*ನಂದನವನ*
ಸಕಲ ಜೀವಿಗಳನ್ನು ಗೌರವಿಸಿ
ನಾವು ತೋರಿದಾಗ ಅಕ್ಕರೆ
ನಂದನವನ ಆಗುವುದು
ಈ ಜಗ ಇದು ಖರೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ನಂದನವನ*
ಸಕಲ ಜೀವಿಗಳನ್ನು ಗೌರವಿಸಿ
ನಾವು ತೋರಿದಾಗ ಅಕ್ಕರೆ
ನಂದನವನ ಆಗುವುದು
ಈ ಜಗ ಇದು ಖರೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಹ್ಯಾಪಿ ಬ್ರೈಲ್ ಡೇ....
ಸರ್ ಪ್ರತಿ ವರ್ಷ ನಾನು ಜನವರಿ ನಾಲ್ಕನೇ ತಾರೀಖಿನಂದು ಮೈಸೂರಿಗೆ ಹೋಗುವೆ ಎಂದರು ಸುರೇಶ್ ರವರು
ಏನ್ ಸಾರ್ ಟೂರಾ ? ಪ್ರಶ್ನೆ ಮಾಡಿದೆ .ಇಲ್ಲ ಅಂದು ಲೂಯಿ ಬ್ರೈಲ್ ಜನ್ಮದಿನ ಆಚರಣೆ ಮಾಡುವ ಸಲುವಾಗಿ ಹೋಗುತ್ತಿರುವೆ ಎಂದರು.
ದೃಷ್ಟಿ ವಿಶೇಷ ಚೇತನ ಶಿಕ್ಷಕರಾದ ಸುರೇಶ್ ರವರು ಆ ದಿನದ ಮಹತ್ವ ತಿಳಿಸಿದರು.
ಲೂಯೀ ಬ್ರ್ರೈಲ್ರವರ 214 ನೇ ಜನ್ಮದಿನಾಚರಣೆಯನ್ನು ಈ ವರ್ಷ ಆಚರಿಸಲಾಗುತ್ತಿದೆ.
ಅಂಧರ ಬಾಳಿನ ಜ್ಯೋತಿ, ಅಕ್ಷರ ಬ್ರಹ್ಮ, ಆಶಾಕಿರಣ
ಅಂಧರ ಜೀವನಕ್ಕೆ ಸ್ಪೂರ್ತಿ, ಅಂಧರ ಬಾಳಿಗೆ ಓಜೋಸ್ಸನ್ನ ನೀಡಿದಂತಹ ಬ್ರೈಲ್ ಲಿಪಿಯ ಮಾಂತ್ರಿಕ, ಬೈಲ್ ಲಿಪಿಯ ಜನಕ, ಅಂಧರ ಜೀವನವನ್ನು ಪಾವನಗೊಳಿಸಿದ ಶಿಲ್ಪಿ, ಅಂಧರ ಆತ್ಮಗೌರವ ಘನತೆಯನ್ನು ಎತ್ತಿ ಹಿಡಿದ ಲೂಯಿ ಬೈಲ್ರವರಿಗೆ ಎಲ್ಲರೂ ಗೌರವಿಸಲೇಬೇಕಿದೆ.ಅದರಲ್ಲಿ ದೃಷ್ಟಿ ವಿಶೇಷ ಚೇತನರು ಮರೆಯುವುದಾದರೂ ಹೇಗೆ?
ಅಂತದೇ ಅಭಿಮಾನ ಹೊಂದಿರುವ ಸುರೇಶ್ ರವರು
ಮೈಸೂರಿನ ಸರ್ಕಾರಿ ಅಂಧಮಕ್ಕಳ ಪಾಠಶಾಲೆ ಆವರಣದಲ್ಲಿ ಅನಾವರಣಗೊಂಡಿರುವ ಬ್ರೈಲ್ ಪ್ರತಿಮೆಗೆ 2021 ನೇ ಸಾಲಿನಿಂದ ಪ್ರತಿ ಭಾನುವಾರದಂದು ಗುರು ಹಿರಿಯರ, ಬಂಧು-ಮಿತ್ರರ ಹಿತೈಶಿಗಳ ಸಹಭಾಗಿತ್ವದೊಂದಿಗೆ ಪೂಜಿಸುವ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಈ ವರ್ಷದ ಜನವರಿ ನಾಲ್ಕರಂದು ಮೈಸೂರಿನ ಆ ಪ್ರತಿಮೆಯ ಬಳಿ ಸರಳ ಸಮಾರಂಭ ಏರ್ಪಾಡು ಮಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಪಾಕೆಟ್ ಕ್ಯಾಲೆಂಡರ್ ಮಾಡಿಸಿ ಅದರಲ್ಲಿ ಬ್ರೈಲ್ ಲಿಪಿಯ ಪರಿಚಯ ಮತ್ತು ನುಡಿಗಟ್ಟುಗಳನ್ನು ಮುದ್ರಿಸಿ ಉಚಿತವಾಗಿ ಸಾರ್ವಜನಿಕರಿಗೆ ಹಂಚುವ ಯೋಜನೆ ಹಾಕಿಕೊಂಡು ಮೈಸೂರಿಗೆ ಪಯಣ ಮಾಡಿದ್ದಾರೆ. ಉದಯೋನ್ಮುಖ ಸಾಹಿತಿಗಳು, ಪುಸ್ತಕ ಪ್ರೇಮಿಗಳು ಸಹ ಆಗಿರುವ ಸುರೇಶ್ ರವರು ಕರಪತ್ರಗಳ ಮೇಲೆ ಬರೆದ ಸಾಲುಗಳು ಗಮನ ಸೆಳೆದವು
"ಅಕ್ಷರ ಕಲಿತ ಅಂಧ ಸಾಕ್ಷರ ಸಮಾಜಕ್ಕೆ ಚಂದ,
ಅಂಧರೆಂದು ಜರಿಯದಿರಿ,
ಅವರು ಮನುಜರು ಮರೆಯದಿರಿ"
ಸುರೇಶ್ ಸರ್ ನಿಮ್ಮಂತಹ ಶಿಕ್ಷಕರ ಪಾಲಿಗೆ ಬ್ರೈಲ್ ಕೊಡುಗೆ ಅನನ್ಯ .ನೀವು ಸಹ ನಿಮ್ಮ ವಿದ್ಯಾರ್ಥಿಗಳ ಬಾಳಲ್ಲಿ ಆದರ್ಶ ಶಿಕ್ಷಕರಾಗಿ ಎಂದು ಹಾರೈಸುತ್ತಾ ನಾನೂ ಕೂಡಾ
ಹ್ಯಾಪಿ ಬ್ರೈಲ್ ಡೇ ಎಂದು ಹೇಳುವೆ ..
ಸಿಹಿಜೀವಿ.
ಸಿ ಜಿ ವೆಂಕಟೇಶ್ವರ
ತುಮಕೂರು
ಹಾಯ್ಕುಗಳು...
೧
ಎಲ್ಲಿದೆ ಅಂದ
ಒಳಗಣ್ಣಿನಲಿದೆ
ಅಂದನಾ ಅಂಧ
೨
ಯಾರಿಗೆ ಬೇಕು?
ಗುಣವಿಲ್ಲದ ಅಂದ
ನಿಷ್ಪ್ರಯೋಜಕ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಗಾಯ..ಮಾಯ..
ಬಣ್ಣದ ಬಣ್ಣದ ಮಾತುಗಳನಾಡಿ
ನಾ ಬಣ್ಣಿಸುತ್ತಿರುವಾಗಲೇ ನೀ ಮಾಯ |
ಮಾಡಿ ಹೋಗಿರುವೆ ನನ್ನ
ಹೃದಯಕ್ಕೆ ಮರೆಯದ ಗಾಯ ||
ಸಿಹಿಜೀವಿ..
ಅನ್ಕೋತಾ ಶೆಟ್ಗೊಂಡು ಆ
ವರ್ಸ ಹೊಂಟು ಹೊಯ್ತ್ರಿ |
ಸ್ವಾಗತ ಮಾಡೋನ್ರಿ ನಾವ್
ಎರಡು ಮಟ ಟೂ ಅಂದು ಒಂದ್ ಮಟ ಸೇ ಅನ್ನೋ ಟ್ವೆಂಟಿ ಟ್ಬೆಂಟಿತ್ರಿ |