29 ಏಪ್ರಿಲ್ 2021

ಅತಿಯಾಸೆ ಗತಿಗೇಡು .ಶಿಶುಗೀತೆ


 





*ಅತಿಯಾಸೆ ಗತಿಗೇಡು*


ಶಿಶುಗೀತೆ


ರಾಮನಳ್ಳಿಯಲ್ಲಿ ರಾಮಪ್ಪನೆಂಬ 

ರೈತನಿದ್ದನು

ಬೇಸಾಯದೊಂದಿಗೆ ಒಂದು

ಕೋಳಿ ಸಾಕಿದ್ದನು.


ಕೋಳಿ ಬೆಳೆದು ಮೊಟ್ಟೆ

ಇಡಲು ಶುರು ಮಾಡಿತು

ಅಚ್ಚರಿಯೆಂಬಂತೆ ಬಂಗಾರದ

ಮೊಟ್ಟೆ ಇಟ್ಟಿತು.


ಕೋಳಿ ದಿನವೂ ಬಂಗಾರದ

ಮೊಟ್ಟೆಯನು ಇಟ್ಟಿತು

ರಾಮಪ್ಪನ ಮನವು 

ಸಂತೋಷದಿ ಕುಣಿದಾಡಿತು.


ಅವನಲಿ ಅತಿಯಾಸೆಯ

ಬೀಜವೊಂದು ಮೊಳಕೆಯೊಡೆಯಿತು

ಒಂದೆ ದಿನ ಎಲ್ಲಾ ಮೊಟ್ಟೆಗಳ 

ಪಡೆಯಲು ಆಸೆಯಾಯಿತು.


ಕೋಳಿ ಹಿಡಿದು ಚೂರಿಯಿಂದ

ಹೊಟ್ಟೆ ಬಗೆದನು

ಬಂಗಾರವಿಲ್ಲ ಬರೀ ಕರುಳು 

ಮಾಂಸವನ್ನು ಕಂಡನು.


ನಿರಾಸೆಯಿಂದ ಅಳುತಲಿ

ಜನರ ನೋಡಿದ

ಅತಿಯಾಸೆ ಪಡದಿರೆಂದು

ಜನಕೆ ಬುದ್ದಿ ಹೇಳಿದ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು 



ಕತ್ತಿವರಸೆ .ಹನಿಗವನ





 *ಕತ್ತಿವರಸೆ*


ಜನನಾಯಕರೆ 

ಜನರು ಸಂಕಷ್ಟದಲ್ಲಿ

ಇರುವಾಗ ಸಾದ್ಯವಾದರೆ

ಅವರ ಕಣ್ಣೀರ ಒರೆಸಿ

ನೀಡಿ ಸಾಂತ್ವನ ಭರವಸೆ|

ಅದು ಬಿಟ್ಟು ನೊಂದವರ

ಮೇಲೆ ನಡೆಸಲೇ ಬೇಡಿ

ಅಮಾನವೀಯವಾಗಿ

"ಕತ್ತಿ ವರಸೆ"||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು