25 ಜುಲೈ 2021

ಓದುವುದನ್ನು ಕಲಿಯಬೇಕಿದೆ .ಕವನ


 


ಓದುವುದನ್ನು ಕಲಿಯಬೇಕಿದೆ


ಓದುವುದನ್ನು ಕಲಿಯಬೇಕಿದೆ
ನಾನು ಮನಸ್ಸು ಓದುವುದನ್ನು
ಕಲಿಯಬೇಕಿದೆ.

ನೀನೇ ಇಂದ್ರ ಚಂದ್ರನೆಂದು
ಅಟ್ಟಕ್ಕೆ ಹತ್ತಿಸಿ ದೀಢೀರ್ ಎಂದು
ಕೈಕೊಟ್ಟು ಮತ್ತೊಬ್ಬರ ಕೈಹಿಡಿವವರ
ಮನಸ್ಸು ಓದುವುದನ್ನು ಕಲಿಯಬೇಕಿದೆ.

ನೀನೇ ಆರತಿ, ಭಾರತಿ, ರತಿ
ಎಂದು ಊರೆಲ್ಲಾ ಅಲೆದಾಡಿ
ಎಲ್ಲವ ಮುಗಿಸಿ,ಮುದುವೆಯ
ಮಾತೆತ್ತಿದಾಗ ಪರಾರಿಯಾಗುವವರ
ಮನಸ್ಸು ಓದುವುದನ್ನು ಕಲಿಯಬೇಕಿದೆ.

ನೀವೇ ನಮ್ಮ ಸರ್ವಸ್ವ. ಪ್ರಭುಗಳು
ನಾವು ನಿಮ್ಮ ಸೇವಕರು
ನಮಗೇ ಮತ ನೀಡಿ ಎಂದವರು
ಗೆದ್ದ ಬಳಿಕ ಮತದಾರರ ನಂಬಿ
ಮತಗಳ ಮೇಲೆ ರಾಜಕೀಯ
ಮಾಡುವವರ ಮನಸ್ಸು ಓದುವುದನ್ನು ಕಲಿಯಬೇಕಿದೆ.

ವಿಶ್ವಶಾಂತಿ ನಮ್ಮ ಮೂಲತತ್ವ
ಎಂದು ಸಾರುತ್ತಲೇ ಒಬ್ಬರ
ಮೇಲೊಬ್ಬರು ಬಾಂಬ್, ಕ್ಷಿಪಣಿ
ಹಾಕಲು ಹಾತೊರೆಯುವ ವಿಶ್ವ
ನಾಯಕರ ಮನಸ್ಸು ಓದುವುದನ್ನು ಕಲಿಯಬೇಕಿದೆ.

ಓದುವುದು ಕಲಿಯುವುದು ಬಹಳವಿದೆ
ಯಾವುದರಿಂದ ಆರಂಭಿಸಲಿ ನೀವೇ ಹೇಳಿ?

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ಸಿಹಿಜೀವಿಯ ಹನಿಗಳು*


 

24 ಜುಲೈ 2021

ಮೀರಾಬಾಯಿ ಚಾನು. ಹನಿ


 mirabaichanu 

#ಸಿಹಿಜೀವಿಯ_ಹನಿ


ಮೊದಲ ರಜತ 

ಪದಕ ತಂದು 

ಭಾರತಾಂಭೆಯ

ಮುಡಿಗೇರಿಸಿದೆ

ಮೀರಾಬಾಯಿ

 ಚಾನು| 

ಇದೋ ನಿನಗೆ

ನೂರೊಂದು ನಮನ

ಸಲ್ಲಿಸುವೆ ಎಲ್ಲರ

 ಪರವಾಗಿ ನಾನು| |


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಿಹಿಜೀವಿಯ ಹನಿ


*ಮೊಟ್ಟೆ, ಕೊಟ್ಟೆ*


ಮೊದಲ ಘೋಷಣೆ 

ದಿನಕ್ಕೊಂದು ಮೊಟ್ಟೆ

ತುಂಬುವುದು ಹೊಟ್ಟೆ|

ಅಧಿಕಾರಿಗಳ ಘೋಷಣೆ

ಮಂತ್ರಿಗಳ ಬೊಕ್ಕಸ 

ತುಂಬಲು ಪ್ರತಿ ತಿಂಗಳು

ಕೋಟಿ ನಾನೇ ಕೊಟ್ಟೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 

23 ಜುಲೈ 2021

ಅಪ್ಪನೇ ಆಸ್ತಿ. ಹನಿ


 


*ಅಪ್ಪನೇ ಆಸ್ತಿ*


ಎಲ್ಲೆಡೆ ಅಣ್ಣತಮ್ಮಂದಿರಲಿ

ಕಚ್ಚಾಟ ಪಡೆಯಲು

ಅಪ್ಪ ಮಾಡಿದ ಆಸ್ತಿ|

ಎಲ್ಲೋ ಕೆಲವರು

ಈಗಲೂ ನಂಬಿದ್ದಾರೆ

ಅಪ್ಪನೇ ಆಸ್ತಿ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