ದಿಡೀರ್ ಬೆಳೆದು ನಿಲ್ಲಲಾಗುವುದಿಲ್ಲ
ಬೆಳೆಸುವವರು ಬಹಳಿಲ್ಲ
ಬೆಳೆವ ಚಿಗುರನ್ನೇ ಚಿವುಟುವರಲ್ಲ
ಬೆಳೆದು ನಿಂತಾಗ ನಿನ್ನ ಸಹಾಯ
ಬೇಡುತ ಬರುವರು ಎಲ್ಲಾ.
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ದಿಡೀರ್ ಬೆಳೆದು ನಿಲ್ಲಲಾಗುವುದಿಲ್ಲ
ಬೆಳೆಸುವವರು ಬಹಳಿಲ್ಲ
ಬೆಳೆವ ಚಿಗುರನ್ನೇ ಚಿವುಟುವರಲ್ಲ
ಬೆಳೆದು ನಿಂತಾಗ ನಿನ್ನ ಸಹಾಯ
ಬೇಡುತ ಬರುವರು ಎಲ್ಲಾ.
ನಾವೆಂದೂ ಆಗಲಾರದು
ಬೇರೆಯವರು ನಿಯಂತ್ರಿಸುವ
ಗಾಳಿಪಟ|
ಆಟ ಸಾಕೆನಿಸಿದಾಗ
ಬರ್ರೆಂದು ಕೆಳಕ್ಕೆಳೆದು
ತೋರಿಸಿಬಿಡುವರು
ಪ್ರಪಾತ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಜೀವನ*
ಯಾರಿಗೂ ಸಾದ್ಯವಿಲ್ಲ
ಜೀವನ ನಡೆಸಲು
ಬರೆದಿಟ್ಟಂತೆ|
ಸನ್ಮಾರ್ಗದಿ ನಡೆದು
ಸಾಧಿಸಿದರೆ ಜೀವಿಸಬಹುದು
ಬರೆದಿಡುವಂತೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ವಿಜ್ಞಾನವೇ ಬದಲಾವಣೆಗೆ ಕಾರಣ
ಜ್ಞಾನ ಅದರ ಬೇರು
ಎಂಬುದನ್ನು ನೆನಪಿನಲ್ಲಿಡೋಣ
ವಿಜ್ಞಾನವನ್ನು ಸದುಪಯೋಗ
ಪಡಿಸಿಕೊಳ್ಳೋಣ
ಅಜ್ಞಾನವನ್ನು ತೊಲಗಿಸೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಓ ಗಿಳಿರಾಮ*
ಓ ಗಿಳಿರಾಮ ....
ಎಲ್ಲಿರುವನು ನನ್ನ ರಾಮ
ತಿಳಿಸಿಬಿಡು ಸಲ್ಲಿಸುವೆ
ನಿನಗೆ ನನ್ನ ಪ್ರಣಾಮ .
ದಿನಪ ಬರುವ ಮೊದಲೇ
ದಿನವೂ ಬಂದು
ಕದ್ದು ನೋಡುತ್ತಿದ್ದ, ಈಗೀಗ
ಅವನ ಸುದ್ದಿಯಿಲ್ಲ ನೀನೇ ಹೇಳು
ನಲ್ಲನಿಲ್ಲದೆ ಹೇಗಿರಲಿ?
ಮಣಿ ಸರವ ನೀಡಿ
ಹಣೆಗೊಂದು ಮುತ್ತನಿತ್ತು
ಸ್ವರ್ಗಕ್ಕೆ ಕರೆದೊಯ್ದಿದ್ದನು
ಕಣಿ ಹೇಳು ನನಗಿಂದು
ಅವನೆಂದು ಬರುವನು ?
ಅಕ್ಕರೆಯ ಮಾತನಾಡಿ
ಸಕ್ಕರೆಯ ಸವಿ ನೀಡಿ
ಪ್ರೇಮ ಲೋಕ ಸೃಷ್ಟಿಸಿದ್ದ ನನಗಾಗಿ
ಸಿಕ್ಕರೆ ನನ್ನ ಮಾರನಿಗೇಳು
ಕಾಯುತಿಹಳು ನಿನ್ನರಸಿ ನಿನಗಾಗಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು