This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
26 ಫೆಬ್ರವರಿ 2022
ಅವಸಾನ .ಹನಿಗವನ
ಸಿಹಿಜೀವಿಯ ಹನಿಗಳು.
ಅವಸಾನ
ಶುರುವಾಗಿದೆ ಯದ್ದ ಎರಡು
ರಾಷ್ಟ್ರಗಳ ನಡುವೆ
ಹಾರಾಡುತ್ತಿವೆ ಕ್ಷಿಪಣಿ, ವಿಮಾನ |
ಹೀಗೇ ಪರಸ್ಪರ ಕಚ್ಚಾಡಿ
ಬಡಿದಾಡಿಕೊಂಡರೆ ತಪ್ಪಿದ್ದಲ್ಲ
ಜೀವಕುಲದ ಅವಸಾನ||
ಶೀರ್ಷಿಕೆಯಿರದ ಪುಟ.
ನನಗಾಸೆಯಿತ್ತು ಬರೆಯುವೆ
ನೀನು ನನ್ನ ಬಾಳಲಿ
ಸುಂದರ ಮುಖಪುಟ|
ಹುಸಿಯಾಯಿತು ನನ್ನ
ನಿರೀಕ್ಷೆ ಬಿಟ್ಟು ಹೋದೆ
ಶೀರ್ಷಿಕೆಯಿರದ ಪುಟ||
*ಅಕಾಲಿಕ ಮಳೆ*
ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ತುಮಕೂರು
9900925529
25 ಫೆಬ್ರವರಿ 2022
ಅಕಾಲಿಕ ಮಳೆ .ಹನಿ
*ಅಕಾಲಿಕ ಮಳೆ*
ಬಹುದಿನದ ನಂತರ ಸಂಧಿಸಿದನು
ನನ್ನ ನಲ್ಲ ,ಅಂದುಕೊಂಡಿದ್ದೆ
ನೋಟವೊಂದೇ ಸಾಕು
ಬೇರೇನೂ ಬೇಕಿಲ್ಲ
ನಿರೀಕ್ಷೆಗೂ ಮೀರಿ ಸನಿಹ ಬಂದನಲ್ಲ
ಆಕಾಶ ತಬ್ಬಿದಂತೆ ಇಳೆ|
ಮೈದಾನವೆಲ್ಲಾ ತೋಯ್ದಿತ್ತು
ಹೇಗೆ ಬಣ್ಣಿಸಲಿ ಅದನು
ಅದು ಅಕಾಲಿಕ ಮಳೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
24 ಫೆಬ್ರವರಿ 2022
ಇತರೆ ಭಾಷೆಗಳನ್ನೂ ಕಲಿಯೋಣ.
ಮಾನವನ ಮೆದುಳು ಹೆಚ್ಚು ಭಾಷೆಗಳನ್ನು ಕಲಿಯಲು ಶಕ್ತಿ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ .ಹೆರಾಲ್ಡ್ ಸೃಜ್ ಎಂಬುವವರು ನಾಲ್ಕು ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು ಎಂಬುದೇ ಇದಕ್ಕೆ ಸಾಕ್ಷಿ. ನಮ್ಮ ಮಾತೃಭಾಷೆ ಜೊತೆಗೆ ನಾವೂ ಕೂಡಾ ಇತರೆ ಭಾಷೆಗಳ ಕಲಿಯೋಣ . ಇತರ ಭಾಷೆಗಳನ್ನು ಕಲಿಯುವ ಅನುಕೂಲಗಳಲ್ಲಿ ನಮ್ಮ ಸಂವಹನ ಉತ್ತಮವಾಗುತ್ತದೆ,ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವ್ಯಕ್ತಿತ್ವ ನಮಗರಿವಿಲ್ಲದೇ ಉತ್ತಮಗೊಳ್ಳುತ್ತದೆ.ಹಾಗಾದರೆ ತಡವೇಕೆ ಎರಡು ಸಾವಿರದ ಇಪ್ಪತ್ತೆರಡರ ಈ ವರ್ಷದಲ್ಲಿ ಕನಿಷ್ಟ ಎರಡು ಹೊಸ ಭಾಷೆ ಕಲಿಯೋಣ.
ಸಿಹಿಜೀವಿ
ಸಿ. ಜಿ ವೆಂಕಟೇಶ್ವರ
23 ಫೆಬ್ರವರಿ 2022
ಯಾರು ಸರಿ .
ಯಾರು ಸರಿ
ಕೂಗುತ ಬಂದನು ಬೀದಿಯ ಬದಿಯಲಿ ಪ್ಲಾಸ್ಟಿಕ್ ಮಾರುವ
ಮಾಮಣ್ಣ|
ಬ್ರಷ್ಷು, ಬಾಕ್ಸು, ತಟ್ಟೇ ಲೋಟ
ಎಲ್ಲಾ ಪ್ಲಾಸ್ಟಿಕ್ ಕೊಳ್ಳಿರಿ ಎನ್ನತ್ತಾ
ಕೂಗಿದನು ಕೇಳಣ್ಣ||
ಪುಟ್ಟನ ಅಮ್ಮ ಸರಸರ ನಡೆದಳು
ಪ್ಲಾಸ್ಟಿಕ್ ತೇರಿನ ಸನಿಹಕ್ಕೆ|
ಬಾಲಂಗೋಚಿಯ ತರದಲಿ ಅವನೂ
ಓಡಿದ ಪ್ಲಾಸ್ಟಿಕ್ ಗುಡ್ಡದ ಪಕ್ಕಕ್ಕೆ ||
ಪುಟ್ಟನು ಕೇಳಿದ ಅಮ್ಮನಿಗೆ
ಪ್ಲಾಸ್ಟಿಕ್ ಬೇಡ ಎಂದರು ನಮ್ಮ
ಮಿಸ್ಸು ಯಾಕೆ ಕೊಳ್ಳುವೆ ಪ್ಲಾಸ್ಟಿಕ್ಕು |
ಅಮ್ಮ ನುಲಿಯುತ ನುಡಿದಳು
ಕಮ್ಮಿ ಬೆಲೆಗೆ ವಸ್ತುಗಳು ಸಿಕ್ಕರೆ
ಸುಮ್ಮನೆ ಕೊಳ್ಳುಬೇಕು ಅದೇ ಲಾಜಿಕ್ಕು ||
ಪುಟ್ಟ ಮತ್ತೆ ಹೇಳಿದನು
ಅಮ್ಮಾ ಪ್ಲಾಸ್ಟಿಕ್ ಬೇಡ ಪರಿಸರ ವನ್ನು ಉಳಿಸೋಣ|
ಅಮ್ಮ ಗದರಿದಳು ಕಡಿಮೆ ದುಡ್ಡಿನಲ್ಲಿ
ಸಿಕ್ಕ ವಸ್ತುಗಳ ಬಳಸಿ ಹಣವ ಉಳಿಸೋಣ||
ಪುಟ್ಟನ ಮನದಲಿ ಅನುಮಾನ ಮೂಡುತ ಹಿಡಿದನು ಮನೆಯ ದಾರಿ|
ಶಾಲೆಯ ಮಿಸ್ಸು, ಅಮ್ಮ
ಇವರಲಿ ಯಾರು ಸರಿ??
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.