09 ಅಕ್ಟೋಬರ್ 2021

ಚಂದ್ರ ಘಂಟಾ ದೇವಿಯ ಮಹಿಮೆ .ಭಕ್ತಿಗೀತೆ .


 


ಚಂದ್ರಘಂಟಾ ದೇವಿಯ ಮಹಿಮೆ 


ನಾಡಿನ ಜನರೆ ಕೇಳಿರಿನೀವು

ಮಹಿಮೆಯ ಹೇಳುವೆನು

ಚಂದ್ರಘಂಟಾದೇವಿಯ ಚರಿತೆಯ

ಹೇಳುವೆನು.


ಹಿಮವಂತ ,ಮೈನಾ ದೇವಿಯ

ಮಗಳಾಗಿ ಹುಟ್ಟಿದ ತಾಯಿ

ತಪವನು ಆಚರಿಸಿದಳು ಕಟ್ಟುತಾ

ಕೈಯಿ ಬಾಯಿ.


ಕಠೋರ ತಪಸ್ಸಿಗೆ ಮೆಚ್ಚಿದ

ಹರನು ಪ್ರತ್ಯಕ್ಷನಾದನು 

ಚಂದ್ರಘಂಟಾ ದೇವಿಯ ಮದುವೆ

ಆಸೆಯ ಕಂಡು ಅಚ್ಚರಿಪಟ್ಟನು.


ಶಿವನು ಒಪ್ಪಿದ ನಂತರ ಹಿಮವಂತ ಮಗಳ ಮದುವೆಗೆ ಒಪ್ಪಿದನು

ಮದುವೆ ಮಂಟಪದಿ ಸ್ಮಶಾನವಾಸಿ ರೂಪದ ಶಿವನ ಕಂಡು ಮೂರ್ಛಿತನಾದನು.


ಚಂದ್ರವದನೆ ದೇವಿಯು ಶಿವನಂತೆ

ತಾನೂ ಉಗ್ರರೂಪ ತಾಳಿದಳು

ಕಲ್ಯಾಣ ಮಂಟಪದಿ ಬೋಲೇನಾಥನ

ತಾಳಿಗೆ ತನ್ನ ಕೊರಳನೊಡ್ಡಿದಳು.


ಮದುವೆಯ ನಂತರ ಮಾತೆಯ ಮನವಿಗೆ ಹರ ಒಪ್ಪಿದನು

ಉಗ್ರ ರೂಪವ ತ್ಯಜಿಸಿ ಸುಂದರ

ವದನದಿ ದರ್ಶನ ನೀಡಿದನು.


ನವರಾತ್ರಿಯ ಮೂರನೇ ದಿನ 

ಚಂದ್ರ ಘಂಟಾದೇವಿಯ ಭಜಿಸೋಣ

ದುಷ್ಟರನು ಶಿಕ್ಷಿಸುತಾ  ಶಿಷ್ಟರನು ರಕ್ಷಿಸಲು ಬೇಡಿಕೊಳ್ಳೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು 

9909925529



ಮರದಂತೆ ನಿಲ್ಲು.


 


*ಮರದಂತೆ ನಿಲ್ಲು*


ಒಂದು ಉದಾತ್ತವಾದ 

ಗುರಿಸಾಧಿಸಲು ಹೊರಟಾಗ

ಎಲ್ಲರೂ ನಿನ್ನ ಕೈಬಿಟ್ಟಾಗ

ಒಂಟಿ ಮರದಂತೆ ನಿಲ್ಲು|

ಕಾರ್ಯ ಸಾಧನೆಯಲ್ಲಿ

ಕೆಲವೊಮ್ಮೆ ಸೋಲಾಗಬಹುದು 

ಬಾಗಿದರೂ ಬಾಣ ಗುರಿಸೇರಿಸಲು

ಸಹಾಯಕವಾಗುವುದು ಬಿಲ್ಲು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೯/೧೦/೨೧