ಠ 300 ಗ್ರಾಂ ನಿಂದ ಗರಿಷ್ಠ 5 ಕೆ.ಜಿಯವರೆಗೂ ಈ ವ್ಯವಸ್ಥೆಯಲ್ಲಿ ಪುಸಕ್ತಗಳನ್ನು ಕಳುಹಿಸಬಹುದು ಎಂದು ತಿಳಿಸಿರುವ ಅವರು ಪುಸ್ತಕಗಳನ್ನು ಕಳುಹಿಸುವವರ ಮತ್ತು ವಿಳಾಸದಾರರ ಸಂಪೂರ್ಣ ಅಂಚೆ ವಿಳಾಸವನ್ನು ದೂರವಾಣಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದ್ದಾರೆ. 

ಜ್ಞಾನ ಅಂಚೆಯ ಶುಲ್ಕ ವಿವರ

ತೂಕ ಶುಲ್ಕ

300 ಗ್ರಾಂವರೆಗೆ ರೂ.20

301-500 ಗ್ರಾಂವರೆಗೆ ರೂ.25

501-1000 ಗ್ರಾಂವರೆಗೆ ರೂ.35

1001-2000 ಗ್ರಾಂವರೆಗೆ ರೂ.50

2001-3000 ಗ್ರಾಂವರೆಗೆ ರೂ.65

3001-4000 ಗ್ರಾಂವರೆಗೆ ರೂ.80

4001-5000 ಗ್ರಾಂವರೆಗೆ ರೂ.100

02 ಜನವರಿ 2024

ಅಂತರ್ಮುಖಿಗಳಿಗೊಂದು ದಿನ


 


ಅಂತರ್ಮುಖಿಗಳಿಗೊಂದು ದಿನ 


ಕೆಲವರು ಮಾತನಾಡುತ್ತಿದ್ದರೆ ನಾನ್ ಸ್ಟಾಪ್... ಅಂತಹ ವ್ಯಕ್ತಿಗಳ ಕಂಡು   ಅವರು ಕಲ್ಲನ್ನು ಬೇಕಾದರೂ ಒಮ್ಮೆ ಮಾತನಾಡಿಸಬಲ್ಲರು ಎಂದು ಜೋಕ್ ಮಾಡುವುದುಂಟು. ಇದಕ್ಕೆ ವಿರುದ್ಧವಾಗಿ ಕೆಲವರನ್ನು ಎಷ್ಟು   ಮಾತನಾಡಿಸಿದರೂ ಅವರ ಕಡೆಯಿಂದ ಬೇಗ ಪ್ರತಿಕ್ರಿಯೆ ಬರುವುದೇ ಇಲ್ಲ. ಅಯ್ಯೋ ಮಾತಾಡು ಬಾಯಿಂದ ಮುತ್ತೇನು ಉದುರೋಲ್ಲ ಎಂದು ಇಂತವರ ಕಿಚಾಯಿಸುವುದೂ ಉಂಟು ಇಂತಹ ಮೂಡಿಯಾಗಿರುವ ,ಕಡಿಮೆ ಪ್ರತಿಕ್ರಿಯೆ ನೀಡುವ, ಆಗೊಂದು ಈಗೊಂದು ಮಾತನಾಡುವ , ಎಲ್ಲರೊಡನೆ ಕಡಿಮೆ ಬೆರೆಯುವವರನ್ನು ಅಂತರ್ಮುಖಿಗಳು ಎಂದು ಕರೆಯಬಹುದು.

ಬೇರೆಯರೊಂದಿಗೆ ಬೆರೆಯದೇ ಮಂಕಾಗಿರುವ ಇವರು ದಡ್ಡರೆಂದು ನೀವು ಭಾವಿಸಲೇಬಾರದು ಡಾರ್ವಿನ್ ನಿಂದ ಹಿಡಿದು  ಐನ್ಸ್ಟೈನ್ ನಂತಹ ಮಾಹಾನ್ ವಿಜ್ಞಾನಿಗಳು ಕೂಡಾ ಅಂತರ್ಮುಖಿ ವ್ಯಕ್ತಿತ್ವಕ್ಕೆ ಉದಾಹರಣೆ ಎಂಬುದು ನೆನಪಿರಲಿ.

ಪ್ರತಿವರ್ಷ ಜನವರಿ 2 ರಂದು ವಿಶ್ವ ಅಂತರ್ಮುಖಿ ದಿನವನ್ನು ಆಚರಿಸಲಾಗುತ್ತದೆ.

ಅಂತರ್ಮುಖಿಗಳು ಏಕಾಂಗಿಯಾಗಿ ಇರುತ್ತಾರೆಂದು ಅವರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಲಾಗಿದೆ. ನಮ್ಮ ಸಮಾಜ ಅಂತರ್ಮುಖಿಗಳನ್ನು ದುರಹಂಕಾರಿ, ನಿರಾಸಕ್ತಿ, ಅಂಜಿಕೆಯುಳ್ಳವರು ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಈ ದಿನವು ಜನರು ಇಂತಹವರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೆಸರಾಂತ ಮನಶಾಸ್ತ್ರಜ್ಞರಾದ 

ಕಾರ್ಲ್ ಜಂಗ್ ರವರು ಮೊದಲ ಬಾರಿಗೆ    1921ರಲ್ಲಿ  "ಸೈಕಲಾಜಿಕಲ್ ಟೈಪ್ಸ್" ಎಂಬ ಪುಸ್ತಕದಲ್ಲಿ   ಅಂತರ್ಮುಖಿ ಪರಿಕಲ್ಪನೆಯನ್ನು ಮೊದಲು ವ್ಯಾಖ್ಯಾನಿಸಿದರು.  ಪ್ರತಿಯೊಬ್ಬ ವ್ಯಕ್ತಿಯು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂಬ ಎರಡು ವರ್ಗಗಳಾಗಿ ಬರುತ್ತಾರೆ ಎಂದು ಅವರು ಪ್ರತಿಪಾದಿಸಿದರು. ಜಂಗ್ ಅಂತರ್ಮುಖಿಗಳನ್ನು ಗ್ರೀಕ್ ದೇವರು ಅಪೊಲೊಗೆ ಹೋಲಿಸಿದ್ದಾರೆ. 

ಅಪೊಲೊ ತಿಳುವಳಿಕೆ ಮತ್ತು ಜ್ಞಾನೋದಕ್ಕೆ ಪ್ರಸಿದ್ಧಿ.  ಅಪೊಲೊ ಅಂತರ್ಮುಖಿಗಳು ತಮ್ಮ ಆಂತರಿಕ ಪ್ರಪಂಚದ ಪ್ರತಿಬಿಂಬ, ಕನಸು ಮತ್ತು ದೃಷ್ಟಿಯ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ವಿವರಿಸಿದರು.

ಅಂತರ್ಮುಖಿಗಳು ಏಕಾಂಗಿಯಾಗಿರುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಅಂತಹವರು ಮೌನವಾಗಿರುವುದೇ ಹೆಚ್ಚು, ಆದರೆ ಒರಟರಾಗಿವುದಿಲ್ಲ. ಅವರು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅವರು ಅತ್ಯಂತ ಉತ್ಸಾಹಿಗಳಾಗಿದ್ದು, ಅನ್ವೇಷಕರಾಗಿರುತ್ತಾರೆ. ಎಷ್ಟೋ ಸಲ ಅಂತರ್ಮುಖಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. 


ಅಂತರ್ಮುಖಿಗಳು ಹೊಸ ಮಾಹಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಧಾನ ಮಾಡುವರು. 

ಅಂತರ್ಮುಖಿಗಳು ಯಾರ ವಿರೋಧಿಗಳಾಗಿರುವುದಿಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಅವರು ತೆಗೆದುಕೊಳ್ಳುವ .

ಅಂತರ್ಮುಖಿಗಳು ಆಳವಾದ ಚಿಂತಕರು ಮತ್ತು ಹೆಚ್ಚು ಸೃಜನಶೀಲರು.

ಆದ್ದರಿಂದ ನಮ್ಮ ಸುತ್ತ ಮುತ್ತ ಇರುವ ಅಂತರ್ಮುಖಿಗಳನ್ನು ಗೌರವಿಸೋಣ.ಅವರ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ ತನ್ಮೂಲಕ ಅವರ ಸಂತಸವನ್ನು ಅನುಭವಿಸಲು ಬಿಡೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

26 ಸೆಪ್ಟೆಂಬರ್ 2021

ನನ್ನ ಪುತ್ರಿಯರು


 




ವಿಶ್ವ ಹೆಣ್ಣುಮಕ್ಕಳ ದಿನದ ನೆನಪಿಗಾಗಿ 


"ಚುಟುಕುಗಳು*



ನನಗೆ ಬಹಳ ಹೆಮ್ಮೆ

ನಮ್ಮನೆಯಲಿವೆ ಮುತ್ತು

ರತ್ನಗಳು |

ಅವರೇ ನನ್ನೆರಡು ಕಣ್ಣುಗಳಾದ 

ಹೆಣ್ಣು ಮಕ್ಕಳು ||



ಜ್ಞಾನ ,ವಿನಯ, ಭಕ್ತಿ ಸದ್ಗುಣದಲಿ

ಅವರಿಗೆ ಸಾಟಿ ಇನ್ನಾರು|

ಸಮಯ ಬಂದರೆ ಗುರುವಿಗೆ ಗುರು ನನ್ನ ಪುತ್ರಿಯರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ





08 ಸೆಪ್ಟೆಂಬರ್ 2021

ಸಿಹಿಜೀವಿಯ ನುಡಿ


 



ಸಿಹಿಜೀವಿಯ ನುಡಿ


ಜಗತ್ತಿನ ಎಲ್ಲಾ ಕೆಲಸಗಳು ಅತ್ಯದ್ಭುತ

ನಾವು ಆ ಕೆಲಸ ಮಾಡುವ ರೀತಿ

ಕೌಶಲ್ಯ ಪ್ರಾಮಾಣಿಕತೆ ಸೇವಾಮನೋಭಾವ ಇವುಗಳು ನಮ್ಮ ಕೆಲಸದ ದಕ್ಷತೆ ಹೆಚ್ಚಿಸಿ ನಮಗೆ ಆತ್ಮ ತೃಪ್ತಿ ನೀಡುತ್ತದೆ. ಗೀತಾಚಾರ್ಯ ಹೇಳಿದಂತೆ ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿರದೇ ಯಾವುದೇ ಕಾರ್ಯ ಮಾಡಿದರೂ ಒಂದಲ್ಲ ಒಂದು ದಿನ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುವುದು ತನ್ಮೂಲಕ ಸಮಾಜ ನಮ್ಮನ್ನು ಗುರ್ತಿಸುತ್ತದೆ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 ಸೆಪ್ಟೆಂಬರ್ 2021

ಶಿಕ್ಷಕನಾಗಿ ಮಕ್ಕಳಿಗೆ ಹತ್ತು ಸಲಹೆಗಳು


 



ಶಿಕ್ಷಕರ ದಿನದ ಶುಭಾಶಯಗಳು



ಶಿಕ್ಷಕನಾಗಿ ಮಧ್ಯಮ ವಯಸ್ಸಿನ ಹಿರಿಯನಾಗಿ 

ಮಕ್ಕಳಿಗೆ ನೀಡುವ ೧೦  ಸಲಹೆಗಳು 


೧ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ

೨ ಗುರು ಹಿರಿಯರ ಗೌರವಿಸಿ

೩ ಸುಲಭವಾಗಿ ಸೋಲು ಒಪ್ಪಬೇಡಿ

೪ ಯಶಸ್ವಿಯಾಗಿ ಮುಂದಡಿ ಇಡಿ

೫ ಯಶಸ್ಸಿಗೆ ಅಡ್ಡ ದಾರಿ ಇಲ್ಲ ಪರಿಶ್ರಮ ಮರೆಯದಿರಿ

೬ ನಿಮ್ಮಿಷ್ಟದ ಗುರಿ ಆರಿಸಿಕೊಂಡು ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಿ

