01 ಜುಲೈ 2024

ವೈದ್ಯರಿಗೆ ನಮನಗಳು ...ಇಂದು ವೈದ್ಯರ ದಿನ

 




ವೈದ್ಯರ ದಿ‌ನ 

"ವೈದ್ಯೋ ನಾರಾಯಣ ಹರಿ"ಎಂಬಂತೆ ಡಾಕ್ಟರ್ ಗಳು ದೇವರ ಸಮಾನ.ಸಮಾಜದಲ್ಲಿ ಅವರಿಗೆ ತಮ್ಮದೇ ಆದ ಗೌರವವಿದೆ.ಅವರ ಸೇವೆಯನ್ನು ಎಷ್ಟು ಸ್ಮರಿಸಿ ‌ಕೃತಜ್ಞತೆ ಸಲ್ಲಿಸಿದರೂ ಸಾಲದು ಆದರೂ ಅವರಿಗಾಗಿ ರಾಷ್ಟ್ರ ಮಟ್ಟದಲ್ಲಿ ಒಂದು ದಿನವನ್ನು ಮೀಸಲಿಡಲಾಗಿದೆ ಮತ್ತು 
ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ:

 ಮಾನವೀಯತೆಗೆ ಅವರ ನಿಸ್ವಾರ್ಥ ಸೇವೆಗಾಗಿ ವೈದ್ಯರು ಮತ್ತು ಆರೋಗ್ಯ ವೃತ್ತಿಪರರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಡಾ. ರಾಯ್ ಅವರು ಜುಲೈ 1, 1882 ರಂದು ಜನಿಸಿದರು
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ, ವೈದ್ಯರಾಗಿ ಬಿ ಸಿ ರಾಯ್ ವೈದ್ಯಕೀಯ ರಂಗಕ್ಕೆ ಅಮೋಘ ಕೊಡುಗೆಗಳನ್ನು ನೀಡಿದ್ದಾರೆ. ಜಾದವಪುರ್ ಟಿ ಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ, ಕಮಲಾ ನೆಹರೂ ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್ಸ್ ಟಿಟ್ಯೂಶನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾಗಿ ತೆರೆದಿರುವ ಚಿತ್ತರಂಜನ್ ಸೇವಾ ಸದನಗಳ ಸ್ಥಾಪನೆಯಲ್ಲಿ ಬಿ ಸಿ ರಾಯ್ ಪಾತ್ರ ಪ್ರಮುಖವಾಗಿದೆ. ಇವರ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಮ್ಮ 80 ನೇ ವಯಸ್ಸಿನಲ್ಲಿ 1962 ರಲ್ಲಿ ಹುಟ್ಟಿದ  ದಿನಾಂಕದಂದೇ  ನಿಧನರಾದರು. ನಮ್ಮ ಜೀವನದಲ್ಲಿ ಮತ್ತು ಸಮಾಜದಲ್ಲಿ ವೈದ್ಯರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು  ಪ್ರತಿ ವರ್ಷ ವೈದ್ಯರ  ದಿನವನ್ನು ಆಚರಿಸಲಾಗುತ್ತದೆ.
2024 ರಲ್ಲಿ ರಾಷ್ಟ್ರೀಯ ವೈದ್ಯರ ದಿನದ ಥೀಮ್ "ಹೀಲಿಂಗ್ ಹ್ಯಾಂಡ್ಸ್, ಕೇರಿಂಗ್ ಹಾರ್ಟ್ಸ್."

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 ಜೂನ್ 2024

ಸಿನಿಮಾ ಟಿಕೆಟ್ ಕಲೆಕ್ಟರ್ ಟು ಡಿಸ್ಟ್ರಿಕ್ಟ್ ಕಲೆಕ್ಟರ್

 


ಸಿನಿಮಾ ಟಿಕೆಟ್ ಕಲೆಕ್ಟರ್ ಟು ಡಿಸ್ಟ್ರಿಕ್ಟ್ ಕಲೆಕ್ಟರ್.


ಆತ ಚೆನ್ನೈನ ಪ್ರಖ್ಯಾತ ಸತ್ಯಂ   ಸಿನಿಮಾಸ್ ಎಂಬ ಥಿಯೇಟರ್ ನಲ್ಲಿ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ಸಂಪಾದನೆ ಮಾಡುವ ಉದ್ಯೋಗ ಮಾಡಿದರು.ಅದನ್ನು ತೊರೆದು  ಒಂದು ಚಿಕ್ಕ ಹೋಟೆಲ್ ನಲ್ಲಿ ಹೊಟ್ಟೆ ಪಾಡಿಗಾಗಿ  ಸರ್ವರ್ ಆಗಿ ಸೇವೆ ಸಲ್ಲಿಸುತ್ತಾ ಛಲದಿಂದ ಓದಿ ತಾನಂದುಕೊಂಡ ಮಹೋನ್ನತ ಗುರಿ ಸಾಧಿಸಿದ. ಇಂದು I A S ಅಧಿಕಾರಿಯಾಗಿ ಸಾವಿರಾರು ಜನರಿಗೆ ಸರ್ವ್ ಮಾಡುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಸಿನಿಮಾ ಮಂದಿರದಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದವರು ಇಂದು ಡಿಸ್ಟ್ರಿಕ್ಟ್‌ ಕಲೆಕ್ಟರ್ ಆಗಿದ್ದಾರೆ. ಅವರೇ ಕೆ ಜಯ್ ಗಣೇಶ್ !


ಸಾಧಿಸುವವನಿಗೆ ಸಾಧಿಸುವ ಛಲ, ಶ್ರಮ ಆಸಕ್ತಿ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ  ಉದಾಹರಣೆ. ಮನೆಯಲ್ಲಿ ಬಡತನ ಮನೆಯ ಜವಾಬ್ದಾರಿಯನ್ನು ಹೊಂದಿದ್ದರೂ   ಲೈಫ್ ನಲ್ಲಿ ಏನನ್ನಾದ್ರೂ ಸಾಧಿಸಬೇಕು ಈ ಬಡತನದಿಂದ ಹೊರಬರಬೇಕು ನನ್ನ ಫ್ಯಾಮಿಲಿ ಜೊತೆ ನಾಲ್ಕು ಜನಕ್ಕೆ ಅನುಕೂಲವಾಗುವಂತ ಕೆಲಸ ಏನಾದ್ರು ಮಾಡಬೇಕು ಎಂಬುದಾಗಿ ಅಂದುಕೊಂಡು ಕಷ್ಟ ಪಟ್ಟು ಓದಿ UPSC ಪರೀಕ್ಷೆಯಲ್ಲಿ ಪಾಸ್ ಆಗಿ ಇವತ್ತು IAS ಅಧಿಕಾರಿಯಾಗಿದ್ದಾರೆ.

 ಮೂಲತಃ ತಮಿಳುನಾಡಿನವರಾದ ಇವರು ಆರು ಬಾರಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ವಿಫಲತೆ ಅನುಭವಿಸಿದರೂ ಛಲ ಬಿಡದ ತ್ರಿವಿಕ್ರಮನಂತೆ ಏಳನೇ ಬಾರಿಗೆ  156 ನೇ ಸ್ಥಾನ ಪಡೆದು ದೇಶದ ಅತ್ಯುನ್ನತ ನಾಗರಿಕ ಸೇವೆ ಸೇರಿದ್ದಾರೆ. ಹೌದು ಯಾವುದೇ ಕೋಚಿಂಗ್ ಇಲ್ಲದೆ ಹೋಟೆಲ್ ನಲ್ಲಿ ಸಪ್ಲೈಯರ್ ಕೆಲಸ ಮಾಡುವ ಜೊತೆಗೆ UPSC ಪರೀಕ್ಷೆ ತಯಾರಿ ನಡೆಸುತ್ತಿದ್ದರು. 

