17 ಮಾರ್ಚ್ 2022

ದಯೆ.ಹನಿಗವನ


 


ಬಡಿದಾಡುವಿರೇತಕೆ
ಅಂಧಕಾರದಿ ಬಿದ್ದು
ಪರಸ್ಪರ ಪ್ರೀತಿ
ತೋರದಯೇ |
ಬಿಟ್ಟುಬಿಡಿ ದ್ವೇಷವನು
ಇರಲಿ ಸಕಲ


ಜೀವಿಗಳ ಮೇಲೆ ದಯೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

16 ಮಾರ್ಚ್ 2022

ಧೃತರಾಷ್ಟ್ರಾಲಿಂಗನ


 ಧೃತರಾಷ್ಟ್ರಾಲಿಂಗನ


ಧೃತರಾಷ್ಟ್ರಾಲಿಂಗನ 


ವಿವೇಚನೆಯಿಲ್ಲದೆ 

ಇತರರ ತಾಳಕ್ಕೆ ಕುಣಿಯುತಾ

ದುಷ್ಚಟಗಳ ದಾಸರಾದರೆ 

ನಾಡಿನ ಯುವಜನ |

ಪಶ್ಚಾತ್ತಾಪ ಪಡುವ

ಮೊದಲೇ ಆಗಿಬಿಡುವುದು

ಧೃತರಾಷ್ಟ್ರಾಲಿಂಗನ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಪ್ರಜಾಪ್ರಗತಿ .೧೬/೩/೨೨


 

ಭಗವಂತ


 

*ಭಗವಂತ ಮತ್ತು ಪ್ರತಿಬಿಂಬ* ಹನಿಗವನ



*ಭಗವಂತ ಮತ್ತು ಪ್ರತಿಬಿಂಬ*


ಹೃದಯದಲ್ಲಿ ದೈವಿ ಗುಣಗಳಾದ ಪ್ರೀತಿ ಕರುಣೆ ಪ್ರಾಮಾಣಿಕತೆ ತಾಳ್ಮೆ ಕ್ಷಮೆ ನಿಸ್ವಾರ್ಥ ಗುಣಗಳಿದ್ದರೆ ಭಗವಂತನೇ ನೆಲೆಸುವನು 

ಮನದ ತುಂಬ |

ಪಾತ್ರೆಯಲ್ಲಿ ನೀರಿದ್ದರೆ ಮಾತ್ರ ಅದರಲ್ಲಿ ಮೂಡುತ್ತದೆಯಲ್ಲವೇ ಪ್ರತಿಬಿಂಬ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