೭ ಇತರರಿಂದ ಸ್ಪೂರ್ತಿ ಪಡೆಯಿರಿ ಆದರೆ ಹೋಲಿಕೆ ಮಾಡಿಕೊಳ್ಳಬೇಡಿ

೮ ನಾಡು ನುಡಿಯ ಬಗ್ಗೆ ಗೌರವವಿರಲಿ

೯ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆ ಗೆ ಮುಂದಾಗಿ

೧೦ ಜವಾಬ್ದಾರಿಯುತ ನಾಗರಿಕರಾಗಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

15 ಅಕ್ಟೋಬರ್ 2020

ಮಳೆ ಹನಿಯ ಬಗ್ಗೆ ಸಿಹಿಜೀವಿಯ ಹನಿಗಳು


 *ಹನಿಗಳ ಮೇಲೆ ಸಿಹಿಜೀವಿಯ ಹನಿಗಳು*



ಹನಿ೧


*ನಿಲ್ಲಿಸು*


ವರುಣ ತೋರು ಕರುಣ  

ಬರಲಿ ಬಿಡು ಅರುಣ

ನಿಲ್ಲಿಸು ನಿನ್ನಾರ್ಭಟವ

ಕೊಡದಿರು ಕಾಟವ 



ಹನಿ೨


*ನೆಲೆ ಎಲ್ಲಿ?*


ವರುಣನ ಆಗಮನ

ಜೀವಸಂಕುಲದ ನಮನ

ವರಣಾರ್ಭಟವಾಗಲು 

ಬದುಕು ಚೆಲ್ಲಾಪಿಲ್ಲಿ.

ಜೀವಿಗಳಿಗೆ ನೆಲೆ ಎಲ್ಲಿ?


ಹನಿ೩


*ನಿಶ್ಶೇಷ*


ತೂತು ಬಿದ್ದಿರಬಹುದು 

ಆಕಾಶ 

ರೈತರ ಮನದಿ ಕ್ಲೇಶ |

ಬೆಳೆ ಮತ್ತು ಬಾಳಾಗಬಹುದು

ನಿಶ್ಶೇಷ||



ಹನಿ೪


*ಮಳೆ*


ನಮಗೂ ಬೇಕೇ ಬೇಕು

ಮಳೆ |

ಅತಿಯಾದರೆ ?

ಹೊಡೆದುಬಿಡುವುದೇನೋ 

ರೈತರ ಶವಪೆಟ್ಟಿಗೆಗೆ ಕೊನೆಯ

ಮಳೆ|| 



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

04 ಮೇ 2019

ವಚನ೫

*ವಚನ೫*

ಗುರಿಯಿರಲಿ ಬಾಳಿಗೆ
ಗುರಿಯ ತಲುಪಲು
ದಾರಿಯು ಶುದ್ದವಿರಲಿ
ಸರಿತಪ್ಪಿನ ಅರಿವಿರಲಿ
ಅರಿತು ಮುನ್ನಡೆ ಬಾಳಲಿ
ಹರಿಯ ಕರುಣೆಯಿಂದ
ಬಾಳು ಬಂಗಾರವಾಗುವುದು
ನೋಡಾ ಶ್ರೀದೇವಿತನಯ

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


03 ಮೇ 2019

ಶ್ರೀದೇವಿ ತನಯನ ವಚನಗಳು

*ಶ್ರೀದೇವಿ ತನಯನ ವಚನಗಳು*

*ವಚನ೧*

ನೂರೂರು ಸುತ್ತಿ
ನೂರ್ಕಾಸು ಕಳೆದು
ನದಿಗಳಲಿ ಮಿಂದು
ದೇವ ದೇವತೆಗಳ
ನೋಡುವ ಬದಲು
ನಿನ್ನ ಅಂತರಂಗದ
ರಂಗನ ನೆನೆಯೆಂದ
ಶ್ರೀದೇವಿತನಯ

*ವಚನ೨*

ನಾನು ನನ್ನದು
ನಮ್ಮವರು ಎಂಬ
ಬಂಧನದಿ ಬಿದ್ದು
ನರಳದಿರು ನೀ
ಬನ್ನಪಡುವಾಗ
ಬಂಧುಗಳ ಸದ್ದಿಲ್ಲ
ಕರೆಯದೇ ಬಂದು
ಕಾಪಾಡುವ ನಮ್ಮ
ಹರಿಯಲಿ ಮನಸಿಡು
ಎಂದ ಶ್ರೀದೇವಿತನಯ

*ವಚನ೩*

ವಂಚಕರಿಹರು ಜಗದಲಿ
ಸಂಚುಮಾಡಿ ಮೆರೆವರು
ಕೊಂಚವೂ ವಿಚಲಿತನಾಗಬೇಡ
ಮಿಂಚಿನಂತೆ ಕಾರ್ಯಮಾಡುತ
ಅಂಜದಲೆ  ಮುನ್ನಡೆ
ನಂಜನುಂಡ ಹರ ಕಾಯವನು
ಶ್ರೀದೇವಿತನಯನ ದಯವಿವುದು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ವಚನ (ಗೋವಿಂದ)

*ವಚನ*

ವ್ಯಸನವಾಗಲಿ ಹರಿಯ
ನಾಮಸ್ಮರಣೆ
ಹಸಿವು ನಿದಿರೆಯ ಪರಿವೆಯಿರದೆ
ನೆನಯಬೇಕವನ
ಬಸಿದರೆ ಭಕ್ತಿಯ ಜಲ
ಹಸಿದಿರುವೆಯಾ ಶ್ರೀದೇವಿತನಯ
ಎಂದು ಬರದಿರನು ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಏಪ್ರಿಲ್ 2019

ವಚನ ೧ ( earth day)

           *ವಚನ೧*

ಮರಗಿಡ ಕಡಿದು
ಕಟುಕರಾಗದೆ
ಪರಿಸರ ಉಳಿಸಲು
ಕಟಿಬದ್ದರಾದರೆ
ಧರೆಯೆ ಸ್ವರ್ಗವು
ನೋಡು ಶ್ರೀದೇವಿತನಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
(ಇಂದು ವಿಶ್ವ ಭೂ ದಿನ)



11 ಫೆಬ್ರವರಿ 2018

ಹನಿಗವನಗಳು ( ವಿಶ್ವ ಮದುವೆ ದಿನದ ವಿಶೇಷ)



*ಹನಿಗವನಗಳು*

*೧*

ಅಭಿಶೇಕ್ ಮತ್ತು ಪ್ರಿಯ
ಪ್ರತಿದಿನ ತಪ್ಪದೇ ಶಿವನ
ದೇವಾಲಯ ದರ್ಶನ
ಮಾಡುತ್ತಿದ್ದರು
ಕಾರಣ
ನಮ್ಮ ಶಿವ
ಅಭಿಶೇಕ ಪ್ರಿಯ

*೨*

*ಹೇಗೆ?*
(ಇಂದು ವಿಶ್ವ ಮದುವೆ ದಿನ ಅದರ ಪ್ರಯುಕ್ತ)

ಹರಿಹರರೆ ನಿಮಗಿದೋ
ದೊಡ್ದ ನಮಸ್ಕಾರ
ಶಿವನೇ ತಿಳಿಸು ನನಗೆ
ಹೇಗೆ ಬಾಳಿಸಿದೆ
ಇಬ್ಬರು ಹೆಂಡಿರ
ಹರಿಯೆ ಅರುಯೆನಗೆ
ಹೇಗೆ ನಿಬಾಯಿಸಿದೆ
ಹದಿನಾರು ಸಾವಿರ

*೩*

*ಶಿವನಪಾದ*

ಇಂದು ವಿಶ್ವ ಗುಂಡಿಗೆ ಬಿದ್ದದಿನ
ಗುಂಡಿಗೆ ಇರುವ ಗಂಡಂದಿರು
ಗುಂಡಿಯನು ಎದುರಿಸಿ
ಬಾಳುತ್ತಿದ್ದಾರೆ .
ಗುಂಡಿಗೆ ದುರ್ಬಲವಾದ
ಗಂಡಂದಿರು ಗುಂಡಿನ
ಮೊರೆ ಹೋಗಿದ್ದಾರೆ.
ಗುಂಡಿಗೆ ಅತಿದುರ್ಬಲವಿರುವ
ಗಂಡಂದಿರು ಶಿವನಪಾದ
ಸೇರಿದ್ದಾರೆ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*