18 ಆಗಸ್ಟ್ 2024

ನಿರ್ಧಾರ .ಹನಿಗವನ


 ಹೀಗೆಯೇ ಆಗಬೇಕೆಂದು ಮಗುವಿಗೆ

ಒತ್ತಾಯ ಮಾಡದಿರಿ ಪ್ರತಿಬಾರಿ|

ತನ್ನ ಸ್ವಂತ ಆಸಕ್ತಿಯಿಂದ ಮಗು

ತಾನೆ ನಿರ್ಧರಿಸಲಿ ಮುಂದಿನ ಗುರಿ||

17 ಆಗಸ್ಟ್ 2024

#ಪರಿಸರಸ್ನೇಹಿ_ಬಿದಿರಿನ_ಸೇತುವೆ


 


#ಪರಿಸರಸ್ನೇಹಿ_ಬಿದಿರಿನ_ಸೇತುವೆ

ದಿನಕ್ಕೊಂದು ಬಿದ್ದು ಹೋಗುವ ಹೊಸ ಸೇತುವೆ ನೋಡಿದ ನಾವು ಬರೀ ಬಿದಿರಿನಿಂದ ಮಾಡಿದ ಪರಿಸರಸ್ನೇಹಿ ಸೇತುವೆ ಬಗ್ಗೆ ‌ನೋಡೋಣ.

ಕಾಂಬೋಡಿಯಾದಲ್ಲಿನ ಬಿದಿರಿನ ಸೇತುವೆಯು ಸಾಂಪ್ರದಾಯಿಕ ಎಂಜಿನಿಯರಿಂಗ್ ಮತ್ತು ಸಮುದಾಯದ  ಪಾಲ್ಗೊಳ್ಳುವಿಕೆಗೆ ಉತ್ತಮ ಉದಾಹರಣೆ.

ಯಾವುದೇ ಲೋಹ ಅಥವಾ ಕಾಂಕ್ರೀಟ್ ಬಳಸದೇ ಸಂಪೂರ್ಣವಾಗಿ ಬಿದಿರಿನಿಂದ ಮಾಡಲ್ಪಟ್ಟ ಈ ಸೇತುವೆಗಳು
ಕಾರುಗಳು ಮತ್ತು ನೂರಾರು ಜನರ ತೂಕವನ್ನು ತಾಳಿಕೊಳ್ಳುವ  ಕ್ಷಮತೆ ಹೊಂದಿವೆ.


ಪ್ರವಾಹದ ಸಮಯದಲ್ಲಿ ಈ ಸೇತುವೆಯನ್ನು  ಕಿತ್ತುಹಾಕಿ   ಮರುನಿರ್ಮಾಣ ಮಾಡಲಾಗುತ್ತದೆ.  ಸ್ಥಳೀಯ ಜನರ ಸಂಪನ್ಮೂಲ ಮತ್ತು ಜಾಣ್ಮೆಯನ್ನು ಪ್ರತಿನಿಧಿಸುವ ಈ ಸೇತುವೆಗಳು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿಯಾಗಿವೆ.

ಅತಿಯಾಸೆಯ ಫಲ


 ಕೆರೆ ,ನೆರೆ

ಮಹಲುಗಳ ಕಟ್ಟುತ್ತಾರೆ ನುಂಗಿ ಕೆರೆ||

ಪ್ರಕೃತಿಯ ದೂರುತ್ತಾರೆ ಬಂದಾಗ ನೆರೆ||

ಸಿಹಿಜೀವಿ ವೆಂಕಟೇಶ್ವರ

ತುಮಕೂರು

14 ಆಗಸ್ಟ್ 2024

ನಮ್ಮ ಆಯ್ಕೆ.

 


ನಮ್ಮ ಆಯ್ಕೆ.


ನಮ್ಮ ಆಯ್ಕೆಯಿಂದಲೇ  ತಂದಿರುತ್ತೇವೆ ಹೆಂಡತಿ ಮತ್ತು ಸರ್ಕಾರ|

ಇವು ನಮಗೇ ತಿರುಗಿ ಬೀಳುತ್ತವೆ

ಸಿಕ್ಕರೆ ಅಧಿಕಾರ||


ಸಿಹಿಜೀವಿ ವೆಂಕಟೇಶ್ವರ


ಭದ್ರಾ


 


ಭದ್ರಾ.


ರೈತರ ಜೀವನಾಡಿಯಾಗಿ 

ನಿಂತಿದೆ ನಮ್ಮ ಹೆಮ್ಮೆಯ ಅಣೆಕಟ್ಟು ತುಂಗಭದ್ರಾ|

ಜಲಾಶಯದ ನೀರು ಅನವಶ್ಯಕವಾಗಿ ಪೋಲಾಗದಂತೆ ಮಾಡ್ರಪ್ಪ ಗೇಟ್ ಗಳನ್ನು ಭದ್ರಾ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು