21 ಆಗಸ್ಟ್ 2022

ಚೆಲುವಿನ ಚಿತ್ತಾರ ..


 


#ಸಿಹಿಜೀವಿಯ_ಹನಿ 


ಕತ್ತಲಾಯಿತೆಂದು 

ಬೇಸರಿಸದಿರು ನೋಡಲ್ಲಿ

ಕಂಗೊಳಿಸುತ್ತಿವೆ ಗ್ರಹ ತಾರಾ |

ಕತ್ತಲಲೂ ಮೂಢಿಸಿದೆ 

ಚೆಲುವಿನ ಚಿತ್ತಾರ ||


ಸಿಹಿಜೀವಿ 


ಹಿರಿಯ ನಾಗರಿಕರು...

 



#ವಿಶ್ವಹಿರಿಯನಾಗರಿಕರದಿನ 



ನಾವು ಹಿರಿಯ ಜೀವಗಳು

ಮಾಗಿದ ಬಾಗಿದ ಬೆನ್ನುಗಳು

ನಾವು ಹಿರಿಯ ನಾಗರಿಕರು |

ಅನಾದರ ಮಾಡಿದರೂ

ನಮ್ಮ ಸಾಕದಿದ್ದರೂ ಬೇಸರವಿಲ್ಲ

ಸುಖವಾಗಿ ಬಾಳಲಿ ನಮ್ಮ ಕರು ||



#ಸಿಹಿಜೀವಿಯ_ಹನಿ 

ಶಾಂತಿ...


 



ಮಗ ಎಂ. ಬಿ .ಬಿ.ಎಸ್. ಮುಗಿಸಿ ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾನೆ ನನ್ನ ಇಚ್ಚೆಯಂತೆ ಎಂ ಡಿ ಸೀಟ್ ಸಿಗುವುದೋ ಇಲ್ಲವೋ ಎಂಬ ಚಿಂತೆ, ಬೇಸರ, ಮಗಳು ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಹೋಗುತಿಹಳು,ಅವಳಿಗೆ ನನ್ನಿಚ್ಚೆಯ ವರ ಸಿಗುವನೆ? ಎಂಬ‌ ಚಿಂತೆ.ಹದಿನೈದು ಕೋಟಿ ಆಸ್ತಿಯಿದ್ದರೂ ಮನಸ್ಸಿಗೆ ಶಾಂತಿಯಿಲ್ಲ ನೆಮ್ಮದಿಯಿಲ್ಲ ಮನಃಶಾಂತಿ ಪಡೆಯುವುದು ಹೇಗೆ? ಪರಿಹಾರ ಸೂಚಿಸಿ ಸ್ವಾಮಿ.
ಮುಗುಳ್ನಕ್ಕು ಸ್ವಾಮೀಜಿಯವರು ಹೇಳಿದರು.
ಭಕ್ತ, ನಿನಗೆ ಶಾಂತಿಯಿಂದ ಇರಬೇಕೆಂದು
ಇಚ್ಛೆ ಇದೆಯೇ? ಹಾಗಾದರೆ ನಿನ್ನ ಇಚ್ಛೆಗಳನ್ನು
ಶಾಂತಗೊಳಿಸು 
ವಿಶ್ವ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ  ಪುಟ್ಟ ಕಥೆ ೨೨/೪/೨೧

18 ಆಗಸ್ಟ್ 2022

ನ‌ನ್ನ ಪುಟ್ಟ ದೇವತೆ...

 


*ನನ್ನ ಪುಟ್ಟ ದೇವತೆ*

ಇವಳು ನನ್ನ ಪುಟ್ಟ ದೇವತೆ
ಸದಾ ನಗುವ ಸಂತಸದ ವರತೆ
ಅವಳ ಕಂಡರೆ ನೋವು ಮಾಯ
ಅವಳಿದ್ದರೆ ಜಗ ಆನಂದಮಯ||

ಚಿನ್ನ ಬೇಡ ಅವಳೇ ಚಿನ್ನಮ್ಮ


ಪ್ರತಿರೂದಲಿ ಅವಳೇ ನನ್ನಮ್ಮ
ಬೆಳೆವ ಸಿರಿ ಮೊಳಕೆಯಲಿ
ನಲಿವಳು ಪರೋಪಕಾರದಲಿ ||

ಬಲು ಚೂಟಿ ಆಟ ಪಾಠದಲಿ
ಬೇಸರವಾದರೆ ಗಂಗೆ ನಯನದಲಿ
ಮನೆಯಲಿದ್ದರೆ ಸಾಕು ಅವಳು
ಹಗಲಾಗುವುದು ಇರುಳು ||

ಅವಳೇ ನಮ್ಮನೆಯ ದೀಪ
ನೀಗಿಸುವಳು ನಮ್ಮಯ ಶಾಪ
ನಮ್ಮ ಭವಿಷ್ಯದ ಭರವಸೆ ಅವಳು
ನಡೆಸುವಳು  ಹಿಡಿದು ಬೆರಳು ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.