UPSC ಪರೀಕ್ಷೆಯಲ್ಲಿ ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಈ ಪರೀಕ್ಷೆಯನ್ನು ಲಕ್ಷಾಂತರ ಮಂದಿ ಬರೆಯುತ್ತಾರೆ. ಅದರಲ್ಲೂ ಬಡತನದಿಂದ ಬಂದ ಈ ಜೈ ಗಣೇಶ್ ಅವರಿಗೆ ಇನ್ನೂ ಕಷ್ಟದ ಹಾದಿಯಾಗುತ್ತದೆ. ಕೆ.ಜಯಗಣೇಶ್  ಅವರು ವೆಲ್ಲೂರಿನ ತಂತೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದರು. ಅವರು ತಮ್ಮ ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯೂ ಅವರ ಮೇಲಿತ್ತು.

ಕೆ.ಜೈಗಣೇಶ್ ಅವರು ತಮ್ಮ ಗ್ರಾಮದಲ್ಲಿ ಮೂರು ಬಾರಿ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು ಆದರೆ ಮೂರು ಬಾರಿ ಅನುತ್ತೀರ್ಣರಾದ ನಂತರ ಅವರು ತಮ್ಮ ಹಳ್ಳಿಯನ್ನು ತೊರೆದು ಚೆನ್ನೈಗೆ ಹೋಗಬೇಕು ಎಂದು ಅರಿತುಕೊಂಡರು ಮತ್ತು ಅಲ್ಲಿಂದ ಅವರು ತಮ್ಮ ಸಿದ್ಧತೆಯನ್ನು ಚುರುಕುಗೊಳಿಸಿದರು. ಈ ಪರಿಸ್ಥಿತಿಯಲ್ಲಿ ಅಣ್ಣಾನಗರ ತಲುಪಿ ಅಖಿಲ ಭಾರತ ಸರ್ಕಾರಿ ಸಂಸ್ಥೆಯಲ್ಲಿ ಐಎಎಸ್ ಪ್ರವೇಶ ಪಡೆದರು. ಹೊಟ್ಟೆ ಪಾಡಿಗೆ ಕೆಲ ತಿಂಗಳು ಸಿನಿಮಾ ಮಂದಿರದಲ್ಲಿ ಟಿಕೆಟ್ ನೀಡುವ ಕೆಲಸ ಮಾಡಿದರು. ನಂತರ ಹೋಟೆಲ್ ಸಪ್ಲೈಯರ್ ಆಗಿ ಕೆಲಸ ಮಾಡಿದರು.  ಐಎಎಸ್ ಅಧಿಕಾರಿಯಾಗುವ ಮೊದಲು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ಛಲ ಬಿಡದೆ ತನ್ನ ಗುರಿಯನ್ನು ಮುಟ್ಟಿದ್ದಾರೆ. ಎಲ್ಲಾ ಸೌಕರ್ಯಗಳಿದ್ದರೂ ಸೋಮಾರಿತನ ಹೊದ್ದು ಮಲಗುವ ,ಬೀದಿ ಸುತ್ತುತ್ತಾ ಅಪ್ರಯೋಜಕರಾದ ಸಾವಿರಾರು ಯುವಕರಿಗೆ ಜಯ್ ಗಣೇಶ್  ರಂತಹವರು ಮಾದರಿಯಾಗಬೇಕೆ ಹೊರತು ಯಾವುದೋ ಸಿನಿಮಾದ ಹೀರೋ ಅಥವಾ ಹೀರೋಯಿನ್ ಗಳಲ್ಲ ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ವಿಶ್ವಕಪ್ ಸಂಭ್ರಮಕ್ಕೆ ಸಿಹಿಜೀವಿಯ ಐದು ಹನಿಗಳು.

 


ವಿಶ್ವಕಪ್ ಸಂಭ್ರಮಕ್ಕೆ ಸಿಹಿಜೀವಿಯ ಐದು ಹನಿಗಳು.


*ಕಪ್  ನಮ್ದೆ*


ಗೆಲುವಿನ ಬಳಿ ಸಾರಿ

ಮುಗ್ಗುರಿಸುತ್ತಿತ್ತು ಸತತ|

ಈ ಬಾರಿ ವಿಶ್ವಕಪ್ ಕಿರೀಟ

ಧರಿಸಿ ಬೀಗಿದೆ ಭಾರತ||


 *ರಾಹುಲ್  ದ್ರಾವಿಡ್*


ನಾಯಕನಾದಾಗ ಪ್ರಯತ್ನಿಸಿದರೂ 

ಕಪ್ ಗೆಲ್ಲಲಿಲ್ಲ  ಮುಸುಕಿತ್ತು ಸೋಲಿನ ಕಾರ್ಮೋಡ|

ದ್ರೋಣಾಚಾರ್ಯರಾಗಿ ವಿದ್ಯೆ

ನೀಡಿ ಕಪ್ ತಂದಿದ್ದಾರೆ ನೊಡೀಗ

ನಮ್ಮ ರಾಹುಲ ದ್ರಾವಿಡ||



*ಕೋಹ್ಲಿ*


ತಮ್ ಪಾಡಿಗೆ ತಾವ್ ಆಡ್ತಾರೆ

ಯಾರೆ ಹೊಗುಳ್ಲಿ ಬೈಯ್ಲಿ|

ಫೈನಲ್ ನಲ್ ಮಸ್ತ್ ಆಟ ಆಡಿ

ಕಪ್ ಗೆಲ್ಲೋಕೆ ಕಾರ್ಣ ಆದ್ರು ನೋಡ್ರಿ ನಮ್ ಕೋಹ್ಲಿ||



*ವಿರೋಚಿತ ಸೋಲು*


ಭಾರತ ವಿಶ್ವ ಕಪ್ ಗೆದ್ದದ್ದ ಕಂಡು

ಹೊಗಳುತಿದೆ ಲೋಕಾ|

ಗೌರವಕ್ಕೆ ಅರ್ಹ ವೀರೋಚಿತ ಸೋಲನುಭವಿಸಿದ ದಕ್ಷಿಣ ಆಫ್ರಿಕಾ||


*ಆನಂದ ಭಾಷ್ಪ* 


ಭಾರತದ ವಿಜಯಕ್ಕೆ ದೇವಾನುದೇವತೆಯರು ಹಾರೈಸಿದರು ಸುರಿಸಿ ಪುಷ್ಪ|

ಆಟಗಾರರಾದಿಯಾಗಿ ಇಡೀ

ಭಾರತವೇ ಸಂಭ್ರಮಿಸಿತು ಸುರಿಸುತ ಆನಂದಭಾಷ್ಪ||


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

9900925529







ವಿರೋಚಿತ ಸೋಲು

 ವಿರೋಚಿತ ಸೋಲು 

ಭಾರತ ವಿಶ್ವ ಕಪ್ ಗೆದ್ದದ್ದ ಕಂಡು

ಹೊಗಳುತಿದೆ ಲೋಕಾ|

ಗೌರವಕ್ಕೆ ಅರ್ಹ ವೀರೋಚಿತ ಸೋಲನುಭವಿಸಿದ ದಕ್ಷಿಣ ಆಫ್ರಿಕಾ||







ಕೋಹ್ಲಿ

 ಕೋಹ್ಲಿ


ತಮ್ ಪಾಡಿಗೆ ತಾವ್ ಆಡ್ತಾರೆ

ಯಾರೆ ಹೊಗುಳ್ಲಿ ಬೈಯ್ಲಿ|

ಫೈನಲ್ ನಲ್ ಮಸ್ತ್ ಆಟ ಆಡಿ

ಕಪ್ ಗೆಲ್ಲೋಕೆ ಕಾರ್ಣ ಆದ್ರು 

ನೋಡ್ರಿ ನಮ್ ಕೋಹ್ಲಿ||


ಸಿಹಿಜೀವಿ ವೆಂಕಟೇಶ್ವರ